Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಸ್ರೇಲ್ ದಾಳಿಯಲ್ಲಿ ಗಾಯಗೊಂಡಿಲ್ಲ ಖಮೇನಿ ಪುತ್ರ: ಇರಾನ್ ಅಧ್ಯಕ್ಷರ ಮಗನಿಂದಲೇ ಸಿಕ್ಕಿತು ಅಧಿಕೃತ ಮಾಹಿತಿ!

11/03/2026 1:05 PM

ಚುನಾವಣಾ ಕಣವಾದ ಮಂಗಳೂರು ಕಾಲೇಜುಗಳು : ಬಜೆಟ್ ನಲ್ಲಿ ಘೋಷಣೆ ಬೆನ್ನಲ್ಲೆ ವಿದ್ಯಾರ್ಥಿಗಳ ಮಧ್ಯ ಬಿಗ್ ಫೈಟ್!

11/03/2026 1:02 PM

BREAKING: ವದಂತಿಗಳಿಗೆ ಬ್ರೇಕ್: ಇರಾನ್ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಸುರಕ್ಷಿತ; ಅಧ್ಯಕ್ಷರ ಪುತ್ರನಿಂದ ಅಧಿಕೃತ ಮಾಹಿತಿ!

11/03/2026 1:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚುನಾವಣಾ ಕಣವಾದ ಮಂಗಳೂರು ಕಾಲೇಜುಗಳು : ಬಜೆಟ್ ನಲ್ಲಿ ಘೋಷಣೆ ಬೆನ್ನಲ್ಲೆ ವಿದ್ಯಾರ್ಥಿಗಳ ಮಧ್ಯ ಬಿಗ್ ಫೈಟ್!
KARNATAKA

ಚುನಾವಣಾ ಕಣವಾದ ಮಂಗಳೂರು ಕಾಲೇಜುಗಳು : ಬಜೆಟ್ ನಲ್ಲಿ ಘೋಷಣೆ ಬೆನ್ನಲ್ಲೆ ವಿದ್ಯಾರ್ಥಿಗಳ ಮಧ್ಯ ಬಿಗ್ ಫೈಟ್!

By kannadanewsnow0511/03/2026 1:02 PM

ಮಂಗಳೂರು: ಬಜೆಟ್‌ನಲ್ಲಿ ಕಾಲೇಜು ಚುನಾವಣೆ ನಡೆಸುವ ಕುರಿತು ಘೋಷಣೆಯಾಗುತ್ತಿದ್ದಂತೆ ಕರಾವಳಿಯ ಶೈಕ್ಷಣಿಕ ನಗರಿ ಮಂಗಳೂರಿನಲ್ಲಿ ಚುನಾವಣಾ ಕಾವು ಏರತೊಡಗಿದೆ. ಆದರೆ, ಈ ಸಂಭ್ರಮದ ನಡುವೆಯೇ ವಿದ್ಯಾರ್ಥಿ ಸಂಘಟನೆಗಳ ನಡುವೆ ಭಾರಿ ಸಂಘರ್ಷ ಏರ್ಪಟ್ಟಿದ್ದು, ಕ್ಯಾಂಪಸ್‌ ಅಂಗಳ ಈಗ ರಣರಂಗವಾಗಿ ಮಾರ್ಪಟ್ಟಿದೆ.

ಬಜೆಟ್‌ನಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗೆ ಹಸಿರು ನಿಶಾನೆ ಸಿಕ್ಕಿದ್ದೇ ತಡ, ಮಂಗಳೂರಿನ ಪ್ರಮುಖ ಕಾಲೇಜುಗಳಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ತಮ್ಮ ಅಸ್ತಿತ್ವ ಪ್ರದರ್ಶಿಸಲು ಮುಂದಾಗಿವೆ. ಈ ವೇಳೆ ಪೋಸ್ಟರ್ ಅಂಟಿಸುವ ವಿಚಾರ ಹಾಗೂ ಪ್ರಚಾರದ ಹಮ್ಮುವಿಕೆ ಕುರಿತು ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿ ಸಂಘದ ಚುನಾವಣೆ ಘೋಷಣೆ ಮಾಡಿದ್ದು ಅಷ್ಟೇ, ಇನ್ನು ಅದು ಅಧಿಕೃತವಾಗಿ ಜಾರಿಗೆ ಬಂದಿಲ್ಲ. ಅಷ್ಟರಲ್ಲೇ ಮಂಗಳೂರಿನ ಪ್ರತಿಷ್ಠಿತ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ರಾಜಕೀಯ ಕಿಚ್ಚು ಭುಗಿಲೆದ್ದಿದೆ. ಕಾಂಗ್ರೆಸ್ ಬೆಂಬಲಿತ NSUI ಮತ್ತು ಬಿಜೆಪಿ ಬೆಂಬಲಿತ ABVP ಕಾರ್ಯಕರ್ತರ ನಡುವಿನ ಜಿದ್ದಾಜಿದ್ದಿನಿಂದ ಕಾಲೇಜು ಆವರಣ ರಣರಂಗವಾಗಿ ಮಾರ್ಪಟ್ಟಿದೆ.

ಶೈಕ್ಷಣಿಕ ಚಟುವಟಿಕೆಗೆ ಅಡ್ಡಿಪಡಿಸಿ ಕಾಲೇಜನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಎಬಿವಿಪಿ ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗ ರಸ್ತೆ ತಡೆ ನಡೆಸಿದರು. ರಾಜಕೀಯ ಘೋಷಣೆ ಕೂಗಲು ಅವಕಾಶ ನೀಡಿದ ಪ್ರಾಂಶುಪಾಲ ಗಣಪತಿ ಗೌಡ ಅವರ ವಿರುದ್ಧ ಧಿಕ್ಕಾರ ಕೂಗಲಾಯಿತು. ವಿದ್ಯಾರ್ಥಿಗಳ ವಾಗ್ವಾದಕ್ಕೆ ಪ್ರಾಂಶುಪಾಲರು ತತ್ತರಿಸಿ ಹೋದರು.

ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ವಿದ್ಯಾರ್ಥಿಗಳು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ಕಾಲೇಜು ಆವರಣದಲ್ಲೇ ವಿದ್ಯಾರ್ಥಿಗಳ ನಡುವೆ ‘ಬಿಗ್ ಫೈಟ್’ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಕಾಲೇಜು ಆಡಳಿತ ಮಂಡಳಿ ಹರಸಾಹಸ ಪಡುತ್ತಿದೆ. ಘಟನೆಯಿಂದಾಗಿ ಇತರೆ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ಕಾಲೇಜುಗಳ ಬಳಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

Share. Facebook Twitter LinkedIn WhatsApp Email

Related Posts

ರಾಜ್ಯದ `ನಿಗಮ-ಮಂಡಳಿ ಅಧ್ಯಕ್ಷರಿಗೆ’ ಸರ್ಕಾರದಿಂದ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು !

11/03/2026 12:45 PM1 Min Read

BREAKING : ಖ್ಯಾತ ಸಂಗೀತ ನಿರ್ದೇಶಕ, ನಿರ್ಮಾಪಕ `ಥಕ್ಕಲಿ ಶ್ರೀನಿವಾಸನ್’ ನಿಧನ | Srinivasan passes away

11/03/2026 12:36 PM1 Min Read

BIG NEWS : ಹಗಲಿರುಳು ದುಡಿಯುವ ಪೊಲೀಸರಿಗಿಲ್ಲ ವೇತನ : ಪೇದೆಗಳ ಹೊಟ್ಟೆ ಮೇಲೆ ಹೊಡೆದ ರಾಜ್ಯ ಸರ್ಕಾರ!

11/03/2026 12:34 PM2 Mins Read
Recent News

ಇಸ್ರೇಲ್ ದಾಳಿಯಲ್ಲಿ ಗಾಯಗೊಂಡಿಲ್ಲ ಖಮೇನಿ ಪುತ್ರ: ಇರಾನ್ ಅಧ್ಯಕ್ಷರ ಮಗನಿಂದಲೇ ಸಿಕ್ಕಿತು ಅಧಿಕೃತ ಮಾಹಿತಿ!

11/03/2026 1:05 PM

ಚುನಾವಣಾ ಕಣವಾದ ಮಂಗಳೂರು ಕಾಲೇಜುಗಳು : ಬಜೆಟ್ ನಲ್ಲಿ ಘೋಷಣೆ ಬೆನ್ನಲ್ಲೆ ವಿದ್ಯಾರ್ಥಿಗಳ ಮಧ್ಯ ಬಿಗ್ ಫೈಟ್!

11/03/2026 1:02 PM

BREAKING: ವದಂತಿಗಳಿಗೆ ಬ್ರೇಕ್: ಇರಾನ್ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಸುರಕ್ಷಿತ; ಅಧ್ಯಕ್ಷರ ಪುತ್ರನಿಂದ ಅಧಿಕೃತ ಮಾಹಿತಿ!

11/03/2026 1:00 PM

ರಂಜಾನ್ ವೇಳೆಯೇ ಅಫ್ಘಾನ್ ಮೇಲೆ ಬಾಂಬ್ ದಾಳಿ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಮುಖವಾಡ ಕಳಚಿದ ಭಾರತ!

11/03/2026 12:50 PM
State News
KARNATAKA

ಚುನಾವಣಾ ಕಣವಾದ ಮಂಗಳೂರು ಕಾಲೇಜುಗಳು : ಬಜೆಟ್ ನಲ್ಲಿ ಘೋಷಣೆ ಬೆನ್ನಲ್ಲೆ ವಿದ್ಯಾರ್ಥಿಗಳ ಮಧ್ಯ ಬಿಗ್ ಫೈಟ್!

By kannadanewsnow0511/03/2026 1:02 PM KARNATAKA 1 Min Read

ಮಂಗಳೂರು: ಬಜೆಟ್‌ನಲ್ಲಿ ಕಾಲೇಜು ಚುನಾವಣೆ ನಡೆಸುವ ಕುರಿತು ಘೋಷಣೆಯಾಗುತ್ತಿದ್ದಂತೆ ಕರಾವಳಿಯ ಶೈಕ್ಷಣಿಕ ನಗರಿ ಮಂಗಳೂರಿನಲ್ಲಿ ಚುನಾವಣಾ ಕಾವು ಏರತೊಡಗಿದೆ. ಆದರೆ,…

ರಾಜ್ಯದ `ನಿಗಮ-ಮಂಡಳಿ ಅಧ್ಯಕ್ಷರಿಗೆ’ ಸರ್ಕಾರದಿಂದ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು !

11/03/2026 12:45 PM

BREAKING : ಖ್ಯಾತ ಸಂಗೀತ ನಿರ್ದೇಶಕ, ನಿರ್ಮಾಪಕ `ಥಕ್ಕಲಿ ಶ್ರೀನಿವಾಸನ್’ ನಿಧನ | Srinivasan passes away

11/03/2026 12:36 PM

BIG NEWS : ಹಗಲಿರುಳು ದುಡಿಯುವ ಪೊಲೀಸರಿಗಿಲ್ಲ ವೇತನ : ಪೇದೆಗಳ ಹೊಟ್ಟೆ ಮೇಲೆ ಹೊಡೆದ ರಾಜ್ಯ ಸರ್ಕಾರ!

11/03/2026 12:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.