Subscribe to Updates
Get the latest creative news from FooBar about art, design and business.
Author: ವಸಂತ ಬಿ ಈಶ್ವರಗೆರೆ
ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.
ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಅಂತಿಮ ಸೆಮಿಸ್ಟರ್ ಎಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ 10 ನಿಮಿಷದೊಳಗೆ ಫಲಿತಾಂಶ ಪ್ರಕಟಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಫಲಿತಾಂಶವನ್ನು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಹಾಗೂ ಕುಲಸಚಿವ(ಮೌಲ್ಯಮಾಪನ) ಪ್ರೊ.ಯು.ಜೆ.ಉಜ್ವಲ್ ಜಂಟಿಯಾಗಿ ಬಿಡುಗಡೆ ಮಾಡಿದರು. ಬಿ.ಇ. ಮತ್ತು ಬಿ.ಟೆಕ್ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ 56,192 ವಿದ್ಯಾರ್ಥಿಗಳು ಹಾಜರಾಗಿದ್ದರು. ಶುಕ್ರವಾರ ಸಂಜೆ 5.30ಕ್ಕೆ ಪರೀಕ್ಷೆ ಅಂತ್ಯವಾಗಿದ್ದು, 5.40ಕ್ಕೆ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಶೇಕಡ 99.98 ಫಲಿತಾಂಶ ಸಾಧಿಸಿದೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ, ಸಂಪೂರ್ಣ ಮೌಲ್ಯಮಾಪನ ಪ್ರಕ್ರಿಯೆಯನ್ನು 8 ದಿನಗಳ ಮುಂಚಿತವಾಗಿಯೇ ಮುಗಿಸಿದೆ. ಆ ಮೂಲಕ ಈ ಹಿಂದೆ ದಾಖಲೆಗಳನ್ನು ಮುರಿದಿದೆ. ಈ ಹಿಂದೆ ಪರೀಕ್ಷೆ ಮುಗಿದ ಒಂದು ಗಂಟೆಯೊಳಗೆ ಫಲಿತಾಂಶವನ್ನು ಪ್ರಕಟಿಸಿತ್ತು. ಫಲಿತಾಂಶವನ್ನು ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ನೇರವಾಗಿ ಕಳುಹಿಸಲಾಗಿದೆ. ಈ ಕುರಿತು ಮಾತನಾಡಿದ ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, “ವಿಟಿಯು ತಂತ್ರಜ್ಞಾನ ಅಳವಡಿಕೆಯಲ್ಲಿ ಸದಾ ಮುಂದಿದೆ. ವಿದ್ಯಾರ್ಥಿಗಳ ಸ್ನೆಹಿಯಾಗಿದೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿಯಾಗಿದೆ. ಪರೀಕ್ಷೆ ಮುಗಿದ…
ನವದೆಹಲಿ: ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಮಾರುಕಟ್ಟೆಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆ ಇಡಲಾಗಿದೆ. ದೇಶದ ಅತಿ ದೊಡ್ಡ ಸಾರಿಗೆ ಮತ್ತು ಸಂಪರ್ಕ ಜಾಲವನ್ನು ಹೊಂದಿರುವ ಇಂಡಿಯಾ ಪೋಸ್ಟ್ (ಭಾರತೀಯ ಅಂಚೆ ಇಲಾಖೆ) ಮತ್ತು ಪ್ರಮುಖ ಇ-ಕಾಮರ್ಸ್ ಸಂಸ್ಥೆಯಾದ ಫ್ಲಿಪ್ಕಾರ್ಟ್ (Flipkart) ಒಟ್ಟಾಗಿ ದೇಶಾದ್ಯಂತ ಪಾರ್ಸೆಲ್ ವಿತರಣಾ ಸೇವೆಯನ್ನು ಬಲಪಡಿಸಲು ಶುಕ್ರವಾರದಂದು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿವೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಂವಹನ ಸಚಿವಾಲಯದ ಅಡಿಯಲ್ಲಿ ಬರುವ ಅಂಚೆ ಇಲಾಖೆ (DoP) ಮತ್ತು ಫ್ಲಿಪ್ಕಾರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಡುವೆ ಈ ಅಧಿಕೃತ ಒಪ್ಪಂದ ಏರ್ಪಟ್ಟಿದೆ. ಏನಿದು ಒಪ್ಪಂದ? ಇದರ ಮುಖ್ಯ ಉದ್ದೇಶವೇನು? ಈ ಒಪ್ಪಂದದ ಪ್ರಕಾರ, ಫ್ಲಿಪ್ಕಾರ್ಟ್ ಮೂಲಕ ಆರ್ಡರ್ ಮಾಡಲಾಗುವ ಗ್ರಾಹಕರ ಪಾರ್ಸೆಲ್ಗಳನ್ನು ಭಾರತದಾದ್ಯಂತ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ (Last-mile delivery) ಜವಾಬ್ದಾರಿಯನ್ನು ಭಾರತೀಯ ಅಂಚೆ ಇಲಾಖೆ ವಹಿಸಿಕೊಳ್ಳಲಿದೆ. ಅಂಚೆ ಇಲಾಖೆಯ ಪಾರ್ಸೆಲ್ ನಿರ್ದೇಶನಾಲಯದ ಜನರಲ್ ಮ್ಯಾನೇಜರ್ ಆದ ಶ್ರೀ…
ನಮ್ಮ ವಯಸ್ಸನ್ನು ನಾವು ಕ್ಯಾಲೆಂಡರ್ ದಿನಗಳ ಆಧಾರದ ಮೇಲೆ (Chronological Age) ಲೆಕ್ಕ ಹಾಕುತ್ತೇವೆ. ಆದರೆ ನಮ್ಮ ದೇಹದ ಒಳಗಿರುವ ಪ್ರಮುಖ ಅಂಗಗಳು, ವಿಶೇಷವಾಗಿ ಹೃದಯ, ನಮ್ಮ ನಿಜವಾದ ವಯಸ್ಸಿಗಿಂತ ವೇಗವಾಗಿ ವಯಸ್ಸಾಗುತ್ತಿರಬಹುದು (Biological Age)! “ನೀವು ನಿಮ್ಮ ದೇಹವನ್ನು ಯಾವ ಪರಿಸರದಲ್ಲಿ ಇಡುತ್ತೀರೋ, ಅದೇ ಪರಿಸರದಲ್ಲಿ ನಿಮ್ಮ ಹೃದಯವೂ ವಯಸ್ಸಾಗುತ್ತದೆ” ಎಂದು ಪ್ರಮುಖ ಹೃದ್ರೋಗ ತಜ್ಞರು ಎಚ್ಚರಿಸಿದ್ದಾರೆ. ಅಂದರೆ, ನಿಮ್ಮ ತಪ್ಪು ಜೀವನಶೈಲಿ ಮತ್ತು ಕೆಟ್ಟ ಹವ್ಯಾಸಗಳು ನಿಮ್ಮ ಹೃದಯದ ವಯಸ್ಸನ್ನು ನಿಮಗಿಂತ ಹತ್ತಾರು ವರ್ಷ ಮುಂಚಿತವಾಗಿಯೇ ವೃದ್ಧಾಪ್ಯದತ್ತ ತಳ್ಳಬಹುದು. ಇತ್ತೀಚಿನ ಕಾರ್ಡಿಯಾಕ್ ಮ್ಯಾಗ್ನೆಟಿಕ್ ರೆಸೋನೆನ್ಸ್ (CMR/MRI) ತಂತ್ರಜ್ಞಾನದ ಮೂಲಕ ನಡೆಸಿದ ಸಂಶೋಧನೆಗಳ ಪ್ರಕಾರ, ಅನಾರೋಗ್ಯಕರ ಜೀವನಶೈಲಿ ಹೊಂದಿರುವ ವ್ಯಕ್ತಿಗಳ ಹೃದಯದ ಕ್ರಿಯಾತ್ಮಕ ವಯಸ್ಸು (Functional Heart Age) ಅವರ ನಿಜವಾದ ವಯಸ್ಸಿಗಿಂತ 5 ರಿಂದ 45 ವರ್ಷಗಳಷ್ಟು ಹೆಚ್ಚಾಗಿರುವುದು ಕಂಡುಬಂದಿದೆ! ಹೃದಯ ವೇಗವಾಗಿ ವಯಸ್ಸಾಗಲು ಮುಖ್ಯ ಕಾರಣಗಳೇನು? ನಮ್ಮ ದೈನಂದಿನ ಕೆಲವು ಸಾಮಾನ್ಯ ತಪ್ಪುಗಳು ಹೃದಯದ ಆರೋಗ್ಯವನ್ನು ಒಳಗಿನಿಂದಲೇ…
“ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ” ಎಂಬ ಮಾತು ಕೇಳಲು ಚೆನ್ನಾಗಿದ್ದರೂ, ಮದುವೆಯಾಗಿ ದೀರ್ಘಕಾಲ ಸುಖಿ ಜೀವನ ನಡೆಸಲು ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ಅಂತರ (Age Gap) ಪ್ರಮುಖ ಪಾತ್ರ ವಹಿಸುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳು ಹೇಳುತ್ತವೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ವಯಸ್ಸಿನ ಅಂತರವಿರುವ ಜೋಡಿಗಳು ಕಾಣಸಿಗುತ್ತಾರಾದರೂ, ವೈಜ್ಞಾನಿಕವಾಗಿ ಒಂದು ನಿರ್ದಿಷ್ಟ ವಯಸ್ಸಿನ ವ್ಯತ್ಯಾಸವನ್ನು ‘ಸ್ವೀಟ್ ಸ್ಪಾಟ್’ (ಅತ್ಯಂತ ಸೂಕ್ತ ಅಂತರ) ಎಂದು ಕರೆಯಲಾಗುತ್ತದೆ. ಹಾಗಾದರೆ, ನೆಮ್ಮದಿಯ ವೈವಾಹಿಕ ಜೀವನಕ್ಕೆ ದಂಪತಿಗಳ ನಡುವೆ ಎಷ್ಟು ವರ್ಷದ ಅಂತರ ಇರಬೇಕು? ವಯಸ್ಸಿನ ಅಂತರ ಹೆಚ್ಚಾದಾಗ ದಾಂಪತ್ಯದಲ್ಲಿ ಎದುರಾಗುವ ಸವಾಲುಗಳೇನು? ಸಂಶೋಧನೆಗಳ ವರದಿ ಇಲ್ಲಿದೆ: ಸಂಶೋಧನೆಗಳ ಪ್ರಕಾರ ‘ಪರ್ಫೆಕ್ಟ್ ವಯಸ್ಸಿನ ಅಂತರ’ ಯಾವುದು? ವಿವಿಧ ಜಾಗತಿಕ ವಿಶ್ವವಿದ್ಯಾಲಯಗಳು ನಡೆಸಿರುವ ಆಳವಾದ ಅಧ್ಯಯನಗಳ ಪ್ರಕಾರ, ದಂಪತಿಗಳ ನಡುವೆ ಸೊನ್ನೆಯಿಂದ ಮೂರು ವರ್ಷಗಳ (0–3 ವರ್ಷಗಳು) ವಯಸ್ಸಿನ ಅಂತರವಿರುವುದು ಅತ್ಯಂತ ಸೂಕ್ತ ಹಾಗೂ ಸ್ಥಿರವಾದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಈ ಅಂತರವು ಗರಿಷ್ಠ 5 ವರ್ಷಗಳವರೆಗೂ ಇರಬಹುದು. ಇದಕ್ಕೆ…
ಶಿವಮೊಗ್ಗ: ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆಗಳಾಗಿದ್ದು, ಇತ್ತೀಚೆಗಷ್ಟೇ ಹೊರಡಿಸಲಾಗಿದ್ದ ಐಪಿಎಸ್ ಅಧಿಕಾರಿಯೊಬ್ಬರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಲಾಗಿದೆ. ಇದರೊಂದಿಗೆ ಶಿವಮೊಗ್ಗ ಉಪವಿಭಾಗಕ್ಕೆ ನೂತನ ಡಿವೈಎಸ್ಪಿ (Dy.SP) ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (DPAR) ಅಂಡರ್ ಸೆಕ್ರೆಟರಿ ಸಂಜಯ್ ಬಿ.ಎಸ್. ಅವರು ಮೇ 22, 2026 ರಂದು ಈ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಡಾ. ಬೆನಕ ಪ್ರಸಾದ್ ವರ್ಗಾವಣೆ ಆದೇಶ ರದ್ದು ಕಳೆದ ಮೇ 21, 2026 ರಂದು ಹೊರಡಿಸಲಾಗಿದ್ದ ಆದೇಶದನ್ವಯ, ಸಾಗರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ (ASP) ಡಾ. ಬೆನಕ ಪ್ರಸಾದ್ ಎನ್ ಜೆ, ಐಪಿಎಸ್ (KN 2022) ಅವರನ್ನು ಶಿವಮೊಗ್ಗ (ಎ) ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರನ್ನಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ, ಇಂದಿನ ಹೊಸ ಆದೇಶದ ಪ್ರಕಾರ ಆ ವರ್ಗಾವಣೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಡಾ. ಬೆನಕ ಪ್ರಸಾದ್ ಅವರು ಯಥಾಸ್ಥಿತಿಯಲ್ಲಿ ಸಾಗರ ಉಪವಿಭಾಗದ…
ಬೆಂಗಳೂರು: ಆಫ್ರಿಕಾ ಖಂಡದ ದೇಶಗಳಲ್ಲಿ ಇಬೋಲಾ ವೈರಸ್ ರೋಗ (Ebola Virus Disease – EVD) ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಜ್ಯಾದ್ಯಂತ ತೀವ್ರ ನಿಗಾವಹಿಸಿದ್ದು, ಸಾರ್ವಜನಿಕ ಮುನ್ನೆಚ್ಚರಿಕಾ ಪ್ರಕಟಣೆಯೊಂದನ್ನು ಹೊರಡಿಸಿದೆ. ಇತ್ತೀಚೆಗೆ (17 ಮೇ 2026 ರಂದು) ವಿಶ್ವ ಆರೋಗ್ಯ ಸಂಸ್ಥೆ (WHO) ಯು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC) ಮತ್ತು ಉಗಾಂಡಾ ದೇಶಗಳಲ್ಲಿ ಇಬೋಲಾ ವೈರಸ್ ತೀವ್ರವಾಗಿ ಹರಡುತ್ತಿರುವುದನ್ನು ಗಮನಿಸಿ, ಇದನ್ನು “ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ” (PHEIC) ಎಂದು ಘೋಷಿಸಿದೆ. ಸದ್ಯಕ್ಕೆ ಭಾರತದಲ್ಲಿ ಯಾವುದೇ ಇಬೋಲಾ ಪ್ರಕರಣಗಳು ವರದಿಯಾಗಿಲ್ಲದಿದ್ದರೂ, ಅಂತರರಾಷ್ಟ್ರೀಯ ಪ್ರಯಾಣ ಮತ್ತು ವ್ಯಾಪಾರ ವಹಿವಾಟುಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರವು ಈಗಿನಿಂದಲೇ ಸನ್ನದ್ಧವಾಗಿದೆ. ಇಬೋಲಾ ರೋಗದ ಲಕ್ಷಣಗಳೇನು? ಇಬೋಲಾ ಅತ್ಯಂತ ಗಂಭೀರ ಸ್ವರೂಪದ ವೈರಲ್ ಸೋಂಕಾಗಿದ್ದು, ಬಾಧಿತರಲ್ಲಿ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು: ತೀವ್ರ ಜ್ವರ ಮತ್ತು ತಲೆನೋವು ಸ್ನಾಯು ನೋವು ಹಾಗೂ…
ಬೆಂಗಳೂರು: ಮುಂಬರುವ ಬಿಬಿಎಂಪಿ (GBA) ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಪಕ್ಷದ ಸಾಂಘಿಕ ಬಲವರ್ಧನೆ ಕುರಿತು ಚರ್ಚಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಮೇ 24ರ ಭಾನುವಾರ ದೇವನಹಳ್ಳಿಯಲ್ಲಿ ಮಹತ್ವದ ವಿಶೇಷ ಸಭೆಯನ್ನು ಹಮ್ಮಿಕೊಂಡಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರಿನಲ್ಲಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಪಕ್ಷದ ಪ್ರಮುಖ ನಾಯಕರಿಗೆ ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಲಾಗಿದೆ. ಸಭೆಯ ಪ್ರಮುಖ ಅಜೆಂಡಾಗಳು ಮುಂಬರುವ ಜಿಬಿಎಂಪಿ (GBA) ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸಿದ್ಧತೆ, ಎಸ್ಐಆರ್ (SIR) ಪ್ರಕ್ರಿಯೆ ಮತ್ತು ಪಕ್ಷದ ಸಂಘಟನಾತ್ಮಕ ವಿಚಾರಗಳ ಕುರಿತಂತೆ ಸುದೀರ್ಘ ಸಮಾಲೋಚನೆ ನಡೆಸಲು ಈ ವಿಶೇಷ ಸಭೆಯನ್ನು ಕರೆಯಲಾಗಿದೆ. ಘಟಾನುಘಟಿ ನಾಯಕರ ಉಪಸ್ಥಿತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಬೂದಿಗೆರೆ ರಸ್ತೆಯಲ್ಲಿರುವ ‘ಬ್ರಿಗೇಡ್ ಆರ್ಚರ್ಡ್ಸ್’ (Brigade Orchards) ಆವರಣದಲ್ಲಿ ಭಾನುವಾರ ಸಂಜೆ 4:00 ಗಂಟೆಗೆ ಸಭೆ ನಿಗದಿಯಾಗಿದೆ. ಈ ಹೈವೋಲ್ಟೇಜ್ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ…
ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ನಗರ ಹೋಬಳಿ ವ್ಯಾಪ್ತಿಯ ಬ್ರಾಹ್ಮಣತರುವಿ ಗ್ರಾಮದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನು, ದನಗಳ ಮುಫತ್ತು ಹಾಗೂ ಕೆಪಿಸಿ ಲಿಮಿಟೆಡ್ಗೆ ಸೇರಿದ ಜಾಗವನ್ನು ಜೆಸಿಬಿ ಮತ್ತು ಹಿಟಾಚಿ ಯಂತ್ರಗಳ ಮೂಲಕ ಕಾನೂನುಬಾಹಿರವಾಗಿ ಒತ್ತುವರಿ ಮಾಡಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ. ಒತ್ತುವರಿದಾರರು ಜಾಗವನ್ನು ಸಮತಟ್ಟು ಮಾಡುವ ನೆಪದಲ್ಲಿ ನೈಸರ್ಗಿಕವಾಗಿ ಬೆಳೆದಿದ್ದ ಅಮೂಲ್ಯ ಸಸ್ಯಸಂಪತ್ತು ಹಾಗೂ ಕೋಟ್ಯಂತರ ರೂ. ಮೌಲ್ಯದ ಅಕೇಶಿಯಾ ಮರಗಳನ್ನು ಅಕ್ರಮವಾಗಿ ಕಡಿದು ಮಣ್ಣುಪಾಲು ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿ ಕೆ.ಎಸ್ ರವಿ ಎಂಬುವರು ತಹಶೀಲ್ದಾರರು, ಅರಣ್ಯಾಧಿಕಾರಿಗಳು, ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಪ್ರಭಾವಿಗಳಿಂದ ಎಕರೆಗಟ್ಟಲೆ ಜಾಗ ಲೂಟಿ? ಬ್ರಾಹ್ಮಣತರುವಿ ಗ್ರಾಮದ ಸರ್ವೆ ನಂಬರ್ 148 ರಲ್ಲಿರುವ ದನಗಳ ಮುಫತ್ತಿನ 12-17 ಎಕರೆ ಜಾಗ ಹಾಗೂ ಕೆಪಿಸಿ ಲಿಮಿಟೆಡ್ಗೆ ಸೇರಿದ 8-18 ಎಕರೆ ಜಾಗ, ಅದೇ ರೀತಿ ಸರ್ವೆ ನಂಬರ್ 153 ರ ದನಗಳ ಮುಫತ್ತಿನ 253.20 ಎಕರೆ ಮತ್ತು ಕೆಪಿಸಿ ಲಿಮಿಟೆಡ್ನ 15.25 ಎಕರೆ ಜಮೀನನ್ನು…
ಬೆಂಗಳೂರು: ಆನೇಕಲ್ ಸಮೀಪ ಕರ್ನಾಟಕ ಗೃಹ ಮಂಡಳಿ ಮೂಲಕ ರೈತರ ಫಲವತ್ತಾದ ಜಮೀನು ಪಡೆದು ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡುವುದು ಸರಿಯಲ್ಲ. ಗೃಹ ಮಂಡಳಿ ಮನೆಗಳನ್ನು ನಿರ್ಮಿಸಬೇಕೇ ಹೊರತು ಸ್ಟೇಡಿಯಂ ಹೇಗೆ ನಿರ್ಮಿಸುತ್ತದೆ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಾಮಾನ್ಯ ಜನರಿಗೆ ಮನೆ ನಿರ್ಮಿಸುವ ಕೆಲಸವನ್ನು ಗೃಹ ಮಂಡಳಿ ಮಾಡುತ್ತಿತ್ತು. ಇದೀಗ ಹೇಗೆ ಸ್ಟೇಡಿಯಂ ನಿರ್ಮಿಸುತ್ತದೆ. ಸ್ಟೇಡಿಯಂ ಅನ್ನು ಬೇಕಾದರೆ ಸರ್ಕಾರ ಮಾಡಲಿ ಎಂದು ಹೇಳಿದರು. ರೈತರಿಂದ ಬೆಲೆಬಾಳುವ ಜಮೀನನ್ನು ಗೃಹ ಮಂಡಳಿ ಮನೆ ನಿರ್ಮಿಸಲು ಪಡೆದಿದೆ. ಗಡಿ ಭಾಗದ ಆನೇಕಲ್ಗೆ ಈಗಲೇ ಹೋಗಿಬರುವುದು ಕಷ್ಟದ ಸ್ಥಿತಿಯಲ್ಲಿದೆ. ಯಾಕೆಂದರೆ ಅಷ್ಟರ ಮಟ್ಟಿಗೆ ಟ್ರಾಫಿಕ್ ಜಾಮ್ ಇದೆ. ಇನ್ನು ಸ್ಟೇಡಿಯಂ ಆದರೆ ಈ ಟ್ರಾಫಿಕ್ ತೊಂದರೆ ಊಹಿ¸ಲೂ ಸಾಧ್ಯವಿಲ್ಲ. ಆನೇಕಲ್ ಸಮೀಪ ಸ್ಟೇಡಿಯಂ ಬದಲು ತುಮಕೂರು ರಸ್ತೆಯಲ್ಲಿ ನಿರ್ಮಿಸಿದ್ದರೆ ಒಳ್ಳೆಯದಿತ್ತು ಎಂದು ಸಲಹೆ ನೀಡಿದರು.…
ಕಲಬುರಗಿ: ಮೂರು ವರ್ಷಗಳಲ್ಲಿ ನಮ್ಮ ಸಾಧನೆ ಇಂಥದ್ದೆಂದು ಕಾಂಗ್ರೆಸ್ ಮುಖಂಡರು ಹೇಳಲಿ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಅವರು ಸವಾಲು ಹಾಕಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಹಗರಣಗಳೇ ನಿಮ್ಮ ಸಾಧನೆಯೇ? ವಾಲ್ಮೀಕಿ ನಿಗಮದ ಹಗರಣದಲ್ಲಿ 187 ಕೋಟಿ ರೂ. ಲೂಟಿ ಹೊಡೆದು ನಮ್ಮ ಒಬ್ಬ ಸಚಿವ ಜೈಲಿಗೆ ಹೋದ ಎಂಬುದು ಸಾಧನೆಯೇ ಎಂದು ಪ್ರಶ್ನಿಸಿದರು. ಎಸ್.ಇ.ಪಿ., ಟಿಎಸ್ಪಿ ಹಣ ದುರುಪಯೋಗ ಸಾಧನೆಯೇ ಎಂದು ಕೇಳಿದರು. ಸಾಧನೆಯ ಕಾರಣಕ್ಕಾಗಿ ಕೆಎಸ್ಆರ್ಟಿಸಿ ನೌಕರರು ಚಳವಳಿಗೆ ಕರೆ ಕೊಟ್ಟಿದ್ದಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. 3 ಗಂಟೆಯೂ ರೈತರ ಪಂಪ್ಸೆಟ್ಗಳಿಗೆ 3 ಫೇಸ್ ಕರೆಂಟ್ ಕೊಡುತ್ತಿಲ್ಲ. ಇದು ಸಾಧನೆಯೇ? 3 ವರ್ಷದಲ್ಲಿ ಕರ್ನಾಟಕದ ಜನರು ಹೆಮ್ಮೆ ಪಡುವಂತೆ, ತಲೆಯೆತ್ತಿ ನಿಲ್ಲುವಂತೆ, ಇಡೀ ದೇಶದಲ್ಲಿ ಹೇಳಿಕೊಂಡು ಓಡಾಡುವಂತೆ ಯಾವ ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಶೇ 60 ಕಮಿಷನ್- ಅದು ಸಾಧನೆಯೇ? ಸರಕಾರಿ ನೌಕರರ ಆತ್ಮಹತ್ಯೆ- ಅದು ಸಾಧನೆಯೇ? ಎಂದ ಅವರು,…














