ಕಲಬುರ್ಗಿ: ಜಿಲ್ಲೆಯಲ್ಲಿ 545 ಪಿಎಸ್ಐ ನೇಮಕಾತಿ ಪರೀಕ್ಷೆಯ ( PSI Recruitment Exam ) ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದಂತ ಅಕ್ರಮ ಸಂಬಂಧ, ಸಿಐಡಿಯಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಸಿಐಡಿಯಿಂದ ( CID ) ಸಲ್ಲಿಸಲಾಗಿರುವಂತ ಚಾರ್ಜ್ ಶೀಟ್ ನಲ್ಲಿ ಶಾಕಿಂಗ್ ಸಂಗತಿಗಳನ್ನು ಉಲ್ಲೇಖಿಸಿರೋದಾಗಿ ತಿಳಿದು ಬಂದಿದೆ.
ಒಂದೆಡೆ ವರುಣನ ಆರ್ಭಟ, ಮತ್ತೊಂದೆಡೆ ರಾಜ್ಯದ 11 ಜಿಲ್ಲೆಗಳಲ್ಲಿ ಬಿತ್ತನೆಗೂ ಮಳೆಯಿಲ್ಲ
ಕಳೆದ 5 ದಿನಗಳ ಹಿಂದೆಯೇ ಕಲಬುರ್ಗಿಯ 3ನೇ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳಿಂದ ( CID Officers ) 545 ಪಿಎಸ್ಐ ನೇಮಕಾತಿ ಅಕ್ರಮ ( PSI Recruitment Scam ) ಸಂಬಂಧ, ನಗರದ ಜ್ಞಾನಜ್ಯೋತಿ ಇಂಗ್ಲೀಷ್ ಶಾಲೆಯಲ್ಲಿ ನಡೆದಂತ ಪರೀಕ್ಷಾ ಅಕ್ರಮದ ಬಗ್ಗೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
35 ಆರೋಪಿಗಳ ವಿರುದ್ಧ ಸಲ್ಲಿಸಲಾಗಿರುವಂತ ಚಾರ್ಜ್ ಶೀಟ್ ನಲ್ಲಿ ಶಾಸಕ ವೈ ಎಂ ಪಾಟೀಲ್ ಪುತ್ರ ಅರುಣ್ ಕುಮಾರ್, ಶಾಸಕರ ಸಹೋದರ ಎಸ್ ವೈ ಪಾಟೀಲ್ ಹೆಸರು ಪ್ರಸ್ತಾಪಿಸಲಾಗಿದೆ ಎಂಬ ಶಾಕಿಂಗ್ ಮಾಹಿತಿ ತಿಳಿದು ಬಂದಿದೆ.
ಮೇಘಸ್ಫೋಟದಿಂದಾಗಿ ಭಾಗಶಃ ಸ್ಥಗಿತಗೊಂಡ ಅಮರನಾಥ ಯಾತ್ರೆ ಇಂದು ಪುನರಾರಂಭ | Amarnath Yatra resumes today
ಈ ಎಲ್ಲಾ ಮಾಹಿತಿಯನ್ನು ಸಿಐಡಿ ಮುಂದೆ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಬಿಚ್ಚಿಟ್ಟಿದ್ದಾನೆ ಎನ್ನಲಾಗಿದೆ. ರುದ್ರಗೌಡ ಪಾಟೀಲ್ ಶಾಸಕರ ಗನ್ ಮ್ಯಾನ್ ಹಯ್ಯಾಳಿ ದೇಸಾಯಿ ಪರ ಡೀಲ್ ನಡೆಸಿದ್ದೇನೆ. ಅರುಣ್ ಕುಮಾರ್ ಪಾಟೀಲ್ ತನಗೆ ಕರೆ ಮಾಡಿದ್ದರು. ದೇಸಾಯಿಗೆ ಪರೀಕ್ಷೆಯಲ್ಲಿ ಪಾಸ್ ಮಾಡಿಸಲು ಹೇಳಿದ್ರು. ಶಾಸಕ ವೈ ಎಂ ಪಾಟೀಲ್ ಜೊತೆಗೆ ಮಾತನಾಡಿ 30 ಲಕ್ಷಕ್ಕೆ ಡೀಲ್ ಕುದುರಿಸಿದ್ದೆ ಎಂಬುದಾಗಿಯೂ ಚಾರ್ಜ್ ಶೀಟ್ ನಲ್ಲಿ ಸ್ವಖುಷಿ ಹೇಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ.