Author: kannadanewsnow05

ಮೈಸೂರು : ರಾಜ್ಯದಲ್ಲಿ ಸಾಲು ಸಾಲು ದರೋಡೆ ಪ್ರಕರಣಗಳು ನಡೆಯುತ್ತಿದ್ದು, ಇದೀಗ ಮೈಸೂರಿನಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಹಾಡು ಹಗಲೇ ಕಾರನ್ನು ಅಡ್ಡಗಟ್ಟಿ ಮುಸುಕು ದಾರಿಗಳು ದರೋಡೆ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ಜಯಪುರ ಹೋಬಳಿಯ ಹಾರೋಹಳ್ಳಿ ಬಳಿ ಈ ಒಂದು ಬೆಚ್ಚಿಬಿಳಿಸುವ ಘಟನೆ ನಡೆದಿದೆ. ಹೌದು ಮೈಸೂರು ಜಿಲ್ಲೆಯ ಜಯಪುರ ಹೋಬಳಿ ಹಾರೋಹಳ್ಳಿ ಬಳಿ ಈ ಒಂದು ಘಟನೆ ನಡೆದಿದೆ. ಮೈಸೂರಿನಲ್ಲಿ ಕಾರು ಅಡ್ಡಗಟ್ಟಿ ಮುಸುಕು ಧಾರಿಗಳು ರಾಬರಿ ನಡೆಸಿದ್ದಾರೆ. ಮೈಸೂರು ಜಿಲ್ಲೆಯ ಜಯಪುರ ಹೋಬಳಿ ಹಾರೋಹಳ್ಳಿ ಬಳಿ ಈ ಒಂದು ಘಟನೆ ನಡೆದಿದೆ. ಸುತ್ತ ಮುತ್ತ ಇನ್ನು ಅನೇಕ ವಾಹನಗಳಿದ್ದರೂ ಕೂಡ ಉಸ್ಕೊ ದಾರಿಗಳು ಲೆಕ್ಕಿಸದೆ ಕಾರಣ ಅಡಗಟ್ಟಿ ದರೋಡೆ ನಡೆಸುತ್ತಿರುವ ದೃಶ್ಯ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ. ಅಕ್ಕಪಕ್ಕದ ವಾಹನಗಳಲ್ಲಿರುವ ಜನರು ಕೂಗಾಟ ನಡೆಸುತ್ತಿದ್ದರು ಕೂಡ ಲೆಕ್ಕಿಸದೆ ದರೋಡೆಕೋರರು ಕಾರನ್ನು ಅಡ್ಡಗಟ್ಟಿ ಮಾಡಿ ದರೋಡೆ ನಡೆಸಿದ್ದಾರೆ. ಸದ್ಯ ಹಣ ಕಳೆದುಕೊಂಡ ಕಾರಿನ ವ್ಯಕ್ತಿಯನ್ನು ಪೋಲೀಸರು ವಿಚಾರಣೆ…

Read More

ಬೆಂಗಳೂರು : ಇಂದು ಬೆಂಗಳೂರಿನಲ್ಲಿ ಲಾರಿ, ಕಾರು ಹಾಗೂ ಖಾಸಗಿ ಬಸ್ ನಡುವೆ ಭೀಕರವಾದಂತಹ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಒಂದು ಸಣ್ಣ ಅಪಘಾತದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಗುಂಡೇನಹಳ್ಳಿಯ ಬಳಿ ಸರಣಿ ಅಪಘಾತ ಸಂಭವಿಸಿದೆ. ಕಾರು ಲಾರಿ ಹಾಗೂ ಖಾಸಗಿ ಬಸ್ ನಡುವೆ ಈ ಒಂದು ಭೀಕರ ಸರಣಿ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದಂತಹ ಕಾರು ಡಿಕ್ಕಿ ಹೊಡೆದಿದೆ. ಕಾರು ಲಾರಿಗೆ ಡಿಕ್ಕಿ ಹೊಡೆದ ಬಳಿಕ ಅದೇ ವೇಗದಲ್ಲಿ ಬಂದಂತಹ ಖಾಸಗಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಆದರೆ ಲಾರಿ ಚಾಲಕನಿಗೆ ಈ ಒಂದು ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದು ಬಿಟ್ಟರೆ, ಯಾವುದೇ ರೀತಿಯಾದಂತಹ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆ ಕುರಿತಂತೆ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಹಾಗೂ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಬೆಂಗಳೂರಿನ ಜಾಲಹಳ್ಳಿಯ ಮೆಟ್ರೋ ನಿಲ್ದಾಣದಲ್ಲಿ 49 ವರ್ಷದ ವ್ಯಕ್ತಿಯೊಬ್ಬರು ಮೆಟ್ರೋ ಟ್ರೈನ್ ಬರುತ್ತಿದ್ದಂತೆ ಎರಡು ಹಳಿಗಳ ಮಧ್ಯ ಮಲಗಿ ಆತ್ಮಹತ್ಯೆಗೆ  ಯತ್ನಿಸಿರುವ ಘಟನೆ ನಡೆದಿದೆ. ಹೌದು ಬೆಂಗಳೂರಿನ ಮೆಟ್ರೋ ಹಳಿಗೆ ಜಿಗಿದು ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಾಲಹಳ್ಳಿ ಮೆಟ್ರೋ ರೈಲು ನಿಲ್ದಾಣದಲ್ಲಿ ಈ ಒಂದು ಘಟನೆ ನಡೆದಿದೆ. ಮೆಟ್ರೋ ರೈಲು ಬರುತಿದ್ದಂತೆ ವ್ಯಕ್ತಿ ಎರಡು ಹಳಿಗಳ ಮಧ್ಯ ಮಲಗಿದ್ದಾನೆ. ಜಾಲಹಳ್ಳಿಯ ಹಸಿರು ಮಾರ್ಗದಲ್ಲಿ ಮೆಟ್ರೋ ಟ್ರೈನ್ ಬರುವಾಗ ಈ ಒಂದು ಘಟನೆ ನಡೆದಿದೆ. ಕೂಡಲೇ ಮೆಟ್ರೋ ಸಿಬ್ಬಂದಿಗಳು ವ್ಯಕ್ತಿಯನ್ನು ರಕ್ಷಣೆ ಮಾಡಿ ವಶಕ್ಕೆ ಪಡೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ವೇಳೆ ಬಿಎಂಆರ್‌ಸಿಎಲ್ ಮೆಟ್ರೋ ಸಂಚಾರ ಸ್ಥಗಿತಗೊಳಿಸಿದೆ. ಈ ಹಿನ್ನಲೆಯಲ್ಲಿ ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಇಂದು ಬೆಳಿಗ್ಗೆ 10.26ಕ್ಕೆ ಈ ಒಂದು ಘಟನೆ ನಡೆದಿದೆ.ಅನಿಲ್ ಕುಮಾರ್ ಪಾಂಡೆ (49)…

Read More

ಬೆಂಗಳೂರು : ಆಸ್ತಿ ವಿಚಾರಕ್ಕೆ ಸ್ವಂತ ಅಣ್ಣನ ಮಗನನ್ನೇ ಹತ್ಯೆಗೈದ ಚಿಕ್ಕಪ್ಪ ಕಾರಿನಿಂದ ಅಣ್ಣನ ಮಗನಿಗೆ ಅಪಘಾತ ಮಾಡಿ ಆತನ ಕೊಲೆಯಾದ ಬಳಿಕ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಾಕನಕುಪ್ಪೆ ಗ್ರಾಮದಲ್ಲಿ ನಡೆದಿದೆ. ಹೌದು ನೆಲಮಂಗಲ ತಾಲೂಕಿನ ಮಾಾಕನಕುಪ್ಪೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಮಾಕನಕುಪ್ಪೆಯಲ್ಲಿ ರವಿಕುಮಾರ್ ಎಂಬಾತನ ಹತ್ಯೆ ನಡೆದಿದೆ. ಮೃತ ರವಿ ತಂದೆ ಚಿಕ್ಕಣ್ಣಗು ಹಾಗೂ ತಮ್ಮ ಸುರೇಶ್ ಗಲಾಟೆ ಇತ್ತು. ಸುಮಾರು 19 ಗುಂಟೆ ಜಮೀನಿಗಾಗಿ ಸಹೋದರರ ನಡುವೆ ಗಲಾಟೆ ನಡೆದಿದೆ. ಮಗನನ್ನು ಕೊಂದರೆ ಎಲ್ಲಾ ಸರಿ ಹೋಗುತ್ತೆ ಎಂದು ಸುರೇಶ್ ಈ ಒಂದು ಕೃತ್ಯ ಎಸಗಿದ್ದಾನೆ. ಅಸ್ತಿಯ ವಿಚಾರವಾಗಿ ಅಣ್ಣನ ಮಗನನ್ನೇ ರಾಕ್ಷಸ ಚಿಕ್ಕಪ್ಪ ತನ್ನ ಕಾರಿನಿಂದ ಅಪಘಾತ ಮಾಡಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಯ ಬಳಿಕ ಚಿಕ್ಕಪ್ಪ ಸುರೇಶ್ ಪರಾರಿಯಾಗಿದ್ದು ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆಯ ಬಳಿಕ ಪರಾರಿಯಾಗಿರುವ ಸುರೇಶ್ ಗಾಗಿ ಪೊಲೀಸರು…

Read More

ಬೆಂಗಳೂರು : ಬಿಗ್ ಬಾಸ್ 11 ಸೀಸನ್ನಿನ ಸ್ಪರ್ಧಿ ರಜತ್ ಅವರ ಮಾಜಿ ಗೆಳತಿಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲರ್ಸ್ ಹರಿಬಿಡುತ್ತಿದ್ದಾರೆ. ಅಲ್ಲದೆ ಪ್ರಶದ್ ಪತ್ನಿ ಅಕ್ಷಿತಾ ಬಳಿ ಕೆಲವು ರೋಲರ್ಸ್ ಗಳು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ರಜತ್ಪತ್ನಿ ರಕ್ಷಿತಾ ಅವರು 10ಕ್ಕೂ ಹೆಚ್ಚು ಟ್ರೈಲರ್ ಪೇಜ್ ಗಳ ವಿರುದ್ಧ ದೂರು ನೀಡಿದ್ದು ಪೊಲೀಸರು ಇದೀಗ FIR ದಾಖಲಿಸಿಕೊಂಡಿದ್ದಾರೆ. ಹೌದು ಅಕ್ಷತಾ ಅವರ ಮಾಜಿ ಗೆಳತಿಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲರ್ಸ್ ಗಳು ಟ್ರೋಲ್ ಮಾಡುತ್ತಿದ್ದು, ಹಣ ನೀಡಿದರೆ ಫೋಟೋಗಳನ್ನು ಡಿಲೀಟ್ ಮಾಡುತ್ತೇವೆ ಎಂದು ರಜತ್ ಕುಟುಂಬಸ್ಥರಿಗೆ ಅಡ್ಮಿನ್ ಮಾಡಿದ್ದಾರೆ ಈ ವೇಳೆ ರಸದ ಪತ್ನಿ ಅಕ್ಷಿತ ಅವರು ಟ್ರೋಲರ್ಸ್ ಗಳ ಯುಪಿಐ ಐಡಿ ನಂಬರ್ ಹಣ ಕಳುಹಿಸಿದ್ದಾರೆ. ಹಣ ಹಾಕಿದ ಮೇಲೂ ಕೂಡ ಮತ್ತೆ ಫೋಟೋ ಅಪ್ಲೋಡ್ ಮಾಡಿ ಟ್ರೊಲ್ ಮಾಡಲಾಗಿದೆ. ಅಲ್ಲದೇ ಇತರೆ ಟ್ರೋಲ ಪೇಜ್…

Read More

ಮಂಡ್ಯ : ರೈತರ, ಸರ್ಕಾರಿ ಶಾಲೆಗಳ ಹಾಗೂ ಇತರೆ ಸರ್ಕಾರಿ ಕಚೇರಿಗಳ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಎಂದು ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಬಂದ್ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಇಂದು ಶ್ರೀರಂಗಪಟ್ಟಣದಲ್ಲಿ ಬೃಹತ್ ರ್‍ಯಾಲಿ ಆಯೋಜನೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಈ ಒಂದು ಪ್ರತಿಭಟನಾ ರ‍್ಯಾಲಿ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯ ಎದುರುಗಡೆ ಹಾದುಹೋಗುವ ಹಿನ್ನೆಲೆಯಲ್ಲಿ ಮಸೀದಿ ಸುತ್ತ 100ಕ್ಕೂ ಹೆಚ್ಚು ಪೊಲೀಸರು ನಿಯೋಜನೆ ಮಾಡಲಾಗಿದೆ. ಕುವೆಂಪು ವೃತ್ತದಿಂದ ತಾಲೂಕು ಕಚೇರಿಯ ವರೆಗೆ ಬೃಹತ್ ರ‍್ಯಾಲಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಬಹುತೇಕ ಅಂಗಡಿ ಮುಂಗಟುಗಳು ಸ್ತಬ್ಧವಾಗಿವೆ. ವಕ್ಫ್ ಬೋರ್ಡ್ ವಿರುದ್ಧ ಶ್ರೀರಂಗಪಟ್ಟಣದಲ್ಲಿ ಇಂದು ಭಾರಿ ಪ್ರತಿಭಟನೆ ನಡೆಯುತ್ತಿದ್ದು, ಶ್ರೀರಂಗಪಟ್ಟಣದಬಂದೆಗೆ ವಿವಿಧ ಸಂಘಟನೆಗಳಿಂದ ಕರೆ ನೀಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಶ್ರೀರಂಗಪಟ್ಟಣದಲ್ಲಿ ಬೃಹತ್ ರ‍್ಯಾಲಿ  ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಾಮಿಯಾ ಮಸೀದಿ ಸುತ್ತಮುತ್ತಲೂ ಕೂಡ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಇದೆ ಸಂದರ್ಭದಲ್ಲಿ ಜಾಮಿಯಾ ಮಸೀದಿಗೆ ಸಾರ್ವಜನಿಕರ ಪ್ರವೇಶ…

Read More

ಹಾಸನ : ಇತ್ತೀಚಿಗೆ ಆನ್ಲೈನ್ ಗೇಮ್ ಎನ್ನುವ ಗಿಳಿಗೆ ಬಿದ್ದು ಯುವ ಜನತೆ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡು ಕೊನೆಗೆ ಮಾನಸಿಕವಾಗಿ ಇನ್ನೊಂದು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ. ಹೌದು ಬೇಲೂರಿನ ಲಾಡ್ಜ್ ನಲ್ಲಿ ರಾಕೇಶ್ ಗೌಡ ಎನ್ನುವ ಯುವಕ ಸೂಸೈಡ್ ಮಾಡಿಕೊಂಡಿದ್ದಾನೆ. ಚೀಕನಹಳ್ಳಿ ಮೂಲದ ಉಮೇಶ್ ಎಂಬುವರ ಪತ್ರ ರಾಕೇಶ್ ಗೌಡ ಎಂದು ತಿಳಿದು ಬಂದಿದೆ. ರಾಕೇಶ್ ಸ್ಪಂದನ ಸ್ಪೂರ್ತಿ ಫೈನಾನ್ಸ್ ನಲ್ಲಿ ಮೃತ ರಾಕೇಶ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸಾವಿಗೂ ಮುನ್ನವೇ ರಾಕೇಶ್ ಗೌಡ ಡೆತ್ ನೋಟ್ ಕೂಡ ಬರೆದಿದ್ದಾನೆ ಎಂದು ತಿಳಿದುಬಂದಿದೆ. ಮೃತ ರಾಕೇಶ್ ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕದ ಅಧ್ಯಕ್ಷನಾಗಿದ್ದ ಎನ್ನಲಾಗಿದೆ. ಡೆತ್ ನೋಟ್ ನಲ್ಲಿ ಏನಿದೆ? ಆನ್ಲೈನ್ ಗೆ ನನ್ನ ಜೀವ ತೆಗೆದು ಬಿಡ್ತು. ಸಾಲ ತೀರಿಸಲಾಗಿದೆ ಈ ನಿರ್ಧಾರ ಮಾಡಿದ್ದೇನೆ. ಎರಡು ವರ್ಷದಿಂದ…

Read More

ನವದೆಹಲಿ : ಖೋ ಖೋ ವಿಶ್ವಕಪ್ 2025 ರಲ್ಲಿ, ಭಾರತೀಯ ಮಹಿಳಾ ತಂಡವು ನೇಪಾಳವನ್ನು 78-40 ಅಂಕಗಳಿಂದ ಸೋಲಿಸಿ ಮೊದಲ ಬಾರಿಗೆ ವಿಶ್ವ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆರಂಭದಿಂದಲೇ ಭಾರತದ ವನಿತೆಯಾರು ದಿಟ್ಟ ಪ್ರದರ್ಶನ ನೀಡಿ ಯಾವುದೇ ತಂಡಕ್ಕೆ ಪುನರಾಗಮನಕ್ಕೆ ಅವಕಾಶ ನೀಡಲಿಲ್ಲ. ಫೈನಲ್ ಪಂದ್ಯದಲ್ಲೂ ನೇಪಾಳ ಸಂಪೂರ್ಣವಾಗಿ ಭಾರತಕ್ಕೆ ತಲೆಬಾಗಿ ಭಾರತ ಗೆದ್ದಿತ್ತು. ಈ ಪಂದ್ಯದಲ್ಲಿ ಪ್ರಿಯಾಂಕಾ ಇಂಗ್ಲೆ ನೇತೃತ್ವದ ಭಾರತ ತಂಡ ಇತಿಹಾಸ ಸೃಷ್ಟಿಸಿದೆ. ಖೋ-ಖೋ ವಿಶ್ವಕಪ್ ಮೊದಲ ಬಾರಿಗೆ ನಡೆದಿದ್ದು, ಭಾರತ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿದೆ. ಅಂತಿಮ ಸುತ್ತಿನಲ್ಲಿ ಭಾರತದ ವನಿತೆಯರು ಅದ್ಭುತ ಆಟ ಪ್ರದರ್ಶಿಸಿ ನೇಪಾಳವನ್ನು ಸೋಲಿಸಿದರು. ಮೊದಲ ಸುತ್ತಿನಲ್ಲಿಯೇ ಭಾರತದ ವನಿತೆಯರು ಪಂದ್ಯದಲ್ಲಿ ಪ್ರಾಬಲ್ಯ ಮೆರೆದರು. ಭಾರತ ವನಿತೆಯರ ತಂಡ ಮೊದಲ ಸುತ್ತಿನಲ್ಲಿ ದಾಳಿ ನಡೆಸಿತು.  ಮತ್ತು ನೇಪಾಳದ ಡಿಫೆಂಡರ್‌ಗಳು ಪ್ರತಿರೋಧ ತೋರಲಿಲ್ಲ, ನಂತರ ಭಾರತ 34-0 ಅಂತರದಲ್ಲಿ ಮುನ್ನಡೆ ಸಾಧಿಸಿ ಇಲ್ಲಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಪ್ರಿಯಾಂಕಾ ಇಂಗ್ಲೆ ನೇತೃತ್ವದ ಭಾರತ…

Read More

ಉತ್ತರಕನ್ನಡ : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ದುಷ್ಕರ್ಮಿ ಒಬ್ಬ ಹಸುವಿನ ಕೆಚ್ಚಲು ಕೊಯ್ದ ಘಟನೆ ನಡೆದಿತ್ತು. ಬಳಿಕ ಮೈಸೂರಲ್ಲಿ ದೇವರಿಗೆ ಬಿಟ್ಟ ಕರುವಿನ ಬಾಲ ಕೊಯ್ದ ಎರಡನೇ ಘಟನೆ ನಡೆಯಿತು. ಇದೀಗ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡು ಎಂಬಲ್ಲಿ ರಾಕ್ಷಸರು ಗರ್ಭ ಧರಿಸಿದ್ದ ಹಸುವಿನ ಕುತ್ತಿಗೆ ಬೇರ್ಪಡಿಸಿ ದೇಹ ಮಾತ್ರ ಹೊತ್ತೊಯ್ದಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಘಟನಾ ಸ್ಥಳಕ್ಕೆ ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಇಂತಹ ಕೃತ್ಯಗಳಿಗೆ ಹೇಡಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಅವರೇ ಕಾರಣ ಎಂದು ಕಿಡಿ ಕಾರಿದ್ದಾರೆ. ಇಂದು ಘಟನಾ ಸ್ಥಳಕ್ಕೆ ದಿನಕರ ಶೆಟ್ಟಿ ಭೇಟಿ ನೀಡಿದ್ದು, ಸರ್ಕಾರದವರು ಶೆಟ್ಟಿ ಕೆಂಡಾಮಂಡಲವಾಗಿದ್ದಾರೆ. ಮೊನ್ನೆ ಹಸುವಿನ ಕೆಚ್ಚಲು ಕತ್ತರಿಸಿದಾಗ ಆರೋಪಿ ಮಾನಸಿಕ ಅಸ್ವಸ್ಥ ಹೇಳಿಕೆ ನೀಡಿದರು. ಮಾನಸಿಕ ಅಸ್ವಸ್ಥ ಆತ ಅಲ್ಲ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು. ಸಿಎಂ ಗೃಹ ಸಚಿವರು…

Read More

ಗೋವಾ : ಭಾರತದಲ್ಲಿ ಮೋಜು ಮಸ್ತಿ ಮಾಡಲು ಇರುವ ಏಕೈಕ ಪ್ರದೇಶವೆಂದರೆ ಅದು ಗೋವಾ. ದೇಶದ ಅನೇಕ ರಾಜ್ಯ, ಹಾಗೂ ವಿದೇಶಿಗರಿಂದ ಗೋವಾ ರಾಜ್ಯ ಯಾವಾಗಲೂ ತುಂಬಿ ತುಳುಕುತ್ತಿರುತ್ತದೆ. ಇದೀಗ ಗೋವಾದಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ಪ್ಯಾರಾಗ್ಲೆಡಿಂಗ್ ಮಾಡುತ್ತಿದ್ದ ವೇಳೆ ಪ್ರವಾಸಕ್ಕೆಂದು ಆಗಮಿಸಿದ ಮಹಿಳೆ ಹಾಗೂ ತರಬೇತುದಾರ ಕಂದಕಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಹೌದು ಪ್ಯಾರಾಗ್ಲೆಡಿಂಗ್ ಮಾಡುತ್ತಿದ್ದ ವೇಳೆ ಕಂದಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರವಾಸಿ ಮಹಿಳೆ ಮತ್ತು ಆಕೆಯ ತರಬೇತುದಾರ ಸಾವನಪ್ಪಿದ ಘಟನೆ ಉತ್ತರ ಗೋವಾದಲ್ಲಿ ನಡೆದಿದೆ.ನಿನ್ನೆ ಸಂಜೆ ಕೇರಿ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಪುಣೆ ನಿವಾಸಿ ಶಿವಾನಿ ಡೇಬಲ್ ಮತ್ತು ಆಕೆಯ ತರಬೇತುದಾರ ನೇಪಾಳ ಪ್ರಜೆ ಸುಮಲ್ ಸಂಜೆ 5 ಗಂಟೆ ಸುಮಾರಿಗೆ ಕೇರಿ ಪ್ರಸ್ಥಭೂಮಿಯಲ್ಲಿ ಕಂದಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದರೆ. ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಹಸ ಕ್ರೀಡಾ ಕಂಪನಿಯಲ್ಲಿ ಶಿವಾನಿ ಪ್ಯಾರಾಗ್ಲೆಡ್ ಮಾಡಿದ್ದಾರೆ. ಪ್ಯಾರಾಗ್ಲೆಡರ್ ಬಂಡೆಯಿಂದ ಟೇಕಾಫ್ ಆದ ಕೂಡಲೇ ಕಮರಿಗೆ ಬಿದ್ದಿದ್ದು,…

Read More