Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Nike Layoffs 2026: ನೈಕ್ ಉದ್ಯೋಗಿಗಳಿಗೆ ಬಿಗ್ ಶಾಕ್: ಜಾಗತಿಕವಾಗಿ 1,400 ಸಿಬ್ಬಂದಿ ವಜಾಕ್ಕೆ ಮುಂದಾಗ ಕಂಪನಿ

24/04/2026 2:22 PM

SHOCKING: ರಾಜ್ಯದಲ್ಲಿ ಘೋರ ದುರಂತ: ಜೋಕಾಲಿ ಕುತ್ತಿಗೆಗೆ ಬಿಗಿದು 9 ವರ್ಷದ ಬಾಲಕಿ ಸಾವು

24/04/2026 2:16 PM

BIG NEWS : ತುಮಕೂರಿನಲ್ಲಿ 24ನೇ ರಾಷ್ಟ್ರೀಯ ಅಂಡರ್-20 ಕ್ರೀಡಾಕೂಟ : ಶೌಚಾಲಯದಲ್ಲಿ ಸೂಜಿ, ಸಿರಿಂಜ್ ಪತ್ತೆ!

24/04/2026 2:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ನಕಲಿ ಕಾಳಜಿಯ ಮುಖವಾಡ ಕಳಚಿಡಿ’: ವಿಜಯೇಂದ್ರಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ಕೌಂಟರ್!
KARNATAKA

‘ನಕಲಿ ಕಾಳಜಿಯ ಮುಖವಾಡ ಕಳಚಿಡಿ’: ವಿಜಯೇಂದ್ರಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ಕೌಂಟರ್!

By kannadanewsnow0922/04/2026 4:41 PM

ಬೆಂಗಳೂರು: ರಾಜ್ಯದ ಸಾರಿಗೆ ಸಂಸ್ಥೆಗಳ ಸ್ಥಿತಿಗತಿ ಹಾಗೂ ನೌಕರರ ಸಮಸ್ಯೆಗಳ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿಯ ನಡುವೆ ವಾಕ್ಸಮರ ತಾರಕಕ್ಕೇರಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಟೀಕೆಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಂಕಿ-ಅಂಶಗಳ ಸಮೇತ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

“ಸಾರಿಗೆ ಸಂಸ್ಥೆಯ ಇಂದಿನ ಸ್ಥಿತಿಗೆ ಬಿಜೆಪಿಯೇ ಹೊಣೆ”

“ಬಿ.ವೈ. ವಿಜಯೇಂದ್ರ ಅವರೇ, ನಿಮ್ಮ ಈ ನಕಲಿ ಕಾಳಜಿಯ ಮುಖವಾಡವನ್ನು ಮೊದಲು ಕಳಚಿಡಿ” ಎಂದು ಲೇವಡಿ ಮಾಡಿರುವ ಸಚಿವರು, ಸಾರಿಗೆ ಸಂಸ್ಥೆಗಳು ಇವತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ ಅದಕ್ಕೆ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಕಾಲದ ಅದಕ್ಷ ಆಡಳಿತವೇ ನೇರ ಕಾರಣ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.

@BYVijayendra ಅವರೇ,

ನಿಮ್ಮ ಈ ನಕಲಿ ಕಾಳಜಿಯ ಮುಖವಾಡವನ್ನು ಕಳಚಿಡಿ.

ಸಾರಿಗೆ ಸಂಸ್ಥೆ ಇವತ್ತು ಈ ಸ್ಥಿತಿಗೆ ತಲುಪಲು ನಿಮ್ಮ ಪೂಜ್ಯ ತಂದೆ ಶ್ರೀ @BSYBJP ಮತ್ತು @BSBommai ಯವರ ಕಾಲದ ಅದಕ್ಷ ಆಡಳಿತವೇ ನೇರ ಕಾರಣ.

ಅಂದು ಅಧಿಕಾರದ ಅಮಲಿನಲ್ಲಿ ನೌಕರರ ಹೊಟ್ಟೆಯ ಮೇಲೆ ಹೊಡೆದ ನೀವು, ಇಂದು ಯಾವ ಮುಖ ಇಟ್ಟುಕೊಂಡು ಉಪದೇಶ…

— Ramalinga Reddy (@RLR_BTM) April 22, 2026

ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದ ಘಟನೆಗಳನ್ನು ಸಚಿವರು ಈ ಕೆಳಗಿನಂತೆ ಪಟ್ಟಿ ಮಾಡಿದ್ದಾರೆ:

  • ದಾಖಲೆಯ ಮುಷ್ಕರ: ಸಾರಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ 15 ದಿನಗಳ ಕಾಲ ಸತತ ಮುಷ್ಕರ ನಡೆಯಲು ಮತ್ತು ತಿಂಗಳ ಕಾಲ ಮುಷ್ಕರಕ್ಕೆ ಅಡಿಪಾಯ ಹಾಕಿದ್ದು ಬಿಜೆಪಿ ಸರ್ಕಾರ.

  • ನೌಕರರ ಮೇಲೆ ದೌರ್ಜನ್ಯ: ಮುಷ್ಕರದ ಹೆಸರಿನಲ್ಲಿ ಸುಮಾರು 3,500 ನೌಕರರನ್ನು ಕೆಲಸದಿಂದ ವಜಾ ಮಾಡಿ, ಅಮಾನತುಗೊಳಿಸಿ FIR ಹಾಕಿಸಲಾಗಿತ್ತು. ಆ ನೌಕರರು ಇಂದಿಗೂ ಕೋರ್ಟ್ ಕಚೇರಿ ಅಲೆಯುತ್ತಿದ್ದಾರೆ.

  • ವೇತನ ವಿಳಂಬ: ನಿಮ್ಮ ಅವಧಿಯಲ್ಲಿ ಸಂಬಳವನ್ನು ಮುಂದಿನ ತಿಂಗಳಿಗೆ ಬಾಕಿ ಇರಿಸಲಾಗುತ್ತಿತ್ತು ಅಥವಾ ಅರ್ಧ ಸಂಬಳ ನೀಡಲಾಗುತ್ತಿತ್ತು ಎಂಬುದು ದಾಖಲೆಗಳಲ್ಲಿದೆ.

  • ವಿಳಂಬಿತ ವೇತನ ಪರಿಷ್ಕರಣೆ: 2020ರಲ್ಲಿ ಆಗಬೇಕಿದ್ದ ವೇತನ ಪರಿಷ್ಕರಣೆಯನ್ನು 38 ತಿಂಗಳು ತಡವಾಗಿ ಅಂದರೆ 2023ರ ಮಾರ್ಚ್‌ನಲ್ಲಿ ಮಾಡಿದ್ದೀರಿ. ಈಗ ನೈತಿಕತೆ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ರೆಡ್ಡಿ ಗುಡುಗಿದ್ದಾರೆ.

ಕಾಂಗ್ರೆಸ್ ಸರ್ಕಾರದ ‘ಕಾಯಕಲ್ಪ’ ವರದಿ

ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾರಿಗೆ ಸಂಸ್ಥೆಗಳನ್ನು ಹೇಗೆ ಪುನಶ್ಚೇತನಗೊಳಿಸಲಾಗಿದೆ ಎಂಬ ಅಂಕಿ-ಅಂಶಗಳನ್ನು ಸಚಿವರು ಬಿಡುಗಡೆ ಮಾಡಿದ್ದಾರೆ:

ಕಾರ್ಯಕ್ರಮ ಬಿಜೆಪಿಯ ಶೂನ್ಯ ಸಾಧನೆ (2019-23) ಕಾಂಗ್ರೆಸ್ ಸರ್ಕಾರದ ಸಾಧನೆ
ಹೊಸ ನೇಮಕಾತಿ ಶೂನ್ಯ ನೇಮಕಾತಿ 10,471 ಹುದ್ದೆಗಳ ನೇಮಕಾತಿ
ಹೊಸ ಬಸ್ಸುಗಳ ಸೇರ್ಪಡೆ ಹೊಸ ಬಸ್ಸುಗಳಿಲ್ಲ 7,800 ಹೊಸ ಬಸ್ಸುಗಳ ಸೇರ್ಪಡೆ
ಬಸ್ಸುಗಳ ಪುನಶ್ಚೇತನ ಹಳೆಯ ಬಸ್ಸುಗಳ ನಿಷ್ಕ್ರಿಯ 2,109 ಬಸ್ಸುಗಳ ಪುನಶ್ಚೇತನ
ಬಾಕಿ ಹಣ ಪಾವತಿ – ನಿವೃತ್ತ ಸಿಬ್ಬಂದಿಗೆ ₹223 ಕೋಟಿ ಪಾವತಿ

ಸಾಲದ ಹೊರೆ ಇಳಿಸಿದ ರಾಜ್ಯ ಸರ್ಕಾರ

ಬಿಜೆಪಿ ಸರ್ಕಾರವು 2019-2023ರ ಅವಧಿಯಲ್ಲಿ ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್ ಬಾಕಿ ಸೇರಿದಂತೆ ಸುಮಾರು ₹4,900 ಕೋಟಿ ಹೊಣೆಗಾರಿಕೆಯನ್ನು ಬಾಕಿ ಉಳಿಸಿತ್ತು. ಈ ಪೈಕಿ ₹2,000 ಕೋಟಿ ಸಾಲ ಪಡೆಯಲು ಅನುಮತಿಸಿರುವ ಸಿದ್ದರಾಮಯ್ಯ ಸರ್ಕಾರ, ಅದರ ಅಸಲು ಮತ್ತು ಬಡ್ಡಿಯನ್ನು ತಾನೇ ಪಾವತಿಸುತ್ತಿದೆ. ಅಲ್ಲದೆ, ₹1219.23 ಕೋಟಿ ಮೋಟಾರು ವಾಹನ ತೆರಿಗೆಗೆ ವಿನಾಯಿತಿ ನೀಡುವ ಮೂಲಕ ಸಂಸ್ಥೆಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತಿದ್ದೇವೆ ಎಂದು ರಾಮಲಿಂಗಾರೆಡ್ಡಿ ವಿವರಿಸಿದ್ದಾರೆ.

“ಇನ್ನಾದರೂ ಜನರನ್ನು ದಾರಿ ತಪ್ಪಿಸುವ ಪೊಳ್ಳು ಹಾರಾಟ ನಿಲ್ಲಿಸಿ, ನಿಮ್ಮ ಕಾಲದ ಅಧಃಪತನಕ್ಕೆ ಮೊದಲು ಉತ್ತರ ಕೊಡಿ” ಎಂದು ಸಚಿವರು ವಿಜಯೇಂದ್ರ ಅವರಿಗೆ ಸವಾಲು ಹಾಕಿದ್ದಾರೆ.

SHOCKING: ರಾಜ್ಯದಲ್ಲೊಂದು ಭೀಕರ ರಸ್ತೆ ಅಪಘಾತ: ಡಿಕ್ಕಿ ರಭಸಕ್ಕೆ ಬೇರೆ ಬೇರೆಯಾದ ವ್ಯಕ್ತಿಯ ರುಂಡ-ಮುಂಡ

‘ವೆಸ್ಟರ್ನ್ ಸ್ಟೈಲ್’ ಪ್ರಪೋಸ್ ಹೆಸರಲ್ಲಿ ಪ್ರಿಯಕರನ ಸಜೀವ ದಹನ: ಬೆಂಗಳೂರಿನಲ್ಲಿ ಘಾತುಕ ಪ್ರೇಯಸಿ ಪ್ರೇಮಾ ಅರೆಸ್ಟ್

Share. Facebook Twitter LinkedIn WhatsApp Email

Related Posts

SHOCKING: ರಾಜ್ಯದಲ್ಲಿ ಘೋರ ದುರಂತ: ಜೋಕಾಲಿ ಕುತ್ತಿಗೆಗೆ ಬಿಗಿದು 9 ವರ್ಷದ ಬಾಲಕಿ ಸಾವು

24/04/2026 2:16 PM2 Mins Read

BIG NEWS : ತುಮಕೂರಿನಲ್ಲಿ 24ನೇ ರಾಷ್ಟ್ರೀಯ ಅಂಡರ್-20 ಕ್ರೀಡಾಕೂಟ : ಶೌಚಾಲಯದಲ್ಲಿ ಸೂಜಿ, ಸಿರಿಂಜ್ ಪತ್ತೆ!

24/04/2026 2:10 PM1 Min Read

ಪಬ್ನಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪ : ಹೊರಗೆ ಬಂದ ತಕ್ಷಣ, ಯುವತಿಯರಿಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ!

24/04/2026 2:06 PM1 Min Read
Recent News

Nike Layoffs 2026: ನೈಕ್ ಉದ್ಯೋಗಿಗಳಿಗೆ ಬಿಗ್ ಶಾಕ್: ಜಾಗತಿಕವಾಗಿ 1,400 ಸಿಬ್ಬಂದಿ ವಜಾಕ್ಕೆ ಮುಂದಾಗ ಕಂಪನಿ

24/04/2026 2:22 PM

SHOCKING: ರಾಜ್ಯದಲ್ಲಿ ಘೋರ ದುರಂತ: ಜೋಕಾಲಿ ಕುತ್ತಿಗೆಗೆ ಬಿಗಿದು 9 ವರ್ಷದ ಬಾಲಕಿ ಸಾವು

24/04/2026 2:16 PM

BIG NEWS : ತುಮಕೂರಿನಲ್ಲಿ 24ನೇ ರಾಷ್ಟ್ರೀಯ ಅಂಡರ್-20 ಕ್ರೀಡಾಕೂಟ : ಶೌಚಾಲಯದಲ್ಲಿ ಸೂಜಿ, ಸಿರಿಂಜ್ ಪತ್ತೆ!

24/04/2026 2:10 PM

ಪಬ್ನಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪ : ಹೊರಗೆ ಬಂದ ತಕ್ಷಣ, ಯುವತಿಯರಿಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ!

24/04/2026 2:06 PM
State News
KARNATAKA

SHOCKING: ರಾಜ್ಯದಲ್ಲಿ ಘೋರ ದುರಂತ: ಜೋಕಾಲಿ ಕುತ್ತಿಗೆಗೆ ಬಿಗಿದು 9 ವರ್ಷದ ಬಾಲಕಿ ಸಾವು

By kannadanewsnow0924/04/2026 2:16 PM KARNATAKA 2 Mins Read

ಶಿವಮೊಗ್ಗ: ಬೇಸಿಗೆ ರಜೆಯ ಮೋಜು-ಮಸ್ತಿಗಾಗಿ ಚಿಕ್ಕಮ್ಮನ ಮನೆಗೆ ಬಂದಿದ್ದ ಬಾಲಕಿಯೊಬ್ಬಳು, ಆಟವಾಡುತ್ತಲೇ ಸಾವನ್ನಪ್ಪಿರುವ ದಾರುಣ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಲಕ್ಕಿನಕೊಪ್ಪದಲ್ಲಿ…

BIG NEWS : ತುಮಕೂರಿನಲ್ಲಿ 24ನೇ ರಾಷ್ಟ್ರೀಯ ಅಂಡರ್-20 ಕ್ರೀಡಾಕೂಟ : ಶೌಚಾಲಯದಲ್ಲಿ ಸೂಜಿ, ಸಿರಿಂಜ್ ಪತ್ತೆ!

24/04/2026 2:10 PM

ಪಬ್ನಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪ : ಹೊರಗೆ ಬಂದ ತಕ್ಷಣ, ಯುವತಿಯರಿಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ!

24/04/2026 2:06 PM

ALERT : 3 ದಿನಕ್ಕೂ ಹೆಚ್ಚು ದಿನ ಫ್ರಿಜ್‌ ನಲ್ಲಿಟ್ಟ ಇಡ್ಲಿ-ದೋಸೆ ಹಿಟ್ಟು ಬಳಸಿದ್ರೆ ಈ ಆರೋಗ್ಯ ಸಮಸ್ಯೆಗಳು ಫಿಕ್ಸ್.!

24/04/2026 1:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.