ಬೆಂಗಳೂರು: ಇಂದು ರಾಜ್ಯ ಸರ್ಕಾರದ ವಿರುದ್ಧ ಅನ್ನದಾತರು ಸಿಡಿದೆದ್ದಿದ್ದಾರೆ. ಕಬ್ಬು ಬೆಳೆಗಾರರಿಗೆ ಬೆಲೆಯಲ್ಲಿ ಮೋಸ, ತೂಕದಲ್ಲಿ ವಂಚನೆ, ಪಾವತಿಯಲ್ಲಿ ವಿಳಂಬ ಖಂಡಿಸಿ ಬೆಂಗಳೂರಿನಲ್ಲಿ ಭಾರೀ ಪ್ರತಿಭಟನೆ ನಡೆಸಲಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಿವಾಸಕ್ಕೂ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಲಿದ್ದಾರೆ. ಈ ಹಿನ್ನಲೆಯಲ್ಲಿ ನಗರದ ವಿವಿಧೆಡೆ ಸಂಚಾರ ದಟ್ಟಣೆ ಉಂಟಾಗಲಿದೆ. ಹೀಗಾಗಿ ಬೆಂಗಳೂರಿಗರು ಇಂದು ರಸ್ತೆಗೆ ಇಳಿಯೋ ಮುನ್ನಾ ಎಚ್ಚರಿಕೆ ವಹಿಸೋದು ಒಳಿತಾಗಿದೆ.
ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ, ಇಂದು ಕಬ್ಬು ಬೆಳೆಗಾರರು ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಪ್ರತಿಭಟನೆ ನಡೆಸಲಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಲಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುತ್ತಿರುವಂತ ರೈತರು ಇಂದು 11 ಗಂಟೆಗೆ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆ.
BIGG NEWS: ಸಾಹಿತಿ ಬಿ.ಎನ್ ವೇಣುಗೆ ಬೆದರಿಕೆ ಪತ್ರ: ಬಹಿರಂಗ ಕ್ಷಮೆಗೆ ಒತ್ತಾಯ
ಕಬ್ಬು ಬೆಳೆಗಾರರಿಗೆ ತೂಕ, ಬೆಲೆಯಲ್ಲಿ ಮೇಸ, ಪಾವತಿಯಲ್ಲಿ ವಿಳಂಬ ಆರೋಪವನ್ನು ಸರಿ ಪಡಿಸುವಂತೆ ಈ ಮೂಲಕ ಸಿಎಂ ಬೊಮ್ಮಾಯಿಯವರ ರಾಜ್ಯ ಸರ್ಕಾರವನ್ನು ಒತ್ತಾಯಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಮೆಜೆಸ್ಟಿಕ್ ಸುತ್ತಾ ಮುತ್ತಲಿನ ಪ್ರದೇಶದಲ್ಲಿ ಇಂದು ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದ್ದು, ಈ ಮಾರ್ಗದ ಸಂಚಾರವನ್ನು ವಾಹನ ಸವಾರರು ಬಿಟ್ಟು, ಬದಲಿ ಮಾರ್ಗದಲ್ಲಿ ಸಂಚರಿಸೋದು ಒಳಿತಾಗಿದೆ.
ಲಂಕಾ ಪ್ರಧಾನಿ ಮನೆಯಲ್ಲೇ ಪ್ರತಿಭಟನಾಕಾರರ ಠಿಕಾಣಿ: ಅಲ್ಲೇ ಆಟ, ಊಟ, ಮೋಜು ಮಸ್ತಿ… Video