ಬೆಂಗಳೂರು : ಅಮೇರಿಕಾ ಇಸ್ರೆಲ್ ಹಾಗೂ ಇರಾನ್ ಮಧ್ಯ ಯುದ್ಧ ನಡೆಯುತ್ತಿದ್ದು ಇದರ ಪರಿಣಾಮ ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಬಹಳಷ್ಟು ವ್ಯತ್ಯಯ ಉಂಟಾಗಿದೆ. ಇಂದು ಸದನದಲ್ಲಿ ಸಿಲಿಂಡರ್ ಸಮಸ್ಯೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಆಗ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಬಹುದೊಡ್ಡ ಗದ್ದಲವೇ ನಡೆದುಹೋಯಿತು.
ಶೂನ್ಯ ವೇಳೆಯಲ್ಲಿ ಎಲ್ಪಿಜಿ ಸಿಲಿಂಡರ್ ಅಭಾವದ ಬಗ್ಗೆ ಪ್ರಸ್ತಾಪಿಸಲಾಯಿತು. ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕನ ನಡುವೆ ವಾಗ್ವಾದ ನಡೆಯಿತು. ವಾಣಿಜ್ಯ ಬಳಕೆ ಸಿಲಿಂಡರ್ ಬರ್ಲಿಲ್ಲ ಅಂದರೆ ಚಳವಳಿ ಮಾಡಬೇಕಾಗುತ್ತದೆ. ನಾವು ಚಳವಳಿ ಹಾಗು ಬಂದ್ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ ಎಂದು ಸಿಎಂ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಪ್ರಧಾನ ಮಂತ್ರಿ ಮೋದಿ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ಸದನದಲ್ಲಿ ಗದ್ದಲ ನಡೆದಿದ್ದು ಶಾಸಕ ರಂಗನಾಥ ಮೇಲೆ ವಿಪಕ್ಷ ನಾಯಕರು ಮುಗಿಬಿದ್ದಿದ್ದಾರೆ. ಕುಣಿಗಲ್ ಕಾಂಗ್ರೆಸ್ ಶಾಸಕ ಕೆರಗನಾಥ ಪ್ರಸ್ತಾಪಿಸಿದ್ದು 900 ಸಿಲಿಂಡರ್ ಗೆ 1800 ಕೊಡಬೇಕಾಗಿದೆ. ಇದಕ್ಕೆ ಕಾರಣ ಏನು ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪ್ರಧಾನ ಮೋದಿ ನೇರವಾಗಿ ಕಾರಣರಾಗಿದ್ದಾರೆ ಎಂದು ಆರೋಪಿಸಿದರು. ಯಾವಾಗ ಮೋದಿ ಹೆಸರು ಪ್ರಸ್ತಾಪಿಸಿದರೊ ಆಗ ವಿಪಕ್ಷ ನಾಯಕರು ರಂಗನಾಥ್ ಅವರ ಮೇಲೆ ಮುಗಿಬಿದ್ದರು.
ಈ ವೇಳೆ ಪ್ರಿಯಾಂಕ ಖರ್ಗೆ ಮಧ್ಯ ಪ್ರವೇಶಿಸಿ ಗ್ಯಾಸ್ ಪೂರೈಕೆ ಮಾಡಬೇಕಾಗಿರುವುದು ಕೇಂದ್ರ ಸರ್ಕಾರ ಅಲ್ಲವೇ? ಇಸ್ರೇಲ್ ಗೆ ಹೋಗಿ ಬೀಚ್ ನಲ್ಲಿ ನೇತನ್ಯಾಹು ಕೈ ಹಿಡಿದು ಓಡಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಯಾಕೆ ಪ್ರಧಾನಿ ಮೋದಿ ಮಾತನಾಡುತ್ತಿಲ್ಲ? ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯದ ಬಗ್ಗೆ ಬಾಯಿ ಬಿಡುತ್ತಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ ಖರ್ಗೆ ಪ್ರಶ್ನಿಸಿದರು ಈ ವೇಳೆ ಪ್ರಿಯಾಂಕ ಖರ್ಗೆ ಮೇಲು ಕೂಡ ವಿಪಕ್ಷ ಸದಸ್ಯರು ಮುಗಿಬಿದ್ದರು.








