Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು : ವಿಧಾನಸಭೆಯ ಅಧಿವೇಶನದಲ್ಲಿ ಇಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು 2025ನೇ ಸಾಲಿನ ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿರ್ವಹಣೆ) ವಿಧೇಯಕ,2025ನೇ ಸಾಲಿನ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ)ವಿಧೇಯಕ, 2025ನೇ ಸಾಲಿನ ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿ ಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಫ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ವಿಧೇಯಕ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು 2025ನೇ ಸಾಲಿನ ಕರ್ನಾಟಕ ಲಿಫ್ಟ್ ಗಳ, ಎಸ್ಕಲೇಟರ್ ಗಳ ಮತ್ತು ಪ್ಯಾಸೆಂಜರ್ ಕನ್ವೇಯರ್ ಗಳ (ತಿದ್ದುಪಡಿ) ವಿಧೇಯಕವನ್ನು ಹಾಗೂ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ಅವರು 2025ನೇ ಸಾಲಿನ ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ (ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧ ರಕ್ಷಣೆ)ವಿಧೇಯಕಗಳನ್ನು ಮಂಡಿಸಿದರು. ವಿಧೇಯಕಗಳ ಪ್ರಸ್ತಾವನೆಗಳನ್ನು ಅಂಗೀಕರಿಸಲಾಯಿತು
ಮಂಗಳೂರು: ಧರ್ಮಸ್ಛಳ ಪೊಲೀಸ್ ಠಾಣೆಯಲ್ಲಿ ಎಐ ವೀಡಿಯೋ ಸೃಷ್ಠಿಸಿ ಗಲಭೆಗೆ ಪ್ರಚೋದನೆ ಆರೋಪದಡಿ ಸುಮೋಟೋ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ ಎಂ.ಡಿಗೆ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಎಐ ವೀಡಿಯೋ ಸೃಷ್ಠಿಸಿ ಗಲಭೆಗೆ ಪ್ರಚೋದನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣವು ಯೂಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆಗಸ್ಟ್.19ರಂದು ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು ಧರ್ಮಸ್ಥಳ ಪೊಲೀಸರು ಸಮೀರ್ ಎಂ.ಡಿಯನ್ನು ಬಂಧಿಸೋದಕ್ಕೂ ಅವರ ಮನೆಗೆ ತೆರಳಿದ್ದರು. ಅವರು ನಾಪತ್ತೆಯಾಗಿದ್ದಾಗಿ ತಿಳಿದು ಬಂದಿತ್ತು. ಈ ಬೆನ್ನಲ್ಲೇ ಸಮೀರ್ ಎಂ.ಡಿ ಸಲ್ಲಿಸಿದ್ದಂತ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದಂತ ಮಂಗಳೂರು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. https://kannadanewsnow.com/kannada/approval-of-the-karnataka-essential-services-maintenance-amendment-bill-2025-in-the-legislative-council/ https://kannadanewsnow.com/kannada/ksrtc-driver-co-conductor-posts-2nd-selection-list-announced/
ಬೆಂಗಳೂರು: ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ( ತಿದ್ದುಪಡಿ) ವಿಧೇಯಕ 2025 ಅನ್ನು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ವಿಧಾನ ಪರಿಷತ್ ನಲ್ಲಿ ಮಂಡಿಸಿದರು. ಸದನದ ಸದಸ್ಯರಿಂದ ಪರ್ಯಾಲೋಚನೆಗೊಂಡ ನಂತರ ವಿಧೇಯಕ ಅಂಗೀಕಾರಗೊಂಡಿತು. ವಿಧಾನ ಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಪಟ್ಡಣ ಮತ್ತು ಗ್ರಾಮಾಂತರ ಯೋಜನೆ ಮತ್ತು ಕೆಲವು ಇತರ ಕಾನೂನುಗಳ (ತಿದ್ದುಪಡಿ) ವಿಧೇಯಕ 2025 ಹಾಗೂ ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ 2025 ಅನ್ನು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬಿ.ಎಸ್.ಸುರೇಶ ಅವರು ವಿಧಾನ ಪರಿಷತ್ ನಲ್ಲಿ ಮಂಡಿಸಿದರು. ಸದನದ ಸದಸ್ಯರಿಂದ ಪರ್ಯಾಲೋಚನೆಗೊಂಡ ನಂತರ ವಿಧೇಯಕಗಳು ಅಂಗೀಕಾರಗೊಂಡವು ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕ 2025 ಹಾಗೂ ಕರ್ನಾಟಕ ವೈದ್ಯಕೀಯ ನೋಂದಣಿ ( ತಿದ್ದುಪಡಿ) ವಿಧೇಯಕ 2025 ಅನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್…
ವಿಧಾನಸಭೆ: ರಾಜ್ಯದಲ್ಲಿರುವ ಕುರಿಗಾಹಿಗಳ ರಕ್ಷಣೆಗಾಗಿ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಗುರುವಾರ ಮಂಡಿಸಿದ 2025 ನೇ ಸಾಲಿನ ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ (ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧ ರಕ್ಷಣೆ) ವಿಧೇಯಕವನ್ನು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಅವರು ಸ್ವಾಗತಿಸಿದ್ದಾರೆ. ಗುರುವಾರ ವಿಧೇಯಕದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಕುರಿಗಾಹಿಗಳ ಪರವಾಗಿ ಮಂತ್ರಿಗಳು ಮತ್ತು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕುರಿಗಾಹಿಗಳೆಂದರೆ ಕೇವಲ ಕುರುಬರೇ ಅಲ್ಲ. ಒಂದು ಧರ್ಮಕ್ಕೆ, ಜಾತಿಗೆ ಸೀಮಿತವಾಗಿರದೇ ರಾಜ್ಯದ ಬಹುತೇಕ ಹಳ್ಳಿಗಳ ಎಲ್ಲಾ ಸಮುದಾಯಗಳಿಗೆ ಸೇರಿದ ಜನರು ಕುರಿಗಳನ್ನು ಸಾಕುತ್ತಿದ್ದಾರೆ. ಈ ಮೂಲಕ ಕುರಿ ಸಾಕಾಣಿಕೆ ಒಂದು ಉದ್ಯೋಗವಾಗಿದೆ. ಜೀವನ ಸಾಗಿಸಲು ಇದೊಂದು ಮಾರ್ಗವಾಗಿದೆ. ಕುರಿಗಾಹಿಗಳದ್ದು ಶತಮಾನಗಳಷ್ಟು ಹಳೆಯದಾದ ಸಂಪ್ರದಾಯವಾಗಿದೆ ಎಂದರು. ರಾತ್ರೋರಾತ್ರಿ ಕುರಿಗಳನ್ನು ಕಳ್ಳತನ ಮಾಡುವ ಪ್ರಕರಣಗಳು ಜರುಗುತ್ತಿವೆ. ನಾಲ್ಕೈದು ತಿಂಗಳ ಹಿಂದೆ ಬಾಗಲಕೋಟೆಯಲ್ಲಿ ಕುರಿಗಾಹಿಯೊಬ್ಬರನ್ನು ಕೊಲೆ ಮಾಡಿ ಕುರಿಗಳನ್ನು ಕದ್ದೊಯ್ದ ಪ್ರಕರಣ ನಡೆದಿದೆ. ಇಂತಹ ಕುರಿಗಾಹಿಗಳಿಗೆ ಕಾನೂನಾತ್ಮಕವಾಗಿ ರಕ್ಷಣೆ…
2025 ರ ಏಷ್ಯಾ ಕಪ್ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯು ಕ್ರಿಕೆಟ್ಗಿಂತಲೂ ಹೆಚ್ಚು ದೂರದಲ್ಲಿರುವ ತೀವ್ರ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಈ ವರ್ಷದ ಆರಂಭದಲ್ಲಿ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಸಾರ್ವಜನಿಕರ ಭಾವನೆಗಳು ಹೆಚ್ಚುತ್ತಿರುವ ಕಾರಣ, ಬಹಿಷ್ಕಾರದ ಕರೆಗಳು ಜೋರಾಗಿ ಬೆಳೆದವು. ಆದಾಗ್ಯೂ, ಭಾರತವನ್ನು ಪಂದ್ಯಾವಳಿಯಲ್ಲಿ ಭಾಗವಹಿಸುವುದನ್ನು ತಡೆಯಲಾಗುವುದಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವಾಲಯ ಹೇಳಿದೆ. ಅಂತರರಾಷ್ಟ್ರೀಯ ಕ್ರೀಡಾಕೂಟಗಳ ಕಡೆಗೆ ಭಾರತದ ನೀತಿ ಪಾಕಿಸ್ತಾನದೊಂದಿಗಿನ ಕ್ರೀಡೆಗಳ ಬಗ್ಗೆ ಭಾರತದ ನಿಲುವು ಅದರ ವಿಶಾಲ ರಾಜತಾಂತ್ರಿಕ ವಿಧಾನಕ್ಕೆ ಅನುಗುಣವಾಗಿದೆ ಎಂದು ಸರ್ಕಾರ ಪುನರುಚ್ಚರಿಸಿತು. ‘ಪಾಕಿಸ್ತಾನವನ್ನು ಒಳಗೊಂಡ ಕ್ರೀಡಾಕೂಟಗಳಿಗೆ ಭಾರತದ ವಿಧಾನವು ಆ ದೇಶದೊಂದಿಗೆ ವ್ಯವಹರಿಸುವಾಗ ಅದರ ಒಟ್ಟಾರೆ ನೀತಿಯನ್ನು ಪ್ರತಿಬಿಂಬಿಸುತ್ತದೆ. ಪರಸ್ಪರರ ದೇಶದಲ್ಲಿ ದ್ವಿಪಕ್ಷೀಯ ಕ್ರೀಡಾಕೂಟಗಳಿಗೆ ಸಂಬಂಧಿಸಿದಂತೆ, ಭಾರತೀಯ ತಂಡಗಳು ಪಾಕಿಸ್ತಾನದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸುವುದಿಲ್ಲ. ಪಾಕಿಸ್ತಾನಿ ತಂಡಗಳನ್ನು ಭಾರತದಲ್ಲಿ ಆಡಲು ನಾವು ಅನುಮತಿಸುವುದಿಲ್ಲ. ಭಾರತದಲ್ಲಿ ಅಥವಾ ವಿದೇಶಗಳಲ್ಲಿ ಅಂತರರಾಷ್ಟ್ರೀಯ ಮತ್ತು ಬಹುಪಕ್ಷೀಯ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ, ನಾವು ಅಂತರರಾಷ್ಟ್ರೀಯ ಕ್ರೀಡಾ ಸಂಸ್ಥೆಗಳ ಅಭ್ಯಾಸಗಳು ಮತ್ತು ನಮ್ಮ…
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾಧ್ಯಂತ ಇಂದಿನಿಂದ ಬೈಕ್ ಟ್ಯಾಕ್ಸಿ ಸೇವೆ ಪುನರಾರಂಭಗೊಂಡಿದೆ. ಈ ಮೂಲಕ ಸ್ಥಗಿತಗೊಂಡಿದ್ದಂತ ಬೈಕ್ ಸೇವೆ ಚಾಲನೆಗೊಂಡೆತೆ ಆಗಿದೆ. ಹೌದು ಬೆಂಗಳೂರು ಸೇರಿ ರಾಜ್ಯಾಧ್ಯಂತ ಬೈಕ್ ಟ್ಯಾಕ್ಸಿ ಸೇವೆ ಆರಂಭಗೊಂಡಿದೆ. ಓಲಾ ಹೊರತುಪಡಿಸಿ ಉಬರ್, ರಾಪಿಡೋ ಆಪ್ ಸೇವೆ ಲಭ್ಯವಾಗಿದೆ. ಅಂದಹಾಗೇ ಸುರಕ್ಷತೆಯ ದೃಷ್ಟಿಯಿಂದ ಜೂನ್.16ರಿಂದ ರಾಜ್ಯಾಧ್ಯಂತ ಬೈಕ್ ಟ್ಯಾಕ್ಸಿ ಸೇವೆ ರದ್ದಾಗಿತ್ತು. ಇದರಿಂದಾಗಿ ಬೈಕ್ ಟ್ಯಾಕ್ಸಿ ನಂಬಿಕೊಂಡಿದ್ದ 6 ಲಕ್ಷಕ್ಕೂ ಹೆಚ್ಚು ಸವಾರರು ಬೀದಿಗೆ ಬಿದ್ದಂತೆ ಆಗಿತ್ತು. ನಿನ್ನೆ ಈ ಸಂಬಂಧ ಸಲ್ಲಿಸಲಾಗಿದ್ದಂತ ಅರ್ಜಿಯನ್ನು ವಿಚಾರಣೆ ನಡೆಸಿದ್ದಂತ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೀತಿ ಚೌಕಟ್ಟು ನಿಗದಿಪಡಿಸಲು ಸೂಚಿಸಿತ್ತು. ಸರ್ಕಾರಕ್ಕೆ ಸೂಚಿಸಿ ಸೆಪ್ಟೆಂಬರ್.22ಕ್ಕೆ ವಿಚಾರಣೆ ಮುಂದೂಡಿತ್ತು. ಈ ಬೆನ್ನಲ್ಲೇ ರಾಜ್ಯಾಧ್ಯಂತ ಬೈಕ್ ಟ್ಯಾಕ್ಸಿ ಸೇವೆ ಪುನರಾರಂಭಗೊಂಡಂತೆ ಆಗಿದೆ. https://kannadanewsnow.com/kannada/shreyas-iyer-to-replace-rohi-sharma-as-indian-odi-captain-report/ https://kannadanewsnow.com/kannada/ksrtc-driver-co-conductor-posts-2nd-selection-list-announced/
ಕೆಎನ್ಎನ್ ಡಿಜಿಟಲ್ ಡೆಸ್ಕ್: ಕಳೆದ ಕೆಲವು ದಿನಗಳಿಂದ, ಭಾರತೀಯ ಕ್ರಿಕೆಟ್ ತಂಡದಲ್ಲಿ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಿವೆ. ಟಿ20ಐ ಮತ್ತು ಟೆಸ್ಟ್ಗಳಿಂದ ನಿವೃತ್ತರಾದ ನಂತರ, 2027 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮುಂದಿನ ಏಕದಿನ ವಿಶ್ವಕಪ್ಗೆ ಬಿಸಿಸಿಐ ರೋಹಿತ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಪರಿಗಣಿಸುತ್ತಿಲ್ಲ ಎಂದು ಹಲವಾರು ವರದಿಗಳು ಬರುತ್ತಿವೆ. ಆದಾಗ್ಯೂ, ಹಿರಿಯ ಆಟಗಾರರು ಮತ್ತು ಭಾರತೀಯ ಕ್ರಿಕೆಟ್ ಮಂಡಳಿಯಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ. ರೋಹಿತ್ ಶರ್ಮಾ 2027 ರ ಏಕದಿನ ವಿಶ್ವಕಪ್ ಆಡುವ ಸಾಧ್ಯತೆಗಳಿದ್ದರೂ, ಅವರ ನಿವೃತ್ತಿಯ ನಂತರವೂ 50 ಓವರ್ಗಳ ಸ್ವರೂಪದಲ್ಲಿ ಭಾರತ ತಂಡವನ್ನು ಮುನ್ನಡೆಸಬಲ್ಲ ಆಟಗಾರನ ಅಗತ್ಯವಿದೆ. ಪ್ರಸ್ತುತ, ಸೂರ್ಯಕುಮಾರ್ ಯಾದವ್ ಭಾರತೀಯ ಟಿ20ಐ ತಂಡದ ನಾಯಕರಾಗಿದ್ದರೆ, ಶುಭ್ಮನ್ ಗಿಲ್ ಹೊಸದಾಗಿ ಟೆಸ್ಟ್ ನಾಯಕರಾಗಿ ನೇಮಕಗೊಂಡಿದ್ದಾರೆ. ಇದಲ್ಲದೆ, ಗಿಲ್ ಪ್ರಸ್ತುತ ಟಿ20ಐ ಮತ್ತು ಏಕದಿನ ಪಂದ್ಯಗಳಲ್ಲಿ ಉಪನಾಯಕರಾಗಿದ್ದಾರೆ, ಇದು ಪರೋಕ್ಷವಾಗಿ ಯುವ ಸ್ಟಾರ್ ಬ್ಯಾಟರ್ ಭವಿಷ್ಯದಲ್ಲಿ ಭಾರತದ ಎಲ್ಲಾ ಸ್ವರೂಪದ…
ಮಂಗಳೂರು: ಧರ್ಮಸ್ಛಳ ಪೊಲೀಸ್ ಠಾಣೆಯಲ್ಲಿ ಎಐ ವೀಡಿಯೋ ಸೃಷ್ಠಿಸಿ ಗಲಭೆಗೆ ಪ್ರಚೋದನೆ ಆರೋಪದಡಿ ಯೂಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಸುಮೋಟೋ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ ಎಂ.ಡಿಗೆ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಈ ಮೂಲಕ ಯೂಟ್ಯೂಬರ್ ಸಮೀರ್ ಎಂ.ಡಿಗೆ ಬಿಗ್ ರಿಲೀಫ್ ನೀಡಿದೆ. ಎಐ ವೀಡಿಯೋ ಸೃಷ್ಠಿಸಿ ಗಲಭೆಗೆ ಪ್ರಚೋದನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣವು ಯೂಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆಗಸ್ಟ್.19ರಂದು ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು ಧರ್ಮಸ್ಥಳ ಪೊಲೀಸರು ಸಮೀರ್ ಎಂ.ಡಿಯನ್ನು ಬಂಧಿಸೋದಕ್ಕೂ ಅವರ ಮನೆಗೆ ತೆರಳಿದ್ದರು. ಅವರು ನಾಪತ್ತೆಯಾಗಿದ್ದಾಗಿ ತಿಳಿದು ಬಂದಿತ್ತು. ಈ ಬೆನ್ನಲ್ಲೇ ಸಮೀರ್ ಎಂ.ಡಿ ಸಲ್ಲಿಸಿದ್ದಂತ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದಂತ ಮಂಗಳೂರು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ಹಿನ್ನಲೆಯಲ್ಲಿ ಬಂಧನದ ಭೀತಿಯಲ್ಲಿದ್ದಂತ ಯೂಟ್ಯೂಬರ್ ಸಮೀರ್…
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ರಚನೆಯಡಿಯಲ್ಲಿ 12 ಪ್ರತಿಶತ ಮತ್ತು 28 ಪ್ರತಿಶತ ಸ್ಲ್ಯಾಬ್ಗಳನ್ನು ತೆಗೆದುಹಾಕುವ ಕೇಂದ್ರದ ಪ್ರಸ್ತಾವನೆಗಳಿಗೆ ಸಚಿವರ ಗುಂಪು (ಜಿಒಎಂ) ತನ್ನ ಬೆಂಬಲವನ್ನು ನೀಡಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಗುರುವಾರ ಹೇಳಿದ್ದಾರೆ. “12 ಪ್ರತಿಶತ ಮತ್ತು 28 ಪ್ರತಿಶತದ ಜಿಎಸ್ಟಿ ಸ್ಲ್ಯಾಬ್ಗಳನ್ನು ರದ್ದುಗೊಳಿಸುವ ಭಾರತ ಸರ್ಕಾರದ ಎರಡು ಪ್ರಸ್ತಾವನೆಗಳನ್ನು ನಾವು ಬೆಂಬಲಿಸಿದ್ದೇವೆ” ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ನಡೆದ ಸಚಿವರ ಗುಂಪಿನ (ಜಿಒಎಂ) ಸಭೆಯಲ್ಲಿ ಭಾಗವಹಿಸಿದ ನಂತರ ಚೌಧರಿ ಹೇಳಿದರು. ಎಲ್ಲಾ ರಾಜ್ಯಗಳು ಚರ್ಚೆಗಳಲ್ಲಿ ಭಾಗವಹಿಸಿ ಸಲಹೆಗಳನ್ನು ನೀಡಿದ್ದರೂ, ಕೆಲವು ರಾಜ್ಯಗಳು ಕೆಲವು ಅವಲೋಕನಗಳನ್ನು ನೀಡಿದ್ದವು ಎಂದು ಅವರು ಹೇಳಿದರು. “ಕೇಂದ್ರವು ಮಾಡಿದ ಪ್ರಸ್ತಾವನೆಗಳ ಕುರಿತು ಎಲ್ಲರೂ ಸಲಹೆಗಳನ್ನು ನೀಡಿದ್ದಾರೆ. ಕೆಲವು ರಾಜ್ಯಗಳು ಕೆಲವು ಅವಲೋಕನಗಳನ್ನು ಹೊಂದಿವೆ. ಇದನ್ನು ಜಿಎಸ್ಟಿ ಮಂಡಳಿಗೆ ಉಲ್ಲೇಖಿಸಲಾಗಿದೆ. ಮಂಡಳಿಯು ನಿರ್ಧಾರ ತೆಗೆದುಕೊಳ್ಳುತ್ತದೆ” ಎಂದು ಚೌಧರಿ ಹೇಳಿದರು. ಚೌಧರಿ ಅವರ ಪ್ರಕಾರ, ಎರಡು ಸ್ಲ್ಯಾಬ್ಗಳನ್ನು…
ಮಂಡ್ಯ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನ ವಿರುದ್ಧ ಅವರ ಮೊದಲ ಪತ್ನಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಅಲ್ಲದೇ ಆತನ ಮುಖವಾಡವನ್ನು ಬಟಾ ಬಯಲು ಮಾಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಮಾಸ್ಕ್ ಮ್ಯಾನ್ ಅವರ ಮೊದಲ ಪತ್ನಿ ನಾನಾಗಿದ್ದೇನೆ. 1999ರಲ್ಲಿ ಮದುವೆಯಾಗಿ ನಾನು, ಅವರು 7 ವರ್ಷಗಳ ಕಾಲ ಜೊತೆಗಿದ್ದೆವು. ನನಗೆ ಒಂದು ಹೆಣ್ಣು, ಒಂದು ಗಂಡು ಮಗುವಿದೆ ಎಂದರು. ಮಾಸ್ಕ್ ಮ್ಯಾನ್ ನಮ್ಮ ಜೊತೆಗೆ ಇದ್ದಂತ ಸಂದರ್ಭದಲ್ಲಿ ಆತ ಬಳಿಯಲ್ಲಿ ಒಳ್ಳೆಯ ತನ ಇರಲಿಲ್ಲ. ಬರೀ ಸುಳ್ಳು ಹೇಳುತ್ತಿದ್ದನು. ನನಗೆ ಹೊಡೆದು ಚಿತ್ರಹಿಂಸೆ ಕೊಡ್ತಿದ್ದನು ಎಂಬುದಾಗಿ ಆರೋಪಿಸಿದರು. ವಿಚ್ಚೇದನದ ವೇಳೆ ಜೀವನಾಂಶ ವಿಚಾರವಾಗಿ ಸುಳ್ಳು ಹೇಳಿದ್ದನು. ನಾನು ಕೆಲಸ ಮಾಡುತ್ತಿಲ್ಲ ಎಂಬುದಾಗಿ ಕೋರ್ಟ್ ಗೆ ಸುಳ್ಳು ಹೇಳಿದ್ದನು. ಅಲ್ಲೂ ಕೂಡ ನಮಗೆ ನ್ಯಾಯ ಸಿಗಲಿಲ್ಲ ಎಂಬುದಾಗಿ ಮಾಸ್ಕ್ ಮ್ಯಾನ್ ಮೊದಲ ಪತ್ನಿ ತಿಳಿಸಿದ್ದಾರೆ. ನನ್ನ, ನನ್ನ ಮಕ್ಕಳನ್ನು ನನ್ನ ತಾಯಿಯೇ ಸಾಕಿದಳು. ಮದುವೆ ಬಳಿಕ ಧರ್ಮಸ್ಥಳದಲ್ಲಿಯೇ ನಾವು 7 ವರ್ಷ…