Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಬೆಂಗಳೂರಿನ ಆಸ್ತಿ ಮಾಲೀಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಜನವರಿ 30 ರಿಂದ ಫೆಬ್ರವರಿ 2 ರವರೆಗೆ ಇ-ಖಾತಾ ಮೇಳ ಆಯೋಜಿಸಲಾಗಿದೆ. ಹೌದು,ಬಿಬಿಎಂಪಿ ಕಛೇರಿ,ಕುವೆಂಪುನಗರ ವಾರ್ಡ್ , ಸಿಂಗಾಪುರ (ವಾಲ್ಮೀಕಿ ವೃತ್ತ)ದಲ್ಲಿ ದಿನಾಂಕ 30-01-25 ರಿಂದ 02-02-25 ವರೆಗೆ ಸಮಯ : 10:00 AM – 5:00 PM ಆಸ್ತಿ ಖಾತಾ ನೋಂದಣಿಯನ್ನು ಸರಳಗೊಳಿಸುವುದು ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಗೆ ಇ-ಖಾತಾ ಇಲ್ಲವೇ? ನಮ್ಮ ಶಿಬಿರಕ್ಕೆ ಬನ್ನಿ ಮತ್ತು ಇ-ಖಾತಾ ಪಡೆಯಿರಿ! ನೀವು ತರಬೇಕಾದ ದಾಖಲೆಗಳು: * ನೋಂದಾಯಿತ ಆಸ್ತಿ ಪತ್ರ * ಎಸ್ಎಎಸ್ ಆಸ್ತಿ ತೆರಿಗೆ ರಶೀದಿ * ಬೆಸ್ಕಾಂ ಮೀಟರ್ ಸಂಖ್ಯೆ * ಆಧಾರ್ ಕಾರ್ಡ್ * ಆಸ್ತಿಯ GPS ಫೋಟೋ * ಆಸ್ತಿ ಫೋಟೋ * E.C (ಆಪ್ಷನಲ್) ಸಹಾಯಕ್ಕಾಗಿ: ಆನ್ಲೈನ್ ಪ್ರಕ್ರಿಯೆಯ ಮೂಲಕ ನಿಮಗೆ ಮಾರ್ಗದರ್ಶನ ನೀಡಲು ಟೀಮ್ ಕೆಬಿಜಿ ಸಿದ್ಧವಾಗಿದೆ. (https://youtu.be/FRLimLizeHM?si=BxG9mgRWBU7RkP3B). ನಿಮ್ಮ ಆಸ್ತಿಯನ್ನು ಸುಲಭವಾಗಿ ಅಧಿಕೃತಗೊಳಿಸಿ! https://youtu.be/FRLimLizeHM?si=pjiAjo50RAHItBHu
ಬೆಂಗಳೂರು: ರಾಜ್ಯದಲ್ಲಿ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಳವಾದ ಬೆನ್ನಲ್ಲೇ ರಾಜ್ಯ ಸರ್ಕಾರ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಹೌದು, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು ಗೈಡ್ ಲೈನ್ಸ್ ಜಾರಿಗೆ ತರಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಮಿಷನರ್ ದಯಾನಂದ್, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಾಗಿದ್ದು, ಈಗಾಗಲೇ ಸರ್ಕಾರದ ಮಟ್ಟದಲ್ಲಿ ಎರಡು ಸಭೆಗಳನ್ನು ನಡೆಸಲಾಗಿದೆ. ಸಭೆಯಲ್ಲಿ ಕೆಲವೊಂದು ಗೈಡ್ ಲೈನ್ಸ್ ಜಾರಿಗೆ ತರುವಂತೆ ಸೂಚನೆ ನೀಡಲಾಗಿದೆ. ಸರ್ಕಾರದ ಸೂಚನೆಯಂತೆ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುವುದು ಎಂದರು. ಮೀಟರ್ ಬಡ್ಡಿ ದಂಧೆಕೋರರ ಮೇಲೆ ಹದ್ದಿನ ಕಣ್ಣಿಡಲು ಸೂಚಿಸಲಾಗಿದೆ. ಫೈನಾನ್ಸ್ ನವರಿಂದ ಯಾವುದೇ ತೊಂದರೆಯಾದಲ್ಲಿ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ತುಮಕೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಾಗಿದ್ದು, ಇದೀಗ ಸಾಲದ ಬಡ್ಡಿಯನ್ನು ಕೇಳಿಯೇ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಹೌದು, ತುಮಕೂರು ನಗರದ ಲೇಬರ್ ಕಾಲೋನಿಯ ಸೈಯದ್ ಸಮೀವುಲ್ಲಾ ಅವರು ಮೈಕ್ರೋ ಫೈನಾನ್ಸ್ ನಿಂದ ಸಾಲ ಪಡೆದಿದ್ದರು. ಆದರೆ ಸಾಲಕ್ಕಿಂತ ಬಡ್ಡಿಯನ್ನೇ ನೋಡಿ ಆಘಾತಕ್ಕೀಡಾಗಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಫೈವ್ ಸ್ಟಾರ್ ಫೈನಾನ್ಸ್ ನಿಂದ 2019ರಲ್ಲಿ 4.66 ಲಕ್ಷ ಮನೆ ಸಾಲ ಪಡೆದಿದ್ದರು. 2024ರವರೆಗೆ ಬರೋಬ್ಬರಿ 7.20 ಲಕ್ಷ ಬಡ್ಡಿ ಕಟ್ಟಿದ್ದರು. ಆದರೆ ಅಸಲು ಹಾಗೆಯೇ ಉಳಿದಿತ್ತು. ಅಸಲು ಕಟ್ಟುವಂತೆ ಫೈನಾನ್ಸ್ ನವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದ್ದು, ಇದೀಗ ಸಮೀವುಲ್ಲಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಯಾದಗಿರಿ : ರಾಜ್ಯದಲ್ಲಿ ಮೈಕ್ರೋ ಮೈಕ್ರೋ ಫೈನಾನ್ಸ್ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಯಾದಗಿರಿಯಲ್ಲಿ ವಿಧವೆ ಮಹಿಳೆ ಮನೆ ಸೀಜ್ ಮಾಡಿ ಜಪ್ತಿ ಮಾಡಿದ ಮೈಕ್ರೋ ಫೈನಾನ್ಸ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಾಗಿದ್ದು, ಸಾಲದ ಕಂತು ಕಟ್ಟಲಾಗದ ವಿಧವೆ ಮಹಿಳೆಯ ಮನೆ ಜಪ್ತಿ ಮಾಡಿದ ಮೈಕ್ರೋ ಫೈನಾನ್ಸ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಯಾದಗಿರಿ ತಾಲೂಕಿನ ಯಡಹಳ್ಳಿ ಗ್ರಾಮದ ಗೀತಮ್ಮ ಎಂಬುವರ ಮನೆಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಜಪ್ತಿ ಮಾಡಿದ್ದರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಸೂಚನೆ ಮೇರೆಗೆ ಪೊಲೀಸರು ತಕ್ಷಣವೇ ಮೈಕ್ರೋ ಫೈನಾನ್ಸ್ ವಿರುದ್ಧ ಪ್ರಕರಣ ದಾಖಲಿಸಿ ಮನೆಯ ಬೀಗ ತೆರೆಸಿದ್ದಾರೆ. ಘಟನೆ ಸಂಬಂಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಅಪರಿಚಿತ ನಂಬರ್ ಗಳಿಂದ ಫೋನ್ ಕರೆ ಸ್ವೀಕರಿಸುವ ಮುನ್ನ ಎಚ್ಚರವಾಗಿರಿ, ವಾಟ್ಸಾಪ್ನಲ್ಲಿ ಅಪರಿಚಿತ ಹುಡುಗಿಯೊಬ್ಬಳ ವೀಡಿಯೊ ಕರೆಗೆ ಹಾಜರಾಗುವುದು ಒಬ್ಬ ಪುರುಷನಿಗೆ ದುಬಾರಿಯಾಗಿ ಪರಿಣಮಿಸಿತು. ದೆಹಲಿ ಪೊಲೀಸ್ ಅಧಿಕಾರಿ ಐಪಿಎಸ್ ಪಂಕಜ್ ಅರೋರಾ ಅವರಂತೆ ನಟಿಸಿ, ವ್ಯಕ್ತಿಯೊಬ್ಬರಿಗೆ ವೀಡಿಯೊ ಕರೆ ಮಾಡಿ, ಪೊಲೀಸ್ ಕ್ರಮ ಕೈಗೊಳ್ಳುವುದಾಗಿ ಬೆದರಿಸುವ ಮೂಲಕ 2 ಲಕ್ಷ 73 ಸಾವಿರ ರೂ.ಗಳನ್ನು ವಂಚಿಸಿದ್ದಾರೆ. ಸಂತ್ರಸ್ತೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ, ಕನಿನಾ ತಹಸಿಲ್ನ ಭೋಜವಾಸ್ ಗ್ರಾಮದ ನಿವಾಸಿ ಅಶೋಕ್ ಕುಮಾರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಮ್ಮ ಜಮೀನಿನಲ್ಲಿ ಮನೆ ಕಟ್ಟಿರುವುದಾಗಿ ತಿಳಿಸಿದ್ದಾರೆ. ಅವರು ತಮ್ಮ ಹೊಲದಲ್ಲಿ ಋತುಮಾನದ ತೋಟವನ್ನು ನೆಟ್ಟಿದ್ದಾರೆ. ಹಣ್ಣಿನ ಗಿಡಗಳಿಗೆ ಪ್ರಾಣಿಗಳಿಂದ ಆಗುವ ಹಾನಿಯಿಂದ ಪಾರಾಗಲು ಅವನು ರಾತ್ರಿ ತೋಟದಲ್ಲಿ ಮಲಗುತ್ತಾನೆ. ಆ ಯುವಕ ರಾತ್ರಿ ಹಾಸಿಗೆಯ ಮೇಲೆ ಒಬ್ಬಂಟಿಯಾಗಿ ಮಲಗಿದ್ದ. ಜೂನ್ 19 ರ…
ಬೆಂಗಳೂರು : ಬೆಂಗಳೂರಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಓರ್ವ ಡ್ರಗ್ ಪೆಡ್ಲರ್ ನನ್ನು ಬಂಧಿಸಿದ್ದು, ಬರೋಬ್ಬರಿ 10 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಹೊರ ರಾಜ್ಯದ ‘ಡ್ರಗ್ ಪೆಡ್ಲರ್’ ನನ್ನು ಬಂಧಿಸಿದ್ದಾರೆ. ಡ್ರಗ್ ಪೆಡ್ಲರ್ ಬೆಂಗಳೂರಿನ ಹಲವು ಕಡೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಡ್ರಗ್ ಪೆಡ್ಲರ್ ಬಂಧಿಸಿದ್ದು, ಬಂಧಿತನಿಂದ 10 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿಕೊಂಡಿದ್ದಾರೆ. ಸಿಸಿಬಿ ಮತ್ತು ಬ್ಯಾಡರಹಳ್ಳಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಾಡಿ ಆರೋಪಿಯನ್ನ ಬಂಧಿಸಿದ್ದಾರೆ.
ಹುಬ್ಬಳ್ಳಿ : ಶ್ರೀರಾಮುಲು ಅವರು ಕಾಂಗ್ರೆಸ್ ಗೆ ಬಂದರೆ ಸ್ವಾಗತ, ನನಗೇನು ಟಾಸ್ಕ್ ಕೊಟ್ಟಿಲ್ಲ, ನಮ್ಮ ಪಕ್ಷಕ್ಕೆ ಯಾರೂ ಬೇಕಾದ್ರೂ ಬರಬಹುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಅವರು ಮೋಸ್ಟ್ ಹಂಬಲ್, ವಂಡರ್ ಫುಲ್ ಫ್ರೆಂಡ್, ನನಗೇನು ಟಾಸ್ಕ್ ಕೊಟ್ಟಿಲ್ಲ. ನಮ್ಮ ಪಕ್ಷ ಡಬಲ್ ಡೆಕ್ಕರ್ ಬಸ್ ಇದ್ದಹಾಗೆ. ಪಕ್ಷಕ್ಕೆ ಯಾರೂ ಬೇಕಾದ್ರೂ ಬರಬಹುದು, ಹೋಗಬಹುದು. ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಹೇಳಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಮೋಸ್ಟ್ ವಾಂಟೇಡ್ ಇರಾನಿ ಗ್ಯಾಂಗ್ ನ 6 ಮಂದಿ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಸ್ಟೋನ್ ರಿಂಗ್ ವ್ಯಾಪಾರ ಮಾಡುತ್ತಿದ್ದ ಇರಾನಿ ಗ್ಯಾಂಗ್ ಒಂಟಿ ಹಾಗೂ ಬೀಗ ಹಾಕಿದ್ದ ಮನೆಗಳನ್ನು ಕಳ್ಳತನ ಮಾಡುತ್ತಿತ್ತು. ಒಂಟಿ ಮಹಿಳೆಯರ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದರು. ಇದೀಗ ಕೋಡಿಗಹಳ್ಳಿ ಪೊಲೀಸರು ಇರಾನಿ ಗ್ಯಾಂಗ್ ನ 6 ಮಂದಿ ಸದಸ್ಯರನ್ನು ಬಂಧಿಸಿದ್ದು, ಬಂಧಿತರಿಂದ 28 ಲಕ್ಷ ರೂ. ಮೌಲ್ಯದ 450 ಗ್ರಾಂ ಚಿನ್ನ ವಶಕ್ಕೆ ಪಡೆದುಕೊಂಡಿದೆ. ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಜನವರಿ 28, 2025 ರಂದು ಚಿನ್ನದ ದರ ಕಡಿಮೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 75,100 ರೂ. ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 81,930 ರೂ. ಇತ್ತು. ಕಳೆದ ವಾರದಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿನ ಬದಲಾವಣೆ ಶೇ. 1.43 ರಷ್ಟಿತ್ತು, ಆದರೆ ಹಿಂದಿನ ತಿಂಗಳಲ್ಲಿ ಇದು ಶೇ. 5.56 ರಷ್ಟು ಬದಲಾಗಿದೆ. ಇಂದು ಪ್ರಾರಂಭವಾದ ಯುಎಸ್ ಫೆಡ್ ಸಭೆಗೆ ಮುಂಚಿತವಾಗಿ ಬೆಳಗಿನ ಅವಧಿಯಲ್ಲಿ MCX ಚಿನ್ನದ ದರವು ಖರೀದಿ ಆಸಕ್ತಿಯನ್ನು ಕಂಡಿತು. MCX ನಲ್ಲಿ ಫೆಬ್ರವರಿ 2025 ರ ಅವಧಿ ಮುಗಿಯುವ ಚಿನ್ನದ ಭವಿಷ್ಯದ ಒಪ್ಪಂದವು ಇಂದು 10 ಗ್ರಾಂಗೆ 79,631 ರೂ. ಗಳಲ್ಲಿ ಹೆಚ್ಚಾಗಿ ಪ್ರಾರಂಭವಾಯಿತು, ಆದರೆ ಅದು ಬೇಗನೆ ಬುಲ್ಸ್ ಹಿಡಿತದಿಂದ ಹೊರಬಂದು ದಿನದ ಇಂಟ್ರಾಡೇ ಗರಿಷ್ಠ 10 ಗ್ರಾಂಗೆ 79,822 ರೂ. ತಲುಪಿತು. ಜಾಗತಿಕ ಬೇಡಿಕೆ, ಬಡ್ಡಿದರಗಳು, ಕರೆನ್ಸಿ ವಿನಿಮಯ ದರಗಳು, ಸರ್ಕಾರಿ ನೀತಿಗಳು ಮತ್ತು…
ಲಕ್ನೋ : ಪಶ್ಚಿಮ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ಆದಿನಾಥ ದೇವರ ನಿರ್ವಾಣ ಲಡ್ಡು ಉತ್ಸವದ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ. ಮರದ ರಚನೆಯೊಂದು ಕುಸಿದು ಕನಿಷ್ಠ 40 ಜನರು ಗಾಯಗೊಂಡಿದ್ದಾರೆ” ಎಂದು ಬಾಗ್ಪತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಸ್ಮಿತಾ ಲಾಲ್ ಹೇಳಿದ್ದಾರೆ. ಈ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರನ್ನು ಪ್ರಥಮ ಚಿಕಿತ್ಸೆಯ ನಂತರ ಮನೆಗೆ ಕಳುಹಿಸಲಾಗಿದ್ದು, 20 ಜನರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ” ಎಂದು ಅಸ್ಮಿತಾ ಲಾಲ್ ಹೇಳಿದರು. “ಈ ಕಾರ್ಯಕ್ರಮವು 25 ವರ್ಷಗಳಿಂದ ನಡೆಯುತ್ತಿದೆ ಮತ್ತು ಪ್ರತಿ ವರ್ಷ ಇಂತಹ ಅಟ್ಟಹಾಸವನ್ನು ಮಾಡಲಾಗುತ್ತದೆ. ಇದಕ್ಕಾಗಿ ಅನುಮತಿಯನ್ನೂ ಪಡೆಯಲಾಗಿತ್ತು. ಈ ಅಪಘಾತದ ಹಿಂದಿನ ಕಾರಣ ತನಿಖೆಯ ನಂತರವೇ ತಿಳಿಯಬಹುದು” ಎಂದು ಅವರು ಹೇಳಿದರು. https://twitter.com/ANINewsUP/status/1884105574352339125 ಬರೌತ್ನ ಗಾಂಧಿ ರಸ್ತೆಯಲ್ಲಿರುವ ಮಾನಸ್ತಂಭ ಸಂಕೀರ್ಣದಲ್ಲಿ ಆದಿನಾಥ ದೇವರಿಗೆ ಲಡ್ಡು ಅರ್ಪಿಸುತ್ತಿದ್ದಾಗ ಬೆಳಿಗ್ಗೆ ಈ ಅಪಘಾತ ಸಂಭವಿಸಿದೆ. ಕಂಬವನ್ನು ತಲುಪಲು ಎತ್ತರದ ಸ್ಕ್ಯಾಫೋಲ್ಡಿಂಗ್ ಅನ್ನು ನಿರ್ಮಿಸಲಾಗಿತ್ತು, ಅದರ ಒಂದು…












