Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

JOB ALERT : ಮೇ 12, 13 ರಂದು ಬೃಹತ್ ಉದ್ಯೋಗ ಮೇಳ : 200ಕ್ಕೂ ಹೆಚ್ಚು ಕಂಪನಿಗಳಲ್ಲಿ ಖಾಲಿ ಹುದ್ದೆಗಳ ಭರ್ತಿ.!

06/05/2026 9:17 AM

Big Updates: ಜಲಂಧರ್ ಬಿಎಸ್‌ಎಫ್ ಕೇಂದ್ರ ಕಚೇರಿ ಬಳಿ ಭೀಕರ ಸ್ಫೋಟ: ಸ್ಥಳಕ್ಕೆ ಧಾವಿಸಿದ ಉನ್ನತ ತನಿಖಾ ತಂಡಗಳು!

06/05/2026 9:14 AM

ALERT : ವಾಹನ ಸವಾರರೇ ಈ ತಪ್ಪು ಮಾಡಿದ್ರೆ ನಿಮ್ಮ ` ಫಾಸ್ಟ್ಯಾಗ್’ ಬಂದ್ : NHAI ಹೊಸ ಮಾರ್ಗಸೂಚಿ

06/05/2026 9:04 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ನಿವೃತ್ತ `ಸರ್ಕಾರಿ ನೌಕರರೇ’ ಗಮನಿಸಿ : `ಪಿಂಚಣಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ
KARNATAKA

ರಾಜ್ಯದ ನಿವೃತ್ತ `ಸರ್ಕಾರಿ ನೌಕರರೇ’ ಗಮನಿಸಿ : `ಪಿಂಚಣಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

By kannadanewsnow5716/07/2025 10:11 AM

ಬೆಂಗಳೂರು : 80 ವರ್ಷ ಪೂರೈಸಿದ ಮತ್ತು ಅದಕ್ಕೂ ಮೇಲ್ಮಟ್ಟ ವಯಸ್ಸನ್ನು ಪೂರ್ಣಗೊಳಿಸಿರುವ ರಾಜ್ಯ ಸರ್ಕಾರಿ ಕುಟುಂಬ ಪಿಂಚಣಿದಾರರಿಗೆ ಹೆಚ್ಚುವರಿ ಕುಟುಂಬ ಪಿಂಚಣಿಯನ್ನು ಮಂಜೂರು ಮಾಡುವ ವಿಧಾನವನ್ನು ಸರಳೀಕೃತಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲೆ ಓದಲಾದ (1) ರ ಆದೇಶದಲ್ಲಿ, ದಿನಾಂಕ:01.07.1993 ಕ್ಕಿಂತ ಮುಂಚಿತವಾಗಿ ನಿವೃತ್ತರಾದವರ ಅಥವಾ ಸೇವೆಯಲ್ಲಿರುವಾಗಲೇ ಮೃತರಾದ ಸರ್ಕಾರಿ ನೌಕರರ : ಪ್ರಕರಣಗಳಲ್ಲಿ 80 ರಿಂದ 85, 85 ರಿಂದ 90 ಮತ್ತು 95 ವರ್ಷ ವಯಸ್ಸು ಮೀರಿದವರಿಗೆ ದಿನಾಂಕ 01.04.2006 ರಿಂದ ಜಾರಿಗೆ ಬರುವಂತೆ ಕ್ರಮವಾಗಿ ಅವರ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನದ ಶೇಕಡ 20, ಶೇಕಡ 30 ಮತ್ತು ಶೇಕಡ 50 ರಷ್ಟು ಪಿಂಚಣಿಯನ್ನು ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.

2. ಮೇಲೆ ಓದಲಾದ (2)ರ ಅಧಿಕೃತ ಜ್ಞಾಪನದಲ್ಲಿ, ಪಿಂಚಣಿದಾರ/ಕುಟುಂಬ ಪಿಂಚಣಿದಾರನ ಜನ್ಮ ದಿನಾಂಕವು ಪಿಂಚಣಿ ಪಾವತಿ ಆದೇಶ (ಪಿ.ಪಿ.ಓ.) ದಲ್ಲಿ ಲಭ್ಯವಿಲ್ಲದಿದ್ದಲ್ಲಿ ಪಿಂಚಣಿ ಪಾವತಿ ಪ್ರಾಧೀಕಾರವು ಈ ಬಗ್ಗೆ ಸಂಬಂಧಪಟ್ಟ ಪಿಂಚಣಿದಾರ/ಕುಟುಂಬ ಪಿಂಚಣಿದಾರರಿಗೆ ತಿಳಿಸಿ, ಅವರಿಂದ ಈ ಕೆಳಕಂಡ ಯಾವುದಾದರು’ ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿ/ಎಂ.ಎಲ್.ಎ. ರವರಿಂದ ದೃಢೀಕರಿಸಿಕೊಂಡು ಪಡೆಯತಕ್ಕದ್ದು ಎಂದು ತಿಳಿಸಿದ್ದು, ನಂತರ ಸಂಬಂಧಿಸಿದ ದಾಖಲೆಯನ್ನು ಮಹಾಲೇಖಪಾಲರ ಕಛೇರಿಗೆ ಕಳುಹಿಸಿ, ಅವರಿಂದ ಔಪಚಾರಿಕ ಪ್ರಾಧೀಕರಣವನ್ನು ಪಡೆದು, ದಿ:13.10.2010ರ ಆದೇಶದ ಪ್ರಕಾರ ಹೆಚ್ಚುವರಿ ಪಿಂಚಣಿ/ಕುಟುಂಬ ಪಿಂಚಣಿಯನ್ನು ಪಾವತಿಸಲು ಕ್ರಮ ಕೈಗೊಳ್ಳತಕ್ಕದ್ದು ಎಂದು ತಿಳಿಸಲಾಗಿರುತ್ತದೆ:-

1. ಎಸ್.ಎಸ್.ಎಲ್.ಸಿ. ಸರ್ಟಿಫಿಕೇಟ್ (ಹುಟ್ಟಿದ ದಿನಾಂಕ ಒಳಗೊಂಡಂತೆ)

2. ಪ್ಯಾನ್ ಕಾರ್ಡ್

3. ಪಾಸ್ ಪೋರ್ಟ್

4. ಡ್ರೈವಿಂಗ್ ಲೈಸೆನ್ಸ್ (ಹುಟ್ಟಿದ ದಿನಾಂಕ ಒಳಗೊಂಡಿದ್ದರೆ)

5. ಎಲೆಕ್ಷನ್ ಐ.ಡಿ.ಕಾರ್ಡ್

3. ಮೇಲೆ ಓದಲಾದ (3)ರ ಸರ್ಕಾರದ ಆದೇಶದಲ್ಲಿ, 80 ವರ್ಷ ಪೂರೈಸಿದ ಹಾಗೂ ಅದಕ್ಕೂ ಮೇಲ್ಮಟ್ಟ ವಯಸ್ಸನ್ನು ಪೂರ್ಣಗೊಳಿಸಿದ ಸರ್ಕಾರಿ ಪಿಂಚಣಿದಾರರು/ಕುಟುಂಬ ಪಿಂಚಣಿದಾರರಿಗೆ ದಿನಾಂಕ:01.1.2019ರಿಂದ ಜಾರಿಗೆ ಬರುವಂತೆ ಹೆಚ್ಚುವರಿ ನಿವೃತ್ತಿ ವೇತನ /ಕುಟುಂಬ ನಿವೃತ್ತಿ ವೇತನವನ್ನು ಮಂಜೂರು ಮಾಡಿ ಆದೇಶಿಸಲಾಗಿದೆ ಹಾಗೂ ಪಿಂಚಣಿದಾರರು/ಕುಟುಂಬ ಪಿಂಚಣಿದಾರರು 80 ವರ್ಷ ಪೂರೈಸಿದ ಅಥವಾ ಅದಕ್ಕೂ ಮೇಲ್ಮಟ್ಟ ವಯಸ್ಸನ್ನು ಪೂರ್ಣಗೊಳಿಸಿದಾಗ ಹೆಚ್ಚುವರಿ ಪಿಂಚಣಿ ಮೊತ್ತವನ್ನು ಸದರಿ ಆದೇಶದಲ್ಲಿ ಸೂಚಿಸಿರುವ ದರದಂತೆ ಪಾವತಿಸಲು ಆದೇಶಿಸಲಾಗಿರುತ್ತದೆ.

4. ಪ್ರಸ್ತುತ ಕುಟುಂಬ ಪಿಂಚಣಿದಾರರ ಜನ್ಮ ದಿನಾಂಕವು ಪಿಂಚಣಿ ಪಾವತಿ ಆದೇಶ (ಪಿ.ಪಿ.ಓ.) ದಲ್ಲಿ ಲಭ್ಯವಿಲ್ಲದಿರುವ ಸಂದರ್ಭದಲ್ಲಿ, ಕುಟುಂಬ ಪಿಂಚಣಿದಾರರರಿಗೆ ಹೆಚ್ಚುವರಿ ಪಿಂಚಣಿ ಮಂಜೂರು ಮಾಡಲು ಇರುವ ವಿಧಾನವನ್ನು ಸರಳೀಕರಣಗೊಳಿಸುವ ಕುರಿತು ಸ್ವೀಕೃತವಾಗುತ್ತಿರುವ ಮನವಿಗಳನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

80 ವರ್ಷ ಪೂರೈಸಿರುವ ಹಾಗೂ ಅದಕ್ಕೂ ಮೇಲ್ಮಟ್ಟ ವಯಸ್ಸನ್ನು ಪೂರ್ಣಗೊಳಿಸಿರುವ ರಾಜ್ಯ ಸರ್ಕಾರಿ ಕುಟುಂಬ ಪಿಂಚಣಿದಾರರಿಗೆ ಹೆಚ್ಚುವರಿ ಕುಟುಂಬ ಪಿಂಚಣಿಯನ್ನು ಮಂಜೂರು ಮಾಡಲು ಪಿಂಚಣಿ ಪಾವತಿ ಆದೇಶ (ಪಿಪಿಒ) ದಲ್ಲಿ ಜನ್ಮ ದಿನಾಂಕವು ಲಭ್ಯವಿಲ್ಲದಿದ್ದಲ್ಲಿ ಈ ಕೆಳಕಂಡಂತೆ ಕ್ರಮಕೈಗೊಳ್ಳಲು ಆದೇಶಿಸಿದೆ:

1. ಸರ್ಕಾರದ ಆದೇಶ ಸಂಖ್ಯೆ: ಆಇ-ಪಿಇಎನ್/262/2024, ದಿನಾಂಕ:28.08.2024 ರ ಕಂಡಿಕೆ 11.1 ರಲ್ಲಿ ಸೂಚಿಸಿರುವಂತೆ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಜೊತೆಯಾಗಿ ಲಭ್ಯವಿರುವ ಪಿಂಚಣಿದಾರರ ಪ್ರಕರಣಗಳಲ್ಲಿ ಸಂದರ್ಭಾನುಸಾರ ದಿನಾಂಕ:11.01.2019ರ ಆದೇಶದನ್ವಯ ಲಭ್ಯವಿರುವ ಹೆಚ್ಚುವರಿ ಪಿಂಚಣಿಯ ಸೌಲಭ್ಯವು ಜೀವಂತ ಸದಸ್ಯನ ಪರಿಷ್ಕೃತ ನಿವೃತ್ತಿ ವೇತನಕ್ಕೆ ಮಾತ್ರ ಸೀಮಿತಗೊಳಿಸತಕ್ಕದ್ದು.

2. ಕುಟುಂಬ ಪಿಂಚಣಿಯನ್ನು ಮಾತ್ರ ಪಡೆಯುತ್ತಿರುವ ಕುಟುಂಬ ಪಿಂಚಣಿದಾರರ ಜನ್ಮ ದಿನಾಂಕವು ಪಿಂಚಣಿ ಪಾವತಿ ಆದೇಶ(ಪಿ.ಪಿ.ಓ.)ದಲ್ಲಿ ಲಭ್ಯವಿಲ್ಲದಿದ್ದಲ್ಲಿ, ಅವರು ಕುಟುಂಬ ಪಿಂಚಣಿ ಪಡೆಯುತ್ತಿರುವ ಸಾರ್ವಜನಿಕ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಬ್ಯಾಂಕುಗಳು ನಿರ್ವಹಿಸಿರುವ KYC ಯಲ್ಲಿ, ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಆಇ(ವಿ) 27 ಪಿಇಎನ್ 2007. ದಿನಾಂಕ:06.01.2011 ರಲ್ಲಿ ಸೂಚಿಸಿರುವ ದಾಖಲೆಗಳು ಲಭ್ಯವಿದ್ದಲ್ಲಿ, ಸದರಿ ದಾಖಲೆಗಳಲ್ಲಿ ಲಭ್ಯವಿರುವ ಜನ್ಮ ದಿನಾಂಕವನ್ನು ಪರಿಗಣಿಸಿ, ಸದರಿ ಮಾಹಿತಿಯನ್ನು ಖಜಾನೆಗಳಿಗೆ ನೀಡಲು ಬ್ಯಾಂಕುಗಳು ಕ್ರಮ ಕೈಗೊಳ್ಳುವುದು. ಖಜಾನೆಗಳು, ಖಜಾನೆ-2ರ ಪಿಂಚಣಿ ಡೇಟಾಬೇಸ್‌ನಲ್ಲಿ ಹಾಗೂ ಖಜಾನೆಗಳ ಕೆ.ಟಿ.ಸಿ. ವಹಿ-45 ರಲ್ಲಿ ವಿವರಗಳನ್ನು ದಾಖಲಿಸಿ ಮತ್ತು ದೃಢೀಕರಿಸಿ, ಮಾಹಿತಿಯನ್ನು ಮಹಾಲೇಖಪಾಲರಿಗೆ ನೀಡುವುದು.

3. ಮೇಲ್ಕಂಡ (2)ರ ಅವಕಾಶ ಅನ್ವಯವಾಗದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಖಜಾನೆಗಳು ದಿನಾಂಕ:06.01.2011ರ ಸರ್ಕಾರದ ಅಧಿಕೃತ ಜ್ಞಾಪನದಲ್ಲಿ ಸೂಚಿಸಿರುವ ವಿಧಾನವನ್ನು ಅನುಸರಿಸುವಂತೆ ತಿಳಿಸಿದೆ.

Retired government employees of the state take note: Important order from the government regarding pension
Share. Facebook Twitter LinkedIn WhatsApp Email

Related Posts

JOB ALERT : ಮೇ 12, 13 ರಂದು ಬೃಹತ್ ಉದ್ಯೋಗ ಮೇಳ : 200ಕ್ಕೂ ಹೆಚ್ಚು ಕಂಪನಿಗಳಲ್ಲಿ ಖಾಲಿ ಹುದ್ದೆಗಳ ಭರ್ತಿ.!

06/05/2026 9:17 AM1 Min Read

ಯುವನಿಧಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಕೌಶಲ್ಯ, ಉದ್ಯಮಶೀಲತೆ ತರಬೇತಿಗೆ ಅರ್ಜಿ ಆಹ್ವಾನ

06/05/2026 8:56 AM1 Min Read

BREAKING : ಮಕ್ಕಳ ಮೇಲೆ ದೌರ್ಜನ್ಯ ಆರೋಪ ಕೇಸ್ : ವಚನಾನಂದ ಸ್ವಾಮೀಜಿಗೆ ಕೋರ್ಟ್ ನಿಂದ ಷರತ್ತುಬದ್ಧ ಜಾಮೀನು ಮಂಜೂರು.!

06/05/2026 8:23 AM1 Min Read
Recent News

JOB ALERT : ಮೇ 12, 13 ರಂದು ಬೃಹತ್ ಉದ್ಯೋಗ ಮೇಳ : 200ಕ್ಕೂ ಹೆಚ್ಚು ಕಂಪನಿಗಳಲ್ಲಿ ಖಾಲಿ ಹುದ್ದೆಗಳ ಭರ್ತಿ.!

06/05/2026 9:17 AM

Big Updates: ಜಲಂಧರ್ ಬಿಎಸ್‌ಎಫ್ ಕೇಂದ್ರ ಕಚೇರಿ ಬಳಿ ಭೀಕರ ಸ್ಫೋಟ: ಸ್ಥಳಕ್ಕೆ ಧಾವಿಸಿದ ಉನ್ನತ ತನಿಖಾ ತಂಡಗಳು!

06/05/2026 9:14 AM

ALERT : ವಾಹನ ಸವಾರರೇ ಈ ತಪ್ಪು ಮಾಡಿದ್ರೆ ನಿಮ್ಮ ` ಫಾಸ್ಟ್ಯಾಗ್’ ಬಂದ್ : NHAI ಹೊಸ ಮಾರ್ಗಸೂಚಿ

06/05/2026 9:04 AM

ಇರಾನ್ ವಿರುದ್ಧದ ‘ಆಪರೇಷನ್ ಎಪಿಕ್ ಫ್ಯೂರಿ’ ಅಂತ್ಯ: ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಮಹತ್ವದ ಘೋಷಣೆ!

06/05/2026 9:00 AM
State News
KARNATAKA

JOB ALERT : ಮೇ 12, 13 ರಂದು ಬೃಹತ್ ಉದ್ಯೋಗ ಮೇಳ : 200ಕ್ಕೂ ಹೆಚ್ಚು ಕಂಪನಿಗಳಲ್ಲಿ ಖಾಲಿ ಹುದ್ದೆಗಳ ಭರ್ತಿ.!

By kannadanewsnow5706/05/2026 9:17 AM KARNATAKA 1 Min Read

ಬೆಂಗಳೂರು: ರಾಜಧಾನಿಯ ನಿರುದ್ಯೋಗಿ ಯುವಜನತೆಗೆ ಹಾಗೂ ಪದವೀಧರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಬೆಂಗಳೂರು ನಗರ ವಿಶ್ವವಿದ್ಯಾಲಯದ ವತಿಯಿಂದ ಮೇ 12…

ಯುವನಿಧಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಕೌಶಲ್ಯ, ಉದ್ಯಮಶೀಲತೆ ತರಬೇತಿಗೆ ಅರ್ಜಿ ಆಹ್ವಾನ

06/05/2026 8:56 AM

BREAKING : ಮಕ್ಕಳ ಮೇಲೆ ದೌರ್ಜನ್ಯ ಆರೋಪ ಕೇಸ್ : ವಚನಾನಂದ ಸ್ವಾಮೀಜಿಗೆ ಕೋರ್ಟ್ ನಿಂದ ಷರತ್ತುಬದ್ಧ ಜಾಮೀನು ಮಂಜೂರು.!

06/05/2026 8:23 AM

GOOD NEWS : ರಾಜ್ಯದ ಕಾರ್ಮಿಕರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು

06/05/2026 7:57 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.