Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್ : `ಚಿಕ್ಕಮಗಳೂರು-ತಿರುಪತಿ’ ನೂತನ ರೈಲು ಸಂಚಾರ ಆರಂಭ.!

28/06/2025 1:36 PM

ನಿಮ್ಮ ಮನೆಯಲ್ಲಿ ‘ನೊಣ’ಗಳ ಕಾಟ ಹೆಚ್ಚಾಗಿದ್ಯಾ.? ಈ ಸಿಂಪಲ್ ಟಿಪ್ಸ್ ಅನುಸರಿಸಿ

28/06/2025 1:25 PM

BREAKING: ಅಸಾರಾಮ್ ಜಾಮೀನು ಅವಧಿಯನ್ನು ಜು. 7ರವರೆಗೆ ವಿಸ್ತರಿಸಿದ ಗುಜರಾತ್ ಹೈಕೋರ್ಟ್

28/06/2025 1:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಮನೆಯಲ್ಲಿ ‘ನೊಣ’ಗಳ ಕಾಟ ಹೆಚ್ಚಾಗಿದ್ಯಾ.? ಈ ಸಿಂಪಲ್ ಟಿಪ್ಸ್ ಅನುಸರಿಸಿ
INDIA

ನಿಮ್ಮ ಮನೆಯಲ್ಲಿ ‘ನೊಣ’ಗಳ ಕಾಟ ಹೆಚ್ಚಾಗಿದ್ಯಾ.? ಈ ಸಿಂಪಲ್ ಟಿಪ್ಸ್ ಅನುಸರಿಸಿ

By KannadaNewsNow28/06/2025 1:25 PM

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಮಳೆಗಾಲ ಬಂತೆಂದರೆ ಮನೆಯಲ್ಲಿ ನೊಣಗಳ ಕಾಟ ಜಾಸ್ತಿ ಆಗುತ್ತೆ. ಅಡುಗೆ ಮನೆ, ಸ್ನಾನಗೃಹ, ಹಾಲ್ ಎಲ್ಲೆಂದರಲ್ಲಿ ನೊಣಗಳು ಕಾಣಸಿಗುತ್ತವೆ. ಆಹಾರದ ಮೇಲೆ ಕುಳಿತು ಕಿರಿಕಿರಿ ಉಂಟು ಮಾಡುತ್ವೆ, ನೊಣಗಳಿರುವ ಆಹಾರವನ್ನ ಸೇವಿಸುವುದರಿಂದ ಕಾಲರಾ ಮತ್ತು ಭೇದಿಯಂತಹ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಆದ್ರೆ, ಕೆಲವರು ಈ ನೊಣಗಳನ್ನ ಹಿಮ್ಮೆಟ್ಟಿಸಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಸ್ಪ್ರೇಗಳನ್ನ ಬಳಸುತ್ತಾರೆ. ಆದ್ರೆ, ನೆನಪಿರಲಿ, ಅತಿಯಾದ ಕೆಮಿಕಲ್ ಸ್ಪ್ರೇ ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಹೆಚ್ಚು ಆರೋಗ್ಯ ಸಮಸ್ಯೆಗಳನ್ನ ಉಂಟು ಮಾಡುತ್ತದೆ. ಆದ್ದರಿಂದ, ನೀವು ಮನೆಯಲ್ಲಿ ಲಭ್ಯವಿರುವ ನೈಸರ್ಗಿಕ ಉತ್ಪನ್ನಗಳೊಂದಿಗೆ ನೊಣಗಳು ಮತ್ತು ಸೊಳ್ಳೆಗಳನ್ನ ಸುಲಭವಾಗಿ ತೊಡೆದು ಹಾಕಬಹುದು. ಹೇಗೆ.? ಎಂಬುದನ್ನ ಇಲ್ಲಿ ತಿಳಿದುಕೊಳ್ಳೋಣ.

ಉಪ್ಪು ನೀರು : ಸ್ಪ್ರೇ ಬಾಟಲಿಯನ್ನ ನೀರಿನಿಂದ ತುಂಬಿಸಿ ಮತ್ತು ಎರಡು ಚಮಚ ಉಪ್ಪು ಸೇರಿಸಿ. ನೊಣಗಳು ಇರುವಲ್ಲಿ ಈ ದ್ರವವನ್ನ ಸಿಂಪಡಿಸಿ. ನೆಲ ಸ್ವಚ್ಛಗೊಳಿಸುವಾಗ ಉಪ್ಪು ನೀರಿನಿಂದ ನೆಲವನ್ನ ಒರೆಸುವುದು ಉತ್ತಮ ಫಲಿತಾಂಶವನ್ನ ನೀಡುತ್ತದೆ.

ಕರ್ಪೂರದ ಪುಡಿ : ಆರತಿಗೆ ಬಳಸುವ ಕರ್ಪೂರದ ಉಂಡೆಗಳನ್ನ ತೆಗೆದುಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಈ ಪುಡಿಯನ್ನ ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಯಲ್ಲಿ ತುಂಬಿಸಬೇಕು. ನೊಣಗಳು ಕಂಡುಬಂದಲ್ಲಿ ಸಿಂಪಡಿಸಿ. ಹೀಗೆ ಮಾಡಿದರೆ ಒಂದೇ ಒಂದು ನೊಣವೂ ಕಾಣಿಸುವುದಿಲ್ಲ.

2013ರಲ್ಲಿ ‘ಜರ್ನಲ್ ಆಫ್ ಎಂಟಮಾಲಜಿ’ಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಕರ್ಪೂರವು ನೊಣಗಳನ್ನ ಹಿಮ್ಮೆಟ್ಟಿಸುವಲ್ಲಿ ಪರಿಣಾಮಕಾರಿ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅಲ್ಲದೆ, ಕರ್ಪೂರದ ಪುಡಿ ಎರಚುವ ಜಾಗದಲ್ಲಿ ನೊಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರದ ಪ್ರಾಧ್ಯಾಪಕರೂ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.

ತುಳಸಿ ಎಲೆಯ ಪೇಸ್ಟ್ : ಸ್ವಲ್ಪ ತುಳಸಿ ಎಲೆಗಳನ್ನ ತೆಗೆದುಕೊಂಡು ಚೆನ್ನಾಗಿ ಪೇಸ್ಟ್ ಮಾಡಿ. ಈ ಪೇಸ್ಟ್ ನೀರಿನೊಂದಿಗೆ ಮಿಶ್ರಣ ಮಾಡಿ. ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಮನೆಯಲ್ಲಿ ನೊಣಗಳು ಹೆಚ್ಚಾಗಿ ಕಂಡುಬರುವ ಸ್ಥಳಗಳಲ್ಲಿ ದಿನಕ್ಕೆ ಎರಡು ಬಾರಿ ಸಿಂಪಡಿಸಿ. ಹೀಗೆ ಮಾಡಿದರೆ ನೊಣಗಳು ಬರುವುದಿಲ್ಲ.

ದಾಲ್ಚಿನ್ನಿ ಪುಡಿ: ದಾಲ್ಚಿನ್ನಿ ನೊಣಗಳನ್ನ ಹಿಮ್ಮೆಟ್ಟಿಸಲು ತುಂಬಾ ಉಪಯುಕ್ತವಾಗಿದೆ. ಮೊದಲು ಕೆಲವು ದಾಲ್ಚಿನ್ನಿ ತುಂಡುಗಳನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನೊಣಗಳು ಹೆಚ್ಚಾಗಿ ಕಂಡುಬರುವ ಸ್ಥಳಗಳಲ್ಲಿ ಈ ಪುಡಿಯನ್ನ ಸ್ವಲ್ಪ ಸಿಂಪಡಿಸಿ.

ವಿನೆಗರ್ : ಒಂದು ಬಟ್ಟಲಿನಲ್ಲಿ ಆಪಲ್ ಸೈಡರ್ ವಿನೆಗರ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ನೀಲಗಿರಿ ಎಣ್ಣೆಯನ್ನ ಸೇರಿಸಿ. ನಂತರ ಈ ದ್ರವವನ್ನ ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮತ್ತು ನೊಣಗಳು ಹೆಚ್ಚಾಗಿ ಇರುವಲ್ಲಿ ಸಿಂಪಡಿಸಿ. ನೊಣಗಳನ್ನ ದೂರವಿಡಲು ದಿನಕ್ಕೆ ಎರಡು ಬಾರಿ ಸಿಂಪಡಿಸಿ.

ಬಿರಿಯಾನಿ ಎಲೆ : ಮನೆಯಲ್ಲಿ ನೊಣಗಳು ಜಾಸ್ತಿ ಇದ್ದಾಗ ಎರಡು ಬಿರಿಯಾನಿ ಎಲೆಗಳನ್ನ ಸುಟ್ಟು ಹಾಕಿ. ಈ ಎಲೆಗಳ ಹೊಗೆಯಿಂದ ನೊಣಗಳೂ ಓಡಿಹೋಗುತ್ತವೆ.

Is your home plagued by flies? Follow these simple tips
Share. Facebook Twitter LinkedIn WhatsApp Email

Related Posts

BREAKING: ಅಸಾರಾಮ್ ಜಾಮೀನು ಅವಧಿಯನ್ನು ಜು. 7ರವರೆಗೆ ವಿಸ್ತರಿಸಿದ ಗುಜರಾತ್ ಹೈಕೋರ್ಟ್

28/06/2025 1:22 PM1 Min Read

ಪಿಎಂ ಕಿಸಾನ್ 20 ನೇ ಕಂತು: ಬಿಡುಗಡೆ ದಿನಾಂಕ, ಫಲಾನುಭವಿ ಪಟ್ಟಿ ಮತ್ತು ಸಂಪೂರ್ಣ ಯೋಜನೆಯ ವಿವರಗಳನ್ನು ಪರಿಶೀಲಿಸಿ | PM kisan

28/06/2025 1:15 PM1 Min Read

ಏರ್ ಇಂಡಿಯಾ ವಿಮಾನ ಅಪಘಾತ ಪ್ರಕರಣ : ತನಿಖಾ ಮುಖ್ಯಸ್ಥರಿಗೆ ಎಕ್ಸ್-ವರ್ಗದ ಭದ್ರತೆ | Air India plane crash

28/06/2025 1:04 PM1 Min Read
Recent News

BREAKING : ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್ : `ಚಿಕ್ಕಮಗಳೂರು-ತಿರುಪತಿ’ ನೂತನ ರೈಲು ಸಂಚಾರ ಆರಂಭ.!

28/06/2025 1:36 PM

ನಿಮ್ಮ ಮನೆಯಲ್ಲಿ ‘ನೊಣ’ಗಳ ಕಾಟ ಹೆಚ್ಚಾಗಿದ್ಯಾ.? ಈ ಸಿಂಪಲ್ ಟಿಪ್ಸ್ ಅನುಸರಿಸಿ

28/06/2025 1:25 PM

BREAKING: ಅಸಾರಾಮ್ ಜಾಮೀನು ಅವಧಿಯನ್ನು ಜು. 7ರವರೆಗೆ ವಿಸ್ತರಿಸಿದ ಗುಜರಾತ್ ಹೈಕೋರ್ಟ್

28/06/2025 1:22 PM

BIG NEWS: ರಾಜ್ಯ ‘ಸರ್ಕಾರಿ ನೌಕರರೇ’ ಗಮನಿಸಿ : ‘ಆರೋಗ್ಯ ಸಂಜೀವಿನಿ ಯೋಜನೆಗೆ’ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ | Arogya Sanjeevini

28/06/2025 1:18 PM
State News
KARNATAKA

BREAKING : ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್ : `ಚಿಕ್ಕಮಗಳೂರು-ತಿರುಪತಿ’ ನೂತನ ರೈಲು ಸಂಚಾರ ಆರಂಭ.!

By kannadanewsnow5728/06/2025 1:36 PM KARNATAKA 1 Min Read

ಚಿಕ್ಕಮಗಳೂರು : ತಿರುಪತಿಯ ಶ್ರೀ ವೆಂಕಟೇಶ್ವರನ ದರ್ಶನಕ್ಕಾಗಿ ಪ್ರಯಾಣಿಸುವ ರಾಜ್ಯದ ಭಕ್ತರಿಗೆ ಸಿಹಿಸುದ್ದಿ ಸಿಕ್ಕಿದ್ದು, ಚಿಕ್ಕಮಗಳೂರಿನಿಂದ ತಿರುಪತಿಗೆ ನೂತನ ರೈಲು…

BIG NEWS: ರಾಜ್ಯ ‘ಸರ್ಕಾರಿ ನೌಕರರೇ’ ಗಮನಿಸಿ : ‘ಆರೋಗ್ಯ ಸಂಜೀವಿನಿ ಯೋಜನೆಗೆ’ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ | Arogya Sanjeevini

28/06/2025 1:18 PM

BREAKING : ಸತೀಶ್ ಜಾರಕಿಹೊಳಿ ‘KPCC’ ಅಧ್ಯಕ್ಷರಾಗಬಹುದು : ಕೆ.ಎನ್ ರಾಜಣ್ಣ ಸ್ಪೋಟಕ ಹೇಳಿಕೆ

28/06/2025 1:16 PM

SHOCKING : ಮನೆಯಲ್ಲಿರುವ `ಫ್ರಿಡ್ಜ್’ ಒಳಗೆ ಅಡಗಿ ಕೂತ `ನಾಗರಹಾವು’ : ಶಾಕಿಂಗ್ ವಿಡಿಯೋ ವೈರಲ್ | WATCH VIDEO

28/06/2025 1:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.