Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೇರಳದ ತ್ರಿಶೂರ್ ನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ: ಮೂವರ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

21/04/2026 5:12 PM

ಭಾರತೀಯ ಸೇನೆ ಸೇರಬಯಸುವ ಯುವಕರಿಗೆ ಸುವರ್ಣಾವಕಾಶ: ಹಿಂದುಳಿದ ವರ್ಗಗಳ ಇಲಾಖೆಯಿಂದ ಉಚಿತ ತರಬೇತಿ!

21/04/2026 5:05 PM

ಏಪ್ರಿಲ್.23, 24ರಂದು ಸಿಇಟಿ ಪರೀಕ್ಷೆ: ಸಿಸಿಟಿವಿ ಕಣ್ಗಾವಲು, ಅಕ್ರಮ ತಡೆಗೆ ತಂತ್ರಜ್ಞಾನ ಬಳಕೆ ಮಾಡಿದ ಕೆಇಎ

21/04/2026 5:01 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಪಘಾತ, ಅಪರಾಧ ರಹಿತ ಸೇವೆ ಸಲ್ಲಿಸೋ ‘KSRTC ಬಸ್ ಚಾಲಕ’ರಿಗೆ ಗುಡ್ ನ್ಯೂಸ್: ಪ್ರೋತ್ಸಾಹ ಧನ ಹೆಚ್ಚಳ
KARNATAKA

ಅಪಘಾತ, ಅಪರಾಧ ರಹಿತ ಸೇವೆ ಸಲ್ಲಿಸೋ ‘KSRTC ಬಸ್ ಚಾಲಕ’ರಿಗೆ ಗುಡ್ ನ್ಯೂಸ್: ಪ್ರೋತ್ಸಾಹ ಧನ ಹೆಚ್ಚಳ

By kannadanewsnow0915/12/2025 4:46 PM

ಬೆಂಗಳೂರು: ಅಪಘಾತ, ಅಪರಾಧ ರಹಿತವಾಗಿ ಸೇವೆ ಸಲ್ಲಿಸುವಂತ ಕೆ ಎಸ್ ಆರ್ ಟಿ ಸಿ ಚಾಲಕರಿಗೆ ಗುಡ್ ನ್ಯೂಸ್ ಎನ್ನುವಂತೆ ಪ್ರೋತ್ಸಾಹ ಧನವನ್ನು ಹೆಚ್ಚಳ ಮಾಡಿ ನಿಗಮವು ಆದೇಶ ಹೊರಡಿಸಿದೆ.

ಈ ಕುರಿತಂತೆ ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕರಾದಂತ ಅಕ್ರಂ ಪಾಷಾ ಅವರು ಸುತ್ತೋಲೆ ಹೊರಡಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನಿಗಮದ ವಾಹನಗಳಲ್ಲಿ ಪಯಾಣಿಸುವವರ ಸುರಕ್ಷತೆಗಾಗಿ ಹಲವಾರು ಯೋಜನೆಗಳನ್ನು ಕೈಗೊಂಡಿದ್ದು, ಅದರಲ್ಲಿ ಮುಖ್ಯವಾಗಿ ಅಪಘಾತ ರಹಿತ ಚಾಲನೆಯ ಪ್ರವೃತ್ತಿಯನ್ನು ಹೊಂದಿರುವ ಚಾಲಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಪಘಾತ ಮುಕ್ತ ಚಾಲನೆಗೆ ಪ್ರೇರೆಪಿಸುವ ಸಲುವಾಗಿ ಅಪಘಾತರಹಿತ ಮತ್ತು ಅಪರಾಧರಹಿತ ಸೇವೆ ಸಲ್ಲಿಸಿರುವ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಮತ್ತು ಬೆಳ್ಳಿ ಪದಕ ವಿತರಿಸುವ ಜೊತೆಗೆ ಪ್ರಶಂಸನಾ ಪತ್ರದೊಂದಿಗೆ ನಗದು ಪುರಸ್ಕಾರವನ್ನು ನೀಡಲಾಗುತ್ತಿದೆ. ನಂತರ ಪದಕ ಪಡೆದ ಚಾಲಕರಿಗೆ ಪ್ರತಿ ತಿಂಗಳು ಮಾಸಿಕ ಭತ್ಯೆಯನ್ನು ನೀಡಲಾಗುತ್ತಿದೆ ಎಂದಿದ್ದಾರೆ.

ಮುಂದುವರೆದು, ಮುಖ್ಯ ಮಂತ್ರಿ ಚಿನ್ನದ ಪದಕ ಮತ್ತು ಬೆಳ್ಳಿ ಪದಕ ಪಡೆದ ಚಾಲಕರಿಗೆ ಪಶಂಸನಾ ಪತ್ರದೊಂದಿಗೆ ನೀಡುತ್ತಿದ್ದ ನಗದು ಪುರಸ್ಕಾರ ಮತ್ತು ಪ್ರತಿ ತಿಂಗಳು ನೀಡುತ್ತಿದ್ದ ಮಾಸಿಕ ಭತ್ಯೆಯನ್ನು ದಿನಾಂಕ:16.09.2025 ರಂದು ಜರುಗಿದ 32 ನೇ ಕರಾರಸಾನಿಗಮ ಪುಯಾಣಿಕರ ಅಪಘಾತ ಪರಿಹಾರ ನಿಧಿ ನ್ಯಾಸ ಮಂಡಳಿ ಸಭೆಯ ನಿರ್ಣಯದಂತೆ ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ ಎಂದು ಹೇಳಿದ್ದಾರೆ.

ಹೀಗಿದೆ ಅಪಘಾತ ರಹಿತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲನಾ ಸಿಬ್ಬಂದಿಗಳ ಮಾಸಿಕ ಭತ್ಯೆ ಮತ್ತು ನಗದು ಪುರಸ್ಕಾರದ ಹೆಚ್ಚದ ಮೊತ್ತ

1. ಮುಖ್ಯ ಮಂತ್ರಿ ಚಿನ್ನದ ಪದಕಕ್ಕೆ ಅರ್ಹರಾದ ಚಾಲಕರಿಗೆ (ಇಲಾಖಾ ವಾಹನಗಳ ಚಾಲಕರು ಸೇರಿದಂತೆ) ನೀಡುವ ನಗದು ಪುರಸ್ಕಾರವನ್ನು ರೂ.5,000/- ಗಳನ್ನು ಪರಿಷ್ಕರಿಸಿ ರೂ.10,000/- ನಿಗದಿಪಡಿಸಲಾಗಿದೆ.

2. ಮುಖ್ಯ ಮಂತ್ರಿ ಚಿನ್ನದ ಪದಕ ಪಡೆದ ಚಾಲಕರಿಗೆ (ಇಲಾಖಾ ವಾಹನಗಳ ಚಾಲಕರು ಸೇರಿದಂತೆ) ನೀಡುತ್ತಿದ್ದ ಮಾಸಿಕ ಭತ್ಯೆ ರೂ.500/- ಗಳನ್ನು ಪರಿಷ್ಕರಿಸಿ ರೂ.1,000/- ನಿಗದಿಪಡಿಸಲಾಗಿದೆ.

3. ಬೆಳ್ಳಿ ಪದಕಕ್ಕೆ ಅರ್ಹರಾದ ಚಾಲಕರಿಗೆ ನೀಡುವ ನಗದು ಪುರಸ್ಕಾರವನ್ನು ರೂ.2,500/- ಗಳನ್ನು ಪರಿಷ್ಕರಿಸಿ ರೂ.5,000/- ನಿಗದಿಪಡಿಸಲಾಗಿದೆ.

4. ಬೆಳ್ಳಿ ಪದಕ ಪಡೆದ ಚಾಲಕರಿಗೆ ನೀಡುತ್ತಿದ್ದ ಮಾಸಿಕ ಭತ್ಯೆಯನ್ನು ರೂ.250/-ಗಳನ್ನು ಪರಿಷ್ಕರಿಸಿ ರೂ.500/- ನಿಗದಿಪಡಿಸಲಾಗಿದೆ.

5. ಪರಿಷ್ಕರಿಸಿರುವ ನಗದು ಪುರಸ್ಕಾರವನ್ನು 01.01.2026 ಮತ್ತು ನಂತರ ನಡೆಯುವ ಬೆಳ್ಳಿ ಮತ್ತು ಚಿನ್ನದ ಪದಕ ಸಮಾರಂಭದಲ್ಲಿ ಪದಕ ಪಡೆಯುವ ಚಾಲಕರಿಗೆ ನೀಡುವುದು.

6. ಹೆಚ್ಚಿಸಿರುವ ಮಾಸಿಕ ಭತ್ಯೆಯನ್ನು ಈಗ ಮಾಸಿಕ ಭತ್ಯೆ ಪಡೆಯುತ್ತಿರುವ ಚಾಲಕರಿಗೆ ಜನವರಿ- 2026 ರ ಮಾಹೆಯಿಂದ ನೀಡುವುದು.

7. ಮುಂದಿನ ವರ್ಷಗಳಲ್ಲಿ ಪದಕಕ್ಕೆ ಅರ್ಹಗೊಂಡ ವರ್ಷದಿಂದಲೇ ಮಾಸಿಕ ಭತ್ಯೆಯನ್ನು ನೀಡುವುದು. (ಉದಾ: 2025 ನೇ ಸಾಲಿನಲ್ಲಿ ಪದಕಕ್ಕೆ ಅರ್ಹಗೊಂಡಲ್ಲಿ 2026 ನೇ ಜನವರಿಯಿಂದ ಪ್ರೋತ್ಸಾಹ ಧನ ನೀಡಲು ಅರ್ಹಗೊಳಿಸುವುದು)

ಮಾಸಿಕ ಭತ್ಯೆಯನ್ನು ನೀಡುವಾಗ ಸಾಮಾನ್ಯ ಸ್ಥಾಯಿ ಆದೇಶದಲ್ಲಿ ತಿಳಿಸಿರುವ ಎಲ್ಲಾ ಕ್ರಮಗಳನ್ನು ಅನುಸರಿಸುವುದು. ಇನ್ನುಳಿದಂತೆ ಉಲ್ಲೇಖಿತ ಸಾಮಾನ್ಯ ಸ್ಥಾಯಿ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂಬುದಾಗಿ ಹೇಳಿದ್ದಾರೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..

ತಲ್ವಾರ್ ಹಿಡಿದು ರೀಲ್ಸ್ ಮಾಡೋ ಮುನ್ನಾ ಎಚ್ಚರ! ಯಾಕೆ ಅಂತ ಈ ಸುದ್ದಿ ಓದಿ!

ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣಾ ಪ್ರಕ್ರಿಯೆ ಮುಂದುವರೆಸಿ: ಡಿಆರ್ ಗೆ ಮನವಿ

BIG NEWS: ರಾಜ್ಯದ 84 ತಾಲ್ಲೂಕುಗಳಿಗೆ ‘ತಾಲ್ಲೂಕು ವೈದ್ಯಾಧಿಕಾರಿ’ ನೇಮಿಸಿ ಸರ್ಕಾರ ಆದೇಶ: ಇಲ್ಲಿದೆ ಪಟ್ಟಿ

Share. Facebook Twitter LinkedIn WhatsApp Email

Related Posts

ಭಾರತೀಯ ಸೇನೆ ಸೇರಬಯಸುವ ಯುವಕರಿಗೆ ಸುವರ್ಣಾವಕಾಶ: ಹಿಂದುಳಿದ ವರ್ಗಗಳ ಇಲಾಖೆಯಿಂದ ಉಚಿತ ತರಬೇತಿ!

21/04/2026 5:05 PM2 Mins Read

ಏಪ್ರಿಲ್.23, 24ರಂದು ಸಿಇಟಿ ಪರೀಕ್ಷೆ: ಸಿಸಿಟಿವಿ ಕಣ್ಗಾವಲು, ಅಕ್ರಮ ತಡೆಗೆ ತಂತ್ರಜ್ಞಾನ ಬಳಕೆ ಮಾಡಿದ ಕೆಇಎ

21/04/2026 5:01 PM3 Mins Read

ರಾಜ್ಯದಲ್ಲೊಂದು 77 ವರ್ಷಗಳ ಬಳಿಕ ವಿದ್ಯುತ್ ಕಂಡ ಗ್ರಾಮ: ಆ ಅಜ್ಜಿಯ ಪತ್ರ ತಂದ ಬದಲಾವಣೆ ಕತೆ ಇಲ್ಲಿದೆ ಓದಿ

21/04/2026 4:51 PM2 Mins Read
Recent News

ಕೇರಳದ ತ್ರಿಶೂರ್ ನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ: ಮೂವರ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

21/04/2026 5:12 PM

ಭಾರತೀಯ ಸೇನೆ ಸೇರಬಯಸುವ ಯುವಕರಿಗೆ ಸುವರ್ಣಾವಕಾಶ: ಹಿಂದುಳಿದ ವರ್ಗಗಳ ಇಲಾಖೆಯಿಂದ ಉಚಿತ ತರಬೇತಿ!

21/04/2026 5:05 PM

ಏಪ್ರಿಲ್.23, 24ರಂದು ಸಿಇಟಿ ಪರೀಕ್ಷೆ: ಸಿಸಿಟಿವಿ ಕಣ್ಗಾವಲು, ಅಕ್ರಮ ತಡೆಗೆ ತಂತ್ರಜ್ಞಾನ ಬಳಕೆ ಮಾಡಿದ ಕೆಇಎ

21/04/2026 5:01 PM

ರಾಜ್ಯದಲ್ಲೊಂದು 77 ವರ್ಷಗಳ ಬಳಿಕ ವಿದ್ಯುತ್ ಕಂಡ ಗ್ರಾಮ: ಆ ಅಜ್ಜಿಯ ಪತ್ರ ತಂದ ಬದಲಾವಣೆ ಕತೆ ಇಲ್ಲಿದೆ ಓದಿ

21/04/2026 4:51 PM
State News
KARNATAKA

ಭಾರತೀಯ ಸೇನೆ ಸೇರಬಯಸುವ ಯುವಕರಿಗೆ ಸುವರ್ಣಾವಕಾಶ: ಹಿಂದುಳಿದ ವರ್ಗಗಳ ಇಲಾಖೆಯಿಂದ ಉಚಿತ ತರಬೇತಿ!

By kannadanewsnow0921/04/2026 5:05 PM KARNATAKA 2 Mins Read

ಬೆಂಗಳೂರು: ಭಾರತೀಯ ಸೇನೆ ಅಥವಾ ಸಮವಸ್ತ್ರ ಧಾರಿ ಸೇವೆಗಳಿಗೆ (Uniform Services) ಸೇರಿ ದೇಶ ಸೇವೆ ಮಾಡಬೇಕೆಂಬ ಹಂಬಲ ನಿಮಗಿದೆಯೇ?…

ಏಪ್ರಿಲ್.23, 24ರಂದು ಸಿಇಟಿ ಪರೀಕ್ಷೆ: ಸಿಸಿಟಿವಿ ಕಣ್ಗಾವಲು, ಅಕ್ರಮ ತಡೆಗೆ ತಂತ್ರಜ್ಞಾನ ಬಳಕೆ ಮಾಡಿದ ಕೆಇಎ

21/04/2026 5:01 PM

ರಾಜ್ಯದಲ್ಲೊಂದು 77 ವರ್ಷಗಳ ಬಳಿಕ ವಿದ್ಯುತ್ ಕಂಡ ಗ್ರಾಮ: ಆ ಅಜ್ಜಿಯ ಪತ್ರ ತಂದ ಬದಲಾವಣೆ ಕತೆ ಇಲ್ಲಿದೆ ಓದಿ

21/04/2026 4:51 PM

BIG NEWS : ಉತ್ತರಕನ್ನಡದ ಯಾಣಕ್ಕೆ ಈಗ ಜಾಗತಿಕ ಗರಿ : ‘ರಾಷ್ಟ್ರೀಯ ಭೂಪಾರಂಪರಿಕ ತಾಣ’ ಎಂದು ಘೋಷಿಸಿದ ‘GSI’

21/04/2026 4:50 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.