Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಸರ್ಕಾರದಿಂದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : `ಮಾಸ್ಟರ್ ಪ್ಲಾನ್’ ವ್ಯಾಪ್ತಿಯಲ್ಲಿರುವ ಭೂಮಿಗಳಿಗೆ ಇನ್ನು `ಸ್ವಯಂ ಪರಿವರ್ತನೆ ವ್ಯವಸ್ಥೆ’.!

08/02/2026 6:01 AM

BIG NEWS : ಬಲವಂತದ ಸಾಲ ವಸೂಲಾತಿಯಿಂದ ವಂಚನೆ ವಹಿವಾಟಿನವರೆಗೆ `RBI’ ನಿಂದ 3 ಮಹತ್ವದ ಘೋಷಣೆ.!

08/02/2026 5:48 AM

ಬೆಂಗಳೂರಿನ ‘ಬಿ-ಖಾತಾ ಸೈಟ್ ಮಾಲೀಕ’ರಿಗೆ ಸಿಹಿಸುದ್ದಿ: ‘ಎ-ಖಾತಾ ಪರಿವರ್ತೆನೆ’ ಈಗ ಮತ್ತಷ್ಟು ಸುಲಭ

08/02/2026 5:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯಾವ ಕಾಯಕವೂ ಮೇಲೂ ಅಲ್ಲ-ಕೀಳೂ ಅಲ್ಲ, ಎಲ್ಲ ಕಾಯಕವೂ ಸಮಾನ ಘನತೆ ಹೊಂದಿವೆ- CM ಸಿದ್ದರಾಮಯ್ಯ
KARNATAKA

ಯಾವ ಕಾಯಕವೂ ಮೇಲೂ ಅಲ್ಲ-ಕೀಳೂ ಅಲ್ಲ, ಎಲ್ಲ ಕಾಯಕವೂ ಸಮಾನ ಘನತೆ ಹೊಂದಿವೆ- CM ಸಿದ್ದರಾಮಯ್ಯ

By kannadanewsnow0909/01/2024 5:15 PM

ಬೆಂಗಳೂರು : ಯಾವ ಕಾಯಕವೂ ಮೇಲು ಅಲ್ಲ. ಕೀಳು ಅಲ್ಲ. ಎಲ್ಲ ಕಾಯಕವೂ ಸಮಾನ ಮತ್ತು ಸಮಾನ ಘನತೆ ಹೊಂದಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಸವಿತಾ ಸಮಾಜ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ಎಂ.ಎಸ್.ಮುತ್ತುರಾಜ್ ಅವರ ಮಂಗಳವಾದ್ಯ ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ನಟರಾಗಿ ಜನಪ್ರಿಯತೆಗಳಿಸಿರುವ ಎಂ.ಆರ್.ಮುತ್ತೂರಾಜ್ ಅವರು ಬಹುಮುಖ ಪ್ರತಿಭೆ. ವೃತ್ತಿ ಘನತೆಯನ್ನು ಕಾಪಾಡುವ ವ್ಯಕ್ತಿತ್ವ. ಇವರು ಕಾಯಕ ಜೀವಿ. ಪ್ರತಿಯೊಬ್ಬರೂ ಘನತೆಯಿಂದ ಕಾಯಕ ಮಾಡಬೇಕು. ಇದನ್ನೇ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಕೈಲಾಸ, ಸ್ವರ್ಗ, ನರಕ ಎನ್ನುವುದು ಬೇರೆಲ್ಲೂ ಇಲ್ಲ. ಎಲ್ಲವೂ ಇಲ್ಲೇ ಇದೆ ಎಂದರು.

ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಬಸವಣ್ಣನವರು ಹೇಳಿದ್ದು ಈ ಕಾರಣಕ್ಕೇ. ಪರಸ್ಪರ ಮನುಷ್ಯರನ್ನು ಮನುಷ್ಯರು ಗೌರವಿಸುವುದೇ ದೊಡ್ಡ ಮೌಲ್ಯ. ಮನುಷ್ಯ ದ್ವೇಷಕ್ಕಿಂತ ಕೆಟ್ಟ ಮೌಲ್ಯ ಬೇರೆ ಇಲ್ಲ. ಅದಕ್ಕೇ ರಾಷ್ಟ್ರಕವಿ ಕುವೆಂಪು ಅವರು “ಸರ್ವ ಜನಾಂಗದ ಶಾಂತಿಯ ತೋಟ” ಎಂದು ಕರೆದಿದ್ದಾರೆ ಎಂದು ವಿವರಿಸಿದರು.

ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ ಮುಸ್ಲೀಮರನ್ನು, ದಲಿತರನ್ನು, ಶೂದ್ರರನ್ನು, ಶ್ರಮಿಕ‌ ವರ್ಗದವರನ್ನು ದ್ವೇಷಿಸುವುದು ಅತ್ಯಂತ ಅಮಾನವೀಯವಾದ, ಕೆಟ್ಟ ನಡವಳಿಕೆ ಎಂದರು.

ಜನರಿಗೆ ಅರ್ಥ ಆಗುವ ರೀತಿಯಲ್ಲಿ ಸರಳವಾದ ಜನರ ಭಾಷೆಯಲ್ಲಿ ಮನುಷ್ಯನ ಮೌಲ್ಯಗಳನ್ನು ಬಸವಾದಿ ಶರಣರು ಹೇಳಿದ್ದಾರೆ ಎಂದರು.

ನಾರಾಯಣ ಗುರುಗಳು, ಒಂದೇ ಜಾತಿ-ಒಂದೇ ಮತ-ಒಂದೇ ದೇವರು ಎಂದರು. ಕನಕದಾಸರು ಮತ್ತು ಬಸವಾದಿ ಶರಣರು ಹೇಳಿದ್ದೂ ಇದೇ ಮೌಲ್ಯ ಎಂದರು.

ನಿಮ್ಮನ್ನು ಯಾವ ದೇವಸ್ಥಾನಕ್ಕೆ ಒಳಗೆ ಬಿಡುವುದಿಲ್ಲವೋ ಆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಿ ನೀವೇ ದೇವಸ್ಥಾನ ಕಟ್ಟಿ ನೀವೇ ಪೂಜೆ ಮಾಡಿ ಎಂದು ನಾರಾಯಣಗುರುಗಳು ಹೇಳಿದ್ದಾರೆ. ಇದನ್ನು ಪಾಲಿಸಿ ಎಂದರು.

ದೇವರಿದ್ದಾನೆ. ಆದರೆ ದೇವರು ದೇವಸ್ಥಾನದಲ್ಲಿ ಮಾತ್ರ ಇದ್ದಾನೆ ಎನ್ನುವುದು ಸರಿಯಲ್ಲ. ಎಲ್ಲಾ ಕಡೆಯೂ ದೇವರಿದ್ದಾನೆ. ಅದಕ್ಕೇ ಶರಣರು, “ಉಳ್ಳವರು ದೇವಸ್ಥಾನವ ಮಾಡುವರು. ನಾನೇನು ಮಾಡಲಯ್ಯ ಬಡವ” ಎಂದಿದ್ದಾರೆ ಎಂದು ವಚನಗಳನ್ನು ಉದಾಹರಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಸಚಿವ ಎಚ್.ಎಂ.ರೇವಣ್ಣ, ಪ್ರಗತಿಪರ ಚಿಂತಕ ಎಲ್.ಮುಕುಂದರಾಜ್ ಮತ್ತು ಸವಿತ ಸಮಾಜದ ಅಧ್ಯಕ್ಷರಾದ ಕಿರಣ್ ಕುಮಾರ್ ಅವರು ಉಪಸ್ಥಿತರಿದ್ದರು.

BIG Alert: ‘ವಾಹನ ಸವಾರ’ರ ಗಮನಕ್ಕೆ: ಜ.16ರಿಂದ ಮತ್ತೆ 4 ದಿನ ಬೆಂಗಳೂರಿನ ‘ಪೀಣ್ಯ ಫ್ಲೈ ಓವರ್ ಕ್ಲೋಸ್’

BREAKING: ‘ಸ್ವಂತ ಮಗ’ನನ್ನೇ ಕೊಂದ ಪ್ರಕರಣ: ‘ಸಿಇಓ ಸುಚನಾ’ 6 ದಿನ ಗೋಪಾ ಪೊಲೀಸರ ಕಸ್ಟಡಿಗೆ

Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರದಿಂದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : `ಮಾಸ್ಟರ್ ಪ್ಲಾನ್’ ವ್ಯಾಪ್ತಿಯಲ್ಲಿರುವ ಭೂಮಿಗಳಿಗೆ ಇನ್ನು `ಸ್ವಯಂ ಪರಿವರ್ತನೆ ವ್ಯವಸ್ಥೆ’.!

08/02/2026 6:01 AM2 Mins Read

ಬೆಂಗಳೂರಿನ ‘ಬಿ-ಖಾತಾ ಸೈಟ್ ಮಾಲೀಕ’ರಿಗೆ ಸಿಹಿಸುದ್ದಿ: ‘ಎ-ಖಾತಾ ಪರಿವರ್ತೆನೆ’ ಈಗ ಮತ್ತಷ್ಟು ಸುಲಭ

08/02/2026 5:45 AM2 Mins Read

BIG NEWS: ಇನ್ಮುಂದೆ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಜನಪ್ರತಿನಿಧಿ ಆಹ್ವಾನದ ವೇಳೆ ಈ ಶಿಷ್ಟಾಚಾರ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ

08/02/2026 5:41 AM2 Mins Read
Recent News

ರಾಜ್ಯ ಸರ್ಕಾರದಿಂದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : `ಮಾಸ್ಟರ್ ಪ್ಲಾನ್’ ವ್ಯಾಪ್ತಿಯಲ್ಲಿರುವ ಭೂಮಿಗಳಿಗೆ ಇನ್ನು `ಸ್ವಯಂ ಪರಿವರ್ತನೆ ವ್ಯವಸ್ಥೆ’.!

08/02/2026 6:01 AM

BIG NEWS : ಬಲವಂತದ ಸಾಲ ವಸೂಲಾತಿಯಿಂದ ವಂಚನೆ ವಹಿವಾಟಿನವರೆಗೆ `RBI’ ನಿಂದ 3 ಮಹತ್ವದ ಘೋಷಣೆ.!

08/02/2026 5:48 AM

ಬೆಂಗಳೂರಿನ ‘ಬಿ-ಖಾತಾ ಸೈಟ್ ಮಾಲೀಕ’ರಿಗೆ ಸಿಹಿಸುದ್ದಿ: ‘ಎ-ಖಾತಾ ಪರಿವರ್ತೆನೆ’ ಈಗ ಮತ್ತಷ್ಟು ಸುಲಭ

08/02/2026 5:45 AM

BIG NEWS: ಇನ್ಮುಂದೆ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಜನಪ್ರತಿನಿಧಿ ಆಹ್ವಾನದ ವೇಳೆ ಈ ಶಿಷ್ಟಾಚಾರ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ

08/02/2026 5:41 AM
State News
KARNATAKA

ರಾಜ್ಯ ಸರ್ಕಾರದಿಂದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : `ಮಾಸ್ಟರ್ ಪ್ಲಾನ್’ ವ್ಯಾಪ್ತಿಯಲ್ಲಿರುವ ಭೂಮಿಗಳಿಗೆ ಇನ್ನು `ಸ್ವಯಂ ಪರಿವರ್ತನೆ ವ್ಯವಸ್ಥೆ’.!

By kannadanewsnow5708/02/2026 6:01 AM KARNATAKA 2 Mins Read

ಬೆಂಗಳೂರು : ಮಾಸ್ಟರ್ ಪ್ಲಾನ್ (CDP) ಪ್ರದೇಶದಲ್ಲಿ ಭೂಮಿಯನ್ನು ಸ್ವಯಂ ಪರಿವರ್ತನೆ ಮಾಡುವ ಅಗತ್ಯವನ್ನು ಸರ್ಕಾರ ಇದೀಗ ತೆಗೆದುಹಾಕಿದೆ. ಮಾಸ್ಟರ್ ಪ್ಲಾನ್…

ಬೆಂಗಳೂರಿನ ‘ಬಿ-ಖಾತಾ ಸೈಟ್ ಮಾಲೀಕ’ರಿಗೆ ಸಿಹಿಸುದ್ದಿ: ‘ಎ-ಖಾತಾ ಪರಿವರ್ತೆನೆ’ ಈಗ ಮತ್ತಷ್ಟು ಸುಲಭ

08/02/2026 5:45 AM

BIG NEWS: ಇನ್ಮುಂದೆ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಜನಪ್ರತಿನಿಧಿ ಆಹ್ವಾನದ ವೇಳೆ ಈ ಶಿಷ್ಟಾಚಾರ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ

08/02/2026 5:41 AM

BIG NEWS: ರಾಜ್ಯದ ‘ಗ್ರಾಮ ಸಹಾಯಕ’ರಿಗೆ ಸಿಹಿಸುದ್ದಿ: ಸರ್ಕಾರದಿಂದ 5 ಲಕ್ಷದವರೆಗೆ ಒಂದು ಬಾರಿಗೆ ಇಡಿಗಂಟು ಸೌಲಭ್ಯ

08/02/2026 5:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.