Author: kannadanewsnow09

ಮಂಡ್ಯ : ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರಲು ಹೊರಟಿರುವ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಹಿಂಪಡೆದು, ಹಿಂದಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಮುಂದುವರೆಸುವವರೆಗೂ ಕಾಂಗ್ರೆಸ್ ಪಕ್ಷದಿಂದ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು. ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಬೋರನದೊಡ್ಡಿ, ನಿಡಘಟ್ಟ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣ ಮಾಡಿರುವ ನೂತನ ಮಳಿಗೆಗಳನ್ನು ಉದ್ಘಾಟನೆ ಮಾಡಿ ಶುಕ್ರವಾರ ಮಾತನಾಡಿದರು. ಗ್ರಾಮೀಣ ಪ್ರದೇಶದಿಂದ ನಗರದತ್ತ ಕೃಷಿ ಕೂಲಿ ಕಾರ್ಮಿಕರು ವಲಸೆ ತಡೆಯುವುದು, ಸಮಾನ ಕೂಲಿ, ಆರ್ಥಿಕ ಚೈತನ್ಯದಿಂದ ಗ್ರಾಮ ಸ್ವರಾಜ್ಯ ಕಾಣುವ ಉದ್ದೇಶದಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿಗೊಳಿಸಿದ್ದರು. ಈ ಯೋಜನೆಯಿಂದಾಗಿ ಸಾವಿರಾರು ಕೆರೆ ಕಟ್ಟೆ, ರಸ್ತೆ, ಚರಂಡಿ, ಕಾಲುವೆಗಳು, ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಕೃಷಿ ಚಟುವಟಿಕೆಗಳಿಗೂ ಕಾಯ್ದೆ ಅನುಕೂಲವಾಗುತ್ತಿತ್ತು ಎಂದರು.…

Read More

ಹಿಂದಿನ ಕಾಲದಲ್ಲಿ ಬಾಲಕ ವರ್ಗ- ಮೊದಲನೇ ವರ್ಗ- ಎರಡನೇ ವರ್ಗ ಹೀಗೆ ಶಿಕ್ಷಣ ಕ್ರಮವಿತ್ತು. ಶ್ರೀಧರರು ಎರಡನೇ ವರ್ಗಕ್ಕೆ ಬಂದಾಗ, ನಡುವೆ ಆರೋಗ್ಯಕೆಟ್ಟು ಹಾಸಿಗೆ ಹಿಡಿದರು. ಬಹಳ ದಿವಸ ಶಾಲೆ ತಪ್ಪಿ ಅಭ್ಯಾಸ ಹಿಂದೆ ಉಳಿಯಿತು. ತೇರ್ಗಡೆ ಆಗುವುದು ಕಷ್ಟ. ತಾಯಿಯ ಬಳಿ ಇದನ್ನು ಹೇಳಿದಾಗ,‌ ಮಗು ನೀನು ಈ ವರ್ಷ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದರೆ ಅದ್ಧೂರಿಯಾಗಿ ನಿನ್ನ ಉಪನಯನ ಮಾಡಿ, ಜರಿಯ ಟೋಪ್ಪಿಗೆ ಹಾಕಿ ಕುದುರೆ ಮೇಲೆ ಹತ್ತಿಸಿ ಮೆರವ ಣಿಗೆ ಮಾಡಿಸುವೆ ಎಂದು ಶ್ರೀಧರ ರಲ್ಲಿ ಉತ್ಸಾಹ ತುಂಬಿದಳು. ಶ್ರೀಧರರು ಯೋಚಿಸ ತೊಡಗಿದರು “ರಾಮನಾಮ ದಿಂದ ಮಾರುತಿ ಸಮುದ್ರವನ್ನೇ ದಾಟಿದ ಎಂದ ಮೇಲೆ ರಾಮನಾಮದಿಂದ ನಾನು ಎರಡನೇ ವರ್ಗವನ್ನು ಸಹಜವಾಗಿ ದಾಟುವೆನು” ಹೀಗೆ ನಿಶ್ಚಯ ಮಾಡಿ ರಾಮನಾಮ ಜಪ ಮಾಡುತ್ತಾ ಏಕಾಗ್ರ ಚಿತ್ತದಿಂದ ಅಭ್ಯಾಸಮಾಡ ತೊಡಗಿದರು. ಪರೀಕ್ಷೆ ದಿನ ಬಂದಿತು. ಅದು ರಾಮ ನಾಮದ ಪರೀಕ್ಷೆಯೇ ಆಗಿತ್ತು. ಪರೀಕ್ಷಕರು ಶ್ರೀಧರರಿಗೆ ಅನೇಕ ಪ್ರಶ್ನೆ ಕೇಳಿದರು. ಪ್ರಧಾನ ಗುರುಗಳು…

Read More

ಬೆಂಗಳೂರು : ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಶುಚಿತ್ವ ಇಲ್ಲದ ಆರು ಪಿ.ಜಿ ಗಳಿಗೆ ಬೀಗ ಮುದ್ರೆ ಹಾಕಲಾಗಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ತಿಳಿಸಿದ್ದಾರೆ. ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಯುಕ್ತರಾದ ರಾಜೇಂದ್ರ ಚೊಳನ್ ರವರ ಆದೇಶದಂತೆ ಇಂದು 204 ಪೇಯಿಂಗ್ ಗೆಸ್ಟ್ ವಸತಿಗೃಹ ಉದ್ದಿಮೆಗಳನ್ನು ಆರೋಗ್ಯಾಧಿಕಾರಿಯಾದ ಡಾ.ಶಿವಕುಮಾರ್ ಅವರ ನೇತೃತ್ವದಲ್ಲಿ ಚಿಕ್ಕಪೇಟೆ ಮತ್ತು ಶಿವಾಜಿನಗರ ಆರೋಗ್ಯ ವೈದ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ತಪಾಸಣೆ ನಡೆಸಿದ್ದು, ಶುಚಿತ್ವ ಕಾಪಾಡದ 6 ಪಿ.ಜಿ. ಗಳಿಗೆ ಬೀಗ ಮುದ್ರೆ ಹಾಕುವುದರ ಜೊತೆಗೆ ನ್ಯೂನ್ಯತೆಗಳಿರುವ ಪಿ.ಜಿ ಗಳಿಗೆ 1.96 ಲಕ್ಷ ರೂ. ದಂಡ ವಿಧಿಸಲಾಗಿದೆ. ಶಿವಾಜಿನಗರ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಪೇಯಿಂಗ್ ಗೆಸ್ಟ್ ವಸತಿಗೃಹಗಳಲ್ಲಿ (PGs) ಶುದ್ಧ ಕುಡಿಯುವ ನೀರು, ಶುಚಿತ್ವ, ಅಡುಗೆ ಕೋಣೆ ನೈರ್ಮಲ್ಯ, ಸುರಕ್ಷತೆ, ಉತ್ತಮ ಶೌಚಾಲಯ ವ್ಯವಸ್ಥೆ, ಅಗ್ನಿಶಾಮಕ ಸಾಧನಗಳು ಹಾಗೂ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆ ಮತ್ತು FSSAI ನ ಆಹಾರ…

Read More

ಬೆಂಗಳೂರು : ರಾಜ್ಯಮಟ್ಟದ ಗಣರಾಜ್ಯೋತ್ಸವ ಆಚರಣೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 2026ನೇ ಸಾಲಿನ ಗಣರಾಜ್ಯೋತ್ಸವ ದಿನಾಚರಣೆಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವ ಸಲುವಾಗಿ ಇಂದು ಜಿ.ಬಿ.ಎ ಕೇಂದ್ರ ಕಛೇರಿ ಸಭಾಂಗಣ–01 ರಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು. ಮೈದಾನದಲ್ಲಿ ಸುಮಾರು 100 ಲೋಡ್‌ ಗಳಷ್ಟು ಭಗ್ನಾವಶೇಷಗಳು ಇರುವುದರಿಂದ ಅವುಗಳನ್ನು ಕೂಡಲೇ ತೆರವುಗೊಳಿಸಬೇಕು. ಮೈದಾನ ಪ್ರದೇಶ ಧೂಳು ಹಬ್ಬದಂತೆ ನೀರು ಹಾಕಿ ರೋಲಿಂಗ್ ಮಾಡಬೇಕು. ನಾಗರಿಕರಿಗೆ ಅನುಕೂಲವಾಗುವಂತೆ ತಾತ್ಕಾಲಿಕ ಶೌಚಾಲಯಗಳನ್ನು ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾರ್ಯಕ್ರಮದ ದಿನ ಅತಿಥಿ ಗಣ್ಯರು, ಗಣ್ಯರು, ಅಧಿಕಾರಿಗಳು ಹಾಗೂ ನಾಗರಿಕರಿಗೆ ಸರಿಯಾದ ರೀತಿಯಲ್ಲಿ ಆಸನಗಳ ವ್ಯವಸ್ಥೆ ಮಾಡಬೇಕು. ಬಿಸಿಲಿನ ಹಿನ್ನೆಲೆಯಲ್ಲಿ ಸಮರ್ಪಕ ಪೆಂಡಾಲ್ ವ್ಯವಸ್ಥೆಯನ್ನು ಕಲ್ಪಿಸಬೇಕು.…

Read More

ಶಿವಮೊಗ್ಗ: ಶಿವಮೊಗ್ಗ ಆಲ್ಕೋಳ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿದ್ದು, ಈ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಜ. 18 ರಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗಾಂಧಿನಗರ, ರವೀಂದ್ರನಗರ, ವೆಂಕಟೇಶನಗರ, ಚೆನ್ನಪ್ಪ ಲೇಔಟ್, ಉಷಾ ನರ್ಸಿಂಗ್ ಹೋಮ್, ಜೈಲ್ ರಸ್ತೆ, ರಾಜೇಂದ್ರನಗರ, ಎ.ಎನ್.ಕೆ. ರಸ್ತೆ, ವಿನೋಬನಗರ, ದಾಮೋದರ್ ಕಾಲೋನಿ, ಚೇತನಾ ಸ್ಕೂಲ್, ಕಲ್ಲಹಳ್ಳಿ, ವಿನೋಬನಗರ 60 ಅಡಿರಸ್ತೆ, ಜೈಲ್ ಸರ್ಕಲ್, ಆಟೋಕಾಂಪ್ಲೆಕ್ಸ್, ಪೊಲೀಸ್ ಚೌಕಿ, ಮೇಧಾರ ಕೇರಿ, ನರಸಿಂಹ ಬಡಾವಣೆ, ಶಾರದಮ್ಮ ಲೇಔಟ್, ಮೈತ್ರಿ ಅಪಾರ್ಟ್ಮೆಂಟ್, ಕನಕನಗರ, ದೇವರಾಜ್ ಅರಸ್ ಬಡಾವಣೆ, ಇ&ಟಿ ಕಾಲೋನಿ, ಸೂರ್ಯ ಲೇಔಟ್, ಅರವಿಂದನಗರ, ಇಂಡಸ್ಟ್ರೀಯಲ್ ಏರಿಯಾ, ಎಪಿಎಂಸಿ, ವೀರಣ್ಣ ಲೇಔಟ್, ಕಾಶೀಪುರ, ಜಯದೇವ ಬಡಾವಣೆ, ಸಹ್ಯಾದ್ರಿನಗರ, ಸಹಕಾರಿನಗರ, ಆಲ್ಕೋಳ ವೃತ್ತ, ಸಾಗರರಸ್ತೆ, ಗುತ್ಯಪ್ಪ ಕಾಲೋನಿ, ನೇತಾಜಿ ವೃತ್ತ, ಸರ್ಕ್ಯೂಟ್ ಹೌಸ್, ನೀಲಮೇಘಮ್ ಲೇಔಟ್ ವ್ಯಾಪ್ತಿಯಲ್ಲಿ ಕರೆಂಟ್ ಇರೋದಿಲ್ಲ. ರಾಜಮಹಲ್ ಬಡಾವಣೆ, ಪೊಲೀಸ್ ಲೇಔಟ್,…

Read More

ಬೆಂಗಳೂರು: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಆಕ್ಟಿವಿಟಿ ಪಾಯಿಂಟ್ ಅನ್ನು ಆನ್ ಲೈನ್ ನಲ್ಲಿ ನಿರ್ವಹಣೆ ಮಾಡುವುದಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಎಐಸಿಟಿಇ ಆಕ್ಟಿವಿಟಿ ಪಾಯಿಂಟ್ಸ್ ಟ್ರಾಕಿಂಗ್ ಸಿಸ್ಟಂ”(ಎಪಿಟಿಎಸ್) ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಸರ್.ಎಂ.ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಯೋಜಿಸಿದ್ದ ಮೊಬೈಲ್ ಆ್ಯಪ್ ಕಾರ್ಯಾಗಾರದಲ್ಲಿ ವಿಟಿಯು ಕುಲಪತಿ ಡಾ.ಎಸ್.ವಿದ್ಯಾಶಂಕರ್ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಕುಲಪತಿ ಡಾ.ಎಸ್.ವಿದ್ಯಾಶಂಕರ್, “ಆಕ್ಟಿವಿಟಿ ಪಾಯಿಂಟ್ ಗಾಗಿ ಸುಳ್ಳು ಪ್ರಮಾಣ ಪತ್ರಗಳನ್ನು ನೀಡುವುದನ್ನು ಬಿಟ್ಟುಬಿಡಿ. ಇನ್ಮುಂದೆ ಇದು ನಡೆಯುವುದಿಲ್ಲ. ಎಲ್ಲವೂ ಮೊಬೈಲ್ ಆ್ಯಪ್ ಮೂಲಕ ಟ್ರ್ಯಾಕ್ ಆಗಲಿದೆ. ಕೇವಲ ಕಾಟಾಚಾರಕ್ಕಾಗಿ ಚಟುವಟಿಕೆಯಲ್ಲಿ ಭಾಗವಹಿಸುವುದು ಬಿಟ್ಟು ಬಿಡಿ. ಯಾವುದೋ ಎನ್ ಜಿಒಗಳ ಮೂಲಕ ಪ್ರಮಾಣ ಪತ್ರಗಳನ್ನು ತರುವುದು ಬಿಡಿ. ಈ ಆ್ಯಪ್ ಮೂಲಕ ರಿಯಲ್ ಟೈಮ್ ಡೇಟಾ ನಮಗೆ ಸಿಗಲಿದೆ” ಎಂದರು. “ವಿದ್ಯಾರ್ಥಿಗಳು ಜೀವನದಲ್ಲಿ ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಬೇಕು. ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಪಠ್ಯೇತರ…

Read More

ಶಿವಮೊಗ್ಗ: ಅವರು 68 ಬಾರಿ ರಕ್ತದಾನ ಮಾಡಿದವರು. ಬರೋಬ್ಬರಿ 25 ಬಾರಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಶಸ್ತ್ರ ಚಿಕಿತ್ಸೆಗೆ ನೆರವಾಗಲು ಶಿಬಿರ ಆಯೋಜಿಸಿದವರು. ಆ ಮೂಲಕ ಸಾಮಾಜಿಕ ಸೇವೆಗೈದವರೇ ಸಾಗರದ ವಿಜಯೇಂದ್ರ ಶಾನಭಾಗ್ ಅವರಾಗಿದ್ದಾರೆ. ಇಂತಹ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿದಂತ ಅರಮನೆ ಆಶ್ರಯ ಸೇವಾ ಫೌಂಡೇಶನ್ ಅವರಿಗೆ ಸಹಾಯಧನ ನೀಡಿ, ಗೌರವಿಸಿದೆ. ಇಂದು ಸಾಗರದಲ್ಲಿರುವಂತ ಅವರ ನಿವಾಸಕ್ಕೆ ತೆರಳಿದಂತ ಸಿದ್ಧಾಪುರದ ಅರಮನೆ ಆಶ್ರಯ ಫೌಡೇಶನ್ ನ ಅಧ್ಯಕ್ಷರಾದಂತ ನಾಗರಾಜ ಗುಡ್ಡೇಮನೆ ಅವರು, 68 ಬಾರಿ ರಕ್ತದಾನ ಹಾಗೂ 25 ಬಾರಿ ಕಣ್ಣಿನ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಹಾಗೂ ಸ್ಥಳೀಯ ಪತ್ರಿಕೆಯನ್ನು ನಡೆಸುತ್ತಿರುವ ವಿಜಯೇಂದ್ರ ಶಾನಭಾಗ್ ಅವರ ಸೇವೆಯನ್ನು ಗುರುತಿಸಿ ಅಭಿನಂದನಾ ಪತ್ರ ಹಾಗೂ ಸಹಾಯಧನ ನೀಡಿ, ಸನ್ಮಾನಿಸಿ ಗೌರವಿಸಿದರು. ಈ ವೇಳೆ ಮಾತನಾಡಿದಂತ ನಾಗರಾಜ ಗುಡ್ಡೇಮನೆ ಅವರು, ವಿಜಯೇಂದ್ರ ಶಾನುಭಾಗ್ ಅವರ ಸಾಮಾಜಿಕ ಸೇವೆ ಶ್ಲಾಘನೀಯವಾದದ್ದು. ಅವರ ಬದುಕಿನಲ್ಲಿ 68 ಬಾರಿ ರಕ್ತದಾನ, 25 ಬಾರಿ ಕಣ್ಣಿನ ಶಸ್ತ್ರ ಚಿಕಿತ್ಸೆ…

Read More

ಬೆಂಗಳೂರು: ಸಾರಿಗೆ ನೌಕರರ ಬಗ್ಗೆ ಮಾತನಾಡಿದಂತ ಬಿಜೆಪಿಗರಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಖಡಕ್ ತಿರುಗೇಟು ನೀಡಿದ್ದಾರೆ. ಬಿಜೆಪಿಗರೇ ಈ ಎಲ್ಲವನ್ನೂ ಮರೆತು ಬಿಟ್ಟಿರಾ? ಸಾರಿಗೆ ನೌಕರರ ಬಗ್ಗೆ ಕಾಳಜಿವಹಿಸದೆ ಈಗ ಟ್ವೀಟ್ ಮೂಲಕ ಕಾಳಜಿವಹಿಸುವ ನಾಟಕ ಆಡಲು ತಮಗೆ ನಾಚಿಕೆಯಾಗುವುದಿಲ್ಲವೇ? ಎಂಬುದಾಗಿ ಕಿಡಿಕಾರಿದ್ದಾರೆ. ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ವೇತನ‌ ಪರಿಷ್ಕರಣೆ ಸಂಬಂಧ ಮೊದಲ‌ ಬಾರಿಗೆ ಮುಷ್ಕರ ಮಾಡಿದ್ದು ನಿಮ್ಮ‌ ಬಿ.ಜೆ.ಪಿ‌ ಕಾಲದಲ್ಲಿಯೇ ಎಂಬುದನ್ನು ಮರೆತು ಬಿಟ್ಟಿರಾ ? ತಮ್ಮ ಬಿ.ಜೆ.ಪಿ ಅಧಿಕಾರವಧಿಯಲ್ಲಿ ಮೊದಲ ಬಾರಿಗೆ ವೇತನಕ್ಕಾಗಿ 15 ದಿವಸಗಳ‌ ಸುದೀರ್ಘ ಮುಷ್ಕರ ನಡೆದಿದ್ದು ಮರೆತು ಬಿಟ್ಟಿರಾ? ಎಂದು ಕೇಳಿದ್ದಾರೆ. ಮುಷ್ಕರದಲ್ಲಿ ಪಾಲ್ಗೊಂಡ ಸುಮಾರು 3000 ನೌಕರರ ವಜಾ/ ಅಮಾನತು/ ವರ್ಗಾವಣೆ ಮಾಡಿ ಹಲವು ಸಿಬ್ಬಂದಿಗಳ ಮೇಲೆ FIR ಹಾಕಿಸಿ, ಇಂದಿಗೂ ಕೋರ್ಟ್/ಕಛೇರಿ ಅಂತ ಅಲೆಯುತ್ತಿದ್ದಾರೆ ಅದನ್ನು ಮರೆತು ಬಿಟ್ಟಿರಾ? ಬಿ.ಜೆ.ಪಿಯ ಅವಧಿಯಲ್ಲಿ ಸಾರಿಗೆ ನೌಕರರ ವೇತನ…

Read More

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ದುರಂತದ ಬಳಿಕವೂ ಐಪಿಎಲ್ ಮ್ಯಾಚ್ ಆಯೋಜನೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬೆಂಗಳೂರಲ್ಲಿ ಆರ್ ಸಿ ಬಿ ಕಾಲ್ತುಳಿತ ಘಟನೆ ಬಳಿಕ ಚಿನ್ನಸ್ವಾಮಿ ಕ್ರೀಢಾಂಗಣದಲ್ಲಿ ಐಪಿಎಲ್ ಮ್ಯಾಚ್ ಆಯೋಜನೆ ಬಗ್ಗೆ ತೊಡಕು ಉಂಟಾಗಿತ್ತು. ಅಲ್ಲದೇ ಬೆಂಗಳೂರಲ್ಲಿ ಪಂದ್ಯ ಆಡಲು ಆರ್ ಸಿ ಬಿಗೆ ಕಂಡೀಷನ್ ಅಪ್ಲೈ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಕೆ ಎಸ್ ಸಿ ಎ ಗೆ ಕಂಡೀಷನ್ ಹಾಕಿ ಆರ್ ಸಿ ಬಿ ಮ್ಯಾನೇಜ್ಮೆಂಟ್ ಚಿನ್ನಸ್ವಾಮಿ ಕ್ರೀಢಾಂಗಣದಲ್ಲೇ ಆಯೋಜಿಸೋದಕ್ಕೆ ಅನುಮತಿಸೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕ್ರೀಡಾಂಗಣದ ಸುತ್ತ ಎಐ ಕ್ಯಾಮೆರಾ ಅಳವಡಿಸಬೇಕು. ಆರ್ ಸಿ ಬಿ ಪ್ರೇಕ್ಷಕರ ಸುರಕ್ಷತೆಗೆ ಮಹತ್ವ ಕೊಡಬೇಕು. 300ರಿಂದ 350 ಎಐ ಕ್ಯಾಮೆರಾ ಅಳವಡಿಸೋದು ಕಡ್ಡಾಯ. ಪ್ರೇಕ್ಷಕರ ಸರತಿಸಾಲು ಶಿಸ್ತುಬದ್ಧವಾಗಿ ನಿರ್ವಹಿಸಬೇಕು ಎಂಬುದಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಆರ್ ಸಿ ಬಿಗೆ ಷರತ್ತು ವಿಧಿಸೋ ಸಾಧ್ಯತೆ ಇದೆ. https://kannadanewsnow.com/kannada/power-outages-in-these-areas-tomorrow-due-to-sagars-bh-road-widening-work/ https://kannadanewsnow.com/kannada/a-sinful-brother-stabbed-his-younger-brother-28-times-to-death-in-four-days-as-he-was-about-to-ascend-the-throne/

Read More

ಶಿವಮೊಗ್ಗ: ಸಾಗರದ ನಗರದಲ್ಲಿ ಬಿಹೆಚ್ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಕಳೆದ ಹಲವು ತಿಂಗಳಿನಿಂದ ಬಿಹೆಚ್ ರಸ್ತೆಯಲ್ಲಿ ಪವರ್ ಕಟ್ ಸಮಸ್ಯೆಯನ್ನು ಎದುರಿಸಲಾಗುತ್ತಿದೆ. ಇದೀಗ ನಾಳೆ ಕೂಡ ವಿದ್ಯುತ್ ಕಂಬಗಳ ಸ್ಥಳಾಂತರದ ಕಾರಣ ಸಾಗರದ ಕೆಲ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ ಅಂತ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತಂತೆ ಸಾಗರದ ಮೆಸ್ಕಾಂ ಕಚೇರಿಯು ಮಾಹಿತಿ ಹಂಚಿಕೊಂಡಿದ್ದು,ದಿನಾಂಕ: 17.01.2026 ಶನಿವಾರದಂದು ಸಾಗರದ ಬಿ.ಹೆಚ್ ರಸ್ತೆ ಅಗಲೀಕರಣ ಕಾಮಗಾರಿಯ ಸಲುವಾಗಿ ವಿದ್ಯುತ್ ಕಂಬಗಳ ಸ್ಥಳಾಂತರಿಸುವ ಹಮ್ಮಿಕೊಂಡಿರುವುದರಿಂದ ಸಾಗರ ಪಟ್ಟಣ ವ್ಯಾಪ್ತಿಯ ಈ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದಿದೆ. ನೆಹರೂ ನಗರ, ಜೋಸೆಫ್ ನಗರ, ಅರಳೀಕೊಪ್ಪ, ಜನ್ನತ್‌ಗಲ್ಲಿ, ಸಿಗಂದೂರು ಮಾರ್ಕೆಟ್ ರಸ್ತೆ, ಬಿ.ಹೆಚ್ ರಸ್ತೆ, ಅಶೋಕ ರಸ್ತೆ, ಕೃಷ್ಣ ಗ್ಯಾರೇಜ್, ಎಲ್.ಐ.ಸಿ ಆಫೀಸ್ ಹತ್ತಿರ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಬೆಳಗ್ಗೆ: 10:00 ಘಂಟೆಯಿಂದ ಸಂಜೆ: 06:00 ಘಂಟೆಯವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ವಿದ್ಯುತ್‌ ಗ್ರಾಹಕರು ಸಹಕರಿಸುವಂತೆ ಕೋರಿದೆ. ವರದಿ;…

Read More