ಬೆಂಗಳೂರು: ಒಂದೆಡೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ( Heavy Rain ) ದೊಡ್ಡ ಅವಾಂತರವೇ ಉಂಟಾಗಿದೆ. ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಈ ನಡುವೆ ರಾಜ್ಯದ 11 ಜಿಲ್ಲೆಗಳಲ್ಲಿ ಮಾತ್ರ ಬೀಜ ಬಿತ್ತನೆ ಮಾಡೋದಕ್ಕೂ ಮಳೆಯಾಗದಂತ ಪರಿಸ್ಥಿತಿಯಿದೆ.
ರಾಜ್ಯದಿಂದ ‘ಅಮರನಾಥ ಯಾತ್ರೆ’ಗೆ ತೆರಳಿದ್ದ ‘370 ಯಾತ್ರಾರ್ಥಿ’ಗಳು ಸುರಕ್ಷಿತ – ಸರ್ಕಾರ ಸ್ಪಷ್ಟನೆ
ಹೌದು.. ಕರಾವಳಿ, ಮಲೆನಾಡು, ಕೊಡಗು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಜನ ಜೀವನ ತತ್ತರಿಸಿ ಹೋಗುವಂತೆ ಆಗಿದೆ. ಮಲೆನಾಡಿನಲ್ಲಿಯಂತೂ ಮಳೆ ದಿಗ್ಬಂಧನವನ್ನೇ ಹಾಕಿದಂತೆ ಸುರಿಯುತ್ತಿದೆ. ಆದ್ರೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆ ಬಂದರೂ ಮಣ್ಣು ಹಸಿಯಾಗುವಷ್ಟು ಸುರಿದಿಲ್ಲ.
BIG NEWS: ಶಿಕ್ಷಣ ಸಚಿವ ಬಿ.ಸಿ ನಾಗೇಶ್ ವಜಾ ಕೋರಿ ಪ್ರಧಾನಿ ಮೋದಿಗೆ ಖಾಸಗಿ ಶಾಲೆಗಳ ಪತ್ರ
ರಾಜ್ಯದ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಳೆ ಲೆಕ್ಕಕ್ಕೆ ಮಾತ್ರ ಸುರಿದಿದೆ. ಆದ್ರೇ ಈ ಜಿಲ್ಲೆಗಳಲ್ಲಿ ಕೃಷಿ ಇಲಾಖೆ ನಿಗದಿ ಪಡಿಸಿರುವ ಬಿತ್ತನೆ ಗುರಿ ತಲುಪುವಷ್ಟು ಮಳೆಯಾಗಿಲ್ಲ. ಹೀಗಾಗಿ ರೈತರು ಬಿತ್ತನೆ ಮಾಡೋದಕ್ಕೂ ಆಗದೇ ಮಳೆಗಾಗಿ ಮುಗಿಲು ನೋಡುವಂತೆ ಆಗಿದೆ.