ಬೆಳಗಾವಿ : ಅನ್ಯಕೋಮಿನ ಯುವಕರು ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳನ್ನು ಶ್ರೀರಾಮಸೇನೆ ಕಾರ್ಯಕರ್ತರು ತಡೆದಿದ್ದಕ್ಕೆ ಐವರನ್ನು ಮರಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀರಾಮ ಸೇನೆ ಕಾರ್ಯಕರ್ತರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕಾರ್ಯಕರ್ತರ ವಿರುದ್ಧವೇ FIR ದಾಖಲಾಗಿದೆ.
ಹೌದು ಅನ್ಯಕೋಮೀನ ಕೆಲವು ಜನ ಗೋವುಗಳನ್ನು ಖಸಾಯಿಕಾನೆಗೆ ಹಸುಗಳನ್ನು ಸಾಗಿಸುತ್ತಿದ್ದ ಮಾಹಿತಿ ತಿಳಿದು ಶ್ರೀರಾಮಸೇನೆ ಕಾರ್ಯಕರ್ತರು ಅದನ್ನು ತಡೆದಿದ್ದಾರೆ. ಬಳಿಕ ಮರಕೆ ಕಟ್ಟಿ ಹಾಕಿ ಗೋವುಗಳನ್ನು ರಕ್ಷಿಸಿದ ಹಾಗೂ ಹೊಡೆತದಿಂದ ಶ್ರೀರಾಮ ಸೇನೆ ಕಾರ್ಯಕರ್ತರ ವಿರುದ್ಧವೆ ಇದೀಗ ‘FIR ದಾಖಲಾಗಿದ್ದು, BNS ಕಾಯ್ದೆ 189(2), 192(2), 115(2), 352(2), 126(2), ಹಾಗು 190 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಮಹಾವೀರ ಸೊಲ್ಲಾಪುರೆ ಎನ್ನುವವರು ಮಹಿಳೆಯರ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
SP ಭೀಮಾಶಂಕರ್ ಗುಳೇದ ಸ್ಪಷ್ಟನೆ
ಈ ವಿಷಯಕ್ಕೆ ಸಂಬಂಧಿಸಿದಂತೆ ಬೆಳಗಾವಿ ಎಸ್ ಪಿ ಭೀಮಾಶಂಕರ್ ಗುಳೇದ್ ಸ್ಪಷ್ಟನೆ ನೀಡಿದ್ದು, ಇದು ಜೂನ್ 26 ರಂದು ನಡೆದ ಘಟನೆ. ಈ ಗೋರಕ್ಷಕರು ಮಹಿಳೆಯರು ಇದ್ದ ಮನೆಯಲ್ಲಿ ಕಂಡುಬಂದು ಕ್ರಿಮಿನಲ್ ದೌರ್ಜನ್ಯ ನಡೆದಿದ್ದರಿಂದ ಮತ್ತು ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದರಿಂದ ಗೋರಕ್ಷಕರನ್ನು ಎಲ್ಲಾ ಸಮುದಾಯಗಳ ಗ್ರಾಮಸ್ಥರು (ಮುಸ್ಲಿಮರು ಮಾತ್ರವಲ್ಲ) ಥಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಶ್ರೀರಾಮ ಸೇನೆ ಕಾರ್ಯಕರ್ತರು ಆ ರೀತಿ ಏನೂ ಆಗಿಲ್ಲ ಎಂದು ಲಿಖಿತ ರೂಪದಲ್ಲಿ ಹೇಳಿಕೆ ನೀಡಿದ್ದಾರೆ. ಇದರ ಹೊರತಾಗಿಯೂ ಗುಂಪು ಹಲ್ಲೆಯ ವಿಡಿಯೋ ಕಾಣಿಸಿಕೊಂಡ ನಂತರ ಪೊಲೀಸರು ಶ್ರೀರಾಮಸೇನೆ ಕಾರ್ಯಕರ್ತರಿಗೆ ಲಿಖಿತ ದೂರು ನೀಡುವಂತೆ ವಿನಂತಿಸಿದರು. ಆದರೆ ಅವರು ಯಾವುದೇ ದೂರು ಇಲ್ಲ ಎಂದು ಹೇಳಿಕೆ ನೀಡಿದರು. ಈಗ ಯಾವುದೇ ದೂರು ನೀಡದ ಕಾರಣ, ವೈರಲ್ ಆಗಿರುವ ವಿಡಿಯೋ ಆಧರಿಸಿ ನಾವು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಎಂದು ಎಸ್ಪಿ ಪ್ರತಿಕ್ರಿಯೆ ನೀಡಿದರು.