ಬೆಂಗಳೂರು : ಜೆಡಿಎಸ್ ಪಕ್ಷದ ಬೆಳವಣಿಗೆಗೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ನಾನು ಸುಮ್ಮನೆ ಕೂರಲ್ಲ. ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ರಾಜ್ಯ ಮತ್ತು ದೇಶದ ವಿಚಾರವನ್ನು ಯಾರ ಹಂಗಿಲ್ಲದೆ ಮಾತನಾಡುತ್ತೇನೆ. ಆದರೂ ಪಕ್ಷ ಸಂಘಟನೆ ಮಾಡಬೇಕು ಜಿಬಿಎ ಚುನಾವಣೆಗೆ ಕಮಿಟಿ ಮಾಡಲಾಗಿದೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸ್ಥಳಿಯ ಸಂಸ್ಥೆ ಚುನಾವಣೆಯ ಸಿದ್ಧತೆ ಮಾಡುತ್ತೇವೆ. ಎಂದು ಮಾಜಿ ಪ್ರಧಾನಿ HD ದೇವೇಗೌಡ ತಿಳಿಸಿದರರು.
ನನ್ನ ಅವಶ್ಯಕತೆ ಇದ್ದಲ್ಲಿ ಶಕ್ತಿಮೀರಿ ಕೆಲಸ ಮಾಡುತ್ತೇನೆ. ರಾಜ್ಯ, ದೇಶಕ್ಕೆ ಒಳ್ಳೇದಾಗುವ ಹಿನ್ನಡೆಯಲ್ಲಿ ಕೆಲಸ ಮಾಡುತ್ತೇನೆ. ರಾಜ್ಯಸಭಾ ಸದಸ್ಯ ಸ್ಥಾನದಿಂದ ಮುಗೀತು ಎಂದು ಭಾವಿಸಬೇಡಿ ನನ್ನ ಹಾಗೂ ಮೋದಿ ಸಂಬಂಧ ಮುಗಿತು ಎಂದು ಭಾವಿಸಬೇಡಿ ಎಂದು ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ತಿಳಿಸಿದರು.
ಹಲಸು ಮಾವು ಮತ್ತು ನೇರಳೆ ಹಣ್ಣಿನ ಬೋರ್ಡ್ ಮಾಡಲು ಮನವಿ ಮಾಡಿದ್ದೇನೆ. ಕೇಂದ್ರ ತೋಟಗಾರಿಕಾ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿದ್ದೇನೆ. ಲಾಲ್ ಬಾಗ್ನಲ್ಲಿ ಹಲಸು, ಮಾವಿನ ಹಣ್ಣು ಮೇಳಕ್ಕೆ ಹೋಗಿದ್ದೆ. ಮೇಳದಲ್ಲಿ ಹೊmಲಸು ಮತ್ತು ಮಾವು, ನೇರಳೆ ಹಣ್ಣು ಹೆಚ್ಚಾಗಿ ಬರುತ್ತದೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸ್ಟಾಲ್ ಗಳನ್ನು ಹಾಕುತ್ತಾರೆ. ಲಾಲ್ಬಾಗ್ ತೋಟಗಾರಿಕೆ ನಿರ್ದೇಶಕರು ಈ ಬಗ್ಗೆ ಮಾಹಿತಿ ನೀಡಿದರು. ಕರ್ನಾಟಕದಲ್ಲಿ ಹೆಚ್ಚು ಪ್ರಮಾಣದಲ್ಲಿ ಈ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಹೀಗಾಗಿ ಹಲಸು, ಮಾವು, ನೇರಳೆ ಹಣ್ಣಿಗೆ ಬೋರ್ಡ್ ಮಾಡಬೇಕು ಹಿಂದೆ ಹಲಸು, ಹುಣಸೆ ಬೆಳೆಗೆ ಬೋರ್ಡ್ ಮಾಡುವಂತೆ ಪತ್ರ ಬರೆದಿದ್ದೆ. ಹಲಸು ಹುಣಸೆ ಬೆಳೆಗಾರರಿಗೆ ಅನುಕೂಲ ಆಗಬೇಕೆಂದು ಪತ್ರ ಬರೆದಿದ್ದೇನೆ. ಈ ಬಗ್ಗೆ ಕೇಂದ್ರ ಸರ್ಕಾರ ತೋಟಗಾರಿಕೆ ಸಚಿವರಿಗೆ ಪತ್ರ ಬರೆದಿದ್ದೇನೆ ಇದುವರೆಗೂ ಅವರಿಂದ ಯಾವುದೇ ಉತ್ತರ ಬಂದಿಲ್ಲ ಮತ್ತೆ ಪತ್ರ ಬರೆಯುತ್ತೇನೆ. ನಮ್ಮ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸುವ ವಿಶ್ವಾಸವಿದೆ ಎಂದು ಜೆಪಿ ಭವನದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಎಚ್ ಡಿ ದೇವೇಗೌಡ ತಿಳಿಸಿದರು.








