Author: kannadanewsnow09

ನೈಋತ್ಯ ಮುಂಗಾರು ಮಾರುತಗಳ ಪ್ರವೇಶದೊಂದಿಗೆ ಮಳೆಯ ಆರ್ಭಟ ಆರಂಭವಾಗುತ್ತದೆ. ಈ ಸುಂದರ ಹವಾಮಾನವನ್ನು ಆನಂದಿಸುವ ಜೊತೆಗೆ ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ಹಾಗೂ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ. ಮಳೆಗಾಲದ ಸವಾಲುಗಳನ್ನು ಎದುರಿಸಲು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಸೂಕ್ತ. 1. ಆರೋಗ್ಯದ ಕಾಳಜಿ ಇರಲಿ (Health and Hygiene) ಮಳೆಗಾಲದಲ್ಲಿ ನೀರಿನಿಂದ ಹರಡುವ ರೋಗಗಳಾದ ಕಾಲರಾ, ಟೈಫಾಯಿಡ್ ಮತ್ತು ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳು ವೇಗವಾಗಿ ಹರಡುತ್ತವೆ. ಕುಡಿಯುವ ನೀರು: ನೀರನ್ನು ಚೆನ್ನಾಗಿ ಕಾಯಿಸಿ ಆರಿಸಿ ಕುಡಿಯುವುದು ಅತ್ಯುತ್ತಮ. ಹೊರಗಿನ ತೆರೆದ ಪಾನೀಯಗಳು ಅಥವಾ ಐಸ್ ಬಳಸಿದ ಜ್ಯೂಸ್‌ಗಳನ್ನು ಸೇವಿಸಬೇಡಿ. ತಾಜಾ ಆಹಾರ: ಸದಾ ಬಿಸಿ ಮತ್ತು ತಾಜಾ ಆಹಾರವನ್ನೇ ಸೇವಿಸಿ. ರಸ್ತೆ ಬದಿಯ ಕತ್ತರಿಸಿಟ್ಟ ಹಣ್ಣುಗಳು ಅಥವಾ ತೆರೆದ ಆಹಾರ ಪದಾರ್ಥಗಳಿಂದ ದೂರವಿರಿ. ಸೊಳ್ಳೆಗಳ ನಿಯಂತ್ರಣ: ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಎಳನೀರು ಚಿಪ್ಪು, ಹಳೆಯ ಟೈರ್ ಅಥವಾ ಕುಂಡಗಳಲ್ಲಿ ನೀರು ನಿಂತರೆ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತದೆ.…

Read More

ಸಿಡಿಲು ಬಡಿದ ವ್ಯಕ್ತಿಗೆ ತಕ್ಷಣದ ಪ್ರಥಮ ಚಿಕಿತ್ಸೆ ನೀಡುವುದು ಅವರ ಪ್ರಾಣವನ್ನು ಉಳಿಸಲು ಅತ್ಯಗತ್ಯ. ಸಿಡಿಲು ಬಡಿತಕ್ಕೆ ಒಳಗಾದ ವ್ಯಕ್ತಿಯ ದೇಹದಲ್ಲಿ ವಿದ್ಯುತ್ ಉಳಿದಿರುವುದಿಲ್ಲ, ಆದ್ದರಿಂದ ನೀವು ಅವರನ್ನು ಮುಟ್ಟುವುದು ಸಂಪೂರ್ಣವಾಗಿ ಸುರಕ್ಷಿತ. ಸಿಡಿಲು ಬಡಿದ ವ್ಯಕ್ತಿಗೆ ನೀಡಬೇಕಾದ ಪ್ರಥಮ ಚಿಕಿತ್ಸೆ (First Aid) ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ: 1. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಿ (Check for Safety): ನಿಮ್ಮ ಸುರಕ್ಷತೆ: ವ್ಯಕ್ತಿಗೆ ಸಹಾಯ ಮಾಡಲು ಹೋಗುವ ಮುನ್ನ, ನೀವು ಇರುವ ಸ್ಥಳ ಸುರಕ್ಷಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಸಿಡಿಲು ಮತ್ತೊಮ್ಮೆ ಅದೇ ಸ್ಥಳಕ್ಕೆ ಬಡಿಯುವ ಸಾಧ್ಯತೆ ಇರುತ್ತದೆ. ವ್ಯಕ್ತಿಯನ್ನು ಸುರಕ್ಷಿತ ಸ್ಥಳಕ್ಕೆ ಸರಿಸಿ: ಸಾಧ್ಯವಾದರೆ, ವ್ಯಕ್ತಿಯನ್ನು ತಕ್ಷಣವೇ ಹತ್ತಿರದ ಸುಸಜ್ಜಿತ ಕಟ್ಟಡ ಅಥವಾ ಸುರಕ್ಷಿತ ಆಶ್ರಯಕ್ಕೆ ಸರಿಸಿ. ನಿಮ್ಮ ಸುರಕ್ಷತೆ ಮತ್ತು ಅವರ ಸುರಕ್ಷತೆ ಎರಡೂ ಮುಖ್ಯ. 2. ತಕ್ಷಣ ಸಹಾಯಕ್ಕಾಗಿ ಕರೆ ಮಾಡಿ (Call for Help): ತಕ್ಷಣವೇ ಆಂಬ್ಯುಲೆನ್ಸ್ ಅಥವಾ ತುರ್ತು ವೈದ್ಯಕೀಯ ಸೇವೆಗೆ ಕರೆ ಮಾಡಿ (ಉದಾಹರಣೆಗೆ ೧೦೮).…

Read More

ಬೆಂಗಳೂರು: ಮಳೆಗಾಲದಲ್ಲಿ ಅಥವಾ ಗುಡುಗು ಸಹಿತ ಮಳೆ ಬರುವಾಗ ಸಿಡಿಲು (Lightning) ಅತ್ಯಂತ ಅಪಾಯಕಾರಿ. ಇಂದು ರಾಯಚೂರಿನಲ್ಲಿ ಸಿಡಿಲು ಬಡಿದು ಕುರಿಗಾಯಿ ಯುವಕನೊಬ್ಬ ಸಾವನ್ನಪ್ಪಿರುವಂತ ಘಟನೆಯೊಂದು ನಡೆದಿದೆ. ಹಾಗಾದ್ರೇ ಗುಡುಗು ಸಹಿತ ಮಳೆ ಬರುವಾಗ ಸಿಡಿಲಿನಿಂದ ರಕ್ಷಿಸಲು ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ. 1. ಹೊರಾಂಗಣದಲ್ಲಿದ್ದಾಗ (Outdoor) ಮಾಡಬೇಕಾದ್ದು: ಸುರಕ್ಷಿತ ಆಶ್ರಯ ಪಡೆಯಿರಿ: ಗುಡುಗು ಕೇಳಿಸಿದ ತಕ್ಷಣ ಹತ್ತಿರದ ಸುಸಜ್ಜಿತ ಕಟ್ಟಡ ಅಥವಾ ಕಾರ್, ಬಸ್‌ನಂತಹ ವಾಹನಗಳ ಒಳಗೆ ಆಶ್ರಯ ಪಡೆಯಿರಿ. ಮರದ ಕೆಳಗೆ ನಿಲ್ಲಬೇಡಿ: ಇದು ಅತ್ಯಂತ ಮುಖ್ಯ. ಸಿಡಿಲು ಯಾವಾಗಲೂ ಎತ್ತರದ ವಸ್ತುಗಳನ್ನು ಮೊದಲು ಅಪ್ಪಳಿಸುತ್ತದೆ. ಒಂಟಿ ಮರದ ಕೆಳಗೆ ನಿಲ್ಲುವುದು ಪ್ರಾಣಾಪಾಯಕ್ಕೆ ಆಹ್ವಾನ ನೀಡಿದಂತೆ. ಎತ್ತರದ ಪ್ರದೇಶಗಳಿಂದ ದೂರವಿರಿ: ಬೆಟ್ಟದ ತುದಿ, ಬಯಲು ಪ್ರದೇಶ ಅಥವಾ ಎತ್ತರದ ಕಟ್ಟಡಗಳ ಮೇಲೆ ಇರಬೇಡಿ. ತಗ್ಗು ಪ್ರದೇಶಕ್ಕೆ ಧಾವಿಸಿ. ಲೋಹದ ವಸ್ತುಗಳಿಂದ ದೂರವಿರಿ: ಸೈಕಲ್, ಟ್ರ್ಯಾಕ್ಟರ್, ಕಬ್ಬಿಣದ ಕಂಬ, ತಂತಿ ಬೇಲಿ ಅಥವಾ ಕೃಷಿ ಉಪಕರಣಗಳನ್ನು ಮುಟ್ಟಬೇಡಿ.…

Read More

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದಾ ಗ್ರಾಮದಲ್ಲಿ ಇಂದು ಸಂಜೆ ಸಂಭವಿಸಿದ ಸಿಡಿಲು ಬಡಿತಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ. ಕುರಿ ಹಟ್ಟಿಯಿಂದ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆಯ ವಿವರ: ಮೃತನನ್ನು ಸಾಲಗುಂದಾ ಗ್ರಾಮದ ನಿವಾಸಿ ಮಂಜುನಾಥ ಕರಿಯಪ್ಪ (25) ಎಂದು ಗುರುತಿಸಲಾಗಿದೆ. ಮಂಜುನಾಥ್ ವೃತ್ತಿಯಲ್ಲಿ ಕುರಿಗಾಯಿಯಾಗಿದ್ದು, ಗ್ರಾಮದ ಹೊರವಲಯದಲ್ಲಿ ಕುರಿ ಹಟ್ಟಿ ಹಾಕಿದ್ದರು. ಇಂದು ಸಂಜೆ ಹಟ್ಟಿಯಿಂದ ಊಟ ತರಲು ಮನೆಗೆ ಮರಳುತ್ತಿದ್ದಾಗ ಏಕಾಏಕಿ ಗಾಳಿ ಸಹಿತ ಮಳೆ ಆರಂಭವಾಗಿದೆ. ಈ ವೇಳೆ ಸಿಡಿಲು ಬಡಿದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳೀಯರ ಪ್ರಯತ್ನ ವಿಫಲ: ಸಿಡಿಲು ಬಡಿದ ತಕ್ಷಣ ಸ್ಥಳೀಯರು ಯುವಕನ ರಕ್ಷಣೆಗೆ ಧಾವಿಸಿ, ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರು. ಆದರೆ ಸಿಡಿಲಿನ ತೀವ್ರತೆ ಹೆಚ್ಚಿದ್ದರಿಂದ ಮಂಜುನಾಥ್ ಅಷ್ಟರಲ್ಲೇ ಪ್ರಾಣ ಕಳೆದುಕೊಂಡಿದ್ದರು. ಮೃತದೇಹವನ್ನು ಸಿಂಧನೂರು ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಅಧಿಕಾರಿಗಳ ಭೇಟಿ: ಘಟನಾ ಸ್ಥಳಕ್ಕೆ ಸಿಂಧನೂರು ಗ್ರಾಮೀಣ ಠಾಣೆಯ ಪೊಲೀಸರು…

Read More

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಅಭಾವದ ಬಿಸಿ ಈಗ ನೇರವಾಗಿ ಶಾಸಕರ ಭವನಕ್ಕೂ ತಟ್ಟಿದೆ. “ನಮಗೆ ಬೆಳಗಿನ ಉಪಹಾರಕ್ಕೆ ಇಡ್ಲಿ, ದೋಸೆಯೇ ಸಿಗುತ್ತಿಲ್ಲ” ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಸದನದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿ ಇಡ್ಲಿ-ವಡೆ ಸದ್ದು! ಬುಧವಾರ ಬೆಳಗ್ಗೆ ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಈ ವಿಷಯ ಪ್ರಸ್ತಾಪಿಸಿದ ಐವನ್ ಡಿಸೋಜಾ, “ಇಂದು ಬೆಳಗ್ಗೆ ಶಾಸಕರ ಭವನದಲ್ಲಿ ತಿಂಡಿ ಸಿಕ್ಕಿಲ್ಲ. ಹೋಟೆಲ್‌ಗಳ ಪರಿಸ್ಥಿತಿಯೂ ಹೀಗೆಯೇ ಇದೆ. ಶಾಸಕರ ಪರಿಸ್ಥಿತಿಯೇ ಹೀಗಾದರೆ ಸಾಮಾನ್ಯ ಜನರ ಪಾಡೇನು? ಈ ಗ್ಯಾಸ್ ಸಮಸ್ಯೆ ಎಲ್ಲಿಯವರೆಗೆ ಇರಲಿದೆ?” ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, “ಇಡ್ಲಿ ಸಿಗುತ್ತಿಲ್ಲ ಎನ್ನುತ್ತಿದ್ದಾರೆ, ತರಿಸಿಕೊಡುವ ವ್ಯವಸ್ಥೆ ಮಾಡಿ” ಎಂದು ಹಾಸ್ಯ ಚಟಾಕಿ ಹಾರಿಸಿದರು. ತಕ್ಷಣ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್, “ಇಲ್ಲಿ ಸಮಸ್ಯೆ ಇಡ್ಲಿಯದ್ದಲ್ಲ, ಅಡುಗೆ ಮಾಡಲು ಗ್ಯಾಸ್ ಸಿಗುತ್ತಿಲ್ಲ ಎನ್ನುವುದು” ಎಂದು…

Read More

ಬೆಂಗಳೂರು: ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲು, ನೈಋತ್ಯ ರೈಲ್ವೆಯು ಯಶವಂತಪುರ – ಮಡಗಾಂವ್ – ಬೆಂಗಳೂರು ಕಂಟೋನ್ಮೆಂಟ್ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಿದೆ. ರೈಲು ಸಂಖ್ಯೆ 06271 ಯಶವಂತಪುರ–ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು, ಶುಕ್ರವಾರ, ಮಾರ್ಚ್ 20, 2026 ರಂದು ಬೆಳಿಗ್ಗೆ 11:50ಕ್ಕೆ ಯಶವಂತಪುರದಿಂದ ಹೊರಟು, ಮರುದಿನ (ಶನಿವಾರ) ಬೆಳಿಗ್ಗೆ 06:45ಕ್ಕೆ ಮಡಗಾಂವ್ ತಲುಪಲಿದೆ. ರೈಲು ಸಂಖ್ಯೆ 06272 ಮಡಗಾಂವ್–ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು, ಭಾನುವಾರ, ಮಾರ್ಚ್ 22, 2026 ರಂದು ಬೆಳಿಗ್ಗೆ 11:00 ಗಂಟೆಗೆ ಮಡಗಾಂವ್‌ನಿಂದ ಹೊರಟು, ಮರುದಿನ (ಸೋಮವಾರ) ಬೆಳಿಗ್ಗೆ 05:20ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ನಿಲುಗಡೆಗಳು: ಈ ವಿಶೇಷ ರೈಲುಗಳಿಗೆ ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ ಮತ್ತು ಕಾರವಾರ ನಿಲ್ದಾಣಗಳಲ್ಲಿ…

Read More

ನವದೆಹಲಿ: ಒಂದು ಕಾಲದಲ್ಲಿ ಪ್ರಿ-ವೆಡ್ಡಿಂಗ್ ಶೂಟ್ ಎಂದರೆ ಸುಂದರವಾದ ಉದ್ಯಾನವನ, ಸೂರ್ಯಾಸ್ತದ ಹಿನ್ನೆಲೆ ಅಥವಾ ಹಚ್ಚ ಹಸಿರಿನ ಸಾಸಿವೆ ಗದ್ದೆಗಳ ನಡುವೆ ನಡೆಯುವ ಮಧುರ ಕ್ಷಣಗಳ ಚಿತ್ರೀಕರಣವಾಗಿತ್ತು. ಆದರೆ ಇಂದು ‘ಕ್ರಿಯೇಟಿವಿಟಿ’ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಸಾಹಸಗಳು ಎಲ್ಲಿಗೆ ಬಂದು ತಲುಪಿವೆ ಎಂದರೆ, ಪ್ರೀತಿ ಮತ್ತು ಪ್ರಹಸನದ ನಡುವಿನ ವ್ಯತ್ಯಾಸವೇ ಮರೆತುಹೋಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ‘ಕೆರೆ ಶೂಟ್’. https://twitter.com/rose_k01/status/2034138398274031680 ಏನಿದು ವಿಚಿತ್ರ ಶೂಟ್? ಇತ್ತೀಚೆಗೆ ‘X’ (ಟ್ವಿಟರ್) ನಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ, ನವಜೋಡಿಯೊಂದು ಕೊಳಕು ಹಸಿರು ಬಣ್ಣದ ಕೆರೆಯ ನೀರಿನಲ್ಲಿ ತೇಲುತ್ತಾ ಪೋಸ್ ನೀಡುತ್ತಿದ್ದಾರೆ. ಹತ್ತಿರದಲ್ಲೇ ಮಂಡಿಯುದ್ದ ನೀರಿನಲ್ಲಿ ನಿಂತಿರುವ ಛಾಯಾಗ್ರಾಹಕರು ಅತ್ಯಂತ ಗಂಭೀರವಾಗಿ ‘ಸಿನೆಮ್ಯಾಟಿಕ್’ ಆಂಗಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಇದನ್ನು ನೋಡಿದರೆ ಇದು ಪ್ರೇಮಕಥೆಯೋ ಅಥವಾ ಯಾವುದಾದರೂ ಹಾರರ್ ಸಿನಿಮಾದ ದೃಶ್ಯವೋ ಎಂದು ಗುರುತಿಸುವುದು ಕಷ್ಟವಾಗಿದೆ! ‘ಟೈಟಾನಿಕ್’ ಗಿಂತ ‘ಟ್ರಾಜಿಡಿ’ ಹೆಚ್ಚು! ಈ ಜೋಡಿ ಬಹುಶಃ “ನಮ್ಮ ಪ್ರೀತಿ…

Read More

ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯು ಸಂಪತ್ತು ಮತ್ತು ಸಮೃದ್ಧಿಯ ಪ್ರತೀಕವಾಗಿದ್ದಾಳೆ. ಪ್ರತೀ ಹಿಂದೂ ಮನೆಯಲ್ಲೂ ಕೂಡ ಲಕ್ಷ್ಮಿಯನ್ನು ಆರಾಧಿಸುತ್ತಾರೆ. ಅದರಲ್ಲೂ ಮಹಿಳೆಯರು ಹೆಚ್ಚಾಗಿ ಲಕ್ಷ್ಮಿ ದೇವಿಯನ್ನು, ಆರಾಧಿಸುತ್ತಾರೆ ಹಾಗೂ ಮೆಚ್ಚುತ್ತಾರೆ ಕೂಡ. ಲಕ್ಷ್ಮಿ ದೇವಿಯನ್ನು ನಿತ್ಯವೂ ಪೂಜಿಸಲಾಗುತ್ತಿದ್ದು, ಶುಕ್ರವಾರದ ದಿನ ಅಂದರೆ ಇಂದು ಈಕೆಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಒಂದು ವೇಳೆ ನೀವೇನಾದರೂ ಮುಂಜಾನೆ ಎದ್ದ ತಕ್ಷಣ ಈ ಚಿಕ್ಕ ಮಂತ್ರವನ್ನು 21 ಬಾರಿ ಹೇಳಿದರೆ ದಶದಿಕ್ಕುಗಳಿಂದ ಧನ ಸಂಪತ್ತಿನ ಆಗಮನ ಆಗುವುದರ ಜೊತೆಗೆ ಇಲ್ಲಿ ನಾವು ನಿಮಗೆ ಇದರ ಗುಪ್ತವಾದ ಪ್ರಯೋಗದ ಬಗ್ಗೆ ಕೂಡ ತಿಳಿಸಿಕೊಡುತ್ತೇವೆ ಮುಂಜಾನೆಯ ಸಮಯವನ್ನು ಬ್ರಹ್ಮ ಮುಹೂರ್ತದ ಸಮಯ ಅಂತ ಕರೆಯುತ್ತಾರೆ ಒಂದು ವೇಳೆ ಮುಂಜಾನೆ ಎದ್ದ ತಕ್ಷಣ ಒಳ್ಳೆಯ ವಿಷಯಗಳನ್ನು ನೋಡಿದರೆ ಒಳ್ಳೆಯ ವಿಷಯಗಳನ್ನು ಕೇಳಿದರೆ ಒಳ್ಳೆಯ ವಿಷಯಗಳ ಬಗ್ಗೆ ಮಾತನಾಡಿದರೆ ಇವುಗಳ ಪ್ರಭಾವ ನಿಮ್ಮ ಮೇಲೆ ದಿನವಿಡಿ ಇರುತ್ತದೆ ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ…

Read More

ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಮುಂದಿಟ್ಟಿರುವ ಬಹುಚರ್ಚಿತ ಇಂಡೋ-ಯುಎಸ್ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಭಾರತೀಯ ಯುವ ಕಾಂಗ್ರೆಸ್ (IYC) ಕಾರ್ಯಕರ್ತರು ನವದೆಹಲಿಯಲ್ಲಿ ಬೃಹತ್ ಮಟ್ಟದ ‘ಸಂಸತ್ ಘೇರಾವ್’ ಪ್ರತಿಭಟನೆ ನಡೆಸಿದರು. ಕರ್ನಾಟಕದಿಂದ ರಾಜ್ಯ ಯುವ ಕಾಂಗ್ರೆಸ್​ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ನೇತೃತ್ವದಲ್ಲಿ ಹಲವು ಕಾರ್ಯಕರ್ತರು ಭಾಗವಹಿಸಿದ್ದರು. ಈ ಒಪ್ಪಂದದಿಂದ ದೇಶದ ರೈತರು, ಕಾರ್ಮಿಕರು ಹಾಗೂ ಸಣ್ಣ ಕೈಗಾರಿಕೆಗಳಿಗೆ ಭಾರಿ ನಷ್ಟ ಉಂಟಾಗಲಿದೆ ಎಂದು ಆರೋಪಿಸಿರುವ ಯುವ ಕಾಂಗ್ರೆಸ್ ನಾಯಕರು, ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರ ನೇತೃತ್ವದಲ್ಲಿ ನಡೆದ ಈ ಬೃಹತ್ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್‌ನ ನೂರಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಿ ಕೇಂದ್ರದ ವಿರುದ್ಧದ ಹೋರಾಟಕ್ಕೆ ಸಾಥ್ ನೀಡಿದರು. ನವದೆಹಲಿಯ ಜಂತರ್ ಮಂತರ್‌ನಲ್ಲಿ ಸೇರಿದ ದೇಶದ ವಿವಿಧ ರಾಜ್ಯಗಳ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂಡೋ-ಯುಎಸ್ ವ್ಯಾಪಾರ ಒಪ್ಪಂದದ ವಿರುದ್ಧ ದಿಕ್ಕಾರ ಕೂಗಿದರು. ಈ ಹೊಸ ಒಪ್ಪಂದವು…

Read More

ಬೆಂಗಳೂರು: ಧ್ರುವ ಸರ್ಜಾ ನಟನೆಯ ಮತ್ತು ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಹಾಡನ್ನು ಅಧಿಕೃತವಾಗಿ ನಿಷೇಧಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ನಡುವೆ ಕಾನೂನಿನ ಆದೇಶಕ್ಕೂ ಡೋಂಟ್‌ ಕೇರ್ ಅನ್ನೋ ಹಾಗೇ ಚಿತ್ರ ತಂಡ ನಡೆದುಕೊಳ್ಳುತ್ತಿದೆ ಎನ್ನಲಾಗುತ್ತಿದೆ. ಇನ್ನೂ ಕೂಡ ಸರ್ಸೆ ನಿನ್ನ ಸೆರಗ ಸರ್ಸೆ’ ಕೂಡ ಯೂಟ್ಯೂಬ್‌ನಲ್ಲಿ ಲಭ್ಯವಾಗುತ್ತಿದ್ದು, ಹಲವರಲ್ಲಿ ಆತಂಕ ಮನೆ ಮಾಡಿದೆ ಎನ್ನಲಾಗುತ್ತಿದೆ. ಈ ನೆಲದ ಕಾನೂನಿಗೆ ಸಿನಿಮಾ ತಂಡದವರು ಬೆಲೆ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಲೋಕಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದ ಆನಂದ್ ಬಡೋರಿಯಾ ಅವರು ಕೇಳಿದ ಪ್ರಶ್ನೆಗೆ ಸಚಿವ ಅಶ್ವಿನಿ ವೈಷ್ಣವ್ ಉತ್ತರಿಸಿದ್ದಾರೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಸಂಪೂರ್ಣವಾಗಿ ಪ್ರಶ್ನಾತೀತವಲ್ಲ ಎಂದು ಅವರು ತಿಳಿಸಿದ್ದಾರೆ. ಸಂವಿಧಾನದ ವಿಧಿ…

Read More