Author: kannadanewsnow09

ಬೆಂಗಳೂರು: ಐಶ್ವರ್ಯಗೌಡ ನನಗೆ ಪರಿಚಯವಿಲ್ಲ. ಆಕೆಯೊಂದಿಗೆ ಯಾವುದೇ ವ್ಯವಹಾರವೂ ಇಲ್ಲ. ಕನ್ನಡ ರಾಜ್ಯೋತ್ಸವಕ್ಕೆ ನನ್ನನ್ನು ಕರೆದಿದ್ರು. ಆಗ ನಾನು ಹೋಗಿದ್ದೆ ಎಂಬುದಾಗಿ ಮಾಜಿ ಸಂಸದ ಡಿ.ಕೆ ಸುರೇಶ್ ಸ್ಪಷ್ಟ ಪಡಿಸಿದ್ದಾರೆ. ಇಂದು ಬೆಂಗಳೂರಿನ ಶಾಂತಿನಗರದಲ್ಲಿರುವಂತ ಇಡಿ ಕಚೇರಿಗೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾದ ಬಳಿಕ ಅವರು ಮಾತನಾಡಿದರು. ಇಡಿ ವಿಚಾರಣೆಯಲ್ಲಿ ಏನು ಕೇಳಿದ್ದಾರೋ ಅದಕ್ಕೆ ಉತ್ತರಿಸಿದ್ದೇನೆ. ಜುಲೈ.8ರಂದು ಮತ್ತೆ ವಿಚಾರಣೆಗೆ ಹಾಜರಾಗಲು ಹೇಳಿದ್ದಾರೆ. ಆಗಲೂ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದರು. ಐಶ್ವರ್ಯಗೌಡ ನನಗೆ ಯಾವುದೇ ರೀತಿಯ ಪರಿಚಯವಿಲ್ಲ. ಕನ್ನಡ ರಾಜ್ಯೋತ್ಸವಕ್ಕೆ ನನ್ನ ಕರೆದಿದ್ರು, ನಾನು ಹೋಗಿದ್ದೆ. ಐಶ್ವರ್ಯಗೌಡ ಜೊತೆ ನನ್ನದು ಯಾವುದೇ ವ್ಯವಹಾರವೂ ಇಲ್ಲ. ರಾಜಕೀಯ ಪಿತೂರಿಗಳ ಬಗ್ಗೆ ನಾನು ಮಾತನಾಡುವುದಿಲ್ಲ ಅಂತ ಹೇಳಿದರು. https://kannadanewsnow.com/kannada/fraud-accused-aishwarya-gowda-receives-a-big-shock-from-the-ed-assets-worth-3-98-crores-seized/ https://kannadanewsnow.com/kannada/breaking-mla-raju-kage-said-he-may-resign-in-2-days-what-did-cm-siddaramaiah-say/

Read More

ಬೆಂಗಳೂರು: ವಂಚನೆ ಆರೋಪಿ ಐಶ್ವರ್ಯ ಗೌಡಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ಅವರಿಗೆ ಸೇರಿದ್ದಂತ 3.98 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.   ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರಿನ ಇಡಿ, 3.98 ಕೋಟಿ (ಅಂದಾಜು) ಮೌಲ್ಯದ ಫ್ಲಾಟ್‌ಗಳು, ನಿರ್ಮಿತ ಕಟ್ಟಡ ಮತ್ತು ರೂ. 2.01 ಕೋಟಿ (ಅಂದಾಜು) ಮೌಲ್ಯದ ಭೂಮಿ ಮತ್ತು ರೂ. 1.97 ಕೋಟಿ (ಅಂದಾಜು) ಮೌಲ್ಯದ ನಗದು ಮತ್ತು ವಾಹನದ ರೂಪದಲ್ಲಿ ಚಲಿಸಬಲ್ಲ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಮಾಹಿತಿ ನೀಡಿದೆ. ಶ್ರೀಮತಿ ಐಶ್ವರ್ಯಾ ಗೌಡ ಮತ್ತು ಇತರರ ಪ್ರಕರಣದಲ್ಲಿ ಹೆಚ್ಚಿನ ಆದಾಯದ ಭರವಸೆ ನೀಡಿ ಹಲವಾರು ವ್ಯಕ್ತಿಗಳಿಂದ ಚಿನ್ನ, ನಗದು ಮತ್ತು ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ಪಡೆದು ಕ್ರಿಮಿನಲ್ ಪಿತೂರಿಯಲ್ಲಿ ಹಣ ವರ್ಗಾವಣೆಯ ಅಪರಾಧದಲ್ಲಿ ಭಾಗಿಯಾಗಿದ್ದಾರೆಂದು ಕಂಡುಬಂದಿದೆ ಎಂದು ತಿಳಿಸಿದೆ. https://twitter.com/dir_ed/status/1937113610171670882 https://kannadanewsnow.com/kannada/a-person-assaulted-an-ias-officer-at-the-dc-office-in-bengaluru-as-alleged/ https://kannadanewsnow.com/kannada/breaking-mla-raju-kage-said-he-may-resign-in-2-days-what-did-cm-siddaramaiah-say/

Read More

ಬೆಂಗಳೂರು: ಈಗಾಗಲೇ ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಕೇಸಲ್ಲಿ ವಿನಯ್ ಕುಲಕರ್ಣ ಜೈಲುಪಾಲಾಗಿದ್ದಾರೆ. ಈ ಬೆನ್ನಲ್ಲೇ ಸಿಬಿಐ ಎಸ್ ಪಿ ಪಿ ಹುದ್ದೆಗೆ ಗಂಗಾಧರ ಶೆಟ್ಟಿ ರಾಜೀನಾಮೆ ನೀಡಿದ್ದಾರೆ. ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ ಸಿಬಿಐ ಎಸ್ ಪಿಪಿಯಾಗಿ ಗಂಗಾಧರ ಶೆಟ್ಟಿ ನೇಮಕ ಮಾಡಲಾಗಿತ್ತು. ಇಂತಹ ಹುದ್ದೆಗೆ ಅವರು ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. https://kannadanewsnow.com/kannada/breaking-mla-raju-kage-said-he-may-resign-in-2-days-what-did-cm-siddaramaiah-say/ https://kannadanewsnow.com/kannada/massive-operation-by-the-forest-department-in-bangalore-encroachment-removal-from-120-acres-of-forest-land/

Read More

ಬೆಂಗಳೂರು: ಐಶ್ವರ್ಯಗೌಡ ವಿರುದ್ಧ ವಂಚನೆ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವಂತ ಇಡಿ ಅಧಿಕಾರಿಗಳು, ಇದೀಗ ಐಶ್ವರ್ಯಗೌಡಗೆ ಸೇರಿದಂತ 3.98 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರಿನ ಇಡಿ, 3.98 ಕೋಟಿ (ಅಂದಾಜು) ಮೌಲ್ಯದ ಫ್ಲಾಟ್‌ಗಳು, ನಿರ್ಮಿತ ಕಟ್ಟಡ ಮತ್ತು ರೂ. 2.01 ಕೋಟಿ (ಅಂದಾಜು) ಮೌಲ್ಯದ ಭೂಮಿ ಮತ್ತು ರೂ. 1.97 ಕೋಟಿ (ಅಂದಾಜು) ಮೌಲ್ಯದ ನಗದು ಮತ್ತು ವಾಹನದ ರೂಪದಲ್ಲಿ ಚಲಿಸಬಲ್ಲ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ ಎಂದಿದೆ. ಶ್ರೀಮತಿ ಐಶ್ವರ್ಯಾ ಗೌಡ ಮತ್ತು ಇತರರ ಪ್ರಕರಣದಲ್ಲಿ ಹೆಚ್ಚಿನ ಆದಾಯದ ಭರವಸೆ ನೀಡಿ ಹಲವಾರು ವ್ಯಕ್ತಿಗಳಿಂದ ಚಿನ್ನ, ನಗದು ಮತ್ತು ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ಪಡೆದು ಕ್ರಿಮಿನಲ್ ಪಿತೂರಿಯಲ್ಲಿ ಹಣ ವರ್ಗಾವಣೆಯ ಅಪರಾಧದಲ್ಲಿ ಭಾಗಿಯಾಗಿದ್ದಾರೆಂದು ಕಂಡುಬಂದಿದೆ ಎಂದು ತಿಳಿಸಿದೆ. https://twitter.com/dir_ed/status/1937113610171670882 https://kannadanewsnow.com/kannada/a-person-assaulted-an-ias-officer-at-the-dc-office-in-bengaluru-as-alleged/ https://kannadanewsnow.com/kannada/breaking-mla-raju-kage-said-he-may-resign-in-2-days-what-did-cm-siddaramaiah-say/

Read More

ಬೆಂಗಳೂರು: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ವ್ಯಕ್ತಿಯೊಬ್ಬರ ಹೈಡ್ರಾಮಾವೇ ನಡೆದಿದೆ. ಐಎಎಸ್ ಅಧಿಕಾರಿಗಳು ಹೊಡೆಯಲು ಬಂದಿದ್ದಾಗಿ ಆರೋಪಿಸಿದಂತ ವ್ಯಕ್ತಿಯೊಬ್ಬ, ಕಿರುಚಾಡಿದ್ದರಿಂದ ಕೆಲ ಕಾಲ ಡಿಸಿ ಕಚೇರಿಯಲ್ಲಿ ಹೈಡ್ರಾಮಾವೇ ನಡೆಯಿತು. ಸ್ಥಳದಲ್ಲಿದ್ದಂತ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು, ವಿಚಾರಣೆಗೆ ಕರೆದೊಯ್ದರು. ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ ಬಳಿಯಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ನಲ್ಲಿ ದೇಶಭಕ್ತಿ ವೀಡಿಯೋ ನೋಡುತ್ತಿದ್ದೆ. ಅದಕ್ಕೆ ನನಗೆ ಐಎಎಸ್ ಅಧಿಕಾರಿ ಒದಿಯೋಕೆ ಬಂದ್ರು ಅಂತ ಆರೋಪಿಸಿದರು. ಸ್ಥಳದಲ್ಲಿದ್ದಂತ ಪೊಲೀಸರು ಹತ್ತಿರ ಹೋಗುತ್ತಿದ್ದಂತೆ ಅವರ ಮುಂದೆ ಒದ್ದಾಡಿ ಕಿರುಚಾಡಿದರು. ವ್ಯಕ್ತಿಯ ಕಿರುಚಾಟದಿಂದ ಕೆಲಕಾಲ ಸ್ಥಳದಲ್ಲಿ ಗೊಂದಲ ಕೂಡ ಸೃಷ್ಠಿಯಾಗಿತ್ತು. ಕೊನೆಗೆ ಆತನನ್ನ ವಶಕ್ಕೆ ಪಡೆದಂತ ಪೊಲೀಸರು ಅಲ್ಲಿಂದ ಕರೆದೊಯ್ದರು. https://kannadanewsnow.com/kannada/good-news-for-engineering-graduates-from-the-states-reserved-category-invitation-to-apply-for-training/ https://kannadanewsnow.com/kannada/breaking-mla-raju-kage-said-he-may-resign-in-2-days-what-did-cm-siddaramaiah-say/

Read More

ಬೆಂಗಳೂರು: ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2025-26 ನೇ ಸಾಲಿನ ಐಐಎಸ್ಸಿ, ಐಐಟಿ ಮತ್ತು ಎನ್‌ಐಟಿ ಸಂಸ್ಥೆಗಳ ಮೂಲಕ ಆರ್ಟಿಫಿಷಲ್ ಇಟಲಿಜನ್ಸ್ ಅಂಡ್ ಮಿಷಿನ್ ಲರ್ನಿಂಗ್ ಮುಂತಾದ ವೃತ್ತಿಪರ ತರಬೇತಿ ಕೋರ್ಸ್ಗಳಲ್ಲಿ ಭಾಗವಹಿಸುವ ಪರಿಶಿಷ್ಟ ಪಂಗಡಗಳ 200 ಇಂಜಿನಿಯರಿAಗ್ ಪದವೀಧರರಿಗೆ 15,000/- ರೂ.ಗಳ ಶಿಷ್ಯ ವೇತನದೊಂದಿಗೆ ತರಬೇತಿ ನೀಡಲು ಅರ್ಹರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿಯನ್ನು ಒಳಗೆ ಕಚೇರಿಯಲ್ಲಿ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜುಲೈ 04 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ದೂ.ಸಂ.08182-200266 ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸುವುದು. https://kannadanewsnow.com/kannada/bjp-is-anti-national-they-should-be-hanged-mla-gopalakrishna-belur/ https://kannadanewsnow.com/kannada/breaking-mla-raju-kage-said-he-may-resign-in-2-days-what-did-cm-siddaramaiah-say/

Read More

ಶಿವಮೊಗ್ಗ: ಬಿಜೆಪಿಯ ಕೆಲವು ಮುಖಂಡರು ರಾಷ್ಟ್ರಧ್ವಜವನ್ನು ಕೇಸರೀಕರಣ ಮಾಡಬೇಕು ಅಂತ ಹೊರಟಿದ್ದಾರಲ್ಲ ಇದು ಯಾವತರ ಅಂತ ಅರ್ಥವಾಗುತ್ತಿಲ್ಲ. ರಾಷ್ಟ್ರಧ್ವಜವನ್ನ ಕೇಸರೀಕರಣ ಮಾಡಬೇಕು ಅಂತ ಅಂದ್ರೇ ಇವರ ಧ್ಯೇಯ, ಉದ್ದೇಶವೇನಿದೆ? ಇವರೆಲ್ಲ ರಾಷ್ಟ್ರದ್ರೋಹಿಗಳು. ಇಂತವರನ್ನೆಲ್ಲ ನೇಣಿಗೆ ಹಾಕಬೇಕು. ಸಂವಿಧಾನ ಮತ್ತು ರಾಷ್ಟ್ರಧ್ವಜವನ್ನು ಚೇಂಜ್ ಮಾಡಬೇಕು ಅಂತ ಹೇಳ್ತಾರೋ ಅಂತವರನ್ನು ನೇಣುಗಂಬಕ್ಕೆ ಏರಿಸಬೇಕು ಎನ್ನುವುದು ನನ್ನ ಅಭಿಪ್ರಾಯ. ಇದನ್ನು ಉಗ್ರವಾಗಿ ಖಂಡಿಸುತ್ತೇನೆ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿಕಾರಿದ್ದಾರೆ. ಇಂದು ಶಿವಮೊಗ್ಗದ ಸಾಗರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ದೇಶದಲ್ಲಿ ರಸಗೊಬ್ಬರದ ಬೆಲೆ ಜಾಸ್ತಿಯಾಗಿದೆ. ಸುಮಾರು 160 ರಿಂದ 180 ಒಂದು ಚೀಲಕ್ಕೆ ಜಾಸ್ತಿ ಮಾಡಿದ್ದಾರೆ. ಇದರಿಂದ ದೇಶದ ಸಣ್ಣ ರೈತರಿಗೆ ಹೊಡೆತ ಬಿದ್ದಿದೆ. ಕರ್ನಾಟಕದಲ್ಲಿ ಹಾಲಿನ ದರ ಒಂದು ರೂಪಾಯಿ, ಎರಡು ರೂಪಾಯಿ ಮಾಡಿದಾಗ ಬೀದಿಗೆ ಬಂದು ಬಿಜೆಪಿಯ ನಾಯಕರು ಬಾಯಿ ಬಡಿದುಕೊಂಡರು. ಈ ದೇಶದ ರೈತರ ಮೇಲೆ ರಸಗೊಬ್ಬರದ ಬಾರ ಹೇರಿದ್ದಾರಲ್ಲ. ಇದರ ಬಗ್ಗೆ ಯಾರಾದರೂ ಚಕಾರ ಎತ್ತಿದ್ದೀರಾ? ಎಂದು ಪ್ರಶ್ನಿಸಿದರು.…

Read More

ಬೆಂಗಳೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಡಾ.ದೊಡ್ಡರಂಗೇಗೌಡ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕನ್ನಡದ ಖ್ಯಾತ ಸಾಹಿತಿ ಡಾ.ದೊಡ್ಡರಂಗೇಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಕೆಂಗೇರಿ ಬಳಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಪದ್ಮಶ್ರೀ ಪುರಸ್ಕೃತ ಖ್ಯಾತ ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡರಿಗೆ ಬಿಜಿಎಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಕಳೆದ ಒಂದು ವರ್ಷದಿಂದ ತೀವ್ರ ಮಂಡಿನೋವಿನಿಂದ ಬಳಲುತ್ತಿದ್ದ ಅವರಿಗೆ ಭಾನುವಾರ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದ್ದು ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. https://kannadanewsnow.com/kannada/breaking-mla-raju-kage-said-he-may-resign-in-2-days-what-did-cm-siddaramaiah-say/ https://kannadanewsnow.com/kannada/massive-operation-by-the-forest-department-in-bangalore-encroachment-removal-from-120-acres-of-forest-land/

Read More

ತಮಿಳುನಾಡು: ರೋಜಾ ಕೂಟಂ ಮತ್ತು ಪಾರ್ಥಿಬನ್ ಕಣವು ಮುಂತಾದ ಚಿತ್ರಗಳಿಗೆ ಹೆಸರುವಾಸಿಯಾದ ತಮಿಳು ನಟ ಶ್ರೀಕಾಂತ್ ಅವರನ್ನು ಚೆನ್ನೈನಲ್ಲಿ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲ್ಪಟ್ಟ ಎಐಎಡಿಎಂಕೆ ಮಾಜಿ ಕಾರ್ಯಕರ್ತ ಪ್ರಸಾದ್, ಶ್ರೀಕಾಂತ್‌ಗೆ ಕೊಕೇನ್ ಸೇರಿದಂತೆ ಮಾದಕವಸ್ತುಗಳನ್ನು ಪೂರೈಸಿದ್ದಾರೆ ಎಂದು ಆರೋಪಿಸಿದ ನಂತರ ತನಿಖೆ ಪ್ರಾರಂಭವಾಯಿತು. ನಟ ಮಾದಕವಸ್ತು ಸೇವಿಸಿದ್ದಾರೆ ಎಂದು ವೈದ್ಯಕೀಯ ಪರೀಕ್ಷೆಗಳು ಸಾಬೀತುಪಡಿಸಿವೆ. ಶ್ರೀಕಾಂತ್ ಅವರ ಮಾದಕವಸ್ತು ಬಳಕೆಯನ್ನು ವೈದ್ಯಕೀಯ ಪರೀಕ್ಷೆಗಳು ದೃಢಪಡಿಸಿವೆ ಚೆನ್ನೈ ಪೊಲೀಸರ ಮಾದಕವಸ್ತು ವಿರೋಧಿ ಗುಪ್ತಚರ ಘಟಕ (ANIU) ನಟನನ್ನು ಪ್ರಶ್ನಿಸಿತು. ಮತ್ತು ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗಳು ಮಾದಕವಸ್ತು ಬಳಕೆಯನ್ನು ದೃಢಪಡಿಸಿವೆ ಎಂದು ವರದಿಯಾಗಿದೆ. ಇದು ಮಾದಕವಸ್ತು ಮತ್ತು ಮನೋವಿಕೃತ ವಸ್ತುಗಳ (NDPS) ಕಾಯ್ದೆಯಡಿ ಅವರನ್ನು ಬಂಧಿಸಲು ಕಾರಣವಾಯಿತು. ನ್ಯೂಸ್ 18 ತಮಿಳು ವರದಿಯ ಪ್ರಕಾರ, ಶ್ರೀಕಾಂತ್ 12,000 ರೂ.ಗೆ ಒಂದು ಗ್ರಾಂ ಕೊಕೇನ್ ಖರೀದಿಸಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶ್ರೀಕಾಂತ್ ಯಾರು? ಶ್ರೀಕಾಂತ್…

Read More

ಬೆಂಗಳೂರು: 2025-26ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶೂ ಮತ್ತು ಸಾಕ್ಸ್ ವಿತರಣೆಗೆ ಸರ್ಕಾರ ಆದೇಶಿಸಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಿದ್ದು, 2025-26ನೇ ಶೈಕ್ಷಣಿಕ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂದಾಜು 40.74 ಲಕ್ಷ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ವಿತರಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮತಿ ನೀಡುವಂತೆ ಕೋರಿರುತ್ತಾರೆ. ಮತ್ತು ಸಾಕ್ಸ್ ವಿತರಣಾ ಯೋಜನೆಯನ್ನು ರಾಜ್ಯದಲ್ಲಿನ ವಿವಿಧ ಭಾಗಗಳಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಕೆಲವು ಪರ್ಯಾಯ ಅವಕಾಶ ನೀಡುವ ಅಗತ್ಯತೆಯಿದೆ. ಮಲೆನಾಡು ಮತ್ತು ಕರ್ನಾಟಕ ಕರಾವಳಿ ಪ್ರದೇಶದಲ್ಲಿ ವರ್ಷದಲ್ಲಿ ಮೂರರಿಂದ ನಾಲ್ಕು ತಿಂಗಳುಗಳಲ್ಲಿ ಅತಿ ಹೆಚ್ಚಿನ ಮಳೆ ಬೀಳುವುದರಿಂದ ವಿದ್ಯಾರ್ಥಿಗಳಿಗೆ ಶೂಗಳು ಸಮರ್ಪಕ ಪಾದರಕ್ಷೆ ಆಗಲಿಕ್ಕಿಲ್ಲ. ಅದೇ ರೀತಿ ಉತ್ತರ ಕರ್ನಾಟಕದ ಭಾಗದಲ್ಲಿ ಅತಿ ಹೆಚ್ಚಿನ ಉಷ್ಣಾಂಶದ ವಾತಾವರಣ ಇರುವುದರಿಂದ ಶೂ, ಸೂಕ್ತ…

Read More