Subscribe to Updates
Get the latest creative news from FooBar about art, design and business.
Author: kannadanewsnow09
ಕೆಎನ್ಎನ್ ಸಿನಿಮಾ ಡೆಸ್ಕ್: ಖ್ಯಾತ ಚಲನಚಿತ್ರ ನಿರ್ದೇಶಕ ಸಿಕಂದರ್ ಭಾರತಿ ಮೇ 24 ರಂದು ಮುಂಬೈನಲ್ಲಿ ತಮ್ಮ 60 ನೇ ವಯಸ್ಸಿನಲ್ಲಿ ನಿಧನರಾದರು. ಮುಂಬೈನ ಜೋಗೇಶ್ವರಿ ಪಶ್ಚಿಮದಲ್ಲಿರುವ ಓಶಿವಾರಾ ಚಿತಾಗಾರದಲ್ಲಿ ಮೇ 25 ರಂದು ಬೆಳಿಗ್ಗೆ 11 ಗಂಟೆಗೆ ಅಂತಿಮ ವಿಧಿಗಳನ್ನು ನಡೆಸಲಾಯಿತು. ‘ಘರ್ ಕಾ ಚಿರಾಗ್’, ‘ಜಾಲಿಮ್’, ‘ರುಪಾಯೆ ದಸ್ ಕರೋಡ್’, ‘ಭಾಯ್ ಭಾಯ್’, ‘ಸೈನಿಕ್’, ‘ಸರ್ ಉಥಾ ಕೆ ಜಿಯೋ’, ‘ದಂಡ್-ನಾಯಕ್’, ‘ರಂಗೀಲಾ ರಾಜಾ’, ‘ಪೊಲೀಸ್ ವಾಲಾ’ ಮತ್ತು ‘ದೋ ಫಂಟೂಶ್’ ನಂತಹ ಗಮನಾರ್ಹ ಚಿತ್ರಗಳನ್ನು ನಿರ್ದೇಶಿಸಿದ್ದಕ್ಕಾಗಿ ಸಿಕಂದರ್ ಭಾರತಿ ಪ್ರಸಿದ್ಧರಾಗಿದ್ದರು. ಚಲನಚಿತ್ರೋದ್ಯಮಕ್ಕೆ ಅವರ ಕೊಡುಗೆಗಳು ಗಮನಾರ್ಹವಾಗಿವೆ, ಮತ್ತು ಅವರ ಕೆಲಸವು ಪ್ರೇಕ್ಷಕರು ಮತ್ತು ಸಹೋದ್ಯೋಗಿಗಳ ಮೇಲೆ ಶಾಶ್ವತ ಪರಿಣಾಮ ಬೀರಿತು. ಮೃತರು ಪತ್ನಿ ಪಿಂಕಿ, ಮಕ್ಕಳಾದ ಸಿಪಿಕಾ, ಯುವಿಕಾ ಮತ್ತು ಸುಕ್ರತ್ ಅವರನ್ನು ಅಗಲಿದ್ದಾರೆ. ಚಲನಚಿತ್ರ ಸಮುದಾಯ ಮತ್ತು ಅವರ ಅಭಿಮಾನಿಗಳು ಪ್ರತಿಭಾವಂತ ನಿರ್ದೇಶಕರನ್ನು ಕಳೆದುಕೊಂಡು ಶೋಕಿಸುತ್ತಿದ್ದಾರೆ. ಆದರೇ ಇಂದು ನಿಧನರಾಗಿರುವಂತ ಸಿಕಂದರ್ ಭಾರತಿ, ಅವರ ನಿರ್ದೇಶನದ…
ಬೆಂಗಳೂರು: ಆನ್ ಲೈನ್ ವಂಚಕರು ಜನರನ್ನು ವಂಚಿಸೋದಕ್ಕೆ ವಿವಿಧ ದಾರಿಗಳನ್ನು ಹಿಡಿಯುತ್ತಿದ್ದಾರೆ. ಈಗ ಹೊಸದೊಂದು ದಾರಿ ಕಂಡುಕೊಂಡಿರುವಂತ ವಂಚಕರು, ನಿಮ್ಮ ಮೊಬೈಲ್ ಗಳಿಗೆ ಮೆಸೇಜ್ ಕಳಿಸ್ತಾ ಇದ್ದಾರೆ. ಒಂದು ವೇಳೆ ನೀವು ಓಪನ್ ಮಾಡಿದ್ದೇ ಆದಲ್ಲಿ, ನಿಮ್ಮ ಬ್ಯಾಂಕ್ ಖಾತೆ ಸೈಬರ್ ವಂಚಕರ ಪಾಲಾಗೇ ಬಿಡುತ್ತೆ. ಅದು ಹೇಗೆ.? ಪೊಲೀಸರ ಎಚ್ಚರಿಕೆ ಏನು ಅಂತ ಮುಂದೆ ಓದಿ. ಆನ್ ಲೈನ್ ವಂಚನೆ ಬಗ್ಗೆ ಕರ್ನಾಟಕ ಪೊಲೀಸರು ಮಹತ್ವದ ಮಾಹಿತಿಯನ್ನು ಜನರಿಗಾಗಿ ಬಿಡುಗಡೆ ಮಾಡಿದ್ದಾರೆ. ಆ ಪತ್ರಿಕಾ ಪ್ರಕಟಣೆಯಲ್ಲಿ ವಂಚಕರು RAT(Remote access tool) ಗಳ ಸಹಾಯದಿಂದ APK file ಅಥವಾ App ಸಿದ್ಧಪಡಿಸಿ, What’sApp ಅಥವಾ text message ಮುಖಾಂತರ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗಳಿಗೆ ಕಳುಹಿಸಿಕೊಡುತ್ತಿದ್ದು, ಅದನ್ನು ಓಪನ್ ಮಾಡಿದಲೆ ಸಾರ್ವಜನಿಕರಿಗೆ ಬರುವ ಎಲ್ಲಾ Text message ಗಳು ವಂಚಕರ ಮೊಬೈಲ್ ಗಳಿಗೆ Automatically, Message forwarding ಆಗುತ್ತಿವೆ ಎಂಬ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇನ್ನೂ…
ಬೆಂಗಳೂರು: ಕಂದಾಯ ಇಲಾಖೆಯಿಂದ ಪಹಣಿಗೆ ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ ಮಾಡೋ ಪ್ರಕ್ರಿಯೆ ಆರಂಭಿಸಿದೆ. ರಾಜ್ಯದ ಅನೇಕ ರೈತರಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಪಹಣಿಕೆ ಏಕೆ ಲಿಂಕ್ ಮಾಡಬೇಕು.? ಇದರಿಂದ ಏನು ಪ್ರಯೋಜನ ಏನು ಅಂತ ಗೊತ್ತೇ ಇಲ್ಲ. ಹಾಗಾದ್ರೇ ಆ ಬಗ್ಗೆ ಮಾಹಿತಿ ಮುಂದೆ ಓದಿ. ಆಧಾರ್ ಕಾರ್ಡ್ ಮತ್ತು ಹೊಲದ ಪಹಣಿ ಲಿಂಕ್ ಮಾಡುವುದು ಕಡ್ಡಾಯ ಲಿಂಕಿಂಗ್ ಏಕೆ? • ಭೂ ದಾಖಲೆಗಳನ್ನು ಡಿಜಿಟಲೀಕರಿಸಲು: ಈ ಕ್ರಮವು ರಾಜ್ಯದ ಎಲ್ಲಾ ಭೂ ದಾಖಲೆಗಳನ್ನು ಡಿಜಿಟಲೀಕರಿಸಲು ಸಹಾಯ ಮಾಡುತ್ತದೆ. ಇದು ದಾಖಲೆಗಳನ್ನು ಸುರಕ್ಷಿತವಾಗಿ ಇರಿಸಲು ಮತ್ತು ಭ್ರಷ್ಟಾಚಾರವನ್ನು ತಡೆಯಲು ಸಹಾಯ ಮಾಡುತ್ತದೆ. • ಭೂಮಿ ಖಾತೆಗಳಲ್ಲಿನ ಅಕ್ರಮಗಳನ್ನು ತಡೆಯಲು: ಈ ಕ್ರಮವು ಭೂಮಿ ಖಾತೆಗಳಲ್ಲಿನ ಅಕ್ರಮಗಳನ್ನು ಗುರುತಿಸಲು ಮತ್ತು ತಡೆಯಲು ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿಗೆ ಎಷ್ಟು ಭೂಮಿ ಹೊಂದಿದೆ ಎಂಬುದರ ಕುರಿತು ಸ್ಪಷ್ಟ ಚಿತ್ರಣವನ್ನು ಒದಗಿಸುತ್ತದೆ. • ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಸುಲಭ: ಈ ಕ್ರಮವು ರೈತರಿಗೆ ಸರ್ಕಾರಿ…
ಬೆಂಗಳೂರು: ನಗರದಲ್ಲಿ ಮಳೆ ಆರಂಭಗೊಂಡಿದೆ. ಬೇಸಿಗೆಯ ಬಿಸಿಲ ತಾಪ ಕಡಿಮೆಯಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಸುರಿಯುತ್ತಿರೋ ಮಳೆಯಿಂದಾಗಿ ಬೈಕ್ ನಲ್ಲಿ ಸ್ಕಿಡ್ ಆಗಿ ಬಿದ್ದಿದ್ದಂತ ಪೊಲೀಸ್ ಅಧಿಕಾರಿಯ ಮಗನೊಬ್ಬ, ಮಾಡಿದ್ದು ಮಾತ್ರ ಪೊಲೀಸರೇ ಬೆಚ್ಚಿ ಬೀಳುವಂತದ್ದು. ಅದೇನು ಅಂತ ಮುಂದೆ ಓದಿ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ ಈ ಪ್ರಕರಣ ನಿಮ್ಮನ್ನೇ ಬೆಚ್ಚಿ ಬೀಳಿಸುತ್ತದೆ. ಪೊಲೀಸ್ ಅಧಿಕಾರಿಯ ಮಗನೇ ಹೀಗೆ ಮಾಡ್ತಾನಲ್ಲ ಅನ್ನೋ ಆಶ್ಚರ್ಯವನ್ನು ಹುಟ್ಟು ಹಾಕಬಹುದು. ಅದನ್ನ ನೀವೇ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವಂತ ಈ ಕೆಳಗಿನ ಪ್ರೆಸ್ ನೋಟ್ ನಲ್ಲಿ ಓದಿದ್ರೆ ಗೊತ್ತಾಗುತ್ತೆ. ಓದಿ… ದಿನಾಂಕ: 21/05/2024 ರಂದು ಫಿರಾದುದಾರರಾದ ಶ್ರೀ.ಗೌತಮ್ ಸುಭಾಷ್ ಎಸ್ ಆನ್ ಸುರೇಶ್ ಬಿ.ಹೆಚ್, 22 ವರ್ಷ, ವಾಸ ನಂ.29, ಬಸವೇಶ್ವರ ಬಡಾವಣೆ, ಮಂಗನಹಳ್ಳಿ ಕ್ರಾಸ್, ಉಲ್ಲಾಳ ಮುಖ್ಯರಸ್ತೆ, ಜ್ಞಾನಭಾರತಿ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂಲಿನಲ್ಲಿ ದಿನಾಂಕ.20.05.2024 ರಂದು ಕೆಂಗೇಲ ಬಳಿ ನನ್ನ ಸ್ನೇಹಿತರನ್ನು ಭೇಟಿ ಮಾಡಿಕೊಂಡು ಕೆಂಗೇಲಿಯಿಂದ ಬೈಕಿನಲ್ಲಿ ಹೊರಟು…
ಬೆಂಗಳೂರು: ಅತ್ಯಾಚಾರ ಅಮಾನುಷ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ, ಆ ಅಮಾನುಷಕ್ಕೆ ತುತ್ತಾದ ಹೆಣ್ಮಕ್ಕಳ ವಿಡಿಯೋಗಳನ್ನು ಹಂಚಿ ವಿಕೃತಾನಂದ ಅನುಭವಿಸುವುದು ಮಾನುಷವೇ? ಮನುಷ್ಯರು ಹೇಳುವ ಮಾತೇ ಇದು? ದಯಮಾಡಿ ನೀವು ಇನ್ನೆಂದೂ ನಾನು ವಕೀಲಿಕೆ ಮಾಡುತ್ತಿದ್ದೆ ಎನ್ನಬೇಡಿ. ನಿಮ್ಮ ಪಕ್ಕದಲ್ಲಿ ಪೆನ್ ಡ್ರೈವ್ ಹಂಚಿಕೆದಾರ ಕೂತಿದ್ದಾರೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಆ CD ಶಿವು ಚುನಾವಣಾ ಸ್ವಾರ್ಥಕ್ಕಾಗಿ ಹೆಣ್ಮಕ್ಕಳ ಮಾನವನ್ನು ಪೆನ್ ಡ್ರೈವುಗಳಿಗೆ ತುಂಬಿಸಿ ಹಾದಿಬೀದಿಯಲ್ಲಿ ಮಾರಿಕೊಂಡಿದ್ದು ನಿಮಗೆ ಗೊತ್ತಿಲ್ಲವೇ? ಸ್ವಯಂ ಘೋಷಿತ ಸಂವಿಧಾನ ತಜ್ಞ ಬಿರುದಾಂಕಿತರಾದ ನೀವು, ಇಂಥ ಮಾನದ್ರೋಹಿಯನ್ನು ಪಕ್ಕದಲ್ಲೇ ಕೂರಿಸಿಕೊಳ್ಳಲು ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆಯೇ? ಪ್ರಶ್ನೆ ಮಾಡಿಕೊಳ್ಳಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಜ್ವಲ್ ನನ್ನು ವಿದೇಶಕ್ಕೆ ಕಳಿಸಿರುವುದೇ ಅವರ ತಾತ. ವಿದೇಶಕ್ಕೆ ಕಳಿಸಿ ಈಗ ಪತ್ರ ಬರೆದು ಏನು ಮಾಡುತ್ತಾರೆ? ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೆಗೌಡರ ಬಗ್ಗೆ ಲಘುವಾಗಿ ಮಾತನಾಡಿರುವ…
ಬೆಂಗಳೂರು: ಗುಜರಾತ್ ಮಾಡಲ್, ಯುಪಿ ಮಾಡಲ್ ಎಂಬುದೆಲ್ಲ ಸುಳ್ಳಾಗಿದೆ. ಅಭಿವೃದ್ಧಿಯ ಅಸಲಿ ಮಾದರಿಯಾಗಿ “ಕರ್ನಾಟಕ ಮಾಡೆಲ್” ಹೊರಹೊಮ್ಮುತ್ತಿದೆ ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಬಿಜೆಪಿ ನಾಯಕರು ಜಪಿಸುತ್ತಿದ್ದ ಗುಜರಾತ್ ಮಾಡೆಲ್ – ನಕಲಿ ಎಂದು ದೇಶಕ್ಕೆ ತಿಳಿಯಿತು, ಯುಪಿ ಮಾಡೆಲ್ – ದ್ವೇಷಕ್ಕೆ ಮಾತ್ರ ಮಾಡೆಲ್ ಎಂದು ರಾಜ್ಯದ ಜನತೆ ತಿರಸ್ಕರಿಸಿದರು. ಅಭಿವೃದ್ಧಿಯ ಅಸಲಿ ಮಾದರಿಯಾಗಿ “ಕರ್ನಾಟಕ ಮಾಡೆಲ್” ಹೊರಹೊಮ್ಮುತ್ತಿದೆ ಎಂದಿದ್ದಾರೆ. ಉತ್ತರ ಪ್ರದೇಶದ ಸಾರಿಗೆ ಅಧಿಕಾರಿಗಳ ನಿಯೋಗವು ಕರ್ನಾಟಕದ ಸಾರಿಗೆ ವ್ಯವಸ್ಥೆಯ ಸಮರ್ಥ ಕಾರ್ಯವೈಖರಿಯ ಬಗ್ಗೆ ಅರಿಯಲು ಬಿಎಂಟಿಸಿಗೆ ಭೇಟಿ ನೀಡಿ ರಾಜ್ಯ ಸಾರಿಗೆ ಇಲಾಖೆ ಅಳವಡಿಸಿಕೊಂಡಿರುವ ವಿವಿಧ ವಿನೂತನ ವ್ಯವಸ್ಥೆಗಳ ಮಾಹಿತಿ ಪಡೆದರು ಎಂದು ತಿಳಿಸಿದ್ದಾರೆ. ಇತರ ರಾಜ್ಯಗಳಿಗಷ್ಟೇ ಅಲ್ಲ, ಸ್ವತಃ ಕೇಂದ್ರ ಸರ್ಕಾರಕ್ಕೆ, ಪ್ರಧಾನಿ ಮೋದಿಯವರನ್ನೂ ಕರ್ನಾಟಕ ಮಾಡೆಲ್ ಪ್ರೇರೇಪಿಸಿದೆ ಎನ್ನುವುದಕ್ಕೆ ಅವರು ಅಪಹರಿಸಿದ “ಗ್ಯಾರಂಟಿ” ಪದವೇ ಸಾಕ್ಷಿ ಎಂದಿದ್ದಾರೆ. ಐಟಿ ,ಬಿಟಿ ಕ್ಷೇತ್ರದಲ್ಲಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ,…
ಬೆಂಗಳೂರು: ನಗರದಲ್ಲಿ ಮಳೆಗಾಲ ಶುರುವಾದ ನಂತ್ರ, ಜನತೆಗೆ ಶುದ್ಧ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಕೆಲವೆಡೆ ಅಶುದ್ಧ ನೀರು ಸರಬರಾಜು ಪರಿಣಾಮ ಕಾಲರಾಕ್ಕೆ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಬೆಂಗಳೂರು ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಶುದ್ಧ ಕುಡಿಯುವ ನೀರು ಪೂರೈಸಲು ಸೂಚಿಸಿದ್ದಾರೆ. ಈ ಬಗ್ಗೆ ಬೆಂಗಳೂರು ಜಲಮಂಡಳಿಗೆ ಪತ್ರ ಬರೆದಿರುವಂತ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಲುಷಿತ ನೀರಿನೊಂದಿಗೆ ಸೇರಿರುವುದರಿಂದ ಜನರು ಅಸ್ವಸ್ಥಗೊಂಡು, ವಿವಿಧ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಹಲವು ಮಾಧ್ಯಮ ಮತ್ತು ದಿನಪತ್ರಿಕೆಗಳಲ್ಲಿ ಪ್ರಸಾರವಾಗಿರುತ್ತದೆ. ಸದರಿ ವಿಷಯವು ಇಂದು ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದ ಸಭೆಯಲ್ಲಿ ಚರ್ಚೆಯಾಗಿರುತ್ತದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ, ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಾಗರೀಕರಿಗೆ ಸರಬರಾಜು ಮಾಡುತ್ತಿರುವ ಕುಡಿಯುವ ನೀರು ಹಾಗೂ ಬೋರವೆಲ್ ನೀರನ್ನು ಒಳಗೊಂಡಂತೆ ಪ್ರಯೋಗಾಲಯದಲ್ಲಿ ನೀರಿನ ಗುಣಮಟ್ಟವನ್ನು ಪರಿಶೀಲಿಸಿ, ಉತ್ತಮ…
ಬೆಂಗಳೂರು: ಆರೋಗ್ಯ ವರ್ಲ್ಡ್ ಸಂಸ್ಥೆಯ ವತಿಯಿಂದ 2024 ನೇ ಸಾಲಿನ ಕೆಲಸದ ಸ್ಥಳಗಳಲ್ಲಿ ಸಿಬ್ಬಂದಿಗಳ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ, ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಕಲ್ಯಾಣ ಕಾರ್ಯಕ್ರಮಗಳು ಮತ್ತು ಉಪಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಶ್ರೇಷ್ಠತೆಯನ್ನು ಪ್ರದರ್ಶಿಸುವ ಹಿನ್ನೆಲೆಯನ್ನು ಗುರುತಿಸಿ ಬೆಂ.ಮ.ಸಾ.ಸಂಸ್ಥೆಗೆ ಬೆಳ್ಳಿ ಮಟ್ಟದಡಿಯಲ್ಲಿ 2024 Healthy Workplace ಪ್ರಶಸ್ತಿಗೆ ಆಯ್ಕೆ ಮಾಡಲಾಗಿರುತ್ತದೆ. ಜಾಗತಿಕ ಆರೋಗ್ಯ ಲಾಭೋದ್ದೇಶವಿಲ್ಲದ ಸಂಸ್ಥೆಯಾದ ಆರೋಗ್ಯ ವರ್ಲ್ಡ್ ಆಯೋಜಿಸಿರುವ ಆರೋಗ್ಯಕರ ಕೆಲಸದ ಸ್ಥಳ ಪ್ರಶಸ್ತಿಗಳು, ಸಿಬ್ಬಂದಿಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಸಂಸ್ಥೆಗಳನ್ನು ಅಂಗೀಕರಿಸುವ ಮತ್ತು ಆಚರಿಸುವ ಗುರಿಯನ್ನು ಹೊಂದಿದೆ. ಈ ಪ್ರಶಸ್ತಿಯು ಸಿಬ್ಬಂದಿಗಳ ಕ್ಷೇಮಕ್ಕೆ ಸಮಗ್ರ ವಿಧಾನವನ್ನು ಉತ್ತೇಜಿಸುವಲ್ಲಿ ಅದರ ಪೂರ್ವಭಾವಿ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಸಮಗ್ರ ಶ್ರೇಣಿಯ ಉಪಕ್ರಮಗಳ ಮೂಲಕ, ಬೆಂ.ಮ.ಸಾ.ಸಂಸ್ಥೆಯು ತನ್ನ ಸಿಬ್ಬಂದಿಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಿದೆ, ಆರೋಗ್ಯವಂತ ಸಿಬ್ಬಂದಿಗಳು ಸಾಂಸ್ಥಿಕ ಯಶಸ್ಸಿಗೆ ಪ್ರಮುಖರಾಗಿದ್ದಾರೆ ಎಂದು ಗುರುತಿಸಿದ್ದಾರೆ. ಸಿಬ್ಬಂದಿ ಕ್ಷೇಮಕ್ಕಾಗಿ ಬದ್ಧತೆಯು ಕೆಲಸದ ಸ್ಥಳವನ್ನು ಮೀರಿ ವಿಸ್ತರಿಸುತ್ತದೆ. ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಕರಿಗೆ…
ಯುದ್ಧದ ನಂತರ ಲಂಕಾದಿಂದ ರಾಮ ಮತ್ತು ಸೀತೆಯ ಆಗಮನದ ನಂತರ, ಅಯೋಧ್ಯೆಗೆ, ಹನುಮಂತನು ರಾಮನ ಸಹೋದರರಾದ ಲಕ್ಷ್ಮಣ, ಭರತ ಮತ್ತು ಶತ್ರುಘ್ನರೊಂದಿಗೆ ರಾಮನ ಸೇವೆ ಮಾಡುತ್ತಾ ತನ್ನ ದಿನಗಳನ್ನು ಕಳೆದನು. ಹನುಮಂತನ ಪ್ರೀತಿ ಮತ್ತು ಪತಿ ಭಕ್ತಿಯಿಂದ ಸೀತೆ ತುಂಬಾ ಪ್ರಭಾವಿತಳಾಗಿದ್ದಳು ಮತ್ತು ಅವನನ್ನು ಮಗನಂತೆ ನಡೆಸಿಕೊಂಡಳು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ…
ಬೆಂಗಳೂರು: ಮಳೆಗಾಲ ಆರಂಭಗೊಂಡಿದೆ. ಸಾರಿಗೆ ಬಸ್ ಗಳು ಸೋರುತ್ತಿವೆ ಅನ್ನೋ ರೀತಿಯಲ್ಲಿ ಕೊಡೆ ಹಿಡಿದು ಸಾರಿಗೆ ಬಸ್ ಚಾಲನೆ ಮಾಡಿದಂತ ಡ್ರೈವರ್ ವೀಡಿಯೋ ವೈರಲ್ ಆಗಿತ್ತು. ಈ ಸಂಬಂಧ ನಿಮ್ಮ ಕನ್ನಡ ನ್ಯೂಸ್ ನೌ ವೆಬ್ ಸೈಟ್ ನಲ್ಲಿ WATCH VIDEO: ಬಸ್ ಛಾವಣಿ ಸೋರಿಕೆ; ಛತ್ರಿ ಹಿಡಿದೇ ಬಸ್ ಚಲಾಯಿಸಿದ KSRTC ಚಾಲಕ, ವಿಡಿಯೋ ವೈರಲ್ ಅಂತ ಸುದ್ದಿ ಪ್ರಕಟಿಸಿತ್ತು. ನಾಟಕೀಯವಾಗಿ ಛತ್ರಿ ಹಿಡಿದು ಸಾರಿಗೆ ಬಸ್ ಅನ್ನು ಡ್ರೈವರ್ ಚಾಲನೆ ಮಾಡಿದ್ದರು. ಇದನ್ನ ನಿರ್ವಾಹಕಿ ವೀಡಿಯೋ ಮಾಡಿದ್ದರು. ಈಗ ಈ ಇಬ್ಬರನ್ನು ಅಮಾನತುಗೊಳಿಸಿ, ಸಾರಿಗೆ ನಿಗಮ ಆದೇಶಿಸಿದೆ. ನಮ್ಮ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ, NWKRTC, ಮಳೆ ಬರುತ್ತಿರುವಾಗ ಸಂಸ್ಥೆಯ ವಾಹನದ ಚಾಲಕರು ಕೊಡೆ ಹಿಡಿದುಕೊಂಡು ವಾಹನ ಚಾಲನೆ ಮಾಡಿದ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಕುರಿತು ಈ ಕೆಳಗಿನಂತೆ ಸ್ಪಷ್ಟೀಕರಣ ಮಾಹಿತಿ ಹಂಚಿಕೊಂಡಿತ್ತು. ಈ ವಿಷಯವಾಗಿ ಧಾರವಾಡ ಗ್ರಾಮಾಂತರ ವಿಭಾಗದ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಅದರನ್ವಯ, ದಿನಾಂಕ: 23-05-2024…












