Author: kannadanewsnow05

ಬೆಂಗಳೂರು : ಸದ್ಯ ಕರ್ನಾಟಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಭಾರಿ ಚರ್ಚೆ ನಡೆಯುತ್ತಿದ್ದು, ಒಂದು ಕಡೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೂಲಕ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದರೆ, ಮತ್ತೊಂದು ಕಡೆ ಸಿದ್ದರಾಮಯ್ಯ ಪುತ್ರ ಯತಿಂದ್ರ ಅವರು ಸದ್ಯ ರಾಜ್ಯದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಅಂತ ಹೇಳುತ್ತಿದ್ದಾರೆ. ಇನ್ನು ಮತ್ತೊಂದು ಕಡೆ ಇಕ್ಬಾಲ್ ಹುಸೇನ್ ಜನವರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನೋಡಿದಿದ್ದಾರೆ. ಇದರ ಮಧ್ಯ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ಅವರೇ ಕರ್ನಾಟಕದ ನೆಕ್ಸ್ಟ್ ಸಿಎಂ ಎಂದು ಹಲವು ಪೋಸ್ಟ್ಗಳು ಹರಿದಾಡುತ್ತಿವೆ. ಹೌದು ಒಂದು ಕಡೆ ರಾಜ್ಯಾದ್ಯಂತ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದರೆ ಮತ್ತೊಂದು ಕಡೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರಿಗೆ ಸಿಎಂ ವೇಷ ತುದಿಸಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಗು ರೀಲ್ಸ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.…

Read More

ಹಾವೇರಿ : ರಾಜ್ಯಾದ್ಯಂತ ಡೆವಿಲ್ ಸಿನೆಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದೂ, ಇದರ ಮಧ್ಯ ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕದ ನೆಕ್ಸ್ಟ್ ಸಿಎಂ ದರ್ಶನ್ ಎಂದು ಪೋಸ್ಟ್ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಇದೀಗ ಜನವರಿಯಲ್ಲಿ ದರ್ಶನ್‌ ಅಣ್ಣನಿಗೆ ಜಾಮೀನು ಸಿಗುವ ನಿರೀಕ್ಷೆಯಿದೆ. ಒಂದು ವೇಳೆ ಸಿಗದಿದ್ರೆ ನಾನೇ ಖುದ್ದು ಜೈಲಿಗೆ ಹೋಗಿ ಆಶೀರ್ವಾದ ಪಡೆದು ಬರ್ತೀನಿ ಎಂದು ನಟ ಹಾಗೂ ಸಚಿವ ಜಮೀರ್‌ ಪುತ್ರ ಝೈದ್‌ ಖಾನ್‌ ಹೇಳಿದ್ದಾರೆ. ಹಾವೇರಿಯಲ್ಲಿ ಕಲ್ಟ್‌ ಸಿನಿಮಾ ಪ್ರಮೋಷನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೋವಿನಲ್ಲೂ ದರ್ಶನ್‌ ಅಭಿಮಾನಿಗಳಿಗೆ ಸಕ್ಸಸ್‌ ಸಿನಿಮಾ ಕೊಟ್ಟಿದ್ದಾರೆ. ʻದರ್ಶನʼ ಎಂಬ ಹೆಸರಿನಿಂದ ಸಿನಿಮಾ ಸಕ್ಸಸ್ ಆಗೇ ಆಗುತ್ತದೆ. ಇವೆರಡನ್ನ ನಾನು ಡೆವಿಲ್ ನೋಡಿ ಕಲಿತುಕೊಂಡೆ. ಸಿನಿಮಾ ತುಂಬಾ ಚೆನ್ನಾಗಿ ಇದೆ. ದರ್ಶನ್‌ ಅಣ್ಣನಿಗೆ ಜನವರಿಯಲ್ಲಿ ಬೇಲ್‌ ಸಿಗುವ ನಿರೀಕ್ಷೆಯಿದೆ ಎಂದರು.

Read More

ಬೆಂಗಳೂರು : ಬೆಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ನೊಂದಿಗೆ ಮಹಿಳೆ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಪೊಲೀಸ್ ಕಾನ್ಸ್ಟೇಬಲ್ ರಾಘವೇಂದ್ರನ ಜೊತೆಗೆ ಮೋನಿಕಾ ಇದೀಗ ಪರಾರಿಯಾಗಿದ್ದಾಳೆ. ಎಚ್ಎಸ್ಆರ್ ಪೊಲೀಸ್ ಠಾಣೆಯ ಹೊಯ್ಸಳ ವಾಹನ ಓಡಿಸುತ್ತಿದ್ದ ರಾಘವೇಂದ್ರ ಹಾಗೂ ಮೊದಲ ಗಂಡನನ್ನು ಬಿಟ್ಟು ಮೋನಿಕಾ ಎರಡನೇ ಮದುವೆಯಾಗಿದ್ದಳು. ಇದೀಗ ಎರಡನೇ ಗಂಡನಿಗೂ ಕೈಕೊಟ್ಟು ಪ್ರಿಯಕರ ಕಾನ್ಸ್ಟೇಬಲ್ ಜೊತೆಗೆ ಮೋನಿಕ ಪರಾರಿಯಾಗಿದ್ದಾಳೆ. ಕಾನ್ಸ್ಟೇಬಲ್ ರಾಘವೇಂದ್ರ ನಿಗೂ ಕೂಡ ಮದುವೆಯಾಗಿ ಒಂದು ಮಗುವಿದೆ ಉತ್ತರ ಕರ್ನಾಟಕ ಮೂಲದ ರಾಘವೇಂದ್ರ ಹಾಗೂ ಮೈಸೂರು ಮೂಲದ ಮೋನಿಕಾ ಎಂದು ತಿಳಿದುಬಂದಿದ್ದು, 12 ವರ್ಷದ ಮಗನಿದ್ದರೂ ಕೂಡ ಪ್ರಿಯಕರನ ಜೊತೆಗೆ ಮೋನಿಕ ಪರಾರಿಯಾಗಿದ್ದಾಳೆ. ಇನ್ಸ್ಟಾಗ್ರಾಮ್ ನಲ್ಲಿ ಮೋನಿಕಾಗೆ ಪೊಲೀಸ್ ಕಾನ್ಸ್ಟೇಬಲ್ ರಾಘವೇಂದ್ರನ ಪರಿಚಯ ಆಗಿತ್ತು. ನಂತರ ಪ್ರತಿದಿನ ಕರೆ ಮಾಡಿ ರಾಘವೇಂದ್ರ ಮತ್ತು ಮೋನಿಕಾ ಮಾತನಾಡುತ್ತಿದ್ದರು. ಕಳೆದ ಮೂರು ತಿಂಗಳ ಹಿಂದೆ ಮೋನಿಕಾ ಠಾಣೆಗೆ ದೂರು ನೀಡಿರುತ್ತಾಳೆ. ಗಡನೆಗೆ ಕರೆಸಿ, ಬುದ್ಧಿ ಹೇಳಿ ಅಂತ ಮೋನಿಕ ದೂರು ನೀಡಿರುತ್ತಾಳೆ. ಪತಿ ವಿರುದ್ಧವಾಗಿ ಚಂದ್ರಾ…

Read More

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ವಿಮಾನ ನಿಲ್ದಾಣ ಪ್ರಾಧಿಕಾರದ ಕಟ್ಟಡ ಉದ್ಘಾಟನೆಗೆ ಇಂದು ಡಿಸಿಎಂ ಡಿಕೆ ಶಿವಕುಮಾರ್ ತೆರಳಿದ್ದರು. ಈ ಒಂದು ಕಾರ್ಯಕ್ರಮದ ಬಳಿಯೇ ಕಾರು ಒಂದು ಏಕಾಏಕಿ ಹೊತ್ತಿ ಉರಿದಿರುವ ಘಟನೆ ನಡೆದಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ದೇವನಹಳ್ಳಿ ಬಳಿ ಇರುವ ವಿಮಾನ ನಿಲ್ದಾಣ ಪ್ರಾಧಿಕಾರದ ಕಟ್ಟಡ ಉದ್ಘಾಟನೆಗೆ ತೆರಳಿದ್ದರು. ಇದೇ ವೇಳೆ ಕಾರ್ಯಕ್ರಮದ ವೇದಿಕೆಯ ಸಮೀಪವೇ ಕಾರು ಹೊತ್ತಿ ಉರಿದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಅಂಬಿಕಾಲೇಔಟ್ ನಲ್ಲಿ ಕಾರು ಆಕಸ್ಮಿಕವಾಗಿ ಹೊತ್ತಿ ಉರಿದಿದೆ. ತಕ್ಷಣಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದ್ದಾರೆ.

Read More

ದಾವಣಗೆರೆ : ಶಾಸಕ ಇಕ್ಬಾಲ್ ಹುಸೇನ್ ಜನವರಿ 6ನೇ ತಾರೀಕು ಅಥವಾ 9ನೇ ತಾರೀಕಿನಂದು ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಇವರ ಒಂದು ಹೇಳಿಕೆಗೆ ಶಾಸಕ ಶಿವಗಂಗಾ ಬಸವರಾಜ ಪ್ರತಿಕ್ರಿಯೆ ನೀಡಿದ್ದು ಡಿಕೆ ಶಿವಕುಮಾರ್ ಸಿಎಂ ಆದರೆ ಮೊದಲು ಖುಷಿಪಡುವುದು ನಾನೇ ಡಿಕೆ ಶಿವಕುಮಾರ್ ನನಗೆ ಆರಾಧ್ಯ ದೈವ ಎಂದು ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದು ಯತಿಂದ್ರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಹೈಕಮಾಂಡ್ ಗೆ ತಿಳಿಸುವುದಾಗಿ ಹೀಗಾಗಿ ಕಲೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಕ್ರಮದ ಬಗ್ಗೆ ತೀರ್ಮಾನ ಮಾತಾಡುತ್ತಾರೆ. ಯತೀಂದ್ರ ಮಾತನಾಡಿದರು ತಪ್ಪು ನಾನು ಮಾತನಾಡಿದರು ಕೂಡ ಅದು ತಪ್ಪೇ. ಈ ಹಿಂದೆ ಮಾತನಾಡಿದವರು ಈಗ ಅನುಭವಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಕೆಎನ್ ರಾಜಣ್ಣಗೆ ಶಾಸಕ ಶಿವಗಂಗಾ ಬಸವರಾಜ್ ಟಾಂಗ್ ನೀಡಿದರು. ಜನವರಿ 6 ರಂದು ಡಿಕೆ ಶಿವಕುಮಾರ್ ಪಟ್ಟಾಭಿಷೇಕ ಆದರೆ…

Read More

ಬೆಂಗಳೂರು : ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕ್ಷುಲ್ಲಕ ವಿಚಾರಕ್ಕೆ ಮನನೊಂದು ಐಶ್ವರ್ಯ (22) ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಶಾಮ ಭಟ್ಟರ ಪಾಳ್ಯದಲ್ಲಿ ನಡೆದಿದೆ ಏಳು ತಿಂಗಳ ಹಿಂದೆ ಲಕ್ಷ್ಮಿ ನಾರಾಯಣನ ಐಶ್ವರ್ಯ ಮದುವೆಯಾಗಿದ್ದಳು. ತಂಗಿಯ ಬರ್ತಡೇಗೆ ಕರೆದೋಯ್ಯಲಿಲ್ಲ ಎಂದು ಐಶ್ವರ್ಯ ನೊಂದಿದ್ದಾಳೆ . ಈಗ ಹಣವಿಲ್ಲ ಮುಂದಿನ ವರ್ಷ ಕರೆದುಕೊಂಡು ಹೋಗುತ್ತೇನೆ ಅಂತ ಪತಿ ಹೇಳಿದ್ದರು ಇದೇ ವಿಚಾರಕ್ಕೆ ಮನನೊಂದು ಐಶ್ವರ್ಯ ಆತ್ಮಹತ್ಯೆ ಶರಣಾಗಿದ್ದಾಳೆ.ಸ್ಥಳಕ್ಕೆ ಮಾದನಾಯಕನಹಳ್ಳಿ ಪೋಲಿಸಿರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಧಾರವಾಡ : ಈಗಾಗಲೇ ರಾಜ್ಯದಲ್ಲಿ ವಿಪರೀತ ಚಳಿ ಆರಂಭವಾಗಿದ್ದು, ಇದರ ಮಧ್ಯ ಮುಂದಿನ ಎರಡು ದಿನಗಳ ಕಾಲ ಉತ್ತರ ಕರ್ನಾಟಕದಲ್ಲಿ ಭಾರಿ ಪ್ರಮಾಣದಲ್ಲಿ ಶೀತ ಗಾಳಿ ಇರಲಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಕೃಷಿ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ. ಹೌದು ಧಾರವಾಡ ಜಿಲ್ಲೆ ಸೇರಿದಂತೆ ಗದಗ, ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ, ಬೆಳಗಾವಿ ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಶೀತಗಾಳಿಯೊಂದಿಗೆ ಮೈ ಕೊರೆಯುವ ಚಳಿ ಇರಲಿದೆ. ಇದು ಮಾನವರು ಹಾಗೂ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡದೆ. ಮುಂದಿನ ಎರಡು ದಿನಗಳಲ್ಲಿ ಇನ್ನೂ ಹೆಚ್ಚಿನ ಚಳಿ ಹಾಗೂ ಶೀತಗಾಳಿ ಇರಲಿದೆ. ಇದು ವಯಸ್ಸಾದವರ ಮೇಲೆ ತೀವ್ರ ಪರಿಣಾಮ ಬೀರಲಿದೆ. ಇದರ ಜೊತೆಗೆ ಬೆಳೆ ವೈಪರಿತ್ಯವೂ ಉಂಟಾಗಲಿದೆ ಎಂದ ಹವಾಮಾನ ಇಲಾಖೆ ತಿಳಿಸಿದೆ. ಈ ಶೀತಗಾಳಿಯಿಂದ ಮನುಷ್ಯರು ತಮ್ಮನ್ನು ರಕ್ಷಿಸಿಕೊಳ್ಳಬೇಕು. ಬೆಚ್ಚಗಿನ ನೀರು, ಆಹಾರವನ್ನೇ ಸೇವಿಸಬೇಕು. ಇದರ ಜೊತೆಗೆ ಬೆಳೆಗಳನ್ನು ಸಂರಕ್ಷಿಸಲು ಹವಾಮಾನ…

Read More

ಹಾವೇರಿ : ಸಾಮಾನ್ಯವಾಗಿ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಹಾವೇರಿಯಲ್ಲಿ ಹೋರಿಗಳ ಸ್ಪರ್ಧೆ ಅಂದರೆ ಒಂದು ಹಬ್ಬದ ವಾತಾವರಣ ಇದ್ದಂತೆ. ಹೋರಿಗಳ ಸ್ಪರ್ಧೆಯಲ್ಲಿ ಹಾವೇರಿ ಹೋರಿಗಳು ಬಹಳ ಜನಪ್ರಿಯ ಆಗಿವೆ. ಇದೀಗ KDM ಕಿಂಗ್ ಎಂದೇ ಹೆಸರಾಗಿದ್ದ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಹೋರಿಯು ಹೃದಯಾಘಾತದಿಂದ ಮೃತಪಟ್ಟಿದೆ. ಹೌದು ಉತ್ತರ ಕರ್ನಾಟಕದ ಅದರಲ್ಲೂ ಜಿಲ್ಲೆಯ ಜಾನಪದ ಸೊಗಡಿನ ಕ್ರೀಡೆ ಅಂದರೆ ಹೋರಿ ಹಬ್ಬ. ಇದಕ್ಕೆ ಹಟ್ಟಿಹಬ್ಬ ದನಬೆದರಿಸುವ ಸ್ಪರ್ಧೆ ಎಂತಲೂ ಕರೆಯಲಾಗುತ್ತದೆ. ಈ ಹಬ್ಬದಲ್ಲಿ ಕೆಡಿಎಂ ಕಿಂಗ್ ತನ್ನದೇ ಆದ ಛಾಪು ಮೂಡಿಸಿತ್ತು. ಹಾವೇರಿ, ಹಾನಗಲ್, ಮಲೆನಾಡು ಪ್ರದೇಶ ಸೇರಿ ಬೇರೆ ಎಲ್ಲಿಯೇ ಕೊಬ್ಬರಿ ಹೋರಿ ಸ್ಪರ್ಧೆ ಇರಲಿ ಕೆಡಿಎಂ ಕಿಂಗ್ ಅಲ್ಲಿ ಹಾಜರಿರುತ್ತಿತ್ತು. ಕೆಡಿಎಂ ಕಿಂಗ್ ಸ್ಪರ್ಧೆಯಲ್ಲಿದ್ದರೆ ಪ್ರಶಸ್ತಿ ಕಟ್ಟಿಟ್ಟ ಬುತ್ತಿ ಎನ್ನುವ ಮಾತಿತ್ತು. ಸ್ಪರ್ಧೆಯಲ್ಲಿ 11 ಬೈಕ್​, ಬಂಗಾರ, ಎತ್ತಿನಬಂಡಿ, ಟಿವಿ ಸೇರಿದಂತೆ ಹಲವು ಬಹುಮಾನಗಳನ್ನು ಗೆದ್ದು ಹೆಸರು ಮಾಡಿತ್ತು. ಬೆಳ್ಳಿ ಬಸವಣ್ಣ, ಫ್ರಿಡ್ಜ್​, ತಿಜೋರಿ ಸೇರಿದಂತೆ ವಿವಿಧ…

Read More

ರಾಮನಗರ : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸದ್ಯಕ್ಕೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಮತ್ತೊಂದು ಕಡೆ ಯತೀಂದ್ರ ಹೇಳಿಕೆಗೆ ಕಾಂಗ್ರೆಸ್ ಪಕ್ಷದ ಹಲವು ಸಚಿವರು ಶಾಸಕರುಗಳೇ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯ ಶಾಸಕ ಇಕ್ಬಾಲ್ ಹುಸೇನ್ ಜನವರಿ 6 ರಂದು ಡಿಕೆ ಶಿವಕುಮಾರ್ ಸಿಎಂ ಆಗೋದು ಪಕ್ಕ ಅಂತ ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ. ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಸಲೀಂ ಅಹಮದ್ ಜನವರಿ 6 ರಂದು ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ನಮಗೆ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವುದು ಒಂದೇ ಗುರಿ ಜನವರಿ 6 ಅಥವಾ ಜನವರಿ 9ರಂದು ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಜನವರಿ 6 ರಂದು ಅಥವಾ 9 ರಂದು 99% ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಅಧಿವೇಶನ ಆದಮೇಲೆ ಸಿಎಂ ಆಗುತ್ತಾರೆ ಅದರಲ್ಲಿ ಏನು ತಪ್ಪಿದೆ? ಡಿಕೆ ಶಿವಕುಮಾರ್ ಅವರಿಗೆ ಒಂದು ಅವಕಾಶವಿದೆ ಶಿವಕುಮಾರ್…

Read More

ತುಮಕೂರು : ಒಂದು ಕಡೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅದಕ್ಕೆ ಇಲ್ಲ ಅಂತ ಹೇಳುತ್ತಿದ್ದಾರೆ ಮತ್ತೊಂದು ಕಡೆ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಜನವರಿ 6 ಅಥವಾ 9 ರಂದು ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ ಇದೀಗ ಕೇಂದ್ರ ರೈಲ್ವೆ ಸಚಿವ ಈ ಸೋಮಣ್ಣ ಅವರು ಗೃಹ ಸಚಿವ ಜಿ ಪರಮೇಶ್ವರ್ ಅವರು ಸಿಎಂ ಆಗಲಿ ಅನ್ನೋದು ನನ್ನ ಆಸೆ ಅಂತ ಹೇಳಿ ಕುರ್ಚಿ ಕದನಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ. ತುಮಕೂರಿನ ಹೆಗ್ಗೆರೆ ಮೇಲ್ ಸೇತುವೆ ಕಾಮಗಾರಿಗೆ ಚಾಲನೆ ನೀಡಿ ಈ ಒಂದು ಹೇಳಿಕೆ ನೀಡಿದ್ದು, ಎಲ್ಲೋ ಒಂದು ಕಡೆ ಜಿ ಪರಮೇಶ್ವರ್ ಅವರು ಸಿಎಂ ಆಗಲಿ ಅನ್ನುವ ಆಸೆ ನನಗೂ ಇದೆ. ಇದೆ ನನ್ನೊಬ್ಬನಿಗೆ ಆಸೆ ಅನ್ನುವುದಕ್ಕಿಂತ ಜಿಲ್ಲೆಯ ಜನರಿಗೆ ಆಸೆ ಇದೆ. ಅಧಿಕಾರ ಮತ್ತೊಂದು ಮಗದೊಂದು ಅದೃಷ್ಟದ ಮೇಲಿದೆ. ಜಿ.ಪರಮೇಶ್ವರ್ ಅವರು ಗೃಹ ಮಂತ್ರಿಗಳಾಗಿ ಆಗುತ್ತಾರೆ ಅನ್ನೋ…

Read More