Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಬೆಂಗಳೂರಲ್ಲಿ ನಡು ರಸ್ತೆಯಲ್ಲೇ, ಕಾರಿನಿಂದ ಹೊರಗೆಳೆದು ಉಬರ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ!

ALERT : ‘ಜಂಕ್ ಫುಡ್’ ಸೇವಿಸುವ ಯುವಜನರಲ್ಲಿ ಹೃದಯಾಘಾತದ ಅಪಾಯ ಶೇ. 100 ರಷ್ಟು ಹೆಚ್ಚಳ ; ಅಧ್ಯಯನ

GOOD NEWS : ರಾಜ್ಯದ `LKG-10ನೇ ತರಗತಿ’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ವಾರದ 6 ದಿನವೂ ಮೊಟ್ಟೆ/ಬಾಳೆಹಣ್ಣು ವಿತರಣೆಗೆ ಶಿಕ್ಷಣ ಇಲಾಖೆ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ‘ಜಂಕ್ ಫುಡ್’ ಸೇವಿಸುವ ಯುವಜನರಲ್ಲಿ ಹೃದಯಾಘಾತದ ಅಪಾಯ ಶೇ. 100 ರಷ್ಟು ಹೆಚ್ಚಳ ; ಅಧ್ಯಯನ
INDIA

ALERT : ‘ಜಂಕ್ ಫುಡ್’ ಸೇವಿಸುವ ಯುವಜನರಲ್ಲಿ ಹೃದಯಾಘಾತದ ಅಪಾಯ ಶೇ. 100 ರಷ್ಟು ಹೆಚ್ಚಳ ; ಅಧ್ಯಯನ

By kannadanewsnow57

ಇಂದಿನ ಗಡಿಬಿಡಿಯ ಜೀವನದಲ್ಲಿ ನಾಲಿಗೆಯ ರುಚಿಗಾಗಿ ನಾವು ತಿನ್ನುವ ‘ಫಾಸ್ಟ್ ಫುಡ್’ ನಮ್ಮ ಪ್ರಾಣಕ್ಕೆ ಸಂಚಕಾರ ತರುತ್ತಿದೆಯೇ? ಹೌದು ಎನ್ನುತ್ತಿದೆ ಐಸಿಎಮ್ಆರ್ (ICMR) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN) ವಿಜ್ಞಾನಿಗಳು ನಡೆಸಿರುವ ಹೊಸ ಸಂಶೋಧನೆ. ಹೈದರಾಬಾದ್ನ 18 ರಿಂದ 24 ವರ್ಷದೊಳಗಿನ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ನಡೆಸಿದ ಈ ಅಧ್ಯಯನದಲ್ಲಿ, ಇಂದಿನ ಯುವ ಪೀಳಿಗೆಯನ್ನು ಕಾಡುತ್ತಿರುವ ಅತಿ ದೊಡ್ಡ ಆರೋಗ್ಯದ ಆತಂಕವೊಂದು ಬಯಲಾಗಿದೆ.

ಏನಿದು ಸಂಶೋಧನೆಯ ಕಟು ಸತ್ಯ?

ಕಡಿಮೆ ಬೆಲೆಗೆ ಸಿಗುತ್ತದೆ, ನಾಲಿಗೆಗೆ ಮಸ್ತ್ ರುಚಿ ನೀಡುತ್ತದೆ ಎಂದು ಯುವಜನತೆ ಮುಗಿಬಿದ್ದು ತಿನ್ನುವ ಪಿಜ್ಜಾ, ಬರ್ಗರ್, ಪ್ಯಾಕೆಟ್ ಚಿಪ್ಸ್, ಚಾಕೊಲೇಟ್ ಹಾಗೂ ಬಣ್ಣಬಣ್ಣದ ತಂಪು ಪಾನೀಯಗಳು (Ultra-Processed Foods) ನೇರವಾಗಿ ಹೃದಯದ ಆರೋಗ್ಯವನ್ನು ಹದಗೆಡಿಸುತ್ತಿವೆ. ಈ ರೀತಿಯ ಸಂಸ್ಕರಿಸಿದ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ಯುವಕರಲ್ಲಿ ಹೃದಯಾಘಾತದ (Heart Attack) ಭೀತಿ ಶೇಕಡಾ 100 ರಷ್ಟು ಹೆಚ್ಚಾಗುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ವಿಜ್ಞಾನಿಗಳು 311 ಕಾಲೇಜು ವಿದ್ಯಾರ್ಥಿಗಳ ಮೇಲೆ ನಡೆಸಿದ ಕ್ಲಿನಿಕಲ್ ಪರೀಕ್ಷೆಯಲ್ಲಿ ಕೆಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ:

ಮೂರು ಪಟ್ಟು ಹೆಚ್ವು ಬಿಪಿ: ಅಲ್ಟ್ರಾ-ಪ್ರಾಸೆಸ್ಡ್ ಆಹಾರ ಇಷ್ಟಪಡುವ ಯುವಕರಲ್ಲಿ ಅಧಿಕ ರಕ್ತದೊತ್ತಡದ (High BP) ಸಮಸ್ಯೆ ಸಾಮಾನ್ಯರಿಗಿಂತ 3 ಪಟ್ಟು ಹೆಚ್ಚಾಗಿದೆ.

ಚಿಕ್ಕ ವಯಸ್ಸಿನಲ್ಲೇ ಕಾಡುವ ಕಾಯಿಲೆ: ಪರೀಕ್ಷೆಗೊಳಗಾದವರಲ್ಲಿ ಈಗಾಗಲೇ ಶೇ. 12.5 ರಷ್ಟು ಯುವಕರು ಹೈ ಬಿಪಿಯಿಂದ ಬಳಲುತ್ತಿರುವುದು ಪತ್ತೆಯಾಗಿದೆ.

ಅಪಾಯದ ಮುನ್ಸೂಚನೆ: 20 ವರ್ಷ ತುಂಬುವ ಮುನ್ನವೇ ರಕ್ತದೊತ್ತಡ ಹೆಚ್ಚಾದರೆ, ಭವಿಷ್ಯದಲ್ಲಿ ಪಾರ್ಶ್ವವಾಯು (Stroke) ಮತ್ತು ಕಿಡ್ನಿ ವೈಫಲ್ಯದ (Kidney Failure) ಅಪಾಯ ಗ್ಯಾರಂಟಿ.

ಜಂಕ್ ಫುಡ್ಗೆ ಯುವಕರು ದಾಸರಾಗುತ್ತಿರುವುದು ಏಕೆ?

ಫಾಸ್ಟ್ ಫುಡ್ಗಳಲ್ಲಿ ಬಳಸುವ ಮೋನೊಸೋಡಿಯಂ ಗ್ಲುಟಮೇಟ್ (ಅಜಿನೊಮೊಟೊ), ಅತಿಯಾದ ಉಪ್ಪು (ಸೋಡಿಯಂ) ಮತ್ತು ಸ್ಯಾಚುರೇಟೆಡ್ ಕೊಬ್ಬುಗಳು ಮೆದುಳನ್ನು ಪ್ರಚೋದಿಸಿ, ಯುವಕರು ಮತ್ತೆ ಮತ್ತೆ ಅದನ್ನೇ ತಿನ್ನುವಂತೆ ಪ್ರೇರೇಪಿಸುತ್ತವೆ. ಇವುಗಳಲ್ಲಿರುವ ರಾಸಾಯನಿಕಗಳು ಮತ್ತು ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳನ್ನು ಬ್ಲಾಕ್ ಮಾಡುವುದರಿಂದ, ಹದಿಹರೆಯದವರಲ್ಲಿಯೂ ಸೈಲೆಂಟ್ ಆಗಿ ಹಾರ್ಟ್ ಅಟ್ಯಾಕ್ ಸಂಭವಿಸುತ್ತಿದೆ.

ಪರಿಹಾರವೇನು? ವಿಜ್ಞಾನಿಗಳ ಸಲಹೆ
ಮುಂದಿನ ಪೀಳಿಗೆ ವೃದ್ಧಾಪ್ಯಕ್ಕೆ ಕಾಲಿಡುವ ಮುನ್ನವೇ ರೋಗಿಷ್ಟರಾಗುವುದನ್ನು ತಪ್ಪಿಸಬೇಕಾದರೆ ಈಗಲೇ ಎಚ್ಚೆತ್ತುಕೊಳ್ಳಬೇಕು. ಕಾಲೇಜುಗಳಲ್ಲಿ ಪೌಷ್ಟಿಕ ಆಹಾರದ ಬಗ್ಗೆ ವಿಶೇಷ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ICMR-NIN ವಿಜ್ಞಾನಿಗಳ ತಂಡ ತಿಳಿಸಿದೆ.

ನಾಲಿಗೆಯ ರುಚಿಗಿಂತ ಜೀವ ಮುಖ್ಯ. ಪ್ಯಾಕ್ ಮಾಡಿದ ಕೃತಕ ಆಹಾರಗಳ ವ್ಯಾಮೋಹದಿಂದ ಹೊರಬಂದು, ಮನೆಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಮತ್ತು ಪೌಷ್ಟಿಕ ಆಹಾರಗಳನ್ನು ರೂಢಿಸಿಕೊಳ್ಳುವುದು ಇಂದಿನ ಯುವ ಪೀಳಿಗೆಗೆ ಅತಿ ಅವಶ್ಯಕವಾಗಿದೆ.ನಿಮ್ಮ ಆಹಾರದ ಆಯ್ಕೆಯೇ ನಿಮ್ಮ ಆಯಸ್ಸನ್ನು ನಿರ್ಧರಿಸುತ್ತದೆ; ಇಂದಿನ ಜಂಕ್ ಫುಡ್ ವ್ಯಾಮೋಹ ನಾಳಿನ ಜೀವಕ್ಕೆ ಕಂಟಕವಾಗದಿರಲಿ.

ALERT: Young people who eat junk food have a 100% increased risk of heart attack; Study
Share. Facebook Twitter LinkedIn WhatsApp Email

Related Posts

BREAKING : ಭಾರಿ ಸದ್ದು ಮಾಡುತ್ತಿರುವ ಕಾಕ್ರೋಚ್ ಇನ್ಸ್ಟಾಗ್ರಾಮ್ ಅಕೌಂಟ್ ಹ್ಯಾಕ್ | cockroach Instagram account hacked

1 Min Read

BREAKING : 19ನೇ ರೋಜ್ ಗಾರ್ ಮೇಳ : 51,000 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ | WATCH VIDEO

1 Min Read

BREAKING : ಲಡಾಖ್ ನಲ್ಲಿ ಭಾರತೀಯ ಸೇನೆಯ `ಚೀತಾ ಹೆಲಿಕಾಪ್ಟರ್’ ಪತನ: ಮೇಜರ್ ಜನರಲ್ ಸೇರಿದಂತೆ ಮೂವರಿಗೆ ಗಾಯ | Cheetah helicopter crashes

1 Min Read
Recent News

SHOCKING : ಬೆಂಗಳೂರಲ್ಲಿ ನಡು ರಸ್ತೆಯಲ್ಲೇ, ಕಾರಿನಿಂದ ಹೊರಗೆಳೆದು ಉಬರ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ!

ALERT : ‘ಜಂಕ್ ಫುಡ್’ ಸೇವಿಸುವ ಯುವಜನರಲ್ಲಿ ಹೃದಯಾಘಾತದ ಅಪಾಯ ಶೇ. 100 ರಷ್ಟು ಹೆಚ್ಚಳ ; ಅಧ್ಯಯನ

GOOD NEWS : ರಾಜ್ಯದ `LKG-10ನೇ ತರಗತಿ’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ವಾರದ 6 ದಿನವೂ ಮೊಟ್ಟೆ/ಬಾಳೆಹಣ್ಣು ವಿತರಣೆಗೆ ಶಿಕ್ಷಣ ಇಲಾಖೆ ಆದೇಶ

BIG NEWS : ದೇಶದ 2ನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

State News
KARNATAKA

SHOCKING : ಬೆಂಗಳೂರಲ್ಲಿ ನಡು ರಸ್ತೆಯಲ್ಲೇ, ಕಾರಿನಿಂದ ಹೊರಗೆಳೆದು ಉಬರ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ!

By ಸುರೇಶ್‌ KARNATAKA 2 Mins Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡ-ಪೋಕರಿಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರ ಭದ್ರತೆಗೆ ಧಕ್ಕೆ ತರುವಂತಹ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ…

GOOD NEWS : ರಾಜ್ಯದ `LKG-10ನೇ ತರಗತಿ’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ವಾರದ 6 ದಿನವೂ ಮೊಟ್ಟೆ/ಬಾಳೆಹಣ್ಣು ವಿತರಣೆಗೆ ಶಿಕ್ಷಣ ಇಲಾಖೆ ಆದೇಶ

BIG NEWS : ದೇಶದ 2ನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

BIG NEWS : ರಾಜ್ಯದ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್ : ಕನಿಷ್ಠ ವೇತನ ಶೇ. 60ರಷ್ಟು ಹೆಚ್ಚಳ ಮಾಡಿ ಸರ್ಕಾರ ಮಹತ್ವದ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.