Author: kannadanewsnow05

ಬೆಂಗಳೂರು : ರಾಜ್ಯದಲ್ಲಿ ಡ್ರಗ್ಸ್ ದಂಧೆ ಕಡಿವಾಣಕ್ಕೆ ಹೊಸ ವ್ಯವಸ್ಥೆ ಜಾರಿಯಾಗಿದ್ದು, ಗೃಹ ಇಲಾಖೆಯೂ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ ರಚನೆ ಮಾಡಿದೆ. ಮಾದಕ ವಸ್ತು ಬಳಕೆ ಮತ್ತು ಮಾರಾಟ ತಡೆಯಲು ಕಾರ್ಯಪಡೆ ರಚನೆ ಮಾಡಲಾಗಿದೆ. ಮಾದಕ ವಸ್ತು ಸಂಬಂಧ ಕೇಸ್ ಗಳ ವಿಚಾರಣೆಗೆ ಕಾರ್ಯಪಡೆ ರಚಿಸಲಾಗಿದೆ. 56 ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ಕಾರ್ಯಪಡೆ ರಚನೆ ಮಾಡಲಾಗಿದೆ. ಇದರಲ್ಲಿ ಕಾರ್ಯಪಡೆಗೆ 10 ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದೆ ಉಳಿದ 56 ಹುದ್ದೆಗಳು ನಕ್ಸಲ್ ನಿಗ್ರಹ ಪಡೆಯಿಂದ ವರ್ಗಾವಣೆಯಾಗಿದ್ದು, ಇದೀಗ ಮಾದಕ ವಸ್ತುಗಳ ನಿಗ್ರಹಕ್ಕೆ ಗ್ರಹ ಇಲಾಖೆ ಹೊಸ ತಂಡ ರಚನೆ ಮಾಡಿದೆ.

Read More

ಬೆಂಗಳೂರು : ಮೈಸೂರಿನ ಕೆ ಆರ್ ನಗರದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ದಂಡ ವಿಧಿಸಿ ಐತಿಹಾಸಿಕ ತೀರ್ಪು ನೀಡಿತು. ಹಾಗಾಗಿ ಪ್ರಜ್ವಲ್ ರೇವಣ್ಣಗೆ ನಿನ್ನೆಯಿಂದಲೇ ಜೈಲುವಾಸ ಆರಂಭವಾಗಿದ್ದು, ಪೊಲೀಸರು ನಿನ್ನೆಯ ಪ್ರಜ್ವಲ್ ರೇವಣ್ಣನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸೇರಿಸಿದ್ದಾರೆ. ಇದೀಗ ಪ್ರಗಲ್ ರೇವಣ್ಣಗೆ ಜೈಲಾಧಿಕಾರಿಗಳು ಕೈದಿ ನಂಬರ್ ನೀಡಿದ್ದು ಪ್ರಜ್ವಲ್ ರೇವಣ್ಣ ಕೈದಿ ನಂಬರ್ 15528 ಎಂದು ತಿಳಿದು ಬಂದಿದೆ. ನಿನ್ನೆಯಿಂದಲೇ ಸಜಾ ಬಂದಿರುವ ಪರಿಚಯ ರೇವಣ್ಣ ಜೈಲಿನ ಜೀವನಶೈಲಿ ಸಂಪೂರ್ಣ ಬದಲಾಗಲಿದೆ. ಇಂದಿನಿಂದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಕೈದಿ ಸಮವಸ್ತ್ರ ಧರಿಸಬೇಕು. ಜೈಲಿನ ಸಜಾಬಂಧಿ ಕೈದಿಗಳನ್ನು ಪಾಲಿಸಬೇಕು. ನಿಯಮಗಳ ಪ್ರಕಾರ ಜೈಲು ಅಧ್ಯಕ್ಷರು ನೀಡುವ ಕೆಲಸ ಮಾಡಬೇಕು. ಇಂದು ಪ್ರಜ್ವಲ್ ರೇವಣ್ಣಗೆ ಬಿಳಿ ಸಮವಸ್ತ್ರ ಕೊಡಲಿದ್ದಾರೆ. ಜೈಲಿನ ಒಳಗಡೆ ಪ್ರಜ್ವಲ್ ರೇವಣ್ಣ 8 ಗಂಟೆ ಕೆಲಸ…

Read More

ಕೋಲಾರ : ಕೋಲಾರದಲ್ಲಿ ಬೆಸ್ಕಾಂಗೆ ಸೇರಿದ ವಿದ್ಯುತ್ ಪರಿಕರ ಕಳ್ಳತನ ಹಿನ್ನೆಲೆಯಲ್ಲಿ ಮೂವರು ಬೆಸ್ಕಾಂ ಇಂಜಿನಿಯರ್ ಗಳ ವಿರುದ್ಧ ಇದೀಗ ಎಫ್ ಐ ಆರ್ ದಾಖಲಾಗಿದೆ.ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಮೂವರು ಬೆಸ್ಕಾಂ ಇಂಜಿನಿಯರ್ ಗಳ ವಿರುದ್ಧ FIR ದಾಖಲು ಮಾಡಲಾಗಿದೆ. ಬೆಸ್ಕಾಂ ಉಗ್ರಾಣದ ಇಂಜಿನಿಯರ್ಗಳಾದ ಕರಿಮುಲ್ಲ ಹುಸೇನಿ, ನಹಿದ್ ಪಾಷಾ ಜನಾರ್ಧನ್ ಹಾಗೂ ಮತ್ತಿತರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಕೆ ಸಿ ರಾಜಣ್ಣ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ ಬೆಂಗಳೂರು ವಿದ್ಯುತ್ ಸರೋವರದ ಕಂಪನಿಗೆ ಈ ಒಂದು ವಿದ್ಯುತ್ ಪರಿಕಲ್ಪಗಳು ಸೇರಿದ್ದವು. ಕೋಲಾರ ಕಾರ್ಯನಿರ್ವಹಿಕ ಇಂಜಿನಿಯರ್ (ಆ) ವಿಭಾಗದಲ್ಲಿ ಕಳ್ಳತನ ನಡೆದಿದ್ದು, ಸುಮಾರು 1.2 ಕೋಟಿಗೂ ಹೆಚ್ಚು ಮೌಲ್ಯದ ವಿದ್ಯುತ್ ಪರಿಕರ ಮತ್ತು ಸಾಮಗ್ರಿಗಳನ್ನು ಕಳ್ಳತನ ಮಾಡಲಾಗಿದೆ.

Read More

ಚಿಕ್ಕಮಗಳೂ : ತುಮಕೂರಿನಲ್ಲಿ ಸೆರೆ ಸಿಕ್ಕ ಚಿರತೆಯನ್ನು ಮದಗದ ಕೆರೆ ಬಳಿ ಬಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪ್ರಕರಣದ ತನಿಖೆಗೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ನೀಡಿದ್ದಾರೆ. ಶಿವಮೊಗ್ಗ ಮುಖ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಇದೀಗ ತನಿಖೆಗೆ ಆದೇಶ ಹೊರಡಿಸಲಾಗಿದ್ದು ಏಳು ದಿನದಲ್ಲಿ ಸಂಪೂರ್ಣ ದಣಿಕೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಪ್ರೋಟೋಕಾಲ್ ಉಲ್ಲಂಘಿಸಿ ಚಿರತೆಯನ್ನು ಸಿಬ್ಬಂದಿಗಳು ಮದಗದಕೆರೆ ಬಳಿ ಬಿಟ್ಟಿದ್ದಾರೆ. ಜುಲೈ 30 ರಂದು ತುಮಕೂರಿನಲ್ಲಿ ಐದು ವರ್ಷದ ಗಂಡು ಚಿರತೆಯನ್ನು ಹಿಡಿದಿದ್ದರು. ಜುಲೈ 31ರಂದು ಮದಗೆದೆ ಕೆರೆ ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿಗಳು ಚಿರತೆಯನ್ನು ಬಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮದಗದ ಕೆರೆ ಬಳಿ ಸಿಬ್ಬಂದಿಗಳು ಬಿಟ್ಟಿದ್ದರು. ಜುಲೈ 31ರಂದು ಮದಗದ ಕೆರೆಯ ಬಳಿ ಇಬ್ಬರ ಮೇಲೆ ಚಿರತೆ ದಾಳಿ ಮಾಡಿತ್ತು. ಅಂದೇ ಸಂಜೆ ಮದಗದ ಕೆರೆಯಲ್ಲಿ ಚಿರತೆಯ ಮೃತ ದೇಹ ಪತ್ತೆಯಾಗಿದೆ.

Read More

ಬೆಂಗಳೂರು : ಮೈಸೂರಿನ ಕೆ ಆರ್ ನಗರ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೆನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ್ದು ಮಾರಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ದಂಡ ವಿಧಿಸಿ ಶಿಕ್ಷೆ ಪ್ರಮಾಣ ಪ್ರಕಟಿಸಿತು. ಪ್ರಜ್ವಲ್ ರೇವಣ್ಣ ಗೆ ಜೀವಾವಧಿ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಎಚ್ ಡಿ ದೇವೇಗೌಡ ಕುಟುಂಬಕ್ಕೆ ತೀವ್ರ ಆಘಾತ ಉಂಟಾಗಿದೆ. ದೇವೇಗೌಡರು ಇದೀಗ ಪ್ರಜ್ವಲ್ ರೇವಣ್ಣ ವಿಷಯದಲ್ಲಿ ಬಹಳ ನೊಂದಿದ್ದಾರೆ. ಇತ್ತ ತಂದೆ ಎಚ್ ಡಿ ರೇವಣ್ಣ ಅವರು ಕೂಡ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಮೊರೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದು, ಈ ಕುರಿತು ತಮ್ಮ ವಕೀಲರ ಜೊತೆಗೆ ಈಗಾಗಲೇ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ಜನಪ್ರತಿನಿಧಿಗಳ ಕೋರ್ಟ್ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದು ನಿನ್ನೆಯಿಂದಲೇ ಪ್ರಜ್ವಲ್ ರೇವಣ್ಣಗೆ ಜೈಲುವಾಸ ಆರಂಭವಾಗಿದೆ.

Read More

ಮಂಡ್ಯ : ಭೂಗಳ್ಳರಿಂದ ಮಳವಳಿ ಶಾಸಕ ನರೇಂದ್ರ ಸ್ವಾಮಿಗೆ ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಡ್ಯದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ನರೇಂದ್ರಸ್ವಾಮಿ ಈ ವಿಚಾರವಾಗಿ ಪ್ರಸ್ತಾಪಿಸಿದರು. ಸಚಿವ ಎನ್.ಚೆಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆದಿದೆ. ಸುಮಾರು 2500 ಎಕರೆ ಸರ್ಕಾರಿ ಜಮೀನು ಕಬಳಿಕೆ ವಿರುದ್ಧ ನಾರಾಯಣಸ್ವಾಮಿ ಹೋರಾಟ ಮಾಡುತ್ತಿದ್ದರು. ಹೋರಾಟದ ಪರಿಣಾಮ ಕಬ್ಬಳಿಕೆಯಾಗಿದೆ 800 ಎಕರೆ ಭೂಮಿ ವಾಪಸ್ ಆಗಿದ್ದು, ಈ ಹಿನ್ನೆಲೆಯಲ್ಲಿ ಬೆದರಿಕೆ ಕೊಲೆ ಬರುತ್ತಿದೆ ಎಂದು ಶಾಸಕ ನರೇಂದ್ರ ಸ್ವಾಮಿ ಆರೋಪಿಸಿದ್ದಾರೆ. ಸಚಿವರು ಶಾಸಕರು ಅಧಿಕಾರಿಗಳ ಸಮ್ಮುಖದಲ್ಲಿ ಶಾಸಕ ಕುರಿತು ಪ್ರಸ್ತಾಪಿಸಿದ್ದಾರೆ. ಶಾಸಕ ಪಿಯು ನರೇಂದ್ರಸ್ವಾಮಿ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಮಯ ಬಂದಾಗ ದಾಖಲೆ ಬಿಡುಗಡೆ ಮಾಡುವುದಾಗಿ ನರೇಂದ್ರ ಸ್ವಾಮಿ ಹೇಳಿಕೆ ನೀಡಿದ್ದಾರೆ.

Read More

ಹಾಸನ : ಹಾಸನದಲ್ಲಿ ಘೋರವಾದ ಘಟನೆ ಒಂದು ನಡೆದಿದ್ದು, ಕುಡಿತದ ಚಟಕ್ಕೆ ದಾಸನಾಗಿದ್ದ ಪತಿಯೊಬ್ಬ ಕುಡಿದು ಬಂದು ಪತ್ನಿಯ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಗ್ರಾಮದಲ್ಲಿ ನಡೆದಿದೆ. ಪತಿ ಶ್ರೀಮಂತ ಕುಡಿತದ ಚಟಕ್ಕೆ ದಾಸನಾಗಿದ್ದ ಪತ್ನಿ ಸುಶ್ಮಿತಾಗೆ ನಿತ್ಯ ಕಿರುಕುಳ ನೀಡುತ್ತಿದ್ದ ಮದ್ಯ ಸೇವನೆ ಜೊತೆಗೆ ಶ್ರೀಮಂತ ಅಕ್ರಮ ಸಂಬಂಧ ಕೂಡ ಹೊಂದಿದ್ದ ಎಂದು ಆರೋಪ ಕೇಳಿ ಬಂದಿದೆ. ಜುಲೈ 30ರ ರಾತ್ರಿ ಕುಡಿದು ಬಂದು ಸುಶ್ಮಿತಾಳ ಕೊಲೆಗೆ ಯತ್ನಿಸಿದ್ದಾನೆ. ಅಸ್ವಸ್ಥಗೊಂಡಿದ್ದ ನವವಿವಾಹಿತೆಯನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿಯ ವಿರುದ್ಧ ಸದ್ಯ ಯಸಳೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಮದುವೆಯಾಗಿ 7 ತಿಂಗಳಲ್ಲಿ ಪಾಪಿಪತಿ ಕೊಲೆಗೆ ಯತ್ನಿಸಿದ್ದಾನೆ. 2024 ಡಿಸೆಂಬರ್ ಮತ್ತು ಸುಶ್ಮಿತಾ ಮದುವೆಯಾಗಿತ್ತು . ಮದುವೆ ಆದ ಒಂದು ತಿಂಗಳ ಬಳಿಕ ಶ್ರೀಮಂತ್ ಸುಶ್ಮಿತಾಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಮದುವೆಯಾದ ಏಳು ತಿಂಗಳಲ್ಲಿಯೇ ಪತ್ನಿಗೆ…

Read More

ಮೈಸೂರು : ದೋಷಪೂರಿತ ನಂಬರ್ ಪ್ಲೇಟ್ ಅಳವಡಿಕೆ ಹಿನ್ನೆಲೆಯಲ್ಲಿ 159 ಬೈಕ್ ಗಳು ಸೀಜ್ ಮಾಡಲಾಗಿದ್ದು, ಮೈಸೂರು ನಗರ ಸಂಚಾರ ಪೊಲೀಸರು ಈ ಒಂದು ಕಾರ್ಯಚರಣೆ ನಡೆಸಿದ್ದಾರೆ. ದಂಡದಿಂದ ತಪ್ಪಿಸಿಕೊಳ್ಳಲು ಈ ರೀತಿ ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಿದರ ಹಿನ್ನೆಲೆಯಲ್ಲಿ ಪೊಲೀಸರು ಈ ಒಂದು ಕಾರ್ಯಾಚರಣೆ ನಡೆಸಿದ್ದಾರೆ. ದೇವರಾಜ್ ಟ್ರಾಫಿಕ್ ಠಾಣೆಯಲ್ಲಿ 24, ಕೆ.ಆರ್ ಸಂಚಾರ ಠಾಣೆಯಲ್ಲಿ 30, ಎನ್ ಆರ್ ಸಂಚಾರ ಠಾಣೆಯಲ್ಲಿ 28, ಸಿದ್ದಾರ್ಥ ನಗರ ಸಂಚಾರ ಠಾಣೆಯಲ್ಲಿ 27 ಹಾಗು ವಿವಿಪುರಂ ಟ್ರಾಫಿಕ್ ವ್ಯಾಪ್ತಿಯಲ್ಲಿ 50 ಬೈಕ್ ಗಳು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಂಡದಿಂದ ತಪ್ಪಿಸಿಕೊಳ್ಳಲು ದೋಷಪೂರಿತ ನಂಬರ್ ಪ್ಲೇಟ್ ಬಳಕೆ ಮಾಡಿದ್ದಾರೆ ಈ ಹಿನ್ನೆಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ

Read More

ಬೆಂಗಳೂರು : ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಅಚ್ಚರಿ ಘಟನೆಯೊಂದು ನಡೆದಿದ್ದು, ನಮ್ಮ ಮೆಟ್ರೋದಲ್ಲಿ ಇದೇ ಮೊದಲ ಬಾರಿಗೆ ದಾನಿಯಯೊಬ್ಬರ ಯಕೃತ್ ಅಂಗಾಂಗವನ್ನು ಸಾಗಣೆ ಮಾಡಿ ಸೂಕ್ತ ಸಮಯದಲ್ಲಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ವೈಟ್ ಫೀಲ್ಡ್​ನಿಂದ ಯುವಕನೋರ್ವನ ಲಿವರ್ ಅನ್ನು “ಗ್ರೀನ್ ಕಾರಿಡಾರ್” ಯೋಜನೆಯಡಿ ತ್ವರಿತವಾಗಿ ಮೆಟ್ರೋದಲ್ಲಿ ರಾಜರಾಜೇಶ್ವರಿ ನಗರದ ಸ್ಪರ್ಶ ಆಸ್ಪತ್ರೆ ಸಾಗಿಸಿ ಸಕಾಲದಲ್ಲಿ ಅಂಗಾಂಗ ಕಸಿ ನಡೆಸಿ ಯುವಕನೋರ್ವನಿಗೆ ಜೀವದಾನ ನೀಡಲಾಗಿದೆ. ಬೆಂಗಳೂರು ಮಹಾ ನಗರದ ಸಂಚಾರ ದಟ್ಟಣೆ ನಡುವೆ ತ್ವರಿತವಾಗಿ ಅಂಗಾಂಗ ಸಾಗಾಟ ಮಾಡುವುದು ಸವಾಲಿನ ಕೆಲಸವಾಗಿತ್ತು. ವೈಟ್ ಫೀಲ್ಡ್​ನಿಂದ ರಾಜರಾಜೇಶ್ವರಿ ನಗರಕ್ಕೆ ವಾಹನದಲ್ಲಿ ಅಂಗಾಂಗ ಸಾಗಾಟ ಮಾಡಲು 3 – 4 ತಾಸುಗಳ ಸಮಯ ಹಿಡಿಯುತ್ತಿತ್ತು. ಅಂಗಾಂಗ ಸಾಗಣೆಗೆ ನಮ್ಮ ಮೆಟ್ರೋ ಕೈ ಜೋಡಿಸಿದ್ದರಿಂದ ತ್ವರಿತವಾಗಿ ಸಾಗಿಸಲು ಸಹಾಯವಾಯಿತು.

Read More

ಬೆಂಗಳೂರು : ಬೆಂಗಳೂರಿನಲ್ಲಿ ನಂದಿನಿ ಪಾರ್ಲರ್ ಬೀಗ ಮುರಿದು 3 ಲಕ್ಷ ರೂಪಾಯಿ ಕಳ್ಳತನ ಮಾಡಲಾಗಿದೆ. ಮಳಿಗೆಯ ಬೀಗ ಕುರಿತು ಹಣ ದೋಚುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿರೂಪಾಕ್ಷ ಎಂಬವರಿಗೆ ಸೇರಿದ ನಂದಿನಿ ಪಾರ್ಲರ್ ನಲ್ಲಿ ಈ ಒಂದು ಕಳ್ಳತನ ನಡೆದಿದೆ. 3 ಲಕ್ಷ ಹಣವನ್ನು ವಿರೂಪಾಕ್ಷ ನಂದಿನಿ ಪಾರ್ಲರ್ ಲಾಕರ್ ನಲ್ಲಿ ಇಟ್ಟಿದ್ದಾರೆ. ತಡರಾತ್ರಿ ಬೈಕ್ ನಲ್ಲಿ ಬಂದಿದ್ದ ಇಬ್ಬರೂ ಕಳ್ಳರಿಂದ ಈ ಒಂದು ಕಳ್ಳತನ ನಡೆದಿದೆ ಘಟನೆ ಸಂಭಂದ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕಳ್ಳರಿಗಾಗಿ ಬಲೇ ಬೀಸಿದ್ದಾರೆ.

Read More