Subscribe to Updates
Get the latest creative news from FooBar about art, design and business.
Author: kannadanewsnow05
ಚಿಕ್ಕಮಗಳೂರು : ಕಾರ್ಯಕರ್ತನಿಂದಲೇ ಕಾಂಗ್ರೆಸ್ ನಾಯಕಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ರಾಜಸ್ಥಾನದ ಅಜ್ಮೀರ್ ನಲ್ಲಿ ಕಾಂಗ್ರೆಸ್ ಮುಖಂಡ ರಾಹಿಲನ್ನು ಅರೆಸ್ಟ್ ಮಾಡಲಾಗಿದೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಬಳಿ ಈ ಒಂದು ಘಟನೆ ನಡೆದಿತ್ತು. ಚೇತನ ನಿವಾಸದ ಬಳಿ ತೆರಳಿ ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಲಾಗಿತ್ತು. ಕಾಂಗ್ರೆಸ್ ನಾಯಕಿ ಚೇತನ ಹತ್ಯೆಗೆ ರಾಹುಲ್ ಶರೀಫ್ ಯತ್ನಿಸಿದ್ದ. ಚೇತನಾ ಪತಿ ಮೇಲು ಲಾಂಗ್ ನಿಂದ ರಾಹಿಲ್ ಹಲ್ಲೆ ಮಾಡಿದ್ದ. ಚೇತನ ಮನೆಯಲ್ಲಿ ಬಾಡಿಗೆಗೆ ಇದ್ದ ಆರೋಪಿ ರಾಹಿಲ್ ಶರೀಫ್, ನಿರಂತರವಾಗಿ ಗಲಾಟೆ ಬೆನ್ನಲ್ಲೇ ದಂಪತಿಗಳು ರಾಹುಲ್ ಅನ್ನು ಮನೆ ಖಾಲಿ ಮಾಡಿಸಿದ್ದರು.ಮನೆ ಖಾಲಿ ಮಾಡಿಸಿದ್ದಕ್ಕಾಗಿ ರಾಹಿಲ್ ಮತ್ತು ಆತನ ತಂಡ ದಂಪತಿ ಮೇಲೆ ಹಲ್ಲೆ ಮಾಡಿದ್ದು, ಬಳಿಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಹಿಲ್ ಶರೀಫ್ ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದರು. ಬಳಿಕ ಎಸ್ ಪಿ ಜಿತೇಂದ್ರ ರಾಹಿಲ್ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದರು. ಇದೀಗ ರಾಹಿಲ್ ನನ್ನು ಬಂಧಿಸಿ ಅಭಯ ಪ್ರಕಾಶ್…
ಬೆಂಗಳೂರು : ಬಿಜೆಪಿ ಜೆಡಿಎಸ್ ಮಧ್ಯ ಮೈತ್ರಿ ಕೇವಲ ಹೆಸರಿಗಷ್ಟೇ ಆದಂತಾಗಿದೆ. ಏಕೆಂದರೆ ಬಿಜೆಪಿ ಮತ್ತು ಜೆಡಿಎಸ್ ನಾಯಕರಲ್ಲಿ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಈ ವಿಚಾರವಾಗಿ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ನಮ್ಮದು ಒನ್ ಸೈಡ್ ಲವ್ ಆಗಿದೆ. ನಾವು ಬಿಜೆಪಿಯನ್ನು ಪ್ರೀತಿಸುತ್ತೇವೆ, ಆದರೆ ಅವರು ನಮ್ಮನ್ನು ಇಷ್ಟಪಡಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೌದು ಶಾಸಕ ಶರಣಗೌಡ ಕಂದಕೂರು ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ರೆ 140-150 ಸ್ಥಾನ ಬರುತ್ತೆ. ಮೈತ್ರಿ ಇದ್ದರೂ ಇಲ್ಲದಿದ್ದರೂ ನಮ್ಮ ಸಿಎಂ ಅಭ್ಯರ್ಥಿ ಕುಮಾರಸ್ವಾಮಿ ಎಂದು ಹೇಳಿದ್ದಾರೆ. ಅಲ್ಲದೆ ಬಿಜೆಪಿಯವರು ನಿಮ್ಮ ಪಕ್ಷದ ಸಿಎಂ ಅಭ್ಯರ್ಥಿ ಯಾರು ಎಂದು ಹೇಳಿ. ನಮ್ಮದು ಒಂದು ಸೈಡ್ ಲವ್ ಆಗಿದೆ. ನಾವು BJPಯವರನ್ನು ಪ್ರೀತಿಸುತ್ತೇವೆ, ಆದರೆ ಅವರು ನಮ್ಮನ್ನ ಪ್ರೀತಿಸ್ತಿಲ್ಲ. ಸಮನ್ವಯತೆಯಿಂದ ಹೋಗಿದ್ದಕ್ಕೆ MP ಚುನಾವಣೆಯಲ್ಲಿ 19 ಸ್ಥಾನ ಗೆದ್ವಿ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಲಿ ಎಂದು ರಾಜ್ಯದ…
ಪ್ರಾಚೀನ ಕಾಲದಲ್ಲಿ ಹಣವನ್ನು ಭದ್ರವಾಗಿಡಳು ಯಾವುದೇ ರೀತಿಯ ಬ್ಯಾಂಕುಗಳು ಇರಲಿಲ್ಲ, ಆದ್ದರಿಂದ ಪ್ರಾಚೀನ ಕಾಲದಲ್ಲಿ ಚಿನ್ನಾಭರಣವನ್ನು ಒಂದು ಪಾತ್ರೆಯಲ್ಲಿ ಅಥವಾ ಮಡಿಕೆಯಲ್ಲಿ ಹಾಕಿ ನೆಲದಲ್ಲಿ ಹೂತು ಹಾಕುತ್ತಿದ್ದರು, ಈ ರೀತಿ ಮಾಡುವುದರಿಂದ ಹೂತುಹಾಕಿದ ಹಣ ಕಳ್ಳರಿಂದ ರಕ್ಷಣೆ ಗೊಳ್ಳುವುದರ ಜೊತೆಗೆ ತಮಗೆ ಬೇಕಾದಾಗ ಅದನ್ನು ತೆಗೆದು ಉಪಯೋಗಿಸಿಕೊಳ್ಳುತ್ತಿದ್ದರು. ಒಂದು ವೇಳೆ ಹೂತು ಹಾಕಿದ ಹಣವನ್ನು ಮರೆತುಹೋದರೆ ಅದು ಅಲ್ಲಿಯೇ ಯಾರಿಗೂ ತಿಳಿಯದೆ ಹಾಗೆ ಉಳಿಯುತ್ತಿತ್ತು . ಈ ಸಸ್ಯವನ್ನು ಮಂಗನ ಬಳ್ಳಿ ಎಂದು ಕರೆಯಲಾಗುತ್ತದೆ, ಈ ಸಸ್ಯವು ಯಾವ ಸಸ್ಯದ ಮೇಲೆ ಬೆಳೆಯುತ್ತದೆಯೋ ಆ ಸಸ್ಯದ ಪೋಷಕಾಂಶವನ್ನು ಇದು ತೆಗೆದುಕೊಳ್ಳುತ್ತದೆ. ಮೊದಲಿಗೆ ಶನಿವಾರ ದಿನ ನಿಮಂತ್ರಣವನ್ನು ಕೊಟ್ಟು ಬರಬೇಕು ತದನಂತರ ಭಾನುವಾರದ ದಿನ ಸಸ್ಯದ ಬಳಿ ಹೋಗಿ ನಮ್ಮ ಬಡತನವನ್ನು ನಿರ್ಮೂಲನೆ ಮಾಡಲು ಹಾಗೂ ನಮ್ಮ ಹಿರಿಯರು ಬಿಟ್ಟುಹೋಗಿದ್ದ ನಿಧಿಯನ್ನು ಹುಡುಕಲು ನಿನ್ನನ್ನು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಪ್ರಾರ್ಥನೆಯನ್ನು ಮಾಡಿ ನಮಸ್ಕರಿಸಿ ಸಸ್ಯದ ಬೇರನ್ನು ಮನೆಗೆ ತೆಗೆದುಕೊಂಡು ಬರಬೇಕು. ಶ್ರೀ ಸಿಗಂಧೂರು…
ಕಲಬುರ್ಗಿ : ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಆಂದೋಲಾ ಗ್ರಾಮದ ಮಠದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನ ಹೊಲಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಸ್ಥಳೀಯ ಯುವಕರು ಈ ಕೃತ್ಯದ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟ ಬೆನ್ನಲ್ಲೇ ಆರೋಪಿ ಮಸ್ತಾಕ್ ಹುಸೇನ್ ಎಂಬಾತ ಗ್ರಾಮದಿಂದ ಪರಾರಿಯಾಗಿದ್ದು, ಜೇವರ್ಗಿ ಸಿಡಿಪಿಓ ನೀಡಿದ ದೂರಿನನ್ವಯ ಪೊಲೀಸರು ಎಫ್ಐಆರ್ ದಾಖಲಿಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಬೆಂಗಳೂರು : ಬೆಂಗಳೂರಲ್ಲಿ ಹೈಕೋರ್ಟ್ ಜಡ್ಜ್ ಜಿ.ಬಸವರಾಜ್ ಅವರ ಕಾರು ಅಪಘಾತವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಜಿ.ಬಸವರಾಜ್ ಕಾರು ಅಪಘಾತ ಸಂಭವಿಸಿದೆ. ನೆಲಮಂಗಲ ತಾಲೂಕಿನ ರಾಯರ ಪಾಳ್ಯ ಬಳಿ ಈ ಒಂದು ಘಟನೆ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಯರಪಾಳ್ಯ ಬಳಿ, ಕಾರಿನಲ್ಲಿದ್ದ ಹೈಕೋರ್ಟ್ ನ್ಯಾಯಮೂರ್ತಿ ಜಿ.ಬಸವರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವ್ಯಕ್ತಿ ಅಡ್ಡ ಬಂದ ಹಿನ್ನೆಲೆ ಅವೈಡ್ ಮಾಡಲು ಹೋಗಿ ಪೊಲೀಸ್ ವಾಹನ ಡಿಕ್ಕಿ ಹೊಡೆದಿದೆ. ಸಿಮೆಂಟ್ ಸ್ಲಾಬ್ ಗೆ ಪೊಲೀಸ್ ಎಸ್ಕಾರ್ಟ್ ವಾಹನ ಡಿಕೆ ಹೊಡೆದಿದೆ. ಈ ವೇಳೆ ಎಸ್ಕಾರ್ಟ್ ವಾಹನಕ್ಕೆ ಜಡ್ಜ್ ಇದ್ದ ಕಾರು ಡಿಕ್ಕಿ ಹೊಡೆದಿದೆ. ಪೊಲೀಸ್ ಚಾಲಕನಿಗೆ ಗಂಭೀರವಾದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಕಾರಿನಲ್ಲಿ ಇದ್ದಂತಹ ನ್ಯಾಯಮೂರ್ತಿಗಳು ಮತ್ತು ಇತರರು ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ
ಬೆಂಗಳೂರು : ಇತ್ತೀಚಿಗೆ ಕೆಪಿಎಸ್ಸಿ ಪರೀಕ್ಷೆ ಫಲಿತಾಂಶ ಬಳಿಕ ಇದರಲ್ಲಿ ಸಾವಿರ ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಗಂಭೀರವಾದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಕೆಪಿಎಸ್ಸಿ ತನಿಕ ತಂಡ ರಚನೆ ಮಾಡಿ ತನಿಖೆ ನಡೆಸುತ್ತಿರುವಾಗಲೇ ಇದೀಗ ಕೆಪಿಎಸ್ಸಿ ವಿರುದ್ಧ ಮತ್ತೊಂದು ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ಹೌದು 2024ರ ಅ.27ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಎಫ್ಡಿಎ, ಎಸ್ಡಿಎ, ವಿಎಒ, ಪರೀಕ್ಷೆಯಲ್ಲಿ ಆಯ್ಕೆಯಾಗದ ಅಭ್ಯರ್ಥಿಗಳು, 2024ರ ಡಿ.8ರಂದು ಕೆಪಿಎಸ್ಸಿ ನಡೆಸಿದ ಪಿಡಿಒ ಪರೀಕ್ಷೆಯ ಅರ್ಹತಾ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ. ಅದರಲ್ಲೂ ಕೆಲವರು ಪರಸ್ಪರ ಸಂಬಂಧಿಕರೇ ಆಗಿದ್ದು, ಇನ್ನು ಕೆಲವರು ರಾಜಕೀಯ ವ್ಯಕ್ತಿಗಳ ಆಪ್ತವಲಯದಲ್ಲಿ ಗುರುತಿಸಿಕೊಂಡವರೂ ಇದ್ದಾರೆ. ಕೆಎಎಸ್ ರೀತಿಯಲ್ಲೇ ಒಂದೇ ಕೊಠಡಿಯಲ್ಲಿ ಇದ್ದವರೇ ಇಲ್ಲೂ ಆಯ್ಕೆಯಾಗಿದ್ದಾರೆ. ಇದು ಹೇಗೆ ಸಾಧ್ಯ? ಈ ಬಗ್ಗೆಯೂ ಸೂಕ್ತ ತನಿಖೆ ಆಗಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. 2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಆಯ್ಕೆ ಪಟ್ಟಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದ ದೂರು ಲೋಕಭವನದ ಅಂಗಳ ತಲುಪಿದ್ದು,…
ಬಳ್ಳಾರಿ : ಬಳ್ಳಾರಿ ಖಾಸಗಿ ಶಾಲೆಯ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 9ನೇ ತರಗತಿ ವಿದ್ಯಾರ್ಥಿಯಿಂದ ಹಲವರ ಮೇಲೆ ಹಲ್ಲೆ ನಡೆದಿದೆ. ಕಬ್ಬಿಣದ ಹಲೆ ನಡೆಸಿದ ಪರಿಣಾಮ ಓರ್ವ ವಿದ್ಯಾರ್ಥಿ ಸಾವನಪ್ಪಿದ್ದು, ಹಲ್ಲೆಯ ವೇಳೆ ಮಹಿಳಾ ವಾರ್ಡನ್ ಸೇರಿದಂತೆ 7 ವಿದ್ಯಾರ್ಥಿಗಳಿಗೆ ಗಾಯವಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಹೇಳುತ್ತಿದೆ. ಆದರೆ ಚಾಕುವಿನಿಂದ ಹಿಡಿದು ಕೊಲೆ ಮಾಡಿರುವ ಅನುಮಾನ ಇದೆ. ಹಲ್ಲು ನಡೆಸಿರುವ ವಿದ್ಯಾರ್ಥಿ ಡ್ರಗ್ ಅಡಿಕ್ಟ್ ಆಗಿರುವ ಶಂಕೆ ಇದೆ. ಇಲ್ಲವಾದರೆ ಅಷ್ಟು ಹುಡುಗರ ಮೇಲೆ ಹಲ್ಲೆ ಮಾಡೋದಕ್ಕೆ ಹೇಗೆ ಸಾಧ್ಯ? ಇದಕ್ಕೆಲ್ಲಾ ಶಾಲಾ ಆಡಳಿತ ಮಂಡಳಿಯೇ ನೇರ ಹೊಣೆಯಾಗಿದೆ. ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಮೃತ ಬಾಲಕನ ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ. ಪ್ರಕರಣ ಹಿನ್ನೆಲೆ? ರಾತ್ರಿ ಊಟದ ಬಳಿಕ ಎಲ್ಲರೂ ಮಲಗಿಕೊಂಡ ಮೇಲೆ ವಿದ್ಯಾರ್ಥಿಯೋರ್ವ ಮಂಚದ ರಾಡ್ ತೆಗೆದುಕೊಂಡು ಸಿಕ್ಕಾಸಿಕ್ಕಾವರ ಮೇಲೆ ಹಲ್ಲೆ ಮಾಡಿದ್ದು, ಎಂಟು ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ…
ಬೆಂಗಳೂರು : ಹಣಕಾಸು ವಂಚನೆ, ಮಾದಕ ವಸ್ತು ಮಾರಾಟ ಜಾಲ ಹಾಗೂ ದತ್ತಾಂಶ ಕಳವು ಸೇರಿ ಸೈಬರ್ಕೃತ್ಯಗಳನ್ನು ತಾಂತ್ರಿಕತೆ ಜೊತೆ ಕಠಿಣ ಕಾನೂನು ರೂಪಿಸಿ ಕಡಿವಾಣ ಹಾಕಬೇಕಿದೆ ಎಂದು ರಾಜ್ಯ ಗೃಹ ಮಂತ್ರಿ ಜಿ.ಪರಮೇಶ್ವರ್ ಹೇಳಿದರು.ಶನಿವಾರ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ), ಸೈಬರ್ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ಆಯೋಜಿಸಿದ್ದ 3ನೇ ವರ್ಷದ ‘ಸೈಬರ್ಅಪರಾಧ ತನಿಖಾ ಶೃಂಗಸಭೆ’ ಉದ್ಘಾಟಿಸಿ ಮಾತನಾಡಿದರು. ಸೈಬರ್ಅಪರಾಧ ಯಾವುದೇ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗಿಲ್ಲ. ಇದು ಮಿತಿಯಿಲ್ಲದ, ತಂತ್ರಜ್ಞಾನ ಆಧಾರಿತ ಮತ್ತು ನಿರಂತರವಾಗಿ ವಿಕಸನಗೊ ಳ್ಳುತ್ತಿರುವ ಅಪರಾಧ ಜಗತ್ತಾಗಿದೆ. ಹಣಕಾಸು ವಂಚನೆಗಳು ಮತ್ತು ಕ್ರಿಸ್ಟೋಕರೆನ್ಸಿ, ಡಾರ್ಕ್ಬ್ ಆಧಾರಿತ ಮಾದಕವಸ್ತು ಜಾಲಗಳು ಮತ್ತು ಡೇಟಾ ಉಲ್ಲಂಘನೆಯವರೆಗೆ, ಬೆದರಿಕೆಗಳ ಪ್ರಮಾಣ ವೇಗ ಹೆಚ್ಚುತ್ತಿದೆ. ಇವುಗಳನ್ನು ತಾಂತ್ರಿಕ ಸಾಮ ರ್ಥದಿಂದ ಮಾತ್ರವಲ್ಲದೆ ಕಾನೂನುಗಳನ್ನು ಬಲಪ ಡಿಸುವ ಮೂಲಕ ಸಂಘಟನಾತ್ಮಕವಾಗಿ ಎದುರಿಸಬೇಕಿದೆ ಎಂದರು. ಕರ್ನಾಟಕವು ಕೇವಲ ರಾಜ್ಯವಲ್ಲ. ಜಾಗತಿಕ ಬ್ರಾಂಡ್. ಜಗತ್ತು ಬೆಂಗಳೂರಿನತ್ತ ನೋಡಿದಾಗ ಹೊಸ ಭವಿಷ್ಯ ಕಾಣು ತ್ತದೆ. ರಾಜ್ಯ…
BREAKING : ರಾಜ್ಯದಲ್ಲಿ ಏ.1ರಿಂದ ಹೊಸ ಅಬಕಾರಿ ನೀತಿ ಜಾರಿ : ಬಿಯರ್ ವೈನ್ ಅಗ್ಗ, ರಮ್ ವಿಸ್ಕಿ ದುಬಾರಿ ಆಗೋ ಸಾಧ್ಯತೆ!
ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಹೊಸ ಅಬಕಾರಿ ನೀತಿ ಜಾರಿಗೆ ತರಲಾಗುವುದು ಎಂದು ಘೋಷಣೆ ಮಾಡಿದ್ದರು. ಅದರಂತೆ ಇದೀಗ ಆಲೋಹಾಲ್ ಪ್ರಮಾಣ ಅಂಶದ ಆಧಾರದಲ್ಲಿ ಹೊಸ ಸುಂಕ ವ್ಯವಸ್ಥೆಯನ್ನು ಏ.1ರಿಂದಲೇ ಜಾರಿಗೆ ತರಲಾಗುವುದು ಎಂದು ಬಜೆಟ್ನಲ್ಲಿ ಘೋಷಿಸಿರುವುದ ರಿಂದ ಬಿಯರ್, ವೈನ್ ಅಗ್ಗವಾದರೆ, ವಿಸ್ಕಿ, ರಮ್ ದುಬಾರಿ ಯಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರ ವಾರ ಮಂಡಿಸಿದ ಬಜೆಟ್ನಲ್ಲಿ ‘ಜಾಗತಿಕ ಮಟ್ಟದಲ್ಲಿ ಮದ್ಯದ ಅಂಶವನ್ನು ಆಧರಿಸಿ ತೆರಿಗೆ ವಿಧಿಸಲಾಗುತ್ತಿದೆ. ಇದೇ ಮಾನದಂಡ ಆಧಾರವಾಗಿಟ್ಟುಕೊಂಡು ಏ.1 ರಿಂದ ಹೊಸ ಸುಂಕ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಘೋಷಿಸಿದ್ದಾರೆ. ಇದು ಅನುಷ್ಠಾನವಾದರೆ ದೇಶದಲ್ಲೇ ಈ ರೀತಿ ಹೊಸ ವ್ಯವಸ್ಥೆ ಜಾರಿಗೆ ತಂದ ಮೊದಲ ರಾಜ, ಕರ್ನಾಟಕ ಆಗಲಿದೆ. ಸಾಮಾನ್ಯವಾಗಿ ಬಿಯರ್ನಲ್ಲಿ ಮದ್ಯದಪ್ರಮಾಣ ಶೇ.4 ರಿಂದ 9 ರಷ್ಟಿದ್ದರೆ, ಐಸ್ಕಿ, ರಮ್, ಜಿನ್ನ ಸೇರಿ ಐಎಂಲ್ ಮದ್ಯದಲ್ಲಿ ಇದು ಶೇ.30 ರಿಂದ 50 ರವರೆಗೂ ಇರುತ್ತದೆ. ಈ ಆಧಾರದಲ್ಲಿ…
ಮೈಸೂರು : ಒಂದು ಕಡೆ ದಾಖಲೆಯ 17ನೇ ಬಾರಿ ಬಜೆಟನ್ನು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ. ಇನ್ನೊಂದು ಕಡೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಭಾರಿ ಚರ್ಚೆ ನಡೆಯುತ್ತಿದೆ.ಇದರ ಮಧ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಒಂದು ವೇಳೆ ಸಿಎಂ ಸ್ಥಾನ ಬಿಡು ಎಂದರೆ ತಕ್ಷಣವೇ ಬಿಡುತ್ತೇನೆ. ಮುಂದುವರೆಯಿರಿ ಎಂದರೆ ಮುಂದುವರೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ ನೀಡಿದರು. ಮೈಸೂರಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಈಗ 17ನೇ ಬಜೆಟ್ ಮಂಡಿಸಿದ್ದೇನೆ. ಕರ್ನಾಟಕದಲ್ಲಿ ಹೆಚ್ಚು ಬಜೆಟ್ ಮಂಡಿಸಿರುವುದು ನಾನೇ. ಹೈಕಮಾಂಡ್ ಅವಕಾಶ ಕೊಟ್ಟರೆ ಇನ್ನು ಮುಂದೆಯೂ ಬಜೆಟ್ ಮಂಡಿಸುತ್ತೇನೆ. ಅವರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಹೈಕಮಾಂಡ್ ಮೇಲೆ ವಿಶ್ವಾಸ ಇದೆ. ಅವರ ಮೇಲೆ ವಿಶ್ವಾಸ ಇರಲೇಬೇಕು. ಅದನ್ನು ಬಿಟ್ಟು ನಿಮ್ಮ ಮೇಲೆ ವಿಶ್ವಾಸ ಇಡುವುದಕ್ಕೆ ಸಾಧ್ಯವೇ ಎಂದು ಪ್ರಶ್ನಿಸಿದರು. ಅಲ್ಲದೇ, ಬಜೆಟ್ ಮಂಡನೆ ಮೂಲಕ ರೆಕಾರ್ಡ್ ಮುರಿಯುವುದು ಮುಖ್ಯವಲ್ಲ. ಜನರು ಅವಕಾಶ ಕೊಟ್ಟರೆ ಮುಂದೆಯೂ ಬಜೆಟ್ ಮಂಡಿಸುತ್ತೇನೆ. ನೀವು ಏನೇ ಪ್ರಶ್ನೆ…














