Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

​ಯು18 ಏಷ್ಯಾ ಕಪ್ 2026: ಭಾರತೀಯ ಹಾಕಿ ತಂಡಗಳ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

​ಫ್ರೆಂಚ್ ಓಪನ್ ಚಾಂಪಿಯನ್: ಮಾಯಾ ಚ್ವಾಲಿನ್ಸ್ಕ ವಿರುದ್ಧ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಿರಾ ಆಂಡ್ರೀವಾ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ದೇಶದಲ್ಲಿ ಆನ್‌ ಲೈನ್ ಗೇಮಿಂಗ್‌ ಗೆ ಬ್ರೇಕ್: ಇಂದಿನಿಂದ ಹೊಸ ಕಾಯ್ದೆ ಜಾರಿ, ನಿಯಮ ಉಲ್ಲಂಘಿಸಿದರೆ ಜೈಲು ಫಿಕ್ಸ್.!
INDIA

BIG NEWS : ದೇಶದಲ್ಲಿ ಆನ್‌ ಲೈನ್ ಗೇಮಿಂಗ್‌ ಗೆ ಬ್ರೇಕ್: ಇಂದಿನಿಂದ ಹೊಸ ಕಾಯ್ದೆ ಜಾರಿ, ನಿಯಮ ಉಲ್ಲಂಘಿಸಿದರೆ ಜೈಲು ಫಿಕ್ಸ್.!

By kannadanewsnow57

ನವದೆಹಲಿ: ದೇಶದ ಯುವಜನತೆಯನ್ನು ಆವರಿಸಿರುವ ಆನ್‌ಲೈನ್ ಗೇಮಿಂಗ್ ಚಟ, ಹಣದ ನಷ್ಟ ಮತ್ತು ಅದರಿಂದ ಸಂಭವಿಸುವ ಆತ್ಮಹತ್ಯೆ ಹಾಗೂ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಭರ್ಜರಿ ಪ್ಲಾನ್ ಮಾಡಿದೆ. ‘ಆನ್‌ಲೈನ್ ಗೇಮಿಂಗ್‌ನ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ, 2025’ ಇಂದಿನಿಂದ (ಮೇ 1) ಅಧಿಕೃತವಾಗಿ ಜಾರಿಗೆ ಬರುತ್ತಿದ್ದು, ಗೇಮಿಂಗ್ ಜಗತ್ತಿನಲ್ಲಿ ದೊಡ್ಡ ಬದಲಾವಣೆಗಳು ಉಂಟಾಗಲಿವೆ.

ಹೊಸ ಕಾಯ್ದೆಯ ಮುಖ್ಯಾಂಶಗಳು ಮತ್ತು ಕಟ್ಟುನಿಟ್ಟಿನ ನಿಯಮಗಳ ವಿವರ ಇಲ್ಲಿದೆ:

1. ನ್ಯಾಷನಲ್ ಗೇಮಿಂಗ್ ಅಥಾರಿಟಿ (NGA) ಅಸ್ತಿತ್ವಕ್ಕೆ
ಇನ್ನು ಮುಂದೆ ದೇಶದಲ್ಲಿ ಯಾವುದೇ ಆನ್‌ಲೈನ್ ಗೇಮ್ ನಡೆಸಬೇಕೆಂದರೆ ನ್ಯಾಷನಲ್ ಗೇಮಿಂಗ್ ಅಥಾರಿಟಿ (NGA) ಇಂದ ಪರವಾನಗಿ ಪಡೆಯುವುದು ಕಡ್ಡಾಯ. Dream11, MPL, WinZO ನಂತಹ ಪ್ರಮುಖ ಕಂಪನಿಗಳು ಸೇರಿದಂತೆ ಎಲ್ಲಾ ಗೇಮಿಂಗ್ ಸಂಸ್ಥೆಗಳು ಹೊಸ ಲೈಸೆನ್ಸ್ ಪಡೆಯಲೇಬೇಕು.

2. ಗೇಮ್‌ಗಳ ವರ್ಗೀಕರಣ ಮತ್ತು ನಿಷೇಧ

ಗೇಮ್‌ಗಳನ್ನು ಮೂರು ಹಂತಗಳಲ್ಲಿ ವಿಂಗಡಿಸಲಾಗಿದೆ:

ಇ-ಸ್ಪೋರ್ಟ್ಸ್: ಇವುಗಳಿಗೆ ಸಂಪೂರ್ಣ ಕಾನೂನುಬದ್ಧ ಮಾನ್ಯತೆ ನೀಡಲಾಗಿದೆ.

ಸ್ಕಿಲ್ ಗೇಮ್: ಕೌಶಲ ಆಧಾರಿತ ಗೇಮ್‌ಗಳಿಗೆ ಲೈಸೆನ್ಸ್ ಪಡೆಯುವುದು ಕಡ್ಡಾಯ.

ಬೆಟ್ಟಿಂಗ್ ಗೇಮ್: ಆನ್‌ಲೈನ್ ಕ್ಯಾಸಿನೊ, 1XBet ನಂತಹ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ.

3. ಅಪ್ರಾಪ್ತರಿಗೆ ಕಠಿಣ ನಿಯಮ: ಪೋಷಕರೇ ಗಮನಿಸಿ!
ಮಕ್ಕಳು ಗೇಮ್‌ಗೆ ದಾಸರಾಗುವುದನ್ನು ತಪ್ಪಿಸಲು ಸರ್ಕಾರ ಹೊಸ ಮಿತಿಗಳನ್ನು ಹೇರಿದೆ:

ಸಮಯದ ಮಿತಿ: 18 ವರ್ಷದೊಳಗಿನವರು ದಿನಕ್ಕೆ ಕೇವಲ 3 ಗಂಟೆ ಮಾತ್ರ ಆಡಬಹುದು. ರಾತ್ರಿ 11 ರಿಂದ ಬೆಳಿಗ್ಗೆ 6 ರವರೆಗೆ ಆಡುವುದನ್ನು ನಿಷೇಧಿಸಲಾಗಿದೆ.

ಹಣದ ಮಿತಿ: ಮಕ್ಕಳು ಗೇಮ್‌ಗಾಗಿ ತಿಂಗಳಿಗೆ 10,000 ರೂ. ಗಿಂತ ಹೆಚ್ಚು ಖರ್ಚು ಮಾಡುವಂತಿಲ್ಲ.

ಪೋಷಕರ ಅನುಮತಿ: ಯಾವುದೇ ಹಣದ ವಹಿವಾಟು ನಡೆಸಲು ಪೋಷಕರ OTP ಕಡ್ಡಾಯ. ಅಲ್ಲದೆ, ಎಲ್ಲಾ ಗೇಮ್‌ಗಳಿಗೆ ಆಧಾರ್ KYC ಕಡ್ಡಾಯಗೊಳಿಸಲಾಗಿದೆ.

4. ತೆರಿಗೆ ಮತ್ತು ಜಿಎಸ್‌ಟಿ
ಹಣ ಹೂಡಿಕೆ ಮಾಡುವ ಗೇಮ್‌ಗಳ ಡೆಪಾಸಿಟ್ ಮೇಲೆ 28% GST ಮುಂದುವರಿಯಲಿದೆ. ಒಂದು ವೇಳೆ ನೀವು ಗೇಮ್‌ನಲ್ಲಿ 10,000 ರೂ. ಗಿಂತ ಹೆಚ್ಚಿನ ಮೊತ್ತ ಗೆದ್ದರೆ, ಅದರಲ್ಲಿ 30% TDS ಕಡಿತವಾಗಲಿದೆ.

5. ನಿಯಮ ಉಲ್ಲಂಘಿಸಿದರೆ ಭಾರಿ ದಂಡ ಮತ್ತು ಜೈಲು
ಕಂಪನಿಗಳಿಗೆ: ನಿಯಮ ಉಲ್ಲಂಘಿಸುವ ಗೇಮಿಂಗ್ ಕಂಪನಿಗಳಿಗೆ ಮೊದಲ ಬಾರಿ 1 ಕೋಟಿ ರೂ. ಹಾಗೂ ಎರಡನೇ ಬಾರಿ 5 ಕೋಟಿ ರೂ. ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ, ಕಂಪನಿಯ CEO ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಸೆಲೆಬ್ರಿಟಿಗಳಿಗೆ: ನಿಷೇಧಿತ ಗೇಮ್‌ಗಳ ಜಾಹೀರಾತು ನೀಡುವ ಇನ್‌ಫ್ಲುಯೆನ್ಸರ್‌ಗಳು ಅಥವಾ ಸೆಲೆಬ್ರಿಟಿಗಳಿಗೆ 50 ಲಕ್ಷ ರೂ. ದಂಡ ಮತ್ತು 1 ವರ್ಷ ಬ್ಯಾನ್ ಶಿಕ್ಷೆ ವಿಧಿಸಲಾಗುತ್ತದೆ.

ಬಳಕೆದಾರರಿಗೆ: ಕದ್ದುಮುಚ್ಚಿ ಬ್ಯಾನ್ ಆದ ಸೈಟ್‌ಗಳಲ್ಲಿ ಗೇಮ್ ಆಡಿದರೆ 10,000 ರೂ. ದಂಡ ವಿಧಿಸಲಾಗುತ್ತದೆ. ಪದೇ ಪದೇ ತಪ್ಪು ಮಾಡಿದರೆ ಕ್ರಿಮಿನಲ್ ಕೇಸ್ ದಾಖಲಾಗಲಿದ್ದು, ಬ್ಯಾಂಕ್ ಖಾತೆ ಕೂಡ ಫ್ರೀಜ್ ಆಗಲಿದೆ.

ಒಟ್ಟಾರೆಯಾಗಿ, ಆನ್‌ಲೈನ್ ಗೇಮಿಂಗ್ ಹೆಸರಿನಲ್ಲಿ ನಡೆಯುವ ವಂಚನೆ ಮತ್ತು ಹಾದಿ ತಪ್ಪಿಸುವ ಕೃತ್ಯಗಳಿಗೆ ಈ ಹೊಸ ಕಾಯ್ದೆ ಮರಣಶಾಸನ ಬರೆಯುವ ನಿರೀಕ್ಷೆಯಿದೆ.

BIG NEWS: Break in online gaming in the country: New law implemented from today; Jail time for violating the rules!
Share. Facebook Twitter LinkedIn WhatsApp Email

Related Posts

​ಯು18 ಏಷ್ಯಾ ಕಪ್ 2026: ಭಾರತೀಯ ಹಾಕಿ ತಂಡಗಳ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

1 Min Read

​ಫ್ರೆಂಚ್ ಓಪನ್ ಚಾಂಪಿಯನ್: ಮಾಯಾ ಚ್ವಾಲಿನ್ಸ್ಕ ವಿರುದ್ಧ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಿರಾ ಆಂಡ್ರೀವಾ

1 Min Read

​ಕುಟುಂಬದ ನಿರ್ವಹಣೆಗೆ ‘ಉದ್ಯೋಗವಿಲ್ಲ’ ಎಂಬ ನೆಪ ನಡೆಯದು: ಪತಿಯ ಹೊಣೆಗಾರಿಕೆಯನ್ನು ಎತ್ತಿ ಹಿಡಿದ ದೆಹಲಿ ನ್ಯಾಯಾಲಯ

2 Mins Read
Recent News

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

​ಯು18 ಏಷ್ಯಾ ಕಪ್ 2026: ಭಾರತೀಯ ಹಾಕಿ ತಂಡಗಳ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

​ಫ್ರೆಂಚ್ ಓಪನ್ ಚಾಂಪಿಯನ್: ಮಾಯಾ ಚ್ವಾಲಿನ್ಸ್ಕ ವಿರುದ್ಧ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಿರಾ ಆಂಡ್ರೀವಾ

​ಕುಟುಂಬದ ನಿರ್ವಹಣೆಗೆ ‘ಉದ್ಯೋಗವಿಲ್ಲ’ ಎಂಬ ನೆಪ ನಡೆಯದು: ಪತಿಯ ಹೊಣೆಗಾರಿಕೆಯನ್ನು ಎತ್ತಿ ಹಿಡಿದ ದೆಹಲಿ ನ್ಯಾಯಾಲಯ

State News
KARNATAKA

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಹಲಸು ಮತ್ತು ಮಾವು ಪ್ರಿಯರಿಗಾಗಿ ಹಮ್ಮಿಕೊಳ್ಳಲಾಗಿರುವ ‘ಬೃಹತ್ ಹಲಸು ಮತ್ತು…

ರಾಮನಗರದ ಬಿಡದಿ ಬಳಿ ಸರಣಿ ಅಪಘಾತ: ಪ್ರಾಣಾಪಾಯದಿಂದ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪಾರು

BREAKING: ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಾಸ್ ಪಡೆದ ರಾಮಲಿಂಗಾರೆಡ್ಡಿ

ಸಿಎಂ ಡಿ.ಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿಯಾಗಿ ಕೆಎಎಸ್ ಅಧಿಕಾರಿ ಡಾ. ರಾಜೇಂದ್ರ ಪ್ರಸಾದ್ ನೇಮಕ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.