Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿನ್ನಸ್ವಾಮಿ ಕ್ರೀಢಾಂಗಣದ ಬಳಿ ಕಾಲ್ತುಳಿತ ದುರಂತ ತುಂಬಾ ನೋವು ತಂದಿದೆ: ಸಿಎಂ ಸಿದ್ಧರಾಮಯ್ಯ ಭಾವುಕ ನುಡಿ

08/06/2025 9:16 PM

BIG NEWS: ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

08/06/2025 8:50 PM

ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !

08/06/2025 8:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ : ಹೀಗಿವೆ `ಕಡ್ಡಾಯ ಜೀವ ವಿಮಾ’ ನಿಯಮಗಳು
KARNATAKA

BIG NEWS : ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ : ಹೀಗಿವೆ `ಕಡ್ಡಾಯ ಜೀವ ವಿಮಾ’ ನಿಯಮಗಳು

By kannadanewsnow5703/09/2024 5:45 AM
vidhana soudha
vidhana soudha

ಬೆಂಗಳೂರು :ಕರ್ನಾಟಕ ಸರ್ಕಾರದ ಸೇವೆಗೆ ಸೇರ್ಪಡೆಯಾಗುವ ಎಲ್ಲಾ ಶ್ರೇಣಿಯ ಅಧಿಕಾರಿ/ನೌಕರರು ಕಡ್ಡಾಯವಾಗಿ ಹಾಗೂ ಭಾರತೀಯ ಆಡಳಿತ ಸೇವೆ, ಭಾರತೀಯ ಪೋಲೀಸ್ ಸೇವೆ ಮತ್ತು ಭಾರತೀಯ ಅರಣ್ಯ ಸೇವೆಯಲ್ಲಿನ ಕರ್ನಾಟಕ ವೃಂದಕ್ಕೆ ಸೇರಿದವರು ಐಚ್ಛಿಕವಾಗಿ ಕಡ್ಡಾಯ ಜೀವ ವಿಮಾ ಯೋಜನೆಗೆ ಒಳಪಡಲು ಅರ್ಹರಾಗಿರುತ್ತಾರೆ.

ಕಡ್ಡಾಯ ವಿಮೆ:- ಕಡ್ಡಾಯ ಜೀವ ವಿಮಾ ಯೋಜನೆಗೆ ಒಳಪಡುವ ವಿಧಾನವು ಈ ಕೆಳಕಂಡಂತಿದೆ.

ಈ ಬಗೆಗಿನ ಇತರ ಅಂಶಗಳು ಇಂತಿದೆ:

1) 18 ವರ್ಷ ವಯಸ್ಸಾಗಿರಬೇಕು.

2) 50 ವರ್ಷ ಮೀರಿರಬಾರದು.

3) ಪ್ರಥಮ ಮಾಸಿಕ ವೇತನ ಪಡೆಯುವ ಮುನ್ನ ವಿಮೆಗೆ ಒಳಪಡಬೇಕು.

4) ಧಾರಣ ಮಾಡಿದ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯ ಸರಾಸರಿ ವೇತನದ ಶೇ.6.25 ಭಾಗಕ್ಕಿಂತ ಕಡಿಮೆ ಇಲ್ಲದಂತೆ ಮಾಸಿಕ ದರದ ವಿಮಾ ಕಂತನ್ನು ಪಾವತಿಸಬೇಕು.

1. ಪ್ರಥಮ ವಿಮಾ ಕಂತನ್ನು, ಸರ್ಕಾರಿ ಪಾವತಿಗಳನ್ನು ಸ್ವೀಕರಿಸುವ ಸ್ಥಳೀಯ ಬ್ಯಾಂಕಿನಲ್ಲಿ ದೊರೆಯುವ ಮೂರು ಭಾಗಗಳ ಚಲನ್ ನಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿಮಾಡಿ ನಗದನ್ನು ಈ ಇಲಾಖೆಯ ಲೆಕ್ಕ ಶೀರ್ಷಿಕ 8011-00-105-1-01 ಗೆ ಪ್ರಾರಂಭಿಕ ಠೇವಣಿಯಾಗಿ ಪಾವತಿಸಿ, ಬ್ಯಾಂಕಿನ ಸ್ವೀಕೃತಿ ಮೊಹರಾದ ನಿಗದಿತ ಎರಡು ಭಾಗ ಚಲನ್ ಗಳನ್ನು ಹಿಂದಕ್ಕೆ ಪಡೆಯತಕ್ಕದ್ದು.

2. ಪ್ರಾರಂಭಿಕ ಠೇವಣಿ ಪಾವತಿಸಿದ ಚಲನ್ ತೋರಿಸಿ ಇಲಾಖೆಯ ಎಲ್ಲಾ ಕಛೇರಿಗಳಲ್ಲಿ ಉಚಿತವಾಗಿ ದೊರೆಯುವ ಪ್ರಸ್ತಾವನೆ ನಮೂನೆಯನ್ನು ಪಡೆದುಕೊಳ್ಳತಕ್ಕದ್ದು.

* ರೂ. 1000/- ರೊಳಗಿನ ಪ್ರಾರಂಭಿಕ ಠೇವಣಿಯನ್ನು ಪಾವತಿಸಿದ್ದು 40 ವರ್ಷ ಮೀರದ ವಯಸ್ಸಿನವರು ವೈದ್ಯತರ ಪ್ರಸ್ತಾವನೆಯನ್ನು (ನಾನ್ ಮೆಡಿಕಲ್) ಸಲ್ಲಿಸತಕ್ಕದ್ದು.

* ರೂ. 1000/- ಮೀರಿದ ಪ್ರಾರಂಭಿಕ ಠೇವಣಿಯನ್ನು ಪಾವತಿಸಿದವರು ಯಾವುದೇ ವಯಸ್ಸಿನವರಾಗಿದ್ದರೂ ವೈದ್ಯಕೀಯ ಪ್ರಸ್ತಾವನೆಯನ್ನು (ಮೆಡಿಕಲ್) ಸಲ್ಲಿಸತಕ್ಕದ್ದು.

* 40 ವರ್ಷ ವಯಸ್ಸು ಮೀರಿದವರು ಯಾವುದೇ ಮೊತ್ತದ ಪ್ರಾರಂಭಿಕ ಠೇವಣಿಯನ್ನು ಪಾವತಿಸಿದ್ದರೂ ವೈದ್ಯಕೀಯ ಪ್ರಸ್ತಾವನೆಯನ್ನು (ಮೆಡಿಕಲ್) ಸಲ್ಲಿಸತಕ್ಕದ್ದು.

* ಪ್ರಸ್ತಾವನೆದಾರರನ್ನು ಪರೀಕ್ಷಿಸುವ ಅರ್ಹ ವೈದ್ಯರಿಗೆ ಇಲಾಖೆಯಿಂದ ನಿಗದಿತ ವೈದ್ಯಕೀಯ ಶುಲ್ಕವನ್ನು ಪಾವತಿಸಲಾಗುತ್ತದೆ.

ಕಡ್ಡಾಯ ವಿಮಾ ಯೋಜನೆಯಲ್ಲಿರುವ ಸೌಲಭ್ಯಗಳು

1. ನಗದು ರೂಪದಲ್ಲಿ ವಿಮಾಕಂತಿನ ಸಂದಾಯ ಮಾಡುವಿಕೆ

2. ಸಾಲ ಸೌಲಭ್ಯ

1. ನಗದು ರೂಪದಲ್ಲಿ ವಿಮಾಕಂತಿನ ಸಂದಾಯ ಮಾಡುವಿಕೆ:-

ವಿಮಾದಾರರು ಯಾವುದೇ ಕಾರಣದಿಂದ ರಾಜ್ಯ ಸರ್ಕಾರದ ಸೇವೆಯಿಂದ ಬಿಡುಗಡೆಹೊಂದಿದ ಸಂದರ್ಭದಲ್ಲಿ ತಾವು ಹೊಂದಿದ್ದ ಪಾಲಿಸಿಯ ಅವಧಿ ಮುಗಿಯುವವರೆಗೆ ಮುಂದುವರಿಸಿಕೊಂಡು ಹೋಗಲು ಹಾಗೂ ಮಾಸಿಕ ವಿಮಾಕಂತುಗಳನ್ನು ನಗದು ರೂಪದಲ್ಲಿ ಸಂದಾಯ ಮಾಡಲು ನಿಯಮ (17) ರನ್ವಯ ಅವಕಾಶವಿದೆ. ಇದಕ್ಕಾಗಿ ವಿಮಾದಾರನು ಸರ್ಕಾರದ ಸೇವೆಯಿಂದ ಬಿಡುಗಡೆಹೊಂದಿದ ಒಂದು ವರ್ಷದೊಳಗಾಗಿ ನಗದು ಪಾವತಿಗೆ ವಿವಿಧ ಹಕ್ಕು ಇತ್ಯರ್ಥ ಪ್ರಕರಣಗಳು

1. ಅವಧಿ ಪೂರೈಕೆ ಹಕ್ಕು ಪ್ರಕರಣ

2. ಮರಣಜನ್ಯ ಹಕ್ಕು ಪ್ರಕರಣ

3. ವಿಮಾತ್ಯಾಗಮೌಲ್ಯ ಹಕ್ಕು ಪ್ರಕರಣ

1. ಅವಧಿ ಪೂರೈಕೆ ಹಕ್ಕು ಪ್ರಕರಣ:- ಈ ಇಲಾಖೆಯಲ್ಲಿ ನಿಶ್ಚಿತ ಅವಧಿ (ಎನ್ ಡೋಮೆಂಟ್) ಪಾಲಿಸಿಗಳನ್ನು ಮಾತ್ರ ನೀಡುವುದರಿಂದ ವಿಮಾದಾರರ ವಯಸ್ಸು 55 ವರ್ಷಗಳು ತುಂಬಿದ ದಿನಾಂಕದಂದು ಆತ ಹೊಂದಿದ ಎಲ್ಲಾ ಪಾಲಿಸಿಗಳು ಫಲಪ್ರದಗೊಳ್ಳುತ್ತವೆ. ವಿಮಾದಾರರ ಬಗ್ಗೆ ನಿಗದಿತ ಎಲ್ಲಾ ವಿವರಗಳು ಲಭ್ಯವಾದಲ್ಲಿ ಸಾಮಾನ್ಯವಾಗಿ ಫಲಪ್ರದ ತಿಂಗಳಿನಲ್ಲಿಯೇ ಹಕ್ಕನ್ನು ಇತ್ಯರ್ಥಪಡಿಸಿ ಹುಂಡಿ ನೀಡಲಾಗುತ್ತದೆ.

2. ಮರಣಜನ್ಯ ಹಕ್ಕು ಪ್ರಕರಣ:- ಪಾಲಿಸಿಗಳು ಫಲಪ್ರದಗೊಳ್ಳುವ ಮುನ್ನವೇ ವಿಮಾದಾರರು ಮರಣಹೊಂದಿದಲ್ಲಿ ವಿಮಾ ಪಾಲಿಸಿಗಳ ಒಟ್ಟು ವಿಮಾ ಮೊತ್ತಕ್ಕೆ ಮರಣದ ಮಾಹೆಯವರೆಗಿನ ಲಾಭಾಂಶ ಸೇರಿಸಿ ಒಟ್ಟು ಮೊತ್ತವನ್ನು ನಾಮ ನಿರ್ದೇಶಿತ ವ್ಯಕ್ತಿಗೆ ಪಾವತಿಮಾಡಲಾಗುವುದು.

3. ವಿಮಾ ತ್ಯಾಗ ಮೌಲ್ಯ ಹಕ್ಕು ಪ್ರಕರಣ:-ವಿಮಾದಾರರು ಪಾಲಿಸಿಗಳ ಅವಧಿ ಪೂರ್ಣಗೊಳ್ಳುವ ಮೊದಲೇ (ಫಲಪ್ರದಗೊಳ್ಳುವ ಮೊದಲು) ಸರ್ಕಾರಿ ಸೇವೆಯಿಂದ ಬಿಡುಗಡೆ ಹೊಂದಿದಲ್ಲಿ, (ಅಂದರೆ ಸ್ವಯಂ ನಿವೃತ್ತಿ, ಕಡ್ಡಾಯ ನಿವೃತ್ತಿ, ವಜಾ, ರಾಜೀನಾಮೆ, ಇತರೆ) ಅಂತಹ ವಿಮಾದಾರರು ತಾವು ಹೊಂದಿರುವ ಪಾಲಿಸಿಗಳನ್ನು ಫಲಪ್ರದಗೊಳ್ಳುವವರೆಗೆ ವಿಮಾಕಂತನ್ನು ನಗದಿನಲ್ಲಿ ಪಾವತಿಸಿ ಮುಂದುವರಿಸಿಕೊಂಡು ಹೋಗಬಹುದು (ಇದಕ್ಕೆ ಸರ್ಕಾರಿ ಸೇವೆಯಿಂದ ಬಿಡುಗಡೆ ಹೊಂದಿದ 12 ತಿಂಗಳೊಳಗೆ ಇಲಾಖೆಯಿಂದ ಅನುಮತಿಯನ್ನು ಪಡೆಯುವುದು ಕಡ್ಡಾಯ. ಪಾಲಿಸಿ ಮುಂದುವರಿಸುವ ಇಚ್ಛೆಯಿಲ್ಲದಿದ್ದಲ್ಲಿ ಪಾಲಿಸಿಯ ಮೌಲ್ಯವನ್ನು ಬಿಟ್ಟುಕೊಟ್ಟು ನಗದನ್ನು ಪಡೆದುಕೊಳ್ಳಬಹುದು. ಇದಕ್ಕೆ ವಿಮಾ ತ್ಯಾಗ ಮೌಲ್ಯ ಹಕ್ಕೆಂದು ಕರೆಯುವರು.

 

BIG NEWS: 'ರಾಜ್ಯ ಸರ್ಕಾರಿ ನೌಕರ'ರಿಗೆ ಮತ್ತೊಂದು ಗುಡ್‌ನ್ಯೂಸ್‌: 'ಪ್ರಭಾರ ಭತ್ಯೆ' ಹೆಚ್ಚಿಸಿ ಸರ್ಕಾರ ಆದೇಶ BIG NEWS: Important information for state government employees: Here are the 'mandatory life insurance' rules
Share. Facebook Twitter LinkedIn WhatsApp Email

Related Posts

ಚಿನ್ನಸ್ವಾಮಿ ಕ್ರೀಢಾಂಗಣದ ಬಳಿ ಕಾಲ್ತುಳಿತ ದುರಂತ ತುಂಬಾ ನೋವು ತಂದಿದೆ: ಸಿಎಂ ಸಿದ್ಧರಾಮಯ್ಯ ಭಾವುಕ ನುಡಿ

08/06/2025 9:16 PM1 Min Read

BIG NEWS: ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

08/06/2025 8:50 PM3 Mins Read

ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !

08/06/2025 8:39 PM3 Mins Read
Recent News

ಚಿನ್ನಸ್ವಾಮಿ ಕ್ರೀಢಾಂಗಣದ ಬಳಿ ಕಾಲ್ತುಳಿತ ದುರಂತ ತುಂಬಾ ನೋವು ತಂದಿದೆ: ಸಿಎಂ ಸಿದ್ಧರಾಮಯ್ಯ ಭಾವುಕ ನುಡಿ

08/06/2025 9:16 PM

BIG NEWS: ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

08/06/2025 8:50 PM

ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !

08/06/2025 8:39 PM

ರಾಜ್ಯದಲ್ಲಿಂದು 61 ಜನರಿಗೆ ಕೊರೋನಾ ದೃಢ: ಸೋಂಕಿತರ ಸಂಖ್ಯೆ 423ಕ್ಕೆ ಏರಿಕೆ

08/06/2025 7:45 PM
State News
KARNATAKA

ಚಿನ್ನಸ್ವಾಮಿ ಕ್ರೀಢಾಂಗಣದ ಬಳಿ ಕಾಲ್ತುಳಿತ ದುರಂತ ತುಂಬಾ ನೋವು ತಂದಿದೆ: ಸಿಎಂ ಸಿದ್ಧರಾಮಯ್ಯ ಭಾವುಕ ನುಡಿ

By kannadanewsnow0908/06/2025 9:16 PM KARNATAKA 1 Min Read

ಮೈಸೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾಗದಂತ ಕಾಲ್ತುಳಿತ ದುರಂತವು ತುಂಬಾ ನೋವು ತಂದಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕ ನುಡಿಯಾಡಿದ್ದಾರೆ.…

BIG NEWS: ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

08/06/2025 8:50 PM

ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !

08/06/2025 8:39 PM

ರಾಜ್ಯದಲ್ಲಿಂದು 61 ಜನರಿಗೆ ಕೊರೋನಾ ದೃಢ: ಸೋಂಕಿತರ ಸಂಖ್ಯೆ 423ಕ್ಕೆ ಏರಿಕೆ

08/06/2025 7:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.