Subscribe to Updates
Get the latest creative news from FooBar about art, design and business.
Author: kannadanewsnow09
ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿ ನಿರ್ಮಿತ ಚಲನಚಿತ್ರಗಳು ಮತ್ತು ಪೀಠೋಪಕರಣಗಳ ಮೇಲೆ ಭಾರೀ ಸುಂಕಗಳನ್ನು ವಿಧಿಸುವುದಾಗಿ ಹೇಳಿದ್ದಾರೆ, ವಿದೇಶಿ ಸ್ಪರ್ಧೆಯಿಂದ ದುರ್ಬಲಗೊಂಡಿರುವ ಕೈಗಾರಿಕೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅವರು ಹೇಳುತ್ತಾರೆ. ಟ್ರೂತ್ ಸೋಷಿಯಲ್ನಲ್ಲಿನ ಪೋಸ್ಟ್ನಲ್ಲಿ, ಡೊನಾಲ್ಡ್ ಟ್ರಂಪ್ ಇತರ ದೇಶಗಳು ಯುಎಸ್ ಚಲನಚಿತ್ರೋದ್ಯಮವನ್ನು “ಕದಿಯುತ್ತಿವೆ” ಎಂದು ಆರೋಪಿಸಿದರು, ಕ್ಯಾಲಿಫೋರ್ನಿಯಾ “ವಿಶೇಷವಾಗಿ ತೀವ್ರ ಹೊಡೆತಕ್ಕೆ ಒಳಗಾಗಿದೆ” ಎಂದು ಹೇಳಿದರು. ಅವರು ಯುನೈಟೆಡ್ ಸ್ಟೇಟ್ಸ್ ಹೊರಗೆ ನಿರ್ಮಿಸಲಾದ ಎಲ್ಲಾ ಚಲನಚಿತ್ರಗಳ ಮೇಲೆ 100% ಸುಂಕವನ್ನು ವಿಧಿಸುವುದಾಗಿ ಘೋಷಿಸಿದರು. “ನಮ್ಮ ಚಲನಚಿತ್ರ ನಿರ್ಮಾಣ ವ್ಯವಹಾರವನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಿಂದ, ಇತರ ದೇಶಗಳು ‘ಮಗುವಿನಿಂದ ಕ್ಯಾಂಡಿ’ಯನ್ನು ಕದಿಯುವಂತೆ ಕದ್ದಿವೆ” ಎಂದು ಅವರು ಸೋಮವಾರ ಹೇಳಿದರು. ಡೊನಾಲ್ಡ್ ಟ್ರಂಪ್ ಮೊದಲು ಮೇ ತಿಂಗಳಲ್ಲಿ ಅಂತಹ ಸುಂಕಗಳ ಕಲ್ಪನೆಯನ್ನು ಮಂಡಿಸಿದ್ದರು, ಆದರೆ ಆ ಸಮಯದಲ್ಲಿ ಸ್ವಲ್ಪ ಸ್ಪಷ್ಟತೆಯನ್ನು ನೀಡಿದ್ದರಿಂದ ಮನರಂಜನಾ ಉದ್ಯಮದ ಕಾರ್ಯನಿರ್ವಾಹಕರು ಈ ಪ್ರಸ್ತಾಪದ ಬಗ್ಗೆ ಅನಿಶ್ಚಿತರಾಗಿದ್ದರು. ನೆಟ್ಫ್ಲಿಕ್ಸ್ ಷೇರುಗಳು 1.4% ರಷ್ಟು ಕುಸಿದವು ಮತ್ತು…
ಬೆಂಗಳೂರು: ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವೈದ್ಯಕೀಯ ಶಾಖೆಯು ಬೆಂಗಳೂರಿನ ಅನುಗ್ರಹ ಸಮುದಾಯ ಕೇಂದ್ರದಲ್ಲಿ ಇಂದು ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಈ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ್ ಕುಮಾರ್ ಸಿಂಗ್ ಉದ್ಘಾಟಿಸಿದರು. ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಒಬ್ಬ ದಾನಿಯ ಒಂದು ಯೂನಿಟ್ ರಕ್ತವು ಮೂರು ಜೀವಗಳನ್ನು ಉಳಿಸಬಲ್ಲದು ಎಂದು ಹೇಳಿದರು. ಮುಖ್ಯ ವೈದ್ಯಕೀಯ ಅಧೀಕ್ಷಕಿ ಡಾ.ಪ್ರಭಾವತಿ ಗಜಲಕ್ಷ್ಮಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ಸ್ವಯಂಪ್ರೇರಿತ ರಕ್ತದಾನದ ಮಹತ್ವ, ಅದರ ಆವರ್ತನ, ಅರ್ಹ ದಾನಿಗಳು, ರಕ್ತದಾನದಿಂದ ದಾನಿಗೆ ಮತ್ತು ಸಮಾಜಕ್ಕೆ ಆಗುವ ಅನುಕೂಲಗಳನ್ನು ಕುರಿತು ವಿವರಿಸಿದರು. ಲೂಯಿಸ್ ಅಮುಯಿಥನ್, ಡಿಐಜಿ/ರೈಲ್ವೆ ಸುರಕ್ಷತಾ ಪಡೆ/ನೈಋತ್ಯ ರೈಲ್ವೆ, ಶ್ರೇಯಾಂಸ್ ಚಿಂಚ್ವಾಡೆ, ಹಿರಿಯ ವಿಭಾಗೀಯ ಭದ್ರತಾ ಆಯುಕ್ತ (RPF), ಡಾ. ಸಿದ್ದಪ್ಪ ದಿಂಡಾವರ್, ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕರು, ಡಾ.ವಿಶ್ವನಾಥ್, ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕರು, ಕೇಶವುಲು, ಸಹಾಯಕ ಸಿಬ್ಬಂದಿ ಅಧಿಕಾರಿ/ಬೆಂಗಳೂರು, ಇತರ ವೈದ್ಯಾಧಿಕಾರಿಗಳು ಮತ್ತು ಅಧಿಕಾರಿಗಳು ಹಾಗೂ…
ಬೆಂಗಳೂರು: ಬಿಎಂಟಿಸಿಯ ನೂತನ ಅಧ್ಯಕ್ಷರಾಗಿ ವಿ.ಎಸ್ ಆರಾಧ್ಯ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅವರನ್ನು ಇಂದು ರಾಜ್ಯ ಸರ್ಕಾರವು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿತ್ತು. ದಿನಾಂಕ 29-09-2025 ರಂದು ವಿ.ಎಸ್.ಆರಾಧ್ಯ ರವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ. ಈ ಅಧಿಕಾರ ವಹಿಸುವ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್. ಆರ್ (ಭಾ.ಆ.ಸೇ), ನಿರ್ದೇಶಕರು (ಮಾ.ತಂ) ಶಿಲ್ಪಾ. ಎಂ (ಭಾ.ಆ.ಸೇ) ಹಾಗೂ ನಿರ್ದೇಶಕರು (ಭ&ಜಾ) ಅಬ್ದುಲ್ ಅಹದ್ (ಭಾ.ಪೊ.ಸೇ) ಉಪಸ್ಥಿತರಿದ್ದರು. https://kannadanewsnow.com/kannada/asi-on-duty-at-minister-zameer-ahmeds-janata-darshan-dies/ https://kannadanewsnow.com/kannada/shocking-a-sinful-mother-beat-her-own-son-to-death-with-a-stick-for-asking-for-chicken/
ಬೆಂಗಳೂರು: ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ಎನ್ನುವಂತೆ ಸರ್ಕಾರದಿಂದ ವಯೋಮಿತಿ 3 ವರ್ಷಗಳು ಸಡಿಲಿಸಿ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಎಲ್ಲಾ ನೇಮಕಾತಿಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಮೂರು ವರ್ಷ ವಯೋಮಿತಿಯನ್ನು ಎಲ್ಲಾ ವರ್ಗದವರಿಗೆ ಸಡಿಲಿಸಿ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಲಾಗಿದ್ದು, ದಿನಾಂಕ25.11.2024ರ, ದಿನಾಂಕ 29.03.2025ರ ಮತ್ತು ದಿನಾಂಕ 11.04.2025ರ ಸರ್ಕಾರದ ಸುತ್ತೋಲೆಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಯಾಗುವವರೆಗೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಅಥವಾ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ದಿನಾಂಕ: 28-10-2024 ರಿಂದ ಮುಂದಿನ ಆದೇಶದವರೆವಿಗೂ ಹೊರಡಿಸಬಾರದೆಂದು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಲಾಗಿರುತ್ತದೆ ಎಂದಿದೆ. ದಿನಾಂಕ 25.08.2025 ರ ಸರ್ಕಾರದ ಆದೇಶದಲ್ಲಿ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಅಗತ್ಯ ಮಾರ್ಪಾಡುಗಳೊಂದಿಗೆ ಅಂಗೀಕರಿಸಿ, ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳನ್ನು 5 ಪ್ರವರ್ಗಗಳ ಬದಲಾಗಿ ಪ್ರವರ್ಗ- ಎ ಪ್ರವರ್ಗ-ಬಿ…
ಬೆಂಗಳೂರು: ಜಾತಿಗಣತಿಯ ವೇಳೆಯಲ್ಲಿ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಇಬ್ಬರು ಗಣತಿದಾರರನ್ನು ಅಮಾನತುಗೊಳಿಸಿ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ರಾಜ್ಯಾಧ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸಲಾಗುತ್ತಿದೆ. ಈ ವೇಳೆ ಕರ್ತವ್ಯಲೋಪ ಎಸಗಿದಂತ ಇಬ್ಬರು ಗಣತಿದಾರರನ್ನು ಅಮಾನತುಗೊಳಿಸಿ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅಮೃತ್ ಭಟ್, ಉಮೇಶ್ ಎಂಬುವವರೇ ಅಮಾನತುಗೊಂಡ ಸಿಬ್ಬಂದಿಯಾಗಿದ್ದಾರೆ. ಈ ಇಬ್ಬರು ಜಾತಿಗಣತಿ ವೇಳೆಯಲ್ಲಿ ಗಣತಿಕಾರ್ಯದ ಸಂದರ್ಭದಲ್ಲಿ ಕರ್ತವ್ಯ ಲೋಪವೆಸಗಿದ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಸಸ್ಪೆಂಡ್ ಮಾಡಿ ಡಿಸಿ ಆದೇಶಿಸಿದ್ದಾರೆ. https://kannadanewsnow.com/kannada/asi-on-duty-at-minister-zameer-ahmeds-janata-darshan-dies/ https://kannadanewsnow.com/kannada/shocking-a-sinful-mother-beat-her-own-son-to-death-with-a-stick-for-asking-for-chicken/
ಬಳ್ಳಾರಿ: ಇಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಡಿಸಿ ಕಚೇರಿ ಮುಂಭಾಗದಲ್ಲಿ ನಡೆಯುತ್ತಿದ್ದಂತ ಜನತಾ ದರ್ಶನದಲ್ಲಿ ಬಂದೋಬಸ್ತ್ ನಲ್ಲಿ ಎಎಸ್ಐ ತೊಡಗಿದ್ದರು. ಇಂತಹ ಎಎಸ್ಐ ಒಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬಳ್ಳಾರಿಯ ಹೊಸ ಡಿಸಿ ಕಚೇರಿ ಮುಂಭಾಗದಲ್ಲಿ ಸಚಿವ ಜಮೀರ್ ಅಹ್ಮದ್ ಜನತಾ ದರ್ಶನವನ್ನು ನಡೆಸುತ್ತಿದ್ದಾರೆ. ಈ ಜನತಾ ದರ್ಶನದ ಬಂದೋಬಸ್ತ್ ಕಾರ್ಯಕ್ಕೆ ಬಳ್ಳಾರಿಯ ಎಪಿಎಂಸಿ ಠಾಣೆಯ ಎಎಸ್ಐ ಶ್ರೀನಿವಾಸ ರಾವ್(54) ನಿಯೋಜಿಸಲಾಗಿತ್ತು. ಕರ್ತವ್ಯದ ವೇಳೆಯಲ್ಲಿ ಲೋ ಬಿಪಿಯಿಂದ ಎಎಸ್ಐ ಶ್ರೀನಿವಾಸ ರಾವ್ ಕುಸಿದು ಬಿದ್ದಿದ್ದರು. ಅವರನ್ನು ಕೂಡಲೇ ಬಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಶ್ರೀನಿವಾಸ ರಾವ್ ಅವರು ಮೃತಪಟ್ಟಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. https://kannadanewsnow.com/kannada/indias-indigenous-messaging-app-arattai-reaches-no-1-spot-on-play-store/ https://kannadanewsnow.com/kannada/shocking-a-sinful-mother-beat-her-own-son-to-death-with-a-stick-for-asking-for-chicken/
ನಾಳೆ ಮಂಗಳವಾರ ಬರುವ ಶಕ್ತಿಶಾಲಿ ದುರ್ಗಾಷ್ಟಮಿ. ನಾಳೆ ನೀವು ಈ ರೀತಿ ದುರ್ಗಾ ದೇವಿಯನ್ನು ಪೂಜಿಸಿದರೆ, ಮುಂದಿನ 3 ದಿನಗಳಲ್ಲಿ ನಿಮ್ಮ ಎಲ್ಲಾ ಕಷ್ಟಗಳು ಧೂಳಿಪಟವಾಗುತ್ತವೆ. ನಾಳೆ, ಮಂಗಳವಾರ, 30-09-2025, ದುರ್ಗಾಷ್ಟಮಿ ಪೂಜೆ ಇರುತ್ತದೆ. ಜೀವನದಲ್ಲಿ ಬರುವ ಅಂತ್ಯವಿಲ್ಲದ ದುಃಖ ಮತ್ತು ಸಂಕಟಗಳಿಂದ ಮುಕ್ತಿ ಪಡೆಯಲು ನೀವು ದುರ್ಗಾ ದೇವಿಯನ್ನು ಪೂಜಿಸಬೇಕು. ಯಾವುದೇ ಸಂಭಾವ್ಯ ಹಾನಿಯನ್ನು ತೆಗೆದುಹಾಕಲು ದುರ್ಗಾ ದೇವಿಯು ಅವತರಿಸಿದಳು. ಅಷ್ಟೇ ಅಲ್ಲ, ದುರ್ಗಾ ದೇವಿಯು ವಿಜಯದ ದೇವತೆಯೂ ಆಗಿದ್ದಾಳೆ. ದುರ್ಗಾ ದೇವಿಯನ್ನು ಪೂಜಿಸುವವರು ಎಂದಿಗೂ ಸೋಲನ್ನು ಎದುರಿಸುವುದಿಲ್ಲ. ಹಿಂದೆಂದಿಗಿಂತಲೂ ಹೆಚ್ಚಾಗಿ, ಈ ವರ್ಷ ಅಷ್ಟಮಿ ತಿಥಿ ಮಂಗಳವಾರ ಬಂದಿದೆ. ಈ ದಿನವನ್ನು ದುರ್ಗಾ ಅಷ್ಟಮಿ ಎಂದು ಆಚರಿಸಲಾಗುತ್ತದೆ. ಈ ದಿನವನ್ನು ನಾವು ತಪ್ಪಿಸಿಕೊಳ್ಳಬಹುದೇ? ದುರ್ಗಾ ದೇವಿಯನ್ನು ಪೂಜಿಸಲು ಮಂಗಳವಾರಕ್ಕಿಂತ ಉತ್ತಮವಾದ ದಿನ ಇನ್ನೊಂದಿಲ್ಲ. ವಿಶೇಷವಾಗಿ ಮಂಗಳವಾರದಂದು, ರಾಹು ಕಾಲದಲ್ಲಿ ದುರ್ಗಾ ದೇವಿಯನ್ನು ಪೂಜಿಸುವವರಿಗೆ ಯಾವುದೇ ವೈಫಲ್ಯಗಳು ಎದುರಾಗುವುದಿಲ್ಲ. ಈ ಶಕ್ತಿಶಾಲಿ ದಿನದಂದು ದುರ್ಗಾ ದೇವಿಯನ್ನು ಹೇಗೆ ಪೂಜಿಸಬೇಕು. ಆಧ್ಯಾತ್ಮಿಕ ಮಾಹಿತಿಯು…
ನವದೆಹಲಿ: ಭಾರತದ ಸ್ವದೇಶಿ ಮೆಸೇಜಿಂಗ್ ಅಪ್ಲಿಕೇಶನ್ ಅರಟ್ಟೈ, ಆಪ್ ಸ್ಟೋರ್ ಶ್ರೇಯಾಂಕದಲ್ಲಿ ಪ್ರಮುಖ ಜಾಗತಿಕ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದೆ. ಇದು ಅದರ ಬೆಳೆಯುತ್ತಿರುವ ಆಕರ್ಷಣೆ ಮತ್ತು ಅದರೊಂದಿಗೆ ಬರುವ ಒತ್ತಡ ಎರಡನ್ನೂ ಎತ್ತಿ ತೋರಿಸುವ ಒಂದು ಮೈಲಿಗಲ್ಲು. ಮೂಲತಃ 2021 ರಲ್ಲಿ ಜೊಹೊ ಅವರಿಂದ ಪ್ರಾರಂಭಿಸಲ್ಪಟ್ಟ ಅರಟ್ಟೈ (“ಚಾಟ್” ಅಥವಾ “ಚಿಟ್-ಚಾಟ್” ಗಾಗಿ ತಮಿಳು ಪದ) ಇತ್ತೀಚಿನವರೆಗೂ ಪ್ರಾಯೋಗಿಕ ಯೋಜನೆಯಾಗಿ ಪರಿಗಣಿಸಲ್ಪಟ್ಟಿತ್ತು. ಆದರೆ ಡೇಟಾ ಗೌಪ್ಯತೆ, ಜಾಗತಿಕ ಕಣ್ಗಾವಲು ಮತ್ತು “ತಂತ್ರಜ್ಞಾನ ಸಾರ್ವಭೌಮತ್ವ”ದ ಬಗ್ಗೆ ಹೆಚ್ಚುತ್ತಿರುವ ಕಾಳಜಿಗಳೊಂದಿಗೆ ಪ್ರಸ್ತುತ ವಾತಾವರಣದಲ್ಲಿ. “ಸ್ಪೈವೇರ್-ಮುಕ್ತ, ಭಾರತದಲ್ಲಿ ತಯಾರಿಸಿದ” ಮೆಸೆಂಜರ್ ಆಗಿ ಅರಟ್ಟೈನ ಸ್ಥಾನೀಕರಣವು ಭಾರತೀಯರಲ್ಲಿ ಪ್ರತಿಧ್ವನಿಸಿದೆ. ಭಾರತದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಶಿಫಾರಸು ಮಾಡಿದ ಅಪ್ಲಿಕೇಶನ್ಗಳಲ್ಲಿ ಅರಟ್ಟೈ ಅನ್ನು ಉಲ್ಲೇಖಿಸಿ, ಸ್ಥಳೀಯ ಡಿಜಿಟಲ್ ಪ್ಲಾಟ್ಫಾರ್ಮ್ಗಳಿಗೆ ಒಲವು ತೋರುವಂತೆ ನಾಗರಿಕರನ್ನು ಸಾರ್ವಜನಿಕವಾಗಿ ಒತ್ತಾಯಿಸಿದಾಗ ಈ ಆವೇಗವು ಹೆಚ್ಚಾಯಿತು. ಅದೇ ಸಮಯದಲ್ಲಿ, ವಿವೇಕ್ ವಾಧ್ವಾ ಅವರಂತಹ ಉನ್ನತ-ಪ್ರೊಫೈಲ್ ತಂತ್ರಜ್ಞಾನದ ಧ್ವನಿಗಳು ಇದನ್ನು ಪ್ರಯತ್ನಿಸಿದವು…
ಬೆಂಗಳೂರು: ಥಣಿಸಂದ್ರದ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಮಾನ್ಯತೆಯನ್ನು ಶಾಲಾ ಶಿಕ್ಷಣ ಇಲಾಖೆ ರದ್ದುಪಡಿಸಿದ್ದು, ಶಾಲೆ ನಡೆಸುತ್ತಿರುವ ಮದರಸಾಗೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ನೀಡಿರುವ ಐದು ಲಕ್ಷ ರೂಪಾಯಿ ಅನುದಾನ ವಾಪಸ್ ಪಡೆಯುವುದು ಸೇರಿದಂತೆ ಎಲ್ಲಾ ಅಂಶಗಳನ್ನು ಕಾನೂನಿನನ್ವಯ ಪರಿಶೀಲಿಸುವಂತೆ ರಾಜ್ಯ ಹೈಕೋರ್ಟ್ ಆದೇಶಿಸಿದೆ. ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ವಿಭು ಭಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ನೇತೃತ್ವದ ವಿಭಾಗೀಯಪೀಠ ಈ ಕುರಿತಾದ ಅರ್ಜಿ ವಿಚಾರಣೆ ನಡೆಸಿ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆ ನಡೆಸುತ್ತಿರುವ ಮದರಸಾಗೆ ನೀಡಿರುವ ಹಣದ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಆದೇಶಿಸಿದೆ. ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಈ ಪ್ರಕರಣದಲ್ಲಿ ಅರ್ಜಿದಾರರ ಆರೋಪಗಳ ಸತ್ಯಾಸತ್ಯತೆ ಕುರಿತು ನ್ಯಾಯಾಲಯ ಯಾವುದೇ ಅಭಿಪ್ರಾಯ ನೀಡುವುದಿಲ್ಲ. 5 ಲಕ್ಷ ರೂ ವಾಪಸು ಪಡೆಯುವ ವಿಷಯ ಸೇರಿದಂತೆ ಎಲ್ಲಾ ಅಂಶಗಳನ್ನು ಕಾನೂನಿನ ಪ್ರಕಾರ ಪರಿಶೀಲಿಸಬೇಕು, ಅನಗತ್ಯವಾಗಿ ವಿಳಂಬವಿಲ್ಲದೆ ಕ್ರಮ ಕೈಗೊಳ್ಳಬೇಕು…
ಬೆಂಗಳೂರು: ಚಿತ್ರವೊಂದನ್ನು ಡಬ್ಬಿಂಗ್ ಮಾಡುವುದಾಗಿ ನಂಬಿಸಿದಂತ ಆನ್ ಲೈನ್ ವಂಚಕರು ಖ್ಯಾತ ಸ್ಯಾಂಡಲ್ ವುಡ್ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬುಗೆ 4.25 ಲಕ್ಷ ಪಡೆದು ವಂಚಿಸಿದ್ದಾರೆ. ಸೈಬರ್ ವಂಚಕರ ಕರಾಮತ್ತು ದಿನದಿಂದ ದಿನಕ್ಕೆ ಹೆಚ್ಚಿದೆ. ಇದೀಗ ಕನ್ನಡದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಬಳಿಯಲ್ಲಿಯೂ ಬರೋಬ್ಬರಿ 4.25 ಲಕ್ಷವನ್ನು ಸೈಬರ್ ವಂಚಕರು ದೋಚಿದ್ದಾರೆ. ನಟ ಉಪೇಂದ್ರ, ಪತ್ನಿ ಪ್ರಿಯಾಂಕಾಗೆ ವಂಚಿಸಿದ್ದ ಬೆನ್ನಲ್ಲೇ ರಾಜೇಂದ್ರ ಸಿಂಗ್ ಬಾಬು ಅವರಿಗೆ ರಕ್ತ ಕಾಶ್ಮೀರ ಸಿನಿಮಾ ಡಬ್ಬಿಂಗ್ ನೆಪದಲ್ಲಿ ಆಧಾರ್ ಸಂಖ್ಯೆ, ಪಾನ್ ಕಾರ್ಡ್ ದಾಖಲೆ ಪಡೆದು ಸೈಬರ್ ವಂಚಕರು 4.25 ಲಕ್ಷ ರೂಪಾಯಿಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೆ ರಕ್ತ ಕಾಶ್ಮೀರ ಸಿನಿಮಾವನ್ನು ತೆಲುಗು ಭಾಷೆಗೆ ಡಬ್ಬಿಂಗ್ ಮಾಡುವಂತ ಆಮಿಷವೊಡ್ಡಿ ಸೈಬರ್ ವಂಚಕರು ವಂಚಿಸಿದ್ದಾರೆ. ಈ ಸಂಬಂಧ ಸೈಬರ್ ಕ್ರೈ ಪೊಲೀಸರಿಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ದೂರು ನೀಡಿದ್ದಾರೆ.







