Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಏಪ್ರಿಲ್‌ನಲ್ಲಿ ದೇಶೀಯ ವಿಮಾನಯಾನ ಸಂಚಾರದಲ್ಲಿ ಇಳಿಕೆ: ಮಾರುಕಟ್ಟೆಯಲ್ಲಿ ಇಂಡಿಗೋದ ಪಾರುಪತ್ಯ ಮುಂದುವರಿಕೆ!

ಸಿಬಿಎಸ್‌ಇ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅವ್ಯವಹಾರ: ಮೊಬೈಲ್ ಮೂಲಕ ಸ್ಕ್ಯಾನಿಂಗ್ : ರಾಹುಲ್ ಗಾಂಧಿ ಆರೋಪ

ಭಾರತದೊಂದಿಗೆ ಗಡಿ ವಿವಾದ: ಮಧ್ಯಸ್ಥಿಕೆಗಾಗಿ ಚೀನಾ ಮತ್ತು ಯುಕೆ ಮೊರೆ ಹೋದ ನೇಪಾಳ ಪ್ರಧಾನಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿಬಿಎಸ್‌ಇ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅವ್ಯವಹಾರ: ಮೊಬೈಲ್ ಮೂಲಕ ಸ್ಕ್ಯಾನಿಂಗ್ : ರಾಹುಲ್ ಗಾಂಧಿ ಆರೋಪ
INDIA

ಸಿಬಿಎಸ್‌ಇ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅವ್ಯವಹಾರ: ಮೊಬೈಲ್ ಮೂಲಕ ಸ್ಕ್ಯಾನಿಂಗ್ : ರಾಹುಲ್ ಗಾಂಧಿ ಆರೋಪ

By ಗೋಪಾಲ್‌ ಎನ್‌

ನವದೆಹಲಿ: ಸಿಬಿಎಸ್‌ಇ (CBSE) 12ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಪತ್ರಿಕೆಗಳನ್ನು ಸ್ಕ್ಯಾನ್ ಮಾಡಲು ಮೊಬೈಲ್ ಫೋನ್‌ಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದ್ದು, ಇದನ್ನು “ವಂಚನೆ” ಎಂದು ಕರೆದಿದ್ದಾರೆ.

ಮೇ 2025ರಲ್ಲಿ ಕರೆದಿದ್ದ ಟೆಂಡರ್‌ನಲ್ಲಿ ಉತ್ತರ ಪತ್ರಿಕೆಗಳನ್ನು ಸ್ವಯಂಚಾಲಿತ ರೋಬೋಟಿಕ್ ಸ್ಕ್ಯಾನರ್‌ಗಳ ಮೂಲಕ ಕನಿಷ್ಠ 300 DPI ಗುಣಮಟ್ಟದಲ್ಲಿ ಸ್ಕ್ಯಾನ್ ಮಾಡಬೇಕೆಂದು ನಿಯಮವಿತ್ತು. ಆದರೆ, ಆಗಸ್ಟ್‌ನಲ್ಲಿ ಮರು ಟೆಂಡರ್ ಕರೆದಾಗ ಈ ನಿಯಮಗಳನ್ನು ಸಡಿಲಗೊಳಿಸಿ, ಕೇವಲ 200 DPIಗೆ ಇಳಿಸಲಾಯಿತು. ಇದರಿಂದ ಸ್ಕ್ಯಾನಿಂಗ್ ಗುಣಮಟ್ಟ ಕುಸಿಯಲು ಕಾರಣವಾಯಿತು ಎಂದು ರಾಹುಲ್ ಗಾಂಧಿ ದೂರಿದ್ದಾರೆ.

ಗುತ್ತಿಗೆ ಪಡೆದ ‘ಕೋಎಂಪ್ಟ್’ (COEMPT) ಕಂಪನಿಯು ವೃತ್ತಿಪರ ಸ್ಕ್ಯಾನರ್‌ಗಳ ಬದಲಾಗಿ ಮೊಬೈಲ್ ಫೋನ್‌ಗಳನ್ನು ಬಳಸಿಯೇ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿದೆ. ಇದೇ ಕಾರಣಕ್ಕೆ ಸ್ಕ್ಯಾನ್ ಮಾಡಿದ ಪ್ರತಿಗಳು ಅಸ್ಪಷ್ಟವಾಗಿರುವುದು (blurred), ಪುಟಗಳು ಕಾಣೆಯಾಗಿರುವುದು ಮತ್ತು ಕೆಲವು ಉತ್ತರ ಪುಸ್ತಕಗಳು ಸ್ಕ್ಯಾನ್ ಆಗದೇ ಇರುವುದು ಕಂಡುಬಂದಿದೆ ಎಂದು ಅವರು ಆರೋಪಿಸಿದ್ದಾರೆ.

 ಈ ದೋಷಗಳು ಕೇವಲ ತಾಂತ್ರಿಕ ತಪ್ಪುಗಳಲ್ಲ, ಬದಲಿಗೆ ನಿರ್ದಿಷ್ಟ ಕಂಪನಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ರೂಪಿಸಲಾದ ಒಪ್ಪಂದದ ಫಲಿತಾಂಶ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. “ಇದು ವಂಚನೆ (Fraud). ಅಂಕಗಳ ಮೌಲ್ಯಮಾಪನದಲ್ಲಿ ತಪ್ಪಾಗಿರುವ ಪ್ರತಿ ಮಗುವೂ ಈ ವಂಚನೆಯ ಬಲಿಪಶುವಾಗಿದೆ” ಎಂದು ಅವರು ಹೇಳಿದ್ದಾರೆ.

Rahul Gandhi says CBSE answer sheets scanned using mobile phones: 'This is fraud'
Share. Facebook Twitter LinkedIn WhatsApp Email

Related Posts

ಏಪ್ರಿಲ್‌ನಲ್ಲಿ ದೇಶೀಯ ವಿಮಾನಯಾನ ಸಂಚಾರದಲ್ಲಿ ಇಳಿಕೆ: ಮಾರುಕಟ್ಟೆಯಲ್ಲಿ ಇಂಡಿಗೋದ ಪಾರುಪತ್ಯ ಮುಂದುವರಿಕೆ!

2 Mins Read

ಭಾರತದೊಂದಿಗೆ ಗಡಿ ವಿವಾದ: ಮಧ್ಯಸ್ಥಿಕೆಗಾಗಿ ಚೀನಾ ಮತ್ತು ಯುಕೆ ಮೊರೆ ಹೋದ ನೇಪಾಳ ಪ್ರಧಾನಿ!

1 Min Read

ಕೇವಲ 15 ವರ್ಷಕ್ಕೆ 5 ಪ್ರಶಸ್ತಿ : ಕಾರು ಜೊತೆಗೆ ವೈಭವ್ ಸೂರ್ಯವಂಶಿ ಪಡೆದ ನಗದು ಬಹುಮಾನ ಎಷ್ಟು ಗೊತ್ತಾ?

2 Mins Read
Recent News

ಏಪ್ರಿಲ್‌ನಲ್ಲಿ ದೇಶೀಯ ವಿಮಾನಯಾನ ಸಂಚಾರದಲ್ಲಿ ಇಳಿಕೆ: ಮಾರುಕಟ್ಟೆಯಲ್ಲಿ ಇಂಡಿಗೋದ ಪಾರುಪತ್ಯ ಮುಂದುವರಿಕೆ!

ಸಿಬಿಎಸ್‌ಇ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅವ್ಯವಹಾರ: ಮೊಬೈಲ್ ಮೂಲಕ ಸ್ಕ್ಯಾನಿಂಗ್ : ರಾಹುಲ್ ಗಾಂಧಿ ಆರೋಪ

ಭಾರತದೊಂದಿಗೆ ಗಡಿ ವಿವಾದ: ಮಧ್ಯಸ್ಥಿಕೆಗಾಗಿ ಚೀನಾ ಮತ್ತು ಯುಕೆ ಮೊರೆ ಹೋದ ನೇಪಾಳ ಪ್ರಧಾನಿ!

ಕೇವಲ 15 ವರ್ಷಕ್ಕೆ 5 ಪ್ರಶಸ್ತಿ : ಕಾರು ಜೊತೆಗೆ ವೈಭವ್ ಸೂರ್ಯವಂಶಿ ಪಡೆದ ನಗದು ಬಹುಮಾನ ಎಷ್ಟು ಗೊತ್ತಾ?

State News
KARNATAKA

ಗುರು ರಾಶ್ಯಾಂತರ ಫಲ – ಗುರು ಅತಿಚಾರ ಯೋಗ

By ಸುರೇಶ್‌ KARNATAKA 2 Mins Read

ಶ್ರೀ ಸಾಕ್ಷಿ ಪಂಚ ಎರಡನೇ ಬಾರಿಗೆ ಗುರು ಅತಿಚಾರಯೋಗ ಆಗಲಿದೆ. ಅತಿಚಾರ ಯೋಗ ಎಂದರೆ ಗುರುಗ್ರಹದ ಚಲನೆ ಅತಿ ವೇಗವಾಗಿ…

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಪಕ್ಷದ ಸಾಮಾನ್ಯ ಕಾರ್ಯಕರ್ತರೇ ಸಿಎಂ ಆಗುತ್ತಿದ್ದಾರೆ: ಡಿಕೆ ಶಿವಕುಮಾರ್

ಸತತ 2ನೇ ಬಾರಿಗೆ ಟ್ರೋಫಿ ಗೆದ್ದ ‘RCB’ : ಗೆದ್ದ ತಂಡ, ರನ್ನರ್ ಅಪ್ ತಂಡಕ್ಕೆ ಸಿಕ್ಕ ಮೊತ್ತವೆಷ್ಟು? ಇಲ್ಲಿದೆ ಮಾಹಿತಿ

Rain Alert : ಇಂದು ಬೆಂಗಳೂರಲ್ಲಿ ಭಾರಿ ಮಳೆ : ಈ 7 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.