Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಶುಕ್ರವಾರ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದ್ದು, ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ಡಾಲರ್ಗಳು ದುರ್ಬಲಗೊಳ್ಳುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಕೆಲವು ಏರಿಳಿತಗಳೊಂದಿಗೆ ಏರಿಕೆಯ ಆವೇಗವನ್ನು ಮುಂದುವರೆಸಿದ್ದು, ಹೂಡಿಕೆದಾರರು ಸುರಕ್ಷಿತ ಸ್ವತ್ತುಗಳತ್ತ ಚಿತ್ತ ಹರಿಸಲು ಕಾರಣವಾಯಿತು. ಮುಂಬೈನಲ್ಲಿ, 24 ಸಾವಿರ ಚಿನ್ನದ ಬೆಲೆಗಳು 10 ಗ್ರಾಂಗೆ 5,400 ರೂ. ಏರಿಕೆಯಾಗಿ 1,59,710 ರೂ.ಗಳಿಗೆ ತಲುಪಿದ್ದು, 22 ಸಾವಿರ ಚಿನ್ನದ ಬೆಲೆ 10 ಗ್ರಾಂಗೆ 1,46,400 ರೂ.ಗಳಿಗೆ ತಲುಪಿದೆ. ತ್ತೊಂದೆಡೆ, ಬೆಳ್ಳಿ ಕೂಡ 15,000 ರೂ.ಗಳಿಗೆ ಏರಿಕೆಯಾಗಿ ಪ್ರತಿ ಕೆಜಿಗೆ 3,40,000 ರೂ.ಗಳಿಗೆ ತಲುಪಿದೆ. ಮಲ್ಟಿ-ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ, ಫೆಬ್ರವರಿಯಲ್ಲಿ ಅವಧಿ ಮುಗಿದ ಚಿನ್ನದ ಫ್ಯೂಚರ್ಗಳು 1.19 ಶೇ. 1.19 ರಷ್ಟು ಹೆಚ್ಚಾಗಿ 10 ಗ್ರಾಂಗೆ 1,58,194 ರೂ.ಗಳಿಗೆ ತಲುಪಿದೆ. ಏತನ್ಮಧ್ಯೆ, ಮಾರ್ಚ್ನಲ್ಲಿ ಅವಧಿ ಮುಗಿದ ಬೆಳ್ಳಿ ಫ್ಯೂಚರ್ಗಳು 2.59 ಶೇ. ರಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 3,35,760 ರೂ.ಗಳಿಗೆ ತಲುಪಿದೆ. COMEX ನಲ್ಲಿ, ಚಿನ್ನದ…
ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದ ಹೃದಯ ಭಾಗದಲ್ಲೇ ಆ ರಸ್ತೆ ಇದೆ. ಖಾಸಗಿ ಬಸ್ ನಿಲ್ದಾಣದಿಂದ ಕೂಗಳತೆ ದೂರ ಬೇರೆ. ಹೀಗಿದ್ದರೂ ರಸ್ತೆ ಮಾತ್ರ ಡಾಂಬಾರ್ ಕಂಡಿಲ್ಲ. ಚರಂಡಿಗಳು ನಿರ್ಮಾಣವಾಗಿಲ್ಲ. ಹಾಗಾದರೆ ನಗರಸಭೆಯವರಿಗೆ ಇದು ಕಂಡಿಲ್ಲವ ಎಂಬುದು ರಸ್ತೆಯಲ್ಲಿನ ನಿವಾಸಿಗಳ ಪ್ರಶ್ನೆ. ಹೌದು ಸಾಗರ ಪಟ್ಟಣದ ಹೃದಯ ಭಾಗದಲ್ಲಿ ಡಾಂಬರ್ ಕಾಣದ ರಸ್ತೆಯೊಂದು ಜೋಸೆಫ್ ನಗರದಲ್ಲಿದೆ. ಅಲ್ಲಿನ ಮನೆಗಳು ನಿರ್ಮಾಣಕ್ಕೆ ಮೊದಲೋ ಅಥವಾ ಮನೆಗಳು ನಿರ್ಮಾಣಗೊಂಡ ಕೆಲ ವರ್ಷಗಳ ನಂತರ ರಸ್ತೆಗೆ ಡಾಂಬಾರೀಕರಣ ಮಾಡಿರಬೇಕು. ಅದರ ಹೊರತಾಗಿ ಈವರೆಗೆ ಆಗಿಲ್ಲ. ಜನರು ಓಡಾಡಲು ಸಾಧ್ಯವಾಗದ ರೀತಿಯಲ್ಲಿ ರಸ್ತೆ ಹಾಳಾಗಿದೆ. ಸಾಗರದ ಬಿಹೆಚ್ ರಸ್ತೆಯ ಆಭರಣ ಜ್ಯೂವೆಲ್ಲರಿ ಎದುರು, ಏಥರ್ ಎಲೆಕ್ಟ್ರಿಕ್ ಬೈಕ್ ಶೋ ರೂಮ್ ಪಕ್ಕದಲ್ಲೇ ಇರೋ ಈ ರಸ್ತೆ ಮಾತ್ರ ಹಲವು ವರ್ಷಗಳೇ ಕಳೆದರೂ ಟಾರ್ ಕಂಡಿಲ್ಲ. ಡಾಂಬಾರೀಕರಣ ಕಾಣದೇ ಜಲ್ಲಿಕಲ್ಲುಗಳ ಎದ್ದು ಓಡಾಟಕ್ಕೂ ಕಷ್ಟವಾಗಿದೆ. ಚರಂಡಿಗಳು ತುಂಬಿ ಹೋಗಿದ್ದರೇ, ಅಲ್ಲಲ್ಲಿ ನೀರು ಹರಿಯದಂತೆ ಚರಂಡಿಗಳೇ ಬಂದ್ ಆಗಿವೆ. ಎಷ್ಟೋ…
ಬೆಂಗಳೂರು: ವೇಗಗತಿಯ ಜೀವನ ನಡೆಸುತ್ತಿರುವ ಇಂದಿನ ಯುಗದಲ್ಲಿ ಎಲ್ಲವೂ ಆನ್ಲೈನ್ಮಯ. ಅದರಲ್ಲೂ ಆಹಾರಕ್ಕಾಗಿ ಕ್ವಿಕ್ ಕಾಮರ್ಸ್ನನ್ನು ಬೆಂಬಲಿತವಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಸ್ವಿಗ್ಗಿಯಲ್ಲಿ ಆಹಾರ ಆರ್ಡರ್ ಮಾಡುವವರ ಸಂಖ್ಯೆಯೂ ಏರುತ್ತಿದೆ. ಹೌದು, ಬೆಂಗಳೂರಿನ ಜನರು ಈ ವರ್ಷದಲ್ಲಿ ಬರೋಬ್ಬರಿ 161 ಲಕ್ಷ ಬಿರಿಯಾನಿಗಳನ್ನು ಆರ್ಡರ್ ಮಾಡುವ ಮೂಲಕ ಅತಿಹೆಚ್ಚು ಆರ್ಡರ್ ಆಗಿರುವ ಫುಡ್ ಬಿರಿಯಾನಿಯಾಗಿದೆ. ಅದರಲ್ಲೂ, 88.8 ಲಕ್ಷ ಚಿಕನ್ ಬಿರಿಯಾನಿಯನ್ನು ಆರ್ಡರ್ ಮಾಡಿದ್ದಾರೆ. ಇನ್ನು, ಬೆಂಗಳೂರಿನಲ್ಲಿ ಬೆಳಗಿನ ಅಚ್ಚುಮೆಚ್ಚಿನ ತಿಂಡಿ ಇಡ್ಲಿ ಆಗಿದ್ದು, ಬರೋಬ್ಬರಿ 54.67 ಲಕ್ಷ ಪ್ಲೇಟ್ ಇಡ್ಲಿಗಳನ್ನು ಸಿಲಿಕಾನ್ ಸಿಟಿ ಜನರು ಸವಿದಿದ್ದಾರೆ. ಬಿರಿಯಾನಿ ಹೊರತುಪಡಿಸಿದರೆ, ಚಿಕನ್ ಫ್ರೈ ಎರಡನೇ ಅತ್ಯಂತ ಜನಪ್ರಿಯ ಖಾದ್ಯವಾಗಿದ್ದು, 54.1 ಲಕ್ಷ ಆರ್ಡರ್ ಸ್ವೀಕೃತವಾಗಿದೆ. ಇದರ ಜೊತೆಗೆ ದಕ್ಷಿಣ ಭಾರತದ ಪ್ರಧಾನ ಆಹಾರಗಳು ಮುಂಚೂಣಿಯಲ್ಲಿವೆ. 53.1 ಲಕ್ಷ ಆರ್ಡರ್ಗಳನ್ನು ಪಡೆದ ವೆಜ್ ದೋಸೆ ಮೂರನೇ ಸ್ಥಾನದಲ್ಲಿ ಸ್ಥಿರವಾಗಿ ಉಳಿದಿದೆ, ಊಟದೊಂದಿಗೆ ಸಿಹಿ ತಿನಿಸಿಲ್ಲವೆಂದರೆ, ಊಟ ಅಪರಿಪೂರ್ಣ, ಹೀಗಾಗಿ 7.7 ಲಕ್ಷ ಗುಲಾಬ್ ಜಾಮುನ್…
ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದಂತ ವಿವಿಧ ದರ್ಜೆಯ ಅಧಿಕಾರಿ, ಸಿಬ್ಬಂದಿಗಳಿಗೆ ನಗದು ಬಹುಮಾನಕ್ಕಾಗಿ ಹಣ ಮಂಜೂರು ಮಾಡಿ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದ್ದು, ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ/ಸಿಬ್ಬಂದಿಗಳಿಗೆ ನಗದು ಬಹುಮಾನ ನೀಡುವ ಕುರಿತು ವಿವಿಧ ದರ್ಜೆಯ ಅಧಿಕಾರಿಗಳಿಗೆ ಈ ಹಿಂದೆ ನಿಗದಿಪಡಿಸಿದ ಆರ್ಥಿಕ ವಿತ್ತಾಧಿಕಾರವನ್ನು ಭಾಗಶ: ಮಾರ್ಪಡಿಸಿ ಆರ್ಥಿಕ ವಿತ್ತಾಧಿಕಾರವನ್ನು ಹೆಚ್ಚಿಸಿ ಆದೇಶಿಸಲಾಗಿದೆ ಎಂದಿದೆ. ಹಾಸನ ಜಿಲ್ಲಾ ಮಾಜಿ ಸಂಸದ ಪುಜ್ವಲ್ ರೇವಣ್ಣ ಮತ್ತು ಹೆಚ್.ಡಿ ರೇವಣ್ಣ ವಿರುದ್ಧ ದಾಖಲಾಗಿರುವ ಪುಕರಣಗಳ ತನಿಖೆ ಕುರಿತು ರಚಿಸಿರುವ ವಿಶೇಷ ತನಿಖಾ ತಂಡವು ಸದರಿರವರುಗಳ ವಿರುದ್ಧ ಒಟ್ಟು 04 ಪಕರಣ ಮತ್ತು ಹೆಚ್.ಡಿ ರೇವಣ್ಣ ರವರ ವಿರುದ್ಧ ದಾಖಲಾಗಿರುವ ಒಟ್ಟು 01 ಪುಕರಣಗಳ ತನಿಖಾ ಕಾಲದಲ್ಲಿ ಸಮರ್ಪಕವಾಗಿ ತನಿಖೆ ಕೈಗೊಂಡು ಸಾಕ್ಷಾಧಾರಗಳನ್ನು ಸಂಗ್ರಹಿಸಿ, ಒಟ್ಟು 05 ಪ್ರಕರಣಗಳಲ್ಲಿ ದೋಷಾರೋಪಣ ಪಟ್ಟಿಯನ್ನು ಸಿದ್ಧಪಡಿಸಿ ಘನ ನ್ಯಾಯಾಲಯಕ್ಕೆ ಸಲ್ಲಿಸಿರುತ್ತದೆ. ಸದರಿ ಪುಕರಣಗಳ ಪೈಕಿ ಸಿ.ಐ.ಡಿ.…
ಬೆಂಗಳೂರು : ಜನವರಿ 29ರಿಂದ ಫೆಬ್ರವರಿ 06 ರವರೆಗೆ ನಡೆಯಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 17ನೇ ಆವೃತ್ತಿಗೆ ಮಾಧ್ಯಮ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಮಾಧ್ಯಮ ಮಿತ್ರರು https://biffes.org/ ವೆಬ್ಸೈಟ್ನಲ್ಲಿ Media Registration ಮೂಲಕ ತಮ್ಮ ಮಾಹಿತಿಯನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಣಿ ಮಾಡುವಾಗ ತಮ್ಮ ಹೆಸರು, ಇ-ಮೇಲ್, ವಿಳಾಸ, ಹುಟ್ಟಿದ ದಿನಾಂಕ ಮುಂತಾದ ಮಾಹಿತಿಗಳನ್ನು ದಾಖಲಿಸುವುದರ ಜೊತೆಗೆ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸನ್ಸ್ ಅಥವಾ ಪಾಸ್ಪೋರ್ಟ್ ಸಂಖ್ಯೆ ಸಲ್ಲಿಸುವುದರ (ಈ ದಾಖಲೆಗಳಲ್ಲಿ ಯಾವುದಾದರೂ ಒಂದು) ಜೊತೆಗೆ ಅದರ ಪೋಟೋ ಸಹ ಲಗತ್ತಿಸಬೇಕು. ಜೊತೆಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಕೊಟ್ಟಿರುವ ಮಾನ್ಯತೆ ಪತ್ರ ಅಥವಾ ಕೆಲಸ ಮಾಡುತ್ತಿರುವ ಮಾಧ್ಯಮ ಸಂಸ್ಥೆಯ ಐಡಿ ಕಾರ್ಡ್ ಲಗ್ಗತಿಸಿ ಮುಂದಿನ ಐದು ದಿನಗಳ ಒಳಗೆ ದಾಖಲಿಸಿಕೊಳ್ಳಬಹುದಾಗಿದೆ. ಮೀಡಿಯಾ ಪಾಸ್ ಅನುಮೋದನೆಗೊಂಡ ನಂತರ ಪಾಸುಗಳ ವಿತರಣೆ ಬಗ್ಗೆ ಇ-ಮೇಲ್ ಮೂಲಕ ತಿಳಿಸಲಾಗುವುದು. ನಂತರ ತಮ್ಮ ಪಾಸ್ಗಳನ್ನು ನಂದಿನಿ ಲೇಔಟ್ನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಕಚೇರಿಯಲ್ಲಿ…
ಬೆಂಗಳೂರು : ನಗರದಲ್ಲಿ ಇ-ಖಾತಾಗಾಗಿ ಜಿಬಿಎ ಕಚೇರಿಗೆ ಹೋಗೋ ಅವಶ್ಯಕತೆಯಿಲ್ಲ, ಬ್ರೋಕರ್ ಗಳಿಗೆ ದುಡ್ಡು ಕೊಡೋದು ಬೇಕಿಲ್ಲ. ಜಸ್ಟ್ ಮನೆಯಲ್ಲೇ ಕುಳಿತು ಹೀಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ, ಇ-ಖಾತಾ ಪಡೆಯಿರಿ ಎಂಬುದಾಗಿ ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಷ್ ಮೌದ್ಗಿಲ್ ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿ ಇ-ಖಾತಾ(eKhata) ಅರ್ಜಿಗಳ ವಿಲೇವಾರಿಯಲ್ಲಿ 99.36% ಸಾಧನೆ ಮುಂದುವರೆದಿದೆ. ನಾಗರಿಕರು ಅರ್ಜಿ ಸಲ್ಲಿಸಿದ ನಂತರ 1–2 ದಿನಗಳೊಳಗೆ ಇ-ಖಾತಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ವತಿಯಿಂದ ಎಲ್ಲಾ ನಾಗರಿಕರು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ. ಅರ್ಜಿಯನ್ನು ಈ ಕೆಳಗಿನ ಮಾರ್ಗಗಳ ಮೂಲಕ ಸಲ್ಲಿಸಬಹುದು: • ವೆಬ್ಸೈಟ್: https://bbmpeaasthi.karnataka.gov.in • ಬೆಂಗಳೂರು ಒನ್ ಕೇಂದ್ರಗಳು • ಸ್ಥಳೀಯ ಖಾಸಗಿ ಉದ್ಯಮಿಗಳು(LPE) – ನಿಮ್ಮ ಹತ್ತಿರದ LPE ವಿವರಗಳನ್ನು ಮೇಲ್ಕಂಡ ವೆಬ್ಸೈಟ್ನಲ್ಲಿ ತಿಳಿದುಕೊಳ್ಳಬಹುದು ದಯವಿಟ್ಟು ಯಾವುದೇ ನಗರ ಪಾಲಿಕೆ ಅಥವಾ GBA ಕಚೇರಿಗಳಿಗೆ ಭೇಟಿ ನೀಡಬೇಡಿ. ಮಧ್ಯವರ್ತಿಗಳಿಗೆ ಲಂಚ ಅಥವಾ…
ಬೆಂಗಳೂರು: ರಾಜ್ಯದಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಎಸ್ ಎಸ್ ಎಲ್, ಪಿಯುಸಿ, ಡಿಪ್ಲೋಮಾ, ಪದವಿ ಸೇರಿದಂತೆ ಇತರೆ ಪರೀಕ್ಷೆಯಲ್ಲಿ ಉತ್ತೀರ್ಣರಾದಂತ ಎಸ್ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಅನ್ನು ಸರ್ಕಾರ ನೀಡಿದೆ. ಅದೇ ಪ್ರೋತ್ಸಾಹ ಧನ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಕುರಿತಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದಂತ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಈ ಕೆಳಗಿನಂತೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದಿದೆ. ಎಸ್ ಎಸ್ ಎಲ್ ಸಿಯಲ್ಲಿ ಶೇ.60ರಿಂದ ಶೇ.75ರಷ್ಟು ಅಂಕ ಪಡೆದಂತ ವಿದ್ಯಾರ್ಥಿಗಳಿಗೆ ರೂ.7,500 ಹಾಗೂ ಶೇ.75ಕ್ಕಿಂತ ಮೇಲ್ಪಟ್ಟವರಿಗೆ ರೂ.15,000 ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಿದೆ. ಇನ್ನೂ ಪಿಯುಸಿ, ಡಿಪ್ಲೋಮ ವಿದ್ಯಾರ್ಥಿಗಳಿಗೆ ರೂ.20,000, ಪದವಿಗೆ ರೂ.25,000, ಸ್ನಾತಕೋತ್ತರ ಪದವಿಗೆ ರೂ.30,000, ವೃತ್ತಿಪರ ಪದವಿಗೆ ರೂ.35,000 ಹಾಗೂ ವಿಶ್ವ ವಿದ್ಯಾಲಯ ಮಟ್ಟದಲ್ಲಿ ಪಿಜಿ ಕೋರ್ಸ್ ಗಳ ವಿವಿಧ ವಿಷಯಗಳಲ್ಲಿ 1 ರಿಂದ 5ನೇ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ರೂ.50,000…
ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಎಸಗಿರೋ ಘಟನೆ ನಡೆದಿದೆ. ಹೂವು ಮಾರುತ್ತಿದ್ದ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಹೂವು ಮಾರುತ್ತಿದ್ದಂತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವನ್ನು ಆಟೋ ಚಾಲಕ ಎಸಗಿದ್ದಾನೆ. ಟ್ರಾಫಿಕ್ ಸಿಗ್ನಲ್ ಬಳಿ ಹೂವು ಮಾರುತ್ತಿದ್ದಂತ 11 ವರ್ಷದ ಬಾಲಕಿಯನ್ನು ಅಪಹರಿಸಿ ಈ ಕೀಚಕ ಕೃತ್ಯ ಎಸಗಲಾಗಿದೆ,. ಸಿಗ್ನಲ್ ನಲ್ಲಿ ಹೂ ಮಾರುತ್ತಿದ್ದಂತ ಬಾಲಕಿಯನ್ನು ಅಪಹರಿಸಿದಂತ ಆಟೋ ಚಾಲಕ, ಕಾಡಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಈ ವಿಷಯ ತಿಳಿದು ಸ್ಥಳಕ್ಕೆ ತೆರಳಿದಂತ ಪೊಲೀಸರು ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/5-years-age-relaxation-for-all-candidates-in-government-recruitment-in-the-state-cabinet-decision/ https://kannadanewsnow.com/kannada/donations-poured-in-to-sagars-ganapati-temple-this-time-more-than-9-lakhs-of-money-was-collected-in-the-hundi/
ಬೆಂಗಳೂರು: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವೀಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ನೇತೃತ್ವದಲ್ಲಿ ತನಿಖೆಗೆ ಸರ್ಕಾರ ಆದೇಶಿಸಿದೆ. ಸರ್ಕಾರಿ ಕಚೇರಿಯಲ್ಲೇ ಡಿಜಿಪಿ ರಾಮಚಂದ್ರರಾವ್ ಮಹಿಳೆಯರೊಂದಿಗೆ ರಾಸಲೀಲೆಯಾಡಿದಂತ ವೀಡಿಯೋಗಳು ವೈರಲ್ ಆಗಿದ್ದವು. ಈ ಬೆನ್ನಲ್ಲೇ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿತ್ತು. ಇದಾದ ಬಳಿಕ ಈ ಪ್ರಕರಣದ ತನಿಖೆಗೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ನೇತೃತ್ವದಲ್ಲಿ ಆದೇಶಿಸಲಾಗಿದೆ. ಘಟನೆ ಸತ್ಯಾಸತ್ಯತೆಗಾಗಿ ಡಿಜಿ ಮತ್ತು ಐಜಿಪಿಗೆ ಸರ್ಕಾರ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಹಿತೇಂದ್ರ ನೇತೃತ್ವದಲ್ಲಿ ತನಿಖೆಗೆ ಡಿಜಿ ಮತ್ತು ಐಜಿಪಿ ಸೂಚನೆ ನೀಡಿದ್ದಾರೆ. https://kannadanewsnow.com/kannada/shadakshari-appeals-to-cs-to-take-strict-action-against-those-who-attack-abuse-and-abuse-state-government-employees/ https://kannadanewsnow.com/kannada/5-years-age-relaxation-for-all-candidates-in-government-recruitment-in-the-state-cabinet-decision/
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಮೇಲೆ ಕರ್ತವ್ಯದ ವೇಳೆಯಲ್ಲಿ ನಡೆಯುವ ಹಲ್ಲೆ, ದೌರ್ಜನ್ಯ, ನಿಂದನೆ ಮಾಡುವವರ ಮೇಲೆ ಕಠಿಣ ಕ್ರಮ ಜಾರಿಗೊಳಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ, ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಕ್ಷರಿ ಮನವಿ ಮಾಡಿದ್ದಾರೆ. ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿ ಅವರ ನಿಯೋಗವು ಡಾ.ಶಾಲಿನಿ ರಜನೀಶ್, ಮುಖ್ಯಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ, ಅವರನ್ನು ಭೇಟಿ ಮಾಡಿ, ರಾಜ್ಯ ಸರ್ಕಾರಿ ನೌಕರರ ಮೇಲೆ ಕರ್ತವ್ಯದ ವೇಳೆಯಲ್ಲಿ ಗಣ್ಯ ವ್ಯಕ್ತಿಗಳು ಹಾಗೂ ಸಾರ್ವಜನಿಕರಿಂದ ನಡೆಯುವ ಹಲ್ಲೆ, ದೌರ್ಜನ್ಯ, ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಿ ಕಿರುಕುಳ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಲಾಯಿತ್ತು ಹಾಗೂ ಈ ಸಂಬಂಧ ಕಠಿಣ ಕಾನೂನುಗಳನ್ನು ಜಾರಿಗೆ ತರಲು ಪ್ರಸ್ತಾವನೆಯನ್ನು ಸಲ್ಲಿಸಿದೆ. ನೌಕರರ ಸಂಘದ ಪ್ರಸ್ತಾವನೆಗೆ ಮುಖ್ಯ ಕಾರ್ಯದರ್ಶಿಗಳು ಈ ಹಿಂದೆ ವೈದ್ಯರ ಮೇಲೆ ಹಲ್ಲೆಯಾದಾಗ ರೂಪಿಸಲಾಗಿದ್ದ ಮಾದರಿಯಲ್ಲಿಯೇ ರಾಜ್ಯ ಸರ್ಕಾರಿ ನೌಕರರ ಮೇಲೆ…














