ಚಾಮರಾಜನಗರ : ಪ್ರಿಯತಮೆ ಸೋನಾಕ್ಷಿ ಕೊಂದು ನದಿ ದಡದಲ್ಲಿ ಹೂತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿ ಮಾದೇಶನ ಮನೆಯ ಮೇಲೆ ಸೋನಾಕ್ಷಿ ಕುಟುಂಬಬಸ್ಥರು ದಾಳಿ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮೊಳೆಯಲ್ಲಿ ಆರೋಪಿ ಮಾದೇಶನ ಮನೆಗೆ ಬೆಂಕಿ ಹಾಕಿದ್ದಾರೆ ಮನೆಯ ಮೇಲೆ ದಾಳಿ ನಡೆಸಿ ಸೋನಾಕ್ಷಿ ಕುಟುಂಬಸ್ಥರು ಮಾದೇಶನ ಮನೆಗೆ ಬೆಂಕಿ ಹಚ್ಚಿದ್ದಾರೆ.
ಕಳೆದ ಐದು ದಿನದ ಹಿಂದೆ ಸೋನಾಕ್ಷಿ ತಲೆಗೆ ಹೊಡೆದು ಮಾದೇಶ ಕೊಲೆ ಮಾಡಿದ್ದ. ಹಳೆ ಹಂಪಾಪುರ ಬಳಿ ಸುವರ್ಣಾವತಿ ನದಿ ದಡದಲ್ಲಿ ಆಕೆಯ ಶವ ಹೂತಿದ್ದ. ಎರಡು ಅಡಿ ಹಳ್ಳ ನೋಡಿ ಸೋನಾಕ್ಷಿ ಶವ ಹೂತಿದ್ದ. ಬಳಿಕ ನಾಯಿಗಳು ಶವ ಎಳೆದು ಹೊರಗಡೆ ತಂದಾಗ ಸೋನಾಕ್ಷಿಯ ಕೊಲೆ ಬೆಳಕಿಗೆ ಬಂದಿತ್ತು ಶವ ಪತ್ತೆಯ ಬಗ್ಗೆ ದನ ಮೇಯಿಸುವವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ಮಾದೇಶನನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.
ಕೊಳ್ಳೇಗಾಲ ಟೌನ್ ಠಾಣೆ ಪೋಲಿಸರ ವಶದಲ್ಲಿ ಆರೋಪಿ ಮಾದೇಶ ಇದ್ದಾನೆ. ಪತಿ ಮತ್ತು ಇಬ್ಬರು ಮಕ್ಕಳನ್ನು ತೊರೆದು ಸೋನಾಕ್ಷಿ ಮಾದೇಶನ ಜೊತೆಗೆ ಬಂದಿದ್ದಳು. ಬಳಿಕ ಆತನನ್ನು ಸಹ ತೊರೆದು ಮತ್ತೊರ್ವನ ಜೊತೆಗೆ ಹೋಗಿದ್ದಳು. ಇದೆ ವಿಚಾರವಾಗಿ ಗಲಾಟೆ ಆಗಿ ಸೋನಾಕ್ಷಿಯನ್ನು ಮಾದೇಶ ತನ್ನ ಮನೆಗೆ ಕರೆಸಿ ಕೊಲೆ ಮಾಡಿ ಎರಡು ಅಡಿ ಮಣ್ಣಲ್ಲಿ ಹೂತು ಹಾಕಿದ್ದ.