Subscribe to Updates
Get the latest creative news from FooBar about art, design and business.
Author: kannadanewsnow05
ಮಂಗಳೂರು : ಮಂಗಳೂರಿನ ಯೂನಿಸೆಕ್ಸ್ ಸಲೂನಿನ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಅನೈತಿಕ ಚಟುವಟಿಕೆ ನಡೆಸುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ಉರ್ವ ಠಾಣೆ ಪೋಲೀಸರು ದಾಳಿ ಮಾಡಿದ್ದಾರೆ.ಮಂಗಳೂರಿನ ಬಿಜೈ ನಲ್ಲಿರುವ ಸಿಕ್ಸ್ತ್ ಸೆನ್ಸ್ ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ್ದಾರೆ. ಈ ಒಂದು ಪಾರ್ಲರ್ ಉಡುಪಿಯ ಬ್ರಹ್ಮಗಿರಿ ಮೂಲದ ಸುದರ್ಶನ್ ಗೆ ಸೇರಿದ್ದು, ಈ ಒಂದು ಮಸಾಜ್ ಪಾರ್ಲರ್ ನ ಟ್ರೇಡ್ ಲೈಸೆನ್ಸ್ ಅನ್ನು ರದ್ದುಗೊಳಿಸುವಂತೆ ಪೊಲೀಸರು ಪತ್ರ ಬರೆದಿದ್ದಾರೆ. ಉರ್ವ ಠಾಣೆ ಪೊಲೀಸರ ಪತ್ರದ ಆಧಾರದಲ್ಲಿ ಟ್ರೇಡ್ ಲೈಸೆನ್ಸ್ ಅನ್ನು ಮಂಗಳೂರು ನಗರ ಪಾಲಿಕೆ ಆಯುಕ್ತರು ಇದೀಗ ರದ್ದುಗೊಳಿಸಿದ್ದಾರೆ. ಉರ್ವ ಠಾಣೆಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಹಾವೇರಿ : ಇಂದು ಹಾವೇರಿಯಲ್ಲಿ ಭೀಕರವಾದ ಕೊಲೆ ನಡೆದಿದ್ದು, ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಗುತ್ತಿಗೆದಾರನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಗಂಗೆಭಾವಿ ಕ್ರಾಸ್ ಬಳಿ ಈ ಒಂದು ಭೀಕರ ಕೊಲೆ ನಡೆದಿದೆ ಪ್ರಥಮ ದರ್ಜೆ ಗುತ್ತಿಗೆದಾರ ಶಿವಾನಂದ ಕುನ್ನೂರು (40) ಎನ್ನುವ ಗುತ್ತಿಗೆದಾರರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಆಸ್ತಿಯ ವಿಚಾರಕ್ಕೆ ಗುತ್ತಿಗೆದಾರ ಶಿವಾನಂದ ಕುನ್ನೂರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸುಪಾರಿ ಕೊಟ್ಟು ಸಂಬಂಧಿಕರೇ ಶಿವಾನಂದ ಅವರನ್ನು ಕೊಲೆ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟಕ ಶಿಗ್ಗಾವಿ ಠಾಣೆ ಪೊಲೀಸ್ರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.ಕೊಲೆ ಕುರಿತು ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಭೀಕರವಾದ ಕೊಲೆಯಾಗಿದ್ದು ತನ್ನ ಅತ್ತಿಗೆ ಜೊತೆಗೆ ಬೇರೊಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧದ ಬಗ್ಗೆ ಹೇಳಿಕೊಂಡು ಓಡಾಡುತ್ತಿದ್ದವನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರಿನ ಮುನಿರೆಡ್ಡಿ ಲೇಔಟ್ ನ ಮನೆಯೊಂದರಲ್ಲಿ ಶೈಲೇಶ್ ಯಾದವ್ ಎನ್ನುವ ವ್ಯಕ್ತಿ ಭೀಕರವಾಗಿ ಕೊಲೆಯಾಗಿದ್ದಾನೆ. ಉತ್ತರ ಪ್ರದೇಶ ಮೂಲದ ಶೈಲಿಶ್ ಯಾದವ್ ಗೆ ಹಿಗ್ಗಾ ಮುಗ್ಗಾ ಥಳಿಸಿ ಕೊಲೆ ಮಾಡಿದ್ದಾರೆ. ಬಿರೇಂದ್ರ ಯಾದವ್, ಸತೀಶ್ ಹಾಗು ಅರುಣ್ ಯಾದವ್ ಎನ್ನುವರು ಶೈಲೇಶ್ ಯಾದವನನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಆರೋಪಿ ಬೀರೇಂದ್ರ ಯಾದವ್ ತನ್ನ ಅತ್ತಿಗೆ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಆತನ ಬಗ್ಗೆ ಸಿಕ್ಕ ಸಿಕ್ಕವರ ಬಳಿ ಶೈಲೇಶ್ ಯಾದವ್ ಹೇಳುತ್ತಿದ್ದ. ಹಾಗಾಗಿ ಶೈಲೇಶ್ ಯಾದವ್ ನನ್ನು ಸತೀಶ್ ಮನೆಗೆ ಕರೆಸಿಕೊಂಡು ಮೂವರು ಥಳಿಸಿದ್ದಾರೆ. ಜೂನ್ 18 ರಂದು ಹಲ್ಲೆ ನಡೆಸಿ ಶೈಲೇಶ್ ಯಾದವನನ್ನು ಮೂವರು ಕೊಲೆ ಮಾಡಿದ್ದಾರೆ. ಎರಡು ದಿನಗಳ ಕಾಲ ಶೈಲೇಶ್ ಶವವನ್ನು ಸತೀಶ್ ಮನೆಯಲ್ಲಿಯೇ ಇರಿಸಿಕೊಂಡಿದ್ದರು. ಎರಡು…
ತುಮಕೂರು : ಪ್ರೇಮಿಗಳ ನಡುವೆ ರೀಲ್ಸ್ ಫೋಟೋಸ್ ಗಾಗಿ ಗಲಾಟೆ ನಡೆದಿದೆ.ಪ್ರಿಯಕರ ಜೊತೆಗೆ ಜಗಳ ಮಾಡಿದ ಯುವತಿ ಇದೀಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾಳೆ. ಚೈತನ್ಯ (22) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿನ ಹೊಸಹಳ್ಳಿಯಲ್ಲಿ ನಡೆದಿದೆ. ನಿನ್ನೆ ಸ್ಟೇಟಸ್ ನಲ್ಲಿ ಯುವತಿ ಚೈತನ್ಯ ರಿಲ್ಸ ಹಾಕಿದ್ದಳು. ನಿನ್ನೆ ರಾತ್ರಿ ಚೈತನ್ಯ ಮನೆಯ ಬಳಿ ಬಂದಿದ್ದ. ತಾಯಿ ಇದ್ದರೂ ಬಾಗಿಲು ಹಾಕಿಕೊಂಡು ಇಬ್ಬರೂ ಜಗಳ ಮಾಡಿದ್ದಾರೆ. ಪ್ರಿಯಕರೊಂದಿಗೆ ಜಗಳ ಆಡಿದ ನಂತರ ಚೈತನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚೈತನ್ಯ ಸಂಬಂಧಿಗೆ ಕರೆ ಮಾಡಿ ಪ್ರಿಯಕರ ವಿಜಯ್ ಈ ಕುರಿತು ವಿಚಾರ ತಿಳಿಸಿದ್ದ. ಹೊಸಹಳ್ಳಿಯಲ್ಲಿ ತಾಯಿಯೊಂದಿಗೆ ಚೈತನ್ಯ ವಾಸವಿದ್ದಳು. ಅಂತಿಮ ಪದವಿ ವ್ಯಾಸ ಮಾಡುತ್ತಿದ್ದಳು. ಮಾಡೆಲಿಂಗ್ ಮತ್ತು ಮೇಕಪ್ ಆರ್ಟಿಸ್ಟ್ ಸಹ ಆಗಿದ್ದಳು. ಪಕ್ಕದ ಊರಿನ ವಿಜಯ್ ಕುಮಾರ್ ಜೊತೆಗೆ ಚೈತನ್ಯ ಪ್ರೀತಿಯಲ್ಲಿ ಬಿದ್ದಿದ್ದಳು. ವಿಜಯ್ ಕುಮಾರ್ ಕಾರು ಚಾಲಕನಾಗಿದ್ದ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು, ಬಳಿಕ…
ಬೆಂಗಳೂರು : ವಸತಿ ಯೋಜನೆ ಅಡಿಯಲ್ಲಿ ಮನೆ ಹಂಚಿಕೆಯಲ್ಲಿ ರಂಚ ಪಡೆದಿರುವ ಆರೋಪದ ಕುರಿತಂತೆ ಕಲ್ಬುರ್ಗಿ ಜಿಲ್ಲೆಯ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಹಾಗೂ ಸಚಿವ ಜಮೀರ್ ಅಹ್ಮದ್ ಕಾರ್ಯದರ್ಶಿಯಾಗಿರುವ ಸರ್ಫರಾಜ್ ಖಾನ್ ಮಾತನಾಡಿರುವ ಆಡಿಯೋ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ನೈಜ ಹೋರಾಟಗಾರರ ವೇದಿಕೆ ಅಧ್ಯಕ್ಷ HM ವೆಂಕಟೇಶ್ ಅವರು ಈ ಕುರಿತು ದೂರು ನೀಡಿದ್ದಾರೆ. ಲಂಚ ಕೊಟ್ಟರೆ ನಿವೇಶನ ಕೊಡುವುದಾಗಿ ಮಾತನಾಡಿದ್ದಾರೆ. ಲೋಕಾಯುಕ್ತರು ಸುಮೋಟೋ ಕೇಸ್ ದಾಖಲಿಸಿಕೊಳ್ಳಬೇಕಿತ್ತು. ಜನರ ತೆರಿಗೆ ಹಣವನ್ನು ಇವರು ಬಳಸಿಕೊಂಡು ವಂಚನೆ ಮಾಡಿದ್ದಾರೆ. ಸರ್ಫರಾಜ್ ಖಾನ್ ಜಮೀರ್ ಆಪ್ತ ಕಾರ್ಯದರ್ಶಿಯಾಗಿದ್ದಾರೆ. ರಾಜೀವ್ ಗಾಂಧಿ ವಸತಿ ಯೋಜನೆಯ ಅಡಿ ಮನೆಗಳನ್ನು ಹಂಚಬೇಕಿತ್ತು. ದುರ್ಬಲರಿಗೆ ಹಂಚಿಕೆಯಾಗಬೇಕಿದ್ದ ಮನೆಗಳಿಗೆ ಹಣ ಪಡೆಯುತ್ತಿದ್ದಾರೆ. ಮನೆಗಳ ಹಂಚಿಕೆಗೆ ಪ್ರತಿ ಮನೆಗೆ ಹತ್ತು ಸಾವಿರ ಹಣ ಪಡೆಯಲಾಗಿದೆ. ಬಿ ಆರ್ ಪಾಟೀಲ್, ಸರ್ಪರಾಜ್ ಮಾತನಾಡಿರುವುದರಲ್ಲಿ ಸತ್ಯಾಂಶ ಇರಬಹುದು. ಹಾಗಾಗಿ ಆಡಿಯೋ ಇಟ್ಟುಕೊಂಡು ತನಿಖೆ ನಡೆಸುವಂತೆ HM ವೆಂಕಟೇಶ್ ಲೋಕಾಯುಕ್ತಕ್ಕೆ…
SHOCKING : ಫ್ರಿಡ್ಜ್ ನಲ್ಲಿಟ್ಟು ಆಹಾರ ತಿನ್ನೋಕು ಮುಂಚೆ ಈ ಸುದ್ದಿ ಓದಿ : ವಾಂಗಿ ಬಾತ್ ಸೇವಿಸಿ 5 ವರ್ಷದ ಮಗು ಸಾವು!
ಬೆಂಗಳೂರು : ಮೊದಲೆಲ್ಲ ಯಾವುದೇ ಆಹಾರ ಪದಾರ್ಥ ಆಗಿರಲಿ ಅಂದೇ ಬೇಯಿಸಿ ಅಂದೇ ತಿನ್ನುವ ರೂಢಿ ಇತ್ತು. ಕಾಲ ಬದಲಾದಾಂತೆಲ್ಲ ಆಧುನಿಕ ಜಗತ್ತಲ್ಲಿ ಆಹಾರ ಕೆಡಬಾರದು ಎಂದು ಫ್ರಿಡ್ಜ್ ನಲ್ಲಿ ಇಟ್ಟು ತಿನ್ನೋದು ಶುರುವಾಗಿದೆ. ಇದೀಗ ಫ್ರಿಜ್ನಲ್ಲಿ ಇಟ್ಟಿದ್ದ ಹಳೆಯ ವಾಂಗಿಬಾತ್ ಸೇವಿಸಿದ 5 ವರ್ಷದ ಮಗುವೊಂದು ಆಹಾರ ವಿಷವೇರಿಕೆಯಿಂದ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆ.ಪಿ. ಅಗ್ರಹಾರದ ಭುವನೇಶ್ವರಿ ನಗರದಲ್ಲಿ ನಡೆದಿದೆ. ಹೌದು 2024ರ ಅಕ್ಟೋಬರ್ 7ರಂದು ನಡೆದ ಈ ಘಟನೆಯಲ್ಲಿ, ಆನ್ಲೈನ್ನಿಂದ ತಂದ ಕೇಕ್ ತಿಂದು ಮಗು ಸಾವನ್ನಪ್ಪಿತು ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ, ವಿಧಿ ವಿಜ್ಞಾನ ಪ್ರಯೋಗಾಲಯ (FSL) ಮತ್ತು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ತನಿಖೆಯಿಂದ ಬೇರೆಯದೇ ಸತ್ಯ ಬಯಲಿಗೆ ಬಂದಿದೆ. ಮಗು ಫ್ರಿಜ್ನಲ್ಲಿ ಇಟ್ಟಿದ್ದ ಹಳೆಯ ವಾಂಗಿಬಾತ್ ತಿಂದಿದ್ದು, ಇದರಿಂದ ಆಹಾರ ವಿಷವೇರಿಕೆ ಉಂಟಾಗಿ ಮೃತಪಟ್ಟಿದೆ ಎಂದು ವರದಿಯಾಗಿದೆ. ಈ ವಾಂಗಿಬಾತ್ ಫ್ರಿಜ್ನಲ್ಲಿ ದೀರ್ಘಕಾಲ ಇಡಲಾಗಿತ್ತು, ಇದರಿಂದ ಬ್ಯಾಕ್ಟೀರಿಯಾ ಬೆಳವಣಿಗೆಯಾಗಿ ವಿಷಕಾರಿಯಾಗಿತ್ತು. ಫ್ರಿಜ್ನಲ್ಲಿ ಆಹಾರವನ್ನು…
ಕೋಲಾರ : ರಾಜ್ಯದಲ್ಲಿ ಮಾವು ಬೆಳೆ ಹೆಚ್ಚಾಗಿದ್ದು ಆದರೆ ಅದಕ್ಕೆ ತಕ್ಕಂತೆ ಬೆಲೆ ಇಲ್ಲ ಹಾಗಾಗಿ ರಾಜ್ಯದ ಜನರು ಮಾವು ಬೆಳೆಗೆ ಬೆಂಬಲ ನೀಡಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ 22 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.ಇದೀಗ ಇದು ಕೋಲಾರದಲ್ಲಿ ನಾವು ಬೆಳೆಗಾರರು ರಾಷ್ಟ್ರೀಯ ಹೆದ್ದಾರಿ ಮೇಲೆ ಮಾವಿನ ಹಣ್ಣುಗಳನ್ನು ಸುರಿದು ಪ್ರತಿಭಟನೆ ನಡೆಸಿದರು. ಕೋಲಾರದಲ್ಲಿ ಹೆದ್ದಾರಿ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೆದ್ದಾರಿಗೆ ಮಾವು ಸುರಿದು ಮಾವು ಬೆಳೆಗಾರರು ಆಕ್ರೋಶ ಹೊರ ಹಾಕಿದ್ದಾರೆ. ಚೆನ್ನೈ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ಬಂದ್ ಮಾಡಿದ್ದಾರೆ ಕೋಲಾರದ ಕೊಂಡ ರಾಜನಹಳ್ಳಿ ಬಳಿ ಹೆದ್ದಾರಿ ಮೇಲೆ ಮಾವಿನ ಕಾಯಿ ಸುರಿದು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಇಂದು ಸಂಜೆಯೊಳಗೆ ಮಾವು ಬೆಳೆಗೆ ಬೆಂಬಲ ಬೆಲೆ ಘೋಷಿಸದೆ ಹೋದರೆ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮತ್ತಷ್ಟು ತೀವ್ರಗೊಳಿಸುತ್ತೇವೆ. ಅಲ್ಲದೇ ಗುರುವಾರ ಕೋಲಾರ ಬಂದ್ ಮಾಡ್ತೇವೆ ಎಂದು ಇದೆ ಸಂದರ್ಭದಲ್ಲಿ ಪ್ರತಿಭಟನಾ…
ರಾಯಚೂರು : ರಾಯಚೂರಲ್ಲಿ ಘೋರ ಘಟನೆ ಒಂದು ನಡೆದಿದ್ದು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರು ಏಕಾಏಕಿ ಬೆಂಕಿಯಿಂದ ಹೊತ್ತಿ ಉರಿದಿರುವ ಘಟನೆ ರಾಯಚೂರಿನ ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ನಡೆದಿದೆ. ಹಿರೆಬೂದೂರಿನಿಂದ ರಾಯಚೂರಿಗೆ ಡಸ್ಟರ್ ಕಾರಿನಲ್ಲಿ ಹೊರಟಿದ್ದರು. ಈ ವೇಳೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿ ಯಾರೂ ಇಲ್ಲದ ಹಿನ್ನೆಲೆ ಭಾರೀ ಅನಾಹುತವೊಂದು ತಪ್ಪಿದೆ. ಮಾರ್ಗಮಧ್ಯೆ ಗಬ್ಬೂರಿನಲ್ಲಿ ಎಳೆನೀರು ಕುಡಿಯಲು ಕಾರಿನಿಂದ ಇಳಿದಿದ್ದರು. ಈ ವೇಳೆ ನೋಡನೋಡುತ್ತಲೇ ಇಂಜಿನ್ನಿಂದ ದಟ್ಟ ಹೊಗೆ ಆವರಿಸಿ, ಬಳಿಕ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯಿಂದಾಗಿ ಹೆದ್ದಾರಿಯಲ್ಲಿ ದಟ್ಟ ಹೊಗೆ ಆವರಿಸಿತ್ತು. ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸಿದ್ದಾರೆ. ಏಂ17ಘಿ 5057ನಂಬರ್ನ ಡಸ್ಟರ್ ಕಾರು ಬೆಂಕಿಗಾಹುತಿಯಾಗಿದೆ. ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಕಾರು ಡಿಕ್ಕಿಯಾಗಿ ಪಾದಚಾರಿ ಮಹಿಳೆಯರಿಬ್ಬರು ಸ್ಥಳದಲ್ಲಿ ಸಾವನಪ್ಪಿರುವ ಘಟನೆ ದೇವನಹಳ್ಳಿ ತಾಲೂಕಿನ ಬೊಮ್ಮವಾರ ಗ್ರಾಮದಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೊಮ್ಮವಾರ ಗ್ರಾಮದಲ್ಲಿ ಕಾರು ಡಿಕ್ಕಿಯಾಗಿ ತಿಮ್ಮಕ್ಕ (60) ಹಾಗು ಯಶೋದ (33) ಇದೀಗ ಸಾವನ್ನಪ್ಪಿದ್ದಾರೆ. ತಿಮ್ಮಕ್ಕ ಮತ್ತು ಯಶೋದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದಂತಹ ಇಟಿಯೋಸ್ ಕಾರು ಇಬ್ಬರಿಗೆ ಗುದ್ದಿದೆ.ಮಹಿಳೆಯರಿಗೆ ಡಿಕ್ಕಿ ಹೊಡೆದು ಕಾರು ಪಕ್ಕದಲ್ಲಿಧ ಮನೆಯ ಕಾಂಪೌಂಡ್ ಗುದ್ದಿದೆ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಅಪಘಾತದ ಕುರಿತು ಪ್ರಕರಣ ದಾಖಲಾಗಿದೆ.
ಮುಂಬೈ : ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇದೀಗ ಮಹಾರಾಷ್ಟ್ರದ ಮುಂಬೈನಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಕಾಮುಕನೊಬ್ಬ ತನ್ನ ಪ್ರೇಯಸಿಯ ಮಗಳ ಮೇಲೆ ಅತ್ಯಾಚಾರ ಎಸಗಿದ್ದು, ಅಲ್ಲದೆ ಆಕೆಯ ಖಾಸಗಿ ಭಾಗಕ್ಕೆ ಸ್ಕ್ರೂಡ್ರೈವರ್ ಹಾಕಿ ವಿಕೃತಿ ಮೆರೆದಿರುವ ಘಟನೆ ವರದಿಯಾಗಿದೆ. ಹೌದು ಈ ಒಂದು ಘೋರ ಘಟನೆ ಮುಂಬೈನಲ್ಲಿ ನಡೆದಿದ್ದು, ಮುಂಬೈನ ಜೋಗೇಶ್ವರಿ ಉಪನಗರದಲ್ಲಿ ಈ ಘಟನೆ ನಡೆದಿದೆ. ಮೇಘವಾಡಿ ಪೊಲೀಸರು 24 ವರ್ಷದ ಯುವಕ ಮತ್ತು ಆತನ ಗೆಳತಿಯನ್ನು ಬಂಧಿಸಿದ್ದಾರೆ. ಮತ್ತು ಅವರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಗಂಭೀರ ಅಪರಾಧ ಪ್ರಕರಣ ದಾಖಲಿಸಿದ್ದಾರೆ. ಆ ವ್ಯಕ್ತಿ ತನ್ನ ಗೆಳತಿಯ ಕೇವಲ 10 ವರ್ಷದ ಅಪ್ರಾಪ್ತ ಮಗಳ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗುವ ಮೂಲಕ ಕ್ರೌರ್ಯದ ಮಿತಿಯನ್ನು ಮೀರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ವ್ಯಕ್ತಿ ಅಪ್ರಾಪ್ತ ಬಾಲಕಿಯ ಖಾಸಗಿ ಭಾಗಗಳಿಗೆ…