Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಿಲಯನ್ಸ್ ಎಜಿಎಂ ಡಿಜಿಟಲ್ ಅಸಿಸ್ಟೆಂಟ್ ಗೆ ಚಾಲನೆ: ಷೇರುದಾರರಿಗೆ ಇ-ವೋಟಿಂಗ್, ಡಿವಿಡೆಂಡ್ ಮಾಹಿತಿ ಲಭ್ಯ

ಗೃಹಲಕ್ಷ್ಮಿ ಮರು ಅರ್ಜಿ ಸಲ್ಲಿಕೆ ಆದೇಶ : ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಫಲಾನುಭವಿಗಳ ತೀವ್ರ ಆಕ್ರೋಶ

ರಾಜ್ಯದ ರೈತರಿಗೆ ಗುಡ್ ನ್ಯೂಸ್: `ಕಾಲು ದಾರಿ, ಬಂಡಿದಾರಿ’ ಸಮಸ್ಯೆಗೆ ಸರ್ಕಾರದಿಂದ ಪರಿಹಾರ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ರೈತರಿಗೆ ಗುಡ್ ನ್ಯೂಸ್: `ಕಾಲು ದಾರಿ, ಬಂಡಿದಾರಿ’ ಸಮಸ್ಯೆಗೆ ಸರ್ಕಾರದಿಂದ ಪರಿಹಾರ.!
KARNATAKA

ರಾಜ್ಯದ ರೈತರಿಗೆ ಗುಡ್ ನ್ಯೂಸ್: `ಕಾಲು ದಾರಿ, ಬಂಡಿದಾರಿ’ ಸಮಸ್ಯೆಗೆ ಸರ್ಕಾರದಿಂದ ಪರಿಹಾರ.!

By kannadanewsnow57

ಬೆಂಗಳೂರು: ರಾಜ್ಯದಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಮತ್ತು ಬೆಳೆದ ಫಸಲನ್ನು ಸಾಗಿಸಲು ಪಕ್ಕದ ಖಾಸಗಿ ಜಮೀನುಗಳಲ್ಲಿನ ಕಾಲುದಾರಿ ಅಥವಾ ಬಂಡಿದಾರಿಗಳನ್ನು ಬಳಸುವಾಗ ಎದುರಿಸುತ್ತಿದ್ದ ದೊಡ್ಡ ಸಮಸ್ಯೆಗೆ ಕರ್ನಾಟಕ ಸರ್ಕಾರ ಮಹತ್ವದ ಪರಿಹಾರ ಸೂಚಿಸಿದೆ. ಗ್ರಾಮ ನಕ್ಷೆ (ಮ್ಯಾಪ್) ಹಾಗೂ ಸಾಂಪ್ರದಾಯಿಕವಾಗಿ ಬಳಕೆಯಲ್ಲಿರುವ ದಾರಿಗಳನ್ನು ಬಂದ್ ಮಾಡುವ ಅಥವಾ ಅಡ್ಡಿಪಡಿಸುವ ಭೂಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ತಹಶೀಲ್ದಾರ್‌ಗಳಿಗೆ ಸಂಪೂರ್ಣ ಅಧಿಕಾರ ನೀಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ರೈತರ ದಾರಿ ಸಮಸ್ಯೆಗೆ ಕಾರಣವೇನು?
ರಾಜ್ಯದಾದ್ಯಂತ ರೈತರು ತಮ್ಮ ಕೃಷಿ ಉಪಕರಣಗಳನ್ನು ತೆಗೆದುಕೊಂಡು ಹೋಗಲು ಮತ್ತು ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಅಕ್ಕಪಕ್ಕದ ಖಾಸಗಿ ಜಮೀನುಗಳ ದಾರಿಯನ್ನೇ ಅವಲಂಬಿಸಿರುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ದ್ವೇಷ, ಅಸೂಯೆ ಅಥವಾ ಹೊಂದಾಣಿಕೆಯ ಕೊರತೆಯಿಂದಾಗಿ ಕೆಲವು ಭೂಮಾಲೀಕರು ಇಂತಹ ಸಾಂಪ್ರದಾಯಿಕ ದಾರಿಗಳನ್ನು ಮುಚ್ಚುತ್ತಿರುವುದು ಅಥವಾ ರೈತರು ಓಡಾಡದಂತೆ ಅಡ್ಡಿಪಡಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಇದರಿಂದಾಗಿ ಫಸಲು ನಷ್ಟ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿದ್ದವು.

ಕಾನೂನು ಏನು ಹೇಳುತ್ತದೆ?
ಸರ್ಕಾರದ ಸುತ್ತೋಲೆಯ ಪ್ರಕಾರ, ರೈತರ ದಾರಿಯ ಹಕ್ಕುಗಳನ್ನು ರಕ್ಷಿಸಲು ಎರಡು ಪ್ರಮುಖ ಕಾನೂನು ಅವಕಾಶಗಳಿವೆ:

ಕರ್ನಾಟಕ ಭೂ ಕಂದಾಯ ನಿಯಮಗಳು, 1966 (ನಿಯಮ 59): ಇದರ ಅಡಿಯಲ್ಲಿ ‘ದಾರಿಯ ಹಕ್ಕುಗಳು’ ಮತ್ತು ಇತರ ಅನುಭೋಗದ ಹಕ್ಕುಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದ್ದು, ಸಂಬಂಧಪಟ್ಟ ಜಮೀನಿನ ಭಾಗಿದಾರರು ಒಪ್ಪಿರುವ ಸಂದರ್ಭದಲ್ಲಿ ಈ ಹಕ್ಕುಗಳನ್ನು ಅಧಿಕೃತ ದಾಖಲೆ ರಿಜಿಸ್ಟರ್‌ನಲ್ಲಿ ನಮೂದಿಸಲು ಅವಕಾಶವಿದೆ.

ದಿ ಇಂಡಿಯನ್ ಈಸ್ಮೆಂಟ್ ಆಕ್ಟ್, 1882 (The Indian Easement Act, 1882): ಈ ಕಾಯ್ದೆಯನ್ವಯ ಪ್ರತಿ ಜಮೀನಿನ ಮಾಲೀಕರು ಅಥವಾ ಅನುಭವದಾರರು ತಮ್ಮ ಭೂಮಿಯನ್ನು ಪ್ರವೇಶಿಸಲು ಮತ್ತು ವಹಿವಾಟು ನಡೆಸಲು ‘ಈಸ್ಮೆಂಟ್’ (Easement) ಹಕ್ಕನ್ನು ಹೊಂದಿರುತ್ತಾರೆ. ಇದನ್ನು ಬಾಜುಬದಿಯವರು ಯಾವುದೇ ಕಾರಣಕ್ಕೂ ಹತ್ತಿಕ್ಕಲು ಅಥವಾ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ.

ತಹಶೀಲ್ದಾರ್‌ಗಳಿಗೆ ಸಿಕ್ಕ ಅಧಿಕಾರವೇನು?
ಒಂದು ವೇಳೆ ಗ್ರಾಮ ನಕ್ಷೆಯಲ್ಲಿರುವ ಕಾಲುದಾರಿ, ಬಂಡಿದಾರಿ ಅಥವಾ ರಸ್ತೆಗಳಲ್ಲಿ ಇತರ ರೈತರು ತಿರುಗಾಡಲು ಬಿಡದೆ ಅಡ್ಡಿಪಡಿಸಿದರೆ ಅಥವಾ ದಾರಿಯನ್ನೇ ಮುಚ್ಚಿ ಹಾಕಿದರೆ, ಸ್ಥಳೀಯ ತಹಶೀಲ್ದಾರ್‌ಗಳು ತಕ್ಷಣವೇ ಮಧ್ಯಪ್ರವೇಶಿಸಿ ಅಂತಹ ಅಡೆತಡೆಗಳನ್ನು ತೆರವುಗೊಳಿಸಿ ದಾರಿಯನ್ನು ಸುಗಮಗೊಳಿಸಲು ಸರ್ಕಾರ ಸೂಚಿಸಿದೆ.

ಅಲ್ಲದೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC), 1973ರ ಕಲಂ 147ರ ಅನ್ವಯ ಭೂಮಿ ಮತ್ತು ನೀರಿನ ಹಕ್ಕಿನ ಬಳಕೆಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ಶಾಂತಿ ಭಂಗ ಉಂಟಾಗುವ ಸಂದರ್ಭ ಎದುರಾದರೆ, ತಹಶೀಲ್ದಾರ್‌ಗಳು ‘ತಾಲ್ಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್’ ಆಗಿ ಕಾನೂನು ರೀತ್ಯಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ (ಭೂ ಮಂಜೂರಾತಿ-1) ವಿಮಲಮ್ಮ ಸಿ. ಅವರು ಹೊರಡಿಸಿರುವ ಈ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ಆದೇಶದಿಂದಾಗಿ ದಾರಿ ವಿವಾದಗಳಿಂದಾಗಿ ವರ್ಷಗಟ್ಟಲೆ ಕೋರ್ಟ್, ಕಚೇರಿ ಅಲೆಯುತ್ತಿದ್ದ ಮತ್ತು ನೆರೆಹೊರೆಯವರೊಂದಿಗೆ ಜಗಳ ಕಾಯುತ್ತಿದ್ದ ಲಕ್ಷಾಂತರ ರೈತರಿಗೆ ನಿರಾಳತೆ ಸಿಕ್ಕಂತಾಗಿದೆ. ತಹಶೀಲ್ದಾರ್ ಮಟ್ಟದಲ್ಲೇ ಇನ್ನು ಮುಂದೆ ಇಂತಹ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ದೊರೆಯಲಿದೆ.

cart path' problem! Good news for the state's farmers: Government provides solution to the 'footpath
Share. Facebook Twitter LinkedIn WhatsApp Email

Related Posts

ಗೃಹಲಕ್ಷ್ಮಿ ಮರು ಅರ್ಜಿ ಸಲ್ಲಿಕೆ ಆದೇಶ : ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಫಲಾನುಭವಿಗಳ ತೀವ್ರ ಆಕ್ರೋಶ

2 Mins Read

Indian Blackberry: ಈ ವರ್ಷ ನೇರಳೆ ಹಣ್ಣುಗಳ ವಿಪರೀತ ಫಸಲು; ಹಿರಿಯರು ಹೇಳೋ ಆಘಾತಕಾರಿ ಮಾಹಿತಿ ಇಲ್ಲಿದೆ

2 Mins Read

BIG NEWS : HD ಕುಮಾರಸ್ವಾಮಿ ಗೋಸುಂಬೆ ರಾಜಕಾರಣಿ ಮಾಡುತ್ತಿದ್ದಾರೆ : ಶಾಸಕ HC ಬಾಲಕೃಷ್ಣ ವಾಗ್ದಾಳಿ!

2 Mins Read
Recent News

ರಿಲಯನ್ಸ್ ಎಜಿಎಂ ಡಿಜಿಟಲ್ ಅಸಿಸ್ಟೆಂಟ್ ಗೆ ಚಾಲನೆ: ಷೇರುದಾರರಿಗೆ ಇ-ವೋಟಿಂಗ್, ಡಿವಿಡೆಂಡ್ ಮಾಹಿತಿ ಲಭ್ಯ

ಗೃಹಲಕ್ಷ್ಮಿ ಮರು ಅರ್ಜಿ ಸಲ್ಲಿಕೆ ಆದೇಶ : ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಫಲಾನುಭವಿಗಳ ತೀವ್ರ ಆಕ್ರೋಶ

ರಾಜ್ಯದ ರೈತರಿಗೆ ಗುಡ್ ನ್ಯೂಸ್: `ಕಾಲು ದಾರಿ, ಬಂಡಿದಾರಿ’ ಸಮಸ್ಯೆಗೆ ಸರ್ಕಾರದಿಂದ ಪರಿಹಾರ.!

Indian Blackberry: ಈ ವರ್ಷ ನೇರಳೆ ಹಣ್ಣುಗಳ ವಿಪರೀತ ಫಸಲು; ಹಿರಿಯರು ಹೇಳೋ ಆಘಾತಕಾರಿ ಮಾಹಿತಿ ಇಲ್ಲಿದೆ

State News
KARNATAKA

ಗೃಹಲಕ್ಷ್ಮಿ ಮರು ಅರ್ಜಿ ಸಲ್ಲಿಕೆ ಆದೇಶ : ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಫಲಾನುಭವಿಗಳ ತೀವ್ರ ಆಕ್ರೋಶ

By ಸುರೇಶ್‌ KARNATAKA 2 Mins Read

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಗೆ ಮರು ಅರ್ಜಿ ಸಲ್ಲಿಸುವಂತೆ ಸರ್ಕಾರ ಸೂಚನೆ ಬೆನ್ನಲ್ಲೇ,…

ರಾಜ್ಯದ ರೈತರಿಗೆ ಗುಡ್ ನ್ಯೂಸ್: `ಕಾಲು ದಾರಿ, ಬಂಡಿದಾರಿ’ ಸಮಸ್ಯೆಗೆ ಸರ್ಕಾರದಿಂದ ಪರಿಹಾರ.!

Indian Blackberry: ಈ ವರ್ಷ ನೇರಳೆ ಹಣ್ಣುಗಳ ವಿಪರೀತ ಫಸಲು; ಹಿರಿಯರು ಹೇಳೋ ಆಘಾತಕಾರಿ ಮಾಹಿತಿ ಇಲ್ಲಿದೆ

BIG NEWS : HD ಕುಮಾರಸ್ವಾಮಿ ಗೋಸುಂಬೆ ರಾಜಕಾರಣಿ ಮಾಡುತ್ತಿದ್ದಾರೆ : ಶಾಸಕ HC ಬಾಲಕೃಷ್ಣ ವಾಗ್ದಾಳಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.