Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ದೇಶದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಎಲೆಕ್ಷನ್ ನಲ್ಲಿ ಸ್ಪರ್ಧಿಸಲು ಹೆತ್ತ ಮಗಳನ್ನೆ ಕೊಂದ ಪಾಪಿ ತಂದೆ!

03/02/2026 10:01 AM

ಲೋಕ ಕಲ್ಯಾಣಾರ್ಥವಾಗಿ ವಿಷ್ಣು ಎತ್ತಿದ ದಶಾವತಾರದ ಸಂಕ್ಷಿಪ್ತ ಪರಿಚಯ ಇಲ್ಲಿದೆ

03/02/2026 9:43 AM

ಚಿಕ್ಕಬಳ್ಳಾಪುರದಲ್ಲಿ ಯುವಕ, ಯುವತಿಯನ್ನು ಅಡಗಟ್ಟಿ ನೈತಿಕ ಪೊಲೀಸ್ ಗಿರಿ : ಇಬ್ಬರು ಅನ್ಯಕೋಮಿನ ಪುಂಡರು ಅರೆಸ್ಟ್!

03/02/2026 9:39 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಲೋಕ ಕಲ್ಯಾಣಾರ್ಥವಾಗಿ ವಿಷ್ಣು ಎತ್ತಿದ ದಶಾವತಾರದ ಸಂಕ್ಷಿಪ್ತ ಪರಿಚಯ ಇಲ್ಲಿದೆ
KARNATAKA

ಲೋಕ ಕಲ್ಯಾಣಾರ್ಥವಾಗಿ ವಿಷ್ಣು ಎತ್ತಿದ ದಶಾವತಾರದ ಸಂಕ್ಷಿಪ್ತ ಪರಿಚಯ ಇಲ್ಲಿದೆ

By kannadanewsnow0503/02/2026 9:43 AM

ದಶಾವತಾರದ ಸಂಕ್ಷಿಪ್ತ ಪರಿಚಯ

ಬ್ರಹ್ಮದೇವ ಸೃಷ್ಟಿಕರ್ತನಾದರೆ, ವಿಷ್ಣು ಸ್ಥಿತಿ ಸ್ಥಾಪಕ, ಶಿವಲಯಕರ್ತ. ತ್ರಿಮೂರ್ತಿಗಳಲ್ಲಿ ಸ್ಥಿತಿ ಸ್ಥಾಪಕನಾದ ಶ್ರೀಮನ್ನಾರಾಯಣ ದುಷ್ಟರನ್ನು ಸಂಹರಿಸಲು ಮತ್ತು ಶಿಷ್ಟರನ್ನು ಸಂರಕ್ಷಿಸುವ ಸಲುವಾಗಿ ಈ ಧರೆಯಲ್ಲಿ ಹತ್ತು ಅವತಾರಗಳನ್ನೆತ್ತಿಹನು.

ಲೋಕಕಲ್ಯಾಣಾರ್ಥವಾಗಿ ವಿಷ್ಣು ಎತ್ತಿದ ಈ ಎಲ್ಲ ಅವತಾರಗಳ ಹಾಗೂ ವಿಷ್ಣುವಿನ ಮೂರು ಅವತಾರಕ್ಕೆ ಕಾರಣವಾದ ಜಯವಿಜಯರ ಶಾಪವೃತ್ತಾಂತದ ಕಿರುಪರಿಚಯ ಇಲ್ಲಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

1) ಮತ್ಸ್ಯಾವತಾರ :

ಪ್ರಳಯ ಕಾಲದಲ್ಲಿ ಅಪೌರುಷೇಯಗಳಾದ ವೇದಗಳನ್ನು ನಾಶವಾಗದಂತೆ ಸಂರಕ್ಷಿಸುವ ಸಲುವಾಗಿ ಹಾಗೂ ಪ್ರಳಯಾನಂತರ ಆ ಮಹಾನ್ ವೇದಗಳನ್ನು ಋಷಿಮುನಿಗಳಿಗೆ ಪುನಾ ನೀಡುವ ಸಲುವಾಗಿ ನಾರಾಯಣನು ಎತ್ತಿದ ಅವತಾರವೇ ಮತ್ಸ್ಯಾವತಾರ.

2) ಕೂರ್ಮಾವತಾರ :

ಕೂರ್ಮ ಅರ್ಥಾತ್ ಆಮೆಯ ಅವತಾರವನ್ನು ವಿಷ್ಣು ಎತ್ತಿದ್ದೂ ಲೋಕಕಲ್ಯಾಣಾರ್ಥವಾಗಿಯೇ. ಕಲ್ಪವೃಕ್ಷ, ಕಾಮಧೇನು, ಐರಾವತ, ಅಮೃತವೇ ಮೊದಲಾದ ಅತ್ಯಮೂಲ್ಯಗಳನ್ನುಪಡೆಯಲು ಮಂದರ ಪರ್ವತವನ್ನು ಕಡೆಗೋಲು ಮಾಡಿ, ವಾಸುಕಿಯೆಂಬ ಸರ್ಪವನ್ನು ಹಗ್ಗವನ್ನಾಗಿ ಮಾಡಿಕೊಂಡು ಸಮುದ್ರ ಮಂಥನ ಮಾಡುತ್ತಿದ್ದ ಕಾಲದಲ್ಲಿ ಮಂದರ ಪರ್ವತವು ಸಮುದ್ರದಲ್ಲಿ ಮುಳುಗದಂತೆ ತಡೆಯಲು ವಿಷ್ಣು ಎತ್ತಿದ ಎರಡನೇ ಆವತಾರ ಕೂರ್ಮಾವತಾರ.

ಜಯ-ವಿಜಯರ ಶಾಪ ವೃತ್ತಾಂತ : ವೈಕುಂಠದ ದ್ವಾರಪಾಲಕರಾಗಿದ್ದ ಜಯ-ವಿಜಯರು ದುರಹಂಕಾರದಿಂದ ವೈಕುಂಠಕ್ಕೆ ಬಂದ ಸನಕ, ಸನಂದನ, ಸನತ್ಕುಮಾರ್ ಮತ್ತು ಸನತ್ ಸುಜಾತ ಎಂಬ ಬಾಲಯೋಗಿಗಳನ್ನು ದ್ವಾರದಲ್ಲೇ ತಡೆದು ಶಾಪಗ್ರಸ್ಥರಾದರು. ಭಕ್ತರ ಶಾಪವನ್ನು ತಡೆಯಲು ಸಾಧ್ಯವಿಲ್ಲ ಎಂದ ವಿಷ್ಣು ಜಯ-ವಿಜಯರಿಗೆ ತನ್ನ ಮಿತ್ರರಾಗಿ ಭೂಮಿಯಲ್ಲಿ 7 ಜನ್ಮ ಎತ್ತುವಿರೋ ಇಲ್ಲ ನನ್ನ ಶತ್ರುಗಳಾಗಿ 3 ಜನ್ಮ ಎತ್ತುವಿರೋ ಎಂದು ಕೇಳಿದಾಗ, ಜಯ-ವಿಜಯರು ವೈಕುಂಠಕ್ಕೆ ಬರುವ ಆತುರದಲ್ಲಿ ಶತ್ರುಗಳಾಗೇ ಹುಟ್ಟುತ್ತೇವೆಂದು ಹೇಳಿದರು. ಇದರ ಫಲವಾಗಿ ಜಯ-ವಿಜಯರು ಭೂಮಿಯಲ್ಲಿ ಹಿರಣ್ಯಾಕ್ಷ ಮತ್ತು ಹಿರಣ್ಯ ಕಶಿಪುವಾಗಿ, ರಾವಣ – ಕುಂಭಕರ್ಣರಾಗಿ ಹಾಗೂ ಮೂರನೆಯ ಜನ್ಮದಲ್ಲಿ ಶಿಶುಪಾಲ – ದಂತವಕ್ತ್ರರಾಗಿ ಜನಿಸಿ ಅನುಕ್ರಮವಾಗಿ ವರಹಾವತಾರ, ನರಸಿಂಹಾವತಾರ, ರಾಮಾವತಾರ, ಕೃಷ್ಣಾವತಾರ ಎತ್ತಿದ ವಿಷ್ಣುವಿನಿಂದಲೇ ಹತರಾದರು.

3) ವರಹಾವತಾರ :

ದಾನವನಾದ ಹಿರಣ್ಯಾಕ್ಷನು ತನ್ನ ಶಕ್ತಿ ಬಲ, ವರಬಲ ಗರ್ವದಿಂದ ಭೂದೇವಿಯನ್ನು ಸಮುದ್ರದಲ್ಲಿ ಬಚ್ಚಿಟ್ಟ ಸಂದರ್ಭದಲ್ಲಿ ಭೂದೇವಿಯನ್ನು ರಕ್ಷಿಸುವ ಸಲುವಾಗಿ ಹಾಗೂ ದುಷ್ಟನಾಗಿದ್ದ ಹಿರಣ್ಯಾಕ್ಷನ ಸಂಹರಿಸುವ ಸಲುವಾಗಿ ವಿಷ್ಣು ಎತ್ತಿದ ಅವತಾರ ವರಹಾವತಾರ.

4) ನರಸಿಂಹಾವತಾರ :

ಹಿರಣಾಕ್ಷನ ಸೋದರನಾದ ಹಿರಣ್ಯಕಶಿಪು ವರಬಲದಿಂದ ಹಾಗೂ ಭುಜಬಲದಿಂದ ನರರನ್ನೂ ದೇವಾನು ದೇವತೆಗಳನ್ನೂ ಕಾಡಿ, ಮಹಾ ಗರ್ವಿಷ್ಠನಾಗಿ, ಧರ್ಮವನ್ನೇ ಮರೆತು ದುರಾಚಾರಿಯಾದಾಗ, ಆತನ ಮಗ ಪರಮ

ವಿಷ್ಣುಭಕ್ತನಾದ ಬಾಲ ಪ್ರಹ್ಲಾದನ ಮೊರೆಗೆ ಕಂಬದಿಂದವತರಿಸಿ, ಹಿರಣ್ಯ ಕಶಿಪುವನ್ನು ಸಂಹರಿಸಲು ವಿಷ್ಣು ಎತ್ತಿದ ಅವರಾತ ನರಸಿಂಹಾವತಾರ.

5) ವಾಮನಾವತಾರ :

ಇಂದ್ರಪದವಿಯ ಮೇಲೆ ಕಣ್ಣಿಟ್ಟಿದ್ದ ದಾನವಾಸುರನಾದ ಬಲಿಚಕ್ರವರ್ತಿಯಿಂದ ಮೂರು ಅಡಿ ಜಾಗವನ್ನು ದಾನವಾಗಿ ಪಡೆದು, ಒಂದು ಅಡಿಯಲ್ಲಿ ಭೂಮಿಯನ್ನೂ ಮತ್ತೊಂದು ಅಡಿಯಲ್ಲಿ ಆಕಾಶವನ್ನೂ ಅಳೆದ ವಾಮನ ಮೂರನೇ ಅಡಿಯನ್ನು ಬಲಿಯ ತಲೆಯಮೇಲಿಟ್ಟು ಪಾತಳಕ್ಕೆ ತುಳಿದ. ಬಲಿಯ ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರ ವಾಮನಾವತಾರ.

6) ಪರಶುರಾಮಾವತಾರ :

ಲೋಕಕಂಟಕರಾಗಿ ಮುಗ್ಧ ಜನರ ಮೇಲೆ ಹಾವಳಿ ಮಾಡುತ್ತಿದ್ದ ಕ್ಷತ್ರಿಯ ಕುಲವನ್ನೇ ನಾಶಮಾಡಲು ವಿಷ್ಣು ಎತ್ತಿದ ಅವತಾರ ಪರಶುರಾಮಾವತಾರ. ಈ ಅವತಾರದಲ್ಲಿ ಪರಶುರಾಮರು 21 ಬಾರಿ ಭೂ ಪ್ರದಕ್ಷಿಣೆ ಮಾಡಿ ದುಷ್ಟರಾದ ಎಲ್ಲ ಕ್ಷತ್ರಿಯರನ್ನೂ ಸಂಹರಿಸುವ ಮೂಲಕ ಧರ್ಮ ಸಂಸ್ಥಾಪನೆ ಮಾಡಿದರು.

7) ರಾಮಾವತಾರ :

ಏಕಪತ್ನೀ ವ್ರತಸ್ಥನೂ, ಮರ್ಯಾದಾ ಪುರುಷೋತ್ತಮನೂ ಆದ ಶ್ರೀರಾಮನು, ತನ್ನ ಪತ್ನಿಯನ್ನೇ ಅಪಹಿರಿಸದ ದುಷ್ಟ ರಾವಣ ಹಾಗೂ ಆತನ ಸೋದರ ಕುಂಭಕರ್ಣರ ಸಂಹಾರ ಮಾಡಲು ಮತ್ತು ಭೂಮಂಡಲವನ್ನು ಸಂರಕ್ಷಿಸಲು ಎತ್ತಿದ ಅವತಾರವೇ ರಾಮಾವತಾರ.

8) ಕೃಷ್ಣಾವತಾರ :

ಪ್ರಳಯಕಾಲದಲ್ಲಿ ಆಲದೆಲೆಯ ಮೇಲೆ ಪವಡಿಸಿದ ಪರಮಾತ್ಮನಾದ ಕೃಷ್ಣ, ಧರ್ಮಸಂಸ್ಥಾಪನಾರ್ಥವಾಗಿ ಈ ಧರೆಯಲ್ಲಿ ಅವತರಿಸಿದ ಶ್ರೀಮನ್ನಾರಾಯಣ. ಶಿಶುಪಾಲ ಮತ್ತು ದಂತವಕ್ತ್ರರ ಸಂಹಾರವೇ ಈ ಅವತಾರದ ಪ್ರಮುಖ ಕಾರಣವಾದರೂ, ಕಂಸ, ಚಾಣೂರ, ಪೂತನಿ, ಜರಾಸಂಧ, ಕೌರವರೇ ಮೊದಲಾದ ಲೋಕಕಂಟಕರ ನಾಶಕ್ಕೂ ಕೃಷ್ಣ ಕಾರಣನಾದ. ಭಗವದ್ಗೀತೆಯೆಂಬ ಮಹಾನ್ ಕೊಡುಗೆಯನ್ನೂ ಈ ನಾಡಿಗೆ ನೀಡಿದ.

9) ಬೌದ್ಧಾವತಾರ :

ಪ್ರಶ್ನೆ: –

ಆಚಾರ್ಯರೇ ಒಂದು ವಿನಂತಿ

ಬುದ್ಧ ಗೂ ಮತ್ತು dashavarada ಬೌದ್ಧಗೂ ಏನು ವ್ಯತ್ಯಾಸ ಮತ್ತು ಭಗವಂತನ ಬೌದ್ಧ ಅವತಾರದ ಬಗ್ಗೆ ವಿವರಣೆ, ಮಹಿಮೆ ಬಗ್ಗೆ ತಿಳಿಸಿ ಕೊಡಬೇಕಾಗಿ ವಿನಂತಿ.

ತತಃ ಕಲೌ ಸಂಪ್ರವೃತ್ತೇ ಸಮ್ಮೋಹಾಯ ಸುರದ್ವಿಷಾಮ್ |

ಬುದ್ಧೋ ನಾಮ್ನಾ ಜಿನಸುತಃ ಕೀಕಟೇಷು ಭವಿಷ್ಯತಿ ||-(ಶ್ರೀಮದ್ಭಾಗವತಮ್-ಪ್ರಥಮ ಸ್ಕಂಧ – ಅಧ್ಯಾಯ ೩ – ೨೪ನೆಯ ಶ್ಲೋಕ)

ಕೃಷ್ಣಾವತಾರದ ನಂತರ ಕಲಿಯುಗದ ಸಂಧಿಕಾಲವು ಪ್ರಾರಂಭವಾದಾಗ ದೈತ್ಯರನ್ನು ಮೋಹಗೊಳಿಸಲು ಕೀಕಟದೇಶದ ಮಧ್ಯದಲ್ಲಿ ಗಮ್ಯ ಪ್ರದೇಶದಲ್ಲಿ ಬುದ್ಧನೆಂಬ ಹೆಸರಿನಿಂದ ಅವತರಿಸಿದ ಮಗನು ಜಿನನ ಮಗನೆಂದು ಭಾವಿಸಲ್ಪಡುವನು .

ಶ್ಲೋಕಕ್ಕೆ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ತಾತ್ಪರ್ಯ ಬರೆಯುತ್ತಾ –

ಮೋಹನಾರ್ಥಂ ದಾನವಾನಾಂ ಬಾಲರೂಪಂ ಪಥಿ ಸ್ಥಿತಂ |

ಪುತ್ರಂ ತಂ ಕಲ್ಪಯಾಮಾಸ ಮೂಢಬುದ್ಧಿರ್ಜಿನಸ್ವಯಂ||

ತತಃ ಸಂಮೋಹಮಾಸ ಜಿನಾದ್ಯಾನಸುರಾಂಶಕಾನ್ |

ಭಗವಾನ್ ವಾಗ್ಭಿರುಗ್ರಾಭಿಃ ಹರಿಂ ಸಾ ವಾಚಿಭಿರ್ಹರಿಃ ||- ಇತಿ ಬ್ರಹ್ಮಾಂಡೇ ||

ದಾನವರನ್ನು ಮೋಹಿಸುವದಕ್ಕಾಗಿ ಬಾಲರೂಪಿಯಾಗಿ ದಾರಿಯಲ್ಲಿದ್ದ ಶ್ರೀಹರಿಯನ್ನು ದುರ್ಬುದ್ಧಿಯದ ಜಿನನು ತಾನಾಗಿಯೇ ಮಗನೆಂದು ಕಲ್ಪಿಸಿಕೊಂಡನು . ಆಮೇಲೆ ಶ್ರೀಹರಿಯು ಅಹಿಂಸೆಯ ಮುಖ್ಯಧರ್ಮವೆಂದು ಹೇಳುವ ಕ್ರೂರ ಮಾತುಗಳಿಂದ ಜಿನ ಮುಂತಾದ ಅಸುರಾಂಶರರನ್ನು ವಂಚಿಸಿದನು . ಎಂದು ಬ್ರಹ್ಮಾಂಡಪುರಾಣದಲ್ಲಿದೆ .

ಕಲಿಯುಗ ಪ್ರಾರಂಭದ ಮೊದಲು ತ್ರಿಪುರವಾಸಿಗಳಾದ ದೈತ್ಯರು ವೇದಮಾರ್ಗದಲ್ಲಿ ಪ್ರವೃತ್ತರಾದಾಗ ಅವರನ್ನು ಮೋಹಿಸಲು ಮಗಧ ದೇಶದ ಮಧ್ಯವಾದ ಗಯಾ ಪ್ರದೇಶದಲ್ಲಿ ಬುದ್ಧನೆಂಬ ಹೆಸರಿನಿಂದ ಜಿನಸುತನೆಂದು ಶ್ರೀಹರಿಯು ಕಲ್ಪಿಸಲ್ಪಟ್ಟವನೆಂದು ಭಾವ .

ಇದು ಭಗವಂತನ ಬುದ್ಧಾವತಾರ .

ಇನ್ನು ಈಗ ನಾವು ನೋಡುವ ಕೇಳುವ ಗೌತಮ ಬುದ್ಧ ಇವನೊಬ್ಬ ದೈತ್ಯ , ಈ ದೈತ್ಯನು ಭಗವಂತನ ಬುದ್ಧಾವತಾರದ ನಂತರ ಎಷ್ಟೋವರ್ಷಗಳ ನಂತರ ಹುಟ್ಟಿದವನು , ಇವನು ಎಷ್ಟೋವರ್ಷ ಬೋಧಿವೃಕ್ಷದ ಕೆಳಗಡೆ ಕುಳಿತು ತಪಸ್ಸನ್ನಾಚರಿಸಿದ್ದರಿಂದ ಈತನಿಗೆ ಬುದ್ಧ ಎಂಬ ಹೆಸರು ಬಂತು , ಈ ದೈತ್ಯ ಏನ ಮಾಡಿದ ಅಂದ್ರ , ಭಗವಂತನು ಬುದ್ಧಾವತಾರದಿಂದ ಉಪದೇಶಿಸಿದ ತತ್ತ್ವಗಳನ್ನು ತನಗೆ ಹೇಗೆ ಬೇಕೋ ಹಾಗೆ ತಿರುಚಿ ಅಪದ್ಧವಾಗಿ ಬೋಧನೆ ಮಾಡಿದ , ಮುಂದೆ ಇದೇ ಬೌದ್ಧ ಮತ ಎಂದು ಪ್ರಸಿದ್ಧಿಗೆ ಬಂತು 🙏🏼

ಮಹಾವಿಷ್ಣುವಿನ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ದಶಾವತಾರ ಸ್ತೋತ್ರವನ್ನು ಪ್ರತಿನಿತ್ಯ ತಪ್ಪದೇ ಪಠಿಸಿ. ಮಾನಸಿಕವಾಗಿ ಧೈರ್ಯ, ಶಾಂತ ಚಿತ್ತ, ಜೀವನದಲ್ಲಿ ಸಂತೋಷ, ನೆಮ್ಮದಿ ಬೇಕೆಂದರೆ ವಿಷ್ಣುವಿನ ದಶಾವತಾರ ಸ್ತೋತ್ರವನ್ನು ತಪ್ಪದೇ ಓದಿ. ಇದರಿಂದ ಮಹಾವಿಷ್ಣುವಿನ ಎಲ್ಲಾ 10 ಅವತಾರಗಳ ಅನುಗ್ರಹ ಮತ್ತು ಶಕ್ತಿ ನಿಮಗೆ ಸಿಗುತ್ತದೆ.

ರಾಮ ಹರೇ ಕೃಷ್ಣ ಹರೇ ತವ ನಾಮ ವದಾಮಿ ಸದಾ ನೃಹರೇ ।

ನಾಮಸ್ಮರಣಾದನ್ಯೋಪಾಯಂ ನಹಿ ಪಶ್ಯಾಮೋ ಭವತರಣೇ ।।೧।।

ವೇದೋದ್ಧಾರ- ವಿಚಾರಮತೇ ಸೋಮಕದಾನವ – ಸಂಹರಣೇ ।

ಮೀನಾಕಾರ -ಶರೀರ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೨।।

ಮಂಥನಾಚಲ ಧಾರಣಹೇತೋ ದೇವಾಸುರ ಪರಿಪಾಲನ ಭೋಃ ।

ಕೂರ್ಮಾಕಾರ ಶರೀರ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೩।।

ಭೂಚೋರಕಹರ ಪುಣ್ಯದ ಮೂರ್ತೇ ಕ್ರೋಢೋಧೃತ ಭೂತೇಶ ಹರೇ ।

ಕ್ರೋಢಾಕಾರ ಶರೀರ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೪।।

ಹೇಮಕಶಿಪು ತನುಧಾರಣಹೇತೋ ಪ್ರಹ್ಲಾದಾಸುರಪಾಲನ ಭೋಃ ।

ನರಸಿಂಹಾಚ್ಯುತರೂಪ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೫।।

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಬಲಿಮದಭಂಜನ ವಿತತಮತೇ ಪಾದಾದ್ವಯಕೃತಲೋಕಕೃತೇ ।

ಪಟುವಟುವೇಷ ಮನೋಜ್ಞ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೬।।

ಕ್ಷಿತಿಪತಿವಂಶಸಂಭವಮೂರ್ತೇ ಕ್ಷಿತಿಪತಿರಕ್ಷಾಕ್ಷತಮೂರ್ತೇ ।

ಭೃಗುಪತಿರಮವರೇಣ್ಯ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೭।।

ಸೀತಾವಲ್ಲಭ ದಾಶರಥೇ ದಶರಥನಂದನ ಲೋಕಗುರೋ ।

ರಾವಣಮರ್ದನರಾಮ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೮।।

ಕೃಷ್ಣಾನಂದ ಕೃಪಾಜಲಧೇ ಕಂಸಾರೇ ಕಮಲೇಶಹರೇ ।

ಕಾಲಿಯಮರ್ಧನ ಕೃಷ್ಣ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೯।।

ತ್ರಿಪುರಸತೀ ಮಾನವಿಹರಣಾ ತ್ರಿಪುರವಿಜಯಮಾರ್ಗಣರೂಪಾ ।

ಶುದ್ಧಜ್ಞಾನವಿಬುದ್ಧ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೧೦।।

ದುಷ್ಟವಿಮರ್ಧನ ಶಿಷ್ಟಹರೇ ಕಲಿತುರಗೋತ್ತಮ ವಾಹನ ರೇ ।

ಕಲ್ಕಿನ್ ಕರ ಕರವಾಲ ನಮೋ ಹರಿಭಕ್ತಂ ತೇ ಪರಿಪಾಲಯಮಾಮ್ ।।೧೧।।

Share. Facebook Twitter LinkedIn WhatsApp Email

Related Posts

ಚಿಕ್ಕಬಳ್ಳಾಪುರದಲ್ಲಿ ಯುವಕ, ಯುವತಿಯನ್ನು ಅಡಗಟ್ಟಿ ನೈತಿಕ ಪೊಲೀಸ್ ಗಿರಿ : ಇಬ್ಬರು ಅನ್ಯಕೋಮಿನ ಪುಂಡರು ಅರೆಸ್ಟ್!

03/02/2026 9:39 AM1 Min Read

ಮುಸ್ಲಿಂ ಮಕ್ಕಳು ಶಾಲೆ ಕಲಿಯೋ ಬದಲು, ಭಯೋತ್ಪಾದಕರು, ದೇಶವಿರೋಧಿ ಚಟುವಟಿಕೆಗೆ ಬಳಸಿದರೆ ಒಳ್ಳೆಯದು : ಶಾಸಕ ಯತ್ನಾಳ್!

03/02/2026 9:19 AM1 Min Read

BREAKING : ವಂಟಮೂರಿಯಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ಕೇಸ್ : ಇಂದು 12 ಆರೋಪಿಗಳಿಗೆ ಶಿಕ್ಷೆ ಪ್ರಕಟ

03/02/2026 9:07 AM1 Min Read
Recent News

SHOCKING : ದೇಶದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಎಲೆಕ್ಷನ್ ನಲ್ಲಿ ಸ್ಪರ್ಧಿಸಲು ಹೆತ್ತ ಮಗಳನ್ನೆ ಕೊಂದ ಪಾಪಿ ತಂದೆ!

03/02/2026 10:01 AM

ಲೋಕ ಕಲ್ಯಾಣಾರ್ಥವಾಗಿ ವಿಷ್ಣು ಎತ್ತಿದ ದಶಾವತಾರದ ಸಂಕ್ಷಿಪ್ತ ಪರಿಚಯ ಇಲ್ಲಿದೆ

03/02/2026 9:43 AM

ಚಿಕ್ಕಬಳ್ಳಾಪುರದಲ್ಲಿ ಯುವಕ, ಯುವತಿಯನ್ನು ಅಡಗಟ್ಟಿ ನೈತಿಕ ಪೊಲೀಸ್ ಗಿರಿ : ಇಬ್ಬರು ಅನ್ಯಕೋಮಿನ ಪುಂಡರು ಅರೆಸ್ಟ್!

03/02/2026 9:39 AM

ಮುಸ್ಲಿಂ ಮಕ್ಕಳು ಶಾಲೆ ಕಲಿಯೋ ಬದಲು, ಭಯೋತ್ಪಾದಕರು, ದೇಶವಿರೋಧಿ ಚಟುವಟಿಕೆಗೆ ಬಳಸಿದರೆ ಒಳ್ಳೆಯದು : ಶಾಸಕ ಯತ್ನಾಳ್!

03/02/2026 9:19 AM
State News
KARNATAKA

ಲೋಕ ಕಲ್ಯಾಣಾರ್ಥವಾಗಿ ವಿಷ್ಣು ಎತ್ತಿದ ದಶಾವತಾರದ ಸಂಕ್ಷಿಪ್ತ ಪರಿಚಯ ಇಲ್ಲಿದೆ

By kannadanewsnow0503/02/2026 9:43 AM KARNATAKA 5 Mins Read

ದಶಾವತಾರದ ಸಂಕ್ಷಿಪ್ತ ಪರಿಚಯ ಬ್ರಹ್ಮದೇವ ಸೃಷ್ಟಿಕರ್ತನಾದರೆ, ವಿಷ್ಣು ಸ್ಥಿತಿ ಸ್ಥಾಪಕ, ಶಿವಲಯಕರ್ತ. ತ್ರಿಮೂರ್ತಿಗಳಲ್ಲಿ ಸ್ಥಿತಿ ಸ್ಥಾಪಕನಾದ ಶ್ರೀಮನ್ನಾರಾಯಣ ದುಷ್ಟರನ್ನು ಸಂಹರಿಸಲು…

ಚಿಕ್ಕಬಳ್ಳಾಪುರದಲ್ಲಿ ಯುವಕ, ಯುವತಿಯನ್ನು ಅಡಗಟ್ಟಿ ನೈತಿಕ ಪೊಲೀಸ್ ಗಿರಿ : ಇಬ್ಬರು ಅನ್ಯಕೋಮಿನ ಪುಂಡರು ಅರೆಸ್ಟ್!

03/02/2026 9:39 AM

ಮುಸ್ಲಿಂ ಮಕ್ಕಳು ಶಾಲೆ ಕಲಿಯೋ ಬದಲು, ಭಯೋತ್ಪಾದಕರು, ದೇಶವಿರೋಧಿ ಚಟುವಟಿಕೆಗೆ ಬಳಸಿದರೆ ಒಳ್ಳೆಯದು : ಶಾಸಕ ಯತ್ನಾಳ್!

03/02/2026 9:19 AM

BREAKING : ವಂಟಮೂರಿಯಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ಕೇಸ್ : ಇಂದು 12 ಆರೋಪಿಗಳಿಗೆ ಶಿಕ್ಷೆ ಪ್ರಕಟ

03/02/2026 9:07 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.