Author: kannadanewsnow09

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಬೆನ್ನಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ನಿಂತಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೊರಡಿಸಿರುವಂತ ಟಿಪ್ಪಣಿಯು ಮಲೆನಾಡಿನ ಜನರ ವಿರುದ್ಧವಾಗಿದೆ. ಹೀಗಾಗಿ ಮುಂದಿನ ಶಾಸನೀಯ ಕ್ರಮ ಜರುಗಿಸುವವರೆಗೆ ವಾಪಾಸ್ಸು ಪಡೆಯುವಂತೆ ಪತ್ರದಲ್ಲಿ ಕೋರಿದ್ದಾರೆ. ಈ ಕುರಿತಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಪತ್ರ ಬರೆದಿರುವಂತ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಶಿವಮೊಗ್ಗ ಜಿಲ್ಲೆಯ ಶರಾವತಿ ವಿದ್ಯುತ್ ಯೋಜನೆಗಾಗಿ ಅರಣ್ಯ ಇಲಾಖೆಯಿಂದ 50 ವರ್ಷಗಳ ಹಿಂದೆ ಕರ್ನಾಟಕ ಪವರ್ ಕಾರ್ಪೊರೇಷನ್ (ಕೆ.ಪಿ.ಸಿ.)ಗೆ ಸುಮಾರು 2 ಲಕ್ಷ ಎಕರೆಗೂ ಹೆಚ್ಚು ಭೂಮಿಯನ್ನು ನೀಡಲಾಗಿದ್ದು, ಈ ಪೈಕಿ ಕೆ.ಪಿ.ಸಿ. 20 ಸಾವಿರ ಎಕರೆ ಭೂಮಿಯನ್ನು ಬಳಕೆ ಮಾಡಿರುವುದಿಲ್ಲ. ಹೀಗಾಗಿ ಅನಾಥವಾಗಿರುವ ಭೂಮಿಯನ್ನು ಪಟ್ಟಭದ್ರ ಹಿತಾಸಕ್ತಿಗಳು ಒತ್ತುವರಿ ಮಾಡುತ್ತಿದ್ದಾರೆ ಎಂದು ದಿನಪತ್ರಿಕೆಯಲ್ಲಿ ವರದಿ ಪಕಟವಾಗಿದೆ ಎಂದಿದ್ದಾರೆ. ವೃಕ್ಷ ಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ ಅವರು ಕೂಡ ಈ ಸಂಬಂಧ ಸಚಿವಾಲಯಕ್ಕೆ ಪತ್ರ ಬರೆದಿರುತ್ತಾರೆ. ಈ ಬಗ್ಗೆ ತಾವು ನಿಯಮಾನುಸಾರ ಯಾವುದೇ…

Read More

ನವದೆಹಲಿ: ರಾಜಸ್ಥಾನ್ ರಾಯಲ್ಸ್ ತಂಡವು ರಿಯಾನ್ ಪರಾಗ್ ಅವರನ್ನು ತಮ್ಮ ಹೊಸ ನಾಯಕನನ್ನಾಗಿ ನೇಮಿಸಿದ್ದು, ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸ್ಥಳಾಂತರಗೊಂಡ ನಂತರ ಫ್ರಾಂಚೈಸಿಗೆ ಹೊಸ ಯುಗದ ಆರಂಭವನ್ನು ಸೂಚಿಸುತ್ತಿದೆ. 2019 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಪರಾಗ್, ರಾಯಲ್ಸ್ ಪರ ದೀರ್ಘಕಾಲ ಸೇವೆ ಸಲ್ಲಿಸಿದ ಆಟಗಾರರಲ್ಲಿ ಒಬ್ಬರಾಗಿದ್ದು, ತಮ್ಮ ಏಳು ಋತುಗಳನ್ನೂ ಫ್ರಾಂಚೈಸಿಯೊಂದಿಗೆ ಕಳೆದಿದ್ದಾರೆ. ಈ ನೇಮಕಾತಿಯು ತಂಡದ ನಿರಂತರತೆ ಮತ್ತು ಯೌವ್ವನದ ಮೇಲಿನ ನಂಬಿಕೆಯನ್ನು ಸೂಚಿಸುತ್ತದೆ ಏಕೆಂದರೆ ಅವರು ಮೈದಾನದ ಒಳಗೆ ಮತ್ತು ಹೊರಗೆ ಪುನರ್ನಿರ್ಮಿಸಲು ನೋಡುತ್ತಿದ್ದಾರೆ. https://twitter.com/rajasthanroyals/status/2022263593194889573 ಕಳೆದ ಋತುವಿನಲ್ಲಿ ಸ್ಯಾಮ್ಸನ್ ಗಾಯದ ನಂತರ ಎಂಟು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದಾಗ 24 ವರ್ಷದ ಆಟಗಾರ ನಾಯಕತ್ವದ ಅನುಭವ ಪಡೆದರು. ಫಲಿತಾಂಶಗಳು ಮಿಶ್ರವಾಗಿದ್ದರೂ – ರಾಯಲ್ಸ್ ಒಂಬತ್ತನೇ ಸ್ಥಾನ ಪಡೆದಾಗ ಎರಡು ಗೆಲುವುಗಳು ಮತ್ತು ಆರು ಸೋಲುಗಳು – ಪರಾಗ್ ಬ್ಯಾಟಿಂಗ್‌ನಲ್ಲಿ ಎದ್ದು ಕಾಣುತ್ತಿದ್ದರು. ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ವೃತ್ತಿಜೀವನದ ಅತ್ಯುತ್ತಮ 95…

Read More

ಬಳ್ಳಾರಿ: ಜಿಲ್ಲೆಯ ತೆಕ್ಕಲಕೋಟೆ ಗ್ರಾಮದಲ್ಲಿ ಶಿಲಾಯುಗ ಕಾಲದ ಮೂರು ಅಸ್ಥಿಪಂಜರಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಗ್ರಾಮದ ಗೌಡ್ರು ಮೂಲೆ ಪ್ರದೇಶದಲ್ಲಿ ಮೂರು ಅಸ್ಥಿಪಂಜರಗಳು ಪತ್ತೆಯಾಗಿವೆ. ಮಡಿಕೆ ಹೊರ ತೆಗೆಯುವ ವೇಳೆಯಲ್ಲಿ ಈ ಅಸ್ಥಿ ಪಂಜರಗಳು ಪತ್ತೆಯಾಗಿವೆ. ಹೀಗಾಗಿ ಉತ್ಖನನ ಕಾರ್ಯವನ್ನು ಸಂಶೋಧಕರು ಸ್ಥಗಿತಗೊಳಿಸಿದ್ದಾರೆ. ಫೆಬ್ರವರಿ.12ರವರೆಗೆ ಮಾತ್ರ ಉತ್ಖನನಕ್ಕೆ ಅನುಮತಿ ನೀಡಲಾಗಿತ್ತು. ಮೂರು ಶಿಲಾಯುಗ ಕಾಲದ ಅಸ್ಥಿಪಂಜರ ಪತ್ತೆ ಹಿನ್ನಲೆಯಲ್ಲಿ ಉತ್ಖನನ ಸ್ಥಳಕ್ಕೆ ಬಳ್ಳಾರಿ ಎಸ್ಪಿ ಡಾ.ಸುಮನ್ ಫನ್ನೆಕರ್ ಭೇಟಿ ನೀಡಿದ್ದಾರೆ. https://kannadanewsnow.com/kannada/government-gives-a-bumper-gift-to-sagar-hosanagara-rs-20-17-crore-grant-approved-for-various-works/ https://kannadanewsnow.com/kannada/breaking-massive-corruption-in-rto-department-following-excise-fcs-issued-to-vehicles-without-inspection/

Read More

ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಸಾಗರ, ಹೊಸನಗರಕ್ಕೆ ಬಂಫರ್ ಗಿಫ್ಟ್ ನೀಡಿದೆ. ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳೋದಕ್ಕೆ ಬರೋಬ್ಬರಿ 20.17 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಈ ಕುರಿತಂತೆ ಶಿವಮೊಗ್ಗ ಜಿಲ್ಲಾಧಿಕಾರಿಗಳು ಅಧಿಕೃತ ಜ್ಞಾಪನವನ್ನು ಹೊರಡಿಸಿದ್ದು, ಅದರಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ರಂತ ರಚಿಸಿರುವ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರದಡಿ ಮಾರ್ಗಸೂಚಿಗಳಂತೆ ರಾಜ್ಯ ಸರ್ಕಾರವು ನಿರ್ದಿಷ್ಟ ಸ್ಥಳೀಯ ಯೋಜನೆಗಳ ಉದ್ದೇಶಕ್ಕೆ ಬಳಸಿಕೊಳ್ಳಲು ಅವಕಾಶವಿರುತ್ತದೆ. ಈ ಸಂಬಂಧ ಆಯುಕ್ತರು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಹಾಗೂ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳು, ಕಂದಾಯ ಇಲಾಖೆ ಬೆಂಗಳೂರು ರವರ ಉಲ್ಲೇಖ (1) ರ ಪತ್ರದಂತೆ ಜಿಲ್ಲೆಯ ಭೂಕುಸಿತ ತಡೆಗಟ್ಟುವಿಕ ರಚನಾತ್ಮಕ ಕಾರ್ಯಗಳಿಗೆ ಅಗತ್ಯವಿರುವ ಅಂದಾಜು ವೆಚ್ಚದ ವಿವರವನ್ನು ಉಲ್ಲೇಖ (2) ರ ಪ್ರಸ್ತಾವನೆಯಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು ಎಂದಿದ್ದಾರೆ. ಸರ್ಕಾರದ ಆದೇಶದಲ್ಲಿ ಶಿವಮೊಗ್ಗ ಜಿಲ್ಲೆಯ 84 ಕಾಮಗಾರಿಗಳಿಗೆ ರೂ 95.30 ಕೋಟಿಗಳನ್ನು ಮಂಜೂರು ಮಾಡಿ ಬಿಡುಗಡೆ ಮಾಡಿರುತ್ತಾರೆ. ಉಲ್ಲೇಖ (3) ಈ ಕಛೇರಿ…

Read More

ಬೆಂಗಳೂರು: ʼಶಕ್ತಿʼ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುವ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಪ್ರಯಾಣಿಕರಿಗೆ ನಮ್ಮ ಸರ್ಕಾರವು ಉಚಿತವಾಗಿ ಸ್ಮಾರ್ಟ್‌ಕಾರ್ಡ್‌ ನೀಡಲು ನಿರ್ಧರಿಸಿದೆ. ಈ ಸಂಬಂಧ ನನ್ನ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಮೂಲಕ ಸ್ಮಾರ್ಟ್‌ಕಾರ್ಡ್‌ ವಿತರಿಸುವ ನಿರ್ಣಯಕ್ಕೆ ಬರಲಾಗಿದ್ದು, ಇನ್ನುಮುಂದೆ ಆಧಾರ್‌ ಕಾರ್ಡ್‌ ಬದಲು ಸ್ಮಾರ್ಟ್ ಕಾರ್ಡ್‌ ಬಳಸಿ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ನಿಶ್ಚಿಂತರಾಗಿ ಪ್ರಯಾಣಿಸಬಹುದಾಗಿದೆ. https://twitter.com/siddaramaiah/status/2022207374862561335 ಒಟ್ಟಾರೆಯಾಗಿ ಆಧಾರ್ ಕಾರ್ಡ್ ಮೂಲಕ ಶಕ್ತಿ ಯೋಜನೆ ದುರುಪಯೋಗ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಶಕ್ತಿ ಯೋಜನೆಯಡಿ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸೋದಕ್ಕೆ ಇನ್ಮುಂದೆ ಆಧಾರ್ ಕಾರ್ಡ್ ತೋರಿಸಿದ್ರೇ ಫ್ರೀ ಇರಲ್ಲ. ಬದಲಾಗಿ ಸರ್ಕಾರ ನೀಡುವಂತ ಸ್ಮಾರ್ಟ್ ಕಾರ್ಡ್ ಪಡೆಯಬೇಕಿದೆ. ಅದನ್ನು ತೋರಿಸಿದ್ರೆ ಮಾತ್ರವೇ ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಮಹಿಳೆಯರು ಪ್ರಯಾಣಿಸಬಹುದಾಗಿದೆ. https://kannadanewsnow.com/kannada/demonic-act-that-shakes-the-nation-gang-rape-of-a-minor-by-four-men-in-four-cars/ https://kannadanewsnow.com/kannada/breaking-massive-corruption-in-rto-department-following-excise-fcs-issued-to-vehicles-without-inspection/

Read More

ಭೋಪಾಲ್‌: ಇಲ್ಲಿ 11 ನೇ ತರಗತಿಯ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ನಾಲ್ಕು ವಿಭಿನ್ನ ವಾಹನಗಳಲ್ಲಿ ಅತ್ಯಾಚಾರ ನಡೆಸಲಾಗಿದೆ. ಅಪರಾಧಕ್ಕೆ ಸಂಬಂಧಿಸಿದಂತೆ ಥಾರ್ ಎಸ್‌ಯುವಿ ಸೇರಿದಂತೆ ನಾಲ್ಕು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ಔಸಾಫ್ ಅಲಿ ಖಾನ್‌ನನ್ನು ಫೆಬ್ರವರಿ 3 ರಂದು ಬಂಧಿಸಲಾಗಿದ್ದು, ಪ್ರಸ್ತುತ ಜೈಲಿನಲ್ಲಿದ್ದಾನೆ. ಭೋಪಾಲ್‌ನಲ್ಲಿ ಜಿಮ್ ನಡೆಸುತ್ತಿರುವ ಅವರ ಸಹಚರ ಮೇಜ್ ಖಾನ್ ಅವರನ್ನು ಫೆಬ್ರವರಿ 8 ರಂದು ಬಂಧಿಸಲಾಗಿದ್ದು, ಫೆಬ್ರವರಿ 13 ರವರೆಗೆ ಕೊಹೆಫಿಜಾ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಪೊಲೀಸ್ ಆಯುಕ್ತರು ಎಸಿಪಿ ಅಂಕಿತಾ ಖತ್ರಕರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದರು. ತನಿಖೆಯ ಸಮಯದಲ್ಲಿ, ಅಪ್ರಾಪ್ತ ವಯಸ್ಕನ ಮೇಲೆ ನಾಲ್ಕು ಪ್ರತ್ಯೇಕ ಕಾರುಗಳ ಒಳಗೆ ವಿವಿಧ ಸ್ಥಳಗಳಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಕಂಡುಕೊಂಡರು. ತನಿಖಾಧಿಕಾರಿಗಳ ಪ್ರಕಾರ, ಖನುಗಾಂವ್ ಪ್ರದೇಶದ ಥಾರ್ ಒಳಗೆ ಔಸಾಫ್ ಅಲಿ ಖಾನ್ ಹೊರಗೆ ನಿಂತು ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿ, ಕಿಟಕಿಯ ಮೂಲಕ ರಹಸ್ಯವಾಗಿ…

Read More

ತಮಿಳುನಾಡು: ಶುಕ್ರವಾರ ತಮಿಳುನಾಡಿನ ಸೇಲಂನಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರ ರ್ಯಾಲಿಯಲ್ಲಿ ಬಿಸಿಲಿನ ಹೊಡೆತದಿಂದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.  ಪೊಲೀಸ್ ಮೂಲಗಳ ಪ್ರಕಾರ ಆ ವ್ಯಕ್ತಿಯ ಸಾವಿಗೆ ಪ್ರಮುಖ ಕಾರಣ ನಿರ್ಜಲೀಕರಣ. ಮೃತ ವ್ಯಕ್ತಿ ಹೃದಯ ಕಾಯಿಲೆಗಳಿಂದ ಬಳಲುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ. ಗರಿಷ್ಠ ಮಿತಿ 5,000 ಇದ್ದರೂ ಟಿವಿಕೆ ಸಂಘಟಕರು 7,000 ಕ್ಕೂ ಹೆಚ್ಚು ಜನರನ್ನು ಸ್ಥಳಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು ಎಂದು ಪೊಲೀಸ್ ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ. ವರದಿಯಾಗಿರುವಂತೆ, ಅನಾರೋಗ್ಯ ಪೀಡಿತರಿಗೂ ಸ್ಥಳಕ್ಕೆ ಪ್ರವೇಶಿಸಲು ಅವಕಾಶವಿತ್ತು. ಸಾವಿಗೆ ಕಾರಣ ಖಚಿತವಾದ ನಂತರ, ಆಯೋಜಕರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಕರೂರಿನಲ್ಲಿ ನಡೆದ ವಿಜಯ್ ಅವರ ರ್ಯಾಲಿಯಲ್ಲಿ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ್ದರು. ಕರೂರ್‌ನಂತಹ ಪರಿಸ್ಥಿತಿಯನ್ನು ಮತ್ತೊಮ್ಮೆ ತಪ್ಪಿಸಲು ಮತ್ತು ಕಟ್ಟುನಿಟ್ಟಿನ ಕ್ರಮಗಳೊಂದಿಗೆ ನಟ-ರಾಜಕಾರಣಿಯ ಸೇಲಂ ರ್ಯಾಲಿಯನ್ನು ಯೋಜಿಸಲಾಗಿತ್ತು. ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು…

Read More

ಹುಬ್ಬಳ್ಳಿ: ಮೃತ ಮಹಿಳೆಯ ಶವ ಪ್ಯಾಕ್ ಮಾಡಿಕೊಡಲು ಮೃತರ ಸಂಬಂಧಿಕರಿಂದ 500 ರೂಪಾಯಿ ಲಂಚಕ್ಕೆ ಬೇಡಿಕೆ ಇರಿಸಿ, ಆ ಬಳಿಕ 200 ರೂಪಾಯಿ ಪೋನ್ ಪೇ ಮೂಲಕ ಲಂಚದ ಹಣವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಗುತ್ತಿಗೆ ನೌಕರನೊಬ್ಬ ಪಡೆದಿದ್ದನು. ಈ ವಿಷಯ ಹೊರ ಬರುತ್ತಿದ್ದಂತೆ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ಬೆನ್ನಲ್ಲೇ ಲಂಚವಾಗಿ ಪಡೆದಿದ್ದಂತ 200 ರೂಪಾಯಿಗಳನ್ನು ಹಿಂದಿರುಗಿಸಿರೋದಾಗಿ ತಿಳಿದು ಬಂದಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಮೃತ ಮಹಿಳೆಯ ಶವ ಪ್ಯಾಕ್ ಮಾಡಿಕೊಡಲು 500 ರೂ.ಗೆ ಲಂಚಕ್ಕೆ ಬೇಡಿಕೆ ಇಟ್ಟು, ಪೋನ್ ಪೇ ಮೂಲಕ ರೂ.200 ಪಡೆದಿದ್ದರು. ಈ ಬಗ್ಗೆ ಸುದ್ದಿ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಕಿಮ್ಸ್ ನಿರ್ದೇಶಕ ಈಶ್ವರ್ ಹೊಸಮನಿ ಗುತ್ತಿಗೆ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದ್ದರು. ಈ ಬೆನ್ನಲ್ಲೇ ರಾಯಚೂರು ಮೂಲಕ ಕುಟುಂಬದಿಂದ ಪೋನ್ ಪೇ ಮೂಲಕ ಲಂಚದ ಹಣವನ್ನು ಪಡೆದಿದ್ದಂತ ಗುತ್ತಿಗೆ ಸಿಬ್ಬಂದಿ 200 ರೂ.ಗಳನ್ನು ಮರಳಿ ಕುಟುಂಬಸ್ಥರಿಗೆ ಹಿಂದಿರುಗಿಸಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. https://kannadanewsnow.com/kannada/breaking-massive-corruption-in-rto-department-following-excise-fcs-issued-to-vehicles-without-inspection/ https://kannadanewsnow.com/kannada/mla-sunil-kumars-letter-bomb-against-cm-recommendation-from-health-department-to-excise-department/

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಶಾಸಕ ಸುನೀಲ್ ಕುಮಾರ್ ಕಾರ್ಕಳ ಲೆಟರ್ ಬಾಂಬ್ ಸಿಡಿಸಿದ್ದಾರೆ. ಅದರಲ್ಲಿ ಆರೋಗ್ಯ ಇಲಾಖೆಯಿಂದ ಅಬಕಾರಿ ಇಲಾಖೆಗೆ ವರ್ಗಾಯಿಸುವಂತೆ ಸಿಎಂ ಪತ್ರ ಬರೆದಿದ್ದಾರೆ ಎಂಬುದಾಗಿ ಸಿದ್ಧರಾಮಯ್ಯ ಬರೆದ ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಸಿಎಂ ಸಿದ್ಧರಾಮಯ್ಯ ಅವರ ಹಳಿ ತಪ್ಪಿದ ಆಡಳಿತದ ಕ್ಲಾಸಿಕ್ ಉದಾಹರಣೆ. ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಮೈಸೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಡಿಸಿಯಾಗಿ ನಿಯೋಜಿಸುವಂತೆ ಖುದ್ದು ಮುಖ್ಯಮಂತ್ರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ನಿರ್ದೇಶನ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. https://twitter.com/karkalasunil/status/2022187749173080277 ಇದು ಅಬಕಾರಿ ಹಾಗೂ ಆರೋಗ್ಯ ಇಲಾಖೆಯ ವೃಂದ ನಿಯಮಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಸಿದ್ದರಾಮಯ್ಯನವರೂ “ಇಂದ್ರೀಯ” ವಶವಾಗಿ ಆಡಳಿತದ ಹದ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಇದು ನಿದರ್ಶನವಾಗಿದೆ ಎಂದು ಗುಡುಗಿದ್ದಾರೆ. https://twitter.com/karkalasunil/status/2022187751458955584 ಅಬಕಾರಿ ಇಲಾಖೆಯಲ್ಲಿ ನಡೆದಿರುವ 6000 ಕೋಟಿ ರೂ.ಗೂ ಅಧಿಕ ಮೊತ್ತದ ಅವ್ಯವಹಾರ ಹಾಗೂ…

Read More

ಬೆಂಗಳೂರು : “ಕೇಂದ್ರ ಸರ್ಕಾರ ಅಗತ್ಯ ಅನುಮತಿ ನೀಡಿದರೆ ಕರ್ನಾಟಕ ಸರ್ಕಾರವು ಮೇಕೆದಾಟು ಹಾಗೂ ಕೃಷ್ಣಾ ಮೇಲ್ದಂಡೆ ಬಾಕಿ ಯೋಜನೆಗಳನ್ನು ಜಾರಿ ಮಾಡಲಿದೆ. ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡುವ ಭರವಸೆ ಇದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯ ವಿಜ್ಞಾನ ಸಂಸ್ಥೆಯ ಜೆಜೆ ಟಾಟಾ ಸಭಾಂಗಣದಲ್ಲಿ ನಜೆದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು. “ನೀವೆಲ್ಲರೂ ಬೆಂಗಳೂರಿನಲ್ಲಿದ್ದೀರಿ. ಇಲ್ಲಿ 1.50 ಕೋಟಿ ಜನಸಂಖ್ಯೆ ಇದ್ದು, ವಿಶ್ವದಾದ್ಯಂತ ಕೈಗಾರಿಕೋದ್ಯಮಿಗಳು ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಇಡೀ ವಿಶ್ವ ಭಾರತವನ್ನು ಬೆಂಗಳೂರು ಮೂಲಕ ನೋಡುತ್ತಿದೆ. ಇಲ್ಲಿರುವ ಹವಾಮಾನ ಹಾಗೂ ಸಂಸ್ಕೃತಿ ಎಲ್ಲರ ಆಕರ್ಷಣೆಯಾಗಿದೆ. ಎಲ್ಲರೂ ಬೆಂಗಳೂರಿಗೆ ಬರಲು ಇಚ್ಛಿಸುತ್ತಿದ್ದಾರೆ. ಹೀಗಾಗಿ ಎಲ್ಲರಿಗೂ ನೀರು ಪೂರೈಸುವ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ನಾವು ಸಮತೋಲಿದ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದ್ದು, ಇತ್ತೀಚೆಗೆ ಸುಪ್ರೀಂ ಕೋರ್ಟ್ ಈ ಯೋಜನೆ ಪರವಾಗಿ ತೀರ್ಪು ನೀಡಿದೆ. ಆಮೂಲಕ ನಾವು…

Read More