ಕಲಬುರ್ಗಿ : ಇರಾನ್ ಇಸ್ರೇಲ್ ಯುದ್ಧದ ಪರಿಣಾಮ ಭಾರತದ ಮೇಲು ಬೀರಿದೆ. ಹಾಗಾಗಿ ಭಾರತದಲ್ಲಿ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು ಇದೀಗ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ವಿಚಾರವಾಗಿ ಕಲ್ಬುರ್ಗಿಯಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿಲಿಂಡರ್ ದರ ಏರಿಕೆ ಬಗ್ಗೆ ಬಿಜೆಪಿಯವರ ಬಳಿ ಕೇಳಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಲ್ಬುರ್ಗಿಯಲ್ಲಿ ಮಾತನಾಡಿದ ಅವರು ವಿಜಯ ರಶ್ಮಿಕ ಭೇಟಿ ಆಗೋಕೆ ಪ್ರಧಾನಿ ಮೋದಿಗೆ ಸಮಯವಿದೆ. ನಾಳೆ ಭಾರತ ನ್ಯೂಜಿಲೆಂಡ್ ಫೈನಲ್ ಪದ್ಯ ವೀಕ್ಷಣೆಗೆ ಕೂಡ ಅವರು ಹೋಗಬಹುದು. ಕೇಂದ್ರ ಸರ್ಕಾರದವರು ವಿದೇಶಾಂಗ ನೀತಿಯನ್ನು ಅಡ್ಡ ಇಟ್ಟಿದ್ದಾರೆ. ದೆಹಲಿಗೆ ಬಂದು ಯುಎಸ್ಎ ವಿದೇಶಾಂಗ ಉಪ ಕಾರ್ಯದರ್ಶಿ ಹೇಳುತ್ತಾರೆ.ಭಾರತವನ್ನು ಚೀನಾದಷ್ಟು ಬೆಳೆಯುವುದಕ್ಕೆ ಬಿಡುವುದಿಲ್ಲ ಎನ್ನುತ್ತಾರೆ.
ಇದನ್ನು ಕೇಂದ್ರ ಸರ್ಕಾರದ ಒಬ್ಬರಾದರೂ ಮಂತ್ರಿ ವಿರೋಧಿಸಿದರ? ಯಾಕೆ ಭಾರತದ ಸಚಿವರು ವಿರೋಧ ಮಾಡುತ್ತಿಲ್ಲ? ನೇರವಾಗಿ ಮೋದಿ ಹಾಗೂ ಭಾರತದ ಮರ್ಯಾದೆ ಹಾಳಾಗುತ್ತಿದೆ. ಇವಾಗ ಆರ್ ಎಸ್ ಎಸ್ ನವರು ಎಲ್ಲಿದ್ದಾರೆ? ಎಪ್ ಸ್ಟೀನ್ ಫೈಲ್ಸ್ ನಲ್ಲಿ ಏನಾದರೂ ವಿಡಿಯೋ ಇದೆಯಾ? ಮೋದಿ ರಾಜಕೀಯವನ್ನು ನಾಶ ಮಾಡುತ್ತೇವೆ ಅಂತ ಹೇಳುತ್ತಾರೆ ಎಂದು ಪ್ರಿಯಾಂಕ ಖರ್ಗೆ ಹೇಳಿಕೆ ನೀಡಿದರು.








