Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಹಿಂದೂ ಆಗಿರಲು ದೇವಸ್ಥಾನಕ್ಕೆ ಹೋಗುವುದು ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ | Supreme Court

ಏನಿದು ‘ಡೋರ್‌ಬೆಲ್ ಫ್ರೆಂಡ್’ ಟ್ರೆಂಡ್? ಆಪ್ತ ಸಂಬಂಧಗಳಿಗೆ ಹೊಸ ಅರ್ಥ ನೀಡುತ್ತಿರುವ ವಿಭಿನ್ನ ಸ್ನೇಹದ ಪರಿಕಲ್ಪನೆ!

ಯುದ್ಧದ ಭೀತಿಯ ನಡುವೆಯೇ ಹಾರ್ಮುಜ್ ಜಲಸಂಧಿ ದಾಟಿದ ಭಾರತದ ಎಲ್‌ಪಿಜಿ ಟ್ಯಾಂಕರ್; ಮಂಗಳೂರು ಬಂದರಿನತ್ತ ಮತ್ತೊಂದು ಹಡಗು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜಸ್ಥಾನದಲ್ಲಿ ‘ವಿರೋಶ್’ ಕಲ್ಯಾಣೋತ್ಸವ: ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ರಶ್ಮಿಕಾ-ವಿಜಯ್ ದೇವರಕೊಂಡ!
KARNATAKA

ರಾಜಸ್ಥಾನದಲ್ಲಿ ‘ವಿರೋಶ್’ ಕಲ್ಯಾಣೋತ್ಸವ: ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ರಶ್ಮಿಕಾ-ವಿಜಯ್ ದೇವರಕೊಂಡ!

By kannadanewsnow57

ಉದಯಪುರ: ದಕ್ಷಿಣ ಭಾರತದ ಮೋಸ್ಟ್ ಹ್ಯಾಪನಿಂಗ್ ಜೋಡಿ ಎಂದೇ ಖ್ಯಾತರಾಗಿರುವ ‘ನ್ಯಾಷನಲ್ ಕ್ರಷ್’ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ರೌಡಿ ಸ್ಟಾರ್ ವಿಜಯ್ ದೇವರಕೊಂಡ ಅವರ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಅಭಿಮಾನಿಗಳ ಅಚ್ಚುಮೆಚ್ಚಿನ ‘ವಿರೋಶ್’ (ViRash) ಜೋಡಿ ಇಂದು ರಾಜಸ್ಥಾನದ ಅರಾವಳಿ ಬೆಟ್ಟಗಳ ತಪ್ಪಲಿನಲ್ಲಿ ರಾಜವೈಭವದ ನಡುವೆ ಹಸೆಮಣೆ ಏರಲಿದ್ದಾರೆ.

10 ಕೋಟಿ ರೂಪಾಯಿ ವೆಚ್ಚದ ಐಷಾರಾಮಿ ರೆಸಾರ್ಟ್!

ಈ ಅದ್ದೂರಿ ವಿವಾಹಕ್ಕೆ ಉದಯಪುರದ ಅತ್ಯಂತ ಸುಂದರವಾದ ‘ಐಟಿಸಿ ಮೆಮೆಂಟೋಸ್’ (ITC Mementos) ಲಕ್ಸುರಿ ರೆಸಾರ್ಟ್ ಸಾಕ್ಷಿಯಾಗುತ್ತಿದೆ. ಈ ಮದುವೆಯ ವೈಭವದ ಕೆಲವು ಮುಖ್ಯಾಂಶಗಳು ಇಲ್ಲಿವೆ:

ಬಾಡಿಗೆ ವಿವರ: ಈ ರೆಸಾರ್ಟ್‌ನ ಒಂದು ದಿನದ ಬಾಡಿಗೆ ಸುಮಾರು 2 ಕೋಟಿ ರೂ. ಎನ್ನಲಾಗುತ್ತಿದ್ದು, ಐದು ದಿನಗಳ ಕಾಲ ಸಂಪೂರ್ಣವಾಗಿ ಬುಕ್ ಮಾಡಲಾಗಿದೆ. ಕೇವಲ ವಾಸ್ತವ್ಯಕ್ಕಾಗಿಯೇ ಸುಮಾರು 10 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.

ರಾಯಲ್ ವಿಲ್ಲಾಗಳು: ಇಲ್ಲಿರುವ 120 ಐಷಾರಾಮಿ ವಿಲ್ಲಾಗಳು ಅತಿಥಿಗಳಿಗೆ ರಾಜವೈಭವದ ಅನುಭವ ನೀಡಲಿವೆ.

ಭರ್ಜರಿ ಊಟ: ಒಂದು ಪ್ಲೇಟ್ ಊಟದ ವೆಚ್ಚ ಅಂದಾಜು 3,000 ದಿಂದ 6,000 ರೂ. ವರೆಗೂ ಇದೆ ಎನ್ನಲಾಗಿದೆ.

ರಶ್ಮಿಕಾ ವಿಜಯ್ ದೇವರಕೊಂಡ ಜೋಡಿಗೆ ಪ್ರಧಾನಿ ಮೋದಿ ಶುಭ ಹಾರೈಕೆ

ಮದುವೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ದಂಪತಿಗೆ ಶುಭಾಶಯ ಕೋರಿದ್ದಾರೆ ಮತ್ತು ಅವರಿಗೆ ‘ಆಶೀರ್ವಾದ ಮತ್ತು ಶುಭಾಶಯಗಳು’ ಕಳುಹಿಸಿದ್ದಾರೆ.

ಶ್ರೀಮತಿ ಮಾಧವಿ ಮತ್ತು ಶ್ರೀ ಗೋವರ್ಧನ್ ರಾವ್ ದೇವರಕೊಂಡ ಜೀ, 2026 ರ ಫೆಬ್ರವರಿ 26 ರಂದು ನಡೆಯಲಿರುವ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹಕ್ಕೆ ನೀವು ಆಹ್ವಾನಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ದೇವರಕೊಂಡ ಮತ್ತು ಮಂದಣ್ಣ ಕುಟುಂಬಗಳಿಗೆ ಈ ನಿಜವಾದ ಸಂತೋಷದ ಮತ್ತು ಶುಭ ಸಂದರ್ಭದಲ್ಲಿ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ಇದು ವಿಜಯ್ ಮತ್ತು ರಶ್ಮಿಕಾ ಅವರ ಜೀವನದಲ್ಲಿ ಹೊಸ, ಸುಂದರ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ” ಎಂಬ ಮನೋಭಾವದೊಂದಿಗೆ, ಅಂದರೆ ಏಳು ಹೆಜ್ಜೆಗಳನ್ನು ಒಟ್ಟಿಗೆ ತೆಗೆದುಕೊಂಡ ನಂತರ, ದಂಪತಿಗಳು ಜೀವನಪರ್ಯಂತ ಸ್ನೇಹಿತರಾಗುತ್ತಾರೆ” ಎಂದು ಬರೆದಿದ್ದಾರೆ.

ಖಾಸಗಿತನಕ್ಕೆ ಆದ್ಯತೆ: ಅತಿಥಿಗಳ ಪಟ್ಟಿ ಸೀಮಿತ

ಮದುವೆಯು ಅತ್ಯಂತ ಖಾಸಗಿಯಾಗಿ ನಡೆಯುತ್ತಿದ್ದು, ಕೇವಲ 100 ರಿಂದ 120 ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಅಂತರಾಷ್ಟ್ರೀಯ ಭದ್ರತಾ ಏಜೆನ್ಸಿಯನ್ನು ನಿಯೋಜಿಸಲಾಗಿದ್ದು, ಫೋಟೋಗಳು ಲೀಕ್ ಆಗದಂತೆ ಭಾರಿ ಮುನ್ನೆಚ್ಚರಿಕೆ ವಹಿಸಲಾಗಿದೆ.

ಗಣ್ಯ ಅತಿಥಿಗಳು: ಮುಕೇಶ್ ಅಂಬಾನಿ ಕುಟುಂಬ ಸೇರಿದಂತೆ ದೇಶದ ಪ್ರಮುಖ ಉದ್ಯಮಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ.

ಸ್ಯಾಂಡಲ್‌ವುಡ್ ತಾರೆಯರು: ಕನ್ನಡ ಚಿತ್ರರಂಗದಿಂದ ಶಿವರಾಜ್‌ಕುಮಾರ್, ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ರವಿಚಂದ್ರನ್, ಧ್ರುವ ಸರ್ಜಾ ಮತ್ತು ಗಣೇಶ್ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ.

ಸಂಪ್ರದಾಯಬದ್ಧ ವಿವಾಹ ಮತ್ತು ಹೈದರಾಬಾದ್‌ನಲ್ಲಿ ರಿಸೆಪ್ಷನ್

ಎರಡೂ ಕುಟುಂಬಗಳ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳು ನಡೆಯಲಿದ್ದು, ಈಗಾಗಲೇ ಪುರೋಹಿತರು ಸ್ಥಳಕ್ಕೆ ತಲುಪಿದ್ದಾರೆ. ಇಂದು (ಫೆಬ್ರವರಿ 26) ವಿವಾಹ ಕಾರ್ಯಕ್ರಮ ಮುಗಿದ ನಂತರ, ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಚಿತ್ರರಂಗದ ಸಹೋದ್ಯೋಗಿಗಳು ಮತ್ತು ಸ್ನೇಹಿತರಿಗಾಗಿ ಅದ್ದೂರಿ ಆರತಕ್ಷತೆ (Grand Reception) ಏರ್ಪಡಿಸಲಾಗಿದೆ. ಈ ಸಮಾರಂಭದಲ್ಲಿ ಬಾಲಿವುಡ್ ಮತ್ತು ಟಾಲಿವುಡ್‌ನ ದಿಗ್ಗಜರು ಭಾಗಿಯಾಗಲಿದ್ದಾರೆ.

'Virosh' wedding festival in Rajasthan: Rashmika-Vijay Devarakonda to enter married life today!
Share. Facebook Twitter LinkedIn WhatsApp Email

Related Posts

Rain Alert : ರಾಜ್ಯದಲ್ಲಿ ಇಂದು, ನಾಳೆ `ಆಲಿಕಲ್ಲು ಮಳೆ’ : ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

1 Min Read

ರೈಲು ಪ್ರಯಾಣಿಕರೇ ಗಮನಿಸಿ : ರೈಲಿನ ಟಿಕೆಟ್ ಕನ್ಫರ್ಮ್ ಆಗುತ್ತೋ ಇಲ್ಲವೋ ಎಂದು ಬುಕ್ಕಿಂಗ್‌ಗೂ ಮುನ್ನವೇ ಹೇಳುತ್ತೆ ಈ ಆಪ್!

2 Mins Read

ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಧರಿಸಬಹುದಾದರೆ ಹಿಂದೂಗಳಿಗೆ ನಾನೇ ಕೇಸರಿ ಶಾಲನ್ನು ಕೊಡುತ್ತೇನೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

1 Min Read
Recent News

BIG NEWS : ಹಿಂದೂ ಆಗಿರಲು ದೇವಸ್ಥಾನಕ್ಕೆ ಹೋಗುವುದು ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ | Supreme Court

ಏನಿದು ‘ಡೋರ್‌ಬೆಲ್ ಫ್ರೆಂಡ್’ ಟ್ರೆಂಡ್? ಆಪ್ತ ಸಂಬಂಧಗಳಿಗೆ ಹೊಸ ಅರ್ಥ ನೀಡುತ್ತಿರುವ ವಿಭಿನ್ನ ಸ್ನೇಹದ ಪರಿಕಲ್ಪನೆ!

ಯುದ್ಧದ ಭೀತಿಯ ನಡುವೆಯೇ ಹಾರ್ಮುಜ್ ಜಲಸಂಧಿ ದಾಟಿದ ಭಾರತದ ಎಲ್‌ಪಿಜಿ ಟ್ಯಾಂಕರ್; ಮಂಗಳೂರು ಬಂದರಿನತ್ತ ಮತ್ತೊಂದು ಹಡಗು

ನೀಟ್ 2026 ವಿವಾದ ಸುಪ್ರೀಂ ಕೋರ್ಟ್ ಅಂಗಳಕ್ಕೆ: ಪರೀಕ್ಷಾ ಸಂಸ್ಥೆ ಬದಲಾವಣೆ ಮತ್ತು ನ್ಯಾಯಾಲಯದ ಉಸ್ತುವಾರಿಯಲ್ಲಿ ಮರುಪರೀಕ್ಷೆಗೆ ಆಗ್ರಹ

State News
KARNATAKA

Rain Alert : ರಾಜ್ಯದಲ್ಲಿ ಇಂದು, ನಾಳೆ `ಆಲಿಕಲ್ಲು ಮಳೆ’ : ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯದ ಜನತೆಗೆ ಒಂದೆಡೆ ಮಳೆಯ ಸಿಹಿ ಸುದ್ದಿ ಸಿಕ್ಕರೆ, ಮತ್ತೊಂದೆಡೆ ಬಿಸಿಲ ಬೇಗೆಯ ಎಚ್ಚರಿಕೆ ಲಭಿಸಿದೆ. ಉತ್ತರ ಒಳನಾಡಿನ…

ರೈಲು ಪ್ರಯಾಣಿಕರೇ ಗಮನಿಸಿ : ರೈಲಿನ ಟಿಕೆಟ್ ಕನ್ಫರ್ಮ್ ಆಗುತ್ತೋ ಇಲ್ಲವೋ ಎಂದು ಬುಕ್ಕಿಂಗ್‌ಗೂ ಮುನ್ನವೇ ಹೇಳುತ್ತೆ ಈ ಆಪ್!

ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಧರಿಸಬಹುದಾದರೆ ಹಿಂದೂಗಳಿಗೆ ನಾನೇ ಕೇಸರಿ ಶಾಲನ್ನು ಕೊಡುತ್ತೇನೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Money

ತಂದೆ ಮಾಡಿದ ಸಾಲವನ್ನು ಮಕ್ಕಳು ತೀರಿಸಬೇಕೇ? ಕಾನೂನು ನಿಯಮಗಳೇನು ತಿಳಿಯಿರಿ | Loan Rules After Death

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.