Subscribe to Updates
Get the latest creative news from FooBar about art, design and business.
Author: ವಸಂತ ಬಿ ಈಶ್ವರಗೆರೆ
ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.
ಬೆಂಗಳೂರು : ಅರಣ್ಯ, ಪ್ರಕೃತಿ, ಪರಿಸರ ಉಳಿಯದಿದ್ದರೆ ಮಾನವ ಕುಲವೇ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಈ ಜವಾಬ್ದಾರಿಯನ್ನು ಶುದ್ಧ ಅಂತಃಕರಣದಿಂದ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ. ಅರಣ್ಯ ಸಚಿವರಾಗಿದ್ದ ತಮಗೆ ಕೃತಜ್ಞತೆ ಸಲ್ಲಿಸಲು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವಲಯ ಅರಣ್ಯಾಧಿಕಾರಿಗಳಿಂದ ಗೌರವವಂದನೆ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಕೃತಿಯಲ್ಲಿ ಸಮತೋಲನ ಕಾಪಾಡಲು, ವನ್ಯಜೀವಿ ಸಂರಕ್ಷಣೆ, ಅರಣ್ಯ ಮತ್ತು ಜೀವವೈವಿಧ್ಯ ಸಂರಕ್ಷಣೆಯ ಹೊಣೆ ಹೊತ್ತಿರುವ ನೀವು ಎಚ್ಚರ ತಪ್ಪದಂತೆ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಈಗ ಅರಣ್ಯ ಖಾತೆ ಸಚಿವನಲ್ಲದಿದ್ದರೂ ನನ್ನ ಮೇಲೆ ಅಭಿಮಾನವಿಟ್ಟು ಅಭಿನಂದಿಸಲು ಆಗಮಿಸಿರುವ ತಮ್ಮೆಲ್ಲರ ಅಭಿಮಾನದಿಂದ ಹೃದಯ ತುಂಬಿಬಂದಿದೆ. ನೀವು ಪ್ರಾಮಾಣಿಕತೆಯಿಂದ, ದಕ್ಷತೆಯಿಂದ ಅರಣ್ಯ, ವನ್ಯಜೀವಿ ಸಂರಕ್ಷಣೆ ಮಾಡಿದರೆ ಅದುವೇ ನೀವು ನನಗೆ ತೋರುವ ಅಭಿಮಾನ ಎಂದು ತಿಳಿಸಿದರು. ಇರುವುದೊಂದೇ ಭೂಮಿ, ಇದನ್ನು ಜತನವಾಗಿ ಕಾಪಾಡಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ…
ಶಿವಮೊಗ್ಗ: ಒಬ್ಬ ವ್ಯಕ್ತಿಗೆ ಈ ಮಟ್ಟದ ಒಂದು ಸತ್ಕಾರ ಅನ್ನುವಂತದ್ದು, ಒಂದು ಜಗದ ಬದುಕಿನಲ್ಲಿ ಸಾರ್ಥಕತೆಯನ್ನು ಕೊಡುತ್ತದೆ ಅಂತ ಹೇಳಿ ನನಗೆ ಅನಿಸುತ್ತದೆ. ಬಹಳ ದೊಡ್ಡ ಪ್ರಮಾಣದಲ್ಲಿ ಅಡಿಕೆ ಬೆಳೆಗಾರರು ಮತ್ತು ಮಂಜಪ್ಪನವರ ಹಿತೈಷಿಗಳು ಈ ಸಭೆಯಲ್ಲಿ ಸೇರಿದ್ದೀರಿ. ನಾವು ಬಹಳ ಸನ್ಮಾನಗಳನ್ನು ಇದನ್ನು ನೋಡಿದ್ದೇವೆ. ಆದರೆ ಈ ಮಟ್ಟದಲ್ಲಿ ನಡೆಯುತ್ತಾ ಇರುವಂತದ್ದು ಮಂಜಪ್ಪನವರ ಸಾರ್ವಜನಿಕ ಬದುಕಿಗೆ ಒಂದು ದೊಡ್ಡ ಶಕ್ತಿಯನ್ನು ತುಂಬಿದೆ ಮತ್ತು ಮಾನ್ಯತೆಯನ್ನು ಕೊಟ್ಟಿದೆ ಅಂತ ಹೇಳಿ ನಾನು ಭಾವಿಸುತ್ತೇನೆ ಎಂಬುದಾಗಿ ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ತಿಳಿಸಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಎಲ್ ಬಿ ಕಾಲೇಜಿನಲ್ಲಿ ನಡೆದ ಹೆಚ್.ಎಸ್ ಮಂಜಪ್ಪ ಅವರಿಗೆ ನಾಗರೀಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸತ್ಕಾರ ಮತ್ತು ಬದುಕಿನ ಸಾರ್ಥಕತೆ ಒಬ್ಬ ವ್ಯಕ್ತಿಗೆ ಈ ಮಟ್ಟದ ಒಂದು ಸತ್ಕಾರ ಅನ್ನುವಂತದ್ದು, ಒಂದು ಜಗದ ಬದುಕಿನಲ್ಲಿ ಸಾರ್ಥಕತೆಯನ್ನು ಕೊಡುತ್ತದೆ ಅಂತ ಹೇಳಿ ನನಗೆ ಅನಿಸುತ್ತದೆ. ಬಹಳ ದೊಡ್ಡ ಪ್ರಮಾಣದಲ್ಲಿ ಅಡಿಕೆ ಬೆಳೆಗಾರರು ಮತ್ತು ಮಂಜಪ್ಪನವರ…
ಬೆಂಗಳೂರು : ಪರಿಸರ ಸಂರಕ್ಷಣೆ ಮತ್ತು ವಿದ್ಯುತ್ ಜಾಲದ ಆಧುನೀಕರಣದತ್ತ ಮಹತ್ವದ ಹೆಜ್ಜೆಯನ್ನಿಟ್ಟಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್), ತನ್ನ ಹೈ-ವೋಲ್ಟೇಜ್ ಟ್ರಾನ್ಸ್ಫಾರ್ಮರ್ಗಳ ಜಾಲದಲ್ಲಿ ಬಳಕೆಯಲ್ಲಿದ್ದ ಸಾಂಪ್ರದಾಯಿಕ ಮತ್ತು ಹಾನಿಕಾರಕ ಮಿನರಲ್ ಆಯಿಲ್ (ಖನಿಜ ತೈಲ) ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಹಾಗೂ ಬಯೋಡಿಗ್ರೇಡಬಲ್ ನ್ಯಾಚುರಲ್ ಎಸ್ಟರ್ ಆಯಿಲ್ ಗೆ ಬದಲಾಯಿಡುವ ಕಾರ್ಯಕ್ಕೆ ಮುನ್ನಡಿ ಬರೆದಿದೆ. ರಾಜ್ಯದಾದ್ಯಂತ ಲಕ್ಷಾಂತರ ಗ್ರಾಹಕರಿಗೆ ಸುರಕ್ಷಿತ ಮತ್ತು ಪರಿಸರ ಸ್ನೇಹಿ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳವ ನಿಟ್ಟಿನಲ್ಲಿ, ಕೆಪಿಟಿಸಿಎಲ್ ಕೈಗೊಂಡಿರುವ ಈ ಪರಿಸರ ಸ್ನೇಹಿ ಉಪಕ್ರಮವು, ಮೂಲಸೌಕರ್ಯ ನಿರ್ವಹಣೆಯಲ್ಲಿ ಒಂದು ನಿರ್ಣಾಯಕ ಮೈಲಿಗಲ್ಲಾಗಿದೆ. ರಾಜ್ಯದಾದ್ಯಂತ ವಿದ್ಯುತ್ ಜಾಲದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 3,754 ಟ್ರಾನ್ಸ್ಫಾರ್ಮರ್ಗಳ ಪೈಕಿ, ಕೆಪಿಟಿಸಿಎಲ್ ಕಾರ್ಯತಂತ್ರದ ಭಾಗವಾಗಿ 45 ಹೈ-ಕೆಪಾಸಿಟಿ ಟ್ರಾನ್ಸ್ಫಾರ್ಮರ್ಗಳನ್ನು ಸಸ್ಯ ಆಧಾರಿತ ನ್ಯಾಚುರಲ್ ಎಸ್ಟರ್ ಆಯಿಲ್ ನೊಂದಿಗೆ ಬದಲಾಯಿಸಲಾಗಿದೆ. ಹೊಸ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸುವ ಆರ್ಥಿಕ ಹೊರೆಯ ಬದಲಿಗೆ, 15 ವರ್ಷಗಳಿಗಿಂತಲೂ ಹಳೆಯ ಟ್ರಾನ್ಸ್ಫಾರ್ಮರ್ಗಳನ್ನು ಗುರುತಿಸಿ, ಅವುಗಳ ಜೀವಿತಾವಧಿ ಮತ್ತು ಕಾರ್ಯಕ್ಷಮತೆಯನ್ನು…
ಬೆಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ, ಕರ್ನಾಟಕ ಮತ್ತು ಕೇರಳ ವಲಯದ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF), ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಸಿಆರ್ಪಿಎಫ್ ವಲಯದ ಅಡಿಯಲ್ಲಿ ಬರುವ ಎಲ್ಲಾ ಘಟಕಗಳಲ್ಲಿ ಸಸಿ ನೆಡುವ ಅಭಿಯಾನವನ್ನು ಆಯೋಜಿಸಲಾಗಿತ್ತು. ಈ ಸಸಿ ನೆಡುವ ಅಭಿಯಾನವು ಬೆಂಗಳೂರಿನ ರೇಂಜ್, ಗ್ರೂಪ್ ಸೆಂಟರ್, 240 (ಎಂ) ಬೆಟಾಲಿಯನ್, 247 ಬೆಟಾಲಿಯನ್, ಡಿ/97 ಬೆಟಾಲಿಯನ್, ಸಿಐಟಿ (CIT) ಬೆಂಗಳೂರು ಮತ್ತು ಸಿಆರ್ಪಿಎಫ್ (CRPF) ಕ್ಯಾಂಪಸ್ನಲ್ಲಿರುವ ಇತರ ಎಲ್ಲಾ ಸಂಸ್ಥೆಗಳಲ್ಲಿ ಏಕಕಾಲದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಎರಡು ಎನ್ಜಿಒ ಸಂಸ್ಥೆಗಳು ಭಾಗವಹಿಸಿದ್ದವು: 01. 🌱 ಹಸಿರೇ ಉಸಿರು : ಇದು ಕರ್ನಾಟಕ ಮೂಲದ ಪರಿಸರ ಸಂಘಟನೆಯಾಗಿದ್ದು, ಸಸಿ ನೆಡುವಿಕೆ, ಹಸಿರೀಕರಣವನ್ನು ಹೆಚ್ಚಿಸುವುದು, ಜೀವವೈವಿಧ್ಯ ಸಂರಕ್ಷಣೆ ಮತ್ತು ಪರಿಸರ ಜಾಗೃತಿಯನ್ನು ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದೆ. 02. 🤝 ಜೀವನಮುಕ್ತಿ ಫೌಂಡೇಶನ್: ಇದು ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ ರಕ್ಷಣೆ, ಬಡತನ ನಿರ್ಮೂಲನೆ ಮತ್ತು ಸಮುದಾಯ ಕಲ್ಯಾಣದ…
ಬೆಂಗಳೂರು : ಇಂಧನ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ನೇಮಕ ಹಾಗೂ ಖಾತೆ ಹಂಚಿಕೆ ಕುರಿತು ಅಸಮಾಧಾನ ಇಲ್ಲ ಎಂದಿರುವ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್, ಈ ಕುರಿತ ವರದಿಗಳು ಆಧಾರ ರಹಿತ ಎಂದು ಗುರುವಾರ ಹೇಳಿದ್ದಾರೆ. ಈ ಕುರಿತ ಊಹಾಪೋಹಗಳನ್ನು ತಳ್ಳಿಹಾಕಿರುವ ಸಚಿವ ಜಾರ್ಜ್, “ಖಾತೆ ಹಂಚಿಕೆ ಹಾಗೂ ಆಡಳಿತಾತ್ಮಕ ನೇಮಕಾತಿಗಳ ಬಗ್ಗೆ ನನಗೆ ಅಸಮಾಧಾನ ಇದೆ ಎಂದು ಕೆಲ ಮಾಧ್ಯಮಗಳ ವರದಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿ ಸಂಪೂರ್ಣವಾಗಿ ಆಧಾರರಹಿತವಾದುದು. ಈ ರೀತಿಯ ವದಂತಿಗಳು ಜನರನ್ನು ದಾರಿ ತಪ್ಪಿಸುವಂಥದ್ದು,”ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ತಮ್ಮ ಸಂಪೂರ್ಣ ಸಹಕಾರ ಇದೆ ಎಂದು ಪುನರುಚ್ಛರಿಸಿರುವ ಜಾರ್ಜ್, “ಖಾತೆ ಹಂಚಿಕೆ ಬಗ್ಗೆ ನನಗೆ ಯಾವುದೇ ಅಸಮಾಧಾನ ಇಲ್ಲ. ಆಡಳಿತಾತ್ಮಕ ನೇಮಕಾತಿಗಳ ಬಗ್ಗೆಯೂ ತಕರಾರಿಲ್ಲ. ಈ ಕುರಿತ ವರದಿಗಳು ಸತ್ಯಕ್ಕೆ ದೂರವಾದವು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕೆಲಸ ಮಾಡಲು ಬದ್ಧನಾಗಿದ್ದೇನೆ. ರಾಜ್ಯದ ಅಭಿವೃದ್ಧಿಗೆ ಕೈ…
ನಾಸಿಕ್ನ ‘ಕಾಂಬ್ಯಾಟ್ ಆರ್ಮಿ ಏವಿಯೇಷನ್ ಟ್ರೈನಿಂಗ್ ಸ್ಕೂಲ್’ (CAATS) ನಲ್ಲಿ ಅಂದು ಕೇವಲ ಒಂದು ವೃತ್ತಿಪರ ಮೈಲಿಗಲ್ಲಿನ ಸಂಭ್ರಮವಿರಲಿಲ್ಲ; ಅಲ್ಲಿ ಎರಡು ಹೃದಯಗಳ ಮಿಡಿತವೂ ಇತ್ತು. ಭಾರತೀಯ ಭೂಸೇನೆಯ ಯುವ ಅಧಿಕಾರಿ, ನೂತನ ಕ್ಯಾಪ್ಟನ್ ಭರತ್ ಭಾರದ್ವಾಜ್ ತಮ್ಮ ಸುದೀರ್ಘ ದಿನಗಳ ಪ್ರೇಯಸಿಗೆ ಮದುವೆಯ ಪ್ರಸ್ತಾಪವನ್ನು (Proposal) ಮುಂದಿಟ್ಟಾಗ, ಅದು ಕೇವಲ ಒಂದು ಸುಂದರ ಪ್ರೇಮ ಕಥೆಯಾಗಿತ್ತು. ಆದರೆ, ಇಂದಿನ ಸಾಮಾಜಿಕ ಜಾಲತಾಣಗಳ ಜಗತ್ತಿನಲ್ಲಿ ಯಾವುದೂ ಅಷ್ಟು ಸರಳವಾಗಿ ಉಳಿಯುವುದಿಲ್ಲವಲ್ಲ? ಕ್ಷಣಮಾತ್ರದಲ್ಲಿ ಈ ಘಟನೆ ಸೇನಾ ಶಿಸ್ತು, ಶಿಷ್ಟಾಚಾರ ಮತ್ತು ಭದ್ರತೆಯ ಬಗೆಗಿನ ಚರ್ಚೆಯ ಮಹಾಸ್ಫೋಟಕ್ಕೆ ಕಾರಣವಾಯಿತು. ಆ ಸಂಭ್ರಮದ ಕ್ಷಣ ವಿಡಿಯೋ ರೂಪದಲ್ಲಿ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿತು. ಸೇನೆಯ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚುತ್ತಿದ್ದ ಕ್ಯಾಪ್ಟನ್ ಭಾರದ್ವಾಜ್, ಹೆಲಿಕಾಪ್ಟರ್ ನಿಲ್ಲುವ ರನ್ವೇ (Tarmac) ಮೇಲೆ ಗಂಭೀರವಾಗಿ ಹೆಜ್ಜೆಯಿಡುತ್ತಾ ಬಂದು, ಪ್ರೇಯಸಿಯ ಮುಂದೆ ಮಂಡಿಯೂರಿ ಪ್ರೇಮದ ಉಂಗುರವನ್ನು ನೀಡಿದರು. ಆಕೆ ಆನಂದಬಾಷ್ಪದೊಂದಿಗೆ ಆ ಪ್ರಸ್ತಾಪವನ್ನು ಒಪ್ಪಿ, ಆಲಂಗಿಸಿಕೊಂಡಾಗ ಹಿನ್ನೆಲೆಯಲ್ಲಿ ಆರ್ಮಿ…
ಕಲಬುರ್ಗಿ: ಮನೆಯವರು ತಮ್ಮ ಪ್ರೀತಿಯನ್ನು ಒಪ್ಪುವುದಿಲ್ಲ ಹಾಗೂ ಮದುವೆಗೆ ವಿರೋಧ ಮಾಡುತ್ತಾರೆ ಎಂಬ ಆತಂಕಕ್ಕೆ ಹೆದರಿದ ಪ್ರೇಮಿಗಳಿಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಶಹಾಬಾದ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ದೇವನತೆಗನೂರು ಗ್ರಾಮದ 23 ವರ್ಷದ ಶಿವಪ್ಪ ಹಾಗೂ ಅದೇ ಗ್ರಾಮದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳಾಗಿದ್ದಾರೆ. ಘಟನೆಯ ಹಿನ್ನೆಲೆ: ಮೃತರಾದ ಯುವಕ ಶಿವಪ್ಪ ಹಾಗೂ ಅಪ್ರಾಪ್ತ ಬಾಲಕಿ ಇಬ್ಬರೂ ಶಹಾಬಾದ್ ತಾಲ್ಲೂಕಿನ ದೇವನತೆಗನೂರು ಗ್ರಾಮದ ನಿವಾಸಿಗಳಾಗಿದ್ದರು. ಕಳೆದ ಕೆಲವು ದಿನಗಳಿಂದ ಇವರಿಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು. ಆದರೆ, ಇಬ್ಬರೂ ಬೇರೆ ಬೇರೆ ಜಾತಿಯವರಾಗಿದ್ದರಿಂದ (ಅನ್ಯಜಾತಿ), ಇವರ ಪ್ರೇಮ ವಿಚಾರ ಮನೆಯವರಿಗೆ ತಿಳಿದರೆ ಒಪ್ಪುವುದಿಲ್ಲ ಹಾಗೂ ಇಬ್ಬರನ್ನೂ ಒಂದು ಮಾಡಲು ತೀವ್ರವಾಗಿ ವಿರೋಧಿಸುತ್ತಾರೆ ಎಂದು ಇಬ್ಬರೂ ತೀವ್ರವಾಗಿ ಹೆದರಿದ್ದರು ಎನ್ನಲಾಗಿದೆ. ರೈಲ್ವೆ ನಿಲ್ದಾಣದಲ್ಲಿ ದುರಂತ ಅಂತ್ಯ: ಪ್ರೀತಿ ಸಫಲವಾಗುವುದಿಲ್ಲ ಎಂಬ ಖಿನ್ನತೆಗೆ ಜಾರಿದ ಈ ಇಬ್ಬರು ಪ್ರೇಮಿಗಳು, ಕೊನೆಗೆ ಒಟ್ಟಿಗೆ ಸಾಯಲು ನಿರ್ಧರಿಸಿ ಶಹಾಬಾದ್ ರೈಲ್ವೆ…
ಬೆಂಗಳೂರು: ರಾಜ್ಯ ವಿಧಾನ ಪರಿಷತ್ (Legislative Council) ಚುನಾವಣೆಗೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಕೊನೆ ಕ್ಷಣದಲ್ಲಿ ಬಿಗ್ ಟ್ವಿಸ್ಟ್ ನೀಡಿದೆ. ನಿರೀಕ್ಷೆಗೂ ಮೀರಿ ಕಾಂಗ್ರೆಸ್ ಹೈಕಮಾಂಡ್ ಇದೀಗ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಚುನಾವಣಾ ಕಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವಿನಯ್ ಕಾರ್ತಿಕ್ ಅವರನ್ನು ಕಾಂಗ್ರೆಸ್ ತನ್ನ 5ನೇ ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಕಣಕ್ಕಿಳಿಸಿದೆ. ಡಿಕೆಶಿ ರಾಜತಾಂತ್ರಿಕ ನಡೆ? ಪಕ್ಷದ ಸಂಖ್ಯಾಬಲದ ಆಧಾರದ ಮೇಲೆ ನಿಗದಿತ ಸೀಟುಗಳಿಗಿಂತ ಹೆಚ್ಚಿನ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಡಿ.ಕೆ. ಶಿವಕುಮಾರ್ ಅವರ ಆಪ್ತರಾಗಿರುವ ವಿನಯ್ ಕಾರ್ತಿಕ್ ಅವರಿಗೆ ಮಣೆ ಹಾಕಿರುವುದು ಸದ್ಯದ ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಪರೋಕ್ಷವಾಗಿ ತಲೆನೋವು ತಂದಿಡುವ ಸಾಧ್ಯತೆ ಇದೆ. ಕಾಂಗ್ರೆಸ್ನ ಈ ಐದನೇ ಅಭ್ಯರ್ಥಿಯ ಎಂಟ್ರಿಯಿಂದಾಗಿ ವಿಧಾನ ಪರಿಷತ್ ಚುನಾವಣೆ ಈಗ ಕೇವಲ ಔಪಚಾರಿಕವಾಗಿ ಉಳಿಯದೆ, ತೀವ್ರ…
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ (KUD) ಶೈಕ್ಷಣಿಕ ವಲಯ ತಲೆತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ (Botany) ವಿಭಾಗದ ಪ್ರಾಧ್ಯಾಪಕ ಪ್ರೊ. ದೇವರಾಜನ್ ಅವರು ಯುವತಿಯೊಬ್ಬಳ ವಿಚಾರಕ್ಕಾಗಿ ತಮ್ಮ ಕೈಕೆಳಗೆ ಪಿಎಚ್ಡಿ ಮಾಡುತ್ತಿರುವ ಸಂಶೋಧನಾ ವಿದ್ಯಾರ್ಥಿ ವೇದವ್ಯಾಸ ಚೌಹಾಣ್ ಅವರಿಗೆ ಕಳೆದ ನಾಲ್ಕು ತಿಂಗಳಿನಿಂದ ತೀವ್ರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಾಲ್ಕು ವರ್ಷಗಳ ಶ್ರಮಕ್ಕೆ ಪ್ರಾಧ್ಯಾಪಕನ ಕಂಟಕ: ವೇದವ್ಯಾಸ ಚೌಹಾಣ್ ಅವರು ಕಳೆದ 4 ವರ್ಷಗಳಿಂದ ಪ್ರೊ. ದೇವರಾಜನ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ (Research) ನಡೆಸುತ್ತಿದ್ದಾರೆ. ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಕಳೆದ ನಾಲ್ಕು ತಿಂಗಳಿನಿಂದ ಪ್ರಾಧ್ಯಾಪಕರು ವಿದ್ಯಾರ್ಥಿ ವೇದವ್ಯಾಸನಿಗೆ ವಿಚಿತ್ರವಾಗಿ ವರ್ತಿಸುತ್ತಾ, ಮಾನಸಿಕವಾಗಿ ಪೀಡಿಸಲು ಆರಂಭಿಸಿದ್ದಾರೆ. ಈ ಇಡೀ ಕಿರುಕುಳದ ಹಿಂದೆ ಇರುವುದು ವಿಜಯಪುರ ಮೂಲದ ಒಬ್ಬ ಯುವತಿಯ ವಿಚಾರ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಪಿಎಚ್ಡಿ ಆಮಿಷ ಒಡ್ಡಿ ವಿದ್ಯಾರ್ಥಿನಿ ಜೊತೆ ಸಂಬಂಧ! ಆರೋಪಿತ ಪ್ರಾಧ್ಯಾಪಕ ಪ್ರೊ. ದೇವರಾಜನ್ ಅವರು ಸಸ್ಯಶಾಸ್ತ್ರ ವಿಭಾಗದಲ್ಲಿ ಎಂಎಸ್ಸಿ…
ಬೆಂಗಳೂರು : “ಈ ವರ್ಷ ನಾಡಪ್ರಭು ಕೆಂಪೇಗೌಡ ಜಯಂತಿಯಂದು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದಲ್ಲಿ 15 ಲಕ್ಷ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ವಿಶ್ವ ಪರಿಸರ ದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿ ಗಿಡ ನೆಟ್ಟ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. “ವಿಶ್ವ ಪರಿಸರದ ದಿನದ ಅಂಗವಾಗಿ ಇಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರೊಂದಿಗೆ ಕೂಡಾ ಸಸಿ ನೆಡಲಾಗಿದೆ. ಎಲ್ಲರೂ ಪರಿಸರವನ್ನು ಕಾಪಾಡುವ ಮೂಲಕ ರಾಜ್ಯವನ್ನು ಹಸಿರಾಗಿಸಬೇಕು. ಪ್ರತಿ ಮನೆಯಲ್ಲಿ ಗಿಡಗಳನ್ನು ಬೆಳೆಸಬೇಕು” ಎಂದು ಕರೆ ಕೊಟ್ಟರು.














