Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಪೆಟ್ರೋಲ್, ಅಡುಗೆ ಎಣ್ಣೆ, ಗೊಬ್ಬರ ಬಳಿಕ ಬಿತ್ತನೆ ಬೀಜಕ್ಕೆ ಪರದಾಟ : ರಾಜ್ಯದ ರೈತರು ಕಂಗಾಲು!

GOOD NEWS: ಅತಿಥಿ ಶಿಕ್ಷಕರ ನೇಮಕಾತಿ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ: ‘51,000 ಹುದ್ದೆ’ಗಳ ಭರ್ತಿಗೆ ರಾಜ್ಯ ಸರ್ಕಾರ ಆದೇಶ | Guest Teachers

BREAKING : ದೇಶಾದ್ಯಂತ ಡೆಡ್ಲಿ ಎಬೋಲಾ ವೈರಸ್‌ ಆತಂಕ : ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸೂಚನೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ದೇಶಾದ್ಯಂತ ಡೆಡ್ಲಿ ಎಬೋಲಾ ವೈರಸ್‌ ಆತಂಕ : ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸೂಚನೆ
INDIA

BREAKING : ದೇಶಾದ್ಯಂತ ಡೆಡ್ಲಿ ಎಬೋಲಾ ವೈರಸ್‌ ಆತಂಕ : ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸೂಚನೆ

By ಸುರೇಶ್‌

ನವದೆಹಲಿ  : ಆಫ್ರಿಕಾದ ಹಲವು ದೇಶಗಳಲ್ಲಿ ತಲ್ಲಣ ಮೂಡಿಸುತ್ತಿರುವ, ಕೋವಿಡ್‌ಗಿಂತಲೂ ಅತ್ಯಂತ ಭೀಕರ ಎನ್ನಲಾದ ‘ಎಬೋಲಾ’ ವೈರಸ್ ಭೀತಿ ಇದೀಗ ಭಾರತಕ್ಕೂ ತಟ್ಟಿದೆ. ಆಫ್ರಿಕಾ ಖಂಡದಲ್ಲಿ ಎಬೋಲಾ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಕಟ್ಟೆಚ್ಚರ ವಹಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಮುಖ್ಯವಾಗಿ ರಾಷ್ಟ್ರ ರಾಜಧಾನಿ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಹೈ-ಅಲರ್ಟ್ ಘೋಷಿಸಲಾಗಿದ್ದು, ಹೆಚ್ಚು ಅಪಾಯವಿರುವ (High-Risk) ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ.

ವೈರಸ್ ಹಾವಳಿಯ ತೀವ್ರತೆಯನ್ನು ಪರಿಗಣಿಸಿ, ನವದೆಹಲಿಯಲ್ಲಿ ಆಯೋಜನೆಗೊಳ್ಳಬೇಕಿದ್ದ ಪ್ರತಿಷ್ಠಿತ ‘ಭಾರತ-ಆಫ್ರಿಕಾ ಒಕ್ಕೂಟದ ಶೃಂಗಸಭೆ’ಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಅಧಿಕೃತವಾಗಿ ಮಾಹಿತಿ ನೀಡಿದೆ. ಈ ಬೆನ್ನಲ್ಲೇ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಬೋಲಾ ನಿಯಂತ್ರಣಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ.

ವಿಮಾನ ನಿಲ್ದಾಣಗಳಿಗೆ ವಿಶೇಷ ಮಾರ್ಗಸೂಚಿ ಪ್ರಕಟ: ವೈರಸ್ ದೇಶದೊಳಗೆ ಹರಡದಂತೆ ತಡೆಯಲು ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳನ್ನು ಜಾರಿಗೆ ತರಲಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬಿಡುಗಡೆ ಮಾಡಲಾದ ಪ್ರಮುಖ ಮಾರ್ಗಸೂಚಿಗಳು ಇಲ್ಲಿವೆ:

  • ಅಂತಾರಾಷ್ಟ್ರೀಯ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ತ್ರಿಬಲ್ ಲೇಯರ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

  • ವಿಮಾನ ನಿಲ್ದಾಣದ ಸಿಬ್ಬಂದಿ ಕಡ್ಡಾಯವಾಗಿ ಹ್ಯಾಂಡ್ ಗ್ಲೌಸ್ ಧರಿಸಬೇಕು ಹಾಗೂ ನಿರಂತರವಾಗಿ ಸ್ಯಾನಿಟೈಸರ್ ಬಳಕೆ ಮಾಡಬೇಕು.

  • ಎಬೋಲಾ ಬಾಧಿತ ದೇಶಗಳಿಂದ ಬರುವ ಪ್ರಯಾಣಿಕರು ತಮ್ಮ ಸಂಪೂರ್ಣ ಮಾಹಿತಿ ಒಳಗೊಂಡ ಸೆಲ್ಫ್ ಡಿಕ್ಲರೇಷನ್ (ಸ್ವಯಂ ಘೋಷಣೆ) ಫಾರ್ಮ್ ಸಲ್ಲಿಸುವುದು ಕಡ್ಡಾಯ.

  • ಪ್ರತಿಯೊಬ್ಬ ಪ್ರಯಾಣಿಕರ ಟ್ರಾವೆಲ್ ಹಿಸ್ಟರಿ (ಪ್ರಯಾಣದ ಇತಿಹಾಸ) ಅನ್ನು ಕಟ್ಟುನಿಟ್ಟಾಗಿ ದಾಖಲಿಸಿಕೊಳ್ಳಬೇಕು.

  • ಒಂದೊಮ್ಮೆ ತಪಾಸಣೆ ವೇಳೆ ಎಬೋಲಾ ಲಕ್ಷಣಗಳಿರುವ ಶಂಕಿತ ವ್ಯಕ್ತಿ ಪತ್ತೆಯಾದರೆ, ತಡಮಾಡದೆ ತಕ್ಷಣವೇ ಉನ್ನತ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಗೆ ವರದಿ ಮಾಡಬೇಕು.

ಶಂಕಿತ ರೋಗಿಗಳ ಐಸೊಲೇಷನ್ ನಿಯಮಗಳು: ಒಂದೊಮ್ಮೆ ಎಬೋಲಾ ಸೋಂಕಿನ ಲಕ್ಷಣಗಳು ಕಂಡುಬಂದರೆ ಅಥವಾ ಶಂಕಿತ ಪ್ರಕರಣಗಳು ಪತ್ತೆಯಾದರೆ, ಅವರನ್ನು ಕಟ್ಟುನಿಟ್ಟಾದ ಕ್ವಾರಂಟೈನ್‌ಗೆ ಒಳಪಡಿಸಲು ಕಟ್ಟುನಿಟ್ಟಿನ ಐಸೊಲೇಷನ್ ಪ್ರಕ್ರಿಯೆಯನ್ನು ರೂಪಿಸಲಾಗಿದೆ.

  • ಸೋಂಕಿತರನ್ನು ಕಡ್ಡಾಯವಾಗಿ ಲಗತ್ತಾದ ಶೌಚಾಲಯ (Attached Bathroom) ಹೊಂದಿರುವ ಪ್ರತ್ಯೇಕ ಕೊಠಡಿಯಲ್ಲೇ ಐಸೊಲೇಟ್ ಮಾಡಬೇಕು.

  • ಸದರಿ ಕೊಠಡಿಯನ್ನು ಪ್ರವೇಶಿಸುವ ವೈದ್ಯರು ಅಥವಾ ಶುಶ್ರೂಷಕರು ಕಡ್ಡಾಯವಾಗಿ ಪಿಪಿಇ (PPE) ಕಿಟ್ ಧರಿಸಿರಬೇಕು.

  • ಎಬೋಲಾ ತೀವ್ರತೆ ಹೆಚ್ಚಿರುವುದರಿಂದ ರೋಗಿಯ ಆರೋಗ್ಯದ ಮೇಲೆ ಕ್ಷಣಕ್ಷಣದ ನಿಗಾ ಇಡಬೇಕಾಗುತ್ತದೆ. ಹೀಗಾಗಿ, ಪ್ರತಿ 2 ಗಂಟೆಗೊಮ್ಮೆ ರೋಗಿಯ ರಕ್ತದ ಆಮ್ಲಜನಕದ ಮಟ್ಟವನ್ನು (Oxygen Level) ಪರೀಕ್ಷಿಸಬೇಕು.

  • ಇದರೊಂದಿಗೆ, ವೈರಸ್ ಹೃದಯದ ಮೇಲಿನ ಪರಿಣಾಮವನ್ನು ಪತ್ತೆಹಚ್ಚಲು ಪ್ರತಿ ಎರಡು ಗಂಟೆಗೊಮ್ಮೆ ಕಡ್ಡಾಯವಾಗಿ ಕಾರ್ಡಿಯಾಕ್ ಟೆಸ್ಟ್ (ಹೃದಯ ಸಂಬಂಧಿ ಪರೀಕ್ಷೆ) ನಡೆಸಬೇಕು ಎಂದು ವೈದ್ಯಕೀಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Share. Facebook Twitter LinkedIn WhatsApp Email

Related Posts

ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್ : ಅಡುಗೆ ಎಣ್ಣೆ ಬೆಲೆಯಲ್ಲಿ 15 ರೂ. ಏರಿಕೆ | Cooking oil price hike

1 Min Read

ALERT : ‘ಕಾಕ್ರೋಚ್​ ಜನತಾ ಪಾರ್ಟಿ’ ಹೆಸ್ರಲ್ಲಿ ಸೈಬರ್ ವಂಚನೆ : ವಾಟ್ಸಪ್ ಲಿಂಕ್ ಕ್ಲಿಕ್ ಮಾಡಿದ್ರೆ ಲಕ್ಷ ಲಕ್ಷ ಹಣ ಗೋವಿಂದ!

1 Min Read

BREAKING NEWS : ಮೌಂಟ್ ಎವರೆಸ್ಟ್ ಏರಿ ಮರಳುವಾಗ ದುರಂತ: ಇಬ್ಬರು ಭಾರತೀಯ ಪರ್ವತಾರೋಹಿಗಳು ಸಾವು!

2 Mins Read
Recent News

BREAKING : ಪೆಟ್ರೋಲ್, ಅಡುಗೆ ಎಣ್ಣೆ, ಗೊಬ್ಬರ ಬಳಿಕ ಬಿತ್ತನೆ ಬೀಜಕ್ಕೆ ಪರದಾಟ : ರಾಜ್ಯದ ರೈತರು ಕಂಗಾಲು!

GOOD NEWS: ಅತಿಥಿ ಶಿಕ್ಷಕರ ನೇಮಕಾತಿ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ: ‘51,000 ಹುದ್ದೆ’ಗಳ ಭರ್ತಿಗೆ ರಾಜ್ಯ ಸರ್ಕಾರ ಆದೇಶ | Guest Teachers

BREAKING : ದೇಶಾದ್ಯಂತ ಡೆಡ್ಲಿ ಎಬೋಲಾ ವೈರಸ್‌ ಆತಂಕ : ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸೂಚನೆ

BREAKING : ಗುಬ್ಬಿ JDS ಅಭ್ಯರ್ಥಿ ನಾಗರಾಜ್ ಹನಿಟ್ರ್ಯಾಪ್ ಗೆ ಸಂಚು : ಶಾಸಕ SR ಶ್ರೀನಿವಾಸ್ ವಿರುದ್ಧ ಗಂಭೀರ ಆರೋಪ!

State News
KARNATAKA

BREAKING : ಪೆಟ್ರೋಲ್, ಅಡುಗೆ ಎಣ್ಣೆ, ಗೊಬ್ಬರ ಬಳಿಕ ಬಿತ್ತನೆ ಬೀಜಕ್ಕೆ ಪರದಾಟ : ರಾಜ್ಯದ ರೈತರು ಕಂಗಾಲು!

By ಸುರೇಶ್‌ KARNATAKA 2 Mins Read

ಹಾವೇರಿ : ಜಾಗತಿಕ ಮಟ್ಟದ ರಾಜಕೀಯ ವಿದ್ಯಮಾನಗಳು ಸ್ಥಳೀಯವಾಗಿ ತೀವ್ರ ಆರ್ಥಿಕ ಸಂಕಷ್ಟವನ್ನು ತಂದೊಡ್ಡುತ್ತಿವೆ. ಇರಾನ್ ಮತ್ತು ಅಮೆರಿಕ ನಡುವಿನ…

GOOD NEWS: ಅತಿಥಿ ಶಿಕ್ಷಕರ ನೇಮಕಾತಿ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ: ‘51,000 ಹುದ್ದೆ’ಗಳ ಭರ್ತಿಗೆ ರಾಜ್ಯ ಸರ್ಕಾರ ಆದೇಶ | Guest Teachers

BREAKING : ಗುಬ್ಬಿ JDS ಅಭ್ಯರ್ಥಿ ನಾಗರಾಜ್ ಹನಿಟ್ರ್ಯಾಪ್ ಗೆ ಸಂಚು : ಶಾಸಕ SR ಶ್ರೀನಿವಾಸ್ ವಿರುದ್ಧ ಗಂಭೀರ ಆರೋಪ!

ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಲಭ್ಯ, ರೈತರು ಆತಂಕಪಡುವ ಅಗತ್ಯವಿಲ್ಲ: ಕೃಷಿ ಇಲಾಖೆ ಸ್ಪಷ್ಟನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.