ದಕ್ಷಿಣಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಪವಾಡ ಒಂದು ನಡೆದಿದೆ. ಬರೋಬ್ಬರಿ 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಇದೀಗ ಮನೆಗೆ ವಾಪಸ್ ಆಗಿದ್ದಾನೆ 2000 ಇಸವಿಯಲ್ಲಿ 12 ವರ್ಷವಿದ್ದಾಗ ಸತೀಶ್ ಎನ್ನುವ ವ್ಯಕ್ತಿ ಮನೆ ಬಿಟ್ಟು ಹೋಗಿದ್ದ.
ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದೊಂದಿಗೆ ಸತೀಶ್ ಹೊರಟು ಹೋಗಿದ್ದಾನೆ. ಇದೀಗ ಪವಾಡ ಎಂಬಂತೆ ಧರ್ಮಸ್ಥಳದಲ್ಲಿನ ಮನೆಗೆ ಸತೀಶ್ ವಾಪಸ್ ಆಗಿದ್ದಾನೆ ಬರೋಬ್ಬರಿ 26 ವರ್ಷಗಳ ಬಳಿಕ ಸತೀಶ್ ತನ್ನ ಕುಟುಂಬವನ್ನು ಸೇರಿದಾನೆ. ಮನೆ ಹಿರಿಯ ಮಗನ ನೋಡಿ ತಾಯಿ ಕಣ್ಣಲ್ಲಿ ಆನಂದಭಾಷ್ಪ. ಕುಟುಂಬಸ್ಥರು ಮನೆ ಮಗನನ್ನು ಸಂತಸದಿಂದ ಬರಮಾಡಿಕೊಂಡಿದ್ದಾರೆ. ತಾಯಿ ಮತ್ತು ಸಹೋದರನನ್ನು ಮಾತ್ರ ಸತೀಶ್ ಗುರುತು ಹಿಡಿದಿದ್ದಾನೆ.
ಮನೆಯವರಿಗೆ ಹಿಂದಿ ಗೊತ್ತಿಲ್ಲ ಸತೀಶ್ಗೆ ತುಳು ಮತ್ತು ಕನ್ನಡ ಬರಲ್ಲ ಆದರೂ ಸಂತೋಷದಿಂದ ಕಾಲ ಕಳೆದು ಮಹಾರಾಷ್ಟ್ರಕ್ಕೆ ಸತೀಶ್ ವಾಪಸ್ ಆಗಿದ್ದಾನೆ. ಇತ್ತೀಚಿಗೆ ಮಗನನ್ನು ಕರೆತನ್ನಿ ಎಂದು ಮಕ್ಕಳ ಬಳಿ ತಾಯಿ ಕಣ್ಣೀರು ಹಾಕಿದ್ದರು.ಧರ್ಮಸ್ಥಳ ಕಟೀಲು, ಪಣವಲಿಬೈಲುಗು ಮುಂತಾದ ಕಡೆಗಳಲ್ಲಿ ತಾಯಿ ಬೇಡಿಕೆ ಇಟ್ಟಿದ್ದರು ಕೊನೆಗೂ ಪವಾಡದ ರೀತಿಯಲ್ಲಿ ತಾಯಿಯ ಕೋರಿಕೆ ಈಡೇರಿದೆ.








