Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜ.5ರಿಂದ ದೇಶಾದ್ಯಂತ  ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನ: ಸಿಎಂ ಸಿದ್ದರಾಮಯ್ಯ

27/12/2025 4:13 PM

ಜಿಯೋ, ಏರ್ಟೆಲ್ ಅಲ್ಲ! ಭಾರತಕ್ಕಿಂತ ಭಿನ್ನವಾದ ಟೆಲಿಕಾಂ ವ್ಯವಸ್ಥೆ, ಸಂಪೂರ್ಣ ವಿಭಿನ್ನ ನೆಟ್ವರ್ಕ್ ಹೊಂದಿದೆ ಪಾಕಿಸ್ತಾನ!

27/12/2025 4:10 PM

ಕೇಂದ್ರ ಸರ್ಕಾರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಹಿಗ್ಗಾಮುಗ್ಗಾ ವಾಗ್ಧಾಳಿ

27/12/2025 4:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಈ ತಿರುಗೇಟು ಕೊಟ್ಟ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ
KARNATAKA

ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಈ ತಿರುಗೇಟು ಕೊಟ್ಟ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ

By kannadanewsnow0905/12/2025 4:07 PM

ಬೆಂಗಳೂರು: ರಾಜಕೀಯದಲ್ಲಿ ಎಷ್ಟೇ ಪ್ರೀತಿ- ವಿಶ್ವಾಸಗಳಿದ್ದರೂ ಹೊಂದಾಣಿಕೆಯ ನಾಟಕ ನನ್ನ ಬಳಿ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.

ವಿಧಾನಸೌಧದ ವಿರೋಧ ಪಕ್ಷದ ನಾಯಕರ ಕಚೇರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ನೀಡಿದರು. ವಾಚ್ ವಿಚಾರದಲ್ಲಿ ನನ್ನ ಹೇಳಿಕೆಯಿಂದ ಡಿ.ಕೆ.ಶಿವಕುಮಾರರಿಗೆ ಬೇಸರ ಆದರೆ ನಾನೇನೂ ಮಾಡಲಾಗದು ಎಂದು ಸ್ಪಷ್ಟಪಡಿಸಿದರು. ಈಗಲೂ ಅವರ ಹೂಬ್ಲೋಟ್ ವಾಚ್ ಕಾಣುತ್ತಿಲ್ಲ ಎಂದು ತಿಳಿಸಿದರು. ಅದು ಅಫಿಡವಿಟ್‍ನಲ್ಲಿಲ್ಲ. ಈಗ ನೀವು ಕಾರ್ಟಿಯರ್ ವಾಚ್ ವಿಚಾರವನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೀರಿ. ಹಿಂದೆ ಅಫಿಡವಿಟ್‍ನಲ್ಲಿ ಕೊಟ್ಟಿಲ್ಲ; ಅದು ಕೂಡ ಅಪರಾಧವೇ ಎಂದು ಗಮನ ಸೆಳೆದರು.

ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದ ಅವರು, ಇದನ್ನು ಬಹಳ ಬೆಳೆಸಬೇಕೆಂಬುದು ನನ್ನ ಉದ್ದೇಶವಲ್ಲ; ಸಂದರ್ಭಕ್ಕೆ ತಕ್ಕಂತೆ ವಿಷಯವನ್ನು ಜನರ ಗಮನಕ್ಕೆ ತರುವ ಕೆಲಸ ಮಾಡಿದ್ದೇನೆ. ಶಿವಕುಮಾರರನ್ನು ಇವತ್ತಿನಿಂದ ನಾನು ನೋಡುತ್ತಿಲ್ಲ. ಕಾಲೇಜಿನಿಂದ ನೋಡುತ್ತ ಬಂದಿದ್ದೇನೆ. ಅವರ ಕಾಲೇಜಿನ ಸ್ನೇಹಿತರಲ್ಲಿ ನಾನೂ ಒಬ್ಬ. ಅವರು ಇವತ್ತು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಆ ರೀತಿಯ ಸವಲತ್ತು ನಮಗಿದ್ದರೆ ನಾವೂ ಬೆಳೆಯಬಹುದಾಗಿತ್ತು ಎಂದು ನುಡಿದರು.

ನೀವು ನೂರು ವಾಚ್ ಕಟ್ಟಿದರೆ ನಾನು ಸ್ನೇಹಿತನಾಗಿ ಅತ್ಯಂತ ಖುಷಿ ಪಡುವೆ. ನೀವು ಅಫಿಡವಿಟ್‍ನಲ್ಲಿ ತಿಳಿಸಿದ್ದಾಗಿ ಹೇಳಿದ್ದೀರಿ. ಆದರೆ, ಅದನ್ನು ತಿಳಿಸಿಲ್ಲ ಎಂಬುದಷ್ಟೇ ನನ್ನ ಪ್ರಶ್ನೆ ಎಂದು ತಿಳಿಸಿದರು.

ನನಗೆ ಐದಾರು ಇಲ್ಲ. ನನಗಿರೋದು ಒಂದೇ; ಅದು ಟೈಟಾನ್

ಶಿವಕುಮಾರ್ ಅವರು ನನ್ನ ಉನ್ನತ ಹುದ್ದೆಗೂ ಗೌರವ ಕೊಡುವುದನ್ನು ಕಲಿಯಬೇಕಿತ್ತು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದರು.

ಶಿವಕುಮಾರ್ ಮತ್ತು ನಾನು ಇವತ್ತಿನ ಸ್ನೇಹಿತರಲ್ಲ; ರಾಜಕೀಯ ಸ್ನೇಹಿತರಲ್ಲ. ನಾವು ಕಾಲೇಜಿನಿಂದಲೇ ಆತ್ಮೀಯ ಸ್ನೇಹಿತರು. ಇವತ್ತು ನೀವು ದೊಡ್ಡ ಹಂತಕ್ಕೆ ಬೆಳೆದಿದ್ದೀರಿ; ಬಹಳ ಸಂತೋಷ. ಇವತ್ತು ಉಪ ಮುಖ್ಯಮಂತ್ರಿ ಇದ್ದೀರಿ. ಈಗಾಗಲೇ ನಿಮ್ಮ ಪಕ್ಷದಲ್ಲಿ ನೀವು ಮುಖ್ಯಮಂತ್ರಿ ಆಗಬೇಕು ಎಂದು ಮಾತನಾಡುತ್ತಿದ್ದಾರೆ. ಬಹಳ ಸಂತೋಷ. ನಾನು ಆ ಎತ್ತರಕ್ಕೆ ಬೆಳೆದಿಲ್ಲ; ನನ್ನ ಪರಿಸ್ಥಿತಿಯೇ ಬೇರೆ. ನಾನು ಕಾರ್ಟಿಯರ್, ರೋಲೆಕ್ಸ್, ಹೂಬ್ಲೋಟ್ ವಾಚ್ ಕಟ್ಟಿಲ್ಲ; ನನಗಿರೋದು ಒಂದೇ ಟೈಟಾನ್ ಎಂದು ಗಮನಕ್ಕೆ ತಂದರು. ಹೋಗಲಿ ನನಗೆ ಐದಾರು ಇಲ್ಲ. ನನಗಿರೋದು ಒಂದೇ. ಆದರೆ, ಅಫಿಡವಿಟ್‍ನಲ್ಲಿ ತಿಳಿಸಿಲ್ಲ ಎಂದದ್ದು ನನ್ನ ಅಪರಾಧವೇ ಎಂದು ಕೇಳಿದರು.

ಸಿದ್ದರಾಮಯ್ಯನವರಿಗೂ, ಶಿವಕುಮಾರ್ ಅವರಿಗೂ ನೂರು ವಾಚ್ ಕಟ್ಟುವಷ್ಟು ಶಕ್ತಿ ಇದೆ. ಅವರು ಅಫಿಡವಿಟ್‍ನಲ್ಲಿ ತೋರಿಸಿದ್ದೇನೆ ಎಂದಿದ್ದರು. ನಾನು ಅವರದನ್ನು ತೋರಿಸಿಲ್ಲ ಎಂದಿದ್ದೇನೆ ಅಷ್ಟೇ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ನೀವು ಕಟ್ಟಿದ್ದನ್ನು ನೋಡಿ ಅಸೂಯೆಪಟ್ಟು ನಾನು ಹೇಳಿಕೆ ಕೊಟ್ಟಿಲ್ಲ ಎಂದು ನುಡಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮತ್ತು ನಾನು ಬಹುಕಾಲದ ಸ್ನೇಹಿತರು. ನಾನು ಅನವಶ್ಯಕವಾದ ಯಾವುದೇ ಆಪಾದನೆ ಮಾಡಿಲ್ಲ; ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ನಾನು ವಾಚನ್ನು ಆಸ್ಟ್ರೇಲಿಯದಲ್ಲಿ 7 ವರ್ಷದ ಹಿಂದೆ ತೆಗೆದುಕೊಂಡಿದ್ದೇನೆ. ಹಣ ಕೊಟ್ಟೇ ತೆಗೆದುಕೊಂಡಿದ್ದೇನೆ ಎಂದಿದ್ದರು ಎಂದು ಗಮನಕ್ಕೆ ತಂದರು.

ಚುನಾವಣಾ ಅಫಿಡವಿಟ್‍ನ 38ನೇ ಪುಟದಲ್ಲಿ ಡಿ.ಕೆ.ಶಿವಕುಮಾರ್ ಅವರು ರೋಲೆಕ್ಸ್ ವಾಚ್, ಹೂಬ್ಲೋಟ್ ವಾಚ್ ಇರುವುದಾಗಿ ತಿಳಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಒಂದಲ್ಲ; ನೂರು ವಾಚ್ ಕಟ್ಟುವ ಶಕ್ತಿ ಇದೆ ಎಂಬುದು ನನಗೂ ಗೊತ್ತಿದೆ. ನೀವು ನೂರು ವಾಚ್ ಕಟ್ಟಿದರೂ ನಾನು ನಿಮ್ಮ ಸ್ನೇಹಿತನಾಗಿ ಸಂತೋಷ ಪಡುತ್ತೇನೆ ಎಂದು ತಿಳಿಸಿದರು.

2018, 2023ರ ಚುನಾವಣಾ ಅಫಿಡವಿಟ್‍ನಲ್ಲಿ ಕಾರ್ಟಿಯರ್ ವಾಚ್ ಬಗ್ಗೆ ತಿಳಿಸಿಲ್ಲ; 7 ವರ್ಷದ ಹಿಂದಿನಿಂದ ಇರುವ ಕೈಯಲ್ಲಿ ಕಟ್ಟಿದ್ದ ಕಾರ್ಟಿಯರ್ ವಾಚನ್ನು ಯಾಕೆ ಅಫಿಡವಿಟ್‍ನಲ್ಲಿ ತಿಳಿಸಿಲ್ಲವೇಕೆ ಎಂದು ಮತ್ತೆ ಪ್ರಶ್ನೆ ಮಾಡಿದರು.

ನೀವು ಕದ್ದು ಕಟ್ಟಿದ್ದೆಂದು ಹೇಳಿಲ್ಲ; ಮುಖ್ಯಮಂತ್ರಿಗಳಿಗೆ ಉಡುಗೊರೆಯಾಗಿ ಕೊಟ್ಟ ಹೂಬ್ಲೋಟ್ ವಾಚ್ ಹಿಂದೆ ವಿವಾದಕ್ಕೆ ಗುರಿಯಾಗಿತ್ತು. ಕೊನೆಯಲ್ಲಿ ಅದನ್ನು ಸರಕಾರದ ವಶಕ್ಕೆ ಒಪ್ಪಿಸಿ ವಿಧಾನಸೌಧದ ವಸ್ತು ಸಂಗ್ರಹಾಲಯದಲ್ಲಿ ಈಗ ಇಡಲಾಗಿದೆ ಎಂದು ತಿಳಿಸಿದರು. ಈಗ ಲೋಕಾಯುಕ್ತಕ್ಕೆ ಕೊಟ್ಟ ಮಾಹಿತಿಯಡಿ ರೋಲೆಕ್ಸ್ ವಾಚ್- 9 ಲಕ್ಷ, ಕಾರ್ಟಿಯರ್ ವಾಚ್- 23.90 ಲಕ್ಷ, ಇನ್ನೊಂದು ಕಾರ್ಟಿಯರ್ ವಾಚ್- 12.06 ಲಕ್ಷ ಎಂದಿದ್ದಾರೆ. ಹಾಗಿದ್ದರೆ ಹೂಬ್ಲೋಟ್ ವಾಚ್ ಎಲ್ಲಿ ಹೋಗಿದೆ ಎಂದು ಮತ್ತೆ ಪ್ರಶ್ನಿಸಿದರು.

ರಾಜೀನಾಮೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್: ಕಾರಣವೇನು ಗೊತ್ತಾ?

Share. Facebook Twitter LinkedIn WhatsApp Email

Related Posts

ಜ.5ರಿಂದ ದೇಶಾದ್ಯಂತ  ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನ: ಸಿಎಂ ಸಿದ್ದರಾಮಯ್ಯ

27/12/2025 4:13 PM1 Min Read

ಕೇಂದ್ರ ಸರ್ಕಾರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಹಿಗ್ಗಾಮುಗ್ಗಾ ವಾಗ್ಧಾಳಿ

27/12/2025 4:09 PM5 Mins Read

ದೀಪದ ಬೆಳಕು ಮಾತ್ರ ಗೊತ್ತಾಗುತ್ತದೆ ಆದರೆ, ದೀಪದ ಕಷ್ಟ ಗೊತ್ತಾಗಲ್ಲ : ಡಿಸಿಎಂ ಡಿಕೆ ಶಿವಕುಮಾರ್ ಮಾರ್ಮಿಕ ನುಡಿ

27/12/2025 3:30 PM1 Min Read
Recent News

ಜ.5ರಿಂದ ದೇಶಾದ್ಯಂತ  ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನ: ಸಿಎಂ ಸಿದ್ದರಾಮಯ್ಯ

27/12/2025 4:13 PM

ಜಿಯೋ, ಏರ್ಟೆಲ್ ಅಲ್ಲ! ಭಾರತಕ್ಕಿಂತ ಭಿನ್ನವಾದ ಟೆಲಿಕಾಂ ವ್ಯವಸ್ಥೆ, ಸಂಪೂರ್ಣ ವಿಭಿನ್ನ ನೆಟ್ವರ್ಕ್ ಹೊಂದಿದೆ ಪಾಕಿಸ್ತಾನ!

27/12/2025 4:10 PM

ಕೇಂದ್ರ ಸರ್ಕಾರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಹಿಗ್ಗಾಮುಗ್ಗಾ ವಾಗ್ಧಾಳಿ

27/12/2025 4:09 PM

BREAKING : ಪುಷ್ಪ-2 ಸಿನೆಮಾ ಕಾಲ್ತುಳಿತ ಕೇಸ್ ನಲ್ಲಿ ನಟ ಅಲ್ಲು ಅರ್ಜುನ್ ಆರೋಪಿ : ಚಾರ್ಜ್ ಶೀಟ್ ನಲ್ಲಿ ಉಲ್ಲೇಖ

27/12/2025 3:42 PM
State News
KARNATAKA

ಜ.5ರಿಂದ ದೇಶಾದ್ಯಂತ  ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನ: ಸಿಎಂ ಸಿದ್ದರಾಮಯ್ಯ

By kannadanewsnow0927/12/2025 4:13 PM KARNATAKA 1 Min Read

ನವದೆಹಲಿ : ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು  ವಿಬಿ ಜಿ  ರಾಮ್ ಜಿ ಎಂದು ಬದಲಾಯಿಸಲಾಗಿದ್ದು…

ಕೇಂದ್ರ ಸರ್ಕಾರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಹಿಗ್ಗಾಮುಗ್ಗಾ ವಾಗ್ಧಾಳಿ

27/12/2025 4:09 PM

ದೀಪದ ಬೆಳಕು ಮಾತ್ರ ಗೊತ್ತಾಗುತ್ತದೆ ಆದರೆ, ದೀಪದ ಕಷ್ಟ ಗೊತ್ತಾಗಲ್ಲ : ಡಿಸಿಎಂ ಡಿಕೆ ಶಿವಕುಮಾರ್ ಮಾರ್ಮಿಕ ನುಡಿ

27/12/2025 3:30 PM

BREAKING : ಸಿದ್ಧರಾಮಯ್ಯ ತಾವಾಗಿಯೇ ಅಧಿಕಾರ ಬಿಟ್ಟು ಕೊಟ್ರೆ ಮಾತ್ರ ಬೇರೆಯವರಿಗೆ ಅವಕಾಶ : ಕೋಡಿಶ್ರೀ ಸ್ಪೋಟಕ ಭವಿಷ್ಯ

27/12/2025 3:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.