Subscribe to Updates
Get the latest creative news from FooBar about art, design and business.
Author: ವಸಂತ ಬಿ ಈಶ್ವರಗೆರೆ
ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.
ಬೆಂಗಳೂರು: ಕರ್ನಾಟಕ ಸರ್ಕಾರವು ಕಾರ್ಮಿಕ ಇಲಾಖೆಯ ವತಿಯಿಂದ ರಾಜ್ಯದ ವಿವಿಧ ಉದ್ದಿಮೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಕನಿಷ್ಠ ವೇತನವನ್ನು ಪರಿಷ್ಕರಿಸಿ ಅಧಿಕೃತ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಈ ಕುರಿತಾದ ಸಂಪೂರ್ಣ ವಿವರವಾದ ಲೇಖನ ಹಾಗೂ ವಲಯವಾರು, ಕೌಶಲ್ಯವಾರು ವೇತನದ ಪಟ್ಟಿಯ ಬಗ್ಗೆ ಮುಂದಿದೆ ಓದಿ.. ಹಿನ್ನೆಲೆ ಮತ್ತು ನ್ಯಾಯಾಲಯದ ಆದೇಶ: ಈ ಹಿಂದೆ ಕರ್ನಾಟಕ ರಾಜ್ಯದಲ್ಲಿ 81 ಅನುಸೂಚಿತ ಉದ್ದಿಮೆಗಳಿಗೆ ಪ್ರತ್ಯೇಕವಾಗಿ ವೇತನ ದರಗಳನ್ನು ನಿಗದಿಪಡಿಸಲಾಗುತ್ತಿತ್ತು. 2022-23ನೇ ಸಾಲಿನಲ್ಲಿ ಶೇ. 5 ರಿಂದ 10 ರಷ್ಟು ವೇತನ ಏರಿಕೆ ಮಾಡಿ ಹೊರಡಿಸಲಾಗಿದ್ದ ಅಧಿಸೂಚನೆಗಳನ್ನು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಹೈಕೋರ್ಟ್ ಹಳೆಯ ಅಧಿಸೂಚನೆಯನ್ನು ರದ್ದುಪಡಿಸಿ, ಸುಪ್ರೀಂ ಕೋರ್ಟ್ನ ಮಾರ್ಗಸೂಚಿಗಳ ಅನ್ವಯ ಹೊಸದಾಗಿ ವೇತನ ಲೆಕ್ಕಾಚಾರ ಮಾಡಲು ನಿರ್ದೇಶನ ನೀಡಿತ್ತು. ಇದರನ್ವಯ, ರಾಜ್ಯ ಸರ್ಕಾರವು ಎಲ್ಲಾ ವರ್ಗದ ಕಾರ್ಮಿಕರಿಗೂ ಸಮಾನ ಹಾಗೂ ಏಕರೂಪದ ವೇತನ ಸಿಗಬೇಕೆಂಬ ಸದುದ್ದೇಶದಿಂದ 11.04.2025 ರಂದು ಏಕರೂಪದ ಕರಡು ಅಧಿಸೂಚನೆ (Single Draft Notification)…
ಬೆಂಗಳೂರು: ಎಬೋಲಾ ಕುರಿತು ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಡಿ, ಜಾಗೃತಿ ಇರಲಿ ಎಂದರು. ಆರೋಗ್ಯ ಇಲಾಖೆ ಅಧಿಕಾರಿಗಳು ಕೇಂದ್ರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ದೇಶದಲ್ಲಿ ಇನ್ನೂ ಪ್ರಕರಣ ಪತ್ತೆಯಾಗಿಲ್ಲ, ಅಕ್ಕ ಪಕ್ಕದ ದೇಶಗಳಲ್ಲಿಯೂ ಎಬೋಲಾ ಪ್ರಕರಣ ದಾಖಲಾಗಿಲ್ಲ. ಆದರೂ ಕೂಡ ನಾವು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಇಂದು ಮಾಧ್ಯಮದೊಂದಿಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆಫ್ರಿಕನ್ ದೇಶಗಳಾದ ಉಗಾಂಡಾ, ಕಾಂಗೋ ಮುಂತಾದ ದೇಶಗಳಿಂದ ಬಂದವರನ್ನು 21 ದಿನಗಳ ಕಾಲ ನಿಗಾದಲ್ಲಿ ಇರಿಸಲಾಗುವುದು. ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡಲು ಸೂಚಿಸಲಾಗಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬೇಡಿ ಎಂದು ವಿನಂತಿಸುತ್ತೇನೆ. ಸರ್ಕಾರ ಎಲ್ಲ ರೀತಿಯ ಮುಂಜಾಗ್ರತೆ ವಹಿಸಿದೆ. ಕೇಂದ್ರ ಸರ್ಕಾರವೂ ಮಾರ್ಗಸೂಚಿ ಬಿಡುಗಡೆ ಮಾಡಿದೆ ಎಂದರು. ಪೆಟ್ರೋಲ್ ದರ ಏರಿಕೆ ಕುರಿತು ಕೆಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಮುಂಬರುವ ದಿನಗಳಲ್ಲಿ ಭಾರತ ದೊಡ್ಡ ಸಮಸ್ಯೆಗೆ ಸಿಲುಕಲಿದೆ. ದೇಶದ ಜನರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ರಾಹುಲ್ ಗಾಂಧಿಯವರು…
ಬೆಂಗಳೂರು: ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಆಸ್ತಿ ದಾಖಲಾತಿಗಳನ್ನು ಸುಲಭವಾಗಿ ಮತ್ತು ಪಾರದರ್ಶಕವಾಗಿ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025’ ಅನ್ನು ಅಧಿಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ. ಈ ಹೊಸ ನಿಯಮಗಳನ್ವಯ, ಈ ಹಿಂದೆ ಇದ್ದ ಇ-ಸ್ವತ್ತು ತಂತ್ರಾಂಶವನ್ನು ನಾಗರಿಕ ಸ್ನೇಹಿಯಾಗಿ ಮಾರ್ಪಡಿಸಲಾಗಿದೆ. ಡಿಸೆಂಬರ್ 1, 2025 ರಂದು ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಜಂಟಿಯಾಗಿ ಈ ನೂತನ ‘ಇ-ಸ್ವತ್ತು 2.0’ (E-Swathu 2.0) ತಂತ್ರಾಂಶಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಸಾರ್ವಜನಿಕರ ಬೇಡಿಕೆಗೆ ಸ್ಪಂದನೆ: ನಿಯಮಗಳಲ್ಲಿ ಮಹತ್ವದ ಮಾರ್ಪಾಡುಗಳು ಇ-ಸ್ವತ್ತು ತಂತ್ರಾಂಶದ ಮೂಲಕ ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ನಮೂನೆಗಳನ್ನು (Forms) ಪಡೆಯಲು ಅರ್ಜಿ…
ಭಾರತದಲ್ಲಿ ಮಧುಮೇಹಿಗಳ (Diabetes) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರೊಂದಿಗೆ “ಅನ್ನ ತಿಂದರೆ ಡಯಾಬಿಟಿಸ್ ಬರುತ್ತದೆ”, “ಮಧುಮೇಹ ಇದ್ದವರು ಅನ್ನವನ್ನು ಸಂಪೂರ್ಣವಾಗಿ ಬಿಡಬೇಕು” ಎಂಬ ಮಾತುಗಳು ನಮ್ಮ ಮನೆಗಳಲ್ಲಿ ಸರ್ವೇಸಾಮಾನ್ಯವಾಗಿಬಿಟ್ಟಿವೆ. ಆದರೆ, ವೈದ್ಯಕೀಯ ತಜ್ಞರ ಪ್ರಕಾರ ಇದು ಕೇವಲ ಒಂದು ‘ಆಹಾರದ ಪುರಾಣ’ (Dietary Myth) ಅಷ್ಟೇ. ಅನ್ನ ಮಾತ್ರವೇ ಮಧುಮೇಹಕ್ಕೆ ನೇರ ಕಾರಣವಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಹಾಗಾದರೆ, ಈ ಕಲ್ಪನೆಗೆ ಇರುವ ಅಸಲಿ ಕಾರಣವೇನು? ಅನ್ನವನ್ನು ಮಧುಮೇಹಿಗಳು ಹೇಗೆ ಸೇವಿಸಬೇಕು? ವೈದ್ಯರ ಸಲಹೆಗಳು ಇಲ್ಲಿವೆ: ಅನ್ನ ವಿಲನ್ ಅಲ್ಲ, ಇನ್ಸುಲಿನ್ ರೆಸಿಸ್ಟೆನ್ಸ್ ಅಸಲಿ ಕಾರಣ! ರೆಡಿಯಲ್ ಕ್ಲಿನಿಕ್ನ ಸಂಸ್ಥಾಪಕರು ಮತ್ತು ಮಧುಮೇಹ ತಜ್ಞರಾದ ಡಾ. ಗಗನ್ದೀಪ್ ಸಿಂಗ್ ಅವರ ಪ್ರಕಾರ, ಅನ್ನದ ಮೇಲಿನ ಆತಂಕಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. “ಅನ್ನವೇ ಮಧುಮೇಹಕ್ಕೆ ಮುಖ್ಯ ಕಾರಣವಲ್ಲ, ದೇಹದಲ್ಲಿ ಉಂಟಾಗುವ ಇನ್ಸುಲಿನ್ ರೆಸಿಸ್ಟೆನ್ಸ್ (Insulin Resistance) ನಿಜವಾದ ವಿಲನ್” ಎನ್ನುತ್ತಾರೆ ಅವರು. ಒಂದೇ ಪ್ರಮಾಣದ ಅನ್ನವನ್ನು ಪ್ರತಿದಿನ ತಿನ್ನುವ ಇಬ್ಬರು…
ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಅಂತಿಮ ಸೆಮಿಸ್ಟರ್ ಎಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ 10 ನಿಮಿಷದೊಳಗೆ ಫಲಿತಾಂಶ ಪ್ರಕಟಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಫಲಿತಾಂಶವನ್ನು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಹಾಗೂ ಕುಲಸಚಿವ(ಮೌಲ್ಯಮಾಪನ) ಪ್ರೊ.ಯು.ಜೆ.ಉಜ್ವಲ್ ಜಂಟಿಯಾಗಿ ಬಿಡುಗಡೆ ಮಾಡಿದರು. ಬಿ.ಇ. ಮತ್ತು ಬಿ.ಟೆಕ್ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ 56,192 ವಿದ್ಯಾರ್ಥಿಗಳು ಹಾಜರಾಗಿದ್ದರು. ಶುಕ್ರವಾರ ಸಂಜೆ 5.30ಕ್ಕೆ ಪರೀಕ್ಷೆ ಅಂತ್ಯವಾಗಿದ್ದು, 5.40ಕ್ಕೆ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಶೇಕಡ 99.98 ಫಲಿತಾಂಶ ಸಾಧಿಸಿದೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ, ಸಂಪೂರ್ಣ ಮೌಲ್ಯಮಾಪನ ಪ್ರಕ್ರಿಯೆಯನ್ನು 8 ದಿನಗಳ ಮುಂಚಿತವಾಗಿಯೇ ಮುಗಿಸಿದೆ. ಆ ಮೂಲಕ ಈ ಹಿಂದೆ ದಾಖಲೆಗಳನ್ನು ಮುರಿದಿದೆ. ಈ ಹಿಂದೆ ಪರೀಕ್ಷೆ ಮುಗಿದ ಒಂದು ಗಂಟೆಯೊಳಗೆ ಫಲಿತಾಂಶವನ್ನು ಪ್ರಕಟಿಸಿತ್ತು. ಫಲಿತಾಂಶವನ್ನು ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ನೇರವಾಗಿ ಕಳುಹಿಸಲಾಗಿದೆ. ಈ ಕುರಿತು ಮಾತನಾಡಿದ ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, “ವಿಟಿಯು ತಂತ್ರಜ್ಞಾನ ಅಳವಡಿಕೆಯಲ್ಲಿ ಸದಾ ಮುಂದಿದೆ. ವಿದ್ಯಾರ್ಥಿಗಳ ಸ್ನೆಹಿಯಾಗಿದೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿಯಾಗಿದೆ. ಪರೀಕ್ಷೆ ಮುಗಿದ…
ನವದೆಹಲಿ: ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಮಾರುಕಟ್ಟೆಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆ ಇಡಲಾಗಿದೆ. ದೇಶದ ಅತಿ ದೊಡ್ಡ ಸಾರಿಗೆ ಮತ್ತು ಸಂಪರ್ಕ ಜಾಲವನ್ನು ಹೊಂದಿರುವ ಇಂಡಿಯಾ ಪೋಸ್ಟ್ (ಭಾರತೀಯ ಅಂಚೆ ಇಲಾಖೆ) ಮತ್ತು ಪ್ರಮುಖ ಇ-ಕಾಮರ್ಸ್ ಸಂಸ್ಥೆಯಾದ ಫ್ಲಿಪ್ಕಾರ್ಟ್ (Flipkart) ಒಟ್ಟಾಗಿ ದೇಶಾದ್ಯಂತ ಪಾರ್ಸೆಲ್ ವಿತರಣಾ ಸೇವೆಯನ್ನು ಬಲಪಡಿಸಲು ಶುಕ್ರವಾರದಂದು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿವೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಂವಹನ ಸಚಿವಾಲಯದ ಅಡಿಯಲ್ಲಿ ಬರುವ ಅಂಚೆ ಇಲಾಖೆ (DoP) ಮತ್ತು ಫ್ಲಿಪ್ಕಾರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಡುವೆ ಈ ಅಧಿಕೃತ ಒಪ್ಪಂದ ಏರ್ಪಟ್ಟಿದೆ. ಏನಿದು ಒಪ್ಪಂದ? ಇದರ ಮುಖ್ಯ ಉದ್ದೇಶವೇನು? ಈ ಒಪ್ಪಂದದ ಪ್ರಕಾರ, ಫ್ಲಿಪ್ಕಾರ್ಟ್ ಮೂಲಕ ಆರ್ಡರ್ ಮಾಡಲಾಗುವ ಗ್ರಾಹಕರ ಪಾರ್ಸೆಲ್ಗಳನ್ನು ಭಾರತದಾದ್ಯಂತ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ (Last-mile delivery) ಜವಾಬ್ದಾರಿಯನ್ನು ಭಾರತೀಯ ಅಂಚೆ ಇಲಾಖೆ ವಹಿಸಿಕೊಳ್ಳಲಿದೆ. ಅಂಚೆ ಇಲಾಖೆಯ ಪಾರ್ಸೆಲ್ ನಿರ್ದೇಶನಾಲಯದ ಜನರಲ್ ಮ್ಯಾನೇಜರ್ ಆದ ಶ್ರೀ…
ನಮ್ಮ ವಯಸ್ಸನ್ನು ನಾವು ಕ್ಯಾಲೆಂಡರ್ ದಿನಗಳ ಆಧಾರದ ಮೇಲೆ (Chronological Age) ಲೆಕ್ಕ ಹಾಕುತ್ತೇವೆ. ಆದರೆ ನಮ್ಮ ದೇಹದ ಒಳಗಿರುವ ಪ್ರಮುಖ ಅಂಗಗಳು, ವಿಶೇಷವಾಗಿ ಹೃದಯ, ನಮ್ಮ ನಿಜವಾದ ವಯಸ್ಸಿಗಿಂತ ವೇಗವಾಗಿ ವಯಸ್ಸಾಗುತ್ತಿರಬಹುದು (Biological Age)! “ನೀವು ನಿಮ್ಮ ದೇಹವನ್ನು ಯಾವ ಪರಿಸರದಲ್ಲಿ ಇಡುತ್ತೀರೋ, ಅದೇ ಪರಿಸರದಲ್ಲಿ ನಿಮ್ಮ ಹೃದಯವೂ ವಯಸ್ಸಾಗುತ್ತದೆ” ಎಂದು ಪ್ರಮುಖ ಹೃದ್ರೋಗ ತಜ್ಞರು ಎಚ್ಚರಿಸಿದ್ದಾರೆ. ಅಂದರೆ, ನಿಮ್ಮ ತಪ್ಪು ಜೀವನಶೈಲಿ ಮತ್ತು ಕೆಟ್ಟ ಹವ್ಯಾಸಗಳು ನಿಮ್ಮ ಹೃದಯದ ವಯಸ್ಸನ್ನು ನಿಮಗಿಂತ ಹತ್ತಾರು ವರ್ಷ ಮುಂಚಿತವಾಗಿಯೇ ವೃದ್ಧಾಪ್ಯದತ್ತ ತಳ್ಳಬಹುದು. ಇತ್ತೀಚಿನ ಕಾರ್ಡಿಯಾಕ್ ಮ್ಯಾಗ್ನೆಟಿಕ್ ರೆಸೋನೆನ್ಸ್ (CMR/MRI) ತಂತ್ರಜ್ಞಾನದ ಮೂಲಕ ನಡೆಸಿದ ಸಂಶೋಧನೆಗಳ ಪ್ರಕಾರ, ಅನಾರೋಗ್ಯಕರ ಜೀವನಶೈಲಿ ಹೊಂದಿರುವ ವ್ಯಕ್ತಿಗಳ ಹೃದಯದ ಕ್ರಿಯಾತ್ಮಕ ವಯಸ್ಸು (Functional Heart Age) ಅವರ ನಿಜವಾದ ವಯಸ್ಸಿಗಿಂತ 5 ರಿಂದ 45 ವರ್ಷಗಳಷ್ಟು ಹೆಚ್ಚಾಗಿರುವುದು ಕಂಡುಬಂದಿದೆ! ಹೃದಯ ವೇಗವಾಗಿ ವಯಸ್ಸಾಗಲು ಮುಖ್ಯ ಕಾರಣಗಳೇನು? ನಮ್ಮ ದೈನಂದಿನ ಕೆಲವು ಸಾಮಾನ್ಯ ತಪ್ಪುಗಳು ಹೃದಯದ ಆರೋಗ್ಯವನ್ನು ಒಳಗಿನಿಂದಲೇ…
“ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ” ಎಂಬ ಮಾತು ಕೇಳಲು ಚೆನ್ನಾಗಿದ್ದರೂ, ಮದುವೆಯಾಗಿ ದೀರ್ಘಕಾಲ ಸುಖಿ ಜೀವನ ನಡೆಸಲು ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ಅಂತರ (Age Gap) ಪ್ರಮುಖ ಪಾತ್ರ ವಹಿಸುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳು ಹೇಳುತ್ತವೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ವಯಸ್ಸಿನ ಅಂತರವಿರುವ ಜೋಡಿಗಳು ಕಾಣಸಿಗುತ್ತಾರಾದರೂ, ವೈಜ್ಞಾನಿಕವಾಗಿ ಒಂದು ನಿರ್ದಿಷ್ಟ ವಯಸ್ಸಿನ ವ್ಯತ್ಯಾಸವನ್ನು ‘ಸ್ವೀಟ್ ಸ್ಪಾಟ್’ (ಅತ್ಯಂತ ಸೂಕ್ತ ಅಂತರ) ಎಂದು ಕರೆಯಲಾಗುತ್ತದೆ. ಹಾಗಾದರೆ, ನೆಮ್ಮದಿಯ ವೈವಾಹಿಕ ಜೀವನಕ್ಕೆ ದಂಪತಿಗಳ ನಡುವೆ ಎಷ್ಟು ವರ್ಷದ ಅಂತರ ಇರಬೇಕು? ವಯಸ್ಸಿನ ಅಂತರ ಹೆಚ್ಚಾದಾಗ ದಾಂಪತ್ಯದಲ್ಲಿ ಎದುರಾಗುವ ಸವಾಲುಗಳೇನು? ಸಂಶೋಧನೆಗಳ ವರದಿ ಇಲ್ಲಿದೆ: ಸಂಶೋಧನೆಗಳ ಪ್ರಕಾರ ‘ಪರ್ಫೆಕ್ಟ್ ವಯಸ್ಸಿನ ಅಂತರ’ ಯಾವುದು? ವಿವಿಧ ಜಾಗತಿಕ ವಿಶ್ವವಿದ್ಯಾಲಯಗಳು ನಡೆಸಿರುವ ಆಳವಾದ ಅಧ್ಯಯನಗಳ ಪ್ರಕಾರ, ದಂಪತಿಗಳ ನಡುವೆ ಸೊನ್ನೆಯಿಂದ ಮೂರು ವರ್ಷಗಳ (0–3 ವರ್ಷಗಳು) ವಯಸ್ಸಿನ ಅಂತರವಿರುವುದು ಅತ್ಯಂತ ಸೂಕ್ತ ಹಾಗೂ ಸ್ಥಿರವಾದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಈ ಅಂತರವು ಗರಿಷ್ಠ 5 ವರ್ಷಗಳವರೆಗೂ ಇರಬಹುದು. ಇದಕ್ಕೆ…
ಶಿವಮೊಗ್ಗ: ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆಗಳಾಗಿದ್ದು, ಇತ್ತೀಚೆಗಷ್ಟೇ ಹೊರಡಿಸಲಾಗಿದ್ದ ಐಪಿಎಸ್ ಅಧಿಕಾರಿಯೊಬ್ಬರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಲಾಗಿದೆ. ಇದರೊಂದಿಗೆ ಶಿವಮೊಗ್ಗ ಉಪವಿಭಾಗಕ್ಕೆ ನೂತನ ಡಿವೈಎಸ್ಪಿ (Dy.SP) ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (DPAR) ಅಂಡರ್ ಸೆಕ್ರೆಟರಿ ಸಂಜಯ್ ಬಿ.ಎಸ್. ಅವರು ಮೇ 22, 2026 ರಂದು ಈ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಡಾ. ಬೆನಕ ಪ್ರಸಾದ್ ವರ್ಗಾವಣೆ ಆದೇಶ ರದ್ದು ಕಳೆದ ಮೇ 21, 2026 ರಂದು ಹೊರಡಿಸಲಾಗಿದ್ದ ಆದೇಶದನ್ವಯ, ಸಾಗರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ (ASP) ಡಾ. ಬೆನಕ ಪ್ರಸಾದ್ ಎನ್ ಜೆ, ಐಪಿಎಸ್ (KN 2022) ಅವರನ್ನು ಶಿವಮೊಗ್ಗ (ಎ) ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರನ್ನಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ, ಇಂದಿನ ಹೊಸ ಆದೇಶದ ಪ್ರಕಾರ ಆ ವರ್ಗಾವಣೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಡಾ. ಬೆನಕ ಪ್ರಸಾದ್ ಅವರು ಯಥಾಸ್ಥಿತಿಯಲ್ಲಿ ಸಾಗರ ಉಪವಿಭಾಗದ…
ಬೆಂಗಳೂರು: ಆಫ್ರಿಕಾ ಖಂಡದ ದೇಶಗಳಲ್ಲಿ ಇಬೋಲಾ ವೈರಸ್ ರೋಗ (Ebola Virus Disease – EVD) ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಜ್ಯಾದ್ಯಂತ ತೀವ್ರ ನಿಗಾವಹಿಸಿದ್ದು, ಸಾರ್ವಜನಿಕ ಮುನ್ನೆಚ್ಚರಿಕಾ ಪ್ರಕಟಣೆಯೊಂದನ್ನು ಹೊರಡಿಸಿದೆ. ಇತ್ತೀಚೆಗೆ (17 ಮೇ 2026 ರಂದು) ವಿಶ್ವ ಆರೋಗ್ಯ ಸಂಸ್ಥೆ (WHO) ಯು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC) ಮತ್ತು ಉಗಾಂಡಾ ದೇಶಗಳಲ್ಲಿ ಇಬೋಲಾ ವೈರಸ್ ತೀವ್ರವಾಗಿ ಹರಡುತ್ತಿರುವುದನ್ನು ಗಮನಿಸಿ, ಇದನ್ನು “ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ” (PHEIC) ಎಂದು ಘೋಷಿಸಿದೆ. ಸದ್ಯಕ್ಕೆ ಭಾರತದಲ್ಲಿ ಯಾವುದೇ ಇಬೋಲಾ ಪ್ರಕರಣಗಳು ವರದಿಯಾಗಿಲ್ಲದಿದ್ದರೂ, ಅಂತರರಾಷ್ಟ್ರೀಯ ಪ್ರಯಾಣ ಮತ್ತು ವ್ಯಾಪಾರ ವಹಿವಾಟುಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರವು ಈಗಿನಿಂದಲೇ ಸನ್ನದ್ಧವಾಗಿದೆ. ಇಬೋಲಾ ರೋಗದ ಲಕ್ಷಣಗಳೇನು? ಇಬೋಲಾ ಅತ್ಯಂತ ಗಂಭೀರ ಸ್ವರೂಪದ ವೈರಲ್ ಸೋಂಕಾಗಿದ್ದು, ಬಾಧಿತರಲ್ಲಿ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು: ತೀವ್ರ ಜ್ವರ ಮತ್ತು ತಲೆನೋವು ಸ್ನಾಯು ನೋವು ಹಾಗೂ…














