Author: kannadanewsnow05

ಕೇರಳ : ಜಾತ್ರೆಯ ಉತ್ಸವದ ಸಂದರ್ಭದಲ್ಲಿ ಮದವೇರಿದಂತಹ ಆನೆಯೊಂದು ಭೀಕರವಾಗಿ ದಾಳಿ ಮಾಡಿದ್ದು, ಈ ಒಂದು ಘಟನೆಯಲ್ಲಿ ಸುಮಾರು 20ಕ್ಕೂ ಅಧಿಕ ಜನರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳದ ಮಲಪ್ಪುರಂದಲ್ಲಿ ನಡೆದಿದೆ. ಹೌದು ಉತ್ಸವದ ವೇಳೆಗೆ ಆನೆ ಭಯಾನಕ ದಾಳಿ ಮಾಡಿದೆ. ಮದವೇರಿದ ಆನೆಯ ಅಟ್ಟಹಾಸಕ್ಕೆ 20ಕ್ಕೂ ಅಧಿಕ ಮಂದಿಗೆ ಗಾಯವಾಗಿದ್ದು, ಕೇರಳದ ಮಲಂಪ್ಪುರಂದಲ್ಲಿ ಈ ಒಂದು ಘಟನೆ ನಡೆದಿದೆ ಎನ್ನಲಾಗಿದೆ. ನಿನ್ನೆ ಪುತಿಯಂಗಡಿ ಉತ್ಸವದ ವೇಳೆ ಈ ಒಂದು ಅವಘಡ ಸಂಭವಿಸಿದೆ. ಉತ್ಸವಕ್ಕಾಗಿ ಐದು ಆನೆಗಳು ಸಾಲುಗಟ್ಟಿ ನಿಂತಿದ್ದವು.ಈ ವೇಳೆ ಏಕಾಏಕಿ ಒಂದು ಆನೆಗೆ ಮದುವೇರಿದ್ದು ದಾಳಿ ಮಾಡಿದೆ. ಆನೆ ದಾಳಿ ಮಾಡುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.

Read More

ಬೆಂಗಳೂರು : ಚೀನಾದಲ್ಲಿ ಹುಟ್ಟಿಕೊಂಡಂತಹ ಮಾರಕ ಎಚ್ಎಂಪಿವಿ ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದ್ದು, ಭಾರತದಲ್ಲಿ ಇದುವರೆಗೂ 8 ಪ್ರಕರಣಗಳು ಪತ್ತೆಯಾಗಿದೆ. ಈ ವಿಚಾರವಾಗಿ ರಾಜ್ಯ ಆರೋಗ್ಯ ಇಲಾಖೆಯ ಕೂಡ ಕ್ರಮ ಕೈಗೊಂಡಿದ್ದು ಮುಂಜಾಗ್ರತ ಕ್ರಮವಾಗಿ ಜನರಲಿ ಜಾಗೃತಿ ಮೂಡಿಸುತ್ತಿದ್ದೂ, ಇದೇ ವಿಚಾರವಾಗಿ ಜನರು ಅನಗತ್ಯವಾಗಿ ಟೆಸ್ಟ್ ಮಾಡಿಸಿಕೊಂಡು ದುಂದು ವೆಚ್ಚ ಮಾಡಿಕೊಳ್ಳಬೇಡಿ ಎಂದು ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, HMPV ಟೆಸ್ಟ್ ಮಾಡಿಸಿ ದುಂದು ವೆಚ್ಚ ಮಾಡುವ ಅಗತ್ಯವಿಲ್ಲ. HMP ವೈರಸ್ ಬಗ್ಗೆ ಯಾರೂ ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲ. ಈ ಒಂದು ವೈರಸ್ ನಿಂದ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಅಲ್ಲದೆ ಜನರು ಅನಗತ್ಯವಾಗಿ ತಪಾಸಣೆ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಯಾವುದೇ ರೀತಿಯಾಗಿ ಜನರು ಭಯಪಡಬಾರದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

Read More

ಬೆಂಗಳೂರು : ಹೊಸ ವರ್ಷ ಶರಣೀಯ ಸಂದರ್ಭದಲ್ಲಿ ವಿದೇಶ ಪ್ರವಾಸ ಮುಗಿಸಿಕೊಂಡು ಭಾರತಕ್ಕೆ ಆಗಮಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ರಾಜ್ಯ ರಾಜಕಾರಣದಲ್ಲಿ ಹಲವು ಬದಲಾವಣೆ ಹಾಗೂ ಪಕ್ಷದ ಗೊಂದಲದ ನಡುವೆ ಅವರು ಇದೀಗ ದೇವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಹೌದು ಪಕ್ಷದೊಳಗಿನ ಗೊಂದಲದ ನಡುವೆ ಡಿಕೆ ಶಿವಕುಮಾರ್ ಅವರು ದೇವರ ಮೊರೆ ಹೋಗಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ನಾಳೆ ಬೆಳಿಗ್ಗೆ 8 ಗಂಟೆಗೆ ತಮಿಳುನಾಡಿಗೆ ತೆರಳಲ್ಲಿದ್ದಾರೆ. ಪ್ರತ್ಯಂಗಿರ ದೇವಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಬೆಂಗಳೂರಿನಿಂದ ಕುಂಭಕೋಣಂಗೆ ಡಿಕೆ ಶಿವಕುಮಾರ್ ತೆರಳಲ್ಲಿದ್ದು, ತಮಿಳುನಾಡಿನ ಕುಂಭಕೋಣಂ ನ ಪ್ರತ್ಯಂಗಿರ ದೇವಿ ದೇವಸ್ಥಾನದಲ್ಲಿ ಡಿಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಡಿನ್ನರ್ ಮೀಟಿಂಗ್ ಸೇರಿದಂತೆ ಹಲವು ಗೊಂದಲಗಳು ಪಕ್ಷದಲ್ಲಿ ಇರುವ ಕಾರಣ ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

Read More

ತುಮಕೂರು : ತುಮಕೂರಲ್ಲಿ ಡಿನ್ನರ್ ಮೀಟಿಂಗ್ ಕುರಿತು ಸಹಕಾರ ಖಾತೆ ಸಚಿವ ಕೆಎನ್ ರಾಜಣ್ಣ ಹೇಳಿಕೆ ನೀಡಿದ್ದು ಮೊನ್ನೆ ನಡೆದಿರುವಂತಹ ಡಿನ್ನರ್ ಮೀಟಿಂಗ್ ಬಗ್ಗೆ ಗೊಂದಲ ಆಗಿತ್ತು. ಆ ಗೊಂದಲದ ಜೊತೆಗೆ ಇನ್ನೊಂದು ಗೊಂದಲ ಆಗುವುದು ಬೇಡ ಎಂದು ಡಿನ್ನರ್ ಮೀಟಿಂಗ್ ಮುಂದೂಡಲಾಗಿದೆ ಹೊರತು ಕ್ಯಾನ್ಸಲ್ ಆಗಿಲ್ಲ ಎಂದು ಸಚಿವ ಕೆ. ಎನ್ ರಾಜಣ್ಣ ಸ್ಪಷ್ಟನೆ ನೀಡಿದರು. ಡಿನ್ನರ್ ಮೀಟಿಂಗ್ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಬೇಸರವಾಗಿರುವ ಕುರಿತು, ಡಿಕೆ ಶಿವಕುಮಾರ್ ಬೇಸರಾಗಲು ಅವರ ಆಸ್ತಿನ ಏನಾದರೂ ಬರೆಸಿಕೊಂಡಿದ್ದೀರಾ? ವಿಶ್ವವಿದ್ಯಾಲಯಗಳಲ್ಲಿ ಎಸ್ಸಿ, ಎಸ್ಟಿ ಮಕ್ಕಳಿಗೆ ಸೀಟು ಸಿಗುತ್ತಿಲ್ಲ. ಈ ವಿಚಾರ ಚರ್ಚೆ ಕರೆದರೆ ನೀವು ಮಾಡಬೇಡಿ ಅಂದ್ರೆ ಹೇಗೆ? ಇವೆಲ್ಲವೂ ಬಹಳಷ್ಟು ದಿನ ನಡೆಯಲ್ಲ. ಮುಂದಿನ ಮೀಟಿಂಗ್ಗಾಗಿ ದಿನಕ್ಕೆ ನಿಗದ ಮಾಡಿ ತಿಳಿಸುತ್ತೇವೆ ಎಂದರು. ಮುಂದಿನ ತಿಂಗಳು 14 ರಂದು ಎಂಎಂ ಹಿಲ್ಸ್ ನಲ್ಲಿ ಸಂಪುಟ ಸಭೆ ನಡೆಯಲಿದೆ.ಚಾಮರಾಜನಗರ ಜಿಲ್ಲೆಗೆ ಹೋದರೆ ಸಿಎಂ ಸ್ಥಾನ ಹೋಗುತ್ತೆ ಅಂತ ಹೇಳುತ್ತಿದ್ದಾರೆ. ಅಷ್ಟರೊಳಗೆ ಸಭೆ…

Read More

ಬೆಂಗಳೂರು : ದರ್ಶನ್ ಅವರು ನನ್ನ ಇಂಡಸ್ಟ್ರಿಯ ಗುರುಗಳು. ಅವರು ಚಾನ್ಸ್ ಕೊಡಲಿಲ್ಲ ಅಂದ್ರೆ ನಾನು ಈಗ ಎಲ್ಲೋ ಇರುತ್ತಿದ್ದೆ. ಮದುವೆಯಾಗಿ ಮಕ್ಕಳಾಗಿ ನಾನು ಎಲ್ಲೋ ಇರುತ್ತಿದ್ದೆ. ದರ್ಶನ್ ಅವರಿಗಾಗಿ ವಿಜಯಲಕ್ಷ್ಮಿ ಸಾಕಷ್ಟು ಯುದ್ಧ ಮಾಡಿದ್ದಾರೆ. ನಾನು ಅವಶ್ಯಕತೆ ಇದ್ದ ಕಡೆ ಮಾತ್ರ ಮಾತನಾಡುತ್ತೇನೆ.ಸುಮ್ ಸುಮ್ನೆ ಯಾರಿಗೂ ಬೇಲ್ ಸಿಗುವುದಿಲ್ಲ ನಟ ದರ್ಶನ್ ಅವರಿಗೆ ಬಿಲ್ ಸಿಕ್ಕಿದೆ. ಕಾನೂನಿದೆ ಸದ್ಯದಲ್ಲೇ ಎಲ್ಲರಿಗೂ ಸತ್ಯ ಗೊತ್ತಾಗುತ್ತದೆ ಎಂದು ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ತಿಳಿಸಿದ್ದಾರೆ. ದರ್ಶನ ಅವರು ಬೇಲ್ ಪಡೆದು ಬಿಡುಗಡೆಯಾದ ಬಳಿಕ ಯಾಕೆ ಭೇಟಿ ಆಗಿಲ್ಲ ಎಂದು ಮಾಧ್ಯಮಗಳು ಪ್ರಶ್ನೆಗೆ ಉತ್ತರಿಸಿದ ಅವರು, ನಾನು ದರ್ಶನ್‌ ಅವರನ್ನು ಯಾಕೆ ಭೇಟಿಯಾಗಲಿಲ್ಲ ಅಂದ್ರೆ, ಈಗ ಅವರ ವೈಯಕ್ತಿಕ ಸಮಯ. ಹಾಗಾಗಿ ಅವರಿಗೆ ವೈಯಕ್ತಿಕವಾಗಿ ಸಮಯದ ಅಗತ್ಯವಿದೆ. ಅವರು ತಮ್ಮ ಕುಟುಂಬದೊಂದಿಗೆ ಸ್ವಲ್ಪ ಕಾಲ ಕಳೆಯಲಿ. ನೋಡೋಣ ನಮಗೂ ಒಂದು ಟೈಮ್‌ ಬರುತ್ತೆ. ಅವರು ಸದ್ಯ ತಮ್ಮ ಸಮಯವನ್ನು ಸ್ಪೆಂಡ್‌ ಮಾಡಲಿ ಎಂದು…

Read More

ಬೆಂಗಳೂರು : ತಂದೆಯೊಬ್ಬರು ತಮ್ಮ ಮಗನನ್ನು ಶಾಲೆಗೆ ಬಿಡಲು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ, ಓವರ್ ಟೇಕ್ ಮಾಡುವ ಭರದಲ್ಲಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂಬದಿ ಕುಳಿತಿದ್ದ ತಮ್ಮ ಮಗನು ರಸ್ತೆಗೆ ಬಿದ್ದಿದ್ದಾನೆ.ತಕ್ಷಣ ವೇಗವಾಗಿ ಬಂದಂತಹ ಟ್ರಾಕ್ಟರ್ ಒಂದು ಆತನ ಮೇಲೆ ಹರಿದ ಪರಿಣಾಮ ಬಾಲಕ ಸಾವನಪ್ಪಿರುವ ಘಟನೆ ಬೆಂಗಳೂರಿನ ಹಗದೂರು ಮುಖ್ಯ ರಸ್ತೆ ವೈಟ್​ಫೀಲ್ಡ್​ನಲ್ಲಿ ನಡೆದಿದೆ. ಮೃತ ಬಾಲಕ ಕಾಂಗೇದ್ರ ತಂದೆ ಮಗನನ್ನು ಶಾಲೆಗೆ ಡ್ರಾಪ್​ ಮಾಡಲು ಕರೆದೊಯ್ಯುತ್ತಿದ್ದರು. ಈ ವೇಳೆ ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್​ರನ್ನು ಓವರ್​ ಟೇಕ್​ ಮಾಡಲು ಮುಂದಾಗಿದ್ದಾರೆ. ಆದರೆ ಓವರ್​ಟೇಕ್​ ಮಾಡುವ ವೇಳೆ ಎದುರುಗಡೆಯಿಂದ ಮತ್ತೊಂದು ಬೈಕ್ ಬಂದಿದ್ದು. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್​ ಕೆಳಗೆ ಬಿದ್ದಿದೆ. ಈ ವೇಳೆ ಬಾಲಕ ಕಾಗೇಂದ್ರ ಪಕ್ಕದಲ್ಲಿ ಸಾಗುತ್ತಿದ್ದ ಟ್ರ್ಯಾಕ್ಟರ್​ ಟ್ಯಾಂಕರ್​ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಬಾಲಕನ ಮೇಲೆ ಟ್ಯಾಂಕರ್​ ಹರಿದಿದೆ. ಗಾಯಗೊಂಡಿದ್ದ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ಚಿಕಿತ್ಸೆ ಫಲಿಸದೆ ಬಾಲಕ ಸಾವನ್ನಪ್ಪಿದ್ದಾನೆ.…

Read More

ಬೆಂಗಳೂರು : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರನ್ನು ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು ಅರೆಸ್ಟ್ ಮಾಡಿದ್ದರು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ಪ್ರಕರಣದ ಕುರಿತು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಹೌದು ಸಿಟಿ ರವಿ ಬಂಧನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದ ಡಿಸೆಂಬರ್ 31ರಂದೆ ಥಾವರ್ ಚಂದ್ ಗೆಹ್ಲೊಟ್ ಅವರು ಪತ್ರ ಬರೆದಿದ್ದು, ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿ ಪತ್ರ ಬರೆದಿದ್ದಾರೆ. ಸಿಟಿ ರವಿ ಬಂಧನವನ್ನು ಗಂಭೀರವಾಗಿ ಪರಿಗಣಿಸಿ. ಇದು ಚುನಾಯಿತ ಜನಪ್ರತಿನಿಧಿಗೆ ಸಂಬಂಧಿಸಿದಂತಹ ವಿಚಾರವಾಗಿದೆ. ಹೀಗಾಗಿ ಮಧ್ಯಪ್ರದೇಶ ಮಾಡಿದ ರಾಜ್ಯಪಾಲರು, ಕ್ರಮ ಕೈಗೊಳ್ಳಿ ಎಂದು ಸಿಎಂಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸದನದಲ್ಲಿ ಎಂಎಲ್ಸಿ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪ್ರಾಸ್ಟಿಟ್ಯೂಟ್…

Read More

ಉತ್ತರಪ್ರದೇಶ : ಉತ್ತರ ಪ್ರದೇಶದ ಹರ್ದೋಯಿಯಲ್ಲಿ ಭಿಕ್ಷುಕನ ಜೊತೆ ಓಡಿಹೋದೆ ಎಂದು ಪತಿ ಆರೋಪಿಸಿರುವುದು ಸುಳ್ಳು. ತನ್ನ ಪತಿ ಪದೇ ಪದೇ ನಿಂದನೆ ಮತ್ತು ಥಳಿಸಿದ್ದರಿಂದ ಸಂಬಂಧಿಕರ ಮನೆಗೆ ತೆರಳಿದ್ದೆ ಎಂದು ಮಹಿಳೆಯು ಪೊಲೀಸರಿಗೆ ತಿಳಿಸಿದ್ದಾರೆ. ಹೌದು ನಿನ್ನೆ ನೀಡಿದ ಹೇಳಿಕೆಯಲ್ಲಿ, ಎಫ್‌ಐಆರ್ ದಾಖಲಾದ ನಂತರ ಮಹಿಳೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು ಎಂದು ಹರ್ದೋಯ್ ಪೊಲೀಸರು ತಿಳಿಸಿದ್ದಾರೆ. ಪತಿ ರಾಜು ತನ್ನನ್ನು ನಿಂದಿಸಿ ಥಳಿಸುತ್ತಾನೆ ಎಂದು ರಾಜೇಶ್ವರಿ ಹೇಳಿದ್ದಾರೆ.ಇದರಿಂದ ಮನನೊಂದ ಆಕೆ ಫರೂಕಾಬಾದ್‌ನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿದ್ದಾಳೆ. ಮಹಿಳೆ ಯಾರೊಂದಿಗಾದರೂ ಹೋಗಿದ್ದಾಳೆ ಎಂಬ ಆರೋಪ ಸುಳ್ಳು ಮತ್ತು ನಿರಾಧಾರವಾಗಿದೆ, ನಾವು ಮುಂದಿನ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಹಿನ್ನೆಲೆ? ರಾಜು ತನ್ನ ದೂರಿನಲ್ಲಿ ತನ್ನ ಪತ್ನಿ ರಾಜೇಶ್ವರಿ ಮತ್ತು ಅವರ ಮಕ್ಕಳೊಂದಿಗೆ ಹರ್ದೋಯ್ನ ಹರ್ಪಾಲ್ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 45 ವರ್ಷದ ಭಿಕ್ಷುಕ ನನ್ಹೆ ಪಂಡಿತ್ ಕೆಲವೊಮ್ಮೆ ತಮ್ಮ ನೆರೆಹೊರೆಯಲ್ಲಿ ಭಿಕ್ಷೆ ಬೇಡುತ್ತಿದ್ದರು ಮತ್ತು…

Read More

ಚಿಕ್ಕಮಗ : ಕರ್ನಾಟಕದಲ್ಲಿ ಇಂದು ಬಹು ದೊಡ್ಡ ಶರಣಾಗತಿ ನಡೆಯುತ್ತಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಈ ಒಂದು ಶರಣಾಗತಿ ನಡೆಯಲಿದೆ. ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ಆರು ಜನ ನಕ್ಸಲರು ಇಂದು ಚಿಕ್ಕಮಂಗಳುರು ಜಿಲ್ಲಾ ಆಡಳಿತದ ಮುಂದೆ ಶರಣಾಗಬೇಕಿತ್ತು.ಆದರೆ ಸಿಎಂ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಇದೀಗ ನಕ್ಸಲರು ಬೆಂಗಳೂರಿಗೆ ಆಗಮಿಸುತ್ತಿದ್ದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ಅವರ ಎದುರು ಶರಣಾಗಲಿದ್ದಾರೆ ಎಂದು ತಿಳಿದು ಬಂದಿದೆ . ಹೌದು ಸಿಎಂ ಹಾಗೂ ಗೃಹ ಸಚಿವರ ಮುಂದೆ 6 ನಕ್ಸಲರು ಶರಣಾಗಲಿದ್ದಾರೆ. ಬಾಳೆಹೊನ್ನುರಿನಿಂದ ಈಗಾಗಲೇ ನಕ್ಸಲರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನಕ್ಸಲರನ್ನು ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ಕರೆತರುತ್ತಿದ್ದಾರೆ. ಚಿಕ್ಕಮಂಗಳೂರು ಎಸ್ಪಿ ವಿಕ್ರಂ ಆಮ್ಟೆ, ISD ಎಸ್ ಪಿ ಹರಿರಾಮ ಶಂಕರ್, ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್ ನೇತೃತ್ವದಲ್ಲಿ ಶರಣಾಗತಿ ಅಗಲಿದ್ದಾರೆ.ಸಿಎಂ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ 6 ನಕ್ಸಲರು ಇದೀಗ ಬೆಂಗಳೂರಿನ ಕಡೆಗೆ ಬರುತ್ತಿದ್ದಾರೆ. ಸಿಎಂ ಗೃಹ…

Read More

ಬೆಂಗಳೂರು : ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಯ ಕಚೇರಿ ಮೇಲೆ ನಿನ್ನೆ ED ಅಧಿಕಾರಿಗಳು ದಾಳಿ ನಡೆಸಿದ್ದರು. ಚೀಫ್ ಕಮಿಷನರ್ ಕಚೇರಿ ಮೇಲೆ ಬೆಳಗ್ಗೆ 11 ಗಂಟೆ ವೇಳೆ ED ಅಧಿಕಾರಿಗಳು ದಾಳಿ ನಡೆಸಿ, ತಡರಾತ್ರಿ ವಾಪಾಸ್ ಆಗಿದ್ದು ಇಂದು ಬೆಳಿಗ್ಗೆ ಮತ್ತೆ ಕಚೇರಿಯಲಿ ಪರಿಶೀಲನೆ ನಡೆಸುತ್ತಿದ್ದಾರೆ. ಹೌದು ಬಿಬಿಎಂಪಿ ಕಚೇರಿಯಲ್ಲಿ ಪರಿಶೀಲನೆ ಮುಂದುವರೆಸಿದ ED ಅಧಿಕಾರಿಗಳು ತಡರಾತ್ರಿ ಬಿಬಿಎಂಪಿ ಕಚೇರಿಯಿಂದ ತೆರಳಿದ್ದರು. ಇದೀಗ ಇಂದು ಬೆಳಿಗ್ಗೆ ಮತ್ತೆ ದಾಖಲೆ ಪರಿಶೀಲನೆ ಮುಂದುವರಿಸಿದ್ದಾರೆ.ಬಿಬಿಎಂಪಿ ಚೀಫ್ ಇಂಜಿನಿಯರ್ ಪ್ರಹ್ಲಾದ್ ಕಚೇರಿಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ನಿನ್ನೆ ED ಅಧಿಕಾರಿಗಳು ಕಚೇರಿಯಿಂದ ಸಾಕಷ್ಟು ದಾಖಲೆ ಮತ್ತು ಕಡತಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೂರು ವರ್ಷಗಳ ಅವಧಿಯಲ್ಲಿ ಸುಮಾರು 960 ಕೋಟಿ ಪಡೆಯಲಾಗಿತ್ತು ಈ ಬಿಲ್ಗೆ ಕಾಮಗಾರಿಯ ಗುಣಮಟ್ಟ ಸುಳಿ ಲೆಕ್ಕದ ಆರೋಪ ಕೂಡ ಕೇಳಿ ಬಂದಿತ್ತು ಹೀಗಾಗಿ ಚೀಫ್ ಇಂಜಿನಿಯರ್ ಕಚೇರಿಯ ಮೇಲೆ ಇಡಿ ಅಧಿಕಾರಿಗಳು ನಿನ್ನೆ ದಾಳಿ ಮಾಡಿದ್ದರು ಎಲ್ಲಾ ವಲಯದ ಇಂಜಿನಿಯರ್ಗಳನ್ನು ಕರೆಸಿ…

Read More