Author: kannadanewsnow09

ಶಿವಮೊಗ್ಗ : ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗದಿಂದ ಸಂಪೂರ್ಣರಾಗಿ ಗುಣಮುಖರಾಗಬಹುದಾಗಿದ್ದು, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಇದಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಕ್ಷಯರೋಗಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಡಿಹೆಚ್‌ಓ ಡಾ. ನಟರಾಜ.ಕೆ.ಎಸ್ ತಿಳಿಸಿದರು. ನಗರ ಆರೋಗ್ಯ ಕೇಂದ್ರ ತುಂಗಾನಗರ ವ್ಯಾಪ್ತಿಯ ನೇತಾಜಿ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಈ ವರ್ಷದ ಘೋಷಣೆಯಡಿ ಏರ್ಪಡಿಸಲಾಗಿದ್ದ “ಹೌದು, ಭಾರತದ ನೇತೃತ್ವದಲ್ಲಿ, ಜನರ ಶಕ್ತಿಯೊಂದಿಗೆ ನಾವು ಕ್ಷಯರೋಗವನ್ನು ನಿರ್ಮೂಲನೆ ಮಾಡಬಹುದು” ಎಂಬ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದುಶ್ಚಟಗಳಿಂದ ದೂರವಿದ್ದು, ಪೌಷ್ಟಿಕ ಆಹಾರ ತೆಗೆದುಕೊಳ್ಳುವುದರಿಂದ ಕ್ಷಯರೋಗ ಸೇರಿದಂತೆ ಯಾವುದೇ ರೋಗದಿಂದ ದೂರ ಉಳಿಯಬಹುದಾಗಿದೆ. ಕ್ಷಯ ರೋಗಿಗಳು ಸೂಕ್ತ ಚಿಕಿತ್ಸೆಯೊಂದಿಗೆ ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಕಳೆದ ವರ್ಷದಲ್ಲಿ ಭಾರತದಲ್ಲಿ 25 ಲಕ್ಷ ಟಿಬಿ ಪ್ರಕರಣಗಳು ವರದಿಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 1806 ಪ್ರಕರಣ ವರದಿಯಾಗಿದೆ. ಇತ್ತೀಚಿನ ವರ್ಷದಲ್ಲಿ ಕ್ಷಯ ರೋಗ ಹರಡುವ ಪ್ರಮಾಣ ಶೇ.21 ಕಡಿಮೆ ಯಾಗಿದೆ. ಈ ಪ್ರಮಾಣವನ್ನು ಇನ್ನೂ ತಗ್ಗಿಸುವ ಅವಶ್ಯಕತೆ…

Read More

ನವದೆಹಲಿ/ಬೆಂಗಳೂರು : ರಾಜ್ಯದ ಮೊಟ್ಟಮೊದಲ ‘ಸ್ಪ್ರಿಂಗ್ ಸೆನ್ಸಸ್’ (ಚಿಲುಮೆಗಳ ಗಣತಿ) ಕಾರ್ಯಾಚರಣೆಯನ್ನು ನಿಗದಿತ ಕಾಲಮಿತಿಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಿದ ಕರ್ನಾಟಕದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯನ್ನು ಕೇಂದ್ರ ಜಲಶಕ್ತಿ ಸಚಿವಾಲಯವು (𝗠𝗶𝗻𝗶𝘀𝘁𝗿𝘆 𝗼𝗳 𝗝𝗮𝗹 𝗦𝗵𝗮𝗸𝘁𝗶) ಶ್ಲಾಘಿಸಿದೆ. ಈ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ ನೀಡಿದ ಪ್ರಶಂಸನಾ ಪತ್ರವನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಕೆ. ಪವಿತ್ರ (𝗦𝗿𝗶 𝗕.𝗞. 𝗣𝗮𝘃𝗶𝘁𝗵𝗿𝗮) ಅವರು ನಿನ್ನೆ ಅಧಿಕೃತವಾಗಿ ಸ್ವೀಕರಿಸಿದರು. ಕೇಂದ್ರ ಜಲಶಕ್ತಿ ಸಚಿವಾಲಯದ ತಾಂತ್ರಿಕ ಮಾರ್ಗದರ್ಶನದಲ್ಲಿ ನೀರಾವರಿ ಗಣತಿ ಯೋಜನೆಯಡಿ (𝗜𝗿𝗿𝗶𝗴𝗮𝘁𝗶𝗼𝗻 𝗖𝗲𝗻𝘀𝘂𝘀 𝗦𝗰𝗵𝗲𝗺𝗲) ಈ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಅಂತರ್ಜಲ ನಿರ್ದೇಶನಾಲಯವು (𝗗𝗶𝗿𝗲𝗰𝘁𝗼𝗿𝗮𝘁𝗲 𝗼𝗳 𝗚𝗿𝗼𝘂𝗻𝗱𝘄𝗮𝘁𝗲𝗿) ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಿದೆ. ಕರ್ನಾಟಕದ ಜೀವನಾಡಿ ಜಲಮೂಲಗಳ ಕುರಿತಾದ ದತ್ತಾಂಶ ಆಧಾರಿತ ಒಳನೋಟಗಳು (𝗗𝗮𝘁𝗮-𝗗𝗿𝗶𝘃𝗲𝗻 𝗜𝗻𝘀𝗶𝗴𝗵𝘁𝘀) ಅಂತಿಮಗೊಂಡ ಡಿಜಿಟಲ್ ಗಣತಿ ವರದಿಯ ಪ್ರಮುಖ ಅಂಶಗಳನ್ನು ವಿವರಿಸಿದ ಬಿ.ಕೆ. ಪವಿತ್ರ ಅವರು, “ಮಳೆಗಾಲದ ಭೌಗೋಳಿಕ ಸವಾಲುಗಳ ನಡುವೆಯೂ, ನಮ್ಮ ಇಲಾಖೆಯ ಸಿಬ್ಬಂದಿ…

Read More

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಶೆಡ್ತೀಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಹ ಶಿಕ್ಷಕ ಪ್ರಮೋದ್ ಸಣ್ಣಕ್ಕಿ ವಿರುದ್ಧ ಈಗ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ. ​ಘಟನೆಯ ವಿವರ: ಕಳೆದ ಮಾರ್ಚ್.12, 2026ರಂದು ಶಾಲೆಯ ವಿದ್ಯಾರ್ಥಿ ಸುಶ್ರುತ್ ಎಂಬುವವರ ಮೇಲೆ ಶಿಕ್ಷಕ ಪ್ರಮೋದ್ ಸಣ್ಣಕ್ಕಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ಹಲ್ಲೆಯ ತೀವ್ರತೆಗೆ ವಿದ್ಯಾರ್ಥಿಗೆ ತೀವ್ರ ಗಾಯವಾಗಿ ರಕ್ತ ಬಂದಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತವಾಗಿ (ಸುಮೋಟೋ) ಪ್ರಕರಣ ದಾಖಲಿಸಿಕೊಂಡಿತ್ತು. ​ಕಾನೂನು ಕ್ರಮ: ಆಯೋಗದ ಸೂಚನೆಯ ಮೇರೆಗೆ ಸಾಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಸದಾನಂದಸ್ವಾಮಿ ಅವರು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಶಿಕ್ಷಕನ ವಿರುದ್ಧ ಈ ಕೆಳಗಿನ ಕಾಯ್ದೆಗಳಡಿ ಎಫ್‌ಐಆರ್ ದಾಖಲಿಸಲಾಗಿದೆ: ​ಭಾರತೀಯ ನ್ಯಾಯ ಸಂಹಿತೆ (BNS): ಸೆಕ್ಷನ್ 118 ​ಜುವೆನೈಲ್ ಜಸ್ಟೀಸ್ ಕಾಯ್ದೆ 2015 (JJ…

Read More

ನವದೆಹಲಿ: ಮಂಗಳವಾರ ಬೆಳಗ್ಗೆ ಭಾರಿ ಆತಂಕ ಸೃಷ್ಟಿಯಾಗಿದ್ದು, ದೆಹಲಿ ವಿಧಾನಸಭೆ ಮತ್ತು ಹತ್ತಿರದ ಮೆಟ್ರೋ ನಿಲ್ದಾಣವನ್ನು ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಅಲ್ಲದೇ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಇತರೆ ಗಣ್ಯರಿಗೂ ಬಾಂಬ್‌ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ದೆಹಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ​ಸುದ್ದಿಯ ಪ್ರಮುಖ ಅಂಶಗಳು: ​ಬೆದರಿಕೆ ಬಂದ ರೀತಿ: ದೆಹಲಿ ವಿಧಾನಸಭೆಯ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಅಧಿಕೃತ ಇಮೇಲ್ ವಿಳಾಸಕ್ಕೆ ಮಂಗಳವಾರ ಬೆಳಗಿನ ಜಾವ ಎರಡು ಬೆದರಿಕೆ ಸಂದೇಶಗಳು ಬಂದಿವೆ. ​ಗುರಿಗಳು: ವಿಧಾನಸಭೆ ಕಟ್ಟಡ ಮತ್ತು ವಿಧಾನಸಭಾ ಮೆಟ್ರೋ ನಿಲ್ದಾಣವನ್ನು ಸ್ಫೋಟಿಸುವುದಾಗಿ ಇಮೇಲ್‌ನಲ್ಲಿ ಎಚ್ಚರಿಸಲಾಗಿದೆ. ​ನಾಯಕರ ಹೆಸರು ಉಲ್ಲೇಖ: ಈ ಬೆದರಿಕೆ ಇಮೇಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್. ಜೈಶಂಕರ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಮತ್ತು ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಸೇರಿದಂತೆ ಹಲವು…

Read More

ಶಿವಮೊಗ್ಗ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಸಾಗರದ ಮಹಾಗಣಪತಿ ದೇವಸ್ಥಾನ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಹಾಗಣಪತಿ ದೇವಸ್ಥಾನದ ಮುಖಮಂಟಪದ ಬಳಿಯ ಜಾಗವನ್ನು ಕಾಯ್ದಿರಿಸಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ (EO) ಪ್ರಮೀಳಾ ಕುಮಾರಿ ತಿಳಿಸಿದ್ದಾರೆ. ​ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾಗಣಪತಿ ರಥೋತ್ಸವದ ನಂತರ ನಡೆಯುವ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ನೇರವಾಗಿ ಪ್ರಸಾದ ಸ್ವೀಕರಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಗಣಪತಿ ದೇವಾಲಯದ ಎದುರಿನ ಮುಖಮಂಟಪ ಜಾಗದಲ್ಲಿ ಯಾವುದೇ ಮಳಿಗೆಗಳಿಗೆ ಅವಕಾಶ ನೀಡಬಾರದೆಂದು ಮೊದಲೇ ತೀರ್ಮಾನಿಸಲಾಗಿತ್ತು ಎಂದರು.. ​ಇಓ ಮಾತಿನ ಮುಖ್ಯಾಂಶಗಳು: ​ಅನಧಿಕೃತ ಮಳಿಗೆ ತೆರವು: ಸಮಿತಿಯ ನಿರ್ಧಾರದ ಹೊರತಾಗಿಯೂ ಕೆಲವು ಮೂರನೇ ವ್ಯಕ್ತಿಗಳು ಈ ಸ್ಥಳದಲ್ಲಿ ಅಂಗಡಿ ಹಾಕಲು ಅವಕಾಶ ನೀಡಿದ್ದರು. ಇದು ಗಮನಕ್ಕೆ ಬಂದ ತಕ್ಷಣ ಮಳಿಗೆದಾರರೊಂದಿಗೆ ಮಾತನಾಡಿ, ಅವರ ಸಹಕಾರದೊಂದಿಗೆ ಜಾಗವನ್ನು ತೆರವುಗೊಳಿಸಲಾಗಿದೆ. ​ಭಕ್ತರ ಹಿತವೇ ಮುಖ್ಯ: ಅನ್ನ ಸಂತರ್ಪಣೆಗೆ ಬರುವ ಸಾವಿರಾರು ಭಕ್ತರಿಗೆ ಯಾವುದೇ ಅಡಚಣೆಯಾಗಬಾರದು ಎಂಬ…

Read More

ಶಿವಮೊಗ್ಗ: ಜ್ಞಾನದ ದೇಗುಲವೆಂದು ಕರೆಯಲ್ಪಡುವ ಸಾಗರದ ಶೆಡ್ತೀಕೆರೆ ಶಾಲೆಯ ಆವರಣದಲ್ಲಿ ಮಗುವಿನ ಮೇಲೆ ಶಿಕ್ಷಕರಿಂದಲೇ ಸಮೂಹ ಹಲ್ಲೆ ನಡೆದಿದೆ ಎನ್ನಲಾದ ಘಟನೆ ಮತ್ತು ಅದರ ನಂತರದ ಬೆಳವಣಿಗೆಗಳು ಇಡೀ ಶಿಕ್ಷಣ ಇಲಾಖೆಯ ಕಾರ್ಯವೈಖರಿಯನ್ನು ಸಂಶಯದಿಂದ ನೋಡುವಂತೆ ಮಾಡಿದೆ. ಸಾಗರ ತಾಲ್ಲೂಕಿನ ಶೇಡ್ತಿಕೇರಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ ಎನ್ನಲಾದ ಈ ಘಟನೆ, ವ್ಯವಸ್ಥೆಯು ಹೇಗೆ ಸಂತ್ರಸ್ತ ಮಗುವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಆ ಬಗ್ಗೆ ಕಾಂಗ್ರೆಸ್ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಜಿ.ಟಿ ಸತ್ಯನಾರಾಯಣ ಅವರು ಸೋಷಿಯಲ್ ಮೀಡಿಯಾದಲ್ಲಿ ಎತ್ತಿರುವ ಪ್ರಶ್ನೆಗಳು ಮುಂದಿದೆ ಓದಿ.. ​ವ್ಯವಸ್ಥಿತ ಸಂಚಿನ ರೂಪವೇ ಈ ‘ಸಭಾ ನಡಾವಳಿ’? ​ಶಾಲೆಯಲ್ಲಿ ಮಗುವಿನ ಮೇಲೆ ಹಲ್ಲೆ ನಡೆದು, ಆ ಮಗು ದೈಹಿಕ ಮತ್ತು ಮಾನಸಿಕ ನೋವಿನಿಂದ ನರಳುತ್ತಿರುವಾಗ, ಆತನಿಗೆ ಮತ್ತು ಆತನ ಕುಟುಂಬಕ್ಕೆ ಧೈರ್ಯ ತುಂಬಬೇಕಾದ ಶಿಕ್ಷಣ ಇಲಾಖೆ ಮತ್ತು ಎಸ್‌ಡಿಎಂಸಿ (SDMC) ಪದಾಧಿಕಾರಿಗಳು ಮಾಡಿದ್ದೇನು? ಲಭ್ಯವಿರುವ ಸಭಾ ನಡಾವಳಿಗಳನ್ನು ಗಮನಿಸಿದರೆ, ಅಲ್ಲಿ ನಡೆದಿದ್ದು…

Read More

ಭಕ್ತರ ಮನದಲ್ಲಿ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ನಿಮಗೆ ಗೊತ್ತಾ….!! 431 ನೇ ವರ್ಷದ ರಾಯರ ವರ್ಧಂತಿ ಉತ್ಸವ ಪ್ರಯುಕ್ತ: ರಾಘವೇಂದ್ರ ತಮಿಳುನಾಡಿನ ಭುವನಿಗಿರಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಅದ್ವೈತಿ ಗಳಾದ ತಿಮ್ಮಣ್ಣ ಭಟ್ಟರು ಮತ್ತು ಗೋಪಿಕಾಂಬೆ.‌ ಶ್ರೀ ವೆಂಕಟೇಶ್ವರನ ಅನುಗ್ರಹದಿಂದ ಎರಡನೇ ಮಗುವಾದ ಕಾರಣ ‘ವೆಂಕಟನಾಥ’ ಎಂದು ಹೆಸರಿಟ್ಟರು. ಮಗು ಹುಟ್ಟಿದಾಗಲೇ ಮನೆಯಲ್ಲಿ ದೈವಾನುಗ್ರಹದ ಅನುಭವವಾಯಿತು. ಬಾಲ್ಯದಲ್ಲಿ ಅಪಾರ ಬುದ್ಧಿವಂತನಾಗಿದ್ದು, ತಂದೆಯಿಂದ ಆರಂಭವಾದ ಪ್ರಾಥಮಿಕ ಶಿಕ್ಷಣದಲ್ಲಿ ವೇದಪಾಠಗಳನ್ನು ಮರೆಯದಂತೆ ಅಭ್ಯಾಸ ಒಮ್ಮೆ ಕೇಳಿದ ಪಾಠವನ್ನು ತಪ್ಪದೇ ಹೇಳುತ್ತಿದ್ದ. ಆದರೆ ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡರು. ತಾಯಿ ಮತ್ತು ಅಣ್ಣನ ವಾತ್ಸಲ್ಯದಲ್ಲಿ ಬೆಳೆದರು. ಕುಟುಂಬದ ಹೊಣೆಗಾರಿಕೆ ಹೆಚ್ಚಾಯಿತು. ನಂತರ ತಮಿಳುನಾಡಿನ ಮಧುರೈ ನಲ್ಲಿದ್ದು ಅಕ್ಕ ಗೋಪಿಕಾಂಬ ಮನೆಗೆ ಬಂದರು. ಭಾವ ಲಕ್ಷ್ಮೀನರಸಿಂಹಾಚಾರ್ಯರ ಆಶ್ರಯದಲ್ಲಿ ಮುಂದಿನ ವಿದ್ಯಾಭ್ಯಾಸ ಮಾಡಿ ದರು.‌ ಸಂಗೀತ- ವ್ಯಾಕರಣ- ನ್ಯಾಯ- ಮೀಮಾಂಸ- ತರ್ಕಶಾಸ್ತ್ರ, ಸುಲಭವಾಗಿ ಕರಗತವಾಗಿತ್ತು. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕುಂಭಕೋಣಂಗೆ ಬಂದರು. ಇಲ್ಲಿ ಯತಿವರ್ಯರಾದ…

Read More

ಶಿವಮೊಗ್ಗ: ಶಿಕ್ಷಕರು ವಿದ್ಯಾರ್ಥಿಯೊಬ್ಬನ ಭವಿಷ್ಯ ರೂಪಿಸಬೇಕಿದ್ದವು. ಬೆಳೆಯುವ ಸಿರಿ ಮೊಳೆಯೊಡೆದು ಹೆಮ್ಮರವಾಗಿ ತಿದ್ದಿ ತೀಡಬೇಕಾದವರು. ಆ ಕೆಲಸ ಮಾಡದೇ ಹಾಗೆ ಮಾಡಿದ, ಹೀಗೆ ಮಾಡಿ ಎಂಬ ಸಬೂಬು ಹೇಳಿಕೊಂಡು ಇಡೀ ರಾಜ್ಯವೇ ತಲೆ ತಗ್ಗಿಸೋ ರೀತಿಯಲ್ಲಿ ಬಾಸುಂಡೆ ಬರುವಂತ, ರಕ್ತ ಬರುವಂತೆ, ಚರ್ಮ ಸುಲಿದು ಬರುವಂತೆ ಹೊಡೆದಂತ ಘಟನೆ ಸಾಗರದ ಶೆಡ್ತೀಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿತ್ತು. ಈ ಅಮಾನುಷ ಕೃತ್ಯ ಎಸಗಿದೆ ಓರ್ವ ಶಿಕ್ಷಕನ ವಿರುದ್ಧ ಇಲಾಖೆ ಅಮಾನತಿನಂತ ಕ್ರಮ ಜರುಗಿಸಿದೆ. ಆದರೇ ಇನ್ನೂ ಇಬ್ಬರು ಶಿಕ್ಷಕರ ಮೇಲೆ ಇದೇ ಆರೋಪ ಕೇಳಿ ಬಂದಿದೆ. ಆದರೇ ತಿದ್ದಿ ಬುದ್ದಿ ಹೇಳಿ ಬದಲಾಯಿಸಬೇಕಿದ್ದ ಶಿಕ್ಷಕರು ಮಾತ್ರ, ಈಗ ತಮ್ಮ ತಪ್ಪು ಮುಚ್ಚಿಡಲು ವಿದ್ಯಾರ್ಥಿಗೆ ಬ್ಯಾಡ್ ಕ್ಯಾರೆಕ್ಟರ್ ಪಟ್ಟ ಕಟ್ಟುತ್ತಾ ಸಾಗಿದ್ದಾರೆ. ಛೇ..! ಇವರೆಂಥಾ ಶಿಕ್ಷಕರು ಎಂಬುದು ಪೋಷಕರ ಕಿಡಿ ನುಡಿಯಾಗಿದೆ. ಶಿಕ್ಷಕರಾದವರು ಸಮ್ಯಮ, ತಾಳ್ಮೆ, ಕ್ಷಮಾ ಗುಣದ ಜೊತೆಗೆ ವಿದ್ಯಾರ್ಥಿಯೊಬ್ಬನ ಮನಸ್ಸನ್ನೇ ಪರಿವರ್ತಿಸುವ ಮನೋವಿಜ್ಞಾನ ಓದಿದ ಜ್ಞಾನಿಯಾದವರು. ಇಂತಹ ಜ್ಞಾನಿಯಾದ…

Read More

ಬೆಂಗಳೂರು: ರಾಜ್ಯದ ನಿರುದ್ಯೋಗಿ ಯುವಕ-ಯುವತಿಯರಿಗೆ ಸಿಹಿಸುದ್ದಿ ಸಿಕ್ಕಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 56,432 ನೇರ ನೇಮಕಾತಿ ಹುದ್ದೆಗಳನ್ನು ಮುಂದಿನ 30 ದಿನಗಳಲ್ಲಿ ಭರ್ತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸರ್ಕಾರ ಆದೇಶಿಸಿದೆ. ಈ ಕುರಿತು ಶಾಸಕ ರವಿಕುಮಾರ್ ಗೌಡ (ಗಣಿಗ) ಅವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಉತ್ತರಿಸಿದ್ದಾರೆ. ವಯೋಮಿತಿಯಲ್ಲಿ ಭಾರಿ ಸಡಿಲಿಕೆ: ನೇಮಕಾತಿ ವಿಳಂಬದಿಂದ ತೊಂದರೆ ಅನುಭವಿಸುತ್ತಿರುವ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಸರ್ಕಾರವು ಮಹತ್ವದ ತೀರ್ಮಾನ ಕೈಗೊಂಡಿದೆ. 31.12.2027ರವರೆಗೆ ಹೊರಡಿಸುವ ಎಲ್ಲಾ ನೇರ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯವಾಗುವಂತೆ, ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ. ನೇಮಕಾತಿ ಪ್ರಕ್ರಿಯೆಗೆ ಚಾಲನೆ: ಮೀಸಲಾತಿ ಹೆಚ್ಚಳದ ವಿಚಾರವಾಗಿ ನ್ಯಾಯಾಲಯದಲ್ಲಿದ್ದ ಕಾನೂನು ತೊಡಕುಗಳಿಂದಾಗಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಆದರೆ ಈಗ ಸರ್ಕಾರವು ಹಳೆಯ 1995ರ ಆದೇಶದಂತೆ (ಶೇ. 50 ಮೀಸಲಾತಿ) ನೇಮಕಾತಿ ಮುಂದುವರಿಸಲು ನಿರ್ಧರಿಸಿದೆ. ಆದಾಗ್ಯೂ, ಭವಿಷ್ಯದಲ್ಲಿ ನ್ಯಾಯಾಲಯ ನೀಡುವ ಅಂತಿಮ ಆದೇಶಕ್ಕೆ…

Read More

ಬೊಗೋಟಾ: ಕೊಲಂಬಿಯಾದಲ್ಲಿ 110 ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಮಿಲಿಟರಿ ಸಾರಿಗೆ ವಿಮಾನವೊಂದು ಟೇಕಾಫ್ ಆಗುವ ಸಮಯದಲ್ಲಿ ಪತನಗೊಂಡಿರುವ ಆಘಾತಕಾರಿ ಘಟನೆ ಸೋಮವಾರ (ಮಾರ್ಚ್ 23, 2026) ನಡೆದಿದೆ. ​ಘಟನೆಯ ವಿವರಗಳು: ​ವಿಮಾನ: ಲಾಕ್‌ಹೀಡ್ ಮಾರ್ಟಿನ್ ಹರ್ಕ್ಯುಲಸ್ C-130 (Lockheed Martin Hercules C-130). ​ಸ್ಥಳ: ಕೊಲಂಬಿಯಾದ ದಕ್ಷಿಣ ಭಾಗದ ಅಮೆಜಾನ್ ಪ್ರದೇಶದಲ್ಲಿರುವ ‘ಪೋರ್ಟೊ ಲೆಗುಯಿಜಾಮೊ’ (Puerto Leguizamo) ಬಳಿ ಈ ಅಪಘಾತ ಸಂಭವಿಸಿದೆ. ​ಪ್ರಯಾಣಿಕರು: ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ವಿಮಾನದಲ್ಲಿ ಸುಮಾರು 110 ಸೈನಿಕರಿದ್ದರು ಎಂದು ತಿಳಿದುಬಂದಿದೆ. ​ಕಾರಣ: ವಿಮಾನವು ರನ್‌ವೇಯಿಂದ ಮೇಲಕ್ಕೆ ಹಾರಿದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ತಪ್ಪಿ ಪತನಗೊಂಡಿದೆ ಎನ್ನಲಾಗಿದೆ. ​ಪ್ರಸ್ತುತ ಸ್ಥಿತಿ: ಕೊಲಂಬಿಯಾದ ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಅವರು ಘಟನೆಯನ್ನು ಖಚಿತಪಡಿಸಿದ್ದು, ವಿಮಾನವು ಸೈನಿಕರ ವರ್ಗಾವಣೆ ಪ್ರಕ್ರಿಯೆಯಲ್ಲಿದ್ದಾಗ ಈ ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಅಪಘಾತದಲ್ಲಿ ಸಂಭವಿಸಿದ ಸಾವು-ನೋವುಗಳ ನಿಖರ ಸಂಖ್ಯೆ ಮತ್ತು ತಾಂತ್ರಿಕ ಕಾರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು…

Read More