Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಸಂಜೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಭೀಕರ ದುರಂತವೊಂದು ಸಂಭವಿಸಿದೆ. ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಬಳಿ ಹಳೆಯ ಕಾಂಪೌಂಡ್ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಏಳು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ದುರಂತದ ವಿವರ: ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ದಿಢೀರನೆ ಕುಸಿದಿದೆ. ಮಳೆಗೆ ಆಶ್ರಯ ಪಡೆಯುತ್ತಿದ್ದವರು ಮತ್ತು ಹತ್ತಿರದಲ್ಲಿದ್ದವರು ಗೋಡೆಯ ಅವಶೇಷಗಳಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟವರಲ್ಲಿ ಐದು ವರ್ಷದ ಮಗು ಕೂಡ ಸೇರಿರುವುದು ದುರಂತದ ತೀವ್ರತೆಯನ್ನು ಹೆಚ್ಚಿಸಿದೆ. ಮೃತರ ಪಟ್ಟಿ: ತಬೀನ್ ತಾಜ್ (47 ವರ್ಷ) ಮುಬಿನ್ ತಾಜ್ (49 ವರ್ಷ) ಮಾಯ (51 ವರ್ಷ) ಸಾಜಿದ್ (20 ವರ್ಷ) ಅಜು (35 ವರ್ಷ) ಪ್ರೀತಿ (5 ವರ್ಷ) ಸಿಜಿ (47 ವರ್ಷ) ಸ್ಥಳಕ್ಕೆ ಸಿಎಂ ಭೇಟಿ – ಅಧಿಕಾರಿಗಳಿಗೆ ತರಾಟೆ: ಘಟನಾ ಸ್ಥಳಕ್ಕೆ ತಡರಾತ್ರಿ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ…
ನವದೆಹಲಿ/ಒಡಿಶಾ: ಭಾರತದ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯತ್ತ ಮತ್ತೊಂದು ಮಹತ್ವದ ಹೆಜ್ಜೆ ಇರಿಸಲಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತೀಯ ನೌಕಾಪಡೆಯು ಒಡಿಶಾ ಕರಾವಳಿಯ ಬಂಗಾಳ ಕೊಲ್ಲಿಯಲ್ಲಿ ನೌಕಾ ನಿರೋಧಕ ಕ್ಷಿಪಣಿ-ಸಣ್ಣ ಶ್ರೇಣಿಯ (NASM-SR) ಚೊಚ್ಚಲ ‘ಸಾಲ್ವೋ’ (Salvo) ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಮುಖ್ಯಾಂಶಗಳು: ಮೊದಲ ಸಾಲ್ವೋ ಉಡಾವಣೆ: ನೌಕಾಪಡೆಯ ಹೆಲಿಕಾಪ್ಟರ್ನಿಂದ ಎರಡು ಕ್ಷಿಪಣಿಗಳನ್ನು ಅತ್ಯಲ್ಪ ಕಾಲದ ಅಂತರದಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಗಾಳಿಯಿಂದ ಉಡಾಯಿಸುವ ಸುಧಾರಿತ ಆಂಟಿ-ಶಿಪ್ ಕ್ಷಿಪಣಿ ವ್ಯವಸ್ಥೆಯ ಇಂತಹ ಉಡಾವಣೆ ಭಾರತದಲ್ಲಿ ಇದೇ ಮೊದಲು. ಯುದ್ಧನೌಕೆ ವಿನ್ಯಾಸದಲ್ಲಿ ಸ್ವಾವಲಂಬನೆ: ನೌಕಾ ವಿಜ್ಞಾನ ಮತ್ತು ತಾಂತ್ರಿಕ ಪ್ರಯೋಗಾಲಯವು (NSTL) ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋದೊಂದಿಗೆ ಸೇರಿ ಫ್ರಂಟ್ಲೈನ್ ಯುದ್ಧನೌಕೆ ಯೋಜನೆಯ ಹೈಡ್ರೋಡೈನಾಮಿಕ್ ಕಾರ್ಯಕ್ಷಮತೆ ಮತ್ತು ಮಾದರಿ ಪರೀಕ್ಷೆಯನ್ನು ಪೂರ್ಣಗೊಳಿಸಿದೆ. ಇದು ಹಡಗುಗಳ ವೇಗ, ಚಲನಶೀಲತೆ ಮತ್ತು ಸಮುದ್ರದಲ್ಲಿನ ಸ್ಥಿರತೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಖಚಿತಪಡಿಸಿದೆ. ಸುಧಾರಿತ ಶಸ್ತ್ರಸಜ್ಜಿತ ವಾಹನಗಳ ಅನಾವರಣ: ಅಹಲ್ಯಾನಗರದಲ್ಲಿ (ಮಹಾರಾಷ್ಟ್ರ) ನಡೆದ ಸಮಾರಂಭದಲ್ಲಿ…
ಬೆಂಗಳೂರು: ಯೋಗೀಶ್ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಧಾರವಾಡ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ಈಗಾಗಲೇ ತಾಂತ್ರಿಕವಾಗಿ ರದ್ದಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸಭಾಧ್ಯಕ್ಷರ ಪಾತ್ರ ಮತ್ತು ನಿಯಮಗಳ ಕುರಿತು ಎದ್ದಿರುವ ಗೊಂದಲಗಳಿಗೆ ತೆರೆ ಎಳೆದರು. ನಿಯಮದಂತೆ ರದ್ಧತಿ ಸ್ವಯಂಚಾಲಿತ “ಯಾವುದೇ ಒಬ್ಬ ಜನಪ್ರತಿನಿಧಿಯು ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ತಕ್ಷಣ, ನಿಯಮಗಳ ಪ್ರಕಾರ ಅವರ ಶಾಸಕ ಸ್ಥಾನ ತಾನಾಗಿಯೇ ರದ್ದಾಗುತ್ತದೆ. ಇದನ್ನು ರದ್ದು ಮಾಡುವ ವಿಶೇಷ ಅಧಿಕಾರ ಸಭಾಧ್ಯಕ್ಷರಿಗಿಲ್ಲ. ಒಂದು ವೇಳೆ ನ್ಯಾಯಾಲಯವು ಈ ಶಿಕ್ಷೆಗೆ ತಡೆಯಾಜ್ಞೆ ನೀಡಿದರೆ ಮಾತ್ರ ಅವರ ಸದಸ್ಯತ್ವ ಮರುಸ್ಥಾಪನೆಯಾಗುತ್ತದೆ,” ಎಂದು ಯು.ಟಿ. ಖಾದರ್ ವಿವರಿಸಿದರು. ತಾರತಮ್ಯದ ಆರೋಪಕ್ಕೆ ತಿರುಗೇಟು ಶಾಸಕರನ್ನು ಅನರ್ಹಗೊಳಿಸುವ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪವನ್ನು ಸಭಾಧ್ಯಕ್ಷರು ತಳ್ಳಿಹಾಕಿದರು. “ಅನರ್ಹತೆ ವಿಚಾರದಲ್ಲಿ ಪಕ್ಷಪಾತ ಮಾಡುವ ಪ್ರಶ್ನೆಯೇ ಇಲ್ಲ. ಶಾಸಕ…
ಬೆಂಗಳೂರು: ನಗರ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ತಡೆಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದು, ಅವರಿಗೆ ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು. ಅಲ್ಲದೇ ಮೃತರಾದಂತವರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದರು. ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಳೆಯಿಂದಾಗಿ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿತಗೊಂಡಿದೆ. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದಾರೆ. ಕಾಂಪೌಂಡ್ ಗೋಡೆ ಕುಸಿತಕ್ಕೆ ಕಾರಣವೇನು ಎನ್ನುವ ಬಗ್ಗೆ ತನಿಖೆ ನಡೆಸಿ, ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಬೀದಿ ಬದಿಯ ವ್ಯಾಪಾರಿಗಳು ಮಳೆಯಿಂದಾಗಿ ಕಾಂಪೌಂಡ್ ಗೋಡೆಯ ಬಳಿಯಲ್ಲಿ ಆಶ್ರಯ ಪಡೆದುಕೊಳ್ಳಲು ನಿಂತಿದ್ದರು. ಈ ಸಂದರ್ಭದಲ್ಲಿ ಕುಸಿತಗೊಂಡು ದುರ್ಘಟನೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರದಿಂದ 5 ಲಕ್ಷ ಪರಿಹಾರವನ್ನು ನೀಡುವುದಾಗಿ ಸಿಎಂ ಸಿದ್ಧರಾಮಯ್ಯ ಘೋಷಣೆ ಮಾಡಿದರು. https://kannadanewsnow.com/kannada/udf-wins-power-in-kerala-congress-alliance-predicts-grand-comeback-after-10-years/…
ಶಿವಮೊಗ್ಗ: ಆಧ್ಯಾತ್ಮಿಕ ಚೈತನ್ಯದ ನೆಲೆವೀಡು, ಸೊರಬ ತಾಲ್ಲೂಕಿನ ಕ್ಯಾಸನೂರಿನ ಖೇಚರಯೋಗಿ ಶ್ರೀ ಗುರುಬಸವದೇವರ ಸಂಸ್ಥಾನಮಠದಲ್ಲಿ ಬುಧವಾರ ಒಂದು ಐತಿಹಾಸಿಕ ಧಾರ್ಮಿಕ ಘಟ್ಟಕ್ಕೆ ಸಾಕ್ಷಿಯಾಯಿತು. ಶ್ರೀ ಗುರುಬಸವ ಸ್ವಾಮಿಗಳ ಕರ್ತೃಗದ್ದುಗೆ, ಶ್ರೀ ಚೌಡೇಶ್ವರಿ ದೇವಿಯ ಗುಡಿ ಹಾಗೂ ಪಂಡಿತಾರಾಧ್ಯರ ಶಿಲಾಮಂಟಪದ ಅಡಿಗಲ್ಲು ಸಮಾರಂಭವು ಅತ್ಯಂತ ಭಕ್ತಿಭಾವದಿಂದ ಜರುಗಿತು. ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಸಂಸ್ಕಾರ ಅನಿವಾರ್ಯ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಶೈಲ ಜಗದ್ಗುರು ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಧರ್ಮದ ನೈಜ ಅರ್ಥವನ್ನು ಭಕ್ತರಿಗೆ ಮನವರಿಕೆ ಮಾಡಿಕೊಟ್ಟರು. “ವೀರಶೈವ ಎಂದರೆ ಕೇವಲ ಹೆಸರಿಗೆ ಲಿಂಗಧಾರಣೆ ಮಾಡಿದರೆ ಸಾಲದು. ಪ್ರತಿದಿನ ಇಷ್ಟಲಿಂಗ ಪೂಜೆಯನ್ನು ನಿಷ್ಠೆಯಿಂದ ಮಾಡುವವರೇ ನಿಜವಾದ ವೀರಶೈವರು. ಈ ಆಚಾರ ಮತ್ತು ಸಂಸ್ಕಾರವನ್ನು ನಾವು ಇಂದಿನ ಮಕ್ಕಳಲ್ಲಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಧರ್ಮವನ್ನು ಹಸ್ತಾಂತರಿಸಬೇಕು,” ಎಂದು ಕರೆ ನೀಡಿದರು. ಧರ್ಮ ಮತ್ತು ಸಮಾಜದ ನಡುವಿನ ಸಂಬಂಧದ ಕುರಿತು ಮಾತನಾಡಿದ ಅವರು, ಧರ್ಮವನ್ನು ನಾವು…
ಬೆಂಗಳೂರು: ನಗರದ ಬೌರಿಂಗ್ ಆಸ್ಪತ್ರೆಯ ಬಳಿಯಲ್ಲಿನ ಕಾಂಪೌಂಡ್ ಭಾರೀ ಮಳೆಯಿಂದಾಗಿ ಕುಸಿದು ಬಿದ್ದಿತ್ತು. ಈ ಕಾಂಪೌಂಡ್ ಬಳಿಯಲ್ಲಿ ಆಶ್ರಯ ಪಡೆದಿದ್ದಂತ ಬೀದಿ ಬದಿಯ 8 ಮಂದಿ ವ್ಯಾಪಾರಿಗಳು ಸಾವನ್ನಪ್ಪಿದ್ದರು. ಈ ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ ನೀಡಿದರು. ಅಲ್ಲದೇ ಕಾಂಪೌಂಡ್ ಕುಸಿತ ದುರಂತಕ್ಕೆ ಆಘಾತವನ್ನು ವ್ಯಕ್ತ ಪಡಿಸಿದರು. ಇಂದು ಬೆಂಗಳೂರು ನಗರದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ನಗರದ ವಿವಿಧೆಡೆಯಲ್ಲಿ ಸುರಿದಂತ ಭಾರೀ ಮಳೆಯಿಂದಾಗಿ ಬಹುದೊಡ್ಡ ಅನಾಹುತವೇ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಶಿವಾಜಿನಗರ ಬಳಿಯಲ್ಲಿನ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿತಗೊಂಡು 8 ಮಂದಿ ಸಾವನ್ನಪ್ಪಿದ್ದರೇ, ನಾಲ್ಕಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯವನ್ನು ತಿಳಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೇ ಸ್ಥಳದಲ್ಲಿದ್ದಂತ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲಿಂದ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಂತ ಆಸ್ಪತ್ರೆಗೆ ತೆರಳಿದಂತ ಸಿಎಂ ಸಿದ್ಧರಾಮಯ್ಯ ಅವರು…
ಶಿವಮೊಗ್ಗ: ಮಲೆನಾಡಿನ ಸಾಂಸ್ಕೃತಿಕ ನಗರಿ ಸಾಗರದಲ್ಲಿ ಯಕ್ಷಗಾನ ಪ್ರಿಯರಿಗಾಗಿ ಭರ್ಜರಿ ಪೌರಾಣಿಕ ಪ್ರದರ್ಶನವೊಂದನ್ನು ಆಯೋಜಿಸಲಾಗಿದೆ. ಜಿಲ್ಲೆಯ ಸಾಗರದ ನೆಹರು ಮೈದಾನದಲ್ಲಿ ಮೇ 2ರ ಶನಿವಾರ ರಾತ್ರಿ 9 ಗಂಟೆಯಿಂದ ಪ್ರಸಿದ್ಧ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರ ಸಾರಥ್ಯದಲ್ಲಿ ಯಕ್ಷಗಾನ ರಂಗೇರಲಿದೆ. ಪ್ರದರ್ಶನಗೊಳ್ಳಲಿರುವ ಪ್ರಸಂಗಗಳು: ಒಂದೇ ವೇದಿಕೆಯಲ್ಲಿ ನಾಲ್ಕು ಪ್ರಮುಖ ಪೌರಾಣಿಕ ಕಥಾನಕಗಳು ಅನಾವರಣಗೊಳ್ಳಲಿವೆ: ಕಚ ದೇವಯಾನಿ ಉತ್ತರನ ಪೌರುಷ ಮಾಗಧ ವಧೆ 4. ಸುಂದೋಪಸುಂದ ಕಲಾವಿದರ ದಂಡು: ಈ ಪ್ರದರ್ಶನದಲ್ಲಿ ಯಕ್ಷಗಾನ ರಂಗದ ಖ್ಯಾತನಾಮರು ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಹಿಮ್ಮೇಳದಲ್ಲಿ: ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ರಾಮಕೃಷ್ಣ ಹೆಗಡೆ ಹಿಲ್ಲೂರು ಅವರಂತಹ ದಿಗ್ಗಜ ಭಾಗವತರ ಜೊತೆಗೆ ಶಶಾಂಕ್, ಪ್ರಜ್ವಲ್, ಅನಿರುದ್ಧ ಸಾಥ್ ನೀಡಲಿದ್ದಾರೆ. ಮುಮ್ಮೇಳದಲ್ಲಿ: ನೀಲ್ಕೋಡು ಶಂಕರ ಹೆಗಡೆ, ಕಾರ್ತಿಕ್ ಚಿಟ್ಟಾಣಿ, ಚಂದ್ರಹಾಸ ಗೌಡ ಹೊಸಪಟ್ಟಣ, ಕಾರ್ತಿಕ್ ಕಣ್ಣಿ, ಪವನ್ ಸಾಣ್ಮನೆ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಬಣ್ಣ ಹಚ್ಚಲಿದ್ದಾರೆ. ಅತಿಥಿ ಕಲಾವಿದರು: ಕೃಷ್ಣ ಯಾಜಿ, ವಿನಯ್ ಬೇರೊಳ್ಳಿ ಹಾಗೂ ಸುಧೀರ್…
ತಿರುವನಂತಪುರಂ: ದಕ್ಷಿಣ ಭಾರತದ ಕಮ್ಯುನಿಸ್ಟ್ ಭದ್ರಕೋಟೆ ಎಂದೇ ಕರೆಯಲ್ಪಡುವ ಕೇರಳದಲ್ಲಿ ಈ ಬಾರಿ ಆಡಳಿತ ವಿರೋಧಿ ಅಲೆ ಬೀಸುವ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ 10 ವರ್ಷಗಳಿಂದ ಅಧಿಕಾರದಿಂದ ದೂರವಿದ್ದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF), ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಎಲ್ಡಿಎಫ್ (LDF) ಆಡಳಿತವನ್ನು ಕೊನೆಗಾಣಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿವಿಧ ಎಕ್ಸಿಟ್ ಪೋಲ್ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಸಮೀಕ್ಷೆಗಳ ಅಂಕಿ-ಅಂಶಗಳು: ಕೇರಳದ ಒಟ್ಟು 140 ಸ್ಥಾನಗಳ ಪೈಕಿ ಬಹುಮತಕ್ಕೆ 71 ಸ್ಥಾನಗಳ ಅಗತ್ಯವಿದ್ದು, ಪ್ರಮುಖ ಸಂಸ್ಥೆಗಳ ವರದಿ ಹೀಗಿದೆ: ಮ್ಯಾಟ್ರಿಜ್ (Matrize) ಸಮೀಕ್ಷೆ: UDF: 70-75 ಸ್ಥಾನಗಳು LDF: 60-65 ಸ್ಥಾನಗಳು NDA: 3-5 ಸ್ಥಾನಗಳು ಪೀಪಲ್ಸ್ ಪಲ್ಸ್ (People’s Pulse) ಸಮೀಕ್ಷೆ: UDF: 75-85 ಸ್ಥಾನಗಳು LDF: 55-65 ಸ್ಥಾನಗಳು NDA: 0-3 ಸ್ಥಾನಗಳು ಮುಖ್ಯಾಂಶಗಳು: ಕಾಂಗ್ರೆಸ್ ಮೈತ್ರಿಕೂಟಕ್ಕೆ ಮೇಲುಗೈ: ಬಹುತೇಕ ಎಲ್ಲಾ ಸಮೀಕ್ಷೆಗಳು ಯುಡಿಎಫ್ ಮೈತ್ರಿಕೂಟವು ಬಹುಮತದ ಗಡಿಯನ್ನು ದಾಟಲಿದೆ ಅಥವಾ ಅದರ…
ಶಿವಮೊಗ್ಗ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಾಗರ ಶಾಖೆಯ ಚುನಾವಣಾ ಕಣ ರಂಗೇರಿದ್ದು, ಹಾಲಿ ಅಧ್ಯಕ್ಷ ಮಾಲ್ತೇಶ್ ನೇತೃತ್ವದ ‘ಸದ್ಗುರು ಶಿಕ್ಷಕರ ತಂಡ’ ಭರ್ಜರಿ ಪ್ರಚಾರ ನಡೆಸುತ್ತಿದೆ. ಮೇ 1ರಂದು ನಡೆಯಲಿರುವ ಈ ಚುನಾವಣೆಯಲ್ಲಿ ವೃತ್ತಿನಿಷ್ಠೆ ಮತ್ತು ಶಿಕ್ಷಕ ಸ್ನೇಹಿ ಆಡಳಿತದ ಭರವಸೆಯೊಂದಿಗೆ ಮಾಲ್ತೇಶ್ ತಂಡ ಮತದಾರರ ಮನ ಗೆಲ್ಲಲು ಮುಂದಾಗಿದೆ. ಪ್ರಮುಖ ಭರವಸೆಗಳು ಮತ್ತು ಸಾಧನೆಗಳು: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಲ್ತೇಶ್ ಅವರು ತಮ್ಮ ತಂಡದ ಮುಂದಿರುವ ಗುರಿಗಳನ್ನು ಹಂಚಿಕೊಂಡಿದ್ದಾರೆ: ಗುರುಭವನ ನಿರ್ಮಾಣ: ಶಿಕ್ಷಕರಿಂದ ಯಾವುದೇ ಹಣ ಸಂಗ್ರಹಿಸದೆ, ಕೇವಲ ದಾನಿಗಳ ಸಹಕಾರದೊಂದಿಗೆ ಸಾಗರದಲ್ಲಿ ಭವ್ಯ ‘ಗುರುಭವನ’ ನಿರ್ಮಿಸುವುದು ಈ ತಂಡದ ಪ್ರಮುಖ ಉದ್ದೇಶವಾಗಿದೆ. ಹೋಬಳಿ ಮಟ್ಟದ ಹೆಲ್ಪ್ಡೆಸ್ಕ್: ಸಾಗರದ ‘ಸದ್ಗುರು ಕಾರ್ನರ್’ ಮಾದರಿಯಲ್ಲೇ ಪ್ರತಿ ಹೋಬಳಿಯಲ್ಲೂ ಶಿಕ್ಷಕರಿಗೆ ನೆರವಾಗಲು ಹೆಲ್ಪ್ಡೆಸ್ಕ್ ಸ್ಥಾಪಿಸುವ ಯೋಜನೆಯಿದೆ. ಸದ್ಗುರು ಕಾರ್ನರ್ ಯಶಸ್ಸು: ಕಳೆದ 18 ತಿಂಗಳ ಅವಧಿಯಲ್ಲಿ ಟ್ಯಾಕ್ಸ್ ಫಾರ್ಮ್ಗಳು ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ‘ಸದ್ಗುರು ಕಾರ್ನರ್’ ಮೂಲಕ ನೀಡಿದ…
ಬೆಂಗಳೂರು: ರಾಜಧಾನಿಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಈ ಭೀಕರ ಮಳೆಗೆ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಇಂದು ಸಂಜೆ ದಿಢೀರ್ ಕುಸಿದು ಬಿದ್ದಿದೆ. ಗೋಡೆಯ ಅವಶೇಷಗಳಡಿ ಸಿಲುಕಿ ಮೂವರು ಮಕ್ಕಳು ಸೇರಿದಂತೆ 7 ಮಂದಿ ಬಲಿಯಾಗಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಮತ್ತೋರ್ವ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಘಟನೆಯ ವಿವರ: ಬೌರಿಂಗ್ ಆಸ್ಪತ್ರೆಯ ತುರ್ತು ಅಪಘಾತ ವಿಭಾಗದ (Emergency Ward) ಗೇಟ್ ಬಳಿ ಇರುವ ಕಾಂಪೌಂಡ್ ಗೋಡೆ ಮಳೆಯ ರಭಸಕ್ಕೆ ಕುಸಿತಗೊಂಡಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ಗೋಡೆಯ ಬಳಿ ಆಶ್ರಯ ಪಡೆದಿದ್ದವರು ಈ ಅವಘಡಕ್ಕೆ ಸಿಲುಕಿದ್ದಾರೆ ಎನ್ನಲಾಗಿತ್ತು. ಅವಶೇಷಗಳಡಿ ಸಿಲುಕಿದವರು: ಪ್ರಾಥಮಿಕ ವರದಿಗಳ ಪ್ರಕಾರ, ಗೋಡೆ ಕುಸಿದಾಗ ಅದರ ಅಡಿಯಲ್ಲಿ ಮೂವರು ಮಕ್ಕಳು ಹಾಗೂ ನಾಲ್ವರು ವಯಸ್ಕರು ಸಿಲುಕಿದ್ದರು ಎಂದು ಹೇಳಲಾಗುತ್ತು. ಅವರೆಲ್ಲರೂ ಬೀದಿ ಬದಿಯ ವ್ಯಾಪಾರಿಗಳೆಂದು ತಿಳಿದು ಬಂದಿತ್ತು. ಈ ದುರ್ಘಟನೆಯಲ್ಲಿ ಮೂವರು ಗಾಯಗೊಂಡಿದ್ದರು, ಮತ್ತೋರ್ವನ ಸ್ಥಿತಿ ಗಂಂಭೀರವಾಗಿತ್ತು. ಅವರನ್ನು ಸ್ಥಳೀಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ತಕ್ಷಣವೇ ಧಾವಿಸಿದ್ದು,…














