ಚಿತ್ರದುರ್ಗ : ಜಗತ್ತಿನಲ್ಲಿ ಇಂತಹ ತಾಯಂದಿರು ಇರುತ್ತಾರೆ ಎಂದು ತಿಳಿದು ದಿಗ್ಭ್ರಮೆಯಾಗುತ್ತದೆ. ಹೌದು ಚಿತ್ರದುರ್ಗ ಜಿಲ್ಲೆಯ ಕವಾಡಿಗರಹಟ್ಟಿಯ ಆಶ್ರಯ ಕಾಲೋನಿಯಲ್ಲಿ ಗಂಡನ ಮೇಲಿನ ಕೋಪಕ್ಕೆ ತನ್ನ ಮಗನಿಗೆ ತಾಯಿಯೊಬ್ಬಳು ಬರೆ ಎಳೆದು ಕ್ರೌರ್ಯ ಬರೆದಿರುವ ಘಟನೆ ಇದೀಗ ವರದಿಯಾಗಿದೆ.
ಹೌದು ಗಂಡನ ಮೇಲಿನ ದ್ವೇಷವನ್ನು ಮಗುವಿನ ಮೇಲೆ ಚೆಲ್ಲಿದ ತಾಯಿಯ ಕ್ರೌರ್ಯಕ್ಕೆ 7 ವರ್ಷದ ಬಾಲಕ ನರಳುತ್ತಿದ್ದಾನೆ. ಕೈ-ಕಾಲುಗಳಿಗೆ ಬರೆ ಎಳೆದು ಕ್ರೌರ್ಯ ಮೆರೆದಿದ್ದಾಳೆ.ಕಳೆದ 10 ವರ್ಷಗಳ ಹಿಂದೆ ಪ್ರೀತಿಯಿಂದ ಮದುವೆಯಾಗಿದ್ದ ಅನಿಲ್ ಮತ್ತು ನಗ್ಮಾ ದಂಪತಿ, 2 ವರ್ಷಗಳ ಹಿಂದೆ ಡೈವೋರ್ಸ್ ಪಡೆದು ಬೇರೆಯಾಗಿದ್ದರು. ನಂತರ ಇಬ್ಬರೂ ಬೇರೆ ಮದುವೆಯಾಗಿದ್ದಾರೆ.
ಇದರ ನಡುವೆ, ಇಬ್ಬರಿಗೂ ಹುಟ್ಟಿದ 7 ವರ್ಷದ ಮಗುವಿನ ಕಾಳಜಿಯನ್ನು ಕುರಿತು ವಿವಾದ ಮೂಡಿತು. ತಾಯಿ ನಗ್ಮಾ ಮಗುವನ್ನು ತನ್ನ ಬಳಿ ಇರಿಸಿಕೊಂಡು, ಅವನ ತಂದೆ ಅನಿಲ್ ಮತ್ತು ಅಜ್ಜಿ ಶಮಶಾದ್ ರನ್ನು ಭೇಟಿಯಾಗದಂತೆ ನಿರ್ಬಂದಿಸಿದ್ದಳು .ಮನೆಯಲ್ಲಿ ಬಂಧನದಲ್ಲಿಡುವುದು, ಊಟ ಕೊಡದಿರುವುದು, ಕೈ-ಕಾಲುಗಳಿಗೆ ಬರೆ ಎಳೆದು ಹಿಂಸಿಸುವುದು ಸೇರಿದಂತೆ ಮಗುವಿಗೆ ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆ ನಡೆದಿದ್ದು ತಿಳಿದುಬಂದಿದೆ.
ಮೊಮ್ಮಗನ ಸ್ಥಿತಿ ಗಮನಿಸಿದ ಅಜ್ಜಿ ಶಮಶಾದ್, ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯವನ್ನು ಬೇಡಿದರು. ಮಗು ಬೇಕು, ತಮಗೆ ಬೇಕಾದರೆ ನನಗೆ ಕೊಡಿ ಎಂದು ಪೊಲೀಸ್ ಠಾಣೆಯ ಮುಂದೆ ಸೊಸೆ ನಗ್ಮಾ ಗೆ ಅಂಗಲಾಚಿದರು. ಘಟನೆಯ ತನಿಖೆ ನಡೆಸಿದ ಪೊಲೀಸರು ಮಗುವನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿದರು. ಮನೋವೈದ್ಯರ ಕೌನ್ಸೆಲಿಂಗ್ ನಂತರ, ಮಗುವನ್ನು ಅಜ್ಜಿಯ ಹತ್ತಿರಕ್ಕೆ ಕಳುಹಿಸಲಾಯಿತು.