ಬಡತನ ಎಂಬುದು ಸಾಧನೆಗೆ ಅಡ್ಡಿಯಲ್ಲ, ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು” ಎಂಬುದಕ್ಕೆ ಪಾವಗಡ ತಾಲೂಕಿನ ಈ ತಂದೆ-ಮಗನ ಜೋಡಿಯೇ ಸಾಕ್ಷಿ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಂಗಾಧರಯ್ಯ ಅವರು ಬೆಂಗಳೂರಿನಲ್ಲಿ ಸೆಕ್ಯೂರಿಟಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಾ, ಅಹೋರಾತ್ರಿ ಕಷ್ಟಪಟ್ಟು ತಮ್ಮ ಮಗನನ್ನು MBBS ಓದಿಸಿ ಇಂದು ವೈದ್ಯನನ್ನಾಗಿ ರೂಪಿಸಿದ್ದಾರೆ.
ಹಸಿವಿನ ನಡುವೆ ಕಂಡ ದೊಡ್ಡ ಕನಸು:
ಗ್ರಾಮೀಣ ಭಾಗದ ಸಾಮಾನ್ಯ ಕುಟುಂಬದಿಂದ ಬಂದ ಗಂಗಾಧರಯ್ಯ ಅವರಿಗೆ ಶಿಕ್ಷಣದ ಮಹತ್ವ ಚೆನ್ನಾಗಿ ತಿಳಿದಿತ್ತು. ಕೂಲಿ ಕೆಲಸವೋ, ಸಣ್ಣಪುಟ್ಟ ಉದ್ಯೋಗವೋ ಯಾವುದನ್ನೂ ಲೆಕ್ಕಿಸದೆ ಮಗನ ಭವಿಷ್ಯಕ್ಕಾಗಿ ಬೆಂಗಳೂರಿಗೆ ಪಯಣ ಬೆಳೆಸಿದರು. ಅಲ್ಲಿ ಸೆಕ್ಯೂರಿಟಿ ಸೂಪರ್ವೈಸರ್ ಆಗಿ ಕೆಲಸಕ್ಕೆ ಸೇರಿದ ಅವರು, ಬರುವ ಅಲ್ಪ ಆದಾಯದಲ್ಲೇ ಮಗನ ದುಬಾರಿ ವೈದ್ಯಕೀಯ ಶಿಕ್ಷಣದ ವೆಚ್ಚವನ್ನು ಸರಿದೂಗಿಸಿದರು.
ತಂದೆಯ ಶ್ರಮಕ್ಕೆ ಮಗನ ಪ್ರತಿಫಲ:
ಮಗ ಕೂಡ ತಂದೆಯ ಕಷ್ಟವನ್ನು ಅರ್ಥಮಾಡಿಕೊಂಡು ರಾತ್ರಿ-ಹಗಲು ಅಭ್ಯಾಸ ಮಾಡಿ ವೈದ್ಯಕೀಯ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಒಬ್ಬ ಸಾಮಾನ್ಯ ಸೆಕ್ಯೂರಿಟಿ ಸೂಪರ್ವೈಸರ್ ಮಗ ಇಂದು ‘ಡಾಕ್ಟರ್’ ಆಗಿ ಹೊರಬಂದಿರುವುದು ಗುಜ್ಜಾರಹಳ್ಳಿ ಗ್ರಾಮಕ್ಕೆ ಮಾತ್ರವಲ್ಲದೆ ಇಡೀ ಪಾವಗಡ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ.
ಗ್ರಾಮಸ್ಥರ ಮೆಚ್ಚುಗೆ: ಗಂಗಾಧರಯ್ಯ ಅವರ ಈ ಸಾಧನೆಯನ್ನು ಕಂಡು ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಸ್ವಂತ ಊರು ಬಿಟ್ಟು ಪರವೂರಿನಲ್ಲಿ ಕಷ್ಟಪಟ್ಟು ಮಗನನ್ನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಸಿದ ಗಂಗಾಧರಯ್ಯ ಅವರು ಎಲ್ಲರಿಗೂ ಮಾದರಿ” ಎಂದು ಗ್ರಾಮಸ್ಥರು ಸಂತಸ ಹಂಚಿಕೊಂಡಿದ್ದಾರೆ.
ಡಾಕ್ಟರ್ ಆಗಿರುವ ಮಗ ಡಾ.ಹರ್ಷವರ್ಧನ್ ಹಾಗೂ ಆತನನ್ನು ಈ ಮಟ್ಟಕ್ಕೆ ತಂದ ತಂದೆ ಗಂಗಾಧರಯ್ಯ ಅವರಿಗೂ ಹೃತ್ಪೂರ್ವಕ ಅಭಿನಂದನೆಗಳು








