Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ‘ರನ್ ಸರದಾರ್’ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ | Kane Williamson retires

BREAKING : ಕೊಲ್ಲೂರು ಮುಕಾಂಬಿಕೆಗೆ 1ಕೆಜಿ 600 ಗ್ರಾಂ ಬೆಳ್ಳಿ ಖಡ್ಗ ಸಮರ್ಪಿಸಿದ ಸಿಎಂ ವಿಜಯ್ | Watch Video

ಜೂನ್.16 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ತುರ್ತು ಸಭೆ: ರೆಸಾರ್ಟ್ ರಾಜಕೀಯಕ್ಕೆ ಸಜ್ಜಾದ ಕೈ ನಾಯಕರು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಕೊಲ್ಲೂರು ಮುಕಾಂಬಿಕೆಗೆ 1ಕೆಜಿ 600 ಗ್ರಾಂ ಬೆಳ್ಳಿ ಖಡ್ಗ ಸಮರ್ಪಿಸಿದ ಸಿಎಂ ವಿಜಯ್ | Watch Video
KARNATAKA

BREAKING : ಕೊಲ್ಲೂರು ಮುಕಾಂಬಿಕೆಗೆ 1ಕೆಜಿ 600 ಗ್ರಾಂ ಬೆಳ್ಳಿ ಖಡ್ಗ ಸಮರ್ಪಿಸಿದ ಸಿಎಂ ವಿಜಯ್ | Watch Video

By ಸುರೇಶ್‌

ಉಡುಪಿ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ನಟ, ರಾಜಕಾರಣಿ ವಿಜಯ್ ಅವರು ಇಂದು ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು. ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಅವರಿಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕರು ಆತ್ಮೀಯವಾಗಿ ಬರಮಾಡಿಕೊಂಡರು.

ಅರ್ಧ ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ದೇವಸ್ಥಾನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ವಿಜಯ್ ಅವರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ದೇವಸ್ಥಾನದ ಗರ್ಭಗುಡಿಯ ಮುಂದೆ ಕುಳಿತು ಅತ್ಯಂತ ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದ ಅವರು, ದೇವಿಗೆ ವಿಶೇಷ ನಮನಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರು ವಿಜಯ್ ಅವರ ಕೈಗೆ ರಕ್ಷಾದಾರವನ್ನು ಕಟ್ಟಿ, ಪ್ರಸಾದ ನೀಡಿ ಆಶೀರ್ವದಿಸಿದರು.

2 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗ ಸಮರ್ಪಣೆ ರಾಜಕೀಯದಲ್ಲಿ ಮಹತ್ತರ ಜಯ ಗಳಿಸಿ ನೂತನ ಮುಖ್ಯಮಂತ್ರಿಯಾಗಿರುವ ವಿಜಯ್ ಅವರು, ತಮ್ಮ ವಿಜಯದ ಸಂಕೇತವಾಗಿ ಮೂಕಾಂಬಿಕಾ ದೇವಿಗೆ ವಿಶೇಷ ಕಾಣಿಕೆಯೊಂದನ್ನು ಅರ್ಪಿಸಿದರು. ದೇವಿಯ ಪಾದಕ್ಕೆ ಹಣ್ಣು-ಹಂಪಲು, ರೇಷ್ಮೆ ಸೀರೆಯನ್ನು ಸಮರ್ಪಿಸಿದ ಅವರು, ಇದರೊಂದಿಗೆ ಬರೋಬ್ಬರಿ 2 ಕೆಜಿ 600 ಗ್ರಾಂ ತೂಕದ ಆಕರ್ಷಕ ಬೆಳ್ಳಿ ಖಡ್ಗವನ್ನು ದೇವಿಗೆ ಕಾಣಿಕೆಯಾಗಿ ನೀಡಿ ಧನ್ಯತೆ ಮೆರೆದರು.

ಸ್ವತಃ ಕಾರು ಚಲಾಯಿಸಿದ ಮುಖ್ಯಮಂತ್ರಿ! ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳನ್ನು ಮುಗಿಸಿ ಹೊರಟ ಮುಖ್ಯಮಂತ್ರಿ ವಿಜಯ್ ಅವರು ನೆರೆದಿದ್ದವರ ಗಮನ ಸೆಳೆದರು. ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಭದ್ರತಾ ಸಿಬ್ಬಂದಿ ಹಾಗೂ ಚಾಲಕರೊಂದಿಗೆ ಪ್ರಯಾಣಿಸುವುದು ವಾಡಿಕೆ. ಆದರೆ, ಕೊಲ್ಲೂರಿನಿಂದ ಹೊರಡುವಾಗ ಸಿಎಂ ವಿಜಯ್ ಅವರು ತಾವೇ ಸ್ವತಃ ಕಾರಿನ ಚಾಲನಾ ಸೀಟಿನಲ್ಲಿ ಕುಳಿತು, ಕಾರು ಚಲಾಯಿಸಿಕೊಂಡು ತೆರಳಿದ್ದು ವಿಶೇಷವಾಗಿತ್ತು. ಅವರ ಈ ಸರಳತೆ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.

ದಾರಿಯುದ್ದಕ್ಕೂ ಅಭಿಮಾನಿಗಳ ಜಯಘೋಷ ತಮ್ಮ ನೆಚ್ಚಿನ ನಟ ಹಾಗೂ ನೂತನ ಮುಖ್ಯಮಂತ್ರಿಯನ್ನು ನೋಡಲು ಕೊಲ್ಲೂರು ಕ್ಷೇತ್ರದಾದ್ಯಂತ ಅವರ ಅಭಿಮಾನಿಗಳು ಮತ್ತು ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ವಿಜಯ್ ಅವರು ದೇವಸ್ಥಾನಕ್ಕೆ ಆಗಮಿಸಿದಾಗಿನಿಂದ ಹಿಡಿದು, ಪೂಜೆ ಮುಗಿಸಿ ಕಾರಿನಲ್ಲಿ ತೆರಳುವವರೆಗೂ ದಾರಿಯುದ್ದಕ್ಕೂ ಅಭಿಮಾನಿಗಳು ಅವರ ಹೆಸರನ್ನು ಕೂಗುತ್ತಾ, ಘೋಷಣೆಗಳನ್ನು ಹಾಕುತ್ತಾ ತೀವ್ರ ಹರ್ಷ ವ್ಯಕ್ತಪಡಿಸಿದರು. ಸಿಎಂ ವಿಜಯ್ ಕೂಡ ಕಾರಿನಿಂದಲೇ ಅಭಿಮಾನಿಗಳತ್ತ ಕೈಬೀಸಿ ವಂದಿಸಿದರು.

#WATCH | Karnataka: Tamil Nadu Chief Minister C. Joseph Vijay offered prayers at Kollur Sri Mookambika Devi Temple in the Udupi district, this evening.

(Video Source: Temple authority) pic.twitter.com/ovSRU9FbYn

— ANI (@ANI) June 12, 2026

Share. Facebook Twitter LinkedIn WhatsApp Email

Related Posts

ಜೂನ್.16 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ತುರ್ತು ಸಭೆ: ರೆಸಾರ್ಟ್ ರಾಜಕೀಯಕ್ಕೆ ಸಜ್ಜಾದ ಕೈ ನಾಯಕರು!

1 Min Read

BIG NEWS: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ವಿತರಣೆಗೆ ಸಾರಿಗೆ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ | Free Student Bus Pass

2 Mins Read

BREAKING : ಪ್ರಸಕ್ತ ಸಾಲಿನ ವೈದ್ಯಕೀಯ ಕೋರ್ಸ್ ಗಳ ಶುಲ್ಕ ಹೆಚ್ಚಳವಿಲ್ಲ : ಸಚಿವ ಶರಣಪ್ರಕಾಶ್ ಪಾಟೀಲ್ ಘೋಷಣೆ

1 Min Read
Recent News

BREAKING: ‘ರನ್ ಸರದಾರ್’ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ | Kane Williamson retires

BREAKING : ಕೊಲ್ಲೂರು ಮುಕಾಂಬಿಕೆಗೆ 1ಕೆಜಿ 600 ಗ್ರಾಂ ಬೆಳ್ಳಿ ಖಡ್ಗ ಸಮರ್ಪಿಸಿದ ಸಿಎಂ ವಿಜಯ್ | Watch Video

ಜೂನ್.16 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ತುರ್ತು ಸಭೆ: ರೆಸಾರ್ಟ್ ರಾಜಕೀಯಕ್ಕೆ ಸಜ್ಜಾದ ಕೈ ನಾಯಕರು!

BIG BREAKING : ಅಂತರಾಷ್ಟ್ರೀಯ ಕ್ರಿಕೆಟ್ ಗೆ ನ್ಯೂಜಿಲೆಂಡ್ ಮಾಜಿ ಕ್ಯಾಪ್ಟನ್ ಕೇನ್ ವಿಲಿಯಂ ಸನ್ ನಿವೃತ್ತಿ ಘೋಷಣೆ!

State News
KARNATAKA

BREAKING : ಕೊಲ್ಲೂರು ಮುಕಾಂಬಿಕೆಗೆ 1ಕೆಜಿ 600 ಗ್ರಾಂ ಬೆಳ್ಳಿ ಖಡ್ಗ ಸಮರ್ಪಿಸಿದ ಸಿಎಂ ವಿಜಯ್ | Watch Video

By ಸುರೇಶ್‌ KARNATAKA 2 Mins Read

ಉಡುಪಿ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ನಟ, ರಾಜಕಾರಣಿ ವಿಜಯ್ ಅವರು ಇಂದು ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ…

ಜೂನ್.16 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ತುರ್ತು ಸಭೆ: ರೆಸಾರ್ಟ್ ರಾಜಕೀಯಕ್ಕೆ ಸಜ್ಜಾದ ಕೈ ನಾಯಕರು!

BIG NEWS: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ವಿತರಣೆಗೆ ಸಾರಿಗೆ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ | Free Student Bus Pass

BREAKING : ಪ್ರಸಕ್ತ ಸಾಲಿನ ವೈದ್ಯಕೀಯ ಕೋರ್ಸ್ ಗಳ ಶುಲ್ಕ ಹೆಚ್ಚಳವಿಲ್ಲ : ಸಚಿವ ಶರಣಪ್ರಕಾಶ್ ಪಾಟೀಲ್ ಘೋಷಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.