ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರೀ ಮಳೆಯಾಗುತ್ತಿದೆ ( Heavy Rain). ಜಿಲ್ಲೆಯ ಸಾಗರ ತಾಲೂಕಿನಲ್ಲಿ ಇಂದು ಧಾರಾಕಾರ ಮಳೆಯಿಂದಾಗಿ ಅಡಗಳಲೆ ಗ್ರಾಮದ ಬಳಿಯಲ್ಲಿ ಗುಡ್ಡ ಕುಸಿತಗೊಂಡಿದೆ. ಈ ಪರಿಣಾಮದಿಂದಾಗಿ ತೋಟ, ಗದ್ದೆ ನಾಶಗೊಂಡಿರೋ ಘಟನೆ ನಡೆದಿದೆ.
BIGG NEWS : ‘ಶಿವ-ಪಾರ್ವತಿ ವೇಷ’ ತೊಟ್ಟು ಹಣದುಬ್ಬರ ಕುರಿತು ಅಪಹಾಸ್ಯ ; ಕಲಾವಿದನ ವಿರುದ್ಧ ಪ್ರಕರಣ ದಾಖಲು
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಡಗಳಲೆ ಗ್ರಾಮದಲ್ಲಿ ಇಂದು ಭಾರೀ ಮಳೆಯಿಂದಾಗಿ ಗುಡ್ಡ ಕುಸಿತಗೊಂಡಿದೆ. ಗುಡ್ಡ ಕುಸಿತದ ಪರಿಣಾಮವಾಗಿ 10 ಎಕರೆ ತೋಟ, ಗದ್ದೆ ನಾಶಗೊಂಡಿದೆ.
ಅಡಗಳಲೆ ಗ್ರಾಮದ ಸುಧಾ ಸಂತೋಷ್, ಜಿನದತ್ತ ಹಾಗೂ ಮಂಜಮ್ಮ ಎಂಬುವರ ತೋಟ, ಗದ್ದೆ ಗುಡ್ಡ ಕುಸಿತದಿಂದ ನಾಶಗೊಂಡಿದೆ ಎಂದು ತಿಳಿದು ಬಂದಿದೆ. ಅಡಕೆ ತೋಟ ಸೇರಿದಂತೆ ಅಪಾರ ಪ್ರಮಾಣದ ಬೆಳೆ ಮಣ್ಣುಪಾಲಾಗಿದ್ದು, ರೈತರು ಕಂಗಾಲಾಗಿದ್ದಾರೆ.