Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀವು ಅನಾರೋಗ್ಯ ಅಥ್ವಾ ಬೇರೆ ಕಾರಣದಿಂದ ‘ಪರೀಕ್ಷೆ’ ಬರೆಯದಿದ್ರೆ ಏನಾಗುತ್ತೆ.? ‘CBSE ಪರೀಕ್ಷಾ ನೀತಿ’ ಹೇಳೋದೇನು ಗೊತ್ತಾ?

11/02/2026 3:57 PM

2028ರವರೆಗೆ ಸಿದ್ದರಾಮಯ್ಯರೆ ಸಿಎಂ, ಆಮೇಲೆ ಬೀದಿ ದಾಸಯ್ಯನನ್ನ ಸಿಎಂ ಮಾಡಿದ್ರೂ ಓಕೆ : ಜಮೀರ್ ವಿವಾದ ಹೇಳಿಕೆ!

11/02/2026 3:53 PM

ಪೊಲೀಸ್ ಗೌರವಗಳೊಂದಿಗೆ ಹಿರಿಯ ಪತ್ರಕರ್ತ, ಮಾಜಿ ಶಾಸಕ ಪಿ.ರಾಮಯ್ಯ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಆದೇಶ

11/02/2026 3:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇಂದ್ರ ಸಚಿವ ‘HDK ಜನತಾ ದರ್ಶನ’ಕ್ಕೆ ಭರ್ಜರಿ ರೆಸ್ಪಾನ್ಸ್: ‘3 ಸಾವಿರ’ಕ್ಕೂ ಹೆಚ್ಚು ಅರ್ಜಿ ಸ್ವೀಕಾರ
KARNATAKA

ಕೇಂದ್ರ ಸಚಿವ ‘HDK ಜನತಾ ದರ್ಶನ’ಕ್ಕೆ ಭರ್ಜರಿ ರೆಸ್ಪಾನ್ಸ್: ‘3 ಸಾವಿರ’ಕ್ಕೂ ಹೆಚ್ಚು ಅರ್ಜಿ ಸ್ವೀಕಾರ

By kannadanewsnow0905/07/2024 9:26 PM

ಮಂಡ್ಯ: ಜಿಲ್ಲೆಯಲ್ಲಿ ಇಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಸತತ 7 ಗಂಟೆಗಳ ಕಾಲ ಜನಸ್ಪಂದನ ಕಾರ್ಯಕ್ರಮವನ್ನು ನಡೆಸಿದರು. ಇಂದಿನ ಜನಸ್ಪಂದನ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು ಬರೋಬ್ಬರಿ 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸ್ವೀಕಾರಗೊಂಡಿವೆ.

ಇಂದಿನ ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ದರ್ಶನದ ಬಳಿಕ ಮಾತನಾಡಿ, ಜನತಾ ದರ್ಶನದಲ್ಲಿ 3 ಸಾವಿರಕ್ಕೂ ಹೆಚ್ಚು ಅರ್ಜಿ ಬಂದಿವೆ. ನಾನೇ ಖುದ್ದು ನಿರಂತರವಾಗಿ 7 ಗಂಟೆಗಳ ಕಾಲ ಜನರ ಆಹ್ವಾಲು ಸ್ವೀಕಾರ ಮಾಡಿದ್ದೇನೆ. ಹೆಚ್ಚಿನ ರೀತಿಯಲ್ಲಿ ಕಂದಾಯ ಇಲಾಖೆ ಸಂಬಂಧಿಸಿದ ಅರ್ಜಿ ಬಂದಿವೆ. ನಿವೇಶನ, ಮನೆ ಇಲ್ಲ ಅಂತ ಅರ್ಜಿ ಬಂದಿದೆ‌. ಹಲವಾರು ಯುವಕರು, ಹೆಣ್ಣು ಮಕ್ಕಳು ಉದ್ಯೋಗಕ್ಕೆ ಮನವಿ ಮಾಡಿದ್ದಾರೆ. ನಿರುದ್ಯೋಗ, ನಿವೇಶನ, ಮನೆಗಳ ಸಮಸ್ಯೆಗಳು ಇವೆ ಎಂದರು.

ಆರೋಗ್ಯ ಸಮಸ್ಯೆಯ ವರ್ಗದ ಜನರು ಇದ್ದಾರೆ. ವಿಕಲಚೇತನರ ಅರ್ಜಿಯನ್ನು ಸಹ ಸ್ವೀಕಾರ ಮಾಡಿದ್ದೇನೆ. ರಸ್ತೆ ಅಭಿವೃದ್ಧಿ, ಹೈವೆ ಸಂಬಂಧ ಸಮಸ್ಯೆ ವಿರುದ್ದ ಅರ್ಜಿ ಕೊಟ್ಟಿದ್ದಾರೆ. ಸಮುದಾಯ ಭವನ ನಿರ್ಮಾಣಕ್ಕೂ ಅರ್ಜಿ ಬಂದಿದೆ‌. ಸಂಬಂಧಿಸಿದ ಇಲಾಖೆಗೆ ತಲುಪಿಸುವ ಕೆಲಸ ಮಾಡ್ತೇನೆ. ಎರಡೂ ಮೂರು ತಿಂಗಳು ಅವಕಾಶ ಕೊಡಿ ನಿರುದ್ಯೋಗ ಸಮಸ್ಯೆ ನಿವಾರಿಸುತ್ತೇನೆ ಎಂದರು.

ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಸ್ಥಾನ ಸಿಕ್ಕಿದೆ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವ ಆಲೋಚನೆ ಇದೆ‌. ದೆಹಲಿಯ ಕಚೇರಿಯಲ್ಲಿ ಸಭೆ ನಡೆಸಿ ಮಾಹಿತಿ ಪಡೆಯುತ್ತಿದ್ದೇನೆ. ದೇಶದಲ್ಲಿ ಕೆಲವು ಕೈಗಾರಿಕೆಗಳು ಸ್ಥಗಿತಗೊಂಡಿವೆ ಅವುಗಳಿಗೆ ಹೊಸ ಜೀವ ತುಂಬುವ ಕೆಲಸ ಮಾಡ್ತೇವೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಸ್ಪಂದನೆ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇಲ್ಲ. ಮೂಲಭೂತ ಸೌಕರ್ಯಗಳ ಕೊರತೆ ಇದೆ. ಮಂಡ್ಯ ಜನರು ನಿವೇಶನ ಬೇಡಿಕೆ ಇದೆ ಮಂಡ್ಯ ಅಭಿವೃದ್ಧಿಗೆ ಹಣ ಕೊಡಲು ಮುಂದಾಗಿದ್ದೇನೆ. ಅಧಿಕಾರಿಗಳು ಸ್ಪಂದಿಸುತ್ತಾರೆ ಅನ್ನೊ ನಿರೀಕ್ಷೆ ಇದೆ‌. ರಾಜಕಾರಣ ಬೇರೆ ರಾಜ್ಯದ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು ಚುನಾವಣಾ ಮುಂಚೆ ಜನತಾ ದರ್ಶನ ಮಾಡಿದ್ರು. ಆ ಸಮಸ್ಯೆಗಳನ್ನು ಎಷ್ಟು ಬಗೆ ಹರಿಸಿದ್ದಾರೆ ಅನ್ನೋದು ಎದ್ದು ಕಾಣುತ್ತಿದೆ. ರಾಜ್ಯ ಸರ್ಕಾರ ಮುಂದೆ ಜನರು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿ ಎಂದರು.

ರಾಜ್ಯ ಸರ್ಕಾರದ ಹಗರಣದ ಚರ್ಚೆ ನಡೆಯುತ್ತಿದೆ ಮುಂದೆ ಮುಖ್ಯಮಂತ್ರಿಗೆ ಸುತ್ತಿಕೊಳ್ಳುವ ವಾತಾವರಣ ಇದೆ. ಕಾಂಗ್ರೆಸ್ ನಾಯಕರು ಹಿಂದಗಡೆಯಿಂದ ಪ್ರೇರಪಣೆ ಕೊಡ್ತಿದ್ದಾರೆ. ವಾಲ್ಮೀಕಿ ನಿಗಮದ ಹಗರಣ, ನಗರಾಭಿವೃದ್ಧಿ ಇಲಾಖೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ರೀತಿಯ ಅಧಿಕಾರ ಎಷ್ಟು ದಿನ ಮಾಡ್ತಿರಿ? ಎಂದು ಪ್ರಶ್ನಿಸಿದರು.

ಮೈಸೂರಿನಲ್ಲಿ 50:50 ಮೂಡ ಹಗರಣ ಚರ್ಚೆಯಲ್ಲಿದೆ. ಜನರು ಅಧಿಕಾರ ಕೊಟ್ಟಿದ್ದಾರೆ ಶಾಶ್ವತ ಅಂತ ಭ್ರಮೆಯಲ್ಲಿದ್ರೆ ಜನರು ತಿರುಗಿಬಿಳುವ ಮುನ್ನ ಎಚ್ಚೆತ್ತುಕೊಳ್ಳಿ. ನಾನು ಅಧಿಕಾರಿಗಳ ಸಭೆಯ ಸುತ್ತೋಲೆ ಹೊರಡಿಸಿಲ್ಲ ಯಡಿಯೂರಪ್ಪ ಕಾಲದಲ್ಲಿ ಹೊರಡಿಸಿದ್ದು ಮುಂದುವರಿದಿದೆ ಅಷ್ಟೆ. ನನಗೆ ಅದರ ಎಫೆಕ್ಟ್ ಇಲ್ಲ ಎಂದರು.

ಕೇಂದ್ರದ ಮಂತ್ರಿಯಾಗಿ ಜನರ ಕಷ್ಟ ಸುಖ ಕೇಳಲು ಬಂದಿದ್ದೇನೆ. ನಮ್ಮ ಪಕ್ಷದ ಕ್ಷೇತದ ನಮ್ಮ ಹಳೆಯ ಜಿಲ್ಲೆಯ ಎಂಪಿ ಅಧಿಕಾರಿಗಳ ದಂಡನ್ನ ಜೊತೆಯಲ್ಲಿ ಕರೆದು ಜನ ಸ್ಪಂದನ ಕಾರ್ಯಕ್ರಮ ಮಾಡಿದ್ರು ಈ ಸರ್ಕಾರ ಸುತ್ತೋಲೆ ಹೊರಡಿಸಿಲ್ಲ. ಜಿಲ್ಲಾಧಿಕಾರಿ ,ಸಿಇಓ ಸುತ್ತೋಲೆ ಹೊಡರಿಸಿದ್ರು. ನೆನ್ನೆ ತಾರತುರಿಯಲ್ಲಿ ಸುತ್ತೋಲೆ ಹೊರಡಿಸುವ ಅವಶ್ಯಕತೆ ಇತ್ತ? ಈ ರೀತಿಯ ನಡೆದುಕೊಳ್ಳುವುದು ಸರಿಯಲ್ಲ. ಜನತಾ ದರ್ಶನ ಮಾಡಲು ಎಂಎಲ್ ಎ ಗೆ ಪವರ್ ಇಲ್ವಾ? ಜನರಿಂದ ಆಯ್ಕೆಯಾಗಿರುವ ಪ್ರತಿನಿಧಿಗಳಿಗೆ ಅವಕಾಶ ಇದೆ. ಅವರವರದೆ ಲಿಮಿಟೇಷನ್ ಇದೆ. ಕೇಂದ್ರದ ಮಂತ್ರಿಗೆ ಯಾವ ರೀತಿ ಸೆಕ್ಯುರಿಟಿ ಕೊಡಬೇಕು ಅನ್ನೋ ಜ್ಞಾನ ಸರ್ಕಾರಕ್ಕಿದ್ಯಾ? ಎಂದು ಕೇಳಿದರು.

ವರದಿ: ಗಿರೀಶ್ ರಾಜ್, ಮಂಡ್ಯ

ಶೀಘ್ರವೇ KSRTC ಪ್ರಯಾಣಕರಿಗೆ ‘ಹೈಫೈ ಪ್ರಯಾಣ’ದ ಟಚ್: ಹೊಸ ಮಾದರಿಯ ಬಸ್ ವೀಕ್ಷಿಸಿದ ‘ಸಚಿವ ರಾಮಲಿಂಗಾರೆಡ್ಡಿ’

‘ಮುಖ್ಯಮಂತ್ರಿ ಕುರ್ಚಿ’ ಮೇಲೆ ಕಣ್ಣಿಟ್ಟವರಿಂದಲೇ ‘ಮುಡಾ ಹಗರಣ’ ಬಹಿರಂಗ: ‘HDK’ ಗಂಭೀರ ಆರೋಪ

Share. Facebook Twitter LinkedIn WhatsApp Email

Related Posts

2028ರವರೆಗೆ ಸಿದ್ದರಾಮಯ್ಯರೆ ಸಿಎಂ, ಆಮೇಲೆ ಬೀದಿ ದಾಸಯ್ಯನನ್ನ ಸಿಎಂ ಮಾಡಿದ್ರೂ ಓಕೆ : ಜಮೀರ್ ವಿವಾದ ಹೇಳಿಕೆ!

11/02/2026 3:53 PM1 Min Read

ಪೊಲೀಸ್ ಗೌರವಗಳೊಂದಿಗೆ ಹಿರಿಯ ಪತ್ರಕರ್ತ, ಮಾಜಿ ಶಾಸಕ ಪಿ.ರಾಮಯ್ಯ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಆದೇಶ

11/02/2026 3:53 PM1 Min Read

ಬಜೆಟ್ ಮಂಡನೆಯ ದಿನಾಂಕ ಸದ್ಯದಲ್ಲೇ ನಿಗದಿ: ಸಿಎಂ ಸಿದ್ಧರಾಮಯ್ಯ

11/02/2026 3:48 PM1 Min Read
Recent News

ನೀವು ಅನಾರೋಗ್ಯ ಅಥ್ವಾ ಬೇರೆ ಕಾರಣದಿಂದ ‘ಪರೀಕ್ಷೆ’ ಬರೆಯದಿದ್ರೆ ಏನಾಗುತ್ತೆ.? ‘CBSE ಪರೀಕ್ಷಾ ನೀತಿ’ ಹೇಳೋದೇನು ಗೊತ್ತಾ?

11/02/2026 3:57 PM

2028ರವರೆಗೆ ಸಿದ್ದರಾಮಯ್ಯರೆ ಸಿಎಂ, ಆಮೇಲೆ ಬೀದಿ ದಾಸಯ್ಯನನ್ನ ಸಿಎಂ ಮಾಡಿದ್ರೂ ಓಕೆ : ಜಮೀರ್ ವಿವಾದ ಹೇಳಿಕೆ!

11/02/2026 3:53 PM

ಪೊಲೀಸ್ ಗೌರವಗಳೊಂದಿಗೆ ಹಿರಿಯ ಪತ್ರಕರ್ತ, ಮಾಜಿ ಶಾಸಕ ಪಿ.ರಾಮಯ್ಯ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಆದೇಶ

11/02/2026 3:53 PM

ಬಜೆಟ್ ಮಂಡನೆಯ ದಿನಾಂಕ ಸದ್ಯದಲ್ಲೇ ನಿಗದಿ: ಸಿಎಂ ಸಿದ್ಧರಾಮಯ್ಯ

11/02/2026 3:48 PM
State News
KARNATAKA

2028ರವರೆಗೆ ಸಿದ್ದರಾಮಯ್ಯರೆ ಸಿಎಂ, ಆಮೇಲೆ ಬೀದಿ ದಾಸಯ್ಯನನ್ನ ಸಿಎಂ ಮಾಡಿದ್ರೂ ಓಕೆ : ಜಮೀರ್ ವಿವಾದ ಹೇಳಿಕೆ!

By kannadanewsnow0511/02/2026 3:53 PM KARNATAKA 1 Min Read

ವಿಜಯನಗರ : ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಹಾಗೂ ಹೈಕಮಾಂಡ್ ಅವರನ್ನು ಭೇಟಿ ಮಾಡುವ ವಿಚಾರವಾಗಿ ಭಾರಿ ಚರ್ಚೆ ನಡೆಯುತ್ತಿದ್ದು…

ಪೊಲೀಸ್ ಗೌರವಗಳೊಂದಿಗೆ ಹಿರಿಯ ಪತ್ರಕರ್ತ, ಮಾಜಿ ಶಾಸಕ ಪಿ.ರಾಮಯ್ಯ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಆದೇಶ

11/02/2026 3:53 PM

ಬಜೆಟ್ ಮಂಡನೆಯ ದಿನಾಂಕ ಸದ್ಯದಲ್ಲೇ ನಿಗದಿ: ಸಿಎಂ ಸಿದ್ಧರಾಮಯ್ಯ

11/02/2026 3:48 PM

ಬೆಂಗಳೂರಲ್ಲಿ ಘೋರ ಘಟನೆ : ಶಾಲಾ ಬಸ್ ಹರಿದು ಪೊಲೀಸ್ ಸಿಬ್ಬಂದಿಯ ಇಬ್ಬರು ಮಕ್ಕಳು ದುರ್ಮರಣ, ಚಾಲಕ ಅರೆಸ್ಟ್!

11/02/2026 3:46 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.