Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ತೆವಳುತ್ತಾ ಬಂದು ನಡುರಸ್ತೆಯಲ್ಲಿ ಕುಳಿತ ಮಗು : ದೇವರಂತೆ ಬಂದು ರಕ್ಷಿಸಿದ ಬಸ್ ಡ್ರೈವರ್ | WATCH VIDEO

BIG NEWS: ಪಾರ್ಕ್ ಮಾಡಿದ ವಾಹನದ ಮೇಲೆ ಮರ ಬಿದ್ದರೆ ಅದು `ಮೋಟಾರ್ ಅಪಘಾತ’ವಲ್ಲ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

BREAKING : ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ `ಉಚಿತ ಬಸ್ ಪಾಸ್’ ವಿತರಣೆಗೆ ಸರ್ಕಾರ ಅಧಿಕೃತ ಆದೇಶ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಪಾರ್ಕ್ ಮಾಡಿದ ವಾಹನದ ಮೇಲೆ ಮರ ಬಿದ್ದರೆ ಅದು `ಮೋಟಾರ್ ಅಪಘಾತ’ವಲ್ಲ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!
KARNATAKA

BIG NEWS: ಪಾರ್ಕ್ ಮಾಡಿದ ವಾಹನದ ಮೇಲೆ ಮರ ಬಿದ್ದರೆ ಅದು `ಮೋಟಾರ್ ಅಪಘಾತ’ವಲ್ಲ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

By kannadanewsnow57

ನವದೆಹಲಿ: ರಸ್ತೆ ಬದಿಯಲ್ಲಿ ನಿಂತಿದ್ದ ಆಟೋರಿಕ್ಷಾದ ಮೇಲೆ ಮರ ಅಥವಾ ಅದರ ಕೊಂಬೆ ಬಿದ್ದರೆ, ಅದನ್ನು ಮೋಟಾರು ವಾಹನ ಕಾಯ್ದೆಯಡಿ ‘ಮೋಟಾರು ಅಪಘಾತ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಏಕೆಂದರೆ ಇಂತಹ ಘಟನೆಗಳಲ್ಲಿ ವಾಹನದ ಯಾವುದೇ ಸಕ್ರಿಯ ಪಾತ್ರ ಇರುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು, ಈ ರೀತಿಯ ಅಪಘಾತಗಳು ಮೋಟಾರು ವಾಹನದಿಂದಲೇ ನೇರವಾಗಿ ಸಂಭವಿಸದ ಕಾರಣ, ಮೋಟಾರು ವಾಹನ ಕಾಯ್ದೆಯ (MV Act) ಸೆಕ್ಷನ್ 166 ರ ಅಡಿಯಲ್ಲಿ ಪರಿಹಾರದ ಕ್ಲೈಮ್ ಮಾಡುವುದು ಸೂಕ್ತವಲ್ಲ ಎಂದು ಹೇಳಿದೆ.

ಆದರೆ, ಮಾನವೀಯತೆ ಮತ್ತು ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿದ ನ್ಯಾಯಾಲಯವು, ತನ್ನ ವಿಶೇಷ ಅಧಿಕಾರವಾದ ವಿಧಿ 142 (Article 142) ಅನ್ನು ಬಳಸಿ, 2007ರಲ್ಲಿ ಬೆಂಗಳೂರಿನಲ್ಲಿ ನಡೆದ ಈ ವಿಲಕ್ಷಣ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪ್ರಯಾಣಿಕ ಕೆ.ಕೆ. ಉಮೇಶ್ ಕುಮಾರ್ ಅವರಿಗೆ 25 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.

ಹಿನ್ನೆಲೆ ಏನು?

ಜೂನ್ 23, 2007 ರಂದು ಉಮೇಶ್ ಕುಮಾರ್ ಅವರು ಬೆಂಗಳೂರಿನ ಕ್ವೀನ್ಸ್ ರಸ್ತೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಭಾರಿ ಮಳೆ ಬಂದಿದ್ದರಿಂದ ಆಟೋ ಚಾಲಕ ರಸ್ತೆ ಬದಿಯ ಮರದ ಕೆಳಗೆ ಆಟೋ ನಿಲ್ಲಿಸಿದ್ದರು. ಆಗ ಹಳೆಯ ಮರದ ಕೊಂಬೆಯೊಂದು ಹಠಾತ್ತನೆ ಮುರಿದು ಆಟೋದ ಮೇಲೆ ಬಿದ್ದ ಪರಿಣಾಮ ಉಮೇಶ್ ತೀವ್ರವಾಗಿ ಗಾಯಗೊಂಡಿದ್ದರು.

ಈ ಹಿಂದೆ ಬೆಂಗಳೂರಿನ ಮೋಟಾರು ಅಪಘಾತ ದಾವೆಗಳ ನ್ಯಾಯಮಂಡಳಿಯು (Tribunal) ಇದನ್ನು ‘ನೈಸರ್ಗಿಕ ವಿಕೋಪ’ ಎಂದು ಕರೆದು, ಉಮೇಶ್ ಸಲ್ಲಿಸಿದ್ದ 50 ಲಕ್ಷ ರೂ. ಪರಿಹಾರದ ಅರ್ಜಿಯನ್ನು ವಜಾಗೊಳಿಸಿತ್ತು. ಆದರೆ, ಇದರ ವಿರುದ್ಧ ಮೇಲ್ಮನವಿ ಸಲ್ಲಿಕೆಯಾದಾಗ ಕರ್ನಾಟಕ ಹೈಕೋರ್ಟ್ 17.10 ಲಕ್ಷ ರೂ. ಪರಿಹಾರವನ್ನು ನೀಡಿತ್ತು. ಇದರಲ್ಲಿ ಬಿಬಿಎಂಪಿ (BBMP) ಶೇ. 25, ಆಟೋ ವಿಮಾ ಕಂಪನಿ ಶೇ. 50 ಮತ್ತು ತೋಟಗಾರಿಕಾ ಇಲಾಖೆ ಶೇ. 25 ರಷ್ಟು ಪರಿಹಾರ ಹಂಚಿಕೊಳ್ಳಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಬಿಬಿಎಂಪಿ ಮತ್ತು ತೋಟಗಾರಿಕಾ ಇಲಾಖೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಸುಪ್ರೀಂ ಕೋರ್ಟ್ ಹೇಳಿದ್ದೇನು?
ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ಆಟೋ ನಿಲ್ಲಿಸುವುದನ್ನಾಗಲಿ ಅಥವಾ ಮರದ ಕೊಂಬೆ ಬೀಳುವುದನ್ನಾಗಲಿ ಅಧಿಕಾರಿಗಳು ಅಥವಾ ಚಾಲಕ ಮುಂಚಿತವಾಗಿ ಊಹಿಸಲು ಸಾಧ್ಯವಿರಲಿಲ್ಲ ಎಂದು ಕೋರ್ಟ್ ಒಪ್ಪಿಕೊಂಡಿದೆ. ಹಾಗಾಗಿ ಮೋಟಾರು ವಾಹನ ಕಾಯ್ದೆಯಡಿ ಅಧಿಕಾರಿಗಳ ಮೇಲೆ ಹೊಣೆ ಹೊರಿಸುವುದು ಸರಿಯಲ್ಲ ಎಂದಿದೆ.

ನಗರಗಳಲ್ಲಿ ರಸ್ತೆ ಬದಿಯ ಮರಗಳನ್ನು ನಿರ್ವಹಿಸುವುದು ಪಾಲಿಕೆಯ ಜವಾಬ್ದಾರಿಯಾಗಿದ್ದರೂ, ಬೆಳೆಯುತ್ತಿರುವ ನಗರಗಳಲ್ಲಿ ಪ್ರತಿಯೊಂದು ಮರದ ಮೇಲೆಯೂ ನಿರಂತರ ನಿಗಾ ಇಡುವುದು ಅಪ್ರಾಯೋಗಿಕ. ಹಾಗಂತ ಮುನ್ನೆಚ್ಚರಿಕೆ ಹೆಸರಿನಲ್ಲಿ ಎಲ್ಲಾ ಮರದ ಕೊಂಬೆಗಳನ್ನು ಕತ್ತರಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ನ್ಯಾಯದ ಅಂತಃಕರಣಕ್ಕೆ ಒಪ್ಪದ ವಿಷಯ’
ಆದಾಗ್ಯೂ, ಜೀವನವನ್ನೇ ಬದಲಾಯಿಸುವಂತಹ ಗಾಯಗಳಿಗೆ ಒಳಗಾದ ವ್ಯಕ್ತಿಯನ್ನು ಯಾವುದೇ ಆರ್ಥಿಕ ಸಹಾಯವಿಲ್ಲದೆ ಕೈಬಿಡುವುದು “ನ್ಯಾಯದ ಅಂತಃಕರಣಕ್ಕೆ ಒಪ್ಪುವ ವಿಷಯವಲ್ಲ” ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಹೈಕೋರ್ಟ್ ನೀಡಿದ್ದ ಮೊತ್ತ ಕಡಿಮೆ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಪರಿಹಾರವನ್ನು 25 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದೆ. ಅಷ್ಟೇ ಅಲ್ಲದೆ, ಅರ್ಜಿ ಸಲ್ಲಿಸಿದ ದಿನಾಂಕದಿಂದ ಅನ್ವಯವಾಗುವಂತೆ ಹೈಕೋರ್ಟ್ ಸೂಚಿಸಿದ ಬಡ್ಡಿಯನ್ನೂ ನೀಡಬೇಕು ಎಂದು ಆದೇಶಿಸಿದೆ. ಹೈಕೋರ್ಟ್ ನಿಗದಿಪಡಿಸಿದ್ದ ಪರಿಹಾರದ ಹಂಚಿಕೆಯ ಅನುಪಾತದಲ್ಲಿ ಯಾವುದೇ ಬದಲಾವಣೆ ಮಾಡದ ನ್ಯಾಯಾಲಯ, ನಾಲ್ಕು ವಾರಗಳ ಒಳಗಾಗಿ ಈ ಮೊತ್ತವನ್ನು ಪಾವತಿಸುವಂತೆ ಸೂಚಿಸಿದೆ.

BIG NEWS: Tree falling on parked vehicle is not a `motor accident' : Supreme Court rules significantly!
Share. Facebook Twitter LinkedIn WhatsApp Email

Related Posts

BREAKING : ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ `ಉಚಿತ ಬಸ್ ಪಾಸ್’ ವಿತರಣೆಗೆ ಸರ್ಕಾರ ಅಧಿಕೃತ ಆದೇಶ!

2 Mins Read

ಸಮುದಾಯವಾರು ಅನುದಾನ ಬಿಡುಗಡೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

2 Mins Read

ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ `ಮೆಡಿಕಲ್ ಸ್ಟೋರ್’ಗಳು ಏಕೆ ಇರುವುದಿಲ್ಲ ಗೊತ್ತಾ? ಇದರ ಹಿಂದಿದೆ ಆಸಕ್ತಿದಾಯಕ ಕಾರಣ!

2 Mins Read
Recent News

SHOCKING : ತೆವಳುತ್ತಾ ಬಂದು ನಡುರಸ್ತೆಯಲ್ಲಿ ಕುಳಿತ ಮಗು : ದೇವರಂತೆ ಬಂದು ರಕ್ಷಿಸಿದ ಬಸ್ ಡ್ರೈವರ್ | WATCH VIDEO

BIG NEWS: ಪಾರ್ಕ್ ಮಾಡಿದ ವಾಹನದ ಮೇಲೆ ಮರ ಬಿದ್ದರೆ ಅದು `ಮೋಟಾರ್ ಅಪಘಾತ’ವಲ್ಲ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

BREAKING : ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ `ಉಚಿತ ಬಸ್ ಪಾಸ್’ ವಿತರಣೆಗೆ ಸರ್ಕಾರ ಅಧಿಕೃತ ಆದೇಶ!

ಸಮುದಾಯವಾರು ಅನುದಾನ ಬಿಡುಗಡೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

State News
KARNATAKA

BIG NEWS: ಪಾರ್ಕ್ ಮಾಡಿದ ವಾಹನದ ಮೇಲೆ ಮರ ಬಿದ್ದರೆ ಅದು `ಮೋಟಾರ್ ಅಪಘಾತ’ವಲ್ಲ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

By kannadanewsnow57 KARNATAKA 2 Mins Read

ನವದೆಹಲಿ: ರಸ್ತೆ ಬದಿಯಲ್ಲಿ ನಿಂತಿದ್ದ ಆಟೋರಿಕ್ಷಾದ ಮೇಲೆ ಮರ ಅಥವಾ ಅದರ ಕೊಂಬೆ ಬಿದ್ದರೆ, ಅದನ್ನು ಮೋಟಾರು ವಾಹನ ಕಾಯ್ದೆಯಡಿ…

BREAKING : ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ `ಉಚಿತ ಬಸ್ ಪಾಸ್’ ವಿತರಣೆಗೆ ಸರ್ಕಾರ ಅಧಿಕೃತ ಆದೇಶ!

ಸಮುದಾಯವಾರು ಅನುದಾನ ಬಿಡುಗಡೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ `ಮೆಡಿಕಲ್ ಸ್ಟೋರ್’ಗಳು ಏಕೆ ಇರುವುದಿಲ್ಲ ಗೊತ್ತಾ? ಇದರ ಹಿಂದಿದೆ ಆಸಕ್ತಿದಾಯಕ ಕಾರಣ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.