ಕಲಬುರಗಿ : ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಕಲಬುರಗಿ ಜನತೆಗೆ ಇಂದು ವರುಣ ಕೃಪೆ ತೋರಿದ್ದು ಗುಡುಗು ಸಿಡಿಲುಗಳಿಂದ ಸುಮಾರು ಒಂದು ಗಂಟೆಗಳ ಕಾಲ ನಿರಂತರವಾಗಿ ಭಾರಿ ಮಳೆ ಸುರಿಯಿತು. ಅಲ್ಲದೆ ಜಿಲ್ಲೆಯ ಆಳಂದ ತಾಲೂಕಿನ ನರೋಣದಲ್ಲಿ ಸಿಡಿಲಿಗೆ 10 ವರ್ಷದ ಬಾಲಕನೊಬ್ಬ ಬಲಿಯಾಗಿರುವ ಘಟನೆ ನಡೆದಿದೆ. ಹೊಲದಿಂದ ಎತ್ತಿನಗಾಡಿಯಲ್ಲಿ ಮನೆಗೆ ಬರುವಾಗ ಘಟನೆ ಸಂಭವಿಸಿದೆ.
ಹೌದು ಕಲ್ಬುರ್ಗಿಯಲ್ಲಿ ಸಿಡಿಲಿಗೆ ಬಾಲಕ ಬಲಿಯಾಗಿದ್ದಾನೆ. ಆಳಂದ ತಾಲೂಕಿನ ನರೋಣ ಗ್ರಾಮದಲ್ಲಿ ಬಾಲಕ ಬಲಿಯಾಗಿದ್ದಾನೆ. ಮಳೆ ನೀರಿನ ರಭಸಕ್ಕೆ ದ್ವಿಚಕ್ರ ವಾಹನಗಳು ಕೂಡ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಆಳಂದ ತಾಲೂಕಿನಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.ಅಲ್ಲದೆ ಖಜುರಿಯಲ್ಲಿ ಲಾರಿ ಒಂದು ಪಲ್ಟಿಯಾಗಿದೆ. ಒಂದು ಲಾರಿ ಕೂಡ ಪಲ್ಟಿಯಾಗಿದೆ.
ಬೆಂಗಳೂರಲ್ಲಿ ತುಂತುರು ಮಳೆ
ಅಲ್ಲದೆ ಇತ್ತ ಬೆಂಗಳೂರಲ್ಲಿ ಕೂಡ ಮೋಡ ಕವಿದ ವಾತಾವರಣದ ಜೊತೆ ಮಳೆಯಾಗಿದೆ. ಬೆಂಗಳೂರಿನ ಕೆ ಆರ್ ಸರ್ಕಲ್, ವಿಧಾನಸೌಧ ಸೇರಿದಂತೆ ಮಳೆಯಾಗಿದೆ.ಹವಾಮಾನ ಇಲಾಖೆಯಿಂದ ಹಗುರ ಮಳೆ ಮುನ್ಸೂಚನೆ ಇತ್ತು. ಕೆಂಗೇರಿ, ಆರ್ ಆರ್ ನಗರ, ಬೇಗೂರು ಬಳಿ ಬೆಳಿಗ್ಗೆಯಿಂದ ತುಂತುರು ಮಳೆಯಾಗಿದೆ. ಸುಮಾರು 150 ದಿನಗಳ ಬಳಿಕ ಮಳೆಯಾಗಿದೆ. ಅಲ್ಲದೆ ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.