Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಇಂದು ಭಾರತದ ಷೇರು ಮಾರುಕಟ್ಟೆ ತನ್ನ ಹಿನ್ನಡೆಯನ್ನು ಹೆಚ್ಚಿಸಿಕೊಂಡಿದ್ದು, ಎರಡು ದಿನಗಳ ಕ್ರೂರ ಮಾರಾಟವನ್ನು ಮಿತಿಗೊಳಿಸಿದೆ. ಇದು ₹10 ಲಕ್ಷ ಕೋಟಿಗೂ ಹೆಚ್ಚಿನ ಹೂಡಿಕೆದಾರರ ಸಂಪತ್ತನ್ನು ಅಳಿಸಿಹಾಕಿದೆ. 30 ಷೇರುಗಳ ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ 1,065.71 ಪಾಯಿಂಟ್ಗಳ ಕುಸಿತದೊಂದಿಗೆ 82,180.47 ಕ್ಕೆ ತಲುಪಿದೆ, ಆದರೆ ವಿಶಾಲವಾದ ನಿಫ್ಟಿ 50 353 ಪಾಯಿಂಟ್ಗಳ ಕುಸಿತದೊಂದಿಗೆ 25,232.50 ಕ್ಕೆ ತಲುಪಿದೆ, ಇದು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ನಿರಂತರ ವಿದೇಶಿ ಹೊರಹರಿವುಗಳು ಮತ್ತು ಬಜೆಟ್ ಪೂರ್ವದ ನಡುಕಗಳ ಪರಿಪೂರ್ಣ ಚಂಡಮಾರುತವಾಗಿದ್ದು, ಹೂಡಿಕೆದಾರರ ಅಪಾಯದ ಹಸಿವನ್ನು ಹೊಡೆದಿದೆ. ಟ್ರಂಪ್ ಯುಗದ ಸುಂಕಗಳ ಕುರಿತು ಯುಎಸ್ ಸುಪ್ರೀಂ ಕೋರ್ಟ್ನ ತೀರ್ಪಿನ ಮುಂದೆ ದೇಶೀಯ ಮಾರುಕಟ್ಟೆಗಳು ಜಾಗರೂಕವಾಗಿದ್ದವು, ಯುಎಸ್ ವ್ಯಾಪಾರ ನೀತಿಯ ಮೇಲಿನ ಹೊಸ ಅನಿಶ್ಚಿತತೆಯು ಇತ್ತೀಚಿನ ಏಕೀಕರಣವನ್ನು ಹೆಚ್ಚಿಸಿದೆ” ಎಂದು ಜಿಯೋಜಿತ್ ಇನ್ವೆಸ್ಟ್ಮೆಂಟ್ಸ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಮುಂದುವರೆದ ಎಫ್ಐಐ ಹೊರಹರಿವು, ಹೆಚ್ಚುತ್ತಿರುವ ಯುಎಸ್ ಮತ್ತು ಜಪಾನಿನ ಬಾಂಡ್ ಇಳುವರಿ…
ಬೆಂಗಳೂರು: ನಗರದಲ್ಲಿ ರೌಡಿ ಶೀಟರ್ ಮೊಹಮ್ಮದ್ ಶಬ್ಬೀರ್ ಕೊಲೆ ಪ್ರಕರಣದಲ್ಲಿ ಬಂಡೆಪಾಳ್ಯ ಠಾಣೆಯ ಪೊಲೀಸರಿಂದ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ನೂರುಲ್ಲಾ, ನದೀಮ್, ಸಲ್ಮಾನ್ ಖಾನ್, ಮೊಹಮ್ಮದ್ ಆಲಿ, ಸೈಯದ್ ಇಸ್ಮಾಯಿಲ್, ಮೊಹಮ್ಮದ್ ಸಿದ್ಧಿಕ್, ಕಲೀಂ, ಉಮ್ರೇಜ್ ಸೆರೆ ಹಿಡಿಯಲಾಗಿದೆ. ಜನವರಿ.12ರಂದು ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ರೌಡಿ ಶೀಟರ್ ಮೊಹಮ್ಮದ್ ಶಬ್ಬೀರ್ ಕೊಲೆ ಮಾಡಲಾಗಿತ್ತು. ಹಳೇ ವೈಷಮ್ಯದ ಹಿನ್ನಲೆಯಲ್ಲಿ ಕೋರಮಂಗಲ ಠಾಣೆ ರೌಡಿ ಶೀಟರ್ ಶಬ್ಬ್ರೀರ್ ಹತ್ಯೆ ಮಾಡಲಾಗಿತ್ತು. ಶಬ್ಬೀರ್ ಹತ್ಯೆಯ ಬಳಿಕ ಆರೋಪಿಗಳು ಹೈದರಾಬಾದ್ ಮತ್ತು ಮುಂಬೈಗೆ ತೆರಳಿದ್ದರು. ಬಂಧನಕ್ಕೆ ಬಲೆ ಬೀಸಿದ್ದಂತ ಪೊಲೀಸರು ಕುಟುಂಬಸ್ಥರನ್ನು ಭೇಟಿಯಾಗಲು ರೈಲ್ವೆ ನಿಲ್ದಾಣಕ್ಕೆ ಆರೋಪಿಗಳು ಬಂದಿದ್ದಂತ ವೇಳೆಯಲ್ಲಿ ಬಂಡೆಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ. https://kannadanewsnow.com/kannada/prisoners-fight-in-hindalaga-jail-belgaum-one-injured-after-being-hit-with-a-stone/
ಬೆಳಗಾವಿ: ಈ ಹಿಂದೆಯೂ ಹಲವಾರು ಬಾರಿ ಕೈದಿಗಳ ನಡುವೆ ಮಾರಾಮಾರಿಯೇ ಹಿಂಡಲಗಾ ಜೈಲಿನಲ್ಲಿ ನಡೆದಿತ್ತು. ಇದು ಮತ್ತೆ ಮರುಕಳಿಸಿದೆ. ಇಂದು ಹಿಂಡಲಗಾ ಜೈಲಿನಲ್ಲಿ ಕೈದಿಗಳು ಹೊಡೆದಾಡಿಕೊಂಡಿರುವಂತ ಘಟನೆ ನಡೆದಿದೆ. ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಗ್ರಾಮದಲ್ಲಿರುವಂತ ಸೆಂಟ್ರಲ್ ಜೈಲಿನಲ್ಲಿ ಕೈದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಎಸ್ ಟಿ ಡಿ ಪೋನ್ ಕಾಲ್ ವಿಚಾರಕ್ಕೆ ಆರಂಭಗೊಂಡ ಜಗಳ ಪರಸ್ಪರ ಕೈಕೈ ಮಿಲಾಯಿಸುವಂತ ಹಂತಕ್ಕೂ ತಲುಪಿದೆ. ಕಲ್ಲಿನಿಂದ ಜಜ್ಜಿ ಕೈದಿ ಸುರೇಶ್ ಬೆಳಗಾವಿ ಎಂಬುವರಿಗೆ ಹಲ್ಲೆ ಮಾಡಲಾಗಿದೆ. ಮಂಗಳೂರು ಮೂಲದ ಕೈದಿ ಫಯಾಸ್ ಎಂಬಾತನಿಂದ ಈ ಕೃತ್ಯ ಎಸಗಲಾಗಿದೆ. https://kannadanewsnow.com/kannada/tired-of-being-harassed-by-superiors-village-accountant-writes-to-president-seeking-euthanasia/
ಗದಗ: ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ತನಗೆ ದಯಾಮರಣ ನೀಡುವಂತೆ ಗ್ರಾಮಲೆಕ್ಕಿಗನೊಬ್ಬ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವಂತ ಘಟನೆ ಗದಗದಲ್ಲಿ ನಡೆದಿದೆ. ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಯೋಗೇಶ್ ಕುರಕಟ್ಟಿ ಎಂಬುವರೇ ಹೀಗೆ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಂತ ವಿಎ ಆಗಿದ್ದಾರೆ. ತಮಗೆ ಮೇಲಧಿಕಾರಿಗಳು ವಿನಾ ಕಾರಣ ಕಿರುಕುಳ ನೀಡುತ್ತಿದ್ದಾರೆ. ನನ್ನ ವೇತನವನ್ನು ತಡೆಹಿಡಿಯಲಾಗಿದೆ. ಹೀಗಾಗಿ ಜೀವನೋಪಾಯಕ್ಕೂ ಕಷ್ಟವಾಗಿದೆ. ಜೀವನ ನಿರ್ವಹಣೆ ಮಾಡದಂತ ಪರಿಸ್ಥಿತಿಯಲ್ಲಿ ನಾನಿದ್ದೇನೆ. ಈ ಹಿನ್ನಲೆಯಲ್ಲಿ ನನಗೆ ದಯಾಮರಣ ನೀಡುವಂತೆ ರಾಷ್ಟ್ರಪತಿಗಳನ್ನು ಪತ್ರದಲ್ಲಿ ಕೋರಿದ್ದಾರೆ. ಇದಷ್ಟೇ ಅಲ್ಲದೇ ಕಂದಾಯ ಇಲಾಖೆಯ ತಾಲ್ಲೂಕು ಆಡಳಿತ ವ್ಯವಸ್ಥೆ ಹಾಗೂ ಮೇಲಧಿಕಾರಿಗಳು ಇಲಾಖೆ ಕೆಲಸ ಸಮರ್ಪಕವಾಗಿ ನಿರ್ವಹಿಸೋದಕ್ಕೆ ಬಿಡುತ್ತಿಲ್ಲ. ವಿನಾ ಕಾರಣ ಮೇಲಿನಿಂದ ಮೇಲೆ ನೋಟಿಸ್ ಸೇರಿದಂತೆ ಇತರೆ ಕಿರುಕುಳ ನೀಡಲಾಗುತ್ತಿದೆ ಎಂದಿದ್ದಾರೆ. ನನ್ನ ತಾಯಿ ಅನಾರೋಗ್ಯ ಪೀಡಿತರಾಗಿದ್ದಾರೆ. ನನಗೂ ಆರೋಗ್ಯ ಸರಿಯಿಲ್ಲ. ವೇತನವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿ ಬಿಟ್ಟಿದೆ. ಇದರ ಬದಲು ದಯಾಮರಣ ಕಲ್ಪಿಸುವಂತೆ ಗ್ರಾಮಲೆಕ್ಕಿಗ ಯೋಗೇಶ್…
ಬೆಂಗಳೂರು: ನಟ ಕಿಚ್ಚ ಸುದೀಪ್ ಹಾಗೂ ಚಂದ್ರಚೂಡ ವಿರುದ್ಧ ವಂಚನೆ ಆರೋಪವನ್ನು ಕಾಫಿ ತೋಟದ ಮಾಲೀಕರೊಬ್ಬರು ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಇಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ನಟ ಕಿಚ್ಚ ಸುದೀಪ್, ಚಂದ್ರಚೂಡ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಕೇಸ್ ವಾಪಾಸ್ ಪಡೆದ ಮೇಲೆ ಬಾಕಿ ಹಣ ನೀಡದೇ ವಂಚಿಸಿದಂತ ಆರೋಪ ಮಾಡಲಾಗಿದೆ. ಕಾಫಿ ತೋಟದ ಮಾಲೀಕ ದೀಪಕ್ ರಿಂದ ಈ ಗಂಭೀರ ಆರೋಪ ಮಾಡಲಾಗಿದೆ. ಬೆಂಗಳೂರಿನ ಕಮೀಷನರ್ ಕಚೇರಿಗೆ ತೆರಳಿದಂತ ಕಾಫಿ ತೋಟದ ಮಾಲೀಕ ದೀಪಕ್ ಎಂಬುವರು ನಟ ಕಿಚ್ಚ ಸುದೀಪ್ ಹಾಗೂ ಚಂದ್ರಚೂಡ ವಿರುದ್ಧ ದೂರು ನೀಡಿದ್ದಾರೆ. ಜನವರಿ.16ರಂದು ದೀಪಕ್ ಮಯೂರ್ ಎಂಬುವರು ದೂರು ನೀಡಿದ್ದಾರೆ. ವಾರಸ್ಥಾರ ಧಾರವಾಹಿಗಾಗಿ 2 ವರ್ಷಗಳ ಅಗ್ರಿಮೆಂಟ್ ಆಗಿತ್ತು. ಚಿತ್ರೀಕರಣಕ್ಕಾಗಿ ಕಾಫಿ ತೋಟ, ಮರಗಳ ನಾಶ ಆರೋಪ ಮಾಡಲಾಗಿದೆ. 95 ಲಕ್ಷ ಪರಿಹಾರ ನೀಡುವಂತೆ ಕೇಸ್ ಅನ್ನು ದೀಪಕ್ ಹಾಕಿದ್ದರು. 60 ಲಕ್ಷ ನೀಡುವುದಾಗಿ ಭರವಸೆಯನ್ನು ನಟ ಕಿಚ್ಚ ಸುದೀಪ್ ನೀಡಿದ್ದರು.…
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದಂತ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಚುನಾವಣೆಗೆ ಕಾಲ ಸನ್ನಿಹಿತವಾಗಿದೆ. ಮುಂಬರುವಂತ ಮೇ.25, 2026ರ ಒಳಗಾಗಿ ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಮಹತ್ವದ ಘೋಷಣೆ ಮಾಡಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್ ಸಂಗ್ರೇಶಿ ಅವರು, ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಮೇ 25ರ ನಂತರ ಜೂನ್ 30ರೊಳಗೆ ಚುನಾವಣೆ ನಡೆಸಲಾಗುವುದು. 2025ರ ಅಕ್ಟೋಬರ್ 1ರ ಮಾಹಿತಿಯಂತೆ ಮತದಾರರ ಕರಡು ಪಟ್ಟಿ ತಯಾರಿಸಲಾಗಿದೆ ಎಂದಿದ್ದಾರೆ. ಇಂದಿನಿಂದ ಫೆಬ್ರುವರಿ 3ರವರೆಗೆ ಮತಗಟ್ಟೆ ಅಧಿಕಾರಿಗಳು (ಬಿಎಲ್ಒ) ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಈ ಅವಧಿಯಲ್ಲಿ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹಕ್ಕು ಹಾಗೂ ಆಕ್ಷೇಪಣೆಗಳ ವಿಲೇವಾರಿಯು ಫೆಬ್ರವರಿ 4ರಿಂದ 18ರವರೆಗೆ ನಡೆಯಲಿದ್ದು, ಮಾರ್ಚ್ 16ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ ಹೇಳಿದ್ದಾರೆ. https://twitter.com/KarnatakaVarthe/status/2013555190851609077
ಬೆಂಗಳೂರು : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಭಾದ ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ತಿಳಿಸಿದರು. ಬೆಂಗಳೂರಿನಲ್ಲಿಂದು ನಡೆದ ಸಭಾದ ಕಾರ್ಯಕಾರಿಣಿ ಸಭೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಸಭಾದ ಮಹಾ ಪ್ರಧಾನ ಕಾರ್ಯದರ್ಶಿಯಾಗಿರುವ ಈಶ್ವರ ಬಿ ಖಂಡ್ರೆ ಅವರನ್ನು ಆಯ್ಕೆ ಮಾಡಲು ನಿರ್ಣಯ ಕೈಗೊಳ್ಳಲಾಯಿತು ಎಂದರು. ಇಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಈಶ್ವರ ಬಿ ಖಂಡ್ರೆ ಅವರನ್ನು ಆಯ್ಕೆ ಮಾಡಲು ಎಲ್ಲ ಸದಸ್ಯರೂ ಒಮ್ಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ನಡೆಯಿತು. ಕಳೆದ 13 ವರ್ಷಗಳಿಂದ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಈಶ್ವರ ಬಿ ಖಂಡ್ರೆ ಅವರು ಕಳೆದ ಒಂದು ವರ್ಷದಿಂದ ಹಿರಿಯ ಉಪಾಧ್ಯಕ್ಷರ ಪ್ರಭಾರ ಹೊಣೆಯನ್ನೂ ನಿಭಾಯಿಸಿದ್ದರು. ತಮ್ಮ ಪೂಜ್ಯ ತಂದೆ ಭೀಮಣ್ಣ ಖಂಡ್ರೆಯವರ…
ಬೆಂಗಳೂರು: ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮುಂಬರುವ ಎರಡನೇ ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಗಳ ವೇಳಾಪಟ್ಟಿಯನ್ನು ಅಧಿಕೃತವಾಗಿ ಪರಿಷ್ಕರಿಸಿದೆ. ಈ ತಿಂಗಳ ಆರಂಭದಲ್ಲಿ ನಡೆದ ಮೊದಲ ಸುತ್ತಿನ ಪೂರ್ವಸಿದ್ಧತಾ ಪರೀಕ್ಷೆಗಳಲ್ಲಿ ಗಮನಾರ್ಹವಾಗಿ ವರದಿಯಾದ ಪ್ರಶ್ನೆಪತ್ರಿಕೆ ಸೋರಿಕೆಯ ಪುನರಾವರ್ತಿತ ಸಮಸ್ಯೆಯನ್ನು ತಡೆಯುವ ಗುರಿಯನ್ನು ಈ ನಿರ್ಧಾರ ಹೊಂದಿದೆ. ಹೊಸ ಮಾರ್ಗಸೂಚಿಗಳ ಅಡಿಯಲ್ಲಿ, ಜನವರಿ 27 ರಿಂದ ಫೆಬ್ರವರಿ 2 ರ ನಡುವೆ ನಿಗದಿಯಾಗಿದ್ದ ಪರೀಕ್ಷೆಗಳು ಈಗ ಬೆಳಿಗ್ಗೆ 11:00 ಗಂಟೆಗೆ ಪ್ರಾರಂಭವಾಗಲಿವೆ. ಪರೀಕ್ಷೆಯ ಪ್ರಾರಂಭದ ಸಮಯವನ್ನು ಬೆಳಿಗ್ಗೆ 10:00 ಗಂಟೆಯಿಂದ 11ಕ್ಕೆ ಬದಲಾವಣೆ ಮಾಡಲಾಗಿದೆ. ವಿದ್ಯಾರ್ಥಿಗಳು ಬೆಳಿಗ್ಗೆ 9:00 ಗಂಟೆಯೊಳಗೆ ತಮ್ಮ ಶಾಲೆಗಳಿಗೆ ವರದಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗಳನ್ನು ಪರೀಕ್ಷಾ ಆರಂಭಕ್ಕೂ ಮುನ್ನಾ ಬೆಳಿಗ್ಗೆ ಮೊದಲ 90 ನಿಮಿಷಗಳನ್ನು ನಿಯಮಿತ ತರಗತಿಗಳಿಗೆ ಬಳಸಿಕೊಳ್ಳುವಂತೆ ಇಲಾಖೆ ಶಾಲೆಗಳಿಗೆ ಸೂಚಿಸಿದೆ. ಡಿಜಿಟಲ್ ಪ್ರಶ್ನೆಪತ್ರಿಕೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಶಾಲಾ ಮುಖ್ಯಸ್ಥರಿಗೆ ಕಟ್ಟುನಿಟ್ಟಾದ ಪ್ರೋಟೋಕಾಲ್ ಅನ್ನು ಪಾಲಿಸುವಂತೆ ತಿಳಿಸಲಾಗಿದೆ. ಮುಖ್ಯೋಪಾಧ್ಯಾಯರು ತಮ್ಮ ಅಧಿಕೃತ ಶಾಲಾ ಪೋರ್ಟಲ್ಗಳ ಮೂಲಕ…
ಬೆಂಗಳೂರು: ಶಕ್ತಿ ಯೋಜನೆಯಡಿ ಹೊರ ರಾಜ್ಯದವರಿಗೂ ಟಿಕೆಟ್ ನೀಡಿ, ಅದರ ಬದಲಿಗೆ ತಮ್ಮ ಯುಪಿಐ ಖಾತೆಗೆ ಟಿಕೆಟ್ ಮೊತ್ತದ ದರವನ್ನು ಕೆಲ ಬಿಎಂಟಿಸಿ ನಿರ್ವಾಹಕರು ಪಡೆದಿದ್ದು ಬೆಳಕಿಗೆ ಬಂದಿತ್ತು. ಈ ಯುಪಿಐ ಸ್ಕ್ಯಾನರ್ ದುರುಪಯೋಗ ಪ್ರಕರಣದಲ್ಲಿ ಮೂವರು ನಿರ್ವಾಹಕರನ್ನು ಅಮಾನತುಗೊಳಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆದೇಶಿಸಿದೆ. ಹೊರ ರಾಜ್ಯದವರಿಗೆ ಐಟಿ ಕಾರ್ಡ್ ನೋಡಿದ ನಂತ್ರ, ಅವರಿಗೆ ಶಕ್ತಿ ಯೋಜನೆಯ ಉಚಿತ ಟಿಕೆಟ್ ನೀಡುವಂತಿಲ್ಲ. ಹೀಗಿದ್ದರೂ ಬಿಎಂಟಿಸಿಯ ಕಂಡಕ್ಟರ್, ಅವರಿಗೂ ಶಕ್ತಿ ಯೋಜನೆಯ ಟಿಕೆಟ್ ನೀಡಿ, ಅವರಿಂದ ಅದರಲ್ಲಿ ಇದ್ದಂತ ಹಣವನ್ನು ತಮ್ಮ ಯುಪಿಐ ಸ್ಕ್ಯಾನರ್ ಗೆ ಹಾಕಿಸಿಕೊಂಡಿದ್ದರು. ಬಿಎಂಟಿಸಿ ತನಿಖಾಧಿಕಾರಿಗಳು ಟಿಕೆಟ್ ಚೆಕ್ ಮಾಡಿದಂತ ಸಂದರ್ಭದಲ್ಲಿ ಹೀಗೊಂದು ಹಗರಣ ಬೆಳಕಿಗೆ ಬಂದಿತ್ತು. ಹೀಗಾಗಿ ಬಿಎಂಟಿಸಿಯ ಎಲ್ಲಾ ಘಟಕದಲ್ಲೂ ಯುಪಿಐ ಸ್ಕ್ಯಾನರ್ ದುರುಪಯೋಗದ ಬಗ್ಗೆ ಸಮಗ್ರ ತನಿಖೆಯನ್ನು ಸಂಸ್ಥೆಯು ನಡೆಸಿತ್ತು. ಈ ಸಂದರ್ಭದಲ್ಲಿ ಮೂವರು ಕಂಡಕ್ಟರ್ ಯುಪಿಐ ಸ್ಕ್ಯಾನರ್ ದುರುಪಯೋಗ ಮಾಡಿಕೊಂಡಿರೋದು ಖಚಿತಗೊಂಡಿದೆ. ಈ ಹಿನ್ನಲೆಯಲ್ಲಿ ಬಿಎಂಟಿಸಿಯ ಈಶಾನ್ಯ ವಲಯದ ಘಟಕ…
ಬೆಂಗಳೂರು: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 2026 ರ ನೂತನ ಕ್ಯಾಲೆಂಡರನ್ನು ಇಂದು ಕ್ವೀನ್ಸ್ ರಸ್ತೆಯ ಸಂಘದ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು. ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾದ ರಮೇಶ್ ಪಾಳ್ಯ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಖಜಾಂಚಿ ಮೋಹನ್ ಕುಮಾರ್, ಹಿರಿಯ ನಿರ್ದೇಶಕರಾದ ಆನಂದ್ ಪಿ ಬೈದನಮನೆ, ರಮೇಶ್ ಹಿರೇಜಂಬೂರು, ಕೆ.ವಿ. ಪರಮೇಶ್, ಧ್ಯಾನ್ ಪೂಣಚ್ಚ, ಕಾರ್ಯದರ್ಶಿ ರಘು ಮತ್ತಿತರರು ಉಪಸ್ಥಿತರಿದ್ದರು.














