ಬೆಂಗಳೂರು: ರಾಜ್ಯದ ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಬೆಂಗಳೂರು-ಚಿಕ್ಕತಿರುಪತಿ-ಕೋಟಿಲಿಂಗೇಶ್ವರ-ಬಂಗಾರು ತಿರುಪತಿ-ಆವಣಿ-ಮುಳಬಾಗಿಲು-ಕುರುಡುಮಲೆ-ಕೋಲಾರ ಮಾರ್ಗದಲ್ಲಿ KSRTCಯಿಂದ ಪ್ಯಾಕೇಜ್ ಟೂರ್ ಆರಂಭಿಸಲಾಗಿದೆ.
ಈ ಬಗ್ಗೆ ಕೆ ಎಸ್ ಆರ್ ಟಿ ಸಿ ಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ “ಬೆಂಗಳೂರು-ಚಿಕ್ಕತಿರುಪತಿ-ಕೋಟಿಲಿಂಗೇಶ್ವರ-ಬಂಗಾರು ತಿರುಪತಿ-ಆವಣಿ-ಮುಳಬಾಗಿಲು-ಕುರುಡುಮಲೆ-ಕೋಲಾರ” ಮಾರ್ಗದಲ್ಲಿ ಅಶ್ವಮೇಧ ಕ್ಲಾಸಿಕ್ ಸಾರಿಗೆಯನ್ನು ವಾರಾಂತ್ಯದ ದಿನಗಳಲ್ಲಿ (ಶನಿವಾರ & ಭಾನುವಾರ) ಪ್ಯಾಕೇಜ್ ಟೂರನ್ನು (ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನದ/ರಾತ್ರಿ ಊಟವನ್ನು ಹೊರತುಪಡಿಸಿ) ದಿನಾಂಕ: 28-06-2025 ರಿಂದ ಪ್ರಾರಂಭಿಸಿ ಈ ಕೆಳಕಂಡ ವೇಳಾಪಟ್ಟಿಯಂತೆ ಪ್ರಾರಂಭಿಸಲಾಗುತ್ತದೆ ಎಂದಿದೆ.
ಪ್ಯಾಕೇಜ್ ಟೂರ್ ಸಾರಿಗೆಯ ಪ್ರಯಾಣ ದರದ ವಿವರಗಳು
ಅಶ್ವಮೇಧ ಕ್ಲಾಸಿಕ್ ಸಾರಿಗೆ ಪ್ರಯಾಣ ದರವು ವಯಸ್ಕರಿಗೆ ರೂ.600-00 (ಮುಂಗಡ ಬುಕಿಂಗ್ ಸೇರಿ) ಆಗಿದೆ.
ಮಕ್ಕಳಿಗೆ (6 ರಿಂದ 12 ವರ್ಷ) ರೂ.450-00 (ಮುಂಗಡ ಬುಕಿಂಗ್ ಸೇರಿ) ದರ ನಿಗದಿ ಪಡಿಸಲಾಗಿದೆ.
ಸಾರ್ವಜನಿಕ ಪ್ರಯಾಣಿಕರು ಮೇಲೆ ತಿಳಿಸಿರುವ ಪ್ಯಾಕೇಜ್ ಟೂರ್ ಸಾರಿಗೆ ಸೌಲಭ್ಯಕ್ಕಾಗಿ ಟಿಕೇಟ್ ಪಡೆಯಲು ಉಪಯೋಗಿಸುವ ವೆಬ್ ಸೈಟ್: www.ksrtc.in & www.ksrtc.karnataka.gov.in ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ :080-26252625 /7760990100 /7760990560/ 7760990287.
ಪಿಸಿಸಿಎಫ್ ನೇತೃತ್ವದಲ್ಲಿ ಪಶ್ಚಿಮಘಟ್ಟ ಧಾರಣಾಸಾಮರ್ಥ್ಯ ಅಧ್ಯಯನ: ಸಚಿವ ಈಶ್ವರ ಖಂಡ್ರೆ
SHOCKING: ರಾಜ್ಯದಲ್ಲೊಂದು ಮನಕಲಕುವ ಘಟನೆ: ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ನೊಂದು ವೃದ್ಧ ದಂಪತಿ ಆತ್ಮಹತ್ಯೆ