ಶಿವಮೊಗ್ಗ : ದೊಡ್ಮನೆ ರಾಜಕುಮಾರ್ ಕುಟುಂಬದ ನಟ ಯುವರಾಜ್ ಕುಮಾರ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಈಗಾಗಲೇ ಅವರು ಸಲ್ಲಿಸುತ್ತಾರೆ ಈ ವಿಚಾರವಾಗಿ ಶಿವಮೊಗ್ಗದಲ್ಲಿ ನಟ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು ನನಗೆ ಈ ವಿಚಾರವಾಗಿ ಯಾವುದೇ ವಿಷಯ ಗೊತ್ತಿಲ್ಲ. ಗೊತ್ತಿಲದೇ ನಾನು ಯಾವುದೇ ವಿಷಯವನ್ನು ಮಾತನಾಡುವುದಿಲ್ಲ ಎಂದು ತಿಳಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ಗೊತ್ತಿದ್ರೆ ಮಾತ್ರ ಮಾತಾಡಬೇಕು. ಗೊತ್ತಿಲ್ಲದೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲ್ಲ ಅದು ಅವರವರ ವೈಯಕ್ತಿಕ ವಿಚಾರ. ನಾನು ಮಾತಾಡೋದು ಸರಿಯಲ್ಲ. ಬೆಂಗಳೂರಿಗೆ ನಾನು ಹೋಗುತ್ತಿದ್ದೇನೆ ಏನಾಗುತ್ತದೆ ನೋಡೋಣ ಎಂದು ಶಿವಮೊಗ್ಗದಲ್ಲಿ ನಟ ಶಿವರಾಜ್ ಕುಮಾರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಇದೇ ವಿಚಾರವಾಗಿ ಗೀತಾ ಶಿವರಾಜಕುಮಾರ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ಇದು ನಮ್ಮ ಮನೆಯ ಒಂದು ವಿಚಾರ ವೈಯಕ್ತಿಕ ವಿಚಾರವಾಗಿರುವುದರಿಂದ ಈ ವಿಚಾರವಾಗಿ ನಾನು ಯಾವುದೇ ಹೇಳಿಕೆಗಳನ್ನು ನೀಡಲು ಇಷ್ಟಪಡುವುದಿಲ್ಲ ಎಂದು ಗೀದಾ ಶಿವರಾಜಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.