ಬೆಂಗಳೂರು : ಅರ್ಚಕರನ್ನು ಪರಿಚಯಿಸಿಕೊಂಡು ಬಳಿಕ ಪೂಜೆ ನೆಪದಲ್ಲಿ ಅವರ ಪತ್ನಿಯರನ್ನು ಕರೆದೋಯ್ದು ಚಿನ್ನಾಭರಣ, ಬೆಳ್ಳಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗಳನ್ನು ಇದೀಗ ಬೆಂಗಳೂರಿನ ರಾಜಾಜಿನಗರ ಠಾಣೆ ಪೋಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಕಳ್ಳ ಪ್ರವೀಣ್ ಭಟನನ್ನು ಪೊಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 15 ಲಕ್ಷ ರೂಪಾಯಿ ಮೌಲ್ಯದ 116 ಗ್ರಾಂ ಚಿನ್ನ 409 ಗ್ರಾಂ ಬೆಳ್ಳಿ ಜಪ್ತಿ ಮಾಡಿಕೊಂಡಿದ್ದಾರೆ. ದೇವಸ್ಥಾನದ ಅರ್ಚಕರೇ ಈ ಖತರ್ನಾಕ್ ವಂಚಕ ಕಳ್ಳನ ಟಾರ್ಗೆಟ್ ಆಗಿದ್ದಾರೆ. ಮುತ್ತೈದೆಯರಿಗೆ ಬಾಗಿನ ಕೊಡುವ ನೆಪದಲ್ಲಿ ಕೈಚಳಕ ತೋರಿಸಿದ್ದ ಪ್ರವೀಣ ಭಟ್ಟನನ್ನು ಸದ್ಯ ರಾಜಾಜಿನಗರ ಪೊಲೀಸ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮೊದಲು ಏರಿಯಾದ ಪ್ರಸಿದ್ಧ ದೇವಸ್ಥಾನಗಳಿಗೆ ಆರೋಪಿ ಪ್ರವೀಣ್ ಹೋಗುತ್ತಿದ್ದ ತಾನು ಶ್ರೀಮಂತ ದೊಡ್ಡ ಉದ್ಯಮಿ ಅಂತ ಹೇಳಿಕೊಳ್ಳುತ್ತಿದ್ದ ಅರ್ಚಕರನ್ನು ಪರಿಚಯ ಮಾಡಿಕೊಂಡು ಆಗಾಗ ಪೂಜೆ ಮಾಡಿಸುತ್ತಿದ್ದ. ನಂತರ ದೇಗುಲಕ್ಕೆ ಸಾವಿರಾರು ರೂಪಾಯಿ ದೇಣಿಗೆ ಕಾಣಿಕೆ ಕೊಡುತ್ತಿದ್ದ. ಈ ಮೂಲಕ ಅಲ್ಲಿರುವ ಅರ್ಚಕರಿಗೆ ಹತ್ತಿರವಾಗಿ ವಂಚನೆಗೆ ಪ್ಲಾನ್ ಮಾಡುತ್ತಿದ್ದ.
ನಮ್ಮ ಹೊಸ ಅಂಗಡಿ ಓಪನ್ ಮಾಡುತ್ತಿದ್ದೇವೆ ಪೂಜೆ ಮಾಡಬೇಕು ಅಂತಿದ್ದ. ಪೂಜೆಗೆ ಮುತ್ತೈದೆಯರು ಬೇಕು ನಿಮ್ಮ ಮನೆಯವರನ್ನು ಕಳಿಸಿ ಅಂತಿದ್ದ. ರಾಜಾಜಿನಗರದ ಪ್ರಸಿದ್ಧ ಮಠದ ಅರ್ಚಕರಿಗೆ ಆರೋಪಿ ಪ್ರವೀಣ್ ಹೇಳಿದ್ದಂತೆ ತಮ್ಮ ಪತ್ನಿಯನ್ನು ಕಳುಹಿಸಿ ಕೊಡುವುದಾಗಿ ಅರ್ಚಕರು ಹೇಳಿದ್ದರು. ಬಳಿಕ ಆಟೋದಲ್ಲಿ ನೀವು ಹೋಗೋ ಜಾಗಕ್ಕೆ ಒಡವೆ ಎಲ್ಲ ಹಾಕಬೇಡಿ ಅಂತ ಹೇಳುತ್ತಿದ್ದ.ಒಡವೆಗಳನ್ನು ನನ್ನ ಬಳಿ ಕೊಡಿ ಬಳಿಕ ಎಲ್ಲವನ್ನು ಆಮೇಲೆ ಕೊಡುವುದಾಗಿ ಹೇಳಿದ್ದ.
ಆಟೋದಿಂದ ತಿಳಿದು ಬಳಿಕ ಮಾರ್ಕೆಟ್ ನ ಬೀದಿಗಳಲ್ಲಿ ಸುತ್ತಾಡಿಸುತ್ತಿದ್ದ. ಈ ನಡುವೆ ಅರ್ಧದಲ್ಲಿ ಬಿಟ್ಟು ಆರೋಪಿ ಪ್ರವೀಣ್ ಭಟ್ ಪರಾರಿಯಾಗುತ್ತಿದ್ದ. ಸದ್ಯ ಅರ್ಚಕರ ಕುಟುಂಬದವರು ನೀಡಿದ ದೂರಿನ ಅಡಿ ಆರೋಪಿ ಪ್ರವೀಣ ಭಟ್ಟನನ್ನು ಅರೆಸ್ಟ್ ಮಾಡಲಾಗಿದೆ. ಇದೇ ಮಾದರಿಯಲ್ಲಿ 5ಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿ ಪ್ರವೀಣ್ ಭಟ್ ಭಾಗಿಯಾಗಿರುವುದು ತಿಳಿದು ಬಂದಿದೆ. ಹೆಬ್ಬಾಳ, ರಾಮಮೂರ್ತಿ ನಗರ, ಸಿಟಿ ಮಾರ್ಕೆಟ್, ರಾಜಾಜಿನಗರ ಹಾಗು ಸಿ ಕೆ ಅಚ್ಚುಕಟ್ಟು ಠಾಣೆಯಲ್ಲಿ ಆರೋಪಿ ಪ್ರವೀಣ್ ವಿರುದ್ಧ ಕೆಎಸ್ ಗಳಿವೆ.








