Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಳೆಯಿಂದ ಶಾಲೆಗಳು ಶುರು; ಸಿಹಿ ಊಟದೊಂದಿಗೆ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ!

ಡಿಕೆಶಿ ಸಿಎಲ್‌ಪಿ ನಾಯಕರಾಗಿ ಆಯ್ಕೆ: ಕಠಿಣ ಕಾರ್ಯವೈಖರಿಗೆ ಸಿಕ್ಕ ಅತ್ಯುನ್ನತ ಗೌರವ ಎಂದ ದಿನೇಶ್ ಗುಂಡೂರಾವ್

Karnataka Politics: ಡಿಕೆಶಿ ಸಂಪುಟದಲ್ಲಿ ಡಿಸಿಎಂ ನಿರೀಕ್ಷೆಯಲ್ಲಿದ್ದವರಿಗೆ ಖರ್ಗೆ ಶಾಕ್: ಸದ್ಯಕ್ಕೆ ಪ್ರಸ್ತಾವನೆ ಇಲ್ಲವೆಂದ ಎಐಸಿಸಿ ಅಧ್ಯಕ್ಷರು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಬೆಚ್ಚಿ ಬೀಳಿಸೋ ಕೃತ್ಯ : ಬಾಲಕನನ್ನು ಕೊಂದು ರಕ್ತ ಕುಡಿದು, ಮಾಂಸ ತಿನ್ನಲು ಯತ್ನಿಸಿದ ಯುವಕ !
INDIA

SHOCKING : ಬೆಚ್ಚಿ ಬೀಳಿಸೋ ಕೃತ್ಯ : ಬಾಲಕನನ್ನು ಕೊಂದು ರಕ್ತ ಕುಡಿದು, ಮಾಂಸ ತಿನ್ನಲು ಯತ್ನಿಸಿದ ಯುವಕ !

By kannadanewsnow57

ದಮೋಹ್ (ಮಧ್ಯಪ್ರದೇಶ): ಸಹೋದರ-ಸಹೋದರಿಯರ ಬಾಂಧವ್ಯದ ಹಬ್ಬವಾದ ‘ಭಾಯ್ ದೂಜ್’ ದಿನದಂದೇ ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ಸಮನ್ನಾ ಗ್ರಾಮದಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತಹ ಭೀಕರ ಘಟನೆಯೊಂದು ನಡೆದಿದೆ. 16 ವರ್ಷದ ಬಾಲಕನನ್ನು ಹಾಡಹಗಲೇ ಹತ್ಯೆಗೈದಿರುವ ದುಷ್ಕರ್ಮಿಯೊಬ್ಬ, ಆತನ ರಕ್ತ ಕುಡಿದು ಮಾಂಸ ತಿನ್ನಲು ಯತ್ನಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಮೃತ ಬಾಲಕನನ್ನು ಭರತ್ ವಿಶ್ವಕರ್ಮ (16) ಎಂದು ಗುರುತಿಸಲಾಗಿದೆ. ಆತ ತನ್ನ ಸಹೋದರಿಯನ್ನು ಭೇಟಿಯಾಗಲು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಘಟನೆಯ ವಿವರ:

ಮಧ್ಯಾಹ್ನ ಸುಮಾರು 1:30ರ ಸುಮಾರಿಗೆ ಭರತ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿ ಗುಡ್ಡಾ ಪಟೇಲ್ ಎಂಬಾತ ಹಿಂದಿನಿಂದ ಬಂದು ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ. ಬಾಲಕ ಕೆಳಗೆ ಬಿದ್ದ ತಕ್ಷಣ ತನ್ನ ಬಳಿಯಿದ್ದ ಸುತ್ತಿಗೆಯಿಂದ ಸತತವಾಗಿ ಹೊಡೆದು ಸ್ಥಳದಲ್ಲಿಯೇ ಕೊಂದಿದ್ದಾನೆ.

ಬೆಚ್ಚಿಬೀಳಿಸಿದ ಪ್ರತ್ಯಕ್ಷದರ್ಶಿಗಳ ಹೇಳಿಕೆ:
ಆರೋಪಿಯು ಬಾಲಕನನ್ನು ಕೊಂದ ನಂತರ ಅಲ್ಲಿಂದ ಪರಾರಿಯಾಗದೆ, ಶವದ ಬಳಿಯೇ ನಿಂತು ರಾಕ್ಷಸನಂತೆ ವರ್ತಿಸಿದ್ದಾನೆ. ಬಾಲಕನ ತಲೆಯಿಂದ ಸೋರುತ್ತಿದ್ದ ರಕ್ತವನ್ನು ಕುಡಿದಿದ್ದಲ್ಲದೆ, ಮಾಂಸವನ್ನು ತಿನ್ನಲು ಯತ್ನಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಭಗವಾನ್‌ದಾಸ್ ಪಟೇಲ್ ಎಂಬುವವರು ತಿಳಿಸಿದ್ದಾರೆ. ಈ ದೃಶ್ಯವನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ನಂತರ ಹೊಲಗಳತ್ತ ಓಡಿಹೋಗಲು ಯತ್ನಿಸಿದ ಆರೋಪಿಯನ್ನು ಗ್ರಾಮಸ್ಥರು ಅಟ್ಟಿಸಿಕೊಂಡು ಹೋಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಯಾವುದೇ ದ್ವೇಷವಿರಲಿಲ್ಲ:
ಬಾಲಕ ಹಾಗೂ ಆರೋಪಿಯ ನಡುವೆ ಯಾವುದೇ ಜಗಳ ಅಥವಾ ಹಳೆಯ ದ್ವೇಷವಿರಲಿಲ್ಲ ಎಂದು ಬಾಲಕನ ಸಹೋದರ ವಿಜಯ್ ವಿಶ್ವಕರ್ಮ ತಿಳಿಸಿದ್ದಾರೆ. ಹಬ್ಬದ ದಿನದಂದು ಸಂಭ್ರಮದಿಂದ ಇರಬೇಕಿದ್ದ ಕುಟುಂಬ ಇದೀಗ ಶೋಕಸಾಗರದಲ್ಲಿ ಮುಳುಗಿದೆ.

ಪೊಲೀಸರ ಪ್ರತಿಕ್ರಿಯೆ ಮತ್ತು ಆರೋಪಿಯ ಹಿನ್ನೆಲೆ:
ದಮೋಹ್‌ನ ಪೊಲೀಸ್ ವರಿಷ್ಠಾಧಿಕಾರಿ (ಸಿಎಸ್‌ಪಿ) ಹೆಚ್.ಆರ್. ಪಾಂಡೆ ಘಟನೆಯನ್ನು ಖಚಿತಪಡಿಸಿದ್ದಾರೆ. ಆರೋಪಿ ಗುಡ್ಡಾ ಪಟೇಲ್ ಈ ಹಿಂದೆ ತನ್ನ ಪತ್ನಿಯನ್ನು ಕೊಂದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದನು. ಆರೋಪಿಗೆ ಮಾನಸಿಕ ಅಸ್ವಸ್ಥತೆ ಇದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಹಿಂಸಾತ್ಮಕ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಮೇಲೆ ನಿಗಾ ಇಡುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಇಡೀ ಸಮನ್ನಾ ಗ್ರಾಮ ಈ ಘಟನೆಯಿಂದ ಬೆಚ್ಚಿಬಿದ್ದಿದ್ದು, ಮೌನ ಆವರಿಸಿದೆ.

and tries to eat flesh! drinks blood SHOCKING: Shocking act: Young man kills boy
Share. Facebook Twitter LinkedIn WhatsApp Email

Related Posts

BIG NEWS : ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆ ದಾಳಿ: ಹೂಗ್ಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ

1 Min Read

BIG NEWS : ಕ್ರಿಮಿನಲ್ ಪ್ರಕರಣದಿಂದ ನೌಕರರು ಖುಲಾಸೆಯಾದರೂ ಬಾಕಿ ವೇತನದ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

2 Mins Read

ವಿಶ್ವದ ನಂ. 1 ಸ್ಥಾನಕ್ಕೇರಿದ ಭಾರತದ ಹೆಮ್ಮೆಯ ‘ಮಸಾಲ ಚಾಯ್’!

2 Mins Read
Recent News

ನಾಳೆಯಿಂದ ಶಾಲೆಗಳು ಶುರು; ಸಿಹಿ ಊಟದೊಂದಿಗೆ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ!

ಡಿಕೆಶಿ ಸಿಎಲ್‌ಪಿ ನಾಯಕರಾಗಿ ಆಯ್ಕೆ: ಕಠಿಣ ಕಾರ್ಯವೈಖರಿಗೆ ಸಿಕ್ಕ ಅತ್ಯುನ್ನತ ಗೌರವ ಎಂದ ದಿನೇಶ್ ಗುಂಡೂರಾವ್

Karnataka Politics: ಡಿಕೆಶಿ ಸಂಪುಟದಲ್ಲಿ ಡಿಸಿಎಂ ನಿರೀಕ್ಷೆಯಲ್ಲಿದ್ದವರಿಗೆ ಖರ್ಗೆ ಶಾಕ್: ಸದ್ಯಕ್ಕೆ ಪ್ರಸ್ತಾವನೆ ಇಲ್ಲವೆಂದ ಎಐಸಿಸಿ ಅಧ್ಯಕ್ಷರು

BIG NEWS : ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆ ದಾಳಿ: ಹೂಗ್ಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ

State News
KARNATAKA

ನಾಳೆಯಿಂದ ಶಾಲೆಗಳು ಶುರು; ಸಿಹಿ ಊಟದೊಂದಿಗೆ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ!

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಶಾಲಾ ವಿದ್ಯಾರ್ಥಿಗಳ ಸುದೀರ್ಘ ಬೇಸಿಗೆ ರಜೆ ಮುಗಿದಿದ್ದು, ಜೂನ್ 1ರಿಂದ (ನಾಳೆ) ರಾಜ್ಯಾದ್ಯಂತ 2026-27ನೇ ಶೈಕ್ಷಣಿಕ ಸಾಲಿನ ತರಗತಿಗಳು…

ಡಿಕೆಶಿ ಸಿಎಲ್‌ಪಿ ನಾಯಕರಾಗಿ ಆಯ್ಕೆ: ಕಠಿಣ ಕಾರ್ಯವೈಖರಿಗೆ ಸಿಕ್ಕ ಅತ್ಯುನ್ನತ ಗೌರವ ಎಂದ ದಿನೇಶ್ ಗುಂಡೂರಾವ್

Karnataka Politics: ಡಿಕೆಶಿ ಸಂಪುಟದಲ್ಲಿ ಡಿಸಿಎಂ ನಿರೀಕ್ಷೆಯಲ್ಲಿದ್ದವರಿಗೆ ಖರ್ಗೆ ಶಾಕ್: ಸದ್ಯಕ್ಕೆ ಪ್ರಸ್ತಾವನೆ ಇಲ್ಲವೆಂದ ಎಐಸಿಸಿ ಅಧ್ಯಕ್ಷರು

ಮದುವೆಯ ಮುಂಚಿನ ವರದಕ್ಷಿಣೆ’ ಒಪ್ಪುವ ಸಮಾಜ, ವಿವಾಹ ಮುರಿದ ನಂತರದ ಜೀವನಾಂಶವನ್ನು ದ್ವೇಷಿಸುವುದೇಕೆ?

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.