Author: kannadanewsnow09

ನವದೆಹಲಿ: ವಯಸ್ಸಾದಂತೆ ಮನುಷ್ಯನನ್ನು ಆರೋಗ್ಯದ ಸಮಸ್ಯೆಗಳು ಕಾಡುವುದು ಸಹಜ. ಆದರೆ ಇಂದಿನ ದುಬಾರಿ ವೈದ್ಯಕೀಯ ವೆಚ್ಚಗಳು ಮಧ್ಯಮ ಮತ್ತು ಕೆಳವರ್ಗದ ಕುಟುಂಬಗಳ ನೆಮ್ಮದಿಯನ್ನು ಕಸಿದುಕೊಳ್ಳುತ್ತಿವೆ. ಹಿರಿಯ ನಾಗರಿಕರ ಈ ಆತಂಕಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರವು ‘ಆಯುಷ್ಮಾನ್ ಭಾರತ್ ವಯ ವಂದನಾ’ (Ayushman Bharat Vaya Vandana) ಯೋಜನೆಯನ್ನು ಜಾರಿಗೆ ತಂದಿದೆ. 70 ವರ್ಷ ದಾಟಿದ ಪ್ರತಿಯೊಬ್ಬರಿಗೂ ಆಸರೆಯಾಗಲಿರುವ ಈ ಯೋಜನೆಯ ವಿಶೇಷತೆಗಳು ಇಲ್ಲಿವೆ. ಏನಿದು ಯೋಜನೆ? ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (AB-PMJAY) ವಿಸ್ತೃತ ರೂಪವೇ ಈ ‘ವಯ ವಂದನಾ’. ಈ ಯೋಜನೆಯಡಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ವಾರ್ಷಿಕ ₹5 ಲಕ್ಷದವರೆಗೆ ಉಚಿತ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ವಿಶೇಷ ಸೂಚನೆ: ಈ ಯೋಜನೆಗೆ ಯಾವುದೇ ಆದಾಯದ ಮಿತಿ ಇಲ್ಲ. ನೀವು ಬಡವರಿರಲಿ ಅಥವಾ ಶ್ರೀಮಂತರಿರಲಿ, 70 ವರ್ಷ ವಯಸ್ಸಾಗಿದ್ದರೆ ಸಾಕು, ಈ ಸೌಲಭ್ಯ ನಿಮ್ಮದಾಗಲಿದೆ. ಯೋಜನೆಯ ಪ್ರಮುಖ ಸೌಲಭ್ಯಗಳು ವಯ…

Read More

ಬೆಂಗಳೂರು: ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ‘ಆಕಾಸ ಏರ್’, ತನ್ನ ಇನ್-ಫ್ಲೈಟ್ ಆಹಾರ ಸೇವೆಯಾದ ‘ಕೆಫೆ ಆಕಾಸ’ ಮೂಲಕ ಈಸ್ಟರ್ ಹಬ್ಬದ ಪ್ರಯುಕ್ತ ವಿಶೇಷ ಭೋಜನವನ್ನು ಬಿಡುಗಡೆ ಮಾಡಿದೆ. ಹಬ್ಬದ ಸಂಭ್ರಮವನ್ನು ಮುಗಿಲೆತ್ತರದಲ್ಲೂ ಆಚರಿಸುವ ಉದ್ದೇಶದಿಂದ ಈ ವಿಶಿಷ್ಟ ಮೆನುವಿನ 2ನೇ ಆವೃತ್ತಿಯನ್ನು ಪ್ರಯಾಣಿಕರ ಮುಂದಿಡಲಾಗಿದೆ. ಕುಟುಂಬದ ಬಾಂಧವ್ಯ, ಒಗ್ಗಟ್ಟು ಮತ್ತು ಸಂಭ್ರಮಾಚರಣೆಯ ಪ್ರತೀಕವಾಗಿರುವ ಈಸ್ಟರ್ ಹಬ್ಬಕ್ಕೆ ತಕ್ಕಂತೆ ಹೊಸ ರುಚಿಗಳನ್ನು ಈ ಭೋಜನದಲ್ಲಿ ಸೇರಿಸಲಾಗಿದೆ. ಕೇವಲ ಹೊಟ್ಟೆ ತುಂಬಿಸುವುದಷ್ಟೇ ಅಲ್ಲದೆ, ಆಹಾರ ಸೇವನೆಯನ್ನು ಒಂದು ಸುಂದರ ಅನುಭೂತಿಯಾಗಿಸುವ ನಿಟ್ಟಿನಲ್ಲಿ ‘ಕೆಫೆ ಆಕಾಸ’ ಹೆಜ್ಜೆ ಇಟ್ಟಿದೆ. ಈಸ್ಟರ್ ವಿಶೇಷ ಭೋಜನದಲ್ಲಿ ಏನೇನಿದೆ? ವಿಮಾನ ಪ್ರಯಾಣವನ್ನು ಇನ್ನಷ್ಟು ಸುಂದರವಾಗಿಸಲು ಕೆಫೆ ಆಕಾಸ ಭರ್ಜರಿ ಮೆನು ಸಿದ್ಧಪಡಿಸಿದೆ. ಬಾಯೂರಿಸುವ ಸ್ಮೋಕ್ಡ್‌ ಚಿಕನ್‌ ಹಾಗೂ ಡಿಲ್ ರೋಲಾಡ್, ಕ್ರ್ಯಾನ್‌ಬೆರಿ ಮತ್ತು ಪಿಸ್ತಾದ ಸೊಗಸಾದ ಮಿಶ್ರಣ, ಕಣ್ಮನ ಸೆಳೆಯುವ ಬಾಲ್ಸಾಮಿಕ್ ತರಕಾರಿ ಸಲಾಡ್ ಈ ಮೆನುವಿನಲ್ಲಿವೆ. ಜೊತೆಗೆ ಸಿಹಿ ಪ್ರಿಯರಿಗಾಗಿ ನಿಂಬೆ ಸುವಾಸನೆ ಭರಿತ ಮೃದುವಾದ ಪನ್ನಾ…

Read More

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮತ್ತೆ ಮಂಗನ ಕಾಯಿಲೆಯ ಅಬ್ಬರ ಶುರುವಾಗಿದ್ದು, ಸಾಗರ ತಾಲೂಕಿನಲ್ಲಿ ಈ ಮಾರಕ ಕಾಯಿಲೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಘಟನೆಯ ವಿವರ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮನ್ಮನೆ ಗ್ರಾಮದ ನಿವಾಸಿ ಮಂಜಪ್ಪ (65) ಮೃತಪಟ್ಟ ದುರ್ದೈವಿ. ಇವರು ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಆರಂಭದಲ್ಲಿ ಇವರನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ನಡೆಸಿದಾಗ ಅವರಿಗೆ ಕೆಎಫ್‌ಡಿ (Kyasanur Forest Disease) ಸೋಂಕು ತಗುಲಿರುವುದು ದೃಢಪಟ್ಟಿತ್ತು. ಫಲಕಾರಿಯಾಗದ ಹೆಚ್ಚಿನ ಚಿಕಿತ್ಸೆ ಸೋಂಕಿನ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ, ವೈದ್ಯರ ಸಲಹೆಯಂತೆ ಮಂಜಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಿಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚುತ್ತಿರುವ ಜ್ವರದ ಪ್ರಕರಣಗಳು ಈ ಭಾಗದಲ್ಲಿ ಮಂಗನ ಕಾಯಿಲೆ ಮತ್ತು ಜ್ವರ ಪೀಡಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಸಾಗರದ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ದಾಖಲಾಗುತ್ತಿರುವುದು ಸಾರ್ವಜನಿಕರಲ್ಲಿ…

Read More

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಅವರ ನೇತೃತ್ವದ ನಮ್ಮ ಸರ್ಕಾರ ಕಳೆದೆರಡು ವರ್ಷಗಳಲ್ಲಿ ಜಾರಿಗೊಳಿಸಿರುವ ಜಲಸಂರಕ್ಷಣಾ ಯೋಜನೆಗಳಿಂದಾಗಿ ರಾಜ್ಯದಲ್ಲಿ ಅಂತರ್ಜಲ ಮರುಪೂರಣ ಸಾಮರ್ಥ್ಯದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಹಾಗೆಯೇ, ಉತ್ತಮ ಮಳೆ ಹಾಗೂ ಜನಜಾಗೃತಿ ಅಭಿಯಾನದ ಪರಿಣಾಮವಾಗಿ ಅಂತರ್ಜಲ ಬಳಕೆಯಲ್ಲಿ ಗಣನೀಯವಾದ ಇಳಿಕೆ ಕಂಡು ಬಂದಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ತಿಳಿಸಿದರು. ಇಂದು ವಿಕಾಸಸೌಧದ ತಮ್ಮ ಕಚೇರಿಯಲ್ಲಿ 2025 ನೇ ಸಾಲಿನ ಅಂತರ್ಜಲ ಮೌಲ್ಯಮಾಪನ ವರದಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕಳೆದ ಸಾಲಿನಲ್ಲಿ ಆದಂತಹ ಉತ್ತಮ ಮಳೆ ಹಾಗೂ ಸರ್ಕಾರದ ಭದ್ರ ಜಲ ಸಂರಕ್ಷಣಾ ನೀತಿಗಳ ಯಶಸ್ಸಿನ ಫಲವಾಗಿ, ಕರ್ನಾಟಕವು ಅಂತರ್ಜಲ ಸೂಚ್ಯಂಕಗಳಲ್ಲಿ ಗಮನಾರ್ಹ ಸುಧಾರಣೆಯನ್ನು ದಾಖಲಿಸಿದೆ. ದತ್ತಾಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟಾರೆಯಾಗಿ ಅಂತರ್ಜಲ ಬಳಕೆಯು ಗಣನೀಯವಾಗಿ ಇಳಿಕೆಯಾಗಿದ್ದು, ವಾರ್ಷಿಕವಾಗಿ ಅಂತರ್ಜಲ ಮರುಪೂರಣ ಸಾಮರ್ಥ್ಯದಲ್ಲಿ ಭಾರಿ ಏರಿಕೆಯಾಗಿದೆ. ಈ ವರದಿಯ ಪ್ರಕಾರ, ರಾಜ್ಯದ ಒಟ್ಟಾರೆ ಅಂತರ್ಜಲ ಬಳಕೆಯು…

Read More

ಬೆಂಗಳೂರು: ದೇಶದ ಯುವಜನತೆಯನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಹಾಗೂ ಉದ್ಯಮ ರಂಗದ ಕೌಶಲ್ಯ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಡಿಯಾಜಿಯೋ ಇಂಡಿಯಾ (ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್) ಹಾಗೂ ಪ್ರವಾಸೋದ್ಯಮ ಮತ್ತು ಆತಿಥ್ಯ ಕೌಶಲ್ಯ ಮಂಡಳಿ (ಟಿಎಚ್‌ಎಸ್‌ಸಿ) ಜಂಟಿಯಾಗಿ ಮಹತ್ವದ ಹೆಜ್ಜೆಯಿಟ್ಟಿವೆ. ಈ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ‘ಲರ್ನಿಂಗ್ ಫಾರ್ ಲೈಫ್’ ಕಾರ್ಯಕ್ರಮದಡಿ ಬೆಂಗಳೂರಿನಲ್ಲಿ 300ಕ್ಕೂ ಅಧಿಕ ಯುವಕ-ಯುವತಿಯರು ಕೌಶಲ್ಯ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ವಿಶೇಷ ಪದವಿ ಪ್ರದಾನ ಸಮಾರಂಭದಲ್ಲಿ ತರಬೇತಿ ಪೂರೈಸಿದ ಅಭ್ಯರ್ಥಿಗಳಿಗೆ ಅಧಿಕೃತ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲವೋನ್ ಅಕಾಡೆಮಿ ಆಫ್ ಬೇಕರಿ ಸೈನ್ಸ್‌ನ ನಿರ್ದೇಶಕ ಡಾ. ಅವಿನ್ ತಲಿಯತ್ ಮತ್ತು ಎಂ.ಎಸ್. ರಾಮಯ್ಯ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಅಬ್ಬಿ ಮ್ಯಾಥ್ಯೂ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಆತಿಥ್ಯ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಕಠಿಣ ಶಿಸ್ತು, ನಿರಂತರ ಕಲಿಕೆಯ ಹಸಿವು ಮತ್ತು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಗುಣ ಅತಿ ಮುಖ್ಯ ಎಂದು…

Read More

ಶಿವಮೊಗ್ಗ: ನಗರದ ದುರ್ಗಾಂಬ ದೇವಸ್ಥಾನದ ಸಮೀಪವಿರುವ ಸಾಗರ-ಸೊರಬ ಮತ್ತು ಕೆಳದಿ ರಸ್ತೆಯ ರೈಲ್ವೆ ಹಳಿಗಳ ಬಳಿ ಉದ್ದೇಶಿತ ಅಂಡರ್ ಪಾಸ್ (ಕೆಳಸೇತುವೆ) ನಿರ್ಮಾಣದ ಬದಲು ಮೇಲ್ಸೇತುವೆ (ಓವರ್ ಬ್ರಿಡ್ಜ್) ನಿರ್ಮಾಣ ಮಾಡುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ​ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಕೆಳಗಿನ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದರು: ಇದನ್ನು ಓದಿ : ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026 ಏಪ್ರಿಲ್ 9 ರಂದು ಪ್ರಕಟ : ಅಂಕಪಟ್ಟಿ ವೀಕ್ಷಿಸಲು ಸಂಪೂರ್ಣ ಮಾಹಿತಿ ​ಮಳೆಗಾಲದ ಸಮಸ್ಯೆ: ಉದ್ದೇಶಿತ ಅಂಡರ್ ಪಾಸ್ ಸುಮಾರು 5.5 ಮೀಟರ್ ಆಳವಿರಲಿದೆ. ಈ ಭಾಗ ತಗ್ಗು ಪ್ರದೇಶವಾಗಿರುವುದರಿಂದ ಮಳೆಗಾಲದಲ್ಲಿ ಹಳ್ಳದ ನೀರು ಒಳಗೆ ನುಗ್ಗಿ ಸಂಚಾರಕ್ಕೆ ತೀವ್ರ ಅಡ್ಡಿಯಾಗುವ ಸಾಧ್ಯತೆಯಿದೆ. ಈಗಾಗಲೇ ಅಟ್ಟೇರೆಯಲ್ಲಿ ನಿರ್ಮಿಸಲಾದ ಅಂಡರ್ ಪಾಸ್‌ನಲ್ಲಿ ಇಂತಹ ಸಮಸ್ಯೆ ಎದುರಾಗಿರುವುದನ್ನು ಅವರು ಉದಾಹರಿಸಿದರು. ​ಹೆಚ್ಚುತ್ತಿರುವ ವಾಹನ ದಟ್ಟಣೆ: ಸಾಗರ-ಸೊರಬ ರಸ್ತೆಯು ಭವಿಷ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಯಾಗುವ…

Read More

ಚಿತ್ರದುರ್ಗ: ಜಿಲ್ಲೆಯ ಚಿಕ್ಕಜಾಜೂರು ಠಾಣೆಯ ಪಿಎಸ್ಐ ನೇತ್ರಾವತಿ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷಿಸಿದ್ದೇ ಈಗ ಎಲ್ಲೆಲ್ಲೂ ಸುದ್ದಿಯಾಗುತ್ತಿದೆ. ಪಿಎಸ್ಐ ನೇತ್ರಾವತಿ ದರ್ಪ ತೋರಿದ್ದಾರೆ ಹಾಗೇ ಹೀಗೆ ಅನ್ನೋ ಸುದ್ದಿ ಕೂಡ ವೈರಲ್ ಆಗುತ್ತಿವೆ. ಆದರೇ ಚಿಕ್ಕಜಾಜೂರು ಠಾಣೆಯ ಪಿಎಸ್ಐ ನೇತ್ರಾವತಿ ತನ್ನ ಸಿಬ್ಬಂದಿಗೆ ಬಿಸಿಲಿನಲ್ಲಿ ನಿಲ್ಲಿಸುವ ಶಿಕ್ಷೆ ಕೊಟ್ಟಿದ್ದರ ಹಿಂದಿನ ವಾಸ್ತವ ಸತ್ಯ ಏನು ಅಂತ ಮುಂದಿದೆ ಓದಿ… ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಠಾಣೆಯ ಪಿಎಸ್ಐ ನೇತ್ರಾವತಿ ಕರ್ತವ್ಯ ನಿಷ್ಠೆ, ಪ್ರಾಮಾಣೀಕತೆಗೆ ತುಂಬಾನೇ ಹೆಸರುವಾಸಿ ಅನ್ನೋದು ಇಲಾಖೆಯ ಮಾತು. ಅಲ್ಲದೇ ಚಿಕ್ಕಜಾಜೂರು ಠಾಣೆ ವ್ಯಾಪ್ತಿಯ ಸುತ್ತಮುತ್ತಲ ಜನರಾಡುವ ನುಡಿ ಕೂಡ. ಆದರೇ ಅಂತಹ ಪಿಎಸ್ಐ ನೇತ್ರಾವತಿ ವಿರುದ್ಧವೇ ದರ್ಪ, ದೌಲತ್ತು ತೋರಿದಂತ ಆರೋಪ ಮಾಡಲಾಗುತ್ತಿದೆ. ಆದರೇ ಅದು ಸತ್ಯಕ್ಕೆ ದೂರವಾದದ್ದು, ಇಲಾಖೆಯ ನಿಯಮಾನುಸಾರವೇ ಸಿಬ್ಬಂದಿಗಳಿಗೆ ಶಿಕ್ಷೆ ನೀಡಲಾಗಿದೆ ಅನ್ನೋದು ಠಾಣೆಯ ಉನ್ನತ ಮೂಲಗಳ ಮಾತು. ಜಾತ್ರೆಯಲ್ಲಿ ಜೂಜಾಟ ನಿಲ್ಲಿಸಿ ಅಂತ ಕಳುಹಿಸಿದ್ರೇ, ಇಸ್ಪಿಟ್ ಆಟಕ್ಕೆ ಸಾತ್ ಕೊಟ್ಟ ಪೇದೆ…

Read More

ಬೆಂಗಳೂರು: ಬೆಂಗಳೂರು ಕೇಂದ್ರದ ಡಾ.ಮನಮೋಹನ್ ಸಿಂಗ್ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಕೇಂದ್ರದ ಪ್ರೆಂಚ್ ಭಾಷೆಯ ಉಪನ್ಯಾಸಕಿಯಾದ ತಗಡೂರು ಹಾಲಪ್ಪಗೌಡ ಸುಜಾತ (ಟಿ.ಪಿ.ಸುಜಾತ ಸ್ವಾಮಿ) ಅವರಿಗೆ ಪಿಎಚ್‌ಡಿ ನೀಡಲಾಗಿದೆ. ಎರಡು ಮಹಾ ಸಾಂಕ್ರಾಮಿಕ ರೋಗಗಳಾದ 1918 ರ ಸ್ಪ್ಯಾನಿಷ್ ಜ್ವರ ಮತ್ತು 2019 ರ ಕೋವಿಡ್- 19 ರ ಸಂದರ್ಭದಲ್ಲಿ ರಾಷ್ಟ್ರದ ಮುಖ್ಯಸ್ಥರ ಪಾತ್ರದ ಹೋಲಿಕೆ ಕುರಿತು ಡಾ.ಮನಮೋಹನ್ ಸಿಂಗ್ ವಿವಿ ಪ್ರೊ.ಜ್ಯೋತಿ ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದು, ಈ ಪ್ರಬಂಧಕ್ಕೆ ಪಿಎಚ್‌ಡಿ ದೊರೆತಿದೆ. ತಗಡೂರು ಹಾಲಪ್ಪಗೌಡ ಮತ್ತು ರತ್ನಮ್ಮ ಅವರ ಸುಪುತ್ರಿಯಾಗಿರುವ ಟಿ.ಪಿ.ಸುಜಾತ ಅವರು ಹೈಕೋರ್ಟ್ ವಕೀಲರಾದ ಕುಮಾರಸ್ವಾಮಿ ಸ್ವಾಮಿ ಅವರ ಪತ್ನಿ. ಪ್ರೆಂಚ್ ಭಾಷೆಯಲ್ಲಿಯೇ ಅಧ್ಯಯನ ಮಾಡಿ ಪ್ರಬಂಧ ಮಂಡನೆ ಮಾಡಿ ಪಿಎಚ್‌ಡಿ ಪಡೆದಿರುವ ಟಿ.ಪಿ.ಸುಜಾತ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಸ್ಣಳೀಯ ಸಂಘ ಸಂಸ್ಥೆಗಳು, ತಗಡೂರು, ಮಾರನಗೆರೆ ಗ್ರಾಮಸ್ಥರು ಅಭಿನಂದಿಸಿದ್ದಾರೆ. https://kannadanewsnow.com/kannada/illegal-assets-worth-crores-found-at-shimoga-bcm-district-officer-shobhas-house-here-are-the-full-details/ https://kannadanewsnow.com/kannada/do-you-know-how-much-illegal-assets-were-found-from-8-corrupt-officials-in-todays-lokayukta-raid-here-are-the-details/

Read More

ಶಿವಮೊಗ್ಗ: ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ತಮ್ಮ ಬೇಟೆಯನ್ನು ಮುಂದುವರೆಸಿದ್ದು, ಇಂದು ಶಿವಮೊಗ್ಗದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶೋಭಾ ಕೆ.ಆರ್. ಅವರಿಗೆ ಸೇರಿದ ಆರು ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ದೂರಿನ ಹಿನ್ನೆಲೆಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. 6 ಕಡೆಗಳಲ್ಲಿ ಏಕಕಾಲಕ್ಕೆ ಸರ್ಜರಿ! ಲೋಕಾಯುಕ್ತ ಅಧಿಕಾರಿಗಳ ತಂಡವು ಶೋಭಾ ಅವರಿಗೆ ಸಂಬಂಧಿಸಿದ ಮನೆ, ಕಚೇರಿ ಸೇರಿದಂತೆ ಒಟ್ಟು 06 ಪ್ರಮುಖ ಸ್ಥಳಗಳಲ್ಲಿ ಮುಂಜಾನೆಯೇ ಶೋಧನಾ ಕಾರ್ಯ ಆರಂಭಿಸಿತ್ತು. ಈ ಸಮಯದಲ್ಲಿ ಪತ್ತೆಯಾದ ಆಸ್ತಿಯ ವಿವರಗಳನ್ನು ಕಂಡು ಸ್ವತಃ ಲೋಕಾಯುಕ್ತ ಅಧಿಕಾರಿಗಳೇ ದಂಗಾಗಿದ್ದಾರೆ. ಪತ್ತೆಯಾದ ಆಸ್ತಿಯ ‘ಬೃಹತ್’ ವಿವರಗಳು: 1. ಸ್ಥಿರ ಆಸ್ತಿ (ಸುಮಾರು ₹ 1.76 ಕೋಟಿ): ನಿವೇಶನಗಳು: 02 ಬೆಲೆಬಾಳುವ ನಿವೇಶನಗಳು. ವಾಸದ ಮನೆ: ಅತ್ಯಾಧುನಿಕ ಸೌಲಭ್ಯವುಳ್ಳ 01 ವಾಸದ ಮನೆ. ಕೃಷಿ ಜಮೀನು: 4…

Read More

ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಮೈಸೂರು-1, ಬೆಳಗಾವಿ-1, ಮಂಗಳೂರು-1, ಚಿತ್ರದುರ್ಗ-1, ಶಿವಮೊಗ್ಗ-1, ಬಳ್ಳಾರಿ-1, ಬೀದರ್-1 ಮತ್ತು ಕೊಡಗು-1 ಪೊಲೀಸ್ ಠಾಣೆಗಳಲ್ಲಿ 8 ಸರ್ಕಾರಿ ಅಧಿಕಾರಿಯು ತಮ್ಮ ಬಲ್ಲ ಆದಾಯದ ಮೂಲಗಳಿಗಿಂತ ಹೆಚ್ಚು ಅಸಮತೋಲನ ಆಸ್ತಿಯನ್ನು ಹೊಂದಿದ್ದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತವೆ. ಈ ದಿನ ದಿನಾಂಕ: 07.04.2026 ರಂದು ಆರೋಪಿತ ಸರ್ಕಾರಿ ಅಧಿಕಾರಿಗೆ ಸಂಬಂಧಿಸಿದ ಮನೆ, ಕಛೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 35 ಸ್ಥಳಗಳಲ್ಲಿ ಏಕ ಕಾಲಕ್ಕೆ ಶೋಧನಾ ಕಾರ್ಯ ಕೈಗೊಂಡಿದ್ದು, ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಅಸಮತೋಲನ ಆಸ್ತಿ ಹೊಂದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿರುತ್ತದೆ. 1) ಜಿ. ಕೆ. ರೇವಣ್ ಕುಮಾರ್, ಸಹಾಯಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿ, ಲೋಕೋಪಯೋಗಿ ಇಲಾಖೆ, ಉಪ-ವಿಭಾಗ, ಮೈಸೂರು. ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 03 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ. (ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ-…

Read More