Author: kannadanewsnow07

ನವದೆಹಲಿ: ಅಕ್ಟೋಬರ್ 1, 2025 ರಿಂದ, ಭಾರತೀಯರು ತಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ಪ್ರಮುಖ ಹಣಕಾಸು ಮತ್ತು ನಿಯಂತ್ರಕ ಬದಲಾವಣೆಗಳ ಸರಣಿಯನ್ನು ನೋಡಲಿದ್ದಾರೆ. ಪರಿಷ್ಕೃತ ಬ್ಯಾಂಕಿಂಗ್ ಶುಲ್ಕಗಳು ಮತ್ತು ಪಿಂಚಣಿ ನಿಯಮಗಳಿಂದ ಹಿಡಿದು ಹೊಸ ರೈಲ್ವೆ ಟಿಕೆಟಿಂಗ್ ಮಾರ್ಗಸೂಚಿಗಳು ಮತ್ತು ಹೆಚ್ಚಿನ ಸ್ಪೀಡ್ ಪೋಸ್ಟ್ ವೆಚ್ಚಗಳವರೆಗೆ, ನವೀಕರಣಗಳು ವ್ಯಾಪಕ ಶ್ರೇಣಿಯನ್ನು ಹೊಂದಿವೆ. ಏನು ಬದಲಾಗುತ್ತಿದೆ ಎಂಬುದರ ಕುರಿತು ಇಲ್ಲಿದೆ ಮಾಹಿತಿ.  ಇಂಪೀರಿಯಾ ಗ್ರಾಹಕರಿಗೆ HDFC ಬ್ಯಾಂಕ್ ನಿಯಮಗಳನ್ನು ಬಿಗಿಗೊಳಿಸಿದೆ: HDFC ಬ್ಯಾಂಕ್ ತನ್ನ ಇಂಪೀರಿಯಾ ಕಾರ್ಯಕ್ರಮದ ಗ್ರಾಹಕರಿಗೆ ಹೊಸ ಅರ್ಹತಾ ನಿಯಮಗಳು ಅಕ್ಟೋಬರ್ 1 ರಿಂದ ಅನ್ವಯವಾಗುತ್ತವೆ ಎಂದು ತಿಳಿಸಿದೆ. ಜೂನ್ 30, 2025 ರಂದು ಅಥವಾ ಅದಕ್ಕೂ ಮೊದಲು ಸೇರಿದವರು ತಮ್ಮ ಪ್ರೀಮಿಯಂ ಬ್ಯಾಂಕಿಂಗ್ ಸವಲತ್ತುಗಳನ್ನು ಉಳಿಸಿಕೊಳ್ಳಲು ಪರಿಷ್ಕೃತ ಒಟ್ಟು ಸಂಬಂಧ ಮೌಲ್ಯ (TRV) ಮಾನದಂಡಗಳನ್ನು ಪೂರೈಸಬೇಕು. ಆರ್‌ಬಿಐ ನಿರಂತರ ಚೆಕ್ ಕ್ಲಿಯರಿಂಗ್ ಅನ್ನು ತರುತ್ತದೆ: ವೇಗದ ಇತ್ಯರ್ಥದತ್ತ ಪ್ರಮುಖ ಹೆಜ್ಜೆಯಾಗಿ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)…

Read More

ಬೆಂಗಳೂರು: ರಾಜ್ಯಾಧ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಯುತ್ತಿದೆ. ಮನೆ ಮನೆಗೆ ತೆರಳಿ ಗಣತಿದಾರರು ಜಾತಿಗಣತಿ ಸಮೀಕ್ಷೆ ನಡೆಸುತ್ತಿದ್ದಾರೆ. ಸಾರ್ವಜನಿಕರಾದಂತ ನೀವು ಗಣತಿದಾರರು ಬರುವವರೆಗೂ ಕಾಯುವ ಅಗತ್ಯವಿಲ್ಲ. ಆನ್ ಲೈನ್ ನಲ್ಲಿಯೇ ಅರ್ಜಿ ತುಂಬಿ, ನಿಮ್ಮ ಮಾಹಿತಿಯನ್ನು ದಾಖಲಿಸಬಹುದಾಗಿದೆ. ಹೌದು ನೀವು ಗಣತಿದಾರರನ್ನು ಕಾಯಬೇಕಾಗಿಲ್ಲ. ಆನ್ ಲೈನ್ ನ ಸಿಂಪಲ್ ಪ್ರೊಸಿಜರ್ ಮೂಲಕ ಸ್ವತಹ ನೀವೇ ಅಪ್ಲಿಕೇಷನ್ ಫಿಲ್ ಮಾಡಿ, ಸಬ್ ಮಿಟ್ ಮಾಡಬಹುದಾಗಿದೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ.. ಈ ಕಳಗಿನ ಹಂತ ಅನುಸರಿಸಿ, ಆನ್ ಲೈನ್ ನಲ್ಲೇ ಜಾತಿಗಣತಿ ಸಮೀಕ್ಷೆಯ ಎಲ್ಲಾ ಮಾಹಿತಿ ದಾಖಲಿಸಿ. ಆನ್ ಲೈನ್ ನಲ್ಲಿ ಜಾತಿ ಗಣತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ, ನಿಮ್ಮ ಮಾಹಿತಿಯನ್ನು ಹೀಗೆ ದಾಖಲಿಸಿ ಮೊದಲನೆಯದಾಗಿ ನೀವು https://kscbcelfdeclaration.karnataka.gov.in ಜಾಲತಾಣಕ್ಕೆ ಭೇಟಿ ನೀಡಬೇಕು. ಅಲ್ಲದೇ ನಿಮ್ಮ ಬಾಗಿಲ ಮೇಲೆ ವಿದ್ಯುತ್ ಬಿಲ್ ಕಲೆಕ್ಟರ್ ಅಂಟಿಸಿರುವಂತ ಸ್ಟಿಕ್ಕರ್ ನಲ್ಲಿ ಇರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ, ಸೆಲ್ಫ್ ಡಿಕ್ಲರೇಶನ್ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು.…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: : ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಹದಿಹರೆಯವನ್ನು ಪೂರ್ಣಗೊಳಿಸಿದ ನಂತರ ಜೀವನವು ಬದಲಾಗುತ್ತದೆ. ಈ ಸಮಯದಲ್ಲಿ, ಕೆಲಸ ಮತ್ತು ಕುಟುಂಬದ ಜವಾಬ್ದಾರಿಗಳಿವೆ. ಎರಡನ್ನೂ ಸಮತೋಲನಗೊಳಿಸುವುದರಿಂದ ಜೀವನವು ಆರಾಮದಾಯಕವಾಗಿರುತ್ತದೆ. ಆದಾಗ್ಯೂ, ಕೆಲವರು ಇವುಗಳಲ್ಲಿ ಒಂದರಲ್ಲಿ ಮಾತ್ರ ಯಶಸ್ವಿಯಾಗಲು ಸಾಧ್ಯ. ಎರಡನೆಯದರೊಂದಿಗೆ ಅವರು ಸಾಕಷ್ಟು ಕಷ್ಟಪಡುತ್ತಾರೆ. ಅಂತಹ ತೊಂದರೆಗಳು ಇರಬಾರದು, ಅಂದರೆ ಉಚಿತ ಯೋಜನೆ ಖಂಡಿತವಾಗಿಯೂ ಇರಬೇಕು. ವಿಶೇಷವಾಗಿ 25 ವರ್ಷ ವಯಸ್ಸಿನ ನಂತರ ಮತ್ತು 30 ವರ್ಷಕ್ಕಿಂತ ಮೊದಲು. ಯುವಕರು ಕೆಲವು ಯೋಜನೆಗಳನ್ನು ಹಾಕಿಕೊಂಡರೆ ಜೀವನ ಸುಖಕರವಾಗಿರುತ್ತದೆ. ಆ ಯೋಜನೆಗಳು ಯಾವುವು ಎಂದು ಈಗ ನೋಡೋಣ.. 50 30 20 ನಿಯಮಗಳು: ಹೊಸ ಉದ್ಯೋಗ ಬಂದಾಗ, ಅನೇಕ ಯುವಕರು ವ್ಯರ್ಥವಾಗಿ ಖರ್ಚು ಮಾಡುತ್ತಾರೆ. ಇಲ್ಲದಿದ್ದರೆ, ಪಡೆದ ಆದಾಯವನ್ನು ಯೋಜಿತ ರೀತಿಯಲ್ಲಿ ಬಳಸಿದರೆ ಅನುಕೂಲಕರವಾಗಿರುತ್ತದೆ. ಪಡೆದ ಆದಾಯದ 50% ಅನ್ನು ಮನೆಯ ವೆಚ್ಚಗಳಿಗೆ ಬಳಸಬೇಕು. ಅಂದರೆ, ಬಾಡಿಗೆ, ಅಡುಗೆಮನೆಯ ಅಗತ್ಯತೆಗಳು ಇತ್ಯಾದಿ. ನೀವು ಪೆಟ್ರೋಲ್, ವೈಯಕ್ತಿಕ ಖರ್ಚುಗಳಿಗೆ 30% ಮತ್ತು ಉಳಿತಾಯ ಅಥವಾ ಸಾಲ…

Read More

* ಅವಿನಾಶ್‌ ಆರ್ ಭೀಮಸಂದ್ರ ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲಾ ನೇಮಕಾತಿಗಳಲ್ಲಿ 3 ವರ್ಷಗಳ ವಯೋಮೀತಿ ಸಡಿಲಿಕೆ ಮಾಡಿ ಆದೇಶ ಮಾಡಿದ್ದು, ಈ ಮೂಲಕ ವಯೋಮೀತಿ ಮೀರುವ ಆತಂಕದಲ್ಲಿದ್ದ ಎಲ್ಲರಿಗೂ ಅವಕಾಶ ನೀಡಿದೆ.ಒಳಮೀಸಲಾತಿ ಸಲುವಾಗಿ ರಾಜ್ಯ ಸರ್ಕಾರ ಈ ಮೊದಲು ಎಲ್ಲಾ ನೇಮಕಾತಿಗಳ ತಡೆ ಹಿಡಿದಿತ್ತು, ಈ ನಡುವೆ ದಾರವಾಡದಲ್ಲಿ ಹಲವು ಮಂದಿ ಹೋರಾಟ ಮಾಡಿದ್ದರು. ಈ ನಡುವೆ ಒಳಮೀಸಲಾತಿ ವರದಿ ಜಾರಿಗೆ ಬಂದಿದ್ದು, ಸದ್ಯ ಈ ಬಗ್ಗೆ ಆದೇಶವನ್ನು ಹೊರಡಿಸಿದ್ದು, ಹಾಗಾದ್ರೇ ಆದೇಶದಲ್ಲಿ ಏನು ಇದೇ ಅನ್ನುವುದು ಹೀಗಿದೆ 1.ದಿನಾಂಕ 25.08.2025 ರ ಸರ್ಕಾರದ ಆದೇಶ ಸಂಖ್ಯೆ:ಸಕಇ 8 ಎಸ್‌ಎಲ್‌ಪಿ 2024. 3. ದಿನಾಂಕ 06.09.2025ರ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 249 ಸೇನೆನಿ 2025. ಮೇಲೆ (1) ರಲ್ಲಿ ಓದಲಾದ ದಿನಾಂಕ25.11.2024ರ, ದಿನಾಂಕ 29.03.2025ರ ಮತ್ತು ದಿನಾಂಕ 11.04.2025ರ ಸರ್ಕಾರದ ಸುತ್ತೋಲೆಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಯಾಗುವವರೆಗೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ…

Read More

ನವದೆಹಲಿ: ಭಾರತದ ಸ್ವದೇಶಿ ಮೆಸೇಜಿಂಗ್ ಅಪ್ಲಿಕೇಶನ್ ಅರಟ್ಟೈ, ಆಪ್ ಸ್ಟೋರ್ ಶ್ರೇಯಾಂಕದಲ್ಲಿ ಪ್ರಮುಖ ಜಾಗತಿಕ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದೆ. ಇದು ಅದರ ಬೆಳೆಯುತ್ತಿರುವ ಆಕರ್ಷಣೆ ಮತ್ತು ಅದರೊಂದಿಗೆ ಬರುವ ಒತ್ತಡ ಎರಡನ್ನೂ ಎತ್ತಿ ತೋರಿಸುವ ಒಂದು ಮೈಲಿಗಲ್ಲು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನಾಗರಿಕರು ಸ್ಥಳೀಯ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಆದ್ಯತೆ ನೀಡುವಂತೆ ಸಾರ್ವಜನಿಕವಾಗಿ ಒತ್ತಾಯಿಸಿದಾಗ, ಶಿಫಾರಸು ಮಾಡಲಾದ ಅಪ್ಲಿಕೇಶನ್‌ಗಳಲ್ಲಿ ಅರಟ್ಟೈ ಅನ್ನು ಉಲ್ಲೇಖಿಸಿದಾಗ ಈ ಬೆಳವಣಿಗೆ ಮತ್ತಷ್ಟು ವೇಗಗೊಂಡಿತು. ಅದೇ ಸಮಯದಲ್ಲಿ, ವಿವೇಕ್ ವಾಧ್ವಾ ಅವರಂತಹ ಉನ್ನತ ಮಟ್ಟದ ತಂತ್ರಜ್ಞಾನಿಗಳು ಇದನ್ನು ಪ್ರಯತ್ನಿಸಿದರು ಮತ್ತು ಅದರ ಮೆರುಗನ್ನು ಹೊಗಳಿದರು ಮತ್ತು ಸಂದೇಶ ಕಳುಹಿಸುವ ಅನುಭವದಲ್ಲಿ ಇದನ್ನು “ಭಾರತದ ವಾಟ್ಸಾಪ್ ಕೊಲೆಗಾರ” ಎಂದು ಕರೆದರು. ಅರಟ್ಟೈ ಪರಿಚಿತ ವೈಶಿಷ್ಟ್ಯಗಳ ಗುಂಪನ್ನು ಅಳವಡಿಸಿಕೊಂಡಿದೆ: ಒಬ್ಬರಿಂದ ಒಬ್ಬರಿಗೆ ಮತ್ತು ಗುಂಪು ಚಾಟ್, ಧ್ವನಿ ಟಿಪ್ಪಣಿಗಳು, ಮಾಧ್ಯಮ ಹಂಚಿಕೆ, ಧ್ವನಿ/ವಿಡಿಯೋ ಕರೆಗಳು, ಕಥೆಗಳು ಮತ್ತು ಚಾನೆಲ್ ಪ್ರಸಾರ. ಇದು ಡೆಸ್ಕ್‌ಟಾಪ್ ಮತ್ತು ಆಂಡ್ರಾಯ್ಡ್…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌; ಶಿಕ್ಷಣಕ್ಕೆ ಈಗ ಹಿಂದೆಂದಿಗಿಂತಲೂ ಹೆಚ್ಚಿನ ಸೌಲಭ್ಯಗಳಿವೆ. ಅದಕ್ಕಾಗಿಯೇ ಬಹುತೇಕ ಎಲ್ಲರೂ ಒಂದಲ್ಲ ಒಂದು ರೀತಿಯ ಪದವಿ ಪಡೆಯುತ್ತಿದ್ದಾರೆ. ಆದರೆ, ಇಂದಿನ ಯುವಕರು ಹೊಸ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಶಿಕ್ಷಣ ಮುಗಿದ ನಂತರ, ಅವರು ಉದ್ಯೋಗ ಪಡೆಯಬೇಕೇ? ಅವರು ವ್ಯವಹಾರವನ್ನು ಪ್ರಾರಂಭಿಸಬೇಕೇ? ಅನೇಕರು ಗೊಂದಲಕ್ಕೊಳಗಾಗಿದ್ದಾರೆ. ಚೆನ್ನಾಗಿ ಓದಿದ ನಂತರ ಕೆಲಸ ಮಾಡಲು ಬಯಸುವವರು ನಿಯಮಿತವಾಗಿ ಮಾಸಿಕ ಸಂಬಳ ಪಡೆಯುತ್ತಿದ್ದಾರೆ. ಆದರೆ ಈ ರೀತಿಯ ಕೆಲಸ ಮಾಡಲು ಬಯಸುವವರು ಕನಸುಗಳನ್ನು ಹೊಂದಿದ್ದರೆ, ಅವರು ಶೂಟ್ ಮಾಡುವುದಿಲ್ಲ. ಏಕೆಂದರೆ ಜೀವನದಲ್ಲಿ ಏನನ್ನಾದರೂ ಸಾಧಿಸಲು ಬಯಸುವವರಿಗೆ ಉದ್ಯೋಗಗಳು ಸೂಕ್ತವಲ್ಲ. ವ್ಯವಹಾರವು ಸರಿಯಾದ ಕೆಲಸ. ಹಾಗಾದರೆ ಆ ವ್ಯವಹಾರವನ್ನು ಪ್ರಾರಂಭಿಸಲು ನೀವು ಏನು ಮಾಡಬೇಕು? ಆದರೆ ಅದಕ್ಕೂ ಮೊದಲು, ಈ ಸಣ್ಣ ಕಥೆಯನ್ನು ಓದಿ.. ಈಗ ನಾವು ಕಾಡುಗಳಿಗಿಂತ ನಮ್ಮ ಮನೆಗಳಲ್ಲಿ ಹೆಚ್ಚಾಗಿ ಮಂಗಗಳನ್ನು ನೋಡುತ್ತಿದ್ದೇವೆ. ಕೆಲವು ಜನರು, ದಯೆಯಿಂದ, ಮಂಗಗಳಿಗೆ ಏನಾದರೂ ಆಹಾರ ನೀಡಲು ಬಯಸುತ್ತಾರೆ. ಮಂಗಗಳಿಗೆ ಬಾಳೆಹಣ್ಣುಗಳು ಹೆಚ್ಚು ಇಷ್ಟ. ಆದರೆ, ನೀವು ಮಂಗನ ಬಳಿಗೆ…

Read More

ಬೆಂಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ 2025-26ನೇ ಸಾಲಿನಲ್ಲಿ ವೃತ್ತಿ ಪ್ರೋತ್ಸಾಹ ಯೋಜನೆ, ಸ್ವಾವಲಂಭಿ ಸಾರಥಿ ಯೋಜನೆ, ಶ್ರಮಶಕ್ತಿ ಸಾಲ ಯೋಜನೆ, ವ್ಯಾಪಾರ / ಉದ್ಯಮಗಳಿಗೆ ನೇರಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ಸಾಲ ಯೋಜನೆ, ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಹಯಾಧನ ಯೋಜನೆ ಮತ್ತು ಸ್ವಾಂತನ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಮತೀಯ ಅಲ್ಪಸಂಖ್ಯಾತ ರಿಂದ (ಅಂದರೆ ಮುಸ್ಲಿಂ, ಜೈನರು, ಬೌದ್ಧರು, ಸಿಖ್ಖರು ಹಾಗೂ ಪಾರ್ಸಿ ಜನಾಂಗದವರಿಂದ ) ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು. ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 15 ವರ್ಷದಿಂದ ಖಾಯಂ ನಿವಾಸಿಯಾಗಿರಬೇಕು. ಆಸಕ್ತರು ವೆಬ್ ಸೈಟ್ www.kmdconline.karnataka.gov.in ನಲ್ಲಿ ಅಕ್ಟೋಬರ್ 16, 2025 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.

Read More

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಮರ್ಪಕವಾಗಿ ಕೈಗೊಳ್ಳಲಾಗುತ್ತಿದ್ದು, ಕೆಲವು ಸಾರ್ವಜನಿಕರು ಗಣತಿದಾರರು ತಮ್ಮ ಪಡಿತರ ಚೀಟಿಯ ರದ್ದತಿಗೆ ಬಂದಿದ್ದಾರೆಂಬ ತಪ್ಪು ಕಲ್ಪನೆಯಿಂದ ಸರಿಯಾದ ಮಾಹಿತಿ ನೀಡಲು ಸಹಕರಿಸದೆ ಸಮೀಕ್ಷೆಗೆ ಅಡ್ಡಿಯಾಗುತ್ತಿರುವುದು ಕಂಡುಬಂದಿರುತ್ತದೆ. ಈ ಸಮೀಕ್ಷೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಹಿಂದುಳಿದ ವರ್ಗಗಳ ಹಾಗೂ ಇತರೆ ಎಲ್ಲ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ದತ್ತಾಂಶವನ್ನು ಸಂಗ್ರಹಿಸಲು ಮಾತ್ರ ನಡೆಸಲಾಗುತ್ತಿದೆ. ಯಾವುದೇ ಪಡಿತರ ಚೀಟಿ ರದ್ದತಿ ಕಾರ್ಯವನ್ನು ಸಮೀಕ್ಷೆಯಲ್ಲಿ ಮಾಡಲಾಗುವುದಿಲ್ಲ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ ಜಗದೀಶ ಅವರು ಸ್ಪಷ್ಟಪಡಿಸಿದ್ದಾರೆ. ರಾಜ್ಯಾದ್ಯಂತ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಹೋಗಲಾಡಿಸುವ ಯೋಜನೆಗಳನ್ನು ರೂಪಿಸಲು ಈ ದತ್ತಾಂಶ ಸಹಕಾರಿಯಾಗಲಿದೆ. ಹಾಗಾಗಿ ಸಾರ್ವಜನಿಕರು ಈ ಸಮೀಕ್ಷೆ ಬಗ್ಗೆ ಯಾವುದೇ ತಪ್ಪು ಕಲ್ಪನೆ ಹೊಂದದೆ ಮತ್ತು ವದಂತಿಗಳಿಗೆ ಕಿವಿಕೊಡದೇ ನಿಶ್ಚಿಂತೆಯಿಂದ ಭಾಗವಹಿಸಿ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

Read More

ಬೆಂಗಳೂರು: ರಾಜಾಜಿನಗರದ ಲಿಡ್ಕರ್ ಮಾರಾಟ ಮಳಿಗೆಯಲ್ಲಿ “ದಸರಾ – ದೀಪಾವಳಿ ಹಬ್ಬ”ದ ಪ್ರಯುಕ್ತ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 18 ರವರೆಗೆ ಶೇಕಡ 20 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಬೆಂಗಳೂರಿನ ರಾಜಾಜಿನಗರದ ಓಲ್ಡ್ ಪೊಲೀಸ್ ಸ್ಟೇಷನ್ ಬಸ್‍ಸ್ಟಾಪ್, ನ್ಯೂ ವಿಶಾಲ್ ಮಾರ್ಟ್ ಎದುರು, 3 ನೇ ಬ್ಲಾಕ್, ಇಎಸ್‍ಐ ಹತ್ತಿರ ಇರುವ ಮಾರಾಟ ಮಳಿಗೆಯಲ್ಲಿ ಚರ್ಮದ ಶೂಗಳು, ಚಪ್ಪಲಿಗಳು, ಮಹಿಳೆಯರ ವ್ಯಾನಿಟಿ ಬ್ಯಾಗ್‍ಗಳು, ಇನ್ನೂ ಇತರೆ ಅಪ್ಪಟ ಚರ್ಮದ ವಸ್ತುಗಳ ಮೇಲೆ ಶೇಕಡ 20% ರಿಯಾಯಿತಿಯಂತೆ ಮಾರಾಟ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 8660412905 ಗೆ ಸಂಪರ್ಕಿಸಬಹುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗ ಪಡೆದುಕೊಳ್ಳಬೇಕೆಂದು ರಾಜಾಜಿನಗರದ ಮಾರಾಟ ಮಳಿಗೆಯ ವ್ಯವಸ್ಥಾಪಕರಾದ ಟಿ ಲೋಕೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬೆಂಗಳೂರು: ಕನ್ನಡ ಹಿರಿಯ ನಟ ಯಶವಂತ್ ಸರ್‌ದೇಶಪಾಂಡೆ ಅವರು ವಿಧಿವಶರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ ಅಂತ ತಿಳಿದು ಬಂದಿದೆ. ಅವರಿಗೆ ಹೃದಯಘಾತವಾಗಿದ್ದು, ಹೀಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ ಎನ್ನಲಾಗಿದೆ. ಯಶವಂತ್‌ ದೇಶಪಾಂಡೆ ಹಿನ್ನಲೆ : ಯಶವಂತ ಸರದೇಶಪಾಂಡೆ ಕನ್ನಡ ರಂಗಭೂಮಿ ನಟರಾಗಿ ಹೆಚ್ಚು ಜನಪ್ರಿಯವಾದವರು. ರಾಜ್ಯಾದಂತ್ಯ ಇವರು ನಟಿಸಿ-ನಿರ್ದೇಶಿಸಿರುವ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಈಗ ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ಪಾತ್ರವಹಿಸುತ್ತಿದ್ದಾರೆ. ಇವರ ಪತ್ನಿ ಮಾಲತಿ ಸಹ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಜನಪ್ರಿಯ ಕಲಾವಿದೆಯಾಗಿದ್ದಾರೆ. ನಟ, ನಿರ್ದೇಶಕ, ನಾಟಕಕಾರ, ಹಾಸ್ಯ ನಾಟಕಗಳ ಮುಖಾಂತರ ಕರ್ನಾಟಕದಾದ್ಯಂತ ಮನೆಮಾತಾಗಿರುವ ಯಶವಂತ ಸರದೇಶಪಾಂಡೆಯವರು ಯಶವಂತ ಸರದೇಶಪಾಂಡೆಯವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಎಂಬ ಹಳ್ಳಿಯಲ್ಲಿ ೧೩.೦೬.೧೯೬೫ರಲ್ಲಿ. ತಂದೆ ಶ್ರೀಧರರಾವ್ ಗೋಪಾಲರಾವ್ ಸರದೇಶಪಾಂಡೆ, ತಾಯಿ ಕಲ್ಪನಾದೇವಿ. ಚಿಕ್ಕಂದಿನಿಂದಲೂ ನಾಟಕದಲ್ಲಿ ಬೆಳೆದ ಆಸಕ್ತಿ.…

Read More