Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾರ್ವಜನಿಕರೇ ಗಮನಿಸಿ : ಮೇ.1ರಿಂದ ಜಾರಿಗೆ ಬರಲಿವೆ ಈ ಪ್ರಮುಖ ನಿಯಮಗಳು | New Rules From May 1

25/04/2026 3:55 PM

ಯಾವ ಸಂದರ್ಭಗಳಲ್ಲಿ ಪುತ್ರಿಯರಿಗೆ ತಂದೆಯ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ? ಇಲ್ಲಿದೆ ಕಾನೂನು ಮಾಹಿತಿ

25/04/2026 3:31 PM

BREAKING: ಸಚಿವ ಡಿ.ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ: ಕಿಮ್ಸ್ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ

25/04/2026 3:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » LPG ಗ್ರಾಹಕರಿಗೆ ಬಿಗ್ ಅಲರ್ಟ್: ಮಾರ್ಚ್ 31ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ಹಣ ಕಟ್ !
KARNATAKA

LPG ಗ್ರಾಹಕರಿಗೆ ಬಿಗ್ ಅಲರ್ಟ್: ಮಾರ್ಚ್ 31ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ಹಣ ಕಟ್ !

By kannadanewsnow5728/02/2026 5:25 AM

ನವದೆಹಲಿ: ನೀವು ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬಳಸುತ್ತಿದ್ದೀರಾ? ಹಾಗಿದ್ದಲ್ಲಿ ಈ ಕೂಡಲೇ ಈ ಕೆಲಸ ಪೂರ್ಣಗೊಳಿಸಿ. ಅಕ್ರಮ ಗ್ಯಾಸ್ ಸಂಪರ್ಕಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ಎಲ್ಲಾ ಗ್ಯಾಸ್ ಗ್ರಾಹಕರಿಗೆ ಆಧಾರ್ ಆಧಾರಿತ ಇ-ಕೆವೈಸಿ (e-KYC) ಮಾಡಿಸುವುದನ್ನು ಕಡ್ಡಾಯಗೊಳಿಸಿದೆ.

2025-26ರ ಹಣಕಾಸು ವರ್ಷವು ಮುಕ್ತಾಯದ ಹಂತದಲ್ಲಿದ್ದು, ಮಾರ್ಚ್ 31ರೊಳಗೆ ಗ್ರಾಹಕರು ತಮ್ಮ ಬಯೋಮೆಟ್ರಿಕ್ ದೃಢೀಕರಣವನ್ನು ಪೂರ್ಣಗೊಳಿಸಬೇಕು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಯಾರಿಗೆ ಕಡ್ಡಾಯ?

ಉಜ್ವಲ ಯೋಜನೆ ಫಲಾನುಭವಿಗಳು: ಪ್ರತಿ ಸಿಲಿಂಡರ್ ಮೇಲೆ 300 ರೂ. ಸಬ್ಸಿಡಿ ಪಡೆಯುವವರು ಕಡ್ಡಾಯವಾಗಿ ಕೆವೈಸಿ ಮಾಡಿಸಬೇಕು.

ಸಾಮಾನ್ಯ ಗ್ರಾಹಕರು: ಉಜ್ವಲ ಯೋಜನೆ ಮಾತ್ರವಲ್ಲದೆ, ಎಲ್ಲಾ ಎಲ್‌ಪಿಜಿ ಗ್ರಾಹಕರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅಗತ್ಯವಾಗಿದೆ.

ಗಮನಿಸಿ: ಈ ಹಣಕಾಸು ವರ್ಷದಲ್ಲಿ ಈಗಾಗಲೇ ಇ-ಕೆವೈಸಿ ಮಾಡಿಸಿದ್ದಲ್ಲಿ, ಮತ್ತೆ ಮಾಡುವ ಅಗತ್ಯವಿಲ್ಲ.

ಇ-ಕೆವೈಸಿ ಮಾಡದಿದ್ದರೆ ಏನಾಗುತ್ತದೆ?

ಒಂದು ವೇಳೆ ನೀವು ನಿಗದಿತ ಸಮಯದೊಳಗೆ ಇ-ಕೆವೈಸಿ ಮಾಡದಿದ್ದರೆ, ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುವ ಸಬ್ಸಿಡಿ ಹಣ ಸ್ಥಗಿತಗೊಳ್ಳಲಿದೆ. ಇ-ಕೆವೈಸಿ ಮಾಡದಿದ್ದರೂ 7ನೇ ರೀಫಿಲ್ (ಸಿಲಿಂಡರ್ ಬುಕ್ಕಿಂಗ್) ವರೆಗೆ ಸಬ್ಸಿಡಿ ಮುಂದುವರಿಯುತ್ತದೆ, ಆದರೆ ಆ ನಂತರವೂ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಹಣ ಬರುವುದು ನಿಲ್ಲುತ್ತದೆ. ಆದರೆ, ಒಮ್ಮೆ ಕೆವೈಸಿ ಪೂರ್ಣಗೊಳಿಸಿದರೆ ಬಾಕಿ ಉಳಿದ ಹಣ ಮತ್ತೆ ಜಮೆಯಾಗುತ್ತದೆ.

ಮನೆಯಲ್ಲೇ ಇ-ಕೆವೈಸಿ ಮಾಡುವುದು ಹೇಗೆ?

ಗ್ರಾಹಕರು ಗ್ಯಾಸ್ ಏಜೆನ್ಸಿಗಳಿಗೆ ಅಲೆಯುವ ಅಗತ್ಯವಿಲ್ಲದೆ, ಮೊಬೈಲ್ ಮೂಲಕವೇ ಉಚಿತವಾಗಿ ಕೆವೈಸಿ ಮಾಡಬಹುದು:

ಗೂಗಲ್ ಪ್ಲೇ ಸ್ಟೋರ್‌ನಿಂದ Aadhaar FaceRD ಆ್ಯಪ್ ಡೌನ್‌ಲೋಡ್ ಮಾಡಿ.

ನಿಮ್ಮ ಗ್ಯಾಸ್ ಕಂಪನಿಯ (Indane, HP ಅಥವಾ Bharat Gas) ಅಧಿಕೃತ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಿ.

ಆ್ಯಪ್‌ನಲ್ಲಿ ನೀಡಲಾದ ಸೂಚನೆಗಳಂತೆ ನಿಮ್ಮ ಮುಖವನ್ನು ಸ್ಕ್ಯಾನ್ ಮಾಡಿ (Face Authentication) ಆಧಾರ್ ದೃಢೀಕರಣ ಪೂರ್ಣಗೊಳಿಸಿ.

ಸಹಾಯವಾಣಿ: ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ pmuy.gov.in ಗೆ ಭೇಟಿ ನೀಡಿ ಅಥವಾ ಟೋಲ್-ಫ್ರೀ ಸಂಖ್ಯೆ 1800 2333 555 ಕ್ಕೆ ಕರೆ ಮಾಡಬಹುದು. ಅಥವಾ ನಿಮ್ಮ ಹತ್ತಿರದ ಗ್ಯಾಸ್ ವಿತರಕರನ್ನು (Distributor) ಸಂಪರ್ಕಿಸಿ.

The last date to complete LPG Biometric Aadhaar Authentication / e-KYC is fast approaching. Consumers are advised to complete the process at the earliest.

A new and convenient way to complete your LPG Biometric Aadhaar Authentication / e-KYC is now available.

Verify from the… pic.twitter.com/j7nnptkCUz

— Ministry of Petroleum and Natural Gas #MoPNG (@PetroleumMin) February 25, 2026

Big alert for LPG consumers: Subsidy money will be cut if e-KYC is not done by March 31st!
Share. Facebook Twitter LinkedIn WhatsApp Email

Related Posts

ಯಾವ ಸಂದರ್ಭಗಳಲ್ಲಿ ಪುತ್ರಿಯರಿಗೆ ತಂದೆಯ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ? ಇಲ್ಲಿದೆ ಕಾನೂನು ಮಾಹಿತಿ

25/04/2026 3:31 PM2 Mins Read

BREAKING: ಸಚಿವ ಡಿ.ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ: ಕಿಮ್ಸ್ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ

25/04/2026 3:27 PM1 Min Read

ALERT : ಸಾರ್ವಜನಿಕರೇ ಗಮನಿಸಿ : ಈ ಸರಳ ಕ್ರಮಗಳನ್ನು ಅನುಸರಿಸಿ ಬಿಸಿಲಿನ ತಾಪದಿಂದ ಕಾಪಾಡಿಕೊಳ್ಳಿ.!

25/04/2026 3:14 PM2 Mins Read
Recent News

ಸಾರ್ವಜನಿಕರೇ ಗಮನಿಸಿ : ಮೇ.1ರಿಂದ ಜಾರಿಗೆ ಬರಲಿವೆ ಈ ಪ್ರಮುಖ ನಿಯಮಗಳು | New Rules From May 1

25/04/2026 3:55 PM

ಯಾವ ಸಂದರ್ಭಗಳಲ್ಲಿ ಪುತ್ರಿಯರಿಗೆ ತಂದೆಯ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ? ಇಲ್ಲಿದೆ ಕಾನೂನು ಮಾಹಿತಿ

25/04/2026 3:31 PM

BREAKING: ಸಚಿವ ಡಿ.ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ: ಕಿಮ್ಸ್ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ

25/04/2026 3:27 PM

ALERT : ಸಾರ್ವಜನಿಕರೇ ಗಮನಿಸಿ : ಈ ಸರಳ ಕ್ರಮಗಳನ್ನು ಅನುಸರಿಸಿ ಬಿಸಿಲಿನ ತಾಪದಿಂದ ಕಾಪಾಡಿಕೊಳ್ಳಿ.!

25/04/2026 3:14 PM
State News
KARNATAKA

ಯಾವ ಸಂದರ್ಭಗಳಲ್ಲಿ ಪುತ್ರಿಯರಿಗೆ ತಂದೆಯ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ? ಇಲ್ಲಿದೆ ಕಾನೂನು ಮಾಹಿತಿ

By kannadanewsnow5725/04/2026 3:31 PM KARNATAKA 2 Mins Read

ಇಂದಿನ ಕಾಲದಲ್ಲಿ ಅನೇಕರ ಮನಸ್ಸಿನಲ್ಲಿ ಒಂದು ಪ್ರಶ್ನೆ ಇರುತ್ತದೆ: ತಂದೆಯ ಆಸ್ತಿಯಲ್ಲಿ ಪುತ್ರಿಯರಿಗೆ ಹಕ್ಕು ಇದೆಯೇ ಅಥವಾ ಇಲ್ಲವೇ? ಕಾನೂನಾತ್ಮಕವಾಗಿ…

BREAKING: ಸಚಿವ ಡಿ.ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ: ಕಿಮ್ಸ್ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ

25/04/2026 3:27 PM

ALERT : ಸಾರ್ವಜನಿಕರೇ ಗಮನಿಸಿ : ಈ ಸರಳ ಕ್ರಮಗಳನ್ನು ಅನುಸರಿಸಿ ಬಿಸಿಲಿನ ತಾಪದಿಂದ ಕಾಪಾಡಿಕೊಳ್ಳಿ.!

25/04/2026 3:14 PM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ನೀಡಲು `ಕಾರ್ಡಿಯಾಕ್ ಹಬ್ ಘಟಕ’ ಸ್ಥಾಪನೆ.!

25/04/2026 3:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.